ಕರ್ನಾಟಕದ ಪ್ರಜಾಪ್ರಭುಗಳ ಮನಸ್ಸಿನ ಆಳ ಅಗಲವನ್ನು ಬರಿ ಹಣದಿಂದ ಕೊಂಡುಕೊಳ್ಳಬಹುದು ಎಂಬ ಹುಸಿ ಸತ್ಯದ ನೆನಪಲ್ಲೇ ಸರಕಾರ ಕನಸಿನ ಲೋಕದಲ್ಲಿ ವಿಹರಿಸುತ್ತಿದೆ. ಈ ಹಿಂದೆ ಬಿಜೆಪಿ ಸರಕಾರ ಮಾಡಿದ ಹಲವು ಭ್ರಷ್ಠಾಚಾರಗಳ ವಿರುದ್ಧ ಪ್ರಜಾಪ್ರಭುಗಳ ಆಕ್ರೋಶವನ್ನು ಯಾವತ್ತು ಮರೆಯುವಂತಿಲ್ಲ. ರಾಜ್ಯದಲ್ಲಿ ಬಿಜೆಪಿಯನ್ನು ಧೂಳಿಪಟ ಮಾಡಿದಂತೆ ಕೇಂದ್ರದಲ್ಲಿ ಕಾಂಗ್ರೆಸ್ನ್ನು ಮಾಡಿರುವುದು ಮರೆತಂತೆ ಭಾಸವಾಗುತ್ತಿದೆ. ಈ ರಾಜ್ಯದ ಪ್ರಜೆಗಳು ಮನಸ್ಸು ಮಾಡಿದರೆ ಏನು ಭೇಕಾದ್ದು ಸಾಧ್ಯ ಮಾಡುತ್ತಾರೆಯೆಂಬ ಸತ್ಯ ಸಧ್ಯದ ರಾಜ್ಯ ಸರಕಾರ ಮರೆತು ವರ್ತಿಸುತ್ತಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ತನ್ನ ಕ್ರೀಯಾಶೀಲತೆಯೆನ್ನು ಕಳೆದುಕೊಂಡು, ಮೊಂಡುತನವನ್ನು ಪ್ರದರ್ಶನ ಮಾಡುತ್ತಿದೆ. ಈ ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ಅನೇಕ ವಿಷಯಗಳತ್ತ ಚಿತ್ತ ಹರೆಸದೆಯಿರುವ ಸರಕಾರ ಎಮ್ಮೆ ಹಾಲು ಕುಡಿದು ಸುಖನಿದ್ರೆಗೆ ಜಾರಿದಂತೆ ಭಾಸವಾಗುತ್ತಿದೆ. ಮುಂದಿನ ಐದು ವರ್ಷಗಳು ಹೀಗೆ ಚಿರನಿದ್ರೆಗೆ ಜಾರಿದರೆ, ರಾಜ್ಯದಲ್ಲಿಯ ಕಾಂಗ್ರೆಸ್ ಸರಕಾರ ಮೂಲೆ ಗುಂಪಾಗುವುದಂತು ಸತ್ಯವಾದ ಮಾತು. ಆಡಳಿತ ಮಾಡುವ ಸರಕಾರವನ್ನು ಪ್ರತಿಕ್ಷಣ ಪ್ರಜೆಗಳು ಗಮನಿಸುತ್ತಾರೆ. ಸರಕಾರದ ಅನೇಕ ನಡೆಗಳನ್ನು ಪ್ರಶ್ನಿಸುತ್ತಾರೆ. ರಾಜ್ಯದಲ್ಲಿ ತಲೆಯೆತ್ತಿರುವ ಅನೇಕ ಸಮಸ್ಯೆಗಳ ಬಗ್ಗೆ ಜನರಿಗೆ ಇರುವ ಅನೇಕ ಗೊಂದಲಗಳು ಸರಕಾರ ನಿವಾರಿಸಬೇಕಿದೆ. ಇಡಿ ರಾಜ್ಯವೇ ಸಮಸ್ಯೆಗಳೆಂಬ ಉರಿಯೆಲ್ಲಿ ಹೊತ್ತಿ ಉರಿಯುತ್ತಿರುವಾಗ, ನಮ್ಮ ಸಿಯಂ ಸಾಹೇಬರು ಮಾತ್ರ ನಿದ್ರೆಗೆ ಜಾರಿರುವಹಾಗೆ ಭಾಸವಾಗುತ್ತಿದೆ. ಸಧ್ಯ ರಾಜ್ಯ ಸರಕಾರವು “ಸೇರಲಾರದವರ ಮುಂದೆ, ಸೀರೆ ಕಳೆದುಕೊಂಡರು” ಎಂಬಂತೆ ನಿರಾಸಾದಾಯಕವಾಗಿ ಆಡಳಿತವನ್ನು ಮಾಡುತ್ತಿದೆ.
ಈ ರಾಜ್ಯದಲ್ಲಿ ತಲೆಯೆತ್ತಿದ ಲೋಕಾಯುಕ್ತ ಭ್ರಷ್ಠಾಚಾರ ಹಗರಣ ಜನಸಮೂಹವೇ ತಲೆತಗ್ಗಿಸುವಂತಾಯಿತು. ಕಳಸಾಬಂಡೂರಿ, ಎತ್ತಿಹೊಳೆಯೆಂತಹ ಹೋರಾಟಗಳು ಜನರ ಮನಸ್ಸಿನೊಳಗೆ ಅಚ್ಚಳಿಯದಂತೆ ಉಳಿದವು. ಈ ರಾಜ್ಯದಲ್ಲಿ ನಡೆದ ದಲಿತರ ಮೇಲಿನ ಹಲ್ಲೆ, ಕೊಲೆಗಳು ಯಾವತ್ತು ಮರೆಯಲಾರದಂತಹ ನೆನಪಿನ ಪುಟ ಸೇರಿದವು. ಹೋರಾಟದ ಹಾದಿಯನ್ನೇ ನಂಬಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಮುಖ್ಯಮಂತ್ರಿಗಳ ಆಗಿನ ಪೌರುಷಕ್ಕೆ ಏನಾಗಿದೆ ಎಂಬುವುದು ಊಹಿಸಲು ಸಾಧ್ಯವಾಗುತ್ತಿಲ್ಲ. ನಾವು ಕೆಲವು ವರ್ಷಗಳ ಹಿಂದೆ ಗೂಗಲ್ನಲ್ಲಿ ಸಿದ್ಧರಾಮಯ್ಯ ಎಂದು ಹುಡುಕಿದರೆ, ಸಿದ್ಧರಾಮಯ್ಯನವರ ಹೋರಾಟದ ವಿಡಿಯೋ ಹಾಗೂ ಭಾವಚಿತ್ರಗಳು ಸಿಗುತ್ತಿದ್ದವು ಆದರೆ ಪ್ರಸ್ತುತದಲ್ಲಿ ನಾವು ಗೂಗಲ್ನಲ್ಲಿ ಹುಡುಕಿದರೆ ಸಿದ್ಧರಾಮಯ್ಯನವರು ನಿದ್ದೆ ಮಾಡುತ್ತಿರುವ ಭಾವಚಿತ್ರಗಳು ಹೆಚ್ಚಾಗುತ್ತಿವೆ. ಇದು ಪ್ರಜಾಪ್ರಭುಗಳು ಗಮನಿಸುತ್ತಿರುವ ಒಂದು ಭಾಗವಷ್ಟೆ.
ಈ ರಾಜ್ಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಕೊಲೆ, ಚಿಕ್ಕ ಚಿಕ್ಕ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಮತ್ತು ಕೊಲೆಗಳು ಇಡಿ ರಾಜ್ಯವೇ ತಲೆತಗ್ಗಿಸುವಂತಾಯಿತು. ಒಬ್ಬ ಹಿಂದುಳಿದ ವರ್ಗದವರು ಈ ರಾಜ್ಯದ ಚುಕ್ಕಾಣಿ ಹಿಡಿದರೆ, ಈ ರಾಜ್ಯದ ಹಿಂದುಳಿದ ವರ್ಗಕ್ಕೆ ನ್ಯಾಯ ಸಿಕ್ಕಂತಾಗುತ್ತದೆ ಎಂದು ನಂಬಿದ ಜನರನ್ನು ಮಾನ್ಯ ಸಿದ್ಧರಾಮಯ್ಯನವರು ನಂಬಿಕೆ ದ್ರೋಹ ಮಾಡುತ್ತಿರುವರು ಎನಿಸುತ್ತಿದೆ. ರಾಜ್ಯದಲ್ಲಿ ಸರಣಿ ಪ್ರಶಸ್ತಿ ವಾಪಸ್ಸು ಮಾಡಿರುವ ಘಟನೆ ಸಂಭವಿಸಿತು. ಅದ್ಯಾಗ್ಯೂ ಸಿಯಂ ಕ್ಯಾರೆ ಎನ್ನಲಿಲ್ಲ ಇಲ್ಲಿಯತನಕ ಆ ಪ್ರಶಸ್ತಿ ವಾಪಸ್ಸು ಮಾಡಿದರಿಗೆ ನ್ಯಾಯ ದೊರಕಿಸಿ ಕೊಡುವಲ್ಲಿ ರಾಜ್ಯ ಸರಕಾರ ಚಕಾರೆ ಎತ್ತುತ್ತಿಲ್ಲ.
ಈ ದೇಶದ ಅತೀದೊಡ್ಡ ಆಸ್ತಿ ನಮ್ಮ ರೈತ. ಕರ್ನಾಟಕದಲ್ಲಿ ಸರಣಿಯಾಗಿ ಪ್ರತಿ ಜಿಲ್ಲಾವಾರು ಸರಾಸರಿ 10 ರಿಂದ 20 ಜನ ರೈತರ ಆತ್ಮಹತ್ಯೆಯಾಯಿತು. ಈ ವಿಷಯ ಮಾತ್ರ ಮಾನ್ಯ ಸಿದ್ಧರಾಮಯ್ಯನವರ ತಲೆಗೆ ಹೊಕ್ಕಲೇಯಿಲ್ಲ. ರೈತ ಬೆಳೆದ ಬೆಳೆಗೆ ಸೂಕ್ತ ಬೆಲೆ ಪಡೆಯುವುದ್ದಕ್ಕಾಗಿ ರೈತ ಹೋರಾಟವೇ ಮಾಡಬೇಕಾಯಿತು. ರೈತ ಕುಟುಂಬದಿಂದ ಬಂದ ಇವರು ರೈತರ ಸಂಕಷ್ಟಕ್ಕೆ ಪರಿಹಾರ ರೂಪದಲ್ಲಿ ಚೆಕ್ ವಿತರಣೆ ಮಾಡಿದರೆ ವಿನ: ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲಾಗಿದೆ. ರೈತರ ಆತ್ಮಹತ್ಯೆಯೆಂತಹ ಘೋರ ಘಟನೆಗಳು ಇಡಿ ಮನುಕುಲಕ್ಕೆ ಧಕ್ಕೆ ತರುವಂತಾಯಿತು ಪ್ರಪಂಚದ ನಾನಾ ಕಡೆಯಿಂದ ಪ್ರತಿಕ್ರಿಯೆಗಳು ಬಂದವು ಆದರೆ ನಮ್ಮನಾಳುವ ಸರಕಾರ ಹಾಗೂ ಸರಕಾರದ ಪ್ರತಿನಿಧಿಗಳು ಮಾತ್ರ ತಮ್ಮ ನಾಲಿಗೆ ಹರಿಬಿಡುತ್ತ ಹಲವು ಗೊಂದಲಗಳಿಗೆ ಕಾರಣರಾದರು.
ಈ ರಾಜ್ಯದ ಮುಖ್ಯಮಂತ್ರಿಯವರು ಒಬ್ಬ ಹುಟ್ಟು ಹೋರಾಟಗಾರ, ಪ್ರಜೆಗಳ ಸಮಸ್ಯೆಯೆನ್ನು ಅರೆತವರು, ಹಳ್ಳಿಯಿಂದ ಬಂದವರು ಹೀಗೆ ಇವರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇಂತಹ ಒಬ್ಬ ಮುಖ್ಯಮಂತ್ರಿಯು ಇನ್ನಾದರು ತಾವು ಮಾಡುತ್ತಿರುವ ಕೆಲಸಗಳಿಗೆ ಛಾಣಿ ಹಿಡಿದು, ಜನರ ಮನೆ ಬಾಗಿಲಿಗೆ ಯೋಜನೆಗಳು ಹೇಗೆ ತಲುಪಿವೆ ಎಂದು ಯೋಚಿಸಲಿ. ಹೊಸ ಯೋಜನೆಗಳು ಘೋಷಿಸುವ ಮುನ್ನ, ಘೋಷಿಸಿರುವ ಯೋಜನೆಗಳು ಪ್ರಮಾಣಿಕವಾಗಿ ಹಳ್ಳಿಮಟ್ಟದಲ್ಲಿ ನಿಜವಾದ ಫಲಾನುಭವಿಗಳಿಗೆ ತಲುಪಿಯೆ? ಎಂಬ ಕಾರ್ಯ ಕೈಗೆತ್ತಿಕೊಳ್ಳಲಿ. ಪ್ರಜಾಪ್ರಭುಗಳಿಂದ ಅಧಿಕಾರ ಹಿಡಿದ ಪ್ರಭು, ಪ್ರಜೆಗಳ ನೈಜ ಸಮಸ್ಯೆಯೆತ್ತ ಗಮನಕೊಡಲಿ ಎಂಬುವುದಷ್ಟೆ ನನ್ನ ಆಶೆಯ.
-ಕೆ.ಎಂ.ವಿಶ್ವನಾಥ ಮರತೂರ. ಯುವ ಬರಹಗಾರರು. 9686714046