ಈ ನಮ್ಮ ಪ್ರಸ್ಥುತ ರಾಜಕೀಯ ವ್ಯವಸ್ಥೆ ಹದಗೆಟ್ಟು ನಿಂತಿದೆ . ಎಲ್ಲವು ಅವರವರ ಹೊಟ್ಟೆ ತುಂಬಿಸಿಕೊಳ್ಳಲು ನೋಡುವರೆ ಹೊರತು ಈ ದೇಶದ ಸೇವೆ ಮಾಡಬೇಕು ಎನ್ನುವ ಲೆಕ್ಕಾಚಾರ ಯಾರಲ್ಲಿಯೂ ಇಲ್ಲ. ನಾನು ಒಮ್ಮೆ ಆರಿಸಿ ಬಂದರೆ ಸಾಕು ಮುಂದಿನದ್ದು ನೋಡಿದರಾಯಿತು ಎನ್ನುವ ಲೆಕ್ಕಾಚಾರದಲ್ಲಿ ಇರುವರು ನಮ್ಮ ರಾಜಕಾರಣಿಗಳು. ಜನರು ಈ ರಾಜಕೀಯ ಗಿಮಿಕ್ ನಿಂದ ಸೋತು ಹೋಗಿದ್ದಾರೆ. ಇನ್ನು ಈ ರಾಜಕೀಯದಲ್ಲಿ ಅನುವಂಶಿಯತೆ ಮೂಲ ಕಾರಣವಾಗಿ ಪರಿಣಮಿಸಿದೆ. ಅಪ್ಪನ ಹೆಸರಲ್ಲಿ ಕೆಸರನ್ನು ತಂದು ಇದು ತುಂಬಾ ಹೆಸರುವಾಸಿಯಾದ ಬಂಗಾರವಿದೆ ಅಪ್ಪ ಹೇಳಿದ್ದಾನೆ ತೊಗೊಳ್ಳಿ ಎಂದು ಮಾರುವ ಎಷ್ಟೊ ಜನರು ಈ ರಾಜಕೀಯದಲ್ಲಿ ಮನೆ ಮಾತಾಗಿದ್ದಾರೆ. ಬರಿ ಎಲ್ಲಿ ನೋಡಿದರು ಸ್ವಾರ್ಥ ಮಾತ್ರ ಎದ್ದು ಕಾಣುತ್ತಿದೆ. ರಾಜಕೀಯ ರಂಗು ಕೆಟ್ಟು ಹೋಗುತ್ತಿದೆ. ಇಲ್ಲಿಯವರೆಗೆ ತಾವು ಮಾಡಿದ ಘನಕಾರ್ಯವಾದರು ಏನು? ಎನ್ನುವುದು ಮರೆತು ನಡೆದಿದ್ದಾರೆ. ಹಾಗಾದರೆ ಕೇಂದ್ರದಲ್ಲಿರುವ ತಾಯಿ ಮಗ ಮಾಡಿದ ಸಾಧನೆಯೇನು ಎಂದು ಕೆದುಕಿದರೆ ಈ ವಿಶೇಷ ಹಗರಣಗಳು ಎದ್ದು ಬರುತ್ತವೆ. ಈ ಕೇಂದ್ರದ ತಾಯಿ ಮಗನ ಸ್ವಾರ್ಥ,ಭಾರತಕ್ಕೆ ಅನರ್ಥ. ತಂದೊಡ್ಡಿದೆ.
ನಮ್ಮ ದೇಶ ಅತ್ಯಂತ ಸಂಪತ್ ಭರಿತವಾದದ್ದು ಎಂದು ಗೊತ್ತಿದ್ದ ಅಂದಿನ ಬ್ರೀಟೀಷರು ಕೊಳ್ಳೆ ಹೊಡೆದರು ಇಂದು ನಮ್ಮವರೆ ನಮ್ಮನ್ನು ಕೊಳ್ಳೆಹೊಡೆದು ನೆಪ ಹೇಳಿ ತಪ್ಪಿಸಿಕೊಳ್ಳುವ ಕಾಲ ಬಂದಂತಿದೆ. ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕೇಂದ್ರ ಸರ್ಕಾರ ಅವರ ಬಲದಿಂದಲೇ ಓಟು ಪಡೆದು ಅವರ ಬದುಕಿನ ಮೇಲೆ ಬರೆ ಎಳಿಯುವ ಕೆಲಸ ಕೇಂದ್ರದ ಯು ಪಿ ಎ ಸರ್ಕಾರ ಮಾಡಿದ್ದು ಯಾವತ್ತು ಮರೆಯುವಂತಿಲ್ಲ. ನಮ್ಮ ರೈತ ಈ ದೇಶದ ಬೆನ್ನೆಲುಬು ಅವನ ಆಧಾರದಿಂದಲೇ ಈಡಿ ದೇಶದಲ್ಲಿ ಇವತ್ತು ಅನ್ನ ಚಿನ್ನವೆಲ್ಲ ಇದೆ. ಆದರೆ ಈ ಕೇಂದ್ರ ಸರ್ಕಾರ ಮಾತ್ರ ರೈತರ ಸಾಲ ಮನ್ನಾ ಯೋಜನೆಯಲ್ಲಿಯೂ ಖೂಟಾ ಮಾಡಿ ಅವರನ್ನು ಮತ್ತೆ ಬಡವರನ್ನಾಗಿ ಮಾಡಿದೆ . ಈ ಸಾಲ ಮನ್ನಾ ಯೋಜನೆ ನಿಜವಾದ ರೈತರ ಪಾಲಾಗದೆ ರಾಜಕೀಯ ಧೂರಿಣರ ಮತ್ತು ಅಧಿಕಾರಿಗಳ ಪಾಲಾಗಿ ರೈತ ಮತ್ತೆ ತನ್ನ ಯಥಾಸ್ಥಿತಿಗೆ ಬರುವಂತೆ ಮಾಡಿದ್ದು ಈ ಕೇಂದ್ರದ ತಾಯಿ ಮಗನ ಕಾರ್ಯ . ಅನ್ನ ಕೊಡುವ ದೇವರಿಗೆ ಕನ್ನ ಹಾಕುವ ಕೆಲಸ ಕೇಂದ್ರ ಸರ್ಕಾರ ಮಾಡಿದೆ ಆದರೆ ಮೌನಯೋಗಿ ಮನಮೋಹನ ಮಾತ್ರ ಇದು ಯಾವಾಗ ನಡೆಯಿತು ನನಗೆ ಗೊತ್ತಿಲ್ಲ ಎಂದು ಹಲವು ಭಾಷಣದಲ್ಲಿ ಹೇಳಿದ್ದು ನೋಡಿದರೆ ಅವರೊಬ್ಬ ಆರ್ಥಿಕ ತಜ್ಞರೊ ಇಲ್ಲವೊ ಎನ್ನುವ ಅಪನಂಬಿಕೆ ಶುರುವಾಗುತ್ತದೆ.
ಕೇಂದ್ರದ ಯುಪಿಎ ಸರ್ಕಾರ ಅಕ್ಕಿ ಹಗರಣದ ಹೂರಣ ತೋರಿತು ಅಕ್ಕಿ ಬೆಳೆಗಾರರ ಮೇಲೆ ಬರೆ ಎಳಿಯುವ ಕೆಲಸ ಮಾಡಿತು. ಅಂದು ಅಕ್ಕಿ ಕೊಳ್ಳುವ ಮತ್ತು ಮಾರುವ ವರ್ತಕರ ಮೇಲೆ ಹೇರಿದ್ದ ತರಿಗೆ ಇಂದಿನ ತರಿಗೆ ಮತ್ತು ಅದರಲ್ಲಿ ಅವ್ಯವಹಾರವನ್ನೆಲ್ಲ ನೋಡಿದರೆ ನಮಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ. ಈ ಅಕ್ಕಿ ಹಗರಣದಲ್ಲಿ ಯಾರೂ ಎಷ್ಟು ಪಡೆದರು ಎಂದು ಅವರ ಈ ಕೆಲಸಕ್ಕೆ ಯಾವ ರೀತಿಯಲ್ಲಿ ಹೇಗೆ ಮನ್ನಣೆ ಯಾರು ನೀಡುವರು ತಿಳಿಯದು ಈ ದೇಶದ ಅಕ್ಕಿ ಎಲ್ಲವು ಕೊಳ್ಳೆ ಹೊಡೆದು ಬರಿ ಜೊಳ್ಳು ಮಾತನಾಡಿದ ಕೇಂದ್ರ ಸರ್ಕಾರ ಅಕ್ಕಿ ಹಗರಣದ ಪ್ರಮುಖ ರೂವಾರಿಗಳನ್ನು ಭಹಿರಂಗ ಪಡಿಸಲೇಯಿಲ್ಲ. ತಿನ್ನುವ ಅನ್ನದ ಹೆಸರಲ್ಲಿ ಹಗರಣ ಮಾಡಿರುವ ಈ ಸರಕಾರ ಸಾಮಾನ್ಯ ಜನತೆಗೆ ನೀಡುವ ಸಂದೇಶವಾದರು ಏನು ತಿಳಿಯದು. ಹಲವು ಹಗರಣಗಳ ರಾಜನಾಗಿ ಕೇಂಗ್ರ ಸರಕಾರ ಮೆರೆಯುತ್ತಿದೆ.
ಇನ್ನು ಅನ್ನ ಉಣ್ಣುವುದು ಬಿಟ್ಟು ಕಲ್ಲಿದ್ದಲು ತಿನ್ನುವ ಲೆಕಕ್ಕೆ ಬಂದರು ನಮ್ಮ ಮೌನಯೋಗಿಯವರು. ಈ ದೇಶ ನಾಚಿ ನೀರಾಗುವಂತ ಕೇಂದ್ರದ ಮತ್ತೊಂದು ಹಗರಣವೆಂದರೆ ಕಲ್ಲಿದ್ದಲು ಹಗರಣ ಮಾಧ್ಯಮಗಳು ಕೇಳುವ ಒಂದೊಂದು ಪ್ರಶ್ನೆಗಳಿಗೆ ಯಾರು ಉತ್ತರ ನೀಡದೆ ಸಾಗಿದರು. ಕೋಟಿಗಟಗಟ್ಟಲೆ ಹಗರಣ ಮಾಡಿದ ಕೇಂದ್ರವು ನಮ್ಮ ಜನತೆ ಕಟ್ಟುವ ತರಿಗೆ ಮೇಲೆ ಅದರ ಬೆಲೆಯ ಬಗ್ಗೆ ಸ್ವಲ್ಪವು ಯೋಚಿಸಲಿಲ್ಲ ಅವರ ಹಾದಿಯಲ್ಲಿಯೆ ಸಾಗಿ ಈ ಕಲ್ಲಿದ್ದಲು ಹಗರಣದ ಹರವು ಮೆರೆಸಿದರು.. ಈ ಹಗರಣದಿಂದ ಸಾಮಾನ್ಯ ಜನರ ಮೇಲೆ ಯಾವ ರೀತಿ ಪರಿಣಾಮ ಬೀರಿತು ಎನ್ನುವುದು ಯಾವ ರಾಜಕೀಯ ವ್ಯಕ್ತಿಯು ಯೋಚಿಸಲಿಲ್ಲ ನಮ್ಮ ದೇಶ ಕೊಳ್ಳೆ ಹೊಡಿಯುವ ಲೆಕ್ಕಚಾರ ಬಿಟ್ಟರೆ ಅವರಿಗೆ ಯಾವ ಆಸೆಯು ಕಾಣಿಸಲಿಲ್ಲ ಕಲ್ಲಿದ್ದಲು ವರ್ತಕರು ಕೂಲಿ ಕಾರ್ಮಿಕರು ಈ ದೇಶದ ಅನೇಕ ಜನ ಉದ್ಯೂಗಿಗಳು ಇದರಿಂದ ತತ್ತರಿಸಿ ಹೋದರು. ಕಪ್ಪು ಕಾಗೆಯ ಹಾಗೆ ನಮ್ಮ ರಾಜಕೀಯದಲ್ಲಿ ಕಲ್ಲಿದ್ದಲು ನುಂಗಿ ನೀರು ಕುಡಿದ ಕೇಂದ್ರ ಸರ್ಕಾರ ಅದರ ಮುಂದಿನ ಯಾವುದೆ ತನಿಖೆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ ಏಕೆ? ಎಂದು ಕೇಳುವ ಅನೇಕರ ಬಾಯಿಗೆ ಹಣದ ಆಮಿಷ್ಯವನ್ನು ಹಾಕಿ ಎಲ್ಲವು ಏನು ಆಗಿಲ್ಲ ಎನ್ನುವ ಕೆಲಸ ಮಾಡಿದರು ಎನ್ನುವ ಚಿತ್ರಣ ಸ್ಪಷ್ಟವಾಗಿ ಗೋಚರಿಸುತ್ತದೆ. 194 ಕಲ್ಲಿದ್ದಲು ಗಣಿಗಳ ಹಂಚಿಕೆಯಲ್ಲಿ 1.86 ಲಕ್ಷ ಕೋಟಿ ಹಗರಣದ ರುವಾರು ನಮ್ಮ ಮಾನ್ಯ ಯುಪಿಎ ಸರಕಾರ ಇಷ್ಟು ತಿಂದ ಮಾನ್ಯರು ಯಾವುದೆ ಮಾರುತ್ತರ ನೀಡದೆ ಜನಗಳಿಗೆ ಮೋಸಮಾಡುತ್ತಾ ಸಾಗಿದರು. ಕೊನೆತ ತನಕ ಯಾರು ಯಾವ ಕೆಲಸ ಮಾಡಿ ಎಷ್ಟು ನುಂಗಿ ನೀರು ಕುಡಿದರು ತಿಳಿಯಲೆಯಿಲ್ಲ ನಮ್ಮ ಮೌನಯೋಗ ಉತ್ತರ ಕೊಡಲೇಯಿಲ್ಲ.
ದೇಶದ ಹೆಮ್ಮೆಯ ಆಟಗಳು ಇ ಬಾರಿ ನಮ್ಮ ದೇಶಕ್ಕೆ ದೊರೆತ್ತಿದ್ದು ತುಂಬಾ ಹೆಮ್ಮೆಯ ವಿಷಯ ಹಾಗೂ ನಮ್ಮ ದೇಶದಲ್ಲಿ ಇಂತಹ ಅನೇಕ ದೇಶ ಸೇರಿ ಆಡುವ ಆಟದಿಂದ ನಮ್ಮ ದೇಶದ ಬಗ್ಗೆ ಬೇರೆ ದೇಶದ ಜನರಲ್ಲಿ ನಂಬಿಕೆ ಮತ್ತು ಉತ್ತಮವಾದ ಕಲ್ಪನೆ ಮೂಡಿ ಅವರಲ್ಲಿ ಈ ದೇಶದ ಬಗ್ಗೆ ಗೌರವ ಮೂಡುವುದು ಸಹಜ. ಆದರೆ ಕಾಮನ್ ವೆಲ್ತ ಕ್ರೀಡಾಕೂಟದಲ್ಲಿ ನಡೆದ ಹಗರಣದಿಂದ ಬೇರೆ ದೇಶದ ಜನರಿಗೆ ಹೋದ ಸುಂದರ ಎಸ್ ಎಂ ಎಸ್ ಬೇರೆಯೆ ಇತ್ತು ನಮ್ಮ ಈ ಕಾಮನ್ ವೆಲ್ತ ಕ್ರೀಡಾಕೂಟದ ವೇದಿಕೆಯೆ ಮೇಲೆ ಹಗರಣವಿದೆಯೆಂದರೆ ಎಂತವರು ಕೂಡಾ ನಾಚಲೇಬೇಕಾದ ಅಗತ್ಯವಿದೆ ಅನಿವಾರ್ಯವಿದೆ ಅಲ್ಲವೆ? ಅವರ ಈ ನಾಚಿಕೆ ತರಿಸುವ ಕೆಲಸ ಕೇಂದ್ರ ಸರ್ಕಾರ ಮಾಡಿದ್ದು ನೊಡಿದರೆ ಈ ಹೊಲಸು ರಾಜಕೀಯದಲ್ಲಿ ಎಲ್ಲರು ಬಿದ್ದು ಒದ್ದೆಯಾಗಿದ್ದಾರೆ ಎನ್ನುವ ಸ್ಪಷ್ಟ ಚಿತ್ರಣ ಮೂಡುತ್ತಿದೆ. ಸಾಮಾನ್ಯ ಜನರ ವಿಷಯವೇ ಅರ್ಥಮಾಡಿಕೊಳ್ಳದ ಈ ಹಗರಣ ಈಡಿ ದೇಶವೆ ನಾಚುವಂತಹ ಕೆಲಸಮಾಡಿತು ಇದರ ಸಂಪೂರ್ಣ ರುವಾರಿ ನಮ್ಮ ಕೇಂದ್ರದ ಯು ಪಿ ಎ ಸರ್ಕಾರವೆ ಹೊರತು ಬೇರೆ ಯಾರು ಅಲ್ಲ . ಈ ಹಗರಣಕ್ಕೆ ಕರಗಿಹೋದ ಕಾಮನ್ ವೆಲ್ತ 90 ಕೋಟಿ ರುಪಾಯಿ ಭಾರಿ ನಷ್ಟ ಅನುಭವಿಸಿತು. ಈಡಿ ಪ್ರಪಂಚದ ಜನತೆ ನೋಡಿ ನಗುವಂತಹ ಸ್ಥಿತಿಗತಿ ಎದುರಾಯಿತು.
ಈ ದೇಶವು ಅತ್ಯಂತ ಸಂಪತ್ಭರಿತವಾದ ದೇಶ ನಮ್ಮ ಭೂಮಿ ಬೇರೆ ಎಲ್ಲು ಇಲ್ಲದ ನೆಲ ಅದರ ಬೆನ್ನಲೆ ಬೆಳಿದು ನಿಂತ ಥೋರಿಯಂನ್ನು ಹೇಗೆ ವಿನಿಯೋಗಿಸಿ ಜನರ ಜೀವನಕ್ಕೆ ಆಧಾರವಾಗಲು ಮುಟ್ಟಿಸಬೇಕಾದ್ದು ಕೇಂದ್ರ ಸರ್ಕಾರದ ಕೆಲಸ ಆದರೆ ಕೇಂದ್ರ ಸರ್ಕಾರ ಮಾಡಿದ ಘನ ಕೆಲಸವಾದರು ಏನು ಹೇಳಿ ಈ ಥೋರಿಯಂನಲ್ಲು ಅದರ ಬಳಕೆ ಮತ್ತು ಉಳಿಕೆಯಲ್ಲು ಹಗರಣದ ಮಜಾ ಮಾಡಿದರು ನಮ್ಮ ಈ ಹೊಲಸು ರಾಜಕೀಯ ಈ ಥೋರಿಯಂ ವಿಲೇವಾರಿಯ ನೇತೃತ್ವವನ್ನು ಸಂಪೂರ್ಣ ಕೇಂದ್ರ ಒಪ್ಪಿಕೊಂಡಿತ್ತು ಮತ್ತು ಅದರಂತೆ ಕಾರ್ಯಮಾತ್ರ ಮಾಡಲಿಲ್ಲ. ಈ ಥೋರಿಯಂನಲ್ಲು ಕಳ್ಳತನವನ್ನು ಮಾಡಿ ಈಡಿ ದೇಶದ ಪಾಲಿಗೆ ರಾಕ್ಷಸ ಅನುಭವ ನೀಡಿದ್ದು ಈ ಕೇಂದ್ರದ ಯುಪಿಎ ಸರ್ಕಾರ. ಸುಮಾರು ಕೋಟಿಗಟ್ಟಲೆ ಹಣ ಕೊಳ್ಳೆ ಹೊಡೆದು ಮಜ ಮಾಡಿದ ಕೇಂದ್ರ ಸರಕಾರ ಇದರ ಲೆಕ್ಕ ಕೊಡದೆ ಹೋಯಿತು.
ಆದರ್ಶ ಹೌಸಿಂಗ್ ಹಗರಣ ನಮ್ಮ ದೇಶದ ಅತ್ಯಂತ ಸುಂದರ ಹಾಗೂ ಸ್ವಚ್ಯ ಯೋಜನೆಯೆಂದು ಹಾಗೂ ಜನರ ಮನದಾಳದ ಮಾತು ಕೇಳುವ ಏಕೈಕ ದೃಷ್ಠಿಕೋನದಿಂದ ಸ್ಥಾಪಿಸಿದ ಆದರ್ಶ ಹೌಸಿಂಗ್ ಬೋರ್ಡ ಕೇಂದ್ರದಲ್ಲಿ ಕೊಳ್ಳೆ ಹೊಡೆಯುವ ಕೆಲಸಕ್ಕೆ ಕೈ ಹಾಕಿತು ಮತ್ತು ತಮ್ಮ ಹೊಟ್ಟೆ ತುಂಬಿಸಿಕೊಳ್ಳುವ ತಾಕತ್ತು ಮಾಡಿದ್ದು ಕೇಂದ್ರ ಸರ್ಕಾರ. ಕೇಂದ್ರದ ಕಾಂಗ್ರೇಸ್ ಸರ್ಕಾರದಲ್ಲಿ ಇಂತಹ ಹಗರಣ ಮಾಡುವ ಕಳ್ಳ ಕಧೀಮರು ಇದ್ದ ಸಂಗತಿ ಅವ್ವ ಮಗನಿಗೆ ಗೊತ್ತಿಲ್ಲವೆ? ಅಥವಾ ಗೊತ್ತಿದ್ದು ಅದರಲ್ಲಿ ನಮಗೂ ಪಾಲಿದೆಯೆಲ್ಲ ಅಂತಾ ಸುಮ್ಮನಿರುವರೆ ತಿಳಿಯದು. ಆದರ್ಶ ಹೌಸಿಂಗ ಮುಖ್ಯವಾಗಿ ದೇಶದ ರಕ್ಷಣೆಗಾಗಿ ಇರುವ ನಮ್ಮ ಕಾರ್ಗಿಲ್ ಹುತಾತ್ಮರ ಪಾಲಿನದ್ದು ಅದರಲ್ಲು ತಾರತಮ್ಯ ಮಾಡಿ ಅವರ ಜೀವನದಲ್ಲೂ ಆಟ ಆಡಿದ ಕೇಂದ್ರ ಸರಕಾರ ಮತ್ತೆ ತಾನು ಏನು ಮಾಡೆಯಿಲ್ಲ ಎನ್ನುವ ಮಾತು ಹೇಳಿತು ತಮಗೆ ಏನನು ಗೊತ್ತಿಲ್ಲ ಎಂಬ ಮಾತು ಆಡಿತು.
ಹೀಗೆ ಈ ಕೇಂದ್ರ ಸರ್ಕಾರ ಹಗರಣಗಳ ಪಟ್ಟಿ ಬೆಳಿಯುತ್ತದೆ. ಐಪಿಎಲ್ ಹಗರಣ,ಸತ್ಯಂ ಹಗರಣದಲ್ಲಿ 7 ಸಾವಿರ ಕೋಟಿ , ಎಲ್ ಐ ಸಿ ಹಗರಣ ಆಹಾರ ಧಾನ್ಯ ಹಗರಣ, ಇಸ್ರೋ ಹಗರಣ, ವಿಐಪಿಗಳ ಪ್ರಯಾಣಕ್ಕಾಗಿ ಖರೀದಿಸಿದ ಕ್ಯಾಪ್ಟರ್ ವ್ಯವಹಾರದಲ್ಲೂ ಲಂಚ ಸ್ವೀಕಾರ ಭಾರಿ ಅವ್ಯವಹಾರ , ಟೆಟ್ರಾ ಟ್ರೆಕ್ ಖರೀದಿ ಒಪ್ಪಂದ ಅನುಮತಿಗೆ , ಜಿ.ವಿ.ಕೆ.ಸಿಂಗ್, 14 ಕೋಟಿ ಲಂಚ ಆಮಿಷ್ಯ , ವೋಟಿಗಾಗಿ ಗರಿ ನೋಟು , ವಿಶ್ವಾಸ ಮತ ಯಾಚನೆ ವೇಳೆಗೆ ಲಂಚ , ಫಿಕ್ಸಿಂಗ್ ಈಡಿ ದೇಶವನ್ನೆ ಅಲ್ಲೊಲ ಕಲ್ಲೊಲ ಮಾಡಿಸಿತು. ಈ ಕೆಲಸದಲ್ಲಿಯು ಯುಪಿಎ ಕೈವಾಡ ಇದೆ ಎಂಬ ಶಂಕೆ ಎದುರಾಯಿತು. ಹೀಗೆ ಒಂದೆ ಎರಡೆ ಅನೇಕ ರೀತಿಯಲ್ಲಿ ಜನರ ಕೊಳ್ಳೆ ಹೊಡೆದು ಸುಳ್ಳು ಭರವಸೆ ನೀಡಿ ಎಲ್ಲರನ್ನು ಬಡವರನ್ನಾಗಿ ಮಾಡಿ ತಾವು ತಾಯಿ ಮಗ ಮಾತ್ರ ಆರಾಮವಾಗಿ ಜೀವನ ಮಾಡುತ್ತಿರುವ ಇವರು ಹೆಸರಿಗೆ ಮಾತ್ರ ನಾನು ಅತ್ತೆಯ ಕನಸು ನೆನಸು ಮಾಡುತ್ತೀನಿ. ನಾನು ಅಪ್ಪನ ಕನಸು ನೆನಸು ಮಾಡುತ್ತೀನಿ ಎಂಬ ಗೊಡ್ಡು ಭರವಸೆಯನ್ನು ಜನರ ಮುಂದೆ ಇಡುತ್ತಾ ನಡೆದಿದ್ದಾರೆ. ಅಷ್ಟೆ ಈಗ ಮತ್ತೆ ನಮಗೆ ಅಧಿಕಾರ ಕೊಡಿ ಈ ದೇಶವನ್ನು ಇನ್ನಷ್ಟು ಕೊಳ್ಳೆ ಹೊಡೆದು ಮತ್ತೊಮ್ಮೆ ಈ ದೇಶ ಆಳುತ್ತೇವೆ ಎಂದು ಬೇಡಿಕೊಳ್ಳುತ್ತಿರುವ ಕೇಂದ್ರದ ಯು ಪಿ ಎ ಗೆ ನಮ್ಮ ಮತದಾರ ಹೇಗೆ ಬೆಂಬಲಿಸುವನೋ ತಿಳಿಯದು.
ನಮ್ಮ ದೇಶದ ರಾಜಕೀಯ ಅತ್ತೆಗೊಂದು ಕಾಲವಿತ್ತು ಈಗ ಸೊಸೆಗೊಂದು ಕಾಲ ಬಂದಿದೆ ಮುಂದೆ ಅದು ತಾಯಿಗೊಂದು ಕಾಲ ಮತ್ತು ಮಗನಿಗೊಂದು ಕಾಲ ಆಗುವ ನಿರೀಕ್ಷೆಯಿದೆ. ಅಲ್ಲಿ ತಾಯಿ ಮಗ ಆಳುತ್ತಿರುವವರು ಇದು ಹೇಗೆ ಪ್ರಜಾಪ್ರಭುತ್ವ ಎನ್ನುವುದು ತಿಳಿಯದಾಗಿದೆ. ದೇಶದ ರಾಜಕೀಯ ವ್ಯವಸ್ಥೆ ಹದಗೆಟ್ಟು ಹುದುಗಿಹೋಗಿದೆ. ಅವರಿಬ್ಬರು ಯಾರ ಪರವೇಯಿಲ್ಲದೆ ಈ ದೇಶದ ಜನರನ್ನು ಕೊಳ್ಳೆ ಹೊಡೆದು ಮೊಸಳೆ ಕಣ್ಣೀರಿಡುವ ಕೆಲಸಕ್ಕೆ ಮುಂದಾಗಿದ್ದಾರೆ ಎನ್ನುವುದು ಅನೇಕ ನಿದರ್ಶನಗಳು ಹೇಳುತ್ತವೆ .
ಇನ್ನು ಕೇಂದ್ರದ ಯುಪಿಎ ಅತ್ಯಂತ ಜಾಣತನದಿಂದ ರಾಜಕೀಯ ಮಾಡುತ್ತಿರುವುದು ಕಂಡು ಬರುತ್ತದೆ. ಅದಕ್ಕೆ ತಕ್ಕ ಉದಾಹರಣೆ ಮಾನ್ಯ ಮಲ್ಲಿಕಾರ್ಜುನ ಖರ್ಗೆಯವರನ್ನು ಇಟ್ಟಿಕೊಂಡು ದಲಿತರ ಬಾವನೆಗಳ ಜೊತೆಗೆ ಆಟ ಆಡುತ್ತಿರುವುದು. ರಾಜ್ಯದ ಚುನಾವಣೆಯಲ್ಲಿ ಮಾನ್ಯರನ್ನು ಮುಖ್ಯಮಂತ್ರಿ ಮಾಡುತ್ತೀವಿ ಅಂತಾ ದಲಿತರ ಮತ ಪಡೆದು ರಾಜ್ಯದಲ್ಲಿ ಅಧಿಖಾರ ಹಿಡಿದ ಯುಪಿಎ ದಲಿತರ ಬಾಳಿನಲ್ಲಿ ಮತ್ತೆ ಆಶಕಿರಣದ ಜ್ಯೋತಿ ಹೊತ್ತಿಸಿ ನಂದಿಸಿ ಹೋಯಿತು. ಅಂದು ದಲಿತರೆಲ್ಲ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾದರು ಎನ್ನುವಷ್ಟರಲ್ಲಿ ನಮ್ಮವರನ್ನೆ ಮುಂದು ಮಾಡಿ ನಮ್ಮದು ನಮಗೆ ಜಗಳ ಹಚ್ಚಿ ನೋಡುತ್ತಾ ನಿಂತರು.
ಕೆಲವು ದಿನಗಳಲ್ಲೆ ಲೋಕಸಭೆ ಚುನಾವಣೆ ಈಗ ದಲಿತರ ಮತ ಸೆಳೆಯಲು ಮಾನ್ಯ ಮಲ್ಲಿಕಾರ್ಜುನ ಖರ್ಗೆಯವರಿಗೆ ರೈಲ್ವೆ ಖಾತೆ ನೀಡಿದ ಇವರು ದಲಿತರ ಮೇಲೆ ನಮಗೆ ಕರುಣೆಯಿದೆ ಎನ್ನುವುದು ತೋರಿಕೆಗೆ ಮಾತ್ರ ಪ್ರೀತಿ ತೋರುತ್ತಿರುವುದು ಹಾಗೂ ಸಮಯ ಬಂದಂತೆ ಬಳಸಿಕೊಳ್ಳುವುದು ಮಾಡುತ್ತಿರುವ ದೃಶ್ಯ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಂದು ಶ್ರೀಮಂತ ವರ್ಗ ದಲಿತರ ಮೇಲೆ ಹೇಗೆ ಅವರ ಸೇಡು ತೀರಿಸಿಕೊಳ್ಳುತ್ತಿದ್ದರೊ ಹಾಗೆ ಇಂದು ಕೇಂದ್ರದ ಯುಪಿಎ ಬಡವರ ಮೇಲೆ ತನ್ನ ಸೇಡು ತೀರಿಸಿಕೊಳ್ಳುತ್ತಿದೆ. ಅವರ ಭಾವನೆಗಳೊಂದಿಗೆ ಆಟವಾಡುತ್ತಿದೆ. ಕಾಂಗ್ರೇಸ್ ನಲ್ಲಿ ಯಾವತ್ತು ಹೊಸದನ್ನು ಸೃಷ್ಟಿಸುತ್ತಿರುವ ಮಾನ್ಯರನ್ನು ಹಲವು ಕಾರಣಗಳಿಂದ ಕಡೆಗಣಿಸಿ ದೇಶದ ದಲಿತರನ್ನು ತಮ್ಮ ಮನಸ್ಸಿಗೆ ಬಂದಂತೆ ಕೇಂದ್ರದ ಯುಪಿಎ ಕೆಲಸ ಮಾಡುತ್ತಿದೆ. ಇನ್ನು ಉಪ ಚುನಾವಣೆಯಲ್ಲಿ ರಮ್ಯಳ ಸೌಂದರ್ಯವನ್ನು ಮುಂದಿಟ್ಟುಕೊಂಡು ಯುವ ಶಕ್ತಿ ಎಳಿದುಕೊಳ್ಳುವ ಲೆಕ್ಕಚಾರ ಅಕ್ಕ ಸೋನಿಯಾರವರದ್ದು . ರಮ್ಯ ಗೆಲವು ಸೋಲು ಆಮೇಲೆ ಆದರೆ ಕೇಂದ್ರದ ಯುಪಿಎ ಜನರೊಂದಿಗೆ ಕಣ್ಣಮುಚ್ಚಾಲೆ ಆಡುತ್ತರಿರುವುದಂತು ಅಷ್ಟೆ ಸತ್ಯ. ಈ ಸ್ವಾರ್ಥಪರ ರಾಜಕಾರಣ ನಮ್ಮ ದೇಶದ ಜನರನ್ನು ಮತ್ತಷ್ಟು ಬಡವರನ್ನಾಗಿ ಮಾಡಿ ನಮ್ಮ ದೇಶ ಮತ್ತೆ ಬಡರಾಷ್ಟ್ರವಾಗಿಯೆ ಉಳಿಯುತ್ತಿದೆ. ಯಾವುದೆ ರಾಜಕೀಯ ಪಕ್ಷವನ್ನು ನಂಬಿ ಮತ ಹಾಕಬೇಕು ಎನ್ನುವ ಗೊಂದಲ ಈಗ ಸಾಮಾನ್ಯ ಜನರಲ್ಲಿ ಮೂಡಿದೆ. ಒಟ್ಟಿನಲ್ಲಿ ಈ ಕೇಂದ್ರದ ತಾಯಿ ಮಗನ ಸ್ವಾರ್ಥ , ನಮ್ಮ ಭಾರತ ಮಾತೆಯ ಪಾಲಿಗೆ ಅನರ್ಥವಾಗಲಿದೆ ಎಂಬುವುದಂತು ಅತ್ಯಂತ ಕಟುಸತ್ಯವಾದ ಮಾತು. ಅದಕ್ಕಾಗಿ ಜನ ಎತ್ತೆಚ್ಚುಕೊಂಡು ಮತ ಹಾಕುವ ಮುನ್ನ ಯೋಚಿಸಬೇಕು ಅನಿಸುತ್ತದೆ ಅಲ್ಲವೆ?
ರೈತರ ಹೆಸರಿನಲ್ಲಿ ಪ್ರಮಾಣ ವಚನ !
ನಿಮ್ಮೆಲ್ಲರ ಉದ್ಧಾರ ಮಾಡುವೆವು ಎನ್ನುವ ವಚನ !
ಅಕ್ಕಿ,ಕಲ್ಲಿದ್ದಲು,ಕಾಮನ್ವೆಲ್ತ ಹಗರಣ !
ಐಪಿಎಲ್,ಸತ್ಯಂ,ಆಹಾರ ಧಾನ್ಯ ,ಟುಜಿ ಹಗರಣ !
ತಾಯಿ ಮಗನೆ ಇದಕ್ಕೆ ಮೂಲ ಕಾರಣ !
ಸೀಟು ಹಿಡಿಯಲು ಮೊದಲು ಹಿಡಿದರು ಚರಣ !
ದಲಿತರ ವೋಟಿಗಾಗಿ ಮಾಡಿದರು ದಲಿತರಿಗೆ ಮೋಸ ವಂಚನ !
ಹೇಗೆ ಬರೆದರು ಪದಗಳೆ ಸಾಲದಾಗಿವೆ ಕೇಂದ್ರದ ಯುಪಿಎ ಮಾಹಾ ತಾಯಿ ಮಗನ ಗುಣಗಾನ !