ನಾನು ಕಂಡಂತೆ ಕರ್ನಾಟಕದಲ್ಲಿ ಶಾಂತಿ ಪ್ರಕಾಶನದ ಹಲವು ಪುಸ್ತಕಗಳು ದೇವರ ನೈಜವಾದ ಕಲ್ಪನೆಯನ್ನು ಕುರಾನ್ ಆಧಾರಿತವಾಗಿ, ಕನ್ನಡದಲ್ಲಿ ತಿಳಿಸುವ ಪ್ರಯತ್ನ ಮಾಡುತ್ತವೆ. ನಾನು ಕುರಾನ್ ಕನ್ನಡ ಅನುವಾದ ಓದಿರುವ ಅನುಭವದ ಪ್ರಕಾರ ಅಲ್ಲಿರುವ ಅದೆಷ್ಟೊ ಸತ್ಯಗಳನ್ನು ಅರೆತುಕೊಳ್ಳಲು ಸಾಧ್ಯವಾಯಿತು. ಈ ಭೂಮಿಯ ಮೇಲೆ ಜೀವಿಗಳು ಕಾಣಿಸಿಕೊಂಡಾಗಿನಿಂದ ಇಲ್ಲಿಯವರೆಗೆ, ಅನೇಕ ರೀತಿಯ ಧರ್ಮಗಳು ಹುಟ್ಟಿಕೊಂಡು ಎಲ್ಲವು ಒಂದೊಂದೊ ಗುಂಪಾಗಿ ಅನುಸರಿಸುತ್ತಾ ಬಂದಿವೆ. ನೈಜವಾಗಿ ಮಾನವರಿಗೆ ಸಕಲ ಸೌಲಭ್ಯ ಒದಗಿಸಿಕೊಡಬಲ್ಲ ಮತ್ತು ಅವನ ಹಕ್ಕುಗಳಿಗೆ ಚ್ಯುತಿ ಬರದಂತೆ ಪ್ರೀತಿಯ ಬದುಕು ಕೊಟ್ಟು ಕಾಪಾಡುವ ಒಂದು ಧರ್ಮ ಯಾವುದು ಎಂದು ಹುಡುಕುವ ಪ್ರಯತ್ನ ನನ್ನದು. ಯಾವುದು ಮಾನವನ ಜೀವನ ಸಾಗಿಸಲು ಪೂರಕವಾಗಿದೆಯೊ, ಅದೇ ನಿಜವಾದ ಮಾನವ ಧರ್ಮ ಎನಿಸುತ್ತದೆ. ಎಲ್ಲಿ ಧರ್ಮದ ಕಟ್ಟಳೆಗಳಿಂದ ಮಾನವನನ್ನು ಬಂಧಿಸುತ್ತೇವೆಯೊ, ಅವು ನೈಜವಾದ ಧರ್ಮ ಅಲ್ಲಾ ಎನಿಸುತ್ತದೆ. ಮಾನವರನ್ನು ಗೌರವದಿಂದ ಬದುಕಲು ಪೂರಕವಾದ ವಾತಾವರಣ ಕಲ್ಪಸಿಕೊಡುವ ಯಾವುದೇ ಧರ್ಮ ಸದ್ಧರ್ಮ ಎನಿಸಿಕೊಳ್ಳುತ್ತದೆ.
ವಿಚ್ಛೇದನ ಅಥವಾ ತಲಾಕ್:
ಮದುವೆ ಸಂಸ್ಥೆಯ ಕೊನೆಯ ಮುಕ್ತಾಯ, ವ್ಯಕ್ತಿಗಳ ನಡುವಿನ ಮದುವೆ ಮತ್ತು ಮದವೆಯ ಬಂಧನ ಬೇರ್ಪಡಿಸುವುದು ಮತ್ತು ಕಾನೂನಿನ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ರದ್ದುಗೊಳಿಸುವುದು. ಹೆಚ್ಚಿನ ದೇಶಗಳಲ್ಲಿ ನ್ಯಾಯಾಲಯ ಅಥವಾ ಕಾನೂನಿನ ಇತರೆ ಅಧಿಕಾರದ ಕಾರ್ಯವಿಧಾನದಿಂದ ವಿಚ್ಛೇದನಕ್ಕೆ ಅನುಮತಿಯ ಅಗತ್ಯವಿದೆ. ವಿಚ್ಛೇದನಕ್ಕೆ ಗಂಡ ಅಥವಾ ಹೆಂಡತಿಯ ಬೆಂಬಲ,ಮಕ್ಕಳ ಪಾಲನೆ,ಮಕ್ಕಳ ಬೆಂಬಲ,ಆಸ್ತಿಯ ಹಂಚಿಕೆ,ಮತ್ತು ಸಾಲ ಹಂಚಿಕೆಯಂತಹ ವಿಷಯಗಳು ಕಾನೂನಿನ ಕ್ರಮದಲ್ಲಿ ಇರಬಹುದು.
ಹೆಚ್ಚಿನ ಪಾಶ್ಚಿಮಾತ್ಯ ದೇಶಗಳಲ್ಲಿ,ವಿಚ್ಛೇಧನವು ವಿವಾಹವನ್ನು ನಿರರ್ಥಕ ಹಾಗೂ ಅಸ್ತಿತ್ವವಿಲ್ಲದ್ದು ಎಂದು ಹೇಳುವುದಿಲ್ಲ ಆದರೆ ಇದು ವ್ಯಕ್ತಿಗಳ ವೈವಾಹಿಕ ಮಾನ್ಯತೆಯನ್ನು ರದ್ದುಗೊಳಿಸುತ್ತದೆ. ಏಕಪತ್ನೀತ್ವ ಏಕಪತಿತ್ವ ಪದ್ಧತಿ ಕಾನೂನಿದ್ದಾಗ,ಇದು ಮಾಜಿ ಸಂಗಾತಿಗಳು ಬೇರೆ ಮದುವೆಯಾಗಲು ಅನುಮತಿ ನೀಡುತ್ತದೆ. ಬಹುಪತ್ನಿತ್ವ ನ್ಯಾಯಸಮ್ಮತವಿದ್ದಾಗ,ವಿಚ್ಛೇದನ ಮಹಿಳೆಗೆ ಬೇರೆ ಮದುವೆಯಾಗಲು ಅನುಮತಿಸುತ್ತದೆ. ಜಗತ್ತಿನಾದ್ಯಂತ ವಿಚ್ಛೇದನ ಕಾನೂನುಗಳು ಬೇರೆಬೇರೆಯಾಗಿರುತ್ತವೆ. ಕೆಲವು ದೇಶಗಳಲ್ಲಿ ವಿಚ್ಛೇದನಕ್ಕೆ ಅನುಮತಿ ಇಲ್ಲ,ಉದಾಹರಣೆಗೆ ಮಲ್ತಾ ಮತ್ತು ಫಿಲಿಫೈನ್ಸ್,ಹೀಗಿದ್ದಾಗ್ಯೂ ರದ್ದತಿಗೆ ಅನುಮತಿ ಇದೆ. 1971 ರಿಂದ 1996ವರಗೆ, ನಾಲ್ಕು ಯೂರೋಪಿಯನ್ ದೇಶಗಳು ವಿಚ್ಛೇದನವನ್ನು ನ್ಯಾಯಸಮ್ಮತಗೊಳಿಸಿವೆ. ಸ್ಪೇನ್, ಇಟಲಿ, ಪೋರ್ಚುಗಲ್ ಮತ್ತು ಐರ್ಲ್ಯಾಂಡ್ ಗಣರಾಜ್ಯ.
ತಪ್ಪಿಲ್ಲದ ವಿಚ್ಛೇದನ:
ತಪ್ಪಿಲ್ಲದ ವಿಚ್ಛೇದನ ಪದ್ಧತಿಯಲ್ಲಿ ಮದುವೆಯು ಬೇರ್ಪಡುವಿಕೆಗೆ ಆರೋಪ ಅಥವಾ ವ್ಯಕ್ತಿಯಿಂದ ತಪ್ಪಿನ ಸಾಕ್ಷ್ಯದ ಅವಶ್ಯಕತೆಯಿಲ್ಲ. ಅರ್ಜಿಯನ್ನು ವ್ಯಕ್ತಿ ಅಥವಾ ಎರಡು ವ್ಯಕ್ತಿಗಳು ಜಂಟಿಯಾಗಿ ಹಾಕಬಹುದು.
ದೋಷ-ಕಾರಣದ ವಿಚ್ಛೇದನ:
1975ಕ್ಕಿಂತ ಪೂರ್ವದಲ್ಲಿ, ವಿಚ್ಛೇದನ ಜಾರಿಯಲ್ಲಿದ್ದ ದೇಶಗಳಲ್ಲಿ ವಿಚ್ಛೇಧನ ಪಡೆಯಲು ವ್ಯಕ್ತಿಯೊಬ್ಬ ಮದುವೆಯ ನಿಯಮಕ್ಕೆ ವಿರುದ್ಧವಾದ ಕಾರ್ಯದಲ್ಲಿ ತೊಡಗಿದ್ದಾನೆ ಎಂಬುದಕ್ಕೆ ಸಾಕ್ಷಿಯನ್ನು ಒದಗಿಸಬೇಕಾಗಿತ್ತು. ಇದು ವಿಚ್ಛೇದನಕ್ಕೆ ನಿಬಂಧನೆಯ "ಆಧಾರಗಳು" "ತಪ್ಪು" ಎಂದು ಪ್ರಸಿದ್ಧವಾಗಿ ಕರೆಯಲಾಗುತ್ತದೆ, ಮತ್ತು ಮದುವೆಯನ್ನ ಕೊನೆಗೊಳಿಸಲು ಇದೊಂದೆ ಮಾರ್ಗವಾಗಿದೆ. ಜಗತ್ತಿನಾದ್ಯಂತ ಹೆಚ್ಚಿನ ನ್ಯಾಯನಿರ್ಣಯಗಳಿಗೆ ಇಂದಿಗೂ ತಪ್ಪಿನ ಸಾಕ್ಷಿಯ ಅಗತ್ಯವಿದೆ. ಯುನೈಟೆಡ್ ಸ್ಟೇಟ್ಸಲ್ಲಿ, ಎಲ್ಲಾ 50 ರಾಜ್ಯಗಳಲ್ಲಿ ಮತ್ತು ಡಿಸ್ಟ್ರಿಕ್ಟ್ ಅಫ್ ಕೊಲಂಬಿಯಾ-ನ್ಯೂಯಾರ್ಕ್ಗಳಲ್ಲಿ ತಪ್ಪಿಲ್ಲದ ವಿಚ್ಛೇದನ ಈಗ ದೊರೆಯುತ್ತಿದೆ.
ವ್ಯಕ್ತಿಗಳು ಒಳಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಜೊತೆಯಾಗಿ ಕೆಲಸ ಮಾಡುತ್ತಿದ್ದಾಗ ವಿಚ್ಛೇದನ ಪಡೆಯಲು,ಅಥವಾ ಕ್ಷಮಾಪಣೆ ಅಪರಾಧ ಒಪ್ಪಿಕೊಂಡರೆ,ಪರೋಕ್ಷ ಸಮ್ಮತಿ ಅಪರಾಧದಲ್ಲಿ ಯಾರನ್ನಾದರೂ ಸಿಕ್ಕಿಸುವ ತಂತ್ರ ನಡೆಸಿದಾಗ,ಅಥವಾ ಇತರೆ ವ್ಯಕ್ತಿಗಳಿಂದ ಪ್ರಚೋದನೆಗೊಳಗಾದಾಗ ತಪ್ಪು ಆಧಾರಿತ ವಿಚ್ಛೇದನಗಳು ಕಂಟೆಸ್ಟೇಡ್ ಕಲಹ ಹೊಂದಿರುವ ಆಗಬಹುದು.
ಸಮರಿ (ಸರಳ) ವಿಚ್ಛೇದನ:
ಸಮರಿ ಅಥವಾ ಸರಳ ವಿಚ್ಛೇದನವು, ಕೆಲವೊಂದು ಕಾನೂನುವ್ಯಾಪ್ತಿಯಲ್ಲಿ ಲಭ್ಯವಿದೆ, ಇಲ್ಲಿ ಸಂಗಾತಿಗಳಿಬ್ಬರೂ ಸಮಾನವಾಗಿ ವಿಚ್ಛೇಧನವನ್ನು ಹೊಂದಲು ಕೆಲವು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ. ಕಡಿಮೆ ಅವಧಿಯ ಮದುವೆ (5 ಕ್ಕಿಂತ ಕಡಿಮೆ) ಮಕ್ಕಳಿಲ್ಲದಿರುವಾಗ (ಅಥವಾ,ಇದ್ದಾಗ ಕೆಲವು ರಾಜ್ಯಗಳಲ್ಲಿ, ಸಂಗಾತಿಗಳು ಮಕ್ಕಳ ಪಾಲನೆಯನ್ನು ನಿರ್ಧರಿಸಿದ್ದರೆ ಮತ್ತು ಮಕ್ಕಳ ಮದುವೆ ಹಣ ಸಹಾಯ ಮಾಡಿದಾಗ) ಕಡಿಮೆ ಅಥವಾ ಸ್ಥಿರಆಸ್ತಿ ಇಲ್ಲದಿದ್ದಾಗ (ಅಡವಿಡುವುದು ಇಲ್ಲ) ವೈವಾಹಿಕ ಆಸ್ತಿ ಒಂದು ಮಿತಿಯಲ್ಲಿದ್ದರೆ (ಸುಮಾರು 35,000 ವಾಹನಗಳನ್ನು ಒಳಗೊಂಡಿಲ್ಲ) ಪ್ರತಿಯೊಬ್ಬ ಸಂಗಾತಿಯ ಖಾಸಗಿ ಆಸ್ತಿ ಮಿತಿಯಲ್ಲಿದ್ದರೆ (ವೈವಾಹಿಕ ಆಸ್ತಿಯಂತೆ) ಇಂತಹ ವಿಚ್ಛೇಧನಕ್ಕೆ ಮುಸ್ಲಿಂ ಸಮುದಾಯದಲ್ಲಿ ತಲಾಕ್ ಎನ್ನುತ್ತಾರೆ ಮತ್ತು ಈ ಕ್ರಮಕ್ಕೆ ಅಲ್ಲಿ ಒಂದು ವಿಶೇಷ ಸ್ಥಾನವಿದೆ. ಈ ಮುಂದಿನ ಲೇಖನದಲ್ಲಿ, ತಲಾಕ್ ಎಂದರೇನು? ತ್ವಲಾಕ್ ಒಂದು ಸಮಸ್ಯೆಯೇ? ಸಮಾನ ಪೌರ ಸಂಹಿತೆ ದೇಶದ ಸಾಂಸ್ಕೃತಿಕ ಬಹುತ್ವಕ್ಕೆ ಅಪಾಯವೆ? ಎಂಬ ವಿಷಯದ ಕುರಿತಾಗಿ ಚರ್ಚಿಸಲಾಗಿದೆ.
ತ್ವಲಾಕ್ ಎಂದರೇನು?:
ತ್ವಲಾಕ್ ಕುರಿತಾಗಿ ಕುರಾನ್ ಪ್ರಕಾರ: ಇಸ್ಲಾಮ್ ಧರ್ಮದಲ್ಲಿ ಏಕಕಾಲಕ್ಕೆ ತ್ವಲಾಕ್ ಅವಕಾಶ ಇದೆಯಾ ಎಂಬುವುದು ನಾವು ಗಮನಿಸಬೇಕಾದ ಪ್ರಮುಖ ಅಂಶ. ಇಸ್ಲಾಮ್ ಪ್ರಕಾರ, ವಿವಾಹ ವಿಚ್ಚೇದನ ಆಗಬೇಕಾದರೆ ಪತಿ ತನ್ನ ಪತ್ನಿಗೆ ಮೂರು ಬಾರಿ ತಲಾಕ್ ಹೇಳಬೇಕು. ಅಂದರೆ ಪ್ರತಿ ತಲಾಕ್ ನಡುವೆ ನಿರ್ದಿಷ್ಟ ಕಾಲವಕಾಶವಿದೆ. ಈ ಕಾಲಾವಕಾಶದಲ್ಲಿ ಪತಿ-ಪತ್ನಿ ದೈಹಿಕವಾಗಿ ಕೂಡಿದ ಪಕ್ಷದಲ್ಲಿ ತಲಾಕ್ ಅನೂರ್ಜಿತಗೊಳ್ಳುತ್ತದೆ. ಆದರೆ, ಒಂದೇ ಬಾರಿ ಮೂರು ತಲಾಕ್ ಹೇಳುವ ಪದ್ಧತಿ, ತ್ವಲಾಕ್ ಕುರಿತಾಗಿ ಕುರಾನ್ ನಲ್ಲಿ ಯಾವುದೇ ಉಲ್ಲೇಖವಿಲ್ಲ. ತಲಾಖ್ ಕುರಿತಾಗಿ ಕುರಾನ್ ನಲ್ಲಿ ಈ ರೀತಿ ಹೇಳಲಾಗಿದೆ.
``ಸಂದೇಶವಾಹಕರೇ, ನೀವು ಸ್ತ್ರೀಯರಿಗೆ ತಲಾಕ್ ಕೊಡುವಾಗ ಅವರಿಗೆ ಇದ್ದತ್ ಗಾಗಿ ತಲಾಕ್ ಕೊಡಿರಿ. ಇದ್ದತ್ತಿನ ಕಾಲಾವಧಿಗಳನ್ನು ಸರಿಯಾಗಿ ಎಣಿಸಿರಿ. ಮತ್ತು ನಿಮ್ಮ ಪ್ರಭುವಾದ ಅಲ್ಲಾಹನ ಬಗ್ಗೆ ಭಯ ಇರಲಿ. ಇದ್ದತ್ತಿನ ಕಾಲಾವಧಿಯಲ್ಲಿ ಅವರು ಯಾವುದೇ ಅಶ್ಲೀಲ ಕಾರ್ಯವೆಸಗದೇ ಇದ್ದಲ್ಲಿ ನೀವು ಅವರನ್ನು ಅವರ ಮನೆಯಿಂದ ಹೊರಹಾಕಬಾರದು ಮತ್ತು ಅಂಥವರು ತಾವಾಗಿಯೇ ಹೊರಟು ಹೋಗಬಾರದು. ಅಲ್ಲಾಹನು ನಿಶ್ಚಯಿಸಿದ ಮೇರೆಗಳಿವು. ಅಲ್ಲಾಹನ ಮೇರೆಗಳನ್ನು ಮೀರಿದವನು ತನ್ನ ಮೇಲೆ ತಾನೇ ಅಕ್ರಮವೆಸಗುವನು. ಪ್ರಾಯಶಃ ಇದಾದ ಬಳಿಕ ಅಲ್ಲಾಹನು ಯಾವುದಾರದೂ ದಾರಿಯನ್ನು ಉಂಟುಮಾಡಲೂಬಹುದು. ನಿಮಗೆ ಅರಿಯದು'' ? ಕುರಾನ್, ಸೂರಾ 65 (ಅತ್ತಕಾಲ್) ಆಯತ್ 1. ಇನ್ನು ಕುರಾನ್ ಸೂರಾ 4 ``ಅನ್ನಿಸಾದ'' ಆಯತ್ 35 ರಲ್ಲಿ ತಲಾಕ್ ಕುರಿತಾದ ಉಲ್ಲೇಖ ಹೀಗಿದೆ. ``ಪತಿ ಪತ್ನಿಯರ ಸಂಬಂಧ ಕೆಡುವುದೆಂದು ನಿಮಗೆ ಆತಂಕವಾದಲ್ಲಿ ಒಬ್ಬ ಮಧ್ಯಸ್ಥನನ್ನು ಪುರುಷನ ಕಡೆಯಿಂದಲೂ, ಒಬ್ಬನನ್ನು ಸ್ತ್ರೀಯ ಕಡೆಯಿಂದಲೂ ನಿಯುಕ್ತಿಗೊಳಿಸಿರಿ. ಅವರಿಬ್ಬರೂ ಸುಧಾರಿಸಲು ಬಯಸಿದರೆ ಅಲ್ಲಾಹ್ ಅವರ ನಡುವೆ ಸಾಮರಸ್ಯದ ಹಾದಿಯನ್ನು ತೆರೆಯುವನು. ನಿಶ್ವಯವಾಗಿಯೂ ಅಲ್ಲಾಹನು ಸರ್ವಜ್ಞನೂ ವಿವರಪೂರ್ಣನೂ ಆಗಿರುತ್ತಾನೆ''.
ಒಂದು ಧರ್ಮ ಮತ್ತು ಆ ಧರ್ಮದ ಹಲವು ಸಂಪ್ರದಾಯಿಕ ಆಚರಣೆಗಳು ಮಾನವನಿಗೆ ಹೊರೆಯಾಗಬಾರದು ಬದುಕಲು ಅನೂಕೂಲ ಅನುಸರಿಸಲು ಆಸಕ್ತಿ ಮೂಡಿ ಬರಬೇಕು ಬದುಕಿ ಬಾಳಲು ಉತ್ತಮ ವಾತಾವರಣ ಕಲ್ಪಿಸಬೇಕು ಅಯ್ಯೂ ಈ ಧರ್ಮದ ಆಚರಣೆಗಳಲ್ಲಿ ಸಿಕ್ಕು ಬಿದ್ದು ಸಾಕಾಗಿದೆ ಎನ್ನುವಂತೆ ಆಗಬಾರದು. ಪವಿತ್ರ ಕುರ್ ಆನ್ ಪ್ರಕಾರ ಈ ಭೂಮಿಯಲ್ಲಿರುವ ಎಲ್ಲ ಮನುಷ್ಯರ ದೇವರು ಒಬ್ಬನೆ, ಈ ದೇವರಿಗೆ ಕುರ್ ಆನ್ ಪ್ರಕಾರ ಕೆಲವು ಗುಣಗಳಿವೆ. ದೇವರು ಒಬ್ಬನೆ ಇರುತ್ತಾನೆ. ದೇವರಿಗೆ ಯಾವಾಗಲು ಯಾವದೇ ಅವಶ್ಯಕತೆಯಿರುವದಿಲ್ಲಾ , ದೇವರಿಗೆ ತಂದೆ ತಾಯಿ ಮಕ್ಕಳು ಇರುವುದಿಲ್ಲಾ , ದೇವರ ಸರಿ ಸಮಾನರು ಯಾರು ಇಲ್ಲ. ದೇವರನ್ನು ನಾವೆಲ್ಲಾ ತುಂಬಾ ಸರಳ ಎನ್ನುವಂತೆ ಪರಿಗಣೀಸುವಂತಿಲ್ಲಾ ದಯಾಪರನು ಆದ ಆತ ಎಲ್ಲರ ಚಿಂತನೆಯನ್ನು ನೀಗಿಸುತ್ತಾನೆ. ಅವನು ಬೇಡುವುದಿಲ್ಲಾ ಯಾರಿಗೂ ಕಾಡುವದಿಲ್ಲಾ ಬದಲಿಗೆ ಎಲ್ಲರಿಗೂ ದಯೆ ಕರುಣೆಯನ್ನು ಪಾಲಿಸುತ್ತಾನೆ. ಅವನ ಕರುಣೆಯಿಂದಲೇ ಎಲ್ಲವು ಸರಿಯಾಗಿ ಕಾರ್ಯಗಳು ನಡೆಯುತ್ತವೆ. ಯಾವುದು ಸರಿ ಯಾವುದು ತಪ್ಪು ಎನ್ನುವುದಕ್ಕಿಂತ ಮೊದಲು ನನಗೆ ಇಷ್ಟವಾಗುವುದನ್ನು ಕುರ್ ಆನ್ ಅನೇಕ ವಿಷಯ ತಿಳಿಸುತ್ತದೆ.
ಕುರಾನ್ ತನ್ನ ಅಧ್ಯಾಯಗಳಲ್ಲಿ ಮಾನವನಿಗೆ ಹಲವು ರೀತಿಯಲ್ಲಿ ಅವನು ಶುದ್ಧವಾಗಿ ಬದುಕಲು ಅವಕಾಶಮಾಡಿಕೊಡುವ ವಿಚಾರಗಳನ್ನು ವಿವರಿಸುತ್ತದೆ. ಅವುಗಳನ್ನು ನಾವೆಲ್ಲರೂ ಓದಿದಾದ ಮಾತ್ರ ಅದರ ಅನುಕರಣೆ ಸಾದ್ಯವಾಗುತ್ತದೆ. ಪವಿತ್ರ ಕುರಾನ್ ಕೆಲವದರಲ್ಲಿ ಪ್ರಶ್ನೆಗಳಿದ್ದರು ನನ್ನ ಮನಸ್ಸಿನ ಹಲವು ಪ್ರಶ್ನೆಗಳಿಗೆ ಸಾರ್ಥಕ ಉತ್ತರ ನೀಡಿದ ಗ್ರಂಥ ಅದನ್ನು ಅನುಸರಿಸಲು ಆಸ್ವಾದಿಸಲು ಹೃದಯ ಮನಸ್ಸು ಎರಡು ಒಗ್ಗೂಡುತ್ತವೆ.
``ಹೆಣ್ಣು ಸಂಸಾರದ ಕಣ್ಣು '' ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ " ಹೀಗೆ ಮಹಿಳೆಯ ಬಗ್ಗೆ ಬರೆಯುತ್ತಾ ಹೋದರೆ ಸಾಲುಗಳೆ ಸಾಲದಂತಹ ಪರಿಸ್ಥಿತಿ ಬರುತ್ತದೆ. ಅನೇಕ ಜನ ದೊಡ್ಡವರು ದೊಡ್ಡ ಮಾತುಗಳಲ್ಲಿ ಮಹಿಳೆಯನ್ನು ಹೊಗಳುತ್ತಾರೆ. ಅವಳ ಗುಣಗಾನ ಮಾಡಿ ಅವಳು ಇಲ್ಲದೆ ಜೀವನವಿಲ್ಲ ಅವಳನ್ನು ರಕ್ಷಿಸಿ ಉಳಿಸಿ ಈ ಸಮಾಜದಲ್ಲಿ ಸ್ತ್ರೀಗೆ ಸಬಲೀಕರಣ ಮಾಡಿ ಎಂದು ಕೂಗು ಹಾಕುತ್ತಾರೆ ಆದರೆ ಮನೆಗೆ ಹೋದ ತಕ್ಷಣ ಮಡದಿಗೆ ಗುಲಾಮರಾಗಿ, ಮಗಳಿಗೆ ಲಾಭವಿಲ್ಲದ ಗೊಂಬೆಯಾಗಿ ಕಾಣುವ ಈ ಜನರು ಮಹಿಳೆಯ ಬಗ್ಗೆ ಬಹಿರಂಗವಾಗಿ ಮಾತನಾಡುವ ಹಕ್ಕು ಕಳೆದುಕೊಂಡಿದ್ದಾರೆ. ನಮ್ಮ ಅನೇಕ ಮಹಿಳಾ ಕಾನೂನು ಮತ್ತು ಹಕ್ಕುಗಳನ್ನು ನಮ್ಮ ಮಹಿಳೆಯ ಸೂಕ್ತ ಸಬಲೀಕರಣದ ಬಗ್ಗೆ ಮಾತಾಡುತ್ತವೆ ಆದರೆ ನಾವು ಗಂಡು ಸಮಾಜ ಅದನ್ನು ಪಾಲಿಸುವ ಜಾರಿಗೆ ತರುವ ಮನುಸ್ಸು ಮಾಡಿಲ್ಲಾ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಮಹಿಳೆಗೆ ಸಂಪತ್ತಿನಲ್ಲಿ ಪಾಲುಯಿದೆ ಎಂದು ಇಸ್ಲಾಮಿಕ ಕಾನೂನಿನ ಪ್ರಕಾರ ಹೆಣ್ಣು ಮತ್ತು ಗಂಡು ಸರಿಸಮಾನರು. ಅದು ಹಕ್ಕುಗಳನ್ನು ನಿರ್ಧರಿಸುವಲ್ಲಿ ಮತ್ತು ಅವುಗಳನ್ನು ನಿರ್ವಹಿಸುವಲ್ಲಿ `ತಾರ-ತಮ್ಯ' ಭಾವನೆಯನ್ನು ತೋರಿಸುವುದಿಲ್ಲ. ಹೆಣ್ಣು ಪರಾಧೀನ ಅವಸ್ಥೆಗೊಳಗಾಗುವುದನ್ನು ಇಸ್ಲಾಮ್ ಇಷ್ಟಪಡುವುದಿಲ್ಲ. ಅದಕ್ಕಾಗಿ ಅದು ಸ್ತ್ರೀಗೂ ಆಸ್ತಿಯ ಹಕ್ಕಿನ ಸೌಲಭ್ಯ ಕಲ್ಪಿಸಿದೆ.
ಅವಳ ತಾಯಿ-ತಂದೆ, ಆಪ್ತ ಬಂಧುಗಳು ಗಳಿಸಿದ ಸಂಪತ್ತಿನಲ್ಲಿ ಪುರುಷರಿಗೆ ಇರುವಂತೆ ಸ್ತ್ರೀಗೂ ಪಾಲಿರುವುದೆಂದು ಅದು ಸ್ಪಷ್ಟವಾಗಿ ಹೇಳಿದೆ. ಆದರೆ ನಾವೇಕೆ? ಅವಳ ಈ ಪಾಲನ್ನು ಬಹುತೇಕ ಜನ ಕೊಡುವುದಿಲ್ಲ? ಅನೇಕ ಕಾರಣಗಳನ್ನು ಹೇಳಿ ಅವಳಿಂದ ಈ ಹಕ್ಕು ಕಸಿದುಕೊಂಡ ಉದಾಹರಣೆಗಳೆ ಅಧಿಕವಾಗಿವೆ. ಸಂಪತ್ತು ಹೆಚ್ಚೊ, ಕಡಿಮೆಯೋ ಅದು ಮಹಿಳೆಗೆ ನ್ಯಾಯೋಚಿತವಾದ ರೀತಿಯಲ್ಲಿ ದಕ್ಕಬೇಕು. ಅದು ಅಲ್ಲಾಹ್ನ ಕಡೆಯಿಂದ ನಿಶ್ಚಿತವಾದುದೆಂದು ಇಸ್ಲಾಮ್ ಹೇಳುತ್ತದೆ. ಮತ್ತು ಕುರಾನ್ ಒತ್ತಿ ಹೇಳುತ್ತವೆ. ಆದರೆ ವಾಸ್ತವದಲ್ಲಿ ಹೆಣ್ಣಿಗೆ ಈ ಪಾಲು ಸರಿಯಾಗಿ ದಕ್ಕುವುದಿಲ್ಲ. ಸ್ತ್ರೀ-ಪುರುಷರ ಮಧ್ಯೆ ಸಂಪತ್ತಿನ ಪಾಲನ್ನು ಸಮಾನತೆಯ ಮಾನದಂಡದಿಂದ ನೋಡಲಾಗುತ್ತಿಲ್ಲ ಅವಳ ಆರ್ಥಿಕ ಸ್ಥಿತಿಯನ್ನು ದುರ್ಬಲಗೊಳಿಸುವ ತಂತ್ರಗಳು ಇಲ್ಲಿ ಕ್ರಿಯಾಶೀಲವಾಗಿರುವಂತಿದೆ.
ಮಹಿಳೆಯ ಮರುವಿವಾಹದ ಅವಕಾಶ ಪುರುಷನು ಹೆಚ್ಚು ಜನ ಹೆಂಡತಿಯರನ್ನು ಹೊಂದಬಹುದು. ಆದರೆ ಅನ್ನ, ಬಟ್ಟೆ, ಆಶ್ರಯ ಹಾಗೂ ಸಹಶಯನದಲ್ಲಿ ಅವನು ಎಲ್ಲರೊಂದಿಗೆ ಭೇದವಿಲ್ಲದಂತೆ ನಡೆದುಕೊಳ್ಳಬೇಕು. ಹಾಗೊಂದು ವೇಳೆ ಸಾಧ್ಯವಾಗದಿದ್ದರೆ ಅವನು ಒಬ್ಬ ಸ್ತ್ರೀಯನ್ನು ವಿವಾಹವಾಗಬೇಕು ಎಂದು ಇಸ್ಲಾಮ್ ಹೇಳುತ್ತದೆ ಆದರೆ ಒಬ್ಬ ಪತಿಯನ್ನು ಮಾತ್ರ ಮಹಿಳೆ ಹೊಂದಿರಬೇಕೆಂದು ಅದು ಕಡ್ಡಾಯಗೊಳಿಸುತ್ತದೆ. ಅವಳ ಪ್ರಕೃತಿಯನ್ನು ಅನುಲಕ್ಷಿಸಿ ವಿಧಿಸಿದ ನಿಯಮವಿದು. ಪುರುಷನಂತೆ ಸ್ತ್ರೀಗೂ ಮರುವಿವಾಹದ ಅವಕಾಶವನ್ನು ಇಸ್ಲಾಮ್ ಕಲ್ಪಿಸಿ ಕೊಟ್ಟಿದೆ. ಆಕೆ ವಿಧವೆಯಾದರೆ ಅಥವಾ ಪತಿಯಿಂದ ವಿಚ್ಛೇದಿತಳಾಗಿದ್ದರೆ, ಗಂಡನಿಂದ ಮೋಸಕ್ಕೊಳಗಾದರೆ ಅವಳು ಮರುವಿವಾಹ ಮಾಡಿಕೊಳ್ಳಬಹುದು. ಸಮಾಜ ಕೂಡಾ ಈ ದಿಸೆಯಲ್ಲಿ ಕ್ರಿಯಾಶೀಲವಾಗಬೇಕೆಂದು ಇಸ್ಲಾಮ್ ಆದೇಶಿಸಿದೆ.
ಕೆಲವು ಕಡೆಗೆ ಪುರುಷಶಾಹಿ ಸಮಾಜ ಅವಳನ್ನು ಈ ಹಕ್ಕಿನಿಂದ ವಂಚಿಸಿ ಕತ್ತಲಲ್ಲಿ ಕೂಡಿ ಹಾಕುವ ತನ್ನ ದಬ್ಬಾಳಿಕೆಯ ಪ್ರವೃತಿಯಲ್ಲಿ ಗೆಲುವು ಸಾಧಿಸುತ್ತದೆ. ತನ್ನ ಹಕ್ಕು-ಬಾಧ್ಯತೆಗಳ ಬಗ್ಗೆ ಅವಜ್ಞೆಯಿಂದ ಇರುವ ವಿಧವೆಯರು, ಗಂಡನಿಂದ ದೂರವಾದವರು ತಮ್ಮ ಆಸೆ-ಆಕಾಂಕ್ಷೆಗಳನ್ನು ಒಡಲ ತಾಪದಲ್ಲೇ ಕರಗಿಸಿಕೊಂಡು ಬಿಡುತ್ತಾರೆ. ಅಂಥವರಿಗೆ ತ್ಯಾಗದ ಪಟ್ಟ ಸುಲಭವಾಗಿ ದಕ್ಕುವುದಾದಲ್ಲಿ ಅದು ಶೋಷಣೆಯ ಪ್ರತೀಕವೆಂಬುದು ವಾಸ್ತವ.
ಇಂದಿಗೂ ನಾನು ಮೇಲು ನೀನು ಕೀಳೆಂಬ ತಾರತಮ್ಯ ನಮ್ಮ ಪುರುಷರಲ್ಲಿ ಅಡಗಿದೆ. ಅಲ್ಲದೆ ಸಮಾಜದ ಮಹಿಳೆಯ ಮರುವಿವಾಹಕ್ಕೆ ಬೆಲೆ ಕೊಡದೆ ಕೆಟ್ಟ ದೃಷ್ಠಿಯಿಂದ ನೋಡುವ ಪರಿ ನಿರ್ಮಾಣ ಮಾಡಿದೆ. ಈ ರೀತಿ ಅವಳು ಮಾಡಿದರೆ ಅದೇನೊ ಯಾರು ಮಾಡದ ತಪ್ಪು ಮಾಡಿದಳೇನೊ ಎನ್ನುವ ಹಾಗೆ ಅವಳನ್ನು ನೋಡಲಾಗುತ್ತದೆ. ಸಮಾಜದಲ್ಲಿಯ ಅನೇಕ ಜನರ ಪಾಪದ ಕಣ್ಣಿಗೆ ಗುರಿಯಾಗಿ ಅವಳ ಬದುಕು ಹೀನಾಯ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಅನೇಕ ಒತ್ತಡಗಳ ಮದ್ಯೆ ಮಹಿಳೆ ತನಗೆ ಆಗುತ್ತಿರುವ ನೋವುಗಳ ಬಗ್ಗೆ ಯಾರಿಗೂ ಹೇಳದೆ ಸಾಗುತ್ತಿರುವಳು. ಕೆಲವೊಮ್ಮೆ ವ್ಯೆಶ್ಯಾವಾಟಿಕೆಯಲ್ಲಿ ಅನಿವಾರ್ಯವಾಗಿ ತೊಡಗುವಳು.
ಮಹಿಳೆಗೆ ಕಾನೂನು ಬದ್ದವಾಗಿ ಸಿಗಬೇಕಾದ ಹಕ್ಕುಗಳು ಸಿಕ್ಕರೆ ಅವಳು ತಾನಾಗಿಯೆ ಸಬಲೀಕರಣ ಹೊಂದಿ ಈ ಸಮಾಜಕ್ಕೆ ಮಾದರಿಯಾಗುತ್ತಾಳೆ ಆದರೆ ಅವಳ ಆಸೆ ಆಕಾಂಕ್ಷೆಗಳನ್ನು ಆಲಿಸುವ ಸೂಕ್ತ ಕಿವಿಗಳು ಎಲ್ಲಿಯು ಕಾಣುತ್ತಿಲ್ಲ ಬರಿ ಅವಳನ್ನು ಕೆಟ್ಟ ದೃಷ್ಠಿಯಿಂದ ಕಾಣುವ ಗೊಡ್ಡು ಗಂಡು ಸಮಾಜ ಕಂಡು ಬರುತ್ತಿದೆ. ಇತ್ತಿಚಿಗೆ ಮಹಿಳೆ, ಮಕ್ಕಳು ವಯಸ್ಸಾದವರು ಎನ್ನುವ ಭೇಧಬಾವವಿಲ್ಲದೆ ಅತ್ಯಾಚಾರಗಳು ನಡೆಯುತ್ತಿದ್ದು ಸಮಾಜದ ಜನರು ಎತ್ತ ಸಾಗುತ್ತಿರುವರು ತಿಳಿಯದಾಗಿದೆ. ನಮ್ಮ ಮಹಿಳೆ ಪ್ರತಿಕ್ಷಣ ಸಾವು ಬದುಕಿನ ಮದ್ಯೆ ಹೋರಾಡುವ ಸದಾ ಭಯದ ವಾತವರಣದಲ್ಲಿ ಇರುವ ಸ್ಥಿತಿಗತಿ ಎದುರಾಗಿದೆ. ದಿನಬೆಳಗಾದರೆ ಸಾಕು ಪ್ರತಯೊಂದು ಪತ್ರಿಕೆ ಟಿವಿ ಮಹಿಳೆಯ ಅನ್ಯಾಯವಾಯಿತು, ಅತ್ಯಾಚಾರವಾಯಿತು ಎಂದು ಬರೆಯುತ್ತಲೆ ಇರುತ್ತವೆ. ನಾವು ಓದಿ ಸುಮ್ಮನಿರುತ್ತಲೆ ಇದ್ದೆವೆ.
ಮಹಿಳೆಯರ ಸಬಲೀಕರಣ ಬರಿ ನಾವು ಮಾತನಾಡಿದರೆ ಆಗದು ಕೃತಿಯಲ್ಲಿ ಬಂದರೆ ಮಾತ್ರ ಸಾದ್ಯವಾಗುವುದು. ಅವಳಿಗೆ ನೈಜವಾಗಿ ಎಷ್ಟು ಜನ ಆಸ್ತಿಯಲ್ಲಿ ಪಾಲು ಕೊಟ್ಟಿದ್ದಾರೆ ಎಂದು ಒಂದು ಸೂಕ್ಷ್ಮಿ ಕಣ್ಣು ಹಾಯಿಸಿದರೆ ಸಾಕು ನಮಗೆ ಫಲಿತಾಂಶ ಶುನ್ಯವಾಗಿ ಕಾಣುತ್ತದೆ. ನಮ್ಮ ಮಹಿಳೆಗೆ ಸಿಗುವ ಬಹುತೇಕ ಹಕ್ಕುಗಳು ಅವಳಿಗೆ ಸಿಗುವುದಿಲ್ಲ ಏಕೆಂದರೆ ಆಕೆ ಈ ಹೋರಾಟ ಚೀರಾಟದ ಗೋಜಿಗೆ ಹೋಗುವುದಿಲ್ಲ. ಅದಕ್ಕಾಗಿ ಇಂದು ಮಹಿಳೆ ಇನ್ನು ತುಂಬಾ ಜಾಗೃತಳಾಗಬೇಕಾದ ಅಗತ್ಯವಿದೆ. ತನ್ನ ಹಕ್ಕುಗಳನ್ನು ಪಡೆಯಲು ಅವಕಾಶಗಳನ್ನು ಸದೂಪಯೋಗ ಪಡೆಸಿಕೊಳ್ಳಲು ತಾನೊಂದು ಹೆಜ್ಜೆ ಮುಂದೆ ಬರಬೇಕಾಗಿದೆ. ಹಲವಾರು ಮಹಿಳೆಯರು ತುಂಬಾ ಮುಂದುವರೆದಿದ್ದಾರೆ ಎನ್ನುವ ಹೊತ್ತಿಗೆ ಅಷ್ಟೆ ಹಿಂದಿರುವಳು ಎನ್ನುವ ಲೆಕ್ಕಾಚಾರ ಮರೆಯುವಂತಿಲ್ಲ, ಇಷ್ಟು ಸಬಲೇ ಆಗಿದ್ದರು ಇನ್ನು ನಮ್ಮ ರಾಜ್ಯದಲ್ಲಿ ಪ್ರಬಲ ಆಡಳಿತ ರಾಜಕೀಯ ವ್ಯವಸ್ಥೆಯಲ್ಲಿ ಬಂದಿಲ್ಲ ಮಾನ್ಯ ಮಹಿಳೆಯೆ ನೀನಿಲ್ಲದೆ ಈ ನಾಡಿ ನುಡಿ ಎಲ್ಲವು ಶೂನ್ಯ ಅದಕ್ಕಾಗಿ ನಿನ್ನ ಬದಲಾವಣೆಯೆ ದೇಶದ ಪ್ರಗತಿ ನೀನು ಉತ್ತಮವಾಗಿ ಬೆಳೆದು ನಿಂತರೆ ಮಾತ್ರ ಈ ನೆಲಕ್ಕೆ ಜಲಕ್ಕೆ ಜನಕ್ಕೆ ಉತ್ತಮ ಹೆಸರು.
ಇನ್ನು ಮಹಿಳೆಯನ್ನು ಸಬಲೀಕರಣಗೊಳಿಸುವ ಕೆಲಸ ನಮ್ಮ ಮನೆಯಿಂದಲೆ ಆಗಬೇಕು. ನಮ್ಮಲ್ಲಿ ಹೆಣ್ಣು ಹುಟ್ಟಿದರೆ ಇರುವ ತಾತ್ಸಾರ ಮನೊಭಾವ ಬಿಟ್ಟು ಹೆಣ್ಣು ಗಂಡು ಸಮಾನ ದೃಷ್ಠಿಯಿಂದ ಕಾಣಬೇಕು. ಪ್ರಕೃತಿ ಕೊಟ್ಟ ವರ ಎಂದು ಸಮಾನತೆ ಕಾಣಬೇಕು. ನಮ್ಮ ನಮ್ಮ ಮನೆಯ ಮಹಿಳೆ ಜಾಗೃತಿಗೊಳಿಸುವ ಅವಕಾಶ ಕಲ್ಪಿಸುವ ಕೆಲಸವಾದರೆ ಖಂಡಿತ ಬದಲಾವಣೆ ಸಾದ್ಯವಾಗುತ್ತದೆ. ಬನ್ನಿ ಹಾಗಾದರೆ ಬದಲಾಗೋಣಾ. ಇಂದಿನ ಮುಂದುವರೆದ ಯುಗದಲ್ಲಿ ನಾವು ತಾಂತ್ರಿಕವಾಗ ಎಷ್ಟೆ ಮುಂದುವರೆದರು. ನಮ್ಮ ಸಂಬಂಧಗಳು ಕೆಟ್ಟು ಹೋಗುತ್ತಿವೆಯೆ? ನಾವು ನಮ್ಮ ಬಂಧು ಬಳಗವನ್ನು ಬಿಟ್ಟು ಕೆಟ್ಟ ಹಾದಿ ಹಿಡಿಯುತ್ತಿದ್ದೇವೆಯೆ? ಇಲ್ಲಿ ನಮ್ಮ ವಿಚಾರಗಳು ನಮ್ಮ ಧರ್ಮಕ್ಕೆ ಬದ್ದವಾಗುವಲ್ಲಿ ಹಿಂದೆ ಬೀಳುತ್ತಿವೆಯೆ? ತಿಳಿಯುತ್ತಿಲ್ಲ ಇತ್ತಿಚಿಗಿನ ಕೆಲವು ಪ್ರಕರಣಗಳನ್ನು ನೋಡಿದರೆ ಪತಿ-ಪತ್ನಿ,ತಂದೆ-ಮಗ,ಮಗ-ಮಗಳು,ಅಣ್ಣ-ತಂಗಿ, ಈ ಸಂಬಂದಗಳು ಈಗ ವಿಚಿತ್ರ ರೀತಿಯಲ್ಲಿ ಬದಲಾಗುತ್ತಿವೆ .
ಯಾರು ಯಾರನ್ನು ನಂಬಬೇಕು ಎನ್ನುವಂತಿಲ್ಲ ಎಲ್ಲವು ಸ್ವಾರ್ಥ ಬದುಕಿನ ಚಿತ್ರಣವಾಗಿದೆ ಒಬ್ಬರಿಗೆ ಇನ್ನೊಬ್ಬರನ್ನು ಕಂಡರೆ ಆಗುತ್ತಿಲ್ಲ. ಇಂತಹ ಹಲವು ಸಂಬಂದಗಳಲ್ಲಿ ಗಂಡ ಹೆಂಡತಿಯ ಸಂಬಂದಗಳ ಬಗ್ಗೆ ನಮ್ಮ ಕುರಾನ್ ಏನು ಹೇಳುತ್ತದೆ, ಧರ್ಮ ಏನು ಪ್ರತಿಪಾದಿಸುತ್ತದೆ, ಎಂದು ಅಗೆದು ನೋಡಿದಾಗ ಗಂಡನೊಂದಿಗೆ ಬಾಳು ನಡೆಸಲಾಗದಂತಹ ಪ್ರಸಂಗ ಎದುರಾದರೆ ಪತ್ನಿಯು ಅವನಿಂದ ಬಿಡುಗಡೆ ಪಡೆದುಕೊಳ್ಳುವುದಕ್ಕೆ `ಖುಲಾ' ಎನ್ನುವರು. ಇದು ಸ್ತ್ರೀಯ ಹಕ್ಕಾಗಿದೆ. ಆಕೆ ತನ್ನ ಪತಿಗೇನಾದರೂ ಪರಿಹಾರ ಕೊಟ್ಟು ಅವನಿಂದ ತಲಾಕ್ ಪಡೆದುಕೊಳ್ಳುವ ಅವಕಾಶವಿದೆ. ತಲಾಕ್ ಹೇಗೋ ಖುಲಾ ಕೂಡ ಕೊನೆಯ ಅಸ್ತ್ರವಾಗಿದೆ ಆದರೆ ಅದನ್ನು ಒಂದು ವಿನೋದದ ಆಟವನ್ನಾಗಿ ಪರಿವರ್ತಿಸುವಂತಿಲ್ಲ. ಅದು ಅವಳ ಭೋಗಾಸಕ್ತಿಯ ಕೆಟ್ಟ ಪರಂಪರೆಯ ಉದ್ದೇಶ ಹೊಂದಿರಬಾರದು ಎನ್ನುತ್ತದೆ ನಮ್ಮ ಪವಿತ್ರ ಕುರಾನ್.
ಕುರಾನ್ದಲ್ಲಿ ಸ್ವತ: ಅಲ್ಲಾಹನು ಹೇಳಿರುವಂತೆ ಹಾಗೂ ಯಾರು ರುಚಿ ನೋಡುವ ಸಂಬೋಗದ ವಿಷಯ ಲಂಪಟ ಪುರುಷ ಮತ್ತು ಸ್ತ್ರೀಯರನ್ನು ಮೆಚ್ಚುವುದಿಲ್ಲ ಎನ್ನುತ್ತದೆ. ಖುಲಾ ಪಡೆಯಬೇಕಾದ ಸ್ತ್ರೀ ಆರ್ಥಿಕ ಹಾನಿಯನ್ನು ಅನುಭವಿಸಬೇಕಾಗುತ್ತದೆ. ಪತಿಯಿಂದ ಪಡೆದ ಎಲ್ಲ ವಸ್ತುಗಳನ್ನು ಅಥವಾ ಅವುಗಳ ಒಂದು ಪಾಲನ್ನು ಹಿಂತಿರುಗಿಸಬೇಕಾಗುತ್ತದೆ. ಗಂಡ ಆಕೆಗೆ ಆಪ್ರಿಯನಾಗಿದ್ದಾನೆ. ಅವನ ಜೊತೆಗೆ ಜೀವಿಸುವುದು ಆಕೆಗೆ ಇಷ್ಟವಿಲ್ಲ. ಅವನ ಹಿಂಸಾತ್ಮಕ ಕ್ರಿಯೆಗಳನ್ನು ತನ್ನಿಂದ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಋಜುವಾದರೆ ಖುಲಾದ ಬೇಡಿಕೆ ಸಿಂಧುವಾಗುತ್ತದೆ. ಅದನ್ನು ತಿರಸ್ಕರಿಸುವುದು ಅಕ್ರಮವೆನಿಸುತ್ತದೆ..
ಗಂಡಿನ ದಬ್ಬಾಳಿಕೆ ಹಾಗೂ ಆಕ್ರಮಗಳಿಂದ ವಿಮೋಚನೆ ಪಡೆಯಲು ತನಗೊಂದು `ಖುಲಾ' ಎನ್ನುವ ಹಕ್ಕಿದೆ ಎಂಬ ಪ್ರಜ್ಞೆ. ಮುಸ್ಲಿಮ್ ಮಹಿಳೆ ಮತ್ತೆ ಮತ್ತೆ ಅರೆತುಕೊಳ್ಳಬೇಕಿದೆ. ಅದನ್ನು ಸದ್ಬಳಕೆಯಾಗಬೇಕಿದೆ. ನಮ್ಮ ಹಳ್ಳಿಯ ಎಷ್ಟೊ ಪಹಿಳೆಯರು ಈ ಹಕ್ಕಿನ ಬಗ್ಗೆ ಅದರ ಬಳಕೆಯ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕಾದ ಅಗತ್ಯವಿದೆ.
ಅದರಂತೆ ಸ್ತ್ರೀಗೆ ಖುಲಾ ನೀಡುವುದು ಅಥವಾ ನೀಡದಿರುವುದು ತಮ್ಮ ಇಚ್ಛೆಗೆ ಸಂಬಂಧಿಸಿದುದು ಎನ್ನುವ ಪುರುಷಾಧಿಕಾರ ಸ್ತ್ರೀಯನ್ನು ಅವಳ ಹಕ್ಕಿನಿಂದ ವಂಚಿಸುತ್ತಿದೆ. ವಾಸ್ತವವಾಗಿ ಆಕೆಯ ಗಂಡನಾದವನು ನಪುಂಸಕ, ಕ್ಷಯ, ಕುಷ್ಠ ಪೀಡಿತ, ಚಿತ್ರಭ್ರಮಣ, ಲೈಂಗಿಕ ರೋಗಗಳಿಗೆ ಒಳಗಾದವನು, ಅಂಥ ಪತಿಯಿಂದ ಅವಳನ್ನು ಬೇರ್ಪಡಿಸುವ ಈ `ಖುಲಾ' ವಿಧಿ ತನ್ನನ್ನು ಅಪಮಾನಿಸುವ ಸ್ತ್ರೀಯ ಹಕ್ಕಾಗಿದೆಯಂದು ಗಂಡ ಭಾವಿಸುತ್ತಾನೆ. ಪತಿಯ ದೋಷಗಳನ್ನು ಅಮಾನ್ಯ ಮಾಡಿ ಅವನೊಂದಿಗೆ ಆಕೆ ಜೀವಿಸಬೇಕೆನ್ನುವ ಪುರುಷಪ್ರಧಾನ ವ್ಯವಸ್ಥೆ ಧರ್ಮದ ಸತ್ಯಕ್ಕೆ ದೂರವಾದ ಮಾತು ಅದಕ್ಕಾಗಿ ಮಹಿಳೆ ಎತ್ತೆಚ್ಚುಕೊಳ್ಳಬೇಕಿದೆ.
ಈ ಹಕ್ಕಿನ ಬಗ್ಗೆ ಬರಿ ಕುರಾನ್ ಒಂದೆ ಅಲ್ಲಾ ಎಲ್ಲ ಧರ್ಮ ಗ್ರಂಥಗಳು ಸಾಮಾನ್ಯವಾಗಿ ಸ್ತ್ರೀಯ ಹಕ್ಕುಗಳನ್ನು ಎತ್ತಿ ಹಿಡಿದಿದ್ದು ಅವಳ ಸಬಲೀಕರಣ ಅದರ ಮೂಲ ಉದ್ದೇಶವಾಗಿದೆ ಆದರೆ ಈ ಪುರುಷ ಪ್ರಧಾನ ಸಮಾಜ ಮಾತ್ರ ಇನ್ನು ಈ ಧರ್ಮದ ಮರ್ಮಗಳನ್ನು ಅರೆತುಕೊಳ್ಳದೆ ಅದರ ಬಗೆಯನ್ನು ಅರೆಯದೆ ಮಹಿಳಾ ಹಕ್ಕುಗಳ ಉಲ್ಲಂಘನೆ ಮಾಡುತ್ತಿದ್ದಾರೆ. ತಾವು ಪುರುಷರು ಇನ್ನು ಸಬ್ಬಾಳಿಕೆಯೆ ಮಾಡಬಹುದು ಎಂದು ತಿಳಿದಿದ್ದಾರೆ. ಅವರ ಈ ದಬ್ಬಾಳಿಕೆ ಮಾನವ ಜೀವನಕ್ಕೆ ಕುತ್ತಾಗಿ ಪರಿಣಮಿಸಿದೆ. ಮಹಿಳೇಗೆ ತಿನಲಾರದ ತುತ್ತಾಗಿ ಪರಿಣಮಿಸಿದೆ.
ಇನ್ನು ಕೆಲವು ಧರ್ಮಗಳಲ್ಲಿ ಬರಿ ಬರವಣಿಗೆ ಹಾಗೂ ದೊಡ್ಡ ದೊಡ್ಡ ಮಾತಿನಲ್ಲಿ ಮಾತ್ರ ಸ್ವಾಂತಂತ್ರ ಕೊಟ್ಟು ನೈಜವಾಗಿ ಅವರನ್ನು ಕೊಳ್ಳೆ ಹೊಡಿಯುವ ಕೆಟ್ಟ ಕೆಲಸಕ್ಕೆ ಕೈ ಹಾಕಿದ್ದಾರೆ. ಅದು ಬೆಳಕಿಗೆ ಬಾರದಂತೆಯು ಮಹಿಳೆಯನ್ನು ಅವಳ ಬದುಕನ್ನು ಬಚ್ಚಿ ಇಟ್ಟಿದ್ದಾರೆ. ಲಂಪಟತನದ ಈ ಪುರುಷನನ್ನು ಅವನ ಅಹಂಕಾರವನ್ನು ಮುರಿದು ಹಾಕುವ ಬೆತ್ತ ಈ ಸಮಾಜದಲ್ಲಿ ಇನ್ನು ಬರಬೇಕಿದೆ ಅಥವಾ ಮಹಿಳೆಯೆ ಎದ್ದು ನಿಲ್ಲಬೇಕಾದ ಅಗತ್ಯವಿದೆ. ಇಲ್ಲವಾದಲ್ಲಿ ಅವಳ ಹಕ್ಕಿಗೆ ಚ್ಯೂತಿ ಬರುವ ಕೆಲಸ ನಮ್ಮ ಪುರುಷ ಪ್ರಧಾನ ಸಮಾಜ ಮಾಡುತ್ತಲೆ ಇರುತ್ತದೆ. ನಮ್ಮ ಈಗಿನ ಸಮಾಜದಲ್ಲಿ ಮತ್ತೆ ವೀರ ಧೀರ ಮಹಿಳೆಯರು ಇಂದಿನ ತಾಂತ್ರಿಕ ಯುಗವನ್ನು ಅರೆತಿರುವರು ಜನ್ಮ ತಾಳಬೇಕಿದೆ. ಈ ದಬ್ಬಾಳಿಕೆ ಮಾಡುವ ಪುರುಷರ ಮಟ್ಟಹಾಕಬೇಕಿದೆ.
ಮೊನ್ನೆ ನಾನು ನನ್ನ ಒಬ್ಬ ಮುಸ್ಲಿಂ ಗೆಳೆಯನ ಮದುವೆಗೆ ಹೋಗಿದ್ದೆ, ಅಲ್ಲಿ ಒಂದು ದೃಷ್ಯ ವಧು ವರನಿಗೆ ಹಾಗೂ ವರ ವಧುವಿಗೆ " ಕಬೂಲ್ " ಇದೆಯಾ ಎಂದು ಕೇಳುವ ದೃಷ್ಯ ಆ ಮಾತಿನ ಅರ್ಥ ಈ ವರ ನನಗೆ ಇಷ್ಟಾ ಆಗಿದ್ದಾನೆ ನಾನು ಅವನನ್ನು ಮನಸಾರೆ ಒಪ್ಪುತ್ತೇನೆ ಎಂದು. ಹುಡುಗ ಹುಡುಗಿ ಈ ಮಾತು ಹೇಳಿದ ನಂತರವೆ ಮುಂದಿನ ಕೆಲಸಗಳನ್ನು ನೆರವೇರಿಸಲಾಗುತ್ತದೆ. ಇದನ್ನು ನೋಡಿದಮೇಲೆ ತಿಳಿಯಿತು ಮದುವೆ ಮಾಡಿಕೊಳ್ಳುವವರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದು ಆದರೂ ಇನ್ನು ಅನೇಕ ರೀತಿಯಲ್ಲಿ ಮಹಿಳೆಯನ್ನು ನಮ್ಮ ಧರ್ಮದ ಪ್ರಕಾರ ನಡೆಸಿಕೊಳ್ಳಲು ಈ ಗಂಡು ಸಮಾಜ ಹಿಂದೆಯಿದೆ ಅನಿಸಿದ್ದು ಕುರಾನ್ನ ಕೆಲವು ಪುಟ ತಿರುವಿವಾದಾಗ ಅರ್ಥವಾಗುತ್ತದೆ.
ಭೂಮಿಯ ಮೇಲೆ ಜನಿಸಿದ ಎಲ್ಲರು ಒಂದೆ ಇಲ್ಲಿ ಹೆಣ್ಣು ಗಂಡೆಂಬ ಬೇಧವಿಲ್ಲ ಅವರಿಗೂ ಇವರಿಗೂ ಸಮಾನ ಅವಕಾಶಗಳಿವೆ. ಮದುವೆ ಇಬ್ಬರಿಗೂ ಸಮಾನ ಹಕ್ಕುಗಳನ್ನು ನೀಡಿದೆ. ಸ್ತ್ರೀ-ಪುರುಷರ ವೈವಾಹಿಕ ಸಂಬಂಧವು ವಾಸ್ತವದಲ್ಲಿ ಮಾನವೀಯತೆಯ, ಉತ್ತಮ ಸಮಾನತೆಯ, ಬುನಾದಿಯೇ ಆಗಿದೆ. ಇಸ್ಲಾಮ್ ಧರ್ಮ ಕೂಡ ಅದನ್ನು ಮಾನ್ಯ ಮಾಡುತ್ತದೆ. ಎಲ್ಲವು ಸಮಾನ ಎಂದು ಹೇಳುತ್ತದೆ. ಪ್ರೀತಿ-ಕರುಣೆಯ ಆಧಾರವಾಗಿರುವ ಈ ವಿವಾಹ ಸಂಬಂಧ ಗಂಡ ಹೆಂಡತಿಯು ಸದಾ ಕೂಡಿ ಬಾಳುವುದನ್ನು ಇಚ್ಛಿಸುತ್ತದೆ. ಅವರಲ್ಲಿ ಭೇದ ಭಾವ ಎಂಬ ಪ್ರಶ್ನೆಯಿಲ್ಲ. ಇಬ್ಬರೂ ಪರಸ್ಪರ ಪೂರಕ. ಹೆಣ್ಣು ಗಂಡಿಗಾಗಿ, ಗಂಡು ಹೆಣ್ಣಿಗಾಗಿ ಎಂಬ ಮಂತ್ರ ತಿಳಿಸುತ್ತದೆ.
ಹೆಣ್ಣು-ಗಂಡಿನ ದಾಂಪತ್ಯ ಸಂಬಂಧದ ನವಿರುಗಳನ್ನು ಅಂತರ್ಗಗೊಳಿಸಿಕೊಂಡಿರುವ ಈ ಮಾತುಗಳು ಗಮನಾರ್ಹವೆನಿಸಿವೆ. ಸ್ತ್ರೀ-ಪುರುಷ ಅಪೂರ್ಣರೆ ಆದರೆ ಪರಿಪೂರ್ಣತೆಯ ಹಂಬಲ ಅವರಿಗಿರುವುದು ಸಹಜ. ಅದರ ಸಾಧ್ಯತೆಗಾಗಿ ಇಬ್ಬರೂ ಎರಕಗೊಳ್ಳುವುದು ಕುರ್ಆನ್ದ ದೃಷ್ಟಿಯಿಂದ ತೀರ ಅಗತ್ಯವೆನಿಸಿದೆ. ``ಪುರುಷ ಜೀವನದ ಅನೇಕ ನಿರ್ವಾತಗಳನ್ನು ಕೇವಲ ಸ್ತ್ರೀಯ ಸುಂದರ ಕೈಗಳೇ ತುಂಬಬಲ್ಲವು. ಆಕೆ ಅವನ ನೈಸರ್ಗಿಕ ಬೇಡಿಕೆಗಳ ಮತ್ತು ಸಹಜ ಪ್ರಶ್ನೆಗಳ ಉತ್ತರವಾಗಿದ್ದಾಳೆ. ಅವನ ಪ್ರೇಮ ಗೀತೆಯ ವೀಣೇಯಾಗಿದ್ದಾಳೆ. ಅದೇ ರೀತಿ ಪುರುಷನಿಲ್ಲದೆ ಸ್ತ್ರೀತನದ ಊರು ಬರಿದಾಗಿರುತ್ತದೆ. ಆತ ಅವಳ ಭಾವನಾಲೋಕದ ಮೆರುಗು ಮತ್ತು ಆಕೆಯ ವ್ಯಾಕುಲತೆಯ ಶಮನವಾಗಿದ್ದಾನೆ.'' ಈ ಮಾತು ಪತಿ-ಪತ್ನಿಯರ ಅನ್ಯೋನ್ಯತೆಯನ್ನು ದೃಢಪಡಿಸುತ್ತದೆ.
ಗಂಡು-ಹೆಣ್ಣಿನ ವೈವಾಹಿಕ ಸಂಬಂಧ ವೈಶಾಲ್ಯದ ಆಯಾಮದಲ್ಲಿ ಅರಳಿಕೊಂಡಿದ್ದರೂ ಅವರಿಬ್ಬರ ಅಭಿರುಚಿ, ಅಭಿಪ್ರಾಯ, ದೃಷ್ಟಿಕೋನಗಳಲ್ಲಿ ವೈರುಧ್ಯ ಇರುವುದು ಸಾಧ್ಯ. ಇಂಥ ವೇಳೆಯಲ್ಲಿ ವಿರಸವು ದಾಂಪತ್ಯದಲ್ಲಿ ಸಹಜವೆಂಬಂತೆ ಕಾಣಿಸಿಕೊಳ್ಳುವುದು. ಅದಕ್ಕಾಗಿ ಪರಸ್ಪರರಲ್ಲಿ ಸಹನೆ, ಔದಾರ್ಯ, ಕ್ಷಮಾಶೀಲತೆ, ಸ್ನೇಹ ಸದ್ಭಾವನೆಗಳು ಇರುವುದು ಅಗತ್ಯವೆನ್ನುತ್ತದೆ ಇಸ್ಲಾಮ್, ಪತ್ನಿಯನ್ನು ಕೇವಲ ಭೋಗದ ವಸ್ತುವೆಂದು ಪರಿಗಣಿಸದೆ ಆಕೆಯ ಬಯಕೆ, ಭಾವನೆಗಳನ್ನು ಪತಿ ಗೌರವಿಸಿಬೇಕೆನ್ನುವ ಆಶಯ ಹೊಂದಿದೆ.
`ನೀನು ಉಂಡರೆ ಆಕೆಗೂ ಉಣಿಸು, ನೀನು ತೊಟ್ಟರೆ ಆಕೆಗೂ ತೊಡಿಸು'' ``ಅಲ್ಲಾಹನ ಅಮಾನತ್ ಆಗಿ ಪುರುಷರಿಗೆ ಸ್ತ್ರೀಯರನ್ನೇ ಒಪ್ಪಿಸಲಾಗಿದೆ.'' ``ಪತ್ನಿಯನ್ನು ತೆಗಳಬೇಡಿ'' ``ಪತ್ನಿಯರಿಗೆ ಹೊಡೆಯುವವರು ಸಭ್ಯರಲ್ಲ'' ಇಂಥವೇ ಸ್ತ್ರೀಪರವಾದ ಕಾಳಜಿಯನ್ನು ಅಭಿವ್ಯಕ್ತಿಸುವ ಮಾತುಗಳನ್ನು ಪ್ರವಾದಿಗಳು ಧಾರಾಳವಾಗಿ ಉಲಿದಿದ್ದಾರೆ.
ಇವತ್ತಿಗೂ ಈ ವಚನಗಳನ್ನು ಆಲಿಸಲಾಗುತ್ತಿದೆ. ಆದರೆ ಹೆಣ್ಣು-ಗಂಡಿನ ವೈವಾಹಿಕ ಸಂಬಂಧವನ್ನು ಛಿದ್ರಗೊಳಿಸುವ ಅವಘಡಗಳು ಸಂಭವಿಸುತ್ತಲೇ ಇವೆ. ನೈಜ ಪ್ರೇಮದ ನಿಕಾಹ್ದ ಒಪ್ಪಂದಗಳನ್ನು ಪತಿಯಾದವನು ಧಿಕ್ಕರಿಸುವ ಕಾರಣದಿಂದ ಪತ್ನಿಯಾದವಳು ಅನುಭವಿಸುವ ನೋವು, ಹಿಂಸೆಗಳು ಒಂದೆರಡಲ್ಲ. ಪತ್ನಿಯಂದರೆ ಪತಿಯ ಸೊತ್ತು. ಅವನ ಹಿತಾಸಕ್ತಿ, ಶ್ರೇಯಸ್ಸಿಗೆ ಆಕೆ ಸ್ಪಂದಿಸಬೇಕು. ತುಸು ವ್ಯತ್ಯಾಸವಾದರೂ ಅವನ ಮರ್ದನಕ್ಕೆ ಒಳಗಾಗಬೇಕು. ತನ್ನ ಮೇಲಾಗುವ ಅನ್ಯಾಯವನ್ನು ಪ್ರತಿಭಟಿಸಿದರೆ ಆಕೆ ಕೆಟ್ಟ ಹೆಂಗಸು. ಧ್ವನಿಯತ್ತಿದರೆ ಬಜಾರಿ, ನಾಲ್ಕು ಗೋಡೆಗಳಿಂದಾಚೆ ಬಂದರೆ ಶೀಲಗೆಟ್ಟವಳು. ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಅವಳನ್ನು ಹತ್ತಿಕ್ಕಲಾಗುತ್ತಿದೆ. ಸಾಮಾನ್ಯ ಕುಟುಂಬಗಳಲ್ಲಿ ಜರುಗುವ ಇಂಥ ಅವಸ್ಥೆಗಳನ್ನು ಧರ್ಮ ಮೌನವಾಗಿಯೆ ನೋಡುತ್ತದೆ.
ಎಲ್ಲವನ್ನು ಅರಿತ ನಮ್ಮ ಪುರುಷ ಸಮಾಜ ಮಾತ್ರ ಕಣ್ಣಿದ್ದು ಕುರುಡನಾಗುತ್ತದೆ. ತನಗೇನು ಗೊತ್ತಿಲ್ಲ ಎನ್ನುವ ರೀತಿಯಲ್ಲಿ ಸಾಗುತ್ತಾನೆ. ಇವತ್ತು ಮಹಿಳೆ ಎಂತಹದ್ದೆ ದೊಡ್ಡ ಸ್ಥಾನದಲ್ಲಿ ಇದ್ದರು ಅವಳ ಬಗ್ಗೆ ಅವಳ ಅವಕಾಶದ ಬಗ್ಗೆ ಅವಳ ಸುರಕ್ಷತೆಯೆ ಬಗ್ಗೆ ಕೊಂಚ ಭಯವೆ ಆವರಿಸಿದೆ. ಅದಕ್ಕೆ ಮೂಲ ಕಾರಣ ಈ ಕಾಮೂಕ ಪುರುಷರ ಪ್ರಾಧಾನ ಸಮಾಜ ನಮ್ಮ ಮಹಿಳೆ ಸುರಕ್ಷಿತಳು ತನ್ನ ಉದ್ಯೂಗದಲ್ಲಿಯು ಇಲ್ಲ ಎನಿಸುತ್ತಿದೆ ಇನ್ನು ಗಂಡಸಿನ ಕೈಕೆಳಗೆ ಕೆಲಸ ಮಾಡುವ ಸ್ಥಿತಿಗತಿಯಂತು ಎಣಿಸಲಾಗದು ಮತ್ತು ಪರಿಗಣಿಸಲಾಗದು.
ಮಾನವ ಎಷ್ಟು ಬೆಳದಿದ್ದಾನೆಯೊ ಅಷ್ಟು ಅವಹೇಳನಕ್ಕೆ ಇಳಿದಿದ್ದಾನೆ. ಧರ್ಮ ಮಹಿಳೆಯನ್ನು ಕಾಪಾಡು ಗೌರವಿಸು ಅವಳನ್ನು ದೇವರನ್ನಾಗಿ ನೋಡು ಹಾಗೆ ಹೀಗೆ ಹೇಳಿದ್ದು ನೋಡಿದರೆ ಮತ್ತು ಈಗ ನಡೆಯುತ್ತಿರುವ ಸ್ಥಿತಿಯನ್ನು ನೋಡಿದರೆ ವಿಚಿತ್ರವೆನಿಸುತ್ತದೆ. ನಮ್ಮ ಅನೇಕ ರೀತಿಯ ಸಾಮಾಜಿಕ ಸಮಸ್ಯೆಗಳನ್ನು ಅರಿಯಲು ಅದರಲ್ಲಿ ಪ್ರಮುಖವಾಗಿ ಕಾಣುವುದು ನಮ್ಮ ಮಹಿಳಾ ದೌರ್ಜನ್ಯ ಅತಿ ಹೀನಾಯ ಸ್ಥಿತಿ ಈಗ ಸದ್ಯಕ್ಕೆ ಎದುರಾಗಿದೆ. ನಮ್ಮ ಸಮಾಜ ಏಕೆ ನಮ್ಮ ಧರ್ಮಗಳ ಮಾಹಿತಿ ಅದರ ನಿಯಮಗಳು ತಿಳಿಯುತ್ತಿಲ್ಲ ಎಂಬುವುದು ಗಮನಿಸಬೇಕಾದ ಸಂಗತಿ. ಮಾನ್ಯ ಪುರುಷ ಸಮಾಜವೆ ದಯವಿಟ್ಟು ನೀವು ಬೆಳೆಯಿರಿ ನಮ್ಮ ಮಹಿಳೆಗೂ ಬೆಳೆಸಿರಿ ಅವಳನ್ನು ಸ್ವತಂತ್ರವಾಗಿ ಬೆಳೆಯಲು ಬಿಡಿ ಏಕೆಂದರೆ ನಿಮ್ಮನ್ನು ಹಡೆದವಳು ನೋಡಿಕೊಂಡವಳು ಮದುವೆ ಮಾಡಿಕೊಂಡವಳು ಮಹಿಳೆ ಮರೆಯಬೇಡಿ.
ತಲಾಕ್ ಒಂದು ಸಮಸ್ಯೆಯೇ?
ಪ್ರವಾದಿ ಮುಹಮ್ಮದ್ ಪೈಗಂಬರರ ಕಾಲದಲ್ಲಿ ಅರಬ್ ದೇಶದಲ್ಲಿ ಗುಲಾಮ ವ್ಯಾಪಾರಕ್ಕೆ ಅನುಮತಿ ಇತ್ತು. ಕುರಾನ್ ಕೂಡಾ ಅನುಮತಿ ನೀಡಿತ್ತು. ಇಂದು ಗುಲಾಮಗಿರಿ ಪದ್ದತಿ ದೊಡ್ಡ ಪಾತಕ. ಧರ್ಮದಲ್ಲಿ ಅನುಮತಿ ಇದೆ ಎಂದು ಮತ್ತೆ ಗುಲಾಮಗಿರಿ ಪದ್ದತಿಯನ್ನು ಆಚರಿಸಲು ಸಾಧ್ಯಾವೇ? ಅಂತಹ ಅನಾಗರಿಕ ಪದ್ದತಿಯನ್ನು ಒಪ್ಪಿಕೊಳ್ಳಲು ಖಂಡಿತಾ ಅಸಾಧ್ಯ. ಮನುಷ್ಯ ಘನತೆ ಎತ್ತಿಹಿಡಿಯುವ ಚಿಂತನೆಗಳು ಮೊಳಕೆಯೊಡೆಯುತ್ತಿದ್ದಂತೆ ಗುಲಾಮಗಿರಿಯಂತಹ ಅಮಾನವೀಯ ಪದ್ದತಿಗಳು ನಾಶವಾದವು. ಹೀಗೆ ಸುಧಾರಣೆಗಳು ಬದಲಾವಣೆಗೆ ಅವಕಾಶ ಕಲ್ಪಿಸುತ್ತವೆ. ಇಸ್ಲಾಮ್ ಧರ್ಮ ಎಂದರೆ ಸುಧಾರಣೆಗೆ ಅವಕಾಶ ಇಲ್ಲದ ಧರ್ಮ ಎಂಬ ಹಣೆಪಟ್ಟಿಯನ್ನು ಪಡೆದುಕೊಂಡಿದೆ. ಇದಕ್ಕೆ ಪೂರಕವಾಗಿ ಮುಸ್ಲಿಮ್ ಧಾರ್ಮಿಕ ಮುಖಂಡರು ಹಾಗೂ ``ಧರ್ಮದ ಗುತ್ತಿಗೆ'' ಪಡೆದುಕೊಂಡ ಮೂಲಭೂತವಾದಿಗಳು ವರ್ತಿಸುತ್ತಿದ್ದಾರೆ.
ಈ ದೇಶದಲ್ಲಿ ಮಹಿಳೆ ಎನ್ನುವಂತಹ ಸುರಕ್ಷತೆ ಸ್ವಾತಂತ್ರ್ಯ ಇರಬೇಕು ಎನ್ನುವುದು ನಮ್ಮ ಅಭಿಪ್ರಾಯ. ಮುಸ್ಲಿಂ ಮಹಿಳೆಯರಿಗೆ 3 ಬಾರೀ ತಲಾಕ್ ಹೇಳಿದರೆ ಬೀದಿಗೆ ಬರುವುದು ಅಮಾನುಷ ಪದ್ದತಿಯಾಗಿದೆ. ಇಲ್ಲಿ ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಇವತ್ತು ಚರ್ಚೆಗೆ ಬಿಟ್ಟಿರೋದು ಅನವಶ್ಯಕ ಈ ದೇಶದ ಪ್ರತಿಯೊಬ್ಬ ಮಹಿಳೆಯ ಸುರಕ್ಷತೆಯ ಹಿನ್ನಲೆಯ ಏಕರೂಪ ನಾಗರೀಕ ಸಂಹಿತೆ ಹಿನ್ನಲೆ ಪದ್ದತಿ ಜಾರಿ ಗೊಳಿಸಿ ತಲಾಖ್ ಪದ್ದತಿ ರದ್ದುಗೊಳಿಸಬೇಕು ಇಲ್ಲಿ ಹಿಂದೂ ಮುಸ್ಲಿಂ ಮತ್ತು ಕ್ರೀಶ್ಚಿಯನ್ ಎಂಬುದು ಬರೋದಿಲ್ಲ ಅವರು ಮಹಿಳೆಯರೇ ಈ ವಾದದ ದುರಂತ ಸ್ಥಿತಿ ಇಂದು ಚರ್ಚಿಸಬೇಕಿದೆ. ಮುಸ್ಲಿಂ ವೈಯಕ್ತಿಕ ಕಾನೂನುಗಳು ಅದೇ ಸಮುದಾಯದ ಮಹಿಳೆಯ ಮೇಲೆ ಏನೆಲ್ಲ ದೌರ್ಜನ್ಯ ಎಸಗುತ್ತಿವೆ ಎಂಬುದಕ್ಕೆ ರಾಜಸ್ಥಾನದ ಜೈಪುರದಿಂದ ವರದಿಯಾಗಿರುವ ಈ ಘಟನೆಯೇ ಸಾಕ್ಷಿಯಾಗಿದ್ದು ಅದರ ಸತ್ಯತತೆಯನ್ನು ಚರ್ಚಿಸುವ ಅತೀವ ಅಗತ್ಯವಿದೆ.
ನಿಖಾ ಹಲಾಲಾ ಎಂಬ ಶರಿಯಾ ಕಾಯ್ದೆಯ ವ್ಯಾಖ್ಯಾನ ಉಪಯೋಗಿಸಿ ಭೂಪನೊಬ್ಬ ತನ್ನ ಹೆಂಡತಿಯನ್ನು ಸ್ನೇಹಿತನ ಜತೆ ಮಲಗಿಸಿದ್ದಾನೆ. ಆ ಮೂಲಕ ತಾನು ಜೂಜಿನಲ್ಲಿ ಸೋತಿದ್ದಕ್ಕೆ ಪರಿಹಾರ ತೆತ್ತಿದ್ದಾನೆ. ಈಗ ಆ ಮಹಿಳೆಯೇ ಸ್ಥಳೀಯ ಪೆÇಲೀಸ್ ಠಾಣೆಯಲ್ಲಿ ಗಂಡ ಮತ್ತು ಆತನ ಸ್ನೇಹಿತನ ವಿರುದ್ಧ ಪ್ರಕರಣ ದಾಖಲಿಸಿರುವುದರಿಂದ ಈ ಕರಾಳ ವಿದ್ಯಮಾನ ಬೆಳಕಿಗೆ ಬಂದಿದೆ. `ನನ್ನ ಪತಿಯೇ ಆತನ ಸ್ನೇಹಿತನಿಂದ ಅತ್ಯಾಚಾರ ಮಾಡಿಸಿದ. ವಾಸ್ತವದಲ್ಲಿ ಇಂತಹ ಘಟನೆಗಳು ನಮ್ಮ ನಡುವಿನ ಮಾನವೀಯತೆಯನ್ನು ಪ್ರಶ್ನೆ ಮಾಡುತ್ತವೆ. ನಿಖಾ ಹಲಾಲಾದ ಪರಿಕಲ್ಪನೆ ಏನೆಂದರೆ, ಮಹಿಳೆಯೊಬ್ಬಳು ಗಂಡನಿಂದ ವಿಚ್ಛೇದನ ಪಡೆದ ಮೇಲೆ ಮತ್ತೆ ಮರಳಿಬರುವುದಾದರೆ ಅದಕ್ಕೂ ಮೊದಲು ಬೇರೊಬ್ಬನನ್ನು ಮದುವೆಯಾಗಿ ದಾಂಪತ್ಯ ಅನುಭವಿಸಬೇಕು. ನಂತರ ಆತ ತಲಾಕ್ ನೀಡಿದರೆ ಇಲ್ಲವೇ ಮೃತನಾದರೆ ಈಕೆ ಮತ್ತೆ ಮೊದಲನೇ ಗಂಡನನ್ನು ವರಿಸಬಹುದು.
ಇದಕ್ಕನುಗುಣವಾಗಿ ಜೈಪುರದ ಪ್ರಕರಣ ಹೀಗೆ ತೆರೆದುಕೊಂಡಿದೆ. ಸಣ್ಣ ಪ್ರಮಾಣದ ಆಸ್ತಿ ವ್ಯವಹಾರ ನೋಡಿಕೊಂಡಿರುವ ಸಂತ್ರಸ್ತೆಯ ಪತಿ, ಆಕೆಯನ್ನು ತನ್ನ ಸ್ನೇಹಿತನೊಂದಿಗೆ ಮಲಗಲು ಒತ್ತಾಯಿಸುತ್ತಾನೆ. ಇದಕ್ಕೆ ಈಕೆ ಒಪ್ಪದಿದ್ದಾಗ ಸಿಟ್ಟಿನಿಂದ ತಲಾಕ್ ಹೇಳುತ್ತಾನೆ. ತಲಾಕ್ ಹೇಳಿದ ನಂತರವೂ ಮನೆಯಿಂದೇನೂ ಹೊರಹಾಕುವುದಿಲ್ಲ. ಎಂದಿನ ದಾಂಪತ್ಯವೂ ಮುಂದುವರಿಯುತ್ತದೆ. ಅರ್ಥಾತ್, ಆತ ತಲಾಕ್ ಹೇಳಿದ್ದೇ ತನ್ನ ಉದ್ದೇಶ ಈಡೇರಿಕೆಯ `ತಾಂತ್ರಿಕ' ಕಾರಣಕ್ಕಾಗಿ! ಆಗಸ್ಟ್ ತಿಂಗಳಿನಲ್ಲಿ ಅದೊಂದು ದಿನ ಈಕೆಯ ಆರೋಗ್ಯ ಅಷ್ಟೇನೂ ಸರಿಯಿಲ್ಲದಿರುವಾಗಲೇ ಸುತ್ತಾಟಕ್ಕೆ ಕರೆದೊಯ್ಯುತ್ತಾನೆ. ಆರೋಗ್ಯ ಸುಧಾರಣೆಗೆ ಅಂತ ಮಾತ್ರೆಯನ್ನೂ ಕೊಡುತ್ತಾನೆ. `ಸ್ನೇಹಿತನ ಮನೆಗೆ ಕರೆದುಕೊಂಡುಹೋದ ನಂತರ ಇನ್ನಷ್ಟು ಮಾತ್ರೆಗಳನ್ನು ಕೊಟ್ಟ. ಪ್ರಜ್ಞೆ ಬಂದಾಗ ನಾನು ಆತನ ಸ್ನೇಹಿತನ ಜತೆ ನಗ್ನವಾಗಿ ಬಿದ್ದುಕೊಂಡಿದ್ದೆ. ಸಹಾಯಕ್ಕೆ ಕೂಗಿಕೊಂಡಾಗ ಒಳನುಗ್ಗಿ ಬಂದ ಗಂಡ ಸುಮ್ಮನಿರುವಂತೆ ಬೆದರಿಸಿದ' ಈ ಘಟನೆಯು ಕುರಾನ್ ಪಾಲಿಸುವವರ ನೈತಿಕತೆಯನ್ನು ಪ್ರಶ್ನೆಸುತ್ತದೆ.
ಸಮಾಧಾನದ ಸಂಗತಿ ಎಂದರೆ ಮುಸ್ಲಿಂ ಸಮುದಾಯದ ಮಹಿಳೆಯರೇ ತಮ್ಮ ಮೇಲಾಗುತ್ತಿರುವ ದೌರ್ಜನ್ಯಗಳ ವಿರುದ್ಧ ಮಾತನಾಡುತ್ತಿದ್ದಾರೆ. ಬಹುದೊಡ್ಡ ಸಂಖ್ಯೆಯಲ್ಲಿ ತಲಾಕ್ ಪದ್ಧತಿ ವಿರೋಧಿಸುತ್ತಿದ್ದಾರೆ. ಆದರೆ ಮುಸ್ಲಿಂ ಸಮುದಾಯದ ಬಹುಸಂಖ್ಯೆಯ ಪುರುಷರಿಗೆ ಇದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಹಾಗೆಂದೇ ಧಾರ್ಮಿಕ ಸ್ವಾತಂತ್ರ್ಯ, ಮಹಿಳೆಯರ ಸುರಕ್ಷೆ ಎಂಬ ಹೆಸರುಗಳಲ್ಲಿ ಬೀದಿಗಿಳಿಯುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಅಂಥದೊಂದು `ಮುಸ್ಲಿಂ ಮಹಿಳಾ ಜಾಥಾ'ದ, ಸಮಾನ ನಾಗರಿಕ ಸಂಹಿತೆ ವಿರುದ್ಧದ `ಪೌರುಷ' ಪ್ರದರ್ಶನದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು, ಹುಡುಕಿದರೂ ಇಲ್ಲೊಂದು ಮಹಿಳೆ ಇಲ್ಲ ಅದು ಹೇಗೆ ಯಶಸ್ವಿಯಾಯಿತು ಎಂದು ಪ್ರಶ್ನೆ ಎಲ್ಲರನ್ನು ಕಾಡಿತು.
ಉಪಸಂಹಾರ: ತ್ವಲಾಕ್ ಒಂದು ಸಮಸ್ಯೆಯೇ ಎಂಬುವುದನ್ನು ಕುರಾನ್ ಸ್ಪಷ್ಟಪಡಿಸುತ್ತದೆ. ಧರ್ಮ ಮನುಷ್ಯರಿಗಾಗಿಯೆ ಹೊರತು ಧರ್ಮಕ್ಕಾಗಿ ಮನುಷ್ಯರಲ್ಲ, ಅಲ್ಲಿರುವ ನಿಯಮಗಳನ್ನು ಪಾಲಿಸಬೇಕು ಹಾಗಂತ ಮನುಷ್ಯರನ್ನು ಮೃಗಗಳಂತೆ ಕಾಣುವ ನಂಬಿಕೆಗಳನ್ನು ಕೈಬಿಡುವುದರಲ್ಲಿ ತಪ್ಪಿಲ್ಲ. ಸಮಾನ ಪೌರ ಸಂಹಿತೆ ದೇಶದ ಸಾಂಸ್ಕೃತಿಕ ಬಹುತ್ವಕ್ಕೆ ಅಪಾಯವೆಷ್ಟು ಅಚಾರ್ತುವೆಷ್ಟು ಕಾಲವೆ ನಿರ್ಧರಿಸಲಿದೆ. ಪ್ರಸ್ತುತದಲ್ಲಿ ಚರ್ಚೆಯಾಗುತ್ತಿರುವ ಈ ವಿಷಯವನ್ನು ಅವರವರ ಧಾರ್ಮಿಕ ಭಕ್ತಿಗೆ ಬಿಟ್ಟಿದ್ದು. ಒಟ್ಟಿನಲ್ಲಿ ಈ ದೇಶದ ಮಹಿಳೆಯನ್ನು ಮನುಷ್ಯರನ್ನು ಕಾಯುವಂತಾದರೆ ಅದೆ ನಮಗೆ ಬೇಕಾಗಿರುವ ಸತ್ಯ.