ಮಗಳು ತನ್ನ ತೊರೆದು ಹೋಗುವಳು ಎನ್ನುವುದು ತಿಳಿದಿದ್ದು ತಾಯಿ ಯಾವುದೆ ಮರು ಮಾತಾಡದೆ ತನ್ನ ಎಥಾ ಪ್ರಕಾರದ ಕೆಲಸಕ್ಕೆ ಹೋಗಲು ತಯಾರಾಗುತ್ತಾಳೆ . ಮಗಳಿಗೆ ತಾಯಿ ಯಾವಾಗ ಹೊರಗೆ ಹೋಗುವಳು ಎನ್ನುವುದೆ ಕಾಯುತ್ತಿದ್ದಂತೆ ತೋರುತ್ತಿತ್ತು . ಹೋಗುವಾಗ ತಾಯಿ ಮಗಳಿಗೆ ಹೇಳಿದಳು ” ಮಗಳೆ ನಾನು ನಿನಗೆ ಜೀವನದಲ್ಲಿ ಯಾವುದೆ ಕಡಿಮೆ ಮಾಡಿಲ್ಲ ಎಂದು ಬಾವಿಸಿದ್ದೇನೆ . ನಿನ್ನ ಅಪ್ಪ ತೀರಿಕೊಂಡರು ನಾನೆ ಗಂಡಸಾಗಿ ದುಡಿದು ನಿನ್ನ ಇಪ್ಪತ್ತು ವರ್ಷ ಜೋಪಾನ ಮಾಡಿನಿ , ಮನೆಯಲ್ಲಿ ಹುಷಾರಾಗಿರು ಏನಾದರು ಸಮಸ್ಯೆಯಾದರೆ ತಿಳಿಸು ನಿನಗಾಗಿ ನಿನ್ನ ಬದುಕಿನ ಶ್ರೇಯಸ್ಸಿಗಾಗಿ ನನ್ನ ಸೇವೆ ಸದಾ ಇರುತ್ತದೆ ಯಾವುದೆ ಹಿಂಜರಿಕೆ ಬೇಡಾ ಕೇಳು ಎಂದಳು ” ಮಗಳಿಗೆ ಏನೊ ದುಗುಡ ಅಮ್ಮನಿಗೆ ಎಲ್ಲವು ಅರ್ಥವಾಗಿದೆಯೆ ಅನಿಸಿತು ಹಾಗೆ ಸುಮ್ಮನೆ ತಲೆ ಆಡಿಸುತ್ತ ನಿಂತಳು.
ಬೆಳಿಗಿನ ಜಾವ ಮುಗಿದು ಸೂರ್ಯ ನೆತ್ತಿಗೆ ಬರುವಾಗ ಮೂಬೈಲ್ ರಿಂಗಾಯಿತು ಲೇ ಕತ್ತೆ ಎಷ್ಟೊತ್ತೆ ಕಾಲ್ ಮಾಡೋದು ಯಾಕೆ ಕಾಲ್ ರೀಸಿವ್ ಮಾಡುತ್ತಿಲ್ಲ ಅಂದಾ ಇಲ್ಲ ಕಣೋ ಅಮ್ಮ ಇದ್ದರು ಅದಕ್ಕೆ ನೀ ತಯಾರಾದಿಯಾ ನಾನು ಈಗ ಬಂದೆ ಎಲ್ಲಿಗೆ ಬರಲಿ ಎಂದಳು , ನೀನು ನೇರವಾಗಿ ಬಸ್ ಸ್ಟಾಪ್ ಗೆ ಬಾ ನಾನು ಅಲ್ಲಿಯೆ ಇರುವೆ ಓಕೆ ಬಾಯ್ .
ಹೀಗೆ ಒಡಲ ಜೀವಗಳನ್ನು ಬಿಟ್ಟು ಈ ಪ್ರೀತಿ ಪ್ರೇಮದ ಕಡಲೊಳಗೆ ಬಿದ್ದು ತಮ್ಮ ಜೀವನವೆ ಒಡಕು ಮಾಡಿಕೊಳ್ಳುವ ನಿಟ್ಟಿನಲ್ಲಿ ಹೊರಟ ಈ ಪ್ರೇಮಿಗಳು ಬಂದು ಬೆಂಗಳೂರಿನಲ್ಲಿ ಇಳಿದರು. ಹಲವು ಜನರಿಗೆ ಬದುಕು ಕಟ್ಟಕೊಟ್ಟ ಬೆಂಗಳೂರು ಇವರಿಗೂ ಬದುಕು ಕೊಡಬಹದು ಎಂಬ ನಂಬಿಕೆ ಇಬ್ಬರದು . ತನ್ನ ಗೆಳೆಯರಲ್ಲಿ ಕೆಲವು ದಿನ ಅವಳ ಗೆಳತಿಯರಲ್ಲಿ ಕೆಲವು ದಿನ ಹೀಗೆ ಹಲವು ದಿನಗಳು ಮುಗಿದು ಹೋದವು ಇವನದ್ದು ಕೆಲಸ ಹುಡುಕಾಟವೆ ಒಂದು ದೊಡ್ಡ ಕೆಲಸವಾಗಿ ಪರಿಣಮಿಸಿತು ಹೀಗೆ ಒಂದು ಎರಡು ಮೂರು ತಿಂಗಳು ಕಳಿದು ಹೋದವು ಕೆಲಸ ಹಲವು ಬಾಗಿಲು ತಟ್ಟಿದ ಈತ ಸೋತು ಹೋದ . ಅವಳೊಂದಿಗೆ ಮುಂದಿನ ಬದುಕು ಹೇಗೆ ಎಂಬ ಪರಿಕಲ್ಪನೆ ತಿಳಿಯದಾಯಿತು . ಆದರೂ ಪ್ರೀತಿ ಮಾಡಿದ ತಪ್ಪಿಗೆ ಹೇಗಾದರು ಮಾಡಿ ನಾನು ಅವಳನ್ನು ಬದುಕಿಸುವ ಕೆಲಸ ಮಾಡಲೇಬೇಕು ಎಂದು ನಿರ್ದರಿಸಿದನು. ಕೊನೆಗೆ ಒಂದು ಪುಟ್ಟ ಹೋಟೆಲ್ ನಲ್ಲಿ ಮಾಣಿಯಾಗಿ ಕೆಲಸ ಮಾಡುವ ನಿರ್ದಾರಕ್ಕ ಬಂದನು ಸಮೀಪದ ಹೊಟೆಲ್ ವೊಂದರಲ್ಲಿ ಕೆಲಸ ಪ್ರಾರಂಭವಾಯಿತು ಅಲ್ಲಿಯೆ ಇರುವ ಚಿಕ್ಕ ಮೆನೆಯಲ್ಲಿ ಈ ಪ್ರೇಮಿಗಳ ಪ್ರೀತಿಯ ಜೀವನ ಪ್ರಾರಂಭವಾಯಿತು .
” ಚಿನ್ನ ನಾನು ನಿನ್ನ ತುಂಬಾ ಕಷ್ಟದಲ್ಲಿ ಇಟ್ಟಿನಿ ಅಂತಾ ಬೇಜಾರ ಆಯಿತಾ ನನ್ನ ನಂಬಿ ಬಂದ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳಲು ಆಗಲಿಲ್ಲ ಕಣೆ , ಆದರೂ ತುಂಬಾ ಕಷ್ಟಪಟ್ಟು ಕೆಲಸ ಮಾಡಿ ನಿನ್ನ ಸಲುಹುತ್ತಿರುವೆ ಎಂದ , ಇಲ್ಲ ನೀನು ಹಾಗೆ ಅನಬೇಡಾ ನಾನು ತುಂಬಾ ಹ್ಯಾಪಿಯಾಗಿದ್ದೇನೆ . ನೀನು ಹೇಗೆ ಇಟ್ಟರು ನಾನು ಇರುವೆ ಎಂದಳು ನನ್ನ ಚಿನ್ನ ಕಣೆ ನೀನು ಅಂತಾ ಚೆಕ್ ಅಂತಾ ಮುತ್ತು ಕೊಟ್ಟ ಎದೆಗೆ ತಬ್ಬಿಕೊಂಡ.
ಈ ಪ್ರೀತಿಯ ಜೀವನ ಸರಿಯಾಗಿಯೆ ನಡೆದರು ಒಳಗೊಳಗೆ ಏನೊ ತುಡಿತ ಯಾವುದೊ ಮಿಡಿತ ನಾವು ತಪ್ಪು ಮಾಡಿದೇವೊ ಎನ್ನುವ ನೋವು ಹೀಗೆ ಏನೆಲ್ಲ ಯೋಚನೆ ಜೀವನದಲ್ಲಿ ಎಲ್ಲವು ನಾವು ಅಂದುಕೊಂಡತ್ತೆ ಆದರೆ ಎಷ್ಟು ಚೆಂದ ಅಲ್ಲಾ ಆದರೆ ಅದು ಹಾಗೆ ಆಗುವುದಿಲ್ಲ ಕೆಲವೊಮ್ಮೆ ವಿಧಿಗೆ ಇಷ್ಟವಿರುವುದಿಲ್ಲ. ಈ ಇಬ್ಬರ ಪ್ರೇಮಿಗಳ ಜೀವನದಲ್ಲಿ ಚಿಕ್ಕ ಘಟನೆಯೊಂದು ನಡೆಯಿತು.
ಹುಡುಗನಿಗೆ ಬೇಗಾ ಶ್ರೀಮಂತನಾಗುವ ಬಯಕೆ ಮೂಡಿತು, ದಾರಿ ಯಾವುದೆ ಆದರು ಸರಿ ನಾನು ಆದಷ್ಟು ಬೇಗಾ ಹಣ ಮಾಡಬೇಕು ಇಲ್ಲಿಂದ ಬೇರೆ ಕಡೆಗೆ ಹೋಗಬೇಕು ಎನ್ನುವ ಹುಚ್ಚು ಬಯಕೆಯಲ್ಲಿ ಹುಡುಗ ಹೋಟೆಲ್ ನಲ್ಲಿ ಆಗಾಗ ಕಳುವು ಮಾಡಲು ಪ್ರಾರಂಭಿಸಿದ ಹೀಗೆ ಕೆಲವು ದಿನಗಳು ಯಾರಿಗೂ ಈ ಸುದ್ದಿ ತಿಳಿಯದೆ ಹೋಯಿತು . ನಾವು ಮಾಡುವ ತಪ್ಪು ಎಷ್ಟು ದಿನ ತಾನೆ ಮುಚ್ಚಿಕೊಳ್ಳು ಸಾದ್ಯ ಎಂಬಂತೆ ಒಂದು ದಿನ ಹೋಟೆಲ್ ಮಾಲಿಕ ಈ ಹುಡುಗನ ಕಳ್ಳತನ ಪತ್ತೆಹಚ್ಚಿಯೆ ಬಿಟ್ಟ ಬೇಕಂತಲೇ ಹೆಚ್ಚನ ಹಣ ಅವನ ಕೈಯಲ್ಲಿ ನೀಡಿ ಅವನನ್ನು ಕಳುವಿಗೆ ದೂಡಿ ಕೊನೆಗೆ ಪೋಲಿಸರಿಗೆ ಪಪ್ಪಿಸಿದ . ಈಗ ಹುಡುಗ ಜೈಲಿನಲ್ಲಿ .
ಇತ್ತ ಹುಡುಗಿ ಅವನ ಬರುವ ದಾರಿಯಲ್ಲಿಯೆ ಕಾಯ ತೊಡಗಿದಳು . ಕತ್ತಲಾದರು ಬರಲೇಯಿಲ್ಲ ಕೊನೆಗೆ ಹೋಟೆಲ್ ಹೋಗಿ ನಿಂತಾಗ ಇವಳನ್ನು ಕಂಡ ಮಾಲಿಕ ಹೇಳಿದ ” ಈಗ ಇಲ್ಲಿಯವರೆಗೆ ನಿನ್ನ ಗಂಡ ಕಳುವು ಮಾಡಿದ ಈಗ ನೀನು ಬಂದಿಯಾ ಎಂದು ಛೇಡಿಸಿದ ” ಆಗಲೇ ಅವಳಿಗೆ ಹೊಳಿಯಿತು ನನ್ನ ಗಂಡ ಇಲ್ಲಿಯವರೆಗೂ ನನ್ನ ಸಾಕಿದ್ದು ಕಳುವು ಮಾಡಿಯೆ ಅಂತಾ . ವಿಷಯ ತಿಳಿದು ಜೈಲಿಗೆ ಹೋದ ಹುಡುಗಿ ಅಲ್ಲಿನ ಅಧಿಕಾರಿಗಳಿ ಅಂಗಲಾಚಿ ಬೇಡಿಕೊಂಡಳು . ಅವರು ಒಂದಿಷ್ಟು ರುಪಾಯಿಗಳನ್ನು ತರಲು ಹೇಳಿದರು. ಆಗ ಅವಳು ತನ್ನ ವಸ್ತ್ರಾಭರಣಗಳನ್ನು ಎಲ್ಲವು ಮಾರಿ ಅವನನ್ನು ಬಿಡಿಸಿಕೊಂಡು ಹಹೊರಬಂದಳು.
ರಾತ್ರಿ ಹೊತ್ತಿನಲ್ಲಿ ಇಬ್ಬರು ಒಂದು ನಿರ್ಧಾರಕ್ಕೆ ಬಂದರು ನಾವು ಈಗ ಅಮ್ಮನ ಮನೆಗೆ ಹೋಗೋಣಾ ಈಗ ಅಮ್ಮನ ಕೋಪ ಆರಿ ಹೋಗಿರುತ್ತದೆ . ನಿಮ್ಮ ಮನೆಯಲ್ಲು ಈ ಎಲ್ಲರು ಶಾಂತರಾಗಿರುತ್ತಾರೆ . ಯಾರು ಏನು ಅನ್ನುವುದಿಲ್ಲ ಹೋಗೋಣವೆ ಎಂದು ಹುಡುಗಿ ಕೇಳುತ್ತಾಳೆ . ಆಗ ಸರಿ ನಾಳೆ ಬೇಗಾ ತಯಾರಾಗು ಮಾನು ಮಾಡಿದ ಕರ್ಮಕ್ಕೆ ಇಲ್ಲಿ ಯಾರು ಕೆಲಸ ಕೊಡುವುದಿಲ್ಲ ಅಲ್ಲಿಯೆ ಅಪ್ಪ ಅಮ್ಮನ ಹತ್ತಿರ ಕ್ಷಮೆ ಕೇಳಿ ಅಲ್ಲಿಯೆ ಇರೋಣಾ ಎಂದನು.
ಬೆಳಿಗ್ಗೆ ಇಬ್ಬರ ಪಯಣ ತಮ್ಮ ತಂದೆ ತಾಯಿಗಳ ಮನೆಗೆ ಹೊರಟಿತು. ಮೊದಲು ಹುಡುಗಿಯ ಮನೆಗೆ ಹೋಗುವ ಯೋಜನೆ . ಅವರಿಬ್ಬರು ಬಸ್ ಲ್ಲಿ ಕೂತು ಕಣ್ಮುಚ್ಚಿ ಪ್ರೇಮ ಲೋಕದಲ್ಲಿ ವಿಹರಿಸುತ್ತ ಕಣ್ತರೆದಾಗ ಅವಳ ತಾಯಿ ಊರು ಬಂದೆ ಬಿಟ್ಟಿತು .
ಅವ್ವನ ಮನೆಯ ಕಡೆಗೆ ಹೆಜ್ಜೆ ಹಾಕುತ್ತಿದ್ದ ಈ ಇಬ್ಬರು ಪ್ರೇಮಿಗಳನ್ನು ಗಮನಿಸಿದ ಊರಿನ ಜನರೆಲ್ಲ ವಿಚಿತ್ರವಾಗಿ ನೋಡತೊಡಗಿದರು . ಇವರಿಬ್ಬರು ಎಂತಹ ಕೆಟ್ಟವರು ಎನ್ನುವ ಹಾಗೆ ಜನರ ನೋಟವಿತ್ತು . ತನ್ನ ಮನೆಯ ಮುಂದೆ ಬಂದು ನಿಂತಳು ಮನೆಯ ಬಾಗಿಲು ಹಾಕಿತ್ತು ಮನೆಯ ಮುಂದೆ ಎಷ್ಟೊ ದಿನಗಳಿಂದ ಕಸ ಗುಡಿಸದೆ ಹಾಗೆ ಉಳಿದಿತ್ತು ಮನೆಯ ದೃಶ್ಯ ನೋಡಿದರೆ ಹಲವು ದಿನಗಳು ಯಾರು ವಾಸವಿಲ್ಲ ಅನಿಸಿತು . ಇವರಿಬ್ಬರನ್ನು ನೊಡಿದ ಒಬ್ಬ ವಯೋವೃದ್ಧ ಅಲ್ಲಿಗೆ ಬಂದು ಅವಳ ಕೈಯಲ್ಲಿ ಕೆಲವು ಕಾಗದ ಪತ್ರವಿಟ್ಟು ತಾನು ಯಾರು ಎಂದು ಹೇಳದೆ ನಡೆದು ಹೋದ . ಅದನ್ನು ಬಿಚ್ಚಿದಾಗ ಅದರಲ್ಲಿ ಅವ್ವ ಬರೆದ ಚಿಕ್ಕ ಪತ್ರವೊಂದು ಅದರಲ್ಲಿ ಇತ್ತು ಅದರ ಸಾರ ನೀವೆ ಓದಿ ನೋಡಿ……..
ಪ್ರೀಯ ಮಗಳೆ ….. ನಾನು ನಿನ್ನಷ್ಟು ಓದಿದವಳು ಅಲ್ಲಮ್ಮ ಆದರು ನಿನ್ನ ತಾಯಿ ಆಗಿರುವುದರಿಂದ ನನಗೆ ಅನಿಸಿದ ಹಾಗೂ ನನ್ನ ಮಗಳು ಸುಖವಾಗಿರಬೇಕಾದರೆ ಏನು ಮಾಡಲಿ ಎನ್ನುವ ತವಕದಿಂದ ಈ ಮಾತು ಹೇಳುತ್ತಿರುವೆ . ನೀನು ಹುಟ್ಟಿದ ಮರುಕ್ಷಣವೆ ಕುಡುಕ ಕೆಡುಕನಾದ ನಿನ್ನ ತಂದೆ ನನ್ನ ಒಬ್ಬಂಟಿಯಾಗಿ ಮಾಡಿ ಹೋದ ಅವನ ಪ್ರೀತಿಯಂತು ನನ್ನ ಜೀವನದಲ್ಲಿ ಆ ಬ್ರಹ್ಮ ಬರೆಯಲೇ ಇಲ್ಲ . ನಿನ್ನ ನೋಡಿ ನನ್ನ ಬದುಕು ಕಳಿಯಬಹುದು ಎಂದು ತಿಳಿದೆ . ಅದರಲ್ಲಿಯೆ ನಾನು ಆನಂದ ಹೊಂದಿದೆ . ನಮ್ಮ ತಂದೆ ತಾಯಿ ಯಾವುದೊ ಆಮಿಷ್ಯಕ್ಕೆ ಒಳಗಾಗಿ ನನ್ನ ಇಂತಹ ಗಂಡನಿಗೆ ಬಲಿಕೊಟ್ಟರು ಜೀವನ ಪರಿಯಂತ ಕಷ್ಟನಷ್ಟಗಳೆ ಆದವು . ನೀ ಹುಟ್ಟಿದ ತಕ್ಷಣ ಎಲ್ಲವು ನಿನ್ನ ಮುಖ ನೋಡಿ ಮರೆತೆ ಬಿಟ್ಟೆ ತಾಯಿಗೆ ಮಗಳು ಆಸರೆಯಾಗುವಳು ಎನ್ನುವ ಬಲವಾದ ನಂಬಿಕೆಯಲ್ಲಿ ಜೀವನದ ಬಂಡಿ ಸಾಗಿಸಿದೆ . ನೀನು ಚಿಕ್ಕಂದಿನಲ್ಲಿ ಅಪ್ಪ ಎಲ್ಲಿ ಎಂದು ಕೇಳಿದಾಗಲೆಲ್ಲ ನನ್ನ ಯವ್ವನ ಹೇಳುತ್ತಿತ್ತು ನೀನು ಮತ್ತೆ ಮದುವೆಯಾಗು ಎಂದು ಆದರೆ ನನ್ನ ಮನಸ್ಸು ಮಾತ್ರ ಇದು ಸರಿಯಾದ ಕ್ರಮವಲ್ಲ ನಿನಗೆ ತಾಯಿ ತಂದೆ ಇಬ್ಬರು ನಾನೆ ಎಂದು ಹೆಳುತ್ತಾ ಬಂದೆ ಹೊಸದಾಗಿ ಬಂದೆಯಿಂದ ನಿನ್ನ ಬದುಕಿನ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂದು ವಿಚಾರಿಸಿ ದಿಗಿಲಾದೆ ನನ್ನ ಯವ್ವನದ ಮಾತು ಕೇಳದೆ ನಿನ್ನ ಜೋಪಾನ ಮಾಡಿದೆ . ನೀನು ಹಾಲು ಕುಡಿದು ಆಡುವ ಹೊತ್ತಿಗೆ ನನ್ನ ಬದುಕಿನ ಎಷ್ಟೊ ಸುಖಗಳನ್ನು ಮರೆತು ನಿನಗಾಗಿ ನಿನ್ನ ಶ್ರೇಯಸ್ಸಿಗಾಗಿ ನನಗೆ ಸಿಗದ ಬದುಕೊಂದು ನಿನಗೆ ಸಿಗಲಿ ಎಂದು ಪರಿತಪಿಸಿದೆ . ಹಗಲು ರಾತ್ರಿ ಒಂದೆ ಸಮನೆ ದುಡಿದೆ . ನಿನಗಾಗಿ ಏನಾದರು ಮಾಡಲೇ ಬೇಕು ಎನ್ನುವ ಛಲದಲ್ಲಿ ನನ್ನ ಜೀವನ ಸೆವೆಸಿದೆ. ಈ ಪತ್ರ ನೀನು ಓದುವೆಯೊ ಇಲ್ಲವೊ ತಿಳಿಯದು ಆದರೆ ನನ್ನ ಮನಸ್ಸಿನ ಭಾಗವೆ ಆಗಿರುವ ನೀನು ನನ್ನ ಮಾತು ಅರ್ಥ ಮಾಡಿಕೊಳ್ಳುವೆ ಎಂದು ಹೇಳಿರುವೆ . ಮಗಳೆ ನೀನು ಜೀವನದಲ್ಲಿ ಸೋತು ಸುಣ್ಣಾವಾಗಬಾರದು ನಿನ್ನ ಜೀವನ ಸುಗಮವಾಗಲಿ ಎಂದೆ ನಿನಗಾಗಿ ಒಂದಿಷ್ಟು ಎಲ್ .ಐ.ಸಿ. ಮಾಡಿಸಿದ್ದೀನಿ ಅದರ ಕಾಗದ ಪತ್ರ ಇಲ್ಲವೆ , ನಿನಗೆ ಮದುವಾ ಮಾಡಿಕೊಡಲು ಒಂದಿಷ್ಟು ಹಣ ವರದಕ್ಷಣೆ ರೂಪದಲ್ಲಿ ಇದರಲ್ಲಿವೆ , ನಿನ್ನ ಡಾಕ್ಟರೊ ಇಂಜಿನಿಯರೊ , ಏನಾದರು ಮಾಡಬೇಕು ಅಂತಾ ನಿನ್ನ ಓದಿಗಾಗಿಯೆ ಒಂದಿಷ್ಟು ಹಣ ಇಟ್ಟಿದ್ದೇನೆ ತೆಗೆದುಕೊ . ಮಗಳೆ ನಾನು ಸಾಯುವಾಗ ನನಗೆ ನನ್ನ ಬಗ್ಗೆ ಚಿಂತೆಯಾಗಲಿಲ್ಲ ಆದರೆ ನಿನ್ನ ಜೀವನ ಹೇಗಿರಬಹುದು ಎಂಬ ಕಲ್ಪನೆ ಮಾಡಿಕೊಂಡು ಹುಚ್ಚಾಳಾದಂತೆ ಭಾಸವಾಯಿತು . ನೀನು ನಾಳೆ ನನ್ನ ಬಿಟ್ಟು ಹೋಗುವೆಯಂದು ತಿಳಿದಾಗ ನನ್ನ ಮಗಳಿಗೆ ನನ್ನ ಪ್ರೀತಿಯಲ್ಲಿ ಯಾವುದೊ ಕಡಿಮೆಯಿದೆ ಅನಿಸಿದೆ ಅದಕ್ಕಾಗಿ ಹೋದಳು ಎಂದು ದು:ಖಿತಳಾದೆ . ಏನೆ ಆಗಲಿ ಎಲ್ಲಿಯೆ ಇರಲಿ ನನ್ನ ಮಗಳು ನನ್ನ ಹಾಗೆ ಹೀನಾಯ ಬದುಕು ನಡೆಸದೆ ರಾಣಿಯಾಗಿ ಮರೆಯಲಿ ಎಂದು ಕನಸ್ಸು ಕಂಡ ನತದೃಷ್ಟ ತಾಯಿ ನಾನು ನಿನಗೆ ಪ್ರೀತಿಕೊಟ್ಟು ಉಳಿಸಿಕೊಳ್ಳಲು ಸಾದ್ಯವಾಗಲಿಲ್ಲ . ಜೀವನದಲ್ಲಿ ಎಂದಾದರೂ ನನ್ನ ಪ್ರೀತಿಯ ನೆನಪಾಗಿ ಈ ಮನೆಗೆ ಬಂದರೆ ಬಾ ಮಗಳೆ ಇದು ನಿನಗಾಗಿ ನಾನು ನೀಡುವ ಪ್ರೀತಿಯ ಕಾಣಿಕೆ . ಹಾಗೆ ನನ್ನ ಅಳಿಯನಿಗೂ ಈ ಮನೆಗೆ ಸ್ವಾಗತವಿದೆಯಂದು ತಿಳಿಸು . ನಿನ್ನ ಬರಮೆಯ ನಿರೀಕ್ಷೆಯಲ್ಲಿ ನಿನ್ನ ತಾಯಿ ……………. ಈ ಪತ್ರ ಓದಿದ ಇಬ್ಬರು ಗಳಗಳನೆ ಅಳತೊಡಿಗಿದರು . ತಂದೆ ತಾಯಿಯ ನೈಜ ಪ್ರೀತಿ ಅರೆಯದೆ ಹೋದರು . ಕೊನೆಗೆ ಇಬ್ಬರು ಹುಡುಗನ ತಂದೆ ತಾಯಿಯ ಹತ್ತಿರ ಹೋಗಿ ಕ್ಷಮೆ ಕೇಳಿ ಮುಂದಿನ ಜೀವನಕ್ಕೆ ಹಾದಿ ಮಾಡಿಕೊಡಲು ಕೋರಿದರು ಕರುಣಾಮಯಿ ತಂದೆ ತಾಯಿಯರು ” ಹಡೆದವರಿಗೆ ಹೆಗ್ಗಣವು ಮುದ್ದು ಎನ್ನುವಂತೆ ಇಬ್ಬರ ಈ ಪ್ರೀತಿ ಒಪ್ಪಿಕೊಂಡು ಮುಂದಿನ ಜೀವನ ಇಲ್ಲಯೆ ಕಳಿಯಲು ಹೇಳಿದರು ” ಆಗ ಇಬ್ಬರು ತಂದೆ ತಾಯಿಯ ಪ್ರೀತಿಯಲ್ಲಿ ತಮ್ಮ ಪ್ರೀತಿ ಬಹಳ ಚಿಕ್ಕದು ಎಂದು ಅರೆತು ಬಾಳ ತೊಡಗಿದರು .
ಪ್ರೀಯ ಓದುಗರೆ ನಾವು ಯುವಕರು ನಮ್ಮ ಈ ಯವ್ವನದ ಸುಳಿಯಲ್ಲಿ ಸಿಕ್ಕು ಎಷ್ಟೆ ಪ್ರೀತಿ ಮಾಡಿದರು ನಮಗೆ ತಂದೆ ತಾಯಿಯ ಪ್ರೀತಿಯ ಎತ್ತರ ಅಳಿಲಾಗದು . ಅದರಂತೆ ಬೆಳಿಯಲಾಗದು . ಅಮ್ಮ ಅಪ್ಪ ಏನೆ ಮಾಡಿದರು ಅದು ನಮ್ಮ ಸುಖಕ್ಕಾಗಿಯೆ ಹೊರತು ಬೇರಾರ ಸುಖಕ್ಕೆ ಅಲ್ಲಾ ಅವರಿಗೆ ನಾವು ಬಿಟ್ಟರೆ ಯಾರು ಇರುವುದಿಲ್ಲ . ಅವರು ಕಳಿದುಕೊಂಡ ಜೀವನ ನಮಗೆ ಕೊಡಲು ಅವರು ಕಳೊದುಕೊಂಡ ಆಸೆಗಳನ್ನು ನಮಗೆ ಕೊಡಲು ಇಷ್ಟ ಪಡುತ್ತಾರೆ ನಾವು ಅವರನ್ನು ಅವರನ್ನು ಪ್ರೀತಿಯನ್ನು ಅರ್ಥಮಾಡಿಕೊಳ್ಳಬೆಕಷ್ಟೆ . ಈ ವ್ಯಾಮೋಹ ಪ್ರೀತಿ ಕ್ಷಣಿಕ ಎಂದು ತಿಳಿಯಿರಿ ಅದಕ್ಕಾಗಿ ತಂದೆ ತಾಯಿಯ ಪ್ರೀತಿ ಕಳಿದುಕೊಳ್ಳಬೇಡಿ . ಏಕೆಂದರೆ ” ಹಡೆದವರ ಪ್ರೀತಿ ಹತ್ತು ಸಾಗರದಷ್ಟು , ಹರೆಯದವರ /ಪಡೆದವರ ಪ್ರೀತಿ ಕೆರೆ ನೀರಿನಷ್ಟು “ ಆದಷ್ಟು ಬೇಗಾ ಬತ್ತಿ ಹೋಗುತ್ತದೆ . ಯೋಚಿಸಿ ಸದಾ ಹತ್ತಿ ಉರಿಯುವ ಪ್ರಜ್ವಲಿಸುವ ಪ್ರೀತಿ ಬೇಕೊ ಇಲ್ಲ ಹತ್ತಿ ಬಹುಬೇಗಾ ಬತ್ತಿ ಹೋಗುವ ಪ್ರೀತಿ ಬೇಕೊ ……………