ಹಲವು ದಿನಗಳ ಕಾಲ ಬರಿ ವಿರೋಧ ಪಕ್ಷದಲ್ಲಿಯೆ ಖಾಯಂ ಆಗಿ ಕಂಗೋಳಿಸಿ ತಮ್ಮ ತಮ್ಮಲ್ಲಿಯೆ ಆಡಿಕೊಂಡು ಬದುಕಿದ ಆಪ್ತರೆಲ್ಲರು ಬರಿ ಜಂಬದ ಮಾತು ಆಡಿದರೆ ಹೊರತು ಯಾರು ಪಕ್ಷಕ್ಕಾಗಿ ತಮ್ಮ ವಯಕ್ತಿಕ ಕೆಲಸ ಬಿಡಲು ತಯಾರಾಗಿರಲಿಲ್ಲ , ಎಲ್ಲರು ಬರಿ ಭಾಷಣದಲ್ಲಿ ಹೇಳಿದರೆ ಈ ವ್ಯಕ್ತಿ ಕಾರ್ಯದಲ್ಲಿ ಮಾಡಿ ತೋರಿಸಲು ಹೊರಟ , ಬರಿ ಜನಬೆಂಬಲವೆ ನಿರೀಕ್ಷಿಸಿದ, ನಾಡಿನ ಪ್ರತಿಯೊಬ್ಬರ ಜೊತೆಗೆ ಒಡನಾಟ ಮಾಡಿ ಈ ನಾಡಿನ ಹಿರಿಯರ ಮಾತು ಕೇಳಿ, ಹಲವು ಬಾರಿ ಯೋಚಿಸಿ ಈ ನಾಡಿನ ತಜ್ಞರ ಬೇಟಿ ಮಾಡಿ, ಅವರ ಸಲಹೆ ಸೋಚನೆ ಪಡೆದು, ಈ ನಾಡಿನಲ್ಲಿ ಬಿಜೆಪಿ ಅಧಿಕಾರಕ್ಕೆ ತರಲೇಬೇಕು ಎಂಬ ಹಠ ಮಾಡಿ, ತಾನು ನಡೆದಿದ್ದೆ ದಾರಿ ಹೋಡಿದ್ದೆ ಹೊಲ, ಬಿತ್ತಿದ್ದೆ ಬೆಳೆ ಎಂಬ ನಿರ್ಧಾರ ಮಾಡಿ ಹೊರಟರು.
ಉತ್ತರ ಭಾರತದಲ್ಲಿ ಮೊದಲ ಬಾರಿಗೆ ರಾಜ್ಯ ಬಿಜೆಪಿ ಗದ್ದುಗೆ ಹಿಡಿಯಲು ಮೂಲ ಕಾರಣ ಪುರುಷ ಮಾನ್ಯ ಯಡಿಯೂರಪ್ಪ ತಾನು ಅನುಸರಿಸಿದ್ದು ವಾಮ ಮಾರ್ಗವೆ ಆದರೂ ತನ್ನ ಹಠವೆ ಸಾಧಿಸಲೇಬೇಕು ಎನ್ನುವ ಛಲತೊಟ್ಟು ಬಿಡದೆ ಚುನಾವಣೆಯ ಸಮಯದಲ್ಲಿ ಪ್ರತಿ ಗಲ್ಲಿಗಲ್ಲಿಗೆ ತಿರುಗಿ ಕೊಳಚೆ ಸ್ಲಂ ಎನ್ನುದೆ ಪ್ರತಿಯೊಬ್ಬ ವ್ಯಕ್ತಿಯನ್ನು ಶಕ್ತಿಯನ್ನು ಬೇಟಿ ಮಾಡಿ ಅವರೆಲ್ಲರ ಆಶಿರ್ವಾದ ಪಡೆದು ಅಧಿಕಾರ ಕಾಣದೆ ಕೂತಿರುವ ರಾಜ್ಯ ಬಿಜೆಪಿಗೆ ಅಧಿಕಾರದ ದಾರಿ ತೋರಿದವರು. ಮಾನ್ಯ ಯಡಿಯೂರಪ್ಪನವರು ಗದ್ದುಗೆ ಹಿಡಿದು ರಾಜ್ಯಭಾರ ಮಾಡಿ ನಡೆದಿದ್ದು ಒಂದು ಮಾಹಾ ಯುದ್ಧವೆ ಆಯಿತು. ಸತತ ಐದು ವರ್ಷಗಳ ಕಾಲ ಬರಿ ಜಗಳ ಒಬ್ಬರ ಮೇಲೊಬ್ಬರು ಬೈಯುವುದು, ನಾಡಿನ ಪ್ರಜೆಗಳ ಹಕ್ಕು ಕಸಿದುಕೊಳ್ಳುವ ಕೆಲಸ ಪ್ರಾರಂಭ ಮಾಡಿತು. ಅಂತಹ ಸಂಧರ್ಭದಲ್ಲಿಯೂ ಯಡಿಯೂರಪ್ಪ ಹಲವು ದಾರಿ ಅನುಸರಿಸಿ ಮತ್ತೆ ಪಕ್ಷದ ಅಧಿಕಾರ ಉಳಿಸಲು ಹರಸಾಹಸ ಪಟ್ಟರು. ತಮ್ಮ ಅಧಿಕಾರಕ್ಕು ಚ್ಯೂತಿ ಬಂದಾಗ ಅವರನ್ನು ಕೆಳಗಿಳಿಸುವ ಕೆಲಸವಾದಾಗಲೂ ಎದೆಗುಂದದೆ ತಮ್ಮವರನ್ನು ಆ ಸ್ಥಾನಕ್ಕೆ ಆಯ್ಕೆ ಮಾಡಿ ತಮ್ಮ ಪಕ್ಷ ಅಧಿಕಾರ ಅವಧಿ ಪೂರ್ಣಗೊಳಿಸಲಿದೆ ಎಂಬ ಭರವಸೆ ಪದೆ ಪದೆ ನೀಡಿದರು.
ಆದರೆ ಪಕ್ಷ ಕಟ್ಟಿ ಬೆಳಿಸಿ ಸತತ ನಲವತ್ತು ವರ್ಷ ನೀರು ಹಾಕಿದ ಯಡ್ಡಿ ಕೊನೆಗೆ ಹಿರಿಯ ನಾಯಕರ ಕಣ್ಣಿಗೆ ಕಾಲ ಕಸವಾಗಿರುವುದಂತು ಸತ್ಯ ಅಂದು ಎಲ್ಲೊ ಇದ್ದ ಪಕ್ಷ ಮುಖ್ಯ ವಾಹಿನಿಗೆ ತಂದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಆದರೆ ಇವತ್ತು ಅವರು ಇಲ್ಲದೆ ಲೋಕಸಭೆ ಚುನಾವಣೆ ಎದುರಿಸಲು ಬಿಜೆಪಿಗೆ ಭಾರಿ ನೊಗ ಹೊತ್ತ ಭಾರದಂತೆ ಭಾಸವಾಗುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ ತನ್ನ ಗುರುತು ಉಳಿಸಿಕೊಂಡಿದ್ದರೆ ಅದು ಯಡಿಯೂರಪ್ಪನಿಂದ ಮಾತ್ರ ಸಾದ್ಯ ಎಂಬ ಸತ್ಯದ ಅರಿವು ಈಗ ಕೇಂದ್ರದಲ್ಲಿ ಬಿಜೆಪಿ ನಾಯಕರಿಗೆ ಅರಿವಾಗಿದೆ. ಅವರನ್ನು ಮರಳಿ ಕರಿಯುವ ಲೆಕ್ಕಾಚಾರ ಮಾಡುತ್ತಿರುವರು ಈ ರಾಜ್ಯದಲ್ಲಿ ಯಡ್ಡಿ ಮೇಲೆ ಈಗ ಎಲ್ಲರ ಚಿತ್ತ.
ಅಲ್ಲದೆ ಮೋದಿ ಅಂತಹ ಘಟಾನುಘಟಿ ಈಗ ಲೋಕಸಭೆಯ ಚುನಾವಣೆ ಸಿದ್ಧತೆಯಲ್ಲಿದ್ದಾರೆ. ಒಂದು ವೇಳೆ ಈ ಬಾರಿ ಯಡಿಯೂರಪ್ಪ ಮತ್ತೆ ಬಿಜೆಪಿಗೆ ಮರಳಿದರೆ ಕೇಂದ್ರದ ಕಾಂಗ್ರೇಸ್ ಕೂಡ ಹೆದರಬೇಕಾದ ಸಂದರ್ಭ ಯಾವ ಸಂಶಯವಿಲ್ಲದೆ ಬಂದೆ ಬರುತ್ತದೆ. ಈ ಪಕ್ಷಕ್ಕೆ ಯಡಿಯೂರಪ್ಪ ಬರಿ ಒಂದು ಶಕ್ತಿಯಾಗಿ ಅಲ್ಲಾ ರಾಜಕೀಯ ಯುಕ್ತಿಯಾಗಿ ಹೊರಹೊಮ್ಮಿವರು. ಅಂದು ಅವರು ನಮ್ಮ ರಾಜ್ಯದಲ್ಲಿ ಮೂಡಿಸಿದ ಸಂಚಲನ ಎಲ್ಲರಿಗೂ ಗೊತ್ತೆ ಇದೆ. ತಾನು ಭ್ರಷ್ಟಚಾರ ಆರೋಪ ಎದುರಿಸಿ ಜೈಲುವಾಸ ಕಂಡರು ಎದೆಗುಂದದೆ ಮತ್ತೆ ಭಾರಿ ಬಹುಮತದಿಂದ ಆರಿಸಿ ಬಂದ ಇವರು ಲೋಕಸಭೆಯಲ್ಲಿ ಸ್ವತಂತ್ರ ಪಕ್ಷದಿಂದ ಒಂದರೆಡು ಸೀಟು ಪಡೆದು ಕೇಂದ್ರದಲ್ಲಿ ಕಲರವ ಮಾಡಿದರು ಅಚ್ಚರಿ ಪಡಬೇಕಾಗಿಲ್ಲ. ಆದರೆ ಒಂದು ವೇಳೆ ತಾಯಿ ಪಕ್ಷವಾದ ಬಿಜೆಪಿಯನ್ನು ಮರಳಿ ಸೇರಿದರೆ ಮುಂದಿನ ಲೋಕಸಭೆ ಚುನಾವಣೆ ಒಂದು ಹೊಸ ತಿರುವು ಪಡೆಯುವುದರಲ್ಲಿ ಸಂದೇಹವಿಲ್ಲ. ಯಡ್ಡಿ ಮತ್ತೆ ಕೇಂದ್ರದಲ್ಲಿ ಪಟ್ಟು ಹಿಡಿದು ದೊಡ್ಡದೊಂದು ಖಾತೆ ಪಡೆದು ಅಧಿಕಾರ ಹಿಡಿಯುವ ಸಾಧ್ಯತೆಗಳು ಹೆಚ್ಚು .
ಮೋದಿ , ರಾಜನಾಥ ಸಿಂಗ್ , ಧಮೇಂದ್ರ ಪ್ರಧಾನ , ಅಡ್ವಾಣಿ ಇವರೆಲ್ಲರಿಗೂ ಬೇಕಾಗಿರುವ ಯಡ್ಡಿ ಯಾರಿಗೂ ಬೇಡವಾದವರಲ್ಲ ಏಕೆಂದರೆ ಅವರ ಪಕ್ಷ ನಿಷ್ಠೆ ಹಾಗೂ ಅವರ ಕೆಲವು ಜನಪರ ಹೊಸ ಯೋಜನೆಗಳು ಅವರು ಮಾಡಿ 108 ಆರೋಗ್ಯ ಯೋಜನೆ ನಮ್ಮ ರಾಜ್ಯದಲ್ಲಿ ತುಂಬಾ ಯಶಸ್ಸು ಕಂಡಿತು ಹಲವು ರಾಜ್ಯಗಳು ಅದನ್ನು ಎರವಲು ಪಡೆದು ಅನುಷ್ಠಾನಗೊಳಿಸಿದವು. ಇವರೆಲ್ಲರ ಒತ್ತಡಕ್ಕೆ ಮಣಿದು ಯಡ್ಡಿ ಮತ್ತೆ ಬಿಜೆಪಿಗೆ ಅಪ್ಪಿಕೊಂಡರೆ ಲೋಕಸಭೆಯಲ್ಲಿ ಕಾಂಗ್ರೇಸ್ ತುಪ್ಪ ತಿಂದು ತೆಪ್ಪಗೆ ಮಲಗಬೇಕಾದ ಅಗತ್ಯಕ್ರಮ ಬೀಳಬಹುದು ಅನಿಸುತ್ತದೆ. ಏಕೆಂದರೆ ಕೇಂದ್ರದ ಕಾಂಗ್ರೇಸ್ ಸರಕಾರ ಹಲವು ಹಗರಣಗಳ ಸರದಾರ ಆಗಿದ್ದು ಹೌದು ಜೊತೆಗೆ ಕೌಟುಂಬಿಕ ರಾಜಕಾರಣ ಮಾಡುತ್ತಿರುವುದು ಹೌದು ಹಲವು ಹಗರಣಗಳ ಸರಮಾಲೆ ಹೊತ್ತು ನಡೆಯುತ್ತಿರುವ ಯುಪಿಎ ಯಾವ ರೀತಿ ಮುಂದಿನ ಚುನಾವಣೆ ಎದುರಿಸಲಿದೆ ಎಂಬುವುದು ಕಾದು ನೋಡಬೇಕಿದೆ.
ಮೋದಿ ಈಗಾಗಲೇ ರಾಜಕೀಯದಲ್ಲಿ ಮೋಡಿ ಮಾಡಿದ ರಾಜಕಾರಣಿ ಗುಜರಾತಿನಲ್ಲಿ ಹಲವು ಮಾದರಿ ಕೆಲಸಗಳನ್ನು ಮಾಡಿದವರು. ಮಾದರಿ ರಾಜ್ಯವಾಗಿ ನಿರ್ಮಾಣ ಮಾಡಿದ ಶ್ರೇಯಸ್ಸು ಮೋದಿಗೆ ಸಲ್ಲುತ್ತದೆ. ಅವರ ಹಲವು ಕಾರ್ಯಗಳು ದೇಶದ ಜನರಿಗೆ ಸ್ಪಷ್ಟ ಅರಿವಿದೆ. ದೇಶದ ಜನ ಈ ಭ್ರಷ್ಠಚಾರ ಎಸಗಿದ ರಾಜಕಾರಣಿಗಳ ಸ್ಥಿತಿಗತಿಯನ್ನು ಅಧೋಗತಿ ಮಾಡುವರು ಎನ್ನುವ ಲೆಕ್ಕಚಾರ ಮರೆಯುವಂತಿಲ್ಲ. ಒಂದು ವೇಳೆ ಯಡ್ಡಿ ಬಿಜೆಪಿಗೆ ಸಾಥ ನೀಡಿದರೆ ಆರ್ ಎಸ್ ಎಸ್ ಮತ್ತೆ ಬೆಂಬಲ ಹೆಚ್ಚಾಗುವುದು ಏಕೆಂದರೆ ಯಡ್ಡಿ ಹಾಗೂ ಮೋದಿ ಆರ್ ಎಸ್ ಎಸ್ ನ ಗರಡಿ ಮನೆಯಲ್ಲಿ ಬೆಳಿದ ಯವ್ವನದ ಗೆಳೆಯರು. ಈಗ ಮತ್ತೆ ಅಧಿಕಾರ ಗದ್ದುಗೆಯಲ್ಲಿ ಒಂದಾಗುವ ಲೆಕ್ಕಚಾರ ಎದುರಾದಾಗ ಯಾವುದೆ ಮಾರ್ಗವಾದರು ಸರಿ ಕೇಂದ್ರದಲ್ಲಿ ಬಿಜೆಪಿ ತರಲೇಬೇಕು ಎಂದು ಹಠ ಹಿಡಿದರೆ ಮುಂದಿನ ಯೋಚನೆ ಮಾಡುವುಂತಿಲ್ಲಾ , ಕಾಂಗ್ರೇಸ್ ಧೂಳಿಪಟವಾಗುವುದಂತು ಗ್ಯಾರಂಟಿ .
ಇನ್ನು ಕೇಂದ್ರದ ಕಾಂಗ್ರೇಸ್ ತಮ್ಮ ಪ್ರಧಾನಿಯಂದು ರಾಹೂಲ್ ಗಾಂದಿಯ ಹೆಸರು ಸೂಚಿತವಾಗಿದೆ. ಅವರನ್ನು ಮೋದಿಗೆ ಹೋಲಿಸಿದರೆ ಯಾವ ಮೂಲೆಗು ಹತ್ತದ ರಾಹೂಲ್ ಇನ್ನು ಹುಡುಗ ಅನುಭವ ಕಡಿಮೆ ಎನ್ನುವ ಲೆಕ್ಕಾಚಾರ ಹಲವರದು.್ದ ಒಂದು ಕ್ಷೇತ್ರದ ಶಾಸಕರಾಗಿರುವ ಸಧನದ ಸದಸ್ಯ ಅಷ್ಟೆ ಆದರೆ ಮೋದಿ ತನ್ನ ಅಧಿಕಾರ ಗದ್ದುಗೆ ಸತತ ಹ್ಯಾಟ್ರಿಕ್ ಭಾರಿಸಿದವರು. ಅವರ ಮುಂದೆ ರಾಹೂಲ್ ನ ಅನುಭವ ತುಂಬಾ ಕಡಿಮೆಯೆಂದೆ ಬಾವಿಸಲಾಗುತ್ತಿದೆ.
ಇನ್ನು ಕೇಂದ್ರದ ಕಾಂಗ್ರೇಸ್ ದಲಿತರ ಓಟು ಈ ಬಾರಿ ಪಡೆಯುವುದು ತುಂಬಾ ಕಷ.್ಟ ದಲಿತ ವರ್ಗದ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿದೆ. ಏಕೆಂದರೆ ರಾಜ್ಯದಲ್ಲಿ ದಲಿತರ ಮುಖಂಡನೊಬ್ಬ ಈ ಬಾರಿ ಅಧಿಕಾರಕ್ಕೆ ಬರಲಿದ್ದಾನೆ ಎಂಬ ಬಲವಾದ ನಂಬಿಕೆಯಿಂದ ಕರ್ನಾಟಕದ ದಲಿತರು ತಮ್ಮ ಎಲ್ಲಾ ಮತಗಳನ್ನು ಕಾಂಗ್ರೇಸ್ ಗೆ ನೀಡಿದರು. ಆದರೆ ಅದು ಮಾಡಿದ್ದು ಬರಿ ಮೋಸ ಇದಾದ ಸ್ವಲ್ಪ ದಿನದಲ್ಲೆ ಮಾನ್ಯ ಮಲ್ಲಕಾರ್ಜುನ ಖರ್ಗೆಯವರನ್ನು ಕೇಂದ್ರದ ರೈಲ್ವೆ ಮಂತ್ರಿ ಮಾಡಿದ್ದರ ಸ್ಪಷ್ಟ ಉದ್ದೇಶ ಬರಿ ಲೋಕಸಭೆಯಲ್ಲಿ ಮತ ಸೆಳೆಯುವ ಲೆಕ್ಕಚಾರ ಎನ್ನುವುದು ಬುದ್ಧಿವಂತರಾದ ದಲಿತರಿಗೆ ಇದರ ಅರಿವಿದೆ. ಇನ್ನು ಬರಿ ಕೆಲವು ತಿಂಗಳುಗಳು ಮಾತ್ರ ಉಳಿದಿರುವುದರಿಂದ ದಲಿತರಿಗೆ ಸಮಾಧಾನ ಪಡಿಸಲೆಂದು ಈ ಕೆಲಸ ಮಾಡಿದೆ ಅಷ್ಟೆ. ಆದರೆ ನೈಜವಾಗಿ ಅವರನ್ನು ಅವರ ನಂಬಿಕೆಯನ್ನು ಉಳಿಸಿಕೊಳ್ಳುವ ಕೆಲಸ ಕಾಂಗ್ರೇಸ್ ಮಾಡಿಲ್ಲ ಎನ್ನವುದು ಸೂಕ್ತವೆನಿಸುತ್ತದೆ. ಬರಿ ಕಾಟಚಾರಕ್ಕೆ ಮತ್ತು ಓಟ ಬ್ಯಾಂಕ್ ಆಗಿ ದಲಿತರನ್ನು ಬಳಿಸಿಕೊಂಡರೆ ಎಂದು ಭಾಸವಾಗುತ್ತಿದೆ. ಅದಕ್ಕಾಗಿ ಈ ಬಾರಿ ಲೋಕಸಭೆಯಲ್ಲಿ ಇಂದಿರಾಗಾಂದಿ, ಸೋನಿಯಗಾಂದಿ ಹೆಸರು ಹೇಳಿ ದಲಿತರ ಮತ ಸೆಳಿಯುವುದು ಕಾಂಗ್ರೇಸ್ ಗೆ ಕಷ್ಟಸಾದ್ಯವಾಗುತ್ತದೆ.
ಈ ಲೋಕಸಭೆಯು ನಮ್ಮ ರಾಜ್ಯದಲ್ಲಿ ಆದ ವಿಧನಾಸಭೆ ಚುನಾವಣೆಯಂತೆ ತೀವ್ರ ಕುತುಹಲ ಸೃಷ್ಠಿಸಲಿದೆ. ಇಲ್ಲಿ ಸೋತ ಮಾಹಾನುಭಾವರು ಲೋಕಸಭೆಗೆ ಸ್ಪರ್ಧಿಸುವರು. ಅಲ್ಲಿ ನೆಲೆ ಕಾಣಲು ಹೆಣಗಾಡುವರು ಪಕ್ಷ ಬಿಟ್ಟವರು ಮತ್ತೆ ಪಕ್ಷ ಸೇರಿ ಜನರ ಹಿತಕ್ಕಾಗಿ ಹೀಗೆ ಮಾಡಿದ್ದೇವೆ ಎನ್ನುತ್ತಾರೆ ಅನಿಸುತ್ತದೆ. ಹಲವು ಗೊಂದಲಗಳ ಮದ್ಯೆ ಇನ್ನು ಹುಟ್ಟಿಕೊಂಡಿರುವ ಹಲವು ಪ್ರಾದೆಶಿಕ ಪಕ್ಷಗಳು ಕೇಂದ್ರದ ಹಲವು ಹಗರಣಗಳನ್ನು ಎದುರಿಗೆ ಇಟ್ಟುಕೊಂಡು ಪ್ರಚಾರ ನಡೆಸಿ ಅವರು ಒಂದೆರಡು ಸೀಟು ಪಡೆಯಲುಬಹುದು.
ಏನೆ ಆಗಲಿ ಯಡ್ಡಿ ಮತ್ತೆ ಬಿಜೆಪಿ ಸೇರಿದರೆ ಕೇಂದ್ರದ ಸೋನಿಯ ಮೇಡಂ ಚಿಂತನೆ ಮಾಡೆ ಮಾಡುವಳು, ಆದರೆ ರಾಜ್ಯದಲ್ಲಿ ಮತ್ತೆ ಬಿಜೆಪಿಯಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಬಹುದು ಅನಿಸುತ್ತದೆ. ಈ ಚುನಾವಣೆ ಮತ್ತೆ ಮಾಧ್ಯಮದ ಬಂಧುಗಳಿಗೆ ಪ್ರತಿಕ್ಷಣ ವರದಾನವಾಗಿ ಪರಿಣಮಿಸಲಿದೆ. ಕಾರಣ ತೀವ್ರ ಪೈಪೋಟಿ ಏರಿದಾಗ ಇಬ್ಬರ ನಡುವೆ ಮೂರನೆಯವಿಗೆ ಅಲ್ಲವೆ ಲಾಭ. ಅದಕ್ಕಾಗಿ ಯಡ್ಡಿ ಸ್ವಲ್ಪ ಯೋಚಿಸಿ ಹೆಜ್ಜೆ ಇಡಬೇಕು ಯುಪಿಎ ಕೂಡಾ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡಬೇಕು.
ಈ ದೇಶ ಈಗ ಮತ್ತೊಮ್ಮೆ ತನ್ನ ಪ್ರಜೆಗಳ ಕೈ ಚಳಕ ನೋಡಲು ಅಣಿಯಾಗುತ್ತಿದೆ. ಯಾರ ರಾಜಕೀಯ ಭವಿಷ್ಯ ಯಾವ ರೀತಿ ತಿರುವು ಪಡೆಯಬಹುದೊ ತಿಳಿಯದು. ಸದ್ಯಕ್ಕೆ ಪಕ್ಷಕ್ಕೆ ಬದಲಿಗೊಳ್ಳುವ ವಿಚಾರ ಪಕ್ಷದಿಂದ ಪಕ್ಷಕ್ಕೆ ಹಾರುವ ವಿಚಾರ ಮಾತ್ರ ನಡೆದೆ ಇದೆ. ಯಾರು ಯಾವಪಕ್ಷದಲ್ಲಿ ಇದ್ದಾರೆಯೆಂಬ ಲೆಕ್ಕಾಚಾರ ಮತದಾರನಿಗೆ ಮಾಡುವುದು ಕಠಿಣವಾಗಬಹುದು. ಮಾನ್ಯ ಮತದಾರರೆ ನಿಮ್ಮ ಮತ ಲೋಕಸಭೆಯಲ್ಲಿ ಅತಿ ಅಮೂಲ್ಯ ಅದಕ್ಕಾಗಿ ಸೂಕ್ತ ವ್ಯಕ್ತಿಯ ಆಯ್ಕೆ ನಿಮ್ಮ ಕೈಯಲ್ಲಿ ಇನ್ನು ಕೆಲವೆ ದಿನಗಳಲ್ಲಿ ಬರಲಿದೆ ಬುದ್ಧಿವಂತರಾದ ತಾವು ವಿಚಾರಿಸಿ ಹೆಜ್ಜೆ ಇಡಬೇಕಾದ ಅವಶ್ಯಕತೆಯಿದೆ. ಮುಂದಿನ ಪ್ರಧಾನಿ ಹಾಗೂ ಸೂಕ್ತ ಸರಕಾರದ ಆಯ್ಕೆ ನಿಮ್ಮ ಮತದ ಮೇಲಿದೆ. ವಿಚಾರಿಸಿ ಯೋಗ್ಯ ವ್ಯಕ್ತಿಗಳನ್ನು ಆರಿಸಿ,ಈ ದೇಶ ಕೊಳ್ಳೆ ಹೊಡಿಯುವ ಕಳ್ಳರಿಂದ ರಕ್ಷಿಸಿ...............