| ಬದುಕಿನ ಯಶಸ್ಸು, ಸಂತೋಷ ಮತ್ತು ಸಂತೃಪ್ತಿಯ ಹುಡುಕಾಟದಲ್ಲಿ ಬಡೆದಾಡಿದ, ವಿಫಲವಾದ ಮತ್ತು ಯಶಸ್ಸಿನತ್ತ ಮುಂದೆ ಸಾಗಿದ ಸಾವಿರಾರು ಯುವಕರಂತೆ ಕೆ.ಎಂ.ವಿಶ್ವನಾಥ ಮರತೂರ ಅವರು ಕೂಡ ಒಬ್ಬರು. ಹಿಂದೂಳಿದ ಮಧ್ಯಮ ವರ್ಗದ ಕಡು ಬಡತನದ ಕುಟುಂಬದಿಂದ ಅವರೂ ಸಹ ಅಸ್ಪಷ್ಟವಾದ ಕನಸುಗಳನ್ನು ಹೊಂದಿದ್ದರು ಮತ್ತು ಜೀವನದಲ್ಲಿ ಗುರಿಗಳ ಅಸ್ಪಷ್ಟ ದೃಷ್ಟಿಯನ್ನು ಹೊಂದಿದ್ದರು. ಅವರು ತಾವು ಅನುಭವಿಸಿದ, ಕಂಡುಹಿಡಿದ ಅನುಭವಗಳನ್ನು ಅವರ ಯಶಸ್ಸಿನ ರಹಸ್ಯವನ್ನು ಇಡೀ ಪ್ರಪಂಚದೊಂದಿಗೆ ಹಂಚಿಕೊಕೊಳ್ಳುತ್ತಾ ಜನರಿಗೆ ಸಹಾಯ ಮಾಡುವ ಮತ್ತು ಸಮಾಜಕ್ಕೆ ಏನಾದರೂ ಒಳ್ಳೆಯದನ್ನು ಮಾಡುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈ ಪ್ರಜ್ಞಾ, ಪ್ರೇರಣೆ ಮತ್ತು ಪ್ರೋತ್ಸಾಹ ಜನರ ಜೀವನವನ್ನು ಬದಲಿಸುವತ್ತ ಒಂದು ದಿಟ್ಟ ಹೆಜ್ಜೆಯಂದು ಬಲವಾಗಿ ನಂಬಿದ್ದಾರೆ. ಸಮಾಜದ ಧನಾತ್ಮಕ ಅಂಶಗಳನ್ನು ಅನ್ವೇಷಿಸುತ್ತಾ, ಅದನ್ನು ಮಕ್ಕಳು, ಯುವಕರು, ಪಾಲಕರು, ಶಿಕ್ಷಕರು, ಸರಕಾರೇತರ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಇತರೆ ಎಲ್ಲರೊಂದಿಗೆ ಹಂಚಿಕೊಳ್ಳುತ್ತಾರೆ. ಕೆ.ಎಂ.ವಿಶ್ವನಾಥ ಇವರಿಂದ ಸಮಾಜದ ಅನೇಕರು ಸ್ಪೂರ್ತಿ ಪಡೆಯುತ್ತಿದ್ದಾರೆ. |
|