ಭಾರತ ಬೆಳೆಯುತ್ತಿದೆ. ಬದಲಾಗುತ್ತಿದೆ. ಎಂಬ ಜಾಹಿರಾತುಗಳನ್ನು ಇತ್ತೀಚೆಗೆ ಹೆಚ್ಚಾಗುತ್ತಿವೆ. ಮೋದಿ ಸರಕಾರ ಅಧಿಕಾರಕ್ಕೆ ಬಂದಮೇಲೆ ಈ ರೀತಿಯ ಜಾಹಿರಾತುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿರುವುದು ಕಂಡುಬರುತ್ತದೆ. ಅದಕ್ಕೆ ಕಾರಣ ಮೋದಿ ಸರಕಾರ ಹೊರತಂದಿರುವ ಹಳೆ ಬೇಕು ಹೊಸ ಚಿಗುರು ಭರವಸೆಯ ಹಲವಾರು ಯೋಜನೆಗಳು ಎಂದು ಹೇಳಬಹುದಾಗಿದೆ. ವಿಶ್ವದಲ್ಲಿ ಅತಿ ಹೆಚ್ಚಿನ ಜನಸಂಖ್ಯೆ ಇರುವ ನಗರಗಳ ಪೈಕಿ ದೆಹಲಿಗೆ ಎರಡನೇ ಸ್ಥಾನ ಸಿಕ್ಕಿದೆ. ದೆಹಲಿಯ ಜನಸಂಖ್ಯೆ 1990ರ ನಂತರ ದ್ವಿಗುಣಗೊಂಡಿದೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ. ದೆಹಲಿ ಈ ದೇಶ ಕಂಡ ಒಂದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ ಮತ್ತು ಸದ್ಯಕ್ಕೆ ದೆಹಲಿಯ ಜನಸಂಖ್ಯೆ 2.5 ಕೋಟಿ. 3.8 ಕೋಟಿ ಜನರಿರುವ ಜಪಾನ್ನ ಟೋಕಿಯೊ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಇರುವ ನಗರವಾಗಿದ್ದು ಮೊದಲ ಸ್ಥಾನ ಪಡೆದಿದೆ. ಭಾರತದಲ್ಲಿ ಈಗ 41 ಕೋಟಿ ಜನರು ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. 2050ರೊಳಗೆ ಈ ಸಂಖ್ಯೆ 81 ಕೋಟಿ ಆಗಬಹುದು ಎಂಬ ಅಂದಾಜಿದೆ. ಬೆಳವಣಿಗೆ, ವಿಸ್ತರಣೆ ಹಾಗೂ ವಲಸೆಯಿಂದಾಗಿ ನಗರಗಳ ಜನಸಂಖ್ಯೆ ಏರುತ್ತಲೇ ಸಾಗುತ್ತಿದೆ ಎಂಬುದು ಗಮನಿಸಬೇಕಾದ ವಿಷಯವಾಗಿದೆ.
ಬೆಂಗಳೂರು, ಮುಂಬೈ, ಕೋಲ್ಕತ್ತ, ಅಹಮದಾ¬ಬಾದ್, ಚೆನ್ನೈ ಹಾಗೂ ಹೈದರಾಬಾದ್ ನಗರಗಳು ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರುವ ನಗರಗಳಾಗಿ ಬೆಳೆದಿವೆ. 2011ರ ಜನಗಣತಿಯ ಪ್ರಕಾರ, ಕರ್ನಾಟಕದಲ್ಲಿ ಶೇ 35ರಷ್ಟು ಜನಸಂಖ್ಯೆ ನಗರ ಹಾಗೂ ಪಟ್ಟಣಗಳಲ್ಲಿಯೇ ಮುಳಗಿವೆ. ನಗರೀಕರಣದ ಪ್ರಕ್ರಿಯೆ ತ್ವರಿತ ಗತಿಯಲ್ಲಿ ಸಾಗುತ್ತಿದೆ ಎಂಬುದಕ್ಕೆ ಇದು ದ್ಯೋತಕ. ಭಾರತ ಎಂದರೆ `ಗ್ರಾಮ ಭಾರತ', `ಕೃಷಿ ಸಮಾಜ' ಎಂಬಂತಹ ವಿವರಣೆಗಳು ಬದಲಾಗುತ್ತಿವೆ ಎಂಬುದರ ಚಿತ್ರಣವನ್ನೂ ಇವು ಕಟ್ಟಿಕೊಡುತ್ತವೆ. ಈ ಬದಲಾವಣೆ ಪ್ರಕ್ರಿಯೆ ಒಂದೆಡೆ ಸವಾಲುಗಳನ್ನು ಸೃಷ್ಟಿ¬ಸುತ್ತಿದೆ. ಮತ್ತೊಂದೆಡೆ ಅವಕಾಶಗಳ ಬಾಗಿಲುಗಳನ್ನೂ ತೆರೆಯುತ್ತಿದೆ. ಈ ಸವಾಲನ್ನು ಸರಿಯಾಗಿ ನಿರ್ವಹಿಸಿದರೆ ಭಾರತದ ಆರ್ಥಿಕ ಪ್ರಗತಿಯ ಯಶ¬ಸ್ಸಿಗೆ ನಗರೀಕರಣ ಮುಖ್ಯ ಸಾಧನವಾಗುತ್ತದೆ. ವಿಶ್ವದಾದ್ಯಂತ ಆಗಿ¬ರುವ ಬೆಳವಣಿಗೆಯೂ ಇಂತಹದ್ದೇ ಮಾದರಿಯದ್ದಾಗಿದೆ. ಹೀಗಾಗಿ ನಗರೀಕರಣ ಅನಿವಾರ್ಯ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಈ ಬೆಳವಣಿಗೆಯ ಜೊತೆಗೆ ಸಮಸ್ಯೆಗಳ ಆಗರವನ್ನು ಹೊತ್ತು ತರುತ್ತಿರುವುದು ನಾವೆಲ್ಲ ಮರೆಯುವ ವಿಷಯವಲ್ಲ.
ಭಾರತದ ಅನೇಕ ನಗರಗಳಲ್ಲಿರುವ ಜನಸಂಖ್ಯೆ, ಹಲವು ರಾಷ್ಟ್ರಗಳಲ್ಲಿನ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚಿದೆ. ಹೀಗಾಗಿ ನಗರೀಕರಣದಿಂದ ಸಂಪನ್ಮೂಲಗಳ ಮೇಲೆ ಬೀಳುವ ಒತ್ತಡಗಳು ಅಗಾಧ. ಬೆಳೆಯುವ ನಗರಗಳಿಗೆ ಉತ್ತಮ ಮೂಲ ಸೌಕರ್ಯಗಳನ್ನು ಒದಗಿಸಬೇಕಾದ ಸವಾಲು ದೊಡ್ಡದು. ನಗರಗಳು ಎಂದೂ ಕೊಳೆಗೇರಿ ಕೂಪಗಳಾಗಬಾರದು. ಇದಕ್ಕಾಗಿ ವಸತಿ, ಸಾರಿಗೆ, ವಿದ್ಯುತ್, ನೀರು, ಆರೋಗ್ಯ ಸೌಕರ್ಯಗಳು ಹೆಚ್ಚಾಗಬೇಕು. ಗ್ರಾಮೀಣ ಪ್ರದೇಶಗಳಿಗಿಂತ ನಗರಗಳಲ್ಲಿ ಅಪರಾಧ ಚಟುವಟಿಕೆ ಹೆಚ್ಚಿರುವುದು ಸಾಮಾನ್ಯ ಸಂಗತಿ. ಇದರ ನಿಯಂತ್ರಣಕ್ಕೆ ಪೆÇಲೀಸ್ ವ್ಯವಸ್ಥೆಗೆ ಹೆಚ್ಚಿನ ಬಲ ಬೇಕು.
ವಾಯು, ಜಲ ಮಾಲಿನ್ಯಗಳ ಜೊತೆ ಕಸ ವಿಲೇವಾರಿ ಸೃಷ್ಟಿಸುವ ಪರಿಸರ ಸಮಸ್ಯೆಗಳು ನಗರೀಕರಣದ ಮತ್ತೊಂದು ಮುಖ. ಇವೆಲ್ಲದರ ದಕ್ಷ ನಿರ್ವಹಣೆಗೆ ಸಮರ್ಥ ಸ್ಥಳೀಯ ಆಡಳಿತ ಅಗತ್ಯ. ನಗರೀಕರಣ ಪ್ರಕ್ರಿಯೆ ಸದ್ಯಕ್ಕೆ ಕೆಲವೇ ನಗರಗಳಿಗೆ ಸೀಮಿತವಾಗಿದೆ. ಇದನ್ನು ವಿಸ್ತೃತಗೊಳಿಸಲು 100 `ಸ್ಮಾರ್ಟ್ ಸಿಟಿ'ಗಳ ಅಭಿವೃದ್ಧಿಗೆ ಬದ್ಧವಾಗಿರುವುದಾಗಿ ಕೇಂದ್ರ ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ 7060 ಕೋಟಿ ತೆಗೆದಿರಿಸಲಾಗಿದೆ. ಗ್ರಾಮೀಣ ಆರ್ಥಿಕತೆಯಿಂದ ನಗರ ಆರ್ಥಿಕತೆಗೆ ಸ್ಥಿತ್ಯಂತರವಾಗುವುದೆಂದರೆ ಹೆಚ್ಚಿನ ಹೂಡಿಕೆ, ಗ್ರಾಹಕ ಚಟುವಟಿಕೆ ಹಾಗೂ ಉಳಿತಾಯಗಳಿಂದ ತ್ವರಿತ ಬೆಳವಣಿಗೆಗೆ ಸಹಕಾರಿಯಾಗುವುದು ಎಂಬಂತೆ¬ಯೂ ವ್ಯಾಖ್ಯಾನಿಸ¬ಲಾಗು¬ತ್ತದೆ. ಹೀಗಾಗಿ ಸಮರ್ಪಕವಾದ ನೀತಿಗಳು ಹಾಗೂ ಯೋಜನೆಗಳೊಂದಿಗೆ, ನಗರೀಕರಣ ಪ್ರಕ್ರಿಯೆಯನ್ನು ಸುಸ್ಥಿರ ಅಭಿ¬ವೃದ್ಧಿಯ ಹೊಸ ಅವಕಾಶವಾಗಿ ಬಳಸಿಕೊಳ್ಳಲು ಗಮನ ನೀಡುವುದು ತುರ್ತು ಅಗತ್ಯ.
ನಗರಗಳಲ್ಲಿ ಕೆಲವು ಪ್ರಮುಖ ಐಟಿ ಸಂಸ್ಥೆಗಳು ಈ ಸಂಸ್ಥೆಗಳಿಂದ ಬೆಂಗಳೂರಿನ ಮೇಲೆ ಆಗಿರುವ ದುಷ್ಪರಿಣಾಮಗಳನ್ನು ನೋಡಿದರೆ ಬೆಂಗಳೂರಿಗೆ ಇವರ ಕೊಡುಗೆಗಿಂತ ಹಾನಿಯೇ ಹೆಚ್ಚಾಗಿದೆ. ಐಟಿ ಉದ್ಯೋಗವನ್ನರಸಿ ಬರುವ ಪರರಾಜ್ಯಗಳವರ ವಲಸೆಯಿಂದ ಬೆಂಗಳೂರಿನ ಜನಸಂಖ್ಯೆ ಮಿತಿಮೀರಿ ನಗರದ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರಿದೆ. ಜನರಿಗೆ ಉದ್ಯೋಗ ಕೊಟ್ಟಿದ್ದಾರೆ ಆದರೆ ಆರೋಗ್ಯ ಕಸಿದುಕೊಂಡಿದ್ದಾರೆ.
ನಗರಗಳಲ್ಲಿ ರಸ್ತೆಗಳಲ್ಲಿ ಸಂಚರಿಸಲು ನರಕ ಯಾತನೆ ಅನುಭವಿಸಬೇಕಾಗಿದೆ. ಎಷ್ಟೇ ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಿದರೂ ಅತಿಯಾದ ವಾಹನ ದಟ್ಟನೆಯಿಂದ ಹಾಗೂ ರಭಸದ ಮಳೆಯಿಂದ ರಸ್ತೆಗಳ ಸ್ಥಿತಿ ಶೋಚನೀಯವಾಗಿದೆ. ಈ ವಾಹನ ದಟ್ಟಣೆಯಿಂದ ವಾಯುಮಾಲಿನ್ಯ, ಶಬ್ದಮಾಲಿನ್ಯ ಹೆಚ್ಚಿ ಬೆಂಗಳೂರಿಗರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗಿದೆ.
ನಗರಗಳಲ್ಲಿ ಮನೆ ಬಾಡಿಗೆ, ನಿವೇಶನ, ಜೊತೆಗೆ ದಿನನಿತ್ಯದ ವಸ್ತುಗಳ ಬೆಲೆಯೂ ಗಗನಕ್ಕೇರಿ ಜನಸಾಮಾನ್ಯರಿಗೆ ಹೊರೆಯಾಗಿದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಐಟಿಯಿಂದ ಬೆಂಗಳೂರಿನಲ್ಲಿ ಜೀವನ ನಿರ್ವಹಣೆಯ ವೆಚ್ಚ ಅತಿ ದುಬಾರಿಯಾಗಿದೆ. ಐಟಿಯೇತರ ಉದ್ಯೋಗಿಗಳಿಗಿಂತ, ಐಟಿ ಉದ್ಯೋಗಿಗಳಿಗೆ ಹೆಚ್ಚು ಸಂಬಳ ಸಿಗುತ್ತದೆಯೆನ್ನುವುದು ಸುಳ್ಳಲ್ಲ. ಆದರೆ ಇದರಿಂದ ಐಟಿ ಉದ್ಯೋಗಿಗಳಲ್ಲಿ ಕೊಳ್ಳುಬಾಕತನ ಹೆಚ್ಚಿ ಸಿಕ್ಕಾಪಟ್ಟೆ ದುಂದುವೆಚ್ಚ ಮಾಡುವುದು ಹೆಚ್ಚಾಗಿದೆ. ಬ್ಯಾಂಕಿನವರು ಕೊಡುವ ವಿವಿಧ ತರಹದ ಲೋನ್ಗಳ, ಕ್ರೆಡಿಟ್ ಕಾರ್ಡುಗಳ ಆಮಿಷಕ್ಕೆ ಬಹಳಷ್ಟು ಮಂದಿ ಐಟಿ ಉದ್ಯೋಗಿಗಳು ಬಲಿಯಾಗಿ ಸಾಲಗಾರರಾಗಿದ್ದಾರೆ.
ದಿನಕ್ಕೆ 10ರಿಂದ 12 ಘಂಟೆ ದುಡಿಯಬೇಕಾಗುತ್ತದೆ. ಹೆಚ್ಚಾಗಿ ಅಮೆರಿಕಾ, ಯೂರೋಪ್, ಆಸ್ಟ್ರೇಲಿಯಾ ಮುಂತಾದ ವಿದೇಶಿ ಕಂಪನಿಗಳಿಗೆ ಕೆಲಸ ಮಾಡಬೇಕಾಗಿರುವುದರಿಂದ ಸಾಮಾನ್ಯವಾಗಿ ಐಟಿ ಉದ್ಯೋಗಿಗಳ ಕೆಲಸದ ಸಮಯ ಆಯಾ ದೇಶಗಳ ಕಚೇರಿ ಸಮಯಕ್ಕೆ ತಕ್ಕಂತೆ ಇರುತ್ತದೆ. ಉದಾ : ಆಸ್ಟ್ರೇಲಿಯಾ ದೇಶಕ್ಕೆ ಸಂಬಂಧಿಸಿದ ಕೆಲಸವಿದ್ದರೆ ಕೆಲಸದ ಸಮಯ ಬೆಳ್ಳಿಗೆ 5 ಘಂಟೆಗೆ ಶುರುವಾಗಿ ಮಧ್ಯಾಹ್ನ ಮುಗಿಯುತ್ತದೆ. ಯೂರೋಪ್ ದೇಶಗಳಲ್ಲಿ ಕೆಲಸದ ಸಮಯ ಮಧ್ಯಾಹ್ನ 2 ಘಂಟೆಗೆ ಪ್ರಾರಂಭವಾಗಿ ರಾತ್ರಿ 11 ಘಂಟೆವರೆಗೂ ಇರುತ್ತದೆ. ಅದೇ ಅಮೆರಿಕವಾದರೆ ಅವರ ದಿನದ ಸಮಯ ಅಂದರೆ ಇಲ್ಲಿ ರಾತ್ರಿಯಲ್ಲಿ ಕೆಲಸಮಾಡಬೇಕಾಗುತ್ತದೆ. ಹೀಗೆ ಬೇರೆ ಬೇರೆ ಸಮಯಗಳಲ್ಲಿ ಕೆಲಸ ಮಾಡುವುದರಿಂದ ಬಹಳಷ್ಟು ಉದ್ಯೋಗಿಗಳ ದೇಹದ ಗಡಿಯಾರದ ಮೇಲೆ ದುಷ್ಪರಿಣಾಮವಾಗಿ ಅವರ ಆರೋಗ್ಯ ಕೆಡುತ್ತದೆ.
ಈ ರೀತಿಯಲ್ಲಿ ಅವೇಳೆಯಲ್ಲಿ ದುಡಿದು ಮನೆಗೆ ಬರುವ ಉದ್ಯೋಗಿಗಳಿಗೆ ಮನೆಯಲ್ಲೂ ಸರಿಯಾಗಿ ನಿದ್ರೆ ಮಾಡಲಾಗದೆ ಅವರ ಸ್ಥಿತಿ ನಿಜಕ್ಕೂ ಶೋಚನೀಯವಾಗಿರುತ್ತದೆ. ಇದು ಐಟಿ, ಬಿ.ಪಿ.ಓ ಅಥವಾ ಕಾಲ್ಸೆಂಟರ್ಗಳಲ್ಲಿ ದುಡಿಯುವ ಬಹಳಷ್ಟು ಮಂದಿಯ ದಿನಚರಿ. ಈ ರೀತಿಯ ದಿನಚರಿಯಿಂದ ಉದ್ಯೋಗಿಗಳಲ್ಲಿ ಮಾನಸಿಕ ಉದ್ವೇಗ ಹೆಚ್ಚಿ ಬೊಜ್ಜು, ಅತಿಯಾದ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಗಳಿಗೆ ತುತ್ತಾಗುವ ಮಂದಿ ಹೆಚ್ಚಾಗುತ್ತಿದ್ದಾರೆ.
ಕಚೇರಿಯಲ್ಲಿ ಒಂದೇ ಸಮನೆ ಗಣಕದ ಮುಂದೆ ಕೂತು ಕೆಲಸ ಮಾಡುವ ಉದ್ಯೋಗಿಗಳಲ್ಲಿ ಕಣ್ಣು ಬೇನೆ, ತಲೆನೋವು, ಬೆನ್ನುನೋವು ಮುಂತಾದವು ಅತಿಯಾಗಿ ಕಾಣಿಸಿಕೊಳ್ಳತೊಡಗಿವೆ. ಇದಕ್ಕೆ ಕಚೇರಿಯಲ್ಲಿನ ಉಸಿರುಗಟ್ಟುವ ವಾತಾವರಣ, ಸರಿಯಾದ ಪೀಠೋಪಕರಣಗಳಿಲ್ಲದಿರುವುದು ಮುಂತಾದವೂ ಕಾರಣವಾಗಿರುತ್ತವೆ. ಒಟ್ಟಿನಲ್ಲಿ ಐಟಿ ಉದ್ಯೋಗಿಗಳ ಜೀವನ ಶೈಲಿಯಲ್ಲಿ ಬಹಳ ಏರುಪೇರಾಗಿದೆ. ಇನ್ನು ಐಟಿ/ಬಿ.ಪಿ.ಓಗಳ ಒತ್ತಡದ ಕೆಲಸದಲ್ಲಿ ದುಡಿದ ಮನಸ್ಸಿಗೆ ಬಿಡುವಿನ ಸಮಯದಲ್ಲಿ ಅಂದರೆ ರಜೆ ಸಿಕ್ಕಾಗ ಮನಸ್ಸನ್ನು ತಣಿಸಲು ಹಾತೊರೆಯುವ ಸ್ಥಿತಿ ನಿಜಕ್ಕೂ ಅಪಾಯಕಾರಿ. ಕುಡಿತ, ಲೈವ್ಬ್ಯಾಂಡ್, ಪಬ್, ಡಿಸ್ಕೋಗಳಿಗೆ ನುಗ್ಗುವವರು ಹೆಚ್ಚಾಗಿದ್ದಾರೆ.
ನಗರಗಳಲ್ಲಿ ನಾಯಿಕೊಡೆಗಳ ಹಾಗೆ ಪಬ್ಬುಗಳು, ಲೈವ್ಬ್ಯಾಂಡ್ಗಳು, ಡಿಸ್ಕೋಗಳು ತಲೆಎತ್ತಿ ಸಮಾಜದ ಸ್ವಾಸ್ಥ್ಯದಮೇಲೆ ಕೆಟ್ಟ ಪರಿಣಾಮ ಬೀರಿದೆ. ಐಟಿ ಉದ್ಯೋಗಿಗಳ ಐಷಾರಾಮಿ ಜೀವನದಿಂದ ಪ್ರಭಾವಿತರಾಗಿ ಕಡಿಮೆ ಸಂಬಳ ಪಡೆಯುವ, ಕೂಲಿ ಮಾಡುವ ಇತರರಿಗೆ, ಅವರಂತೆ ತಾವೂ ಮಜಾಮಾಡಬೇಕೆಂಬ ತುಡಿತ ಹೆಚ್ಚಿ ಕಳ್ಳತನ, ದರೋಡೆ, ಅತ್ಯಾಚಾರ ಮುಂತಾದ ಅಪರಾಧ ಮಾಡುವುದು ಹೆಚ್ಚಾಗಿದೆ. ವಿಶೇಷವೆಂದರೆ ಅವೇಳೆಯಲ್ಲಿ ದುಡಿಯುವ ಐಟಿ ಉದ್ಯೋಗಿಗಳೇ ಈ ಅಪರಾಧಗಳಿಗೆ ತುತ್ತಾಗುತ್ತಿದ್ದಾರೆ.
ಪಬ್ಬು-ಲೈವ್ಬ್ಯಾಂಡಗಳ ನಗರ, ಅಪರಾಧಗಳ ನಗರ, ಕೊಳ್ಳುಬಾಕರ ನಗರ, ಹೊಂಡಗಳ ನಗರ, ಅತಿಕಲುಷಿತ ನಗರ ಮುಂತಾದ ಕುಖ್ಯಾತಿ ಪಡೆದಿದೆ. ಜೊತೆಗೆ ಈಗ ಉಗ್ರಗಾಮಿಗಳ ಕೆಂಗಣ್ಣು ಬೆಂಗಳೂರಿನ ಮೇಲೆ ಬೀಳಲು ಐಟಿಯೇ ಕಾರಣ ಎನ್ನುವುದು ಅತಿಶಯೋಕ್ತಿಯಲ್ಲ.
ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ವಿಫಲರಾಗಿದ್ದಾರೆ. ಪರರಾಜ್ಯಗಳಿಂದ ಅತಿಯಾದ ವಲಸೆ ಹೆಚ್ಚಿ ಕನ್ನಡಿಗರೇ ಇಲ್ಲಿ ಅಲ್ಪಸಂಖ್ಯಾತರಾಗಿದ್ದಾರೆ. ಐಟಿ ಉದ್ಯಮ ಹರಡಿಕೊಂಡಿರುವ ಬೆಂಗಳೂರಿನ ಪೂರ್ವ ಮತ್ತು ದಕ್ಷಿಣದ ಪ್ರದೇಶಗಳಲ್ಲಿ ಎಲ್ಲಿ ಎಡತಾಕಿದರೂ ಹಿಂದಿ, ತಮಿಳು, ತೆಲುಗು, ಬಂಗಾಲಿ, ಮಲಯಾಳಿ ಅಥವಾ ಇತರೇ ಭಾಷಿಕರು ಸಿಗುತ್ತಾರೆ ಹೊರತು ಕನ್ನಡಿಗರು ಸಿಗುವುದು ಬಹಳ ವಿರಳವಾಗಿದೆ.
ನಗರಗಳಲ್ಲಿ ಐಟಿ ಸಂಸ್ಥೆ ಸ್ಥಾಪಿಸಿ ಇಲ್ಲಿನ ನೆಲ, ಜಲ, ಹಿತವಾದ ಹವಾಮಾನ, ಸರ್ಕಾರದಿಂದ ಸೌಲಭ್ಯ, ಉತ್ತೇಜನ ಪಡೆಯುವ ಇವರು ಕನ್ನಡಿಗರಿಗೆ ಉದ್ಯೋಗ ನೀಡದೆ ಬೇರೆ ರಾಜ್ಯದವರನ್ನು ಇಲ್ಲಿ ಕರೆದು ಉದ್ಯೋಗ ಕೊಡುವುದು ಯಾವ ನ್ಯಾಯ. ಅದರ ಬದಲು ಅವರು ಬೇರೆ ರಾಜ್ಯಗಳಲ್ಲೇ ತಮ್ಮ ಸಂಸ್ಥೆಗಳನ್ನು ವಿಸ್ತರಿಸಿ ಅಲ್ಲೇ ಅವರಿಗೆ ಉದ್ಯೋಗ ನೀಡುವುದು ಒಳ್ಳೆಯದಲ್ಲವೆ?
ನಗರದಲ್ಲಿ ದಿನೇ ದಿನೇ ಸಮಸ್ಯೆಗಳು ಹೆಚ್ಚಾಗುತ್ತಿವೆ. ಅಭಿವೃದ್ಧಿ ಎಂಬುದು ಮರೀಚಿಕೆಯಾಗಿಯೇ ಉಳಿದಿದೆ. ಹೆಚ್ಚುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಇಚ್ಛಾಶಕ್ತಿ ಯಾರೊಬ್ಬರಲ್ಲೂ ಇಲ್ಲ. ಸಮಸ್ಯೆಗಳನ್ನು ಜೀವಂತವಾಗಿ ಉಳಿಸಿರುವುದರಿಂದ ನಗರದ ಸಾರ್ವಜನಿಕರು ನಿತ್ಯವೂ ನಾನಾ ರೀತಿಯ ತೊಂದರೆ ಎದುರಿಸುತ್ತಿದ್ದಾರೆ.
ನಗರ ಸೌಂದರ್ಯ ಹೆಚ್ಚಿಸುವ ರಸ್ತೆಗಳು ಹಳ್ಳ- ಗುಂಡಿಗಳಿಂದ ಆವೃತವಾಗಿವೆ. ಸುಗಮ ಸಂಚಾರ ಮಾಯವಾಗಿದೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯಲ್ಲೂ ಅವ್ಯವಸ್ಥೆ ತಾಂಡವವಾಡುತ್ತಿದೆ. ಕಸದ ರಾಶಿ, ಅಶುಚಿತ್ವ, ಗಬ್ಬೆದ್ದು ನಾರುತ್ತಿರುವ ಚರಂಡಿಗಳು, ಬಾಯ್ತೆರೆದ ಮ್ಯಾನ್ಹೋಲ್ಗಳು, ಸ್ವಲ್ಪ ಮಳೆ ಬಂದರೂ ರಸ್ತೆಯಲ್ಲಿ ನಿಲ್ಲುವ ನೀರು, ಸಂಚಾರಕ್ಕೆ ಅಡಚಣೆ ಹೀಗೆ ನಾನಾ ರೀತಿಯ ಸಮಸ್ಯೆಗಳು ಜನರನ್ನು ಕಾಡುತ್ತಿದ್ದರೂ ಪುರಪಿತೃಗಳು, ಜನಪ್ರತಿನಿಧಿಗಳು, ಅಧಿಕಾರಿಗಳು ಕಣ್ಣಿದ್ದೂ ಕುರುಡಾಗಿದ್ದಾರೆ
ನಗರಗಳು ಅಗಾಧ ವೇಗದಿಂದ ಬೆಳೆಯುತ್ತಿವೆ, ಬೆಳೆದಂತೆಲ್ಲಾ ಅದರ ಸಮಸ್ಯಗಳೂ ಬೆಳೆಯುತ್ತಿವೆ. ವಾಹನ ದಟ್ಟಣೆಯ ಸಮಸ್ಯೆ, ವಾಯುಮಾಲಿನ್ಯ, ರಸ್ತೆ ನಿರ್ವಹಣೆ ಮತ್ತು ನಿರ್ಮಾಣ,ಕಸ ವಿಲೇವಾರಿ, ಕುಡಿಯುವ ನೀರನ್ನು ಒದಗಿಸುವುದು ಇತ್ಯಾದಿ.
ಕನ್ನಡಿಗರಿಗೆ ಉದ್ಯೋಗ ನೀಡದ ಈ ಐಟಿ ಸಂಸ್ಥೆಗಳು ಕನ್ನಡನಾಡಿನಲ್ಲಿ ಇರುವುದಕ್ಕಿಂತ ಬೇರೆಕಡೆ ಹೋಗುವುದೇ ಒಳ್ಳೆಯದು. ಬೆಂಗಳೂರಿನಲ್ಲಿ ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿ ಉದ್ಯಮ ಸ್ಥಾಪಿಸಿ, ಅಷ್ಟೇ ಲಾಭಮಾಡಿಕೊಂಡಿರುವ ಈ ಸಂಸ್ಥೆಗಳು, ಮೂಲಸೌಕರ್ಯ ಸರಿಯಿಲ್ಲದ ನೆಪಹೇಳಿ ಬೇರೆ ರಾಜ್ಯಗಳಿಗೆ ಹೋಗುತ್ತೇವೆ ಎಂದು ಸರ್ಕಾರಕ್ಕೆ ಸುಮ್ಮನೆ ಬ್ಲ್ಯಾಕ್ಮೇಲ್ ಮಾಡುತ್ತಿವೆ. ಈಗಿರುವ ಐಟಿ ಸಂಸ್ಥೆಗಳು ಮತ್ತು ಅದರ ಕೆಲಸಗಾರರಿಗೆ ಸರಿಯಾದ ಸೌಲಭ್ಯ ಕಲ್ಪಿಸುವುದಕ್ಕೇ ಸರ್ಕಾರಕ್ಕೆ ಕಷ್ಟವಾಗಿರುವಾಗ, ಈ ಸಂಸ್ಥೆಗಳು ಇಲ್ಲಿ ಇನ್ನೂ ವಿಸ್ತರಣೆ ನಡೆಸಿದರೆÀ ನಗರಗಳ ಸ್ಥಿತಿ ಇನ್ನೂ ಅದ್ವಾನವಾಗುತ್ತದೆ. ಸರ್ಕಾರ ಇನ್ನಾದರೂ ಐಟಿ ಸಂಸ್ಥೆಗಳನ್ನು ಓಲೈಸುವುದನ್ನು ಬಿಟ್ಟು ಕನ್ನಡಿಗರಿಗೆ ಕಡ್ಡಾಯವಾಗಿ ಉದ್ಯೋಗ ಕೊಡಬೇಕೆಂದು ಶಿಫಾರಸ್ಸು ಮಾಡಿರುವ ಡಾ. ಸರೋಜಿನಿ ಮಹಿಷಿ ವರದಿಯ ಜಾರಿಗೆ ಕಟ್ಟು ನಿಟ್ಟಿನ ಕ್ರಮ ತೆಗೆದು ಕೊಳ್ಳಬೇಕು.
ಪರಿಹಾರಗಳು:
1. ಹಳ್ಳಿಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿರುವಂತೆ ಗಮನವಹಿಸಬೇಕು. ಮನುಷ್ಯ ಬದುಕಿಗೆ ಸಿಗಬೇಕಾದ ಎಲ್ಲಾ ಸವಲತ್ತುಗಳನ್ನು ಕೊಡುವಲ್ಲಿ ಸರಕಾರಗಳು ಚುನಾಯಿತ ಪ್ರತಿನಿಧಿಗಳು ಸರಕಾರಗಳು ಮಾಡಬೇಕು. ಬರಿ ದಾಖಲೆಗಳಲ್ಲಿ ಮೂಲಭೂತ ಸೌಕರ್ಯ ಕೊಟ್ಟಿದ್ದೇವೆ ಎನ್ನದೇ ನೈಜವಾಗಿ ಗ್ರಾಮ ಪಂಚಾಯತಿಗೆ ನೀಡಿದ ಅನುದಾನದ ಬಳಕೆ ಹೇಗೆ ಆಗಿದೆಯೆಂಬುವುದು ಗಮನಿಸಿ ಮೇಲ್ವೀಚಾರಣೆ ಮಾಡಬೇಕು.
2. ಹಳ್ಳಿಯ ವಾತಾವರಣ ತಿಳಿಗೊಳಿಸಿ ಹಳ್ಳಿಯ ಬಗ್ಗೆ ಅಭಿಮಾನ ವ್ಯಕ್ತಪಡಿಸುವಂತಹ ಚಟುವಟಿಕೆಗಳನ್ನು ಸರಕಾರ ಹಮ್ಮಿಕೊಳ್ಳಬೇಕು. ಹಳ್ಳಿ ಸೊಗಡನ್ನು ಉಳಿಸಿಕೊಳ್ಳುವ ಕೆಲಸ ಸರಕಾರಗಳು ಮಾಡಬೇಕು. ಪ್ರಾಕೃತಿಕ ವಾತಾವರಣ ಉಳಿಸಿಕೊಂಡು ಅದನ್ನು ಬೆಳೆಸಿಕೊಂಡು ಮುಂದೆ ಸಾಗುವ ಕೆಲಸ ಸರಕಾರದಿಂದ ಆಗಬೇಕಿದೆ.
3. ನಗರಗಳಲ್ಲಿ ಮೊದಲು ಸೌಲಭ್ಯಗಳ ಕಡೆಗೆ ಗಮನಕೊಡಬೇಕು. ನೀರು ನೈರ್ಮಲ್ಯ, ರಸ್ತೆ, ಒಳಚರಂಡಿ, ಗಿಡಮರ, ವಿದ್ಯೂತ್, ಮನೆಗಳು, ವಾತಾವರಣ ಇತ್ಯಾದಿಗಳ ಬಗ್ಗೆ ಮೊದಲೆ ನಿಗಾವಹಿಸಿ ನಗರಗಳನ್ನು ರಚನೆ ಮಾಡಬೇಕು. ನಗರ ಬೆಳೆದು ನಿಂತಾಗ ನಾವು ಮಾಸ್ಟರ್ ಪ್ಲಾನ್ ಮಾಡುವುದಕ್ಕಿಂತ ನಗರ ರಚನೆಯೆ ಮಾಸ್ಟರ್ ಪ್ಲಾನ್ ಆಗಿ ಮಾಡಬೇಕು.
4. ನಗರ ಪ್ರದೇಶಗಳು ಸ್ಲಂಗಳಿಂದ ಮುಕ್ತವಾಗಿರಬೇಕು. ಅಲ್ಲಿರುವ ಸೌಲಭ್ಯಗಳನ್ನು ಬುಡದಿಂದ ಪರಿಹರೆಸುವ ಕೆಲಸವಾಗಬೇಕು. ಸಾರ್ವಜನಿಕ ಸ್ಥಳಗಳನ್ನು ಸರಿಯಾದ ಮೇಲ್ವೀಚಾರಣೆ ಮಾಡಬೇಕಾಗುತ್ತದೆ. ಗುಡಿಸಲುಗಳೆ ಇದ್ದರು ಅವುಗಳ ಸ್ವಚ್ಛತೆ ಅತ್ಯಂತ ಅವಶ್ಯಕವಾಗಿದೆ ಎಂಬ ವಿಷಯ ಸರಕಾರಗಳು ಅರೆಯಬೇಕಿದೆ.
5. ನಗರೀಕರಣ ಮಾಡಲು ಹೊರಟಿರುವ ಸರಕಾರಗಳು ನಗರದ ಸ್ವಚ್ಛತೆಯ ಕಡೆಗೆ ಗಮನಕೊಡದಿರುವುದು ದುರಂತವಾಗಿದೆ. ನಗರಗಳು ರಚನೆಯಾಗುವಾಗ ಮುಂದಿನ ನೂರು ವರ್ಷಗಳ ಇತಿಹಾಸ ಸರಕಾರ ಅಧ್ಯಯನ ಮಾಡಿ ಕ್ರಮ ತೆಗೆದುಕೊಂಡು ಅನುದಾನಗಳನ್ನು ಹಂಚಿಕೆ ಮಾಡಬೇಕು ಆಗ ಮಾತ್ರ ಒಂದು ಒಳ್ಳೆಯ ಸುಂದರ ನಗರ ಸಾಧ್ಯವಾಗುತ್ತದೆ.
ಕೊನೆಯ ತುತ್ತು: ಬೆಳೆಯುತ್ತಿರುವ ಭಾರತ ಇದಾಗಲೆ ಹಲವು ಸಮಸ್ಯೆಗಳ ಗೂಡಾಗಿದೆ. ಪ್ರಸ್ತುತವಾಗಿ ಹೆಚ್ಚು ಹಚ್ಚು ನಗರಗಳು ಬೆಳೆಯುತ್ತಿವೆ. ಹಳ್ಳಿಗಳೆಲ್ಲ ನಗರಗಳಾಗಿ ಪರಿವರ್ತನೆಯಾಗುತ್ತಿವೆ. ಹಳ್ಳಿಗಳಲ್ಲಿನ ಗುಬ್ಬಿ, ಕಾಗೆಗಳು ಮರೆಯಾಗುತ್ತಿವೆ. ನಮ್ಮ ಮುಂದಿನ ಪೀಳಿಗೆಗೆ ಹಲವು ಸಂಕುಲಗಳು ಮರೆಯಾಗತ್ತಿವೆ. ವಾತಾವರಣ ಹದಗೆಡುತ್ತಿದೆ. ಪರಿಸರದಲ್ಲಿ ಅಸಮತೋಲನೆ ಹೆಚ್ಚಾಗುತ್ತಿದೆ. ಉಸಿರಾಡುವಷ್ಟು ಉತ್ತಮವಾದ ಗಾಳಿ ಸಿಗುತ್ತಿಲ್ಲ. ನಡೆದಾಡುವಷ್ಟು ಉತ್ತಮ ನೆಲವಿಲ್ಲ ಹೀಗಾಗಿ ನಗರಗಳು ಬೆಳೆಯುವುದರ ಜೊತೆಗೆ ಅವುಗಳ ಸಮಸ್ಯೆಗಳು ಕಡಿಮೆಯಾಗಲಿ ಎಂಬುವುದೆ ನನ್ನ ಆಶೆಯ.
-ಕೆ.ಎಂ.ವಿಶ್ವನಾಥ ಮರತೂರ.
ಯುವ ಬರಹಗಾರರು.
ಮು:ಪೋ: ಮರತೂರ.
ತಾ: ಚಿತ್ತಾಪೂರ ಜಿ: ಕಲಬುರ್ಗಿ 585229
ಮೂ: 9686714046