ಕವಿ ತನ್ನ ವ್ಯಕ್ತಿತ್ವದ ಪ್ರಭಾವವನ್ನು ಅತ್ಯಂತ ಸರಳವಾಗಿ ಅಚ್ಚಳಿಯದಂತೆ ಮುದ್ರಣ ಮಾಡುವುದು 'ಭಾವನಿಷ್ಟ' ಕಾವ್ಯಾದಲ್ಲಿ. ಈ ಬಗೆಯ ಕಾವ್ಯದ ಶ್ರೇಷ್ಟ ನಿದರ್ಶನ ಅಥವಾ ಏಕೈಕ ನಿದರ್ಶನ ಭಾವಗೀತೆ. "ಕವಿಯ ಆತ್ಮವು ರಾಷ್ಟ್ರದ ಪೂರ್ಣ ಜೀವನದಿಂದ, ಅದರ ಸ್ಥಿತಿಗತಿಗಳಿಂದ, ಅದರ ಇಚ್ಛೆ ಮತ್ತು ಅಭಿಪ್ರಾಯಗಳಿಂದ, ಅದರ ಭವಿಷ್ಯದಿಂದ ಬೇರೆಯಾಗಿ ನಿಲ್ಲಲು ಸಮರ್ಥವಾದಾಗ, ಕವಿಯ ಚೇತನದಲ್ಲೇ ಅವನ ಸ್ವಂತ ಇಚ್ಛೆ ಮತ್ತು ಭಾವತೀವ್ರ ವಿಭಜನೆ ನಡೆಯಬಲ್ಲ ಶಕ್ತಿ ಉದ್ಬವವಾದಾಗ ಭಾವಗೀತೆ ಮತ್ತು ನಾಟಕಗಳು ಸೃಷ್ಟಿಯಾಗಿ ಮಹಾಕಾವ್ಯಾದ ಸ್ಥಾನದಲ್ಲಿ ನಿಂತು ಸಂಪನ್ನವಾದ ಸಾಹಿತ್ಯ ಅಭಿವೃದ್ಧಿಯನ್ನು ಪಡೆದಿದ್ದೇವೆ. ಭಾವಗೀತೆಯ ಪ್ರಕಾರವು ಮನಸ್ಸಿನಾಳಕ್ಕಿಳಿಯುವ ಶಕ್ತಿ ಹೊಂದಿದೆ.
ವ್ಯಕ್ತಿ ಜೀವನ ಸ್ವತಂತ್ರವಾದ ಲೋಕದಲ್ಲಿ ಅಭಿವ್ಯಕ್ತಿಗೊಳ್ಳಲು, ತನ್ನ ಸ್ವಂತ ದರ್ಶನ, ಚಿಂತನ, ಭಾವನ ಇವುಗಳ ಪೂರ್ಣ ವಿಕಾಸಕ್ಕೆ ಅಭಿವ್ಯಕ್ತಿ ನೀಡಲು ಹವಣಿಸುತ್ತೆವೆ. ತನ್ನ ಅತ್ಮಾನುಭವದ ವಸ್ತುವಿಗೆ ಮನದಿಂದ ಭಾವಗೀತಾತ್ಮಕವಾದ ಅಭಿವ್ಯಕ್ತಿಯನ್ನು ನೀಡುತ್ತದೆ. ಕವಿಯ ಭಾವಗಳು ಸಮಯ ಸಂದರ್ಭದಲ್ಲಿ ವಸ್ತು ಪ್ರಾಕೃತಿಕ ಸೌಂದರ್ಯದ ಒಲವನ್ನು ಬಿಚ್ಚಿ ಹೇಳುವ ಪ್ರಯತ್ನ ಮಾಡುತ್ತಾನೆ. “ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತನೆ ಬಳುಕಿನಲ್ಲಿ” ಇಂತಹ ಭಾವಗೀತೆ ನಾಡಿನ ಹಿರಿಮೆಯನ್ನು ತೋರಿಸುತ್ತದೆ. ಈ ನಾಡಿನ ವರ್ಣನೆಯನ್ನು ಪದಪುಂಜಗಳ ಮೂಲಕ ಪೋಣಿಸಿದ ಸರಮಾಲೆಯಾಗಿ ಶಾಶ್ವತವಾದ ಪರಿಣಾಮವನ್ನು ಭಾವಗೀತೆಗಳು ಅಚ್ಚೊತ್ತುತ್ತವೆ.
ಇಂಗ್ಲಿಷಿನ ಲಿರಿಕ್ ಎಂಬ ಪದಕ್ಕೆ ಸರಿಸಮವಾದ ಅರ್ಥಕೊಡುವಂತೆ ಕನ್ನಡದಲ್ಲಿ 'ಭಾವಗೀತೆ' ಎಂಬ ಪದವನ್ನು ನಾವು ಉಪಯೊಗಿಸುತ್ತಿದ್ದೆವೆ ಆದುದರಿಂದ ಈ ಭಾಷೆಯಲ್ಲಿ ಇದರ ಅರ್ಥವೇನು ಎಂಬುದನ್ನು ವಿವೆಚೀಸಬೇಕಾದದ್ದು ಅಗತ್ಯವಾಗಿದೆ. ಇದರ ವಿಷಯದಲ್ಲಿ ಇಂಗ್ಲೀಷ ಸಾಹಿತ್ಯ ನಮಗೆ ಪ್ರೇರಕ ಶಕ್ತಿಯಾದಂತೆ ಆ ಸಾಹಿತ್ಯಕ್ಕೆ ಮೂಲ ಪ್ರೇರಣೆ ದೊರೆತದ್ದು ಗ್ರೀಕ್ ಸಾಹಿತ್ಯದಿಂದ. ಪದ ಕೂಡ ಇದುವರೆಗೆ ನಮಗೆ ತಿಳಿದಿರುವಂತೆ ಅವರದ್ದೆ. ಗ್ರೀಕ್ ಭಾಷೆಯಲ್ಲಿ ಭಾವಗೀತಕಾರ ಎಂದು ಅರ್ಥಕೊಡುವ ಪದ ಲೂರಿಕೋಸ್ ಎಂಬುದು. ಇದು ಲೂರ ಎಂದರೆ ತಂತೀವಾದ್ಯ ಎಂಬ ಪದದಿಂದ ಜನಿಸಿದಿದುದು. ತಂತಿವಾದ್ಯದ ಹಿನ್ನೆಲೆಯಲ್ಲಿ ಹಾಡುವುದಗೋಸ್ಕರವಾಗಿಯೇ ಈ ಗೀತೆಗಳನ್ನು ರಚಿಸುತ್ತಿದ್ದರೆಂದೆ ಈ ಹೆಸರು ಬಂದಿತು ಎನ್ನಬಹುದು.
ಎಲಿಜಿ ಅಥವಾ ಶೋಕಗೀತೆ, ಸಾನೆಟ್, ಓಡ್ ಅಥವಾ ಪ್ರಗಾಥ, ಹಾಡು ಇಡಿಲ್ ಅಥವಾ ಕಿರುಚಿತ್ರ, ಸೀಸ ಪದ್ಯ, ಮುಕ್ತಗಳು, ವಚನ ಕವನಗಳು ಹೀಗೆ ಈ ಭಾವಗೀತೆಗಳ ವಿವಿಧ ವಿಭಾಗಗಳಲ್ಲಿ ಬರೆಯುವ ನಾಡಿನ ಸುಪ್ರಸಿದ್ಧ ಸಾಹಿತಿಗಳನ್ನು ಈ ನಾಡು ಕೊಟ್ಟಿದೆ. ಕವಿ ಕುವೆಂಪುನಂತಹ ಶ್ರೇಷ್ಠ ಸಾಹಿತಿಯ ಭಾವಗೀತೆಗಳನ್ನು ಕೇಳುವ ಪುಣ್ಯವನ್ನು ಈ ನಾಡು ನಮಗೆ ಒದಗಿಸಿದೆ. ಅವರ ಪ್ರಾಕೃತಿಕ ಕಾವ್ಯಶಕ್ತಿಯ ಪರಿಚಯ ಮನುಷ್ಯತ್ವಕ್ಕೆ ಮಾಡಿಕೊಟ್ಟವರು ಕುವೆಂಪು. ನಾಡಿನ ಹೆಸರಾಂತ ಸಾಹಿತಿಗಳ ಭಾವಗೀತೆಗಳು ಮನುಕುಲವನ್ನು ಮನುಷ್ಯತ್ವದ ದಾರಿಯಲ್ಲಿ ಕೊಂಡ್ಯೂಯಲು ಸಹಕರಿಸುತ್ತವೆ.
ಈ ನಾಡಿನ ಹೆಸರಾಂತ ಉದ್ಯಮಿ ಮತ್ತು ಸಾಹಿತಿಯಾದ ಸುದಾಮೂರ್ತಿಯವರು ತಮ್ಮ ಬಾಲ್ಯದಲ್ಲಿ ಬದುಕಿನಲ್ಲಿ ಬೇಸರವಾದಾಗ ಈ ಭಾವಗೀತೆಗಳಿಂದಲೇ ಪ್ರೇರಣೆಗೊಂಡು ತಮ್ಮ ಬದುಕಿನಲ್ಲಿ ಉನ್ನತ ಸ್ಥಾನ ಪಡೆಯಲು ಸಾಧ್ಯವಾಗಿದೆಯಂದು ತಮ್ಮ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅದೆಷ್ಟೊ ಮನಸ್ಸುಗಳಿಗೆ ಈ ಭಾವಗೀತೆಗಳು ಪ್ರೇರಣೆಯಾಗಿವೆ. ಇಂತಹ ಭಾವಗೀತೆಗಳು ಇವತ್ತಿನ ಅವಶ್ಯಕತೆಯಿದೆ ಎನಿಸುತ್ತದೆ ಅಲ್ಲವೆ?