ಗುಲ್ಬರ್ಗ ನಗರದ ಹಿ೦ದಿನ ಹೆಸರು ಕಲ್ಬುರ್ಗಿ, ಗುಲ್ಬರ್ಗದ ಚರಿತ್ರೆಯನ್ನು ರಾಷ್ಟ್ರಕೂಟ ಅರಸರ ಕಾಲದ ವರೆಗೆ ಗುರುತಿಸಬಹುದು. ನಂತರ ಚಾಲುಕ್ಯ ಸಾಮ್ರಾಜ್ಯದ ಕೆಳಗೆ 200 ವರ್ಷಗಳವರೆಗೆ ಗುಲ್ಬರ್ಗದಲ್ಲಿ ಇದ್ದಿತು. ಚಾಲುಕ್ಯರ ನಂತರ ಹನ್ನೆರಡನೆ ಶತಮಾನದವರೆಗೆ ಗುಲ್ಬರ್ಗ ಕಳಚೂರಿ ಅರಸರ ನಿಯಂತ್ರಣದಲ್ಲಿತ್ತು. ಹನ್ನೆರಡನೆಯ ಶತಮಾನದ ಕೊನೆಗೆ ದೇವಗಿರಿಯ ಯಾದವರು ಮತ್ತು ದ್ವಾರಸಮುದ್ರದ ಹೊಯ್ಸಳರು ಚಾಲುಕ್ಯ ಮತ್ತು ಕಳಚೂರಿಗಳನ್ನು ಸೋಲಿಸಿದರು. ಇದೇ ಸಮಯದಲ್ಲಿ ವಾರಂಗಲ್ ನ ಕಾಕತೀಯ ಅರಸರು ಪ್ರಾಮುಖ್ಯತೆಗೆ ಬಂದು ಗುಲ್ಬರ್ಗ ಅವರ ನಿಯಂತ್ರಣಕ್ಕೆ ಸಾಗಿತು. ಕ್ರಿ.ಶ. 1321 ರಲ್ಲಿ ಕಾಕತೀಯ ಅರಸರು ಸೋಲಿಸಲ್ಪಟ್ಟು ಗುಲ್ಬರ್ಗ ದೆಹಲಿಯ ಸುಲ್ತಾನರ ಕೈ ಸೇರಿತು. 1347 ರಲ್ಲಿ ದೆಹಲಿಯ ಸಾಮಂತರು ದಂಗೆಯೆದ್ದು, ಅಲ್ಲಾಹುಧ್ದೀನ ಹಸನ್ ಗಂಗು ಬಹುಮನ್ ಶಾ 1947 ರಲ್ಲಿ, ಬಹಮನಿ ಸಾಮ್ರಾಜ್ಯವನ್ನು ಸ್ಥಾಪಿಸಿ ಗುಲ್ಬರ್ಗವನ್ನು ರಾಜಧಾನಿಯನ್ನಾಗಿ ಮಾಡಿದನು.
ಬಹಮನಿ ಸುಲ್ತಾನರ ನಿಯಂತ್ರಣ ಕಡಿಮೆಯಾದಾಗ ಐದು ಬೇರೆ ಬೇರೆ ಬಹಮನಿ ಸಾಮ್ರಾಜ್ಯಗಳು ಸ್ಥಾಪಿತವಾಗಿ ಗುಲ್ಬರ್ಗ ಜಿಲ್ಲೆ ಭಾಗಶಃ ಬೀದರ್ ಮತ್ತು ಭಾಗಶಃ ಬಿಜಾಪುರ ಸಾಮ್ರಾಜ್ಯಗಳ ಭಾಗವಾಯಿತು. 17 ನೇ ಶತಮಾನದಲ್ಲಿ ಔರಂಗಜೇಬ್ ಮತ್ತೆ ಈ ಪ್ರದೇಶವನ್ನು ಗೆದ್ದು ಗುಲ್ಬರ್ಗ ಮತ್ತೊಮ್ಮೆ ಮುಘಲ್ ಸಾಮ್ರಾಜ್ಯದ ಭಾಗವಾಯಿತು. 18 ನೇ ಶತಮಾನದ ಆದಿಯಲ್ಲಿ ಮುಘಲ್ ಸಾಮ್ರಾಜ್ಯದ ಪ್ರಭಾವ ಕಡಿಮೆಯಾಗಿ ಅಸಫ್ ಜಾ ಎಂಬ ಔರಂಗಜೇಬನ ಸೇನಾಧಿಕಾರಿ ಹೈದರಾಬಾದ್ ಸಂಸ್ಥಾನವನ್ನು ಸ್ಥಾಪಿಸಿದನು. ಗುಲ್ಬರ್ಗ ಹೈದರಾಬಾದ ಸಂಸ್ಥಾನವನ್ನು ಸೇರಿತು. 1947 ರಲ್ಲಿ ಭಾರತ ಸ್ವಾತಂತ್ರ್ಯ ಪಡೆದರೆ, ಬೀದರ್, ಗುಲ್ಬರ್ಗ ಮತ್ತು ರಾಯಚೂರಿನ ಜನರ ತೀವ್ರ ಹೋರಾಟದ ಫಲವಾಗಿ 1948 ರಲ್ಲಿ ಹೈದರಾಬಾದ ಸಂಸ್ಥಾನವು ಭಾರತ ಗಣರಾಜ್ಯವನ್ನು ಸೇರಿತು. 1956 ರಲ್ಲಿ ರಾಜ್ಯಗಳ ಭಾಷಾವಾರು ವಿಂಗಡಣೆಯಲ್ಲಿ ಗುಲ್ಬರ್ಗ ಜಿಲ್ಲೆಯ ಎರಡು ತಾಲೂಕುಗಳ ಹೊರತು ಉಳಿದವು ಮೈಸೂರು ರಾಜ್ಯಕ್ಕೆ ಸೇರಿದವು. 1976 ರಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎ೦ದು ಪುನರ್ನಾಮಕರಣ ಮಾಡಲಾಯಿತು.ಸ್ವಾತಂತ್ರ್ಯ ಹೋರಾಟದಲ್ಲೂ ಕೂಡ ಈ ಭಾಗದ ಅನೇಕ ಜನರು ಹೋರಾಟ ಮಾಡಿದ್ದಾರೆ. ಅವರಲ್ಲಿ ವೆಂಕಟಪ್ಪನಾಯಕ ಸುರಪುರ ಬ್ರಿಟೀಷರ ಮತ್ತು ನಿಜಾಮನ ವಿರುದ್ಧ , ರಮಾನ೦ದ ತೀರ್ಥ, ಸರ್ದಾರ್ ಶರಣಗೌಡ್ ಇನಾಂದಾರ, ಚನ್ನಬಸಪ್ಪ ಕುಳಗೆರಿ, ದೇವಿಂದ್ರಪ್ಪ ಮಾಸ್ತರ್ -ಸಿಂದಗಿ( ಬಿ) ನಿಜಾಮನ ವಿರುದ್ಧ ಕರಬಸಪ್ಪ ಶ್ರೀಗನ್ - ಹರಸೂರ/ಶ್ರೀ ಸರಡಗಿ ನಿಜಾಮನ ವಿರುದ್ಧ ,ಮುಂತಾದವರು ಹೋರಾಟ ಮಾಡಿ ಹೈದರಾಬಾದ ನಿಜಾಮರ ವಿರುದ್ದ ಹಾಗೂ ಬ್ರೀಟಿಷರ ವಿರುದ್ಧ ಜಯ ಸಾಧಿಸಿದ್ದಾರೆ. ಕಾರಣ ಈ ಭಾಗ ಬಹು ದಿನಗಳಕಾಲ ನಿಜಾಮನ ಆಡಳಿತಕ್ಕೆ ಒಳಪಟ್ಟಿತ್ತ್ಫು. ಹ್ಯೆದರಾಬಾದ್ ಕರ್ನಾಟಕದಲ್ಲಿ ಜರುಗಿದ ವಿಮೋಚನಾ ಇತಿಹಾಸವನ್ನು ಮೊದಲ ಬಾರಿಗೆ ಸಂಶೋಧನೆ ಮಾಡಿ ಡಾ. ಬಿ. ಸಿ. ಮಹಾಬಲೇಶ್ವರಪ್ಪ ಅವರು ಮಹದುಪಕಾರ ಮಾಡಿದ್ದಾರೆ. ಅನಂತರ ಇಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ 17 ರಂದು ವಿಮೋಚನಾ ದಿನವನ್ನು ಆಚರಿಸಲಾಗುತ್ತಿದೆ.
ಭೌಗೋಳಿಕ :
ಗುಲ್ಬರ್ಗ ಬೆಂಗಳೂರಿನಿ೦ದ 613 ಕಿಮೀ ದೂರದಲ್ಲಿದ್ದು ಬಿಜಾಪುರ, ಹೈದರಾಬಾದ್, ಬೀದರ್ ಮೊದಲಾದಲ್ಲಿಗೆ ರಸ್ತೆ ಸ೦ಪರ್ಕ ಹೊ೦ದಿದೆ.ಬೀದರ್ -ಶ್ರಿರಂಗಪಟ್ಟಣ ರಾಜ್ಯ ಹೆದ್ದಾರಿಯ ಫಲವಾಗಿ ಇಂದು ಬೆಂಗಳುರು-ಗುಲ್ಬರ್ಗ ಮಧ್ಯೆ ರಸ್ತೆ ಸಂಚಾರ ಸುಗಮವಾಗಿದೆ. ದಕ್ಷಿಣ ಭಾರತದಿ೦ದ ಉತ್ತರ ಭಾರತಕ್ಕೆ ಸಾಗುವ ರೈಲುಗಳು ಗುಲ್ಬರ್ಗದ ಮೂಲಕ ಸಾಗುತ್ತವೆ. ಹವಾಮಾನದ ದೃಷ್ಟಿಯಿ೦ದ ಗುಲ್ಬರ್ಗದಲ್ಲಿ ಸಾಕಷ್ಟು ಒಣ ಹವೆ ಇದೆ. ಸರಾಸರಿ ವಾರ್ಷಿಕ ಮಳೆ ಇಲ್ಲಿ ಸುಮಾರು 75 ಸೆ.ಮೀ. ಇಡೀ ಜಿಲ್ಲೆ ದಖನ್ ಪ್ರಸ್ತಭೂಮಿಯ ಮೇಲಿದ್ದು ಸಮುದ್ರ ಮಟ್ಟದಿ೦ದ ಸರಾಸರಿ ಎತ್ತರ 300 ಮೀ ಇ೦ದ 750 ಮೀ. ಭಾರತದ ತೂಗರೆ ಕಣಜ ಎಂದು ಪ್ರಸಿದ್ದ ವಾಗಿದೆ.
ತಾಲೂಕುಗಳು: ಆಳಂದ್ , ಅಫಜಲಪೂರ , ಗುಲ್ಬರ್ಗ , ಚಿಂಚೋಳಿ , ಸೇಡಂ , ಚಿತ್ತಾಪುರ , ಜೇವರ್ಗಿ ಗುಲಬರ್ಗಾ ಕರ್ನಾಟಕದ ಜಿಲ್ಲೆಗಳಲ್ಲಿ ಒಂದು. ಈ ಜಿಲ್ಲೆಯ ಜನಸಂಖ್ಯೆ 2001 ರ ಜನಗಣತಿಯ೦ತೆ 25,64,892 ಇದರಲ್ಲಿ 13,07,06 ಪುರುಷ ಮತ್ತು 12,52.831 ಮಹಿಳಿಯರು ಇದ್ದಾರೆ. ಗುಲಬರ್ಗಾ ಜಿಲ್ಲೆಯಲ್ಲಿ ಹತ್ತು ತಾಲೂಕುಗಳಿವೆ. ಇಲ್ಲಿನ ಹವಾಮಾನ ಬೇಸಗೆಯಲ್ಲಿ 48 ಡಿಗ್ರಿಗಳವರೆಗೆ ಹೋಗಬಲ್ಲದು; ಚಳಿಗಾಲದ ಕನಿಷ್ಠ ತಾಪಮಾನ ಸಾಮಾನ್ಯವಾಗಿ 15 ಡಿಗ್ರಿ ಇರುವುದು. ಗುಲ್ಬರ್ಗ ಕರ್ನಾಟಕದ ಎರಡನೆ ಅತಿ ದೊಡ್ಡ ಜಿಲ್ಲೆ. ತುಂಬಾ ಹೆಸರುವಾಸಿಯಾದ ಜಿಲ್ಲೆ ಅನೇಕ ಹಿರಿಯ ರಾಜಕಾರಣಿಗಳಿಗೆ ಮತ್ತು ಈ ಹಿರಿಯ ಹೋರಾಟಗಾರರ ನಾಡಾಗಿದೆ ಈ ಜಿಲ್ಲಯ ಪ್ರಮುಖ ಆಕರ್ಷಣೆಗಳೆಂದರೆ ಗಾಣಗಾಪುರದ ಶ್ರೀ ದತ್ತಾತ್ರೇಯ ಮಂದಿರ , ಘತ್ತರಗಿಯ ಶ್ರೀ ಭಾಗ್ಯವಂತಿ ದೇವಸ್ಥಾನ , ಗುಲ್ಬರ್ಗಾದ ಶರಣ ಬಸವೇಶ್ವರ ದೇವಸ್ತಾನ , ಅಫಜಲಪುರ ತಾಲೂಕಿನ, ಮಣ್ಣೂರಿನ ಶ್ರೀ ಯಲ್ಲಮ್ಮ ದೇವಸ್ಥಾನ , ಶ್ರೀನಿವಾಸ ಸರಡಗಿ ಲಕ್ಮಿ ಮಂದಿರ , ಸುರಪುರದ ಶ್ರೀ ವೇಣುಗೋಪಾಲ ದೇವಸ್ಥಾನ , ಗುಲ್ಬರ್ಗಾದ ಸಾರ್ವಜನಿಕ ಉದ್ಯನವನ , ಗುಲ್ಬರ್ಗಾದ ಬಹುಮನಿ ಕೋಟೆ , ಗುಲ್ಬರ್ಗಾದ ಬಂದೇ ನವಾಜ್ ದರ್ಗಾ , ಗುಲ್ಬರ್ಗಾದ ಶರಣ ಬಸವೇಶ್ವರ ಕೆರೆಯ ಪಾರ್ಕ , ಗುಲ್ಬರ್ಗಾದ ಶ್ರೀ ರಾಮ ಮಂದಿರ , ಗುಲ್ಬರ್ಗಾದ ಶ್ರೀ ಸಾಯಿ ಮಂದಿರ , ಸುರಪುರದ ಟೈಲರ್ ಮನ್ಜಿಲ್ಲ್ , ಸನ್ನತಿಯ ಶ್ರೀ ಚಂದ್ರಲಾಂಭ ದೇವಸ್ತಾನ , ಯಾನಾಗುಂದಿಯ ಶ್ರೀ ಮಾಣಿಕೇಶ್ವರಿ ದೇವಸ್ಥಾನ , ಕೆಸರಟಗಿಯ ಪಾರ್ಕ್ , ಹಿಂದಿ ಪ್ರಚಾರ ಸಭಾ , ಕುದುಮುಡ ಮಹಾದೆವ ದೇವಸ್ಥಾನ , ಬಬಲಾದ ಶ್ರೀ ಗುರುಚನ್ನಬಸವೇಶ್ವರ , ಗುಲ್ಬರ್ಗಾದ ಬುದ್ಧ ವಿಹಾರ.
ಗುಲ್ಬರ್ಗಾದ ಬಹುಮನಿ ಕೋಟೆ: ಗುಲಬರ್ಗಾ ಕೋಟೆ 1347 ರಲ್ಲಿ ನಿರ್ಮಿಸಿದರು ಉತ್ತರ ಕರ್ನಾಟಕದಲ್ಲಿ ಗುಲಬರ್ಗಾ ಜಿಲ್ಲೆಯ ಕಂಡುಬರುತ್ತದೆ. ಗುಲಬರ್ಗಾ ಕೋಟೆ ಕರ್ನಾಟಕ ಪ್ರಾಚೀನ ಇಸ್ಲಾಮಿಕ್ ವಾಸ್ತುಶಿಲ್ಪ ಅತ್ಯುತ್ತಮ ಉದಾಹರಣೆಗಳಲ್ಲಿ ಒಂದು. ಕೋಟೆ ಮೂಲತಃ ರಾಜಾ ಗುಲ್ಚಂದ್ ಕಟ್ಟಿಸಿದನು. ಗುಲಬರ್ಗಾ ಬಹುಮನಿ ರಾಜಧಾನಿಯಾಗಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿತು. ಕೋಟೆ 15 ಗೋಪುರಗಳು ಮತ್ತು 26 ಬಂದೂಕುಗಳ ಒಳಗೊಂಡಿತ್ತು ಅದರಲ್ಲಿ ಒಂದು 8 ಮೀಟರ್ ಉದ್ದವಾಗಿತ್ತು. ಜಾಮಿ ಮಸೀದಿ ನಂತರ ಪರ್ಷಿಯನ್ ವಾಸ್ತುಶಿಲ್ಪ ಶೈಲಿಯಲ್ಲಿ 1367 ರಲ್ಲಿ ಕೋಟೆಯ ಒಳಗೆ ನಿರ್ಮಿಸಲಾಯಿತು. ಕೋಟೆ 38,000 ಚದರ ಅಡಿ ಪ್ರದೇಶದಲ್ಲಿ ಇದೆ. ಈ ಮಸೀದಿ ದಕ್ಷಿಣ ಭಾರತದಲ್ಲಿ ಮೊದಲ ಒಂದು. ಇದು 216*176 216*176 ಅಡಿ ಆಯಾಮಗಳು ಹೊಂದಿದೆ. ಕೋಟೆಯ ಒಂದು ತೆರೆದ ಹೊಂದಿಲ್ಲ. ಈ ಮಸೀದಿ ಐದು ದೊಡ್ಡ ಗುಮ್ಮಟಗಳು, 75 ಸಣ್ಣ ಗುಮ್ಮಟಗಳು ಮತ್ತು ಪ್ರಸ್ತುತ 250 ಕಮಾನುಗಳು ಹೊಂದಿದೆ. ಗುಲ್ಬರ್ಗ ಕೋಟೆ ಭಾರತೀಯ ಪುರಾತತ್ವ ಸೊಸೈಟಿ ರಾಷ್ಟ್ರೀಯ ಸ್ಮಾರಕ ಎಂದು ಗುರುತಿಸಲಾಗುತ್ತದೆ ಮತ್ತು ಪ್ರಾಚೀನ ಸ್ಮಾರಕಗಳು ಮತ್ತು 1958 ಪುರಾತತ್ವ ರಿಮೇನ್ಸ್ ಆಕ್ಟ್ ನಂತರ ನಂಬಿಕೆ ಇರಿಸಲಾಗುತ್ತದೆ
ಗುಲ್ಬರ್ಗಾದ ಬಂದೇ ನವಾಜ್ ದರ್ಗಾ :
ಹಜ್ರತ್ ಖ್ವಾಜಾ ಬಂದಾ ನವಾಜ್ ದರ್ಗಾ ಜುಲೈ 13,1321- ನವೆಂಬರ್ 1,1422 ಭಾರತದ ಒಬ್ಬ ಮಹಾನ್ ಸೂಫಿ ಸಂತ. ಅವರು ಎಲ್ಲ ಜಾತಿಯ ತುಂಬಾ ತಿಳುವಳಿಕೆ ಹಾಗು ತಾಳ್ಮೆ ಹೊಂದಿದವರು. ಗೆಸು ದರಜ್ ಒಬ್ಬ ದಿಲ್ಲಿಯ ಪ್ರಖ್ಯಾತ ಸೂಫಿ ಸಂತ ಹಜ್ರತ್ ನಾಸಿರುದ್ದೀನ್ ಚಿರಗ್ಹ್ ದೆಹ್ಳವಿ ಅವರ ಶಿಷ್ಯರಾಗಿದ್ದರು. ಗೆಸು ದರಜ್ ಅವರ್ ಹೆಸರು "ಸಯೆದ್ ಮೊಹಮ್ಮೆದ್ ಹುಸ್ಸೈನಿ". 1336 ರಲ್ಲಿ ಇವರು ದಿಲ್ಲಿಗೆ ಹೋಗಿ ತಮ್ಮ ಶಿಕ್ಷಣ ಹಾಗು ತಾಲೀಮು ಪೂರ್ತಿ ಮಾಡಿದರು. ಗೆಸು ದರಜ್ ಅವರ ಗುರುಗಳು ಹಜ್ರತ್ ಕೆಥ್ಲಿ, ಹಜ್ರತ್ ತಾಜುದ್ದೀನ್ ಬಹಾದುರ್ ಮತ್ತು ಕಜಿ ಅಬ್ದುಲ್ ಮುಕ್ತದಿರ್. ದಿಲ್ಲಿ, ಮೆವಾಥ್, ಗ್ವಲಿಒರ್, ಅಈರ್ಚ, ಛತ್ರ, ಚಂದೆರಿ ಮತ್ತು ಬರೋದ ಅಲ್ಲಿ ಪಾಠವನ್ನು ಮಾಡಿ 1397 ರಲ್ಲಿ ಗುಲ್ಬರ್ಗಕ್ಕೆ ಬಂದರು.ಒಂದು ದಿನ ಇವರು ಮತ್ತು ಮಿತ್ರರು ಹಜ್ರತ್ ನಸಿರುದ್ದಿನವರ್ ಪಲಕ್ಕಿವನ್ನು ಎತ್ತಿದಾಗ ಗೆಸು ದರಜಿನ ಕೂದಲು ಪಲಕ್ಕಿಯ ಕಾಲಲ್ಲಿ ಸಿಕ್ಕಿಬಿದ್ದಿತು, ಅವನಿಗೆ ಬಹಳ ನೋವು ಆಗಿತ್ತು, ಆದರೆ ಗುರುವಿನ ಮೇಲೆ ಪ್ರೀತಿ ಹಾಗು ಮರಿಯಾದೆಯಿಂದ ಅವನು ಯಾರಿಗೂ ಹೇಳಲಿಲ್ಲ.
ಈ ಪ್ರೀತಿ ಹಾಗು ಮರಿಯಾದೆ ನೋಡಿ ಹಜ್ರತ್ ನಾಸಿರುದ್ದೀನ್ ಅವನನ್ನು " ಗೆಸು ದರಜ್ " ಅಂತ ಗೊಷಿಸಿದನು. ಯಲ್ಲ ಜನರು ಗೆಸು ದರಜಿಗೆ "ಖ್ವಾಜಾ ಬಂದಾ ನವಾಜ್ ಗೆಸು ದರಾಜ್" ಹೆಸರಿಂದ ಕರಯುತ್ತಾರೆ. ಇವರು ಸನ್ 1422 ನವೆಂಬರ್ ರಲ್ಲಿ ಮರಣರಾದರು. ಇವರು 101ವಯಸ್ಸು ಬದುಕಿದ್ದರು. ಇವರ ಮರಣ ಸ್ಥಾನ ಈಗ ಯಾತ್ರೆಯ ಸ್ಥಾನವಾಗಿದೆ. ಇವರು 195 ಪುಸ್ತಕಗಳನ್ನು ಅರಬಿ ಪೆರ್ಸಿಯ ಹಾಗು ಉರ್ದು ಭಾಷೆಯಲ್ಲಿ ಬರೆದಿದ್ದರೆ. ಉದಾ: ಅವರಿಫ್-ಉಲ್-ಮ`ಅರಿಫ್, ಫಾಸೂಸ್-ಅಲ-ಹುಕ್ಮ್, ಅಸೇದ ಅಮಲಿ ಮತ್ತು ಅದಾಬ್-ಅಲ-ಮುರೀದಇನ್. ಸ್ಥಳ ದೊಡ್ಡ ವಿಸ್ತಾರವಾದ ಸಂಕೀರ್ಣ ವಸತಿ 1413 ರಲ್ಲಿ ಗುಲ್ಬರ್ಗಾ ಬಂದಿದ್ದ 'ಬಂದಾ ನವಾಜ್', ಮಹಾನ್ ಸೂಫಿ ಸಂತನ ಸಮಾಧಿ ಹೊಂದಿದೆ. ಅವರ ಸಮಾಧಿಯ ತಂದೆಯ ಗೋಡೆಗಳ ವರ್ಣಚಿತ್ರಗಳು ಮತ್ತು ಮುಘುಲ್ ನಿರ್ಮಿಸಿದ ಮಸೀದಿ ಸಮಾಧಿಯ ಸಮೀಪದಲ್ಲಿದೆ. ಇದು ಇಂಡೋ-ಅರೆಬ್ಬಿಯವನು ಮುಸಲ್ಮಾನ ಶೈಲಿಯಲ್ಲಿ ನಿರ್ಮಿಸಲಾಗಿದೆ. ಗೋಡೆಗಳು ಮತ್ತು ಮೇಲ್ಛಾವಣಿಯ ಮೇಲೆ ವರ್ಣಚಿತ್ರಗಳು ಟರ್ಕಿಷ್ ಮತ್ತು ಇರಾನಿ ಪ್ರಭಾವ ಸಮ್ಮಿಳನ ಹೊಂದಿವೆ. ಚಂದ್ಬಿಬಿ ನಿರ್ಮಿಸಿದ "ಖಂದರ್ ಖಾನ್" ತಂದೆಯ ಮಸೀದಿ ಹಾಗೂ ಹಿರಾಪುರ್ ಮಸೀದಿ ಇಲ್ಲಿ ಒಟ್ಟು 1585 ಇಲ್ಲಿ ಕೆಲವು ಸ್ಮಾರಕಗಳು, ಮತ್ತು ಸುಲ್ತಾನ್ ಹಾಸನ ಮತ್ತು ಇರೊಜೆ ಷಾ ಸಮಾಧಿ ರಚನೆಗಳು ಭವ್ಯವಾದ ಇವೆ. ರಾಜ್ಯದ ಪುರಾತತ್ವ ಮ್ಯೂಸಿಯಂ ಇಲ್ಲಿ ಬೌದ್ಧ ಸನ್ನತಿದಿಂದ ತಂದಿದೆ. ಉರಸ್: ಇದು "ಖ್ವಾಜಾ ಬಂದಾ ನವಾಜ್ ಗೆಸು ದರಜ್"ರ ಪೂಣ್ಯತಿಥಿಯ ದಿನಯಂದು ಆಚರಿಸುತ್ತಾರೆ. ಈ ದಿನ ಉಲ್-ಅ`ದಃ ಮುಸ್ಲಿಂ ಕ್ಯಾಲೆಂಡರ 15 ನೆ ದಿನಕ್ಕೆ ಆಚರಿಸುತ್ತಾರೆ. ಈ ದಿನ ಹಲವಾರು ಜನ ವಿಬಿನ್ನ ಸ್ಥಳದಿಂದ ಇಲ್ಲಿ ಗೆಸು ದರಜ್ ರ ಆಶಿರ್ವಾದ್ ಪಡೆಯಲು ಬರುತ್ತಾರೆ. ಈಗ ಇಲ್ಲಿನ ಮುಖ್ಯ "ಸ್ಯೆದ್ ಶಾಹ್ ಖುಸ್ರೋ ಹುಸ್ಸೈನಿ" ರಗಿದರೆ.
ಗುಲ್ಬರ್ಗಾದ ಶರಣ ಬಸವೇಶ್ವರ ದೇವಸ್ಥಾನ :
ಶರಣ ಬಸವೇಶ್ವರ ದೇವಸ್ಥಾನ ಗುಲ್ಬರ್ಗದ ಮಧ್ಯದಲ್ಲಿದೆ. ಈ ದೇವಸ್ಥಾನ ಸಂತ ಶ್ರೀ ಬಸವೇಶ್ವರರ ನೆನಪಿಗೆ ಹೋಲಿಸಲಾಗಿದೆ.ಈ ದೇವಸ್ಥಾನ 2 ನೇ ಶತಮಾನದ ಹಿಂದೆ ಸ್ಥಾಪಿಸಲಾಗಿತ್ತು. ಇಲ್ಲಿ ನೀವು ಪಂಚಲೋಹ ಕಲಶವನ್ನು ನೋಡಬಹುದು. ಈ ದೇವಸ್ಥಾನದ ವಾಸ್ತುಕಲೆ 12 ನೇ ಶತಮಾನದಿಂದ ಇದೆ. ಗರ್ಬಹೃಹ ಶರಣ ಬಸವೇಶ್ವರ ಸಮಾಧಿ ಇದೆ, ದೇವಸ್ಥಾನದ ಸುತ್ತಮುತ್ತ ಬಹಳಷ್ಟು ಸ್ಥಂಭಗಳಿವೆ ಮತ್ತು ಸಭಾಮಂಟಪ ಹಾಗು ಪ್ರದಕ್ಷಿಣಪಥವಿದೆ. ಗುಡಿಯ ಸುತ್ತ ಆನೆ, ನವಿಲು, ಗಿಳಿ, ಗರುಡ, ನಾಗ ಹಾಗು ಹೂವಿನ ಶಿಲ್ಪಕಲೆಗಳಿವೆ. ಇದು ತುಂಬ ಸುಂದರವಾಗಿ ಕಾಣಿಸುತ್ತದೆ. ಶರಣ ಬಸವೇಶ್ವರ ವೀರಶೈವ ಮನೆತನದವರು. ಇವರ ತಾಯಿ ಸಂಗಮ್ಮ ಹಾಗು ತಂದೆ ಮಲಕಪ್ಪ, ಇವರಿಗೆ ಶರಣ ಬಸವೇಶ್ವರನೊಂದಿಗೆ ಬಹಳ ಪ್ರೀತಿ ಹಾಗು ಭಕ್ತಿ ಇತ್ತು. ಇದರಿಂದ ದಾಸೋಹದ ಪಾರಂಪರ ಪ್ರಾರಂಬವಾಯಿತು. ಶರಣ ಬಸ್ಸವೆಶ್ವರ ಪೂರ್ತಿ ಮನಸ್ಸದಿಂದ ಪೂಜೆ ಮಾಡುತ್ತಿದ್ದ . ಶರಣ ಬಸವೇಶ್ವರ ಮರಣದ ನಂತರ, ಅವರ ನೆನಪಿನಿಂದ ಒಂದು ಪವಿತ್ರವಾದ ದೇವಸ್ಥಾನವನ್ನು ಕಟ್ಟಿಸಿದರು. ಶರಣ ಬಸವೇಶ್ವರರ ಉತ್ಸಾಹಿತ ಭಕ್ತ "ಅಡಿ ದೊಡ್ಡಪ್ಪ ಶರಣ" ಇವರಿಬ್ಬರು ಕೂಡಿ "ಶರಣ ಬಸವೇಶ್ವರ ಮಹಾದಸೋಹ ಪೀಠ" ಕಟ್ಟಿಸಿದರು. ಸಂಕ್ರಾಂತಿ ಹಾಗು ವಿಜಯದಶಮಿ ಹುಬ್ಬ ಬಹಳ ಉತ್ಶಾಹದಿಂದ ಆಚರಿಸುತ್ತಾರೆ. ಶರಣ ಬಸವೇಶ್ವರ ಮಹಾದಸೋಹ ಜಾತ್ರೆ ಪ್ರತಿ ವರ್ಷ ಮಾರ್ಚ್ ರಿಂದ ಏಪ್ರಿಲ್ವರೆಗೆ ಇರುತ್ತದೆ. ಥೇರನ್ನು ಎಳೆಯುತ್ತಾರೆ. ಇದು ಬಹಳ ಆಕರ್ಷಿತವಾಗಿರುತ್ತದೆ. ಶರಣ ಬಸವೇಶ್ವರ ಮಹಾದಸೋಹ ಪೀಠ ತಮ್ಮ "ಶರಣ ಬಸವೇಶ್ವರ ವಿದ್ಯಾ ವರ್ಧಕ ಸಂಸ್ಥೆ ಇಂದ ಶಿಕ್ಷಣವನ್ನು ಕೊಡುತ್ತಾರೆ.
ಬುದ್ಧ ವಿಹಾರ :
ನಗರದ ಸದ್ಯ ಇನ್ನೊಂದು ಪ್ರಮುಖ ಆಕರ್ಷಣೆಯೆಂದರೆ ಬುದ್ಧನ ಪ್ರತಿರೂಪವಾಗಿರು ಬುದ್ಧವಿಹಾರ ಸದ್ಯದ ಕೇಂದ್ರ ಸಚಿವರಾದ ಮಾನ್ಯ ಮಲ್ಲಿಕಾರ್ಜುನ ಖರ್ಗೆಯವರು ಈ ಪವಿತ್ರ ಪುಣ್ಯಸ್ಥಾನದ ನಿರ್ಮಾತೃ . ಬೌದ್ಧಧರ್ಮ ಅನುಯಾಯಿಯಾಗಿರುವ ಇವರು ಇಲ್ಲಿಯ ಈ ಕೆಲಸಕ್ಕೆ ಕೈಹಾಕಿ ಯಶಸ್ವಿ ಕಂಡಿದ್ದಾರೆ . ಸುಮಾರು ಎಕರೆಗಳಷ್ಟು ಸ್ಥಾನವಿರುವ ಈ ವಿಹಾರ ನಗರದ ಹೊರವಲಯದಲ್ಲಿ ಪ್ರವಾಸಿಗರ ಪ್ರಮುಖ ಸ್ಥಾನವಾಗಿದೆ . ನಾಲ್ಕು ಸ್ಥೂಪಗಳ ನಡುವೆ ಪಂಚಲೋಹದ ಬುದ್ಧನ ಮೂರ್ತಿ ದೈವ ಭಕ್ತಿ ಶಕ್ತಿಯನ್ನು ತಂದುಕೊಡುತ್ತದೆ . ಸುಮಾರು ಸಾವಿರಕ್ಕು ಹೆಚ್ಚು ಜನ ಒಂದೆ ವೇದಿಕೆಯಲ್ಲಿ ಕಳಿತು ಧ್ಯಾನ ಮಾಡಲು ಅವಕಾಶ ಮಾಡಿ ಕೊಡುವಂತೆ ದಿವ್ಯ ಧ್ಯಾನ ಮಂದಿರವಿದೆ . ಅಪ್ಪಟ ಬಂಗಾರದ ಅನೇಕ ಬುದ್ಧನ ಮೂರ್ತಿಗಳು ಅನಾವರನಗೊಂಡಿದ್ದು ಅವರ ಭಕ್ತಿ ಭಾವದಲ್ಲಿ ಬೀಳುವಂತೆ ಪ್ರೇರೆಪಿಸುತ್ತವೆ . ಅಲ್ಲಲ್ಲಿ ಅನೇಕ ಆನೆಗಳು ಈ ವಿಹಾರದ ತುಂಬ ನಿಂತಿವೆ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯಾಗಿವೆ .
ಕೃಷಿ:
ಇಲ್ಲಿರುವ ಎರಡು ಮುಖ್ಯ ನದಿಗಳೆ೦ದರೆ ಕೃಷ್ಣಾ ಮತ್ತು ಭೀಮಾ. ಕೃಷ್ಣಾ ಮೇಲ್ದಂಡೆ ಯೋಜನೆ ಇಲ್ಲಿನ ಕೃಷಿ ಯೋಜನೆಗಳಲ್ಲಿ ಮುಖ್ಯವಾದದ್ದು. ಕೃಷಿಯ ದೃಷ್ಟಿಯಿ೦ದ, ಗುಲ್ಬರ್ಗ ಜಿಲ್ಲೆಯ ಮಣ್ಣು ಕಪ್ಪು ಮಣ್ಣಾಗಿದ್ದು ಇಲ್ಲಿನ ಮುಖ್ಯ ಬೆಳೆಗಳು ಜೋಳ, ತೊಗರಿ, ನೆಲಗಡಲೆ, ಅಕ್ಕಿ ಮತ್ತು ಬೇಳೆಗಳು. ಈ ಜಿಲ್ಲೆಯನ್ನು ತೋಗರಿ ಕಣಜ ಎಂದೆ ಕರೆಯುತ್ತಾರೆ . ಈ ಜಿಲ್ಲೆಯ ಚಿತ್ತಾಪೂರ ತಾಲೂಕು ಅತಿ ಹೆಚ್ಚು ತೊಗರಿ ಬೆಳಿಯುವ ಜಿಲ್ಲಯಾಗಿದೆ ನೀವು ಅಮೇರಿಕಾದಲ್ಲಿ ಯಾವುದೇ ದೊಡ್ಡ ಹೋಟೆಲ್ ನಲ್ಲಿ ಕೂತಾಗ ಅಲ್ಲಿ ಕೊಡುವ ಬೇಳೆ ಸಾರು ಮತ್ತು ನೀವು ಕೂತಿರುವ ಕಲ್ಲು ಬಂಡೆ ನಯವಾಗಿ ತೀಡಿದವು ಅವು ಬೇರೆ ಎಲ್ಲಿಯವು ಅಲ್ಲಾ ಅವು ಚಿತ್ತಾಪೂರ ತಾಲುಕಿನವು . ಕೆಲವು ಕಡೆ ನಿರಾವರಿ ಕೂಡಾ ಮಾಡುತ್ತಾರೆ. ಶೇಂಗಾ ಕಬ್ಬು , ಹತ್ತಿ ಕೂಡಾ ಬೆಳಿಯುತ್ತಾರೆ .
ಉದ್ಯಮ :
ಉದ್ಯಮದ ದೃಷ್ಟಿಯಿ೦ದ ಗುಲ್ಬರ್ಗ ಹಿಂದುಳಿದ ಜಿಲ್ಲೆ . ಶಹಾಬಾದ್, ವಾಡಿ, ಮಲಖೇಡ್ ಗಳಲ್ಲಿ ಸಿಮೆಂಟ್ ಉದ್ಯಮಗಳಿವೆ. ಜಿಲ್ಲೆಯ್ಯಾದಂತ ದಾಲ್ ಮಿಲ್ ಗಳು ಇವೆ. ಆದರೆ ಹಳೆಯ ತಂತ್ರಜ್ಞಾನ ಮತ್ತು ಪದ್ದತಿಯನ್ನು ಬಳಸುತ್ತಿರುವುದರಿಂದ ಅನೇಕ ದಾಲ್ ಮಿಲ್ ಗಳು ನಷ್ಟದಲ್ಲಿವೆ. ನೌಕಕರ ಸಮಸ್ಯೆಯಿಂದಾಗಿ ಹಲವಾರು ಉದ್ಯಮಗಳು ಬಂದಾಗಿವೆ. ಖಾಸಗಿ ಕ್ಷೇತ್ರದ ಇಂಜನಿಯರಿಂಗ್, ವೈದಕೀಯ, ನರ್ಸಿಂಗ್, ಪಾಲಿಟೆಕ್ನಿಕ್ ಕಾಲೇಜು, ಮ್ಯಾನೇಜ್ ಮೆಂಟ್ ಕಾಲೇಜುಗಳು ಮತ್ತು ಕಾನ್ವೆಂಟ್ ಶಾಲೆಗಳು, ಈ ಜಿಲ್ಲೆಯಲ್ಲಿರುವ ಅತ್ಯಂತ ಯಶಸ್ವಿ ವ್ಯಾಪಾರ ಕೇಂದ್ರಗಳಾಗಿವೆ. ರಾಜ್ಯ ಸರ್ಕಾರ, ಗುಲ್ಬರ್ಗಾದಲ್ಲಿ ಐಟಿ ಪಾರ್ಕ ಸ್ಥಾಪಿಸುವುದಾಗಿ ಹೇಳಿದೆ. ಗುಲ್ಬರ್ಗಾ-ಬೀದರ್ ರೈಲು ಮಾರ್ಗವಾದರೆ, ಬೆಂಗಳೂರು-ದೆಹಲಿ ಪ್ರಯಾಣದಲ್ಲಿ ಹಲವಾರು ಗಂಟೆಗಳ ಉಳಿತಾಯವಾಗುವುದು ಮತ್ತು ಗುಲ್ಬರ್ಗಾ-ಬೀದರ ಅಭಿವೃದ್ಧಿಯಾಗುವುದು. ಆದರೆ ಕಳೆದ 5 ದಶಕಗಳಿಂದ ಈ ಬೇಡಿಕೆ ಹಾಗೆಯೇ ಉಳಿದಿದೆ.
ಸಾಹಿತ್ಯ :
ಸಾಹಿತ್ಯ ಕ್ಶೆತ್ರಕ್ಕೆ ಗುಲ್ಬರ್ಗಾ ಜಿಲ್ಲೆಯ ಕೊಡುಗೆ ಅಪಾರ. ಗುಲ್ಬರ್ಗದ ಹೆಮ್ಮೆಯ ಸಾಹಿತಿಯಾದ ಡಾ. ಗೀತಾ ನಾಗಭೂಷಣ್ ಅವರ "ಬದುಕು" ಎಂಬ ಮಹಾನ್ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ ಕನ್ನಡದ ಪ್ರಪ್ರಥಮ ಮಹಿಳಾ ಸಾಹಿತಿ ಎಂಬ ಹೆಗ್ಗಳಿಕೆ ಡಾ. ಗೀತಾ ನಾಗಭೂಷಣ್ ಅವರದು. ಭಾರತೀಯ ಭಾಷಾ ಪರಿಷತ್ ಕೂಡಾ ಡಾ. ಗೀತಾ ನಾಗಭೂಷಣ್ ಅವರು ಸಾಹಿತ್ಯ ಕ್ಶ್ರೆತ್ರಕ್ಕೆ ಸಲ್ಲಿಸಿದ ಸೇವೆಗೆ 2011-12 ನೇ ಸಾಲಿನ ಸಮಗ್ರ ರಚನಾ ಪುರಸ್ಕಾರ ನೀಡಿದೆ. ಇವರು ಬರೆದ "ಕಾಗೆ ಮುಟ್ಟಿತು" ಹಸಿ ಮಾಂಸ ಮತ್ತು ಹದ್ದುಗಳು, ಚಿಕ್ಕಿಯ ಹರೆಯದ ದಿನಗಳು, ಧುಮ್ಮಸು, ದಂಗೆ, ಮಾಪುರ ತಾಯಿಯ ಮಕ್ಕಳು ಮುಂತಾದ 30 ಕ್ಕೂ ಹೆಚ್ಚು ಗ್ರಂಥಗಳು ಜನರ ಮನಸ್ಸು ಗೆದ್ದಿವೆ..
ಲಂಕೇಶ್ ಪತ್ರಿಕೆ , ಸುಧಾ ಮುಂತಾದ ಪ್ರಸಿದ್ದ ಪತ್ರಿಕೆಗಳಲ್ಲಿ ಇವರ ಧಾರಾವಾಹಿಗಳೂ ಪ್ರಕಟವಾಗಿವೆ.. ಹಂಪಿ ಕನ್ನಡ ವಿಶ್ವ ವಿದ್ಯಾಲಯವು ಇವರಿಗೆ ನಾಡೋಜ ಪ್ರಶಸ್ತಿ ನೀಡಿ ಸನ್ಮಾನಿಸಿದೆ. "ನಾಡೋಜ" ಪ್ರಶಸ್ತಿ ಪಡೆದ ಕನ್ನಡದ ಪ್ರಪ್ರಥಮ ಮಹಿಳಾ ಸಾಹಿತಿ ಎಂಬ ಹೆಗ್ಗಳಿಕೆ ಗುಲ್ಬರ್ಗಾದ ಡಾ. ಗೀತಾ ನಾಗಭೂಷಣ್ ಅವರದು. ಅಲ್ಲದೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಶರಾಗಿ 4 ವರ್ಷ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಶರಾದ ಪ್ರಪ್ರಥಮ ಮಹಿಳಾ ಸಾಹಿತಿ ಕೂಡಾ ಡಾ. ಗೀತಾ ನಾಗಭೂಷಣ್ ಅವರೇ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಶರಾದ ಮೆಲೆ ಪ್ರತಿವರ್ಷ ಇಬ್ಬರು ಮಹಿಳಾ ಸಾಹಿತಿಗಳಿಗೆ ಪ್ರಶಸ್ತಿ ನೀಡುವ ಪದ್ದತಿಯನ್ನು ಜಾರಿಗೆ ತಂದ ಶ್ರೇಯಸ್ಸು ಡಾ. ಗೀತಾ ನಾಗಭೂಷಣ್ ಅವರಿಗೆ ಸಲ್ಲುತ್ತದೆ. ಗದಗದಲ್ಲಿ 2010 ರಲ್ಲಿ ನಡೆದ 76 ನೇ ಅಖಿಲ ಭಾರತ ಕನ್ನಡ್ ಸಾಹಿತ್ಯ ಸಮ್ಮೇಳನದ ಅಧ್ಯಕ್ಶರಾಗಿದ್ದರು. ಅಲ್ಲದೆ ವಸಂತ ಕುಷ್ಟಗಿ , ಚೆನ್ನಣ್ಣನ ವಾಲಿಕಾರ , ಕೆ.ನೀಲಾ , ಕಾಶಿನಾಥ ಗವಾಯಿ , ಹೀಗೆ ಅನೇಕ ಹಿರಿಯ ಸಾಹಿತಿಗಳು ಈ ನಗರದಲ್ಲಿ ಇದ್ದಾರೆ .
ಅನೇಕ ಸಮೃದ್ಧಗಳನ್ನು ಹೊತ್ತಿರುವ ಈ ನಾಡು ಇದೀಗ ಕೇಂದ್ರದ ಇ.ಎಸ್.ಐ.ಸಿ. ಆಸ್ಪತ್ರೆ ಕೇಂದ್ರೀಯ ವಿವಿ ಸ್ಥಾಪನೆಯಂತಹ ಮಹತ್ವದ ಕೆಲಸ ಪ್ರಗತಿಯಲ್ಲಿವೆ. ಇನ್ನು ಕೆಲವೇ ದಿನಗಳಲ್ಲಿ ವಿಮಾನ ಹಾರಾಟ ಪ್ರಾರಂಭವಾಗಲಿದೆ . ನಮ್ಮ ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ಅದರಲ್ಲು ಇಬ್ಬರು ಒಂದೇ ಪಕ್ಷಕ್ಕೆ ಸೇರಿದವರನ್ನು ಕೊಟ್ಟ ಹೆಗ್ಗಳಿಕೆ ಈ ಜಿಲ್ಲೆಗೆ ಸಲ್ಲುತ್ತದೆ . ಸತತ ಹತ್ತುಬಾರಿ ಆರಿಸಿ ಬಂದ ಮಾನ್ಯ ಖರ್ಗೆಯವರು ವಾಸಿಸಿರುವ ಸ್ಥಾನ ಇದಾಗಿದೆ . ಈ ರಾಜ್ಯದ ಪ್ರಮುಖ ಆಕರ್ಷಣೆಯಾಗಿ ಬೆಳಿಯುತ್ತಿರುವ ಈ ನಾಡಿಗೆ ಶುಭಕೋರೋಣವೆ ?