ಅಧಿವೇಶನವೆಂದರೆ ಮಕ್ಕಳಾಟವೆಂದು ಭಾವಿಸಿರುವ ಕಾಂಗ್ರೆಸ್, ಒಂದಾದರು ಸಮಸ್ಯೆಯನ್ನು ಆರೋಗ್ಯಕರವಾಗಿ ಚರ್ಚಿಸಲಿಲ್ಲಾ ಬೆಳಗಾವಿ ಅಧಿವೇಶನವು ಹಾಗೆ ಆಯಿತು ಈಗ ಬೆಂಗಳೂರು ಅಧಿವೇಶನವು ಹಾಗೆ ಆಯಿತು. ಬರಿ ಅಧಿವೇಶನಗಳು ಮುಗಿಸುವುದೆ ಕಾಂಗ್ರೆಸ್ನ ಹೆಬ್ಬಯಕೆಯಾಗಿದೆ ಅಥವಾ ವಯಕ್ತಿಕ ಜಗಳನ್ನು ಜಾತಿವಾದದ ಬೀಜವನ್ನು ಬಿತ್ತುವವುದು ಇವರ ಅಧಿವೇಶನದ ಪ್ರಮುಖ ಉದ್ದೇಶವೊ ತಿಳಿಯದಾದಗಿದೆ.
ಅಧಿವೇಶನವೆಂದರೆ ಗಂಭೀರ ಗಹನ ಚರ್ಚೆಗಳು ನಡೆದು ಪರ ವಿರೋಧ ಚರ್ಚೆಗಳಾಗಿ, ನಮ್ಮ ರಾಜ್ಯದ ಜನತೆಗೆ ಏನು ಬೇಕು ಏನು ಬೇಡಾ ಎಂಬ ವಿಷಯಗಳತ್ತ ಗಮನಕೊಡುವ ಕೆಲಸ ಆಗುತ್ತಿಲ್ಲಾ ಶಾಸಾಕಾಂಗ ತನ್ನ ಹದ್ದು ಮೀರಿ ನಡೆಯುತ್ತಿದೆ. ಈ ಕೆಲಸಕ್ಕೆ ಕೇಳುವವರಿಲ್ಲಾ ಹೇಳುವವರಿಲ್ಲಾ ಎಂಬಂತೆ ಭಾಸವಾಗುತ್ತಿದೆ.
ರಾಜ್ಯದಲ್ಲಿ ಅನ್ನ , ಸೂರು, ನೀರು, ಸೌಲಭ್ಯಗಳಿಗಾಗಿ ಜನ ಹಾತುರಿಯುತ್ತಿದ್ದಾರೆ ಆದರೆ ನಮ್ಮ ಶಾಸಕಾಂಗದವರು ಮಾತ್ರ ಸರಕಾರದ ಹಣ ಸುಮ್ಮನೆ ಖರ್ಚು ಮಾಡಿ ತಮ್ಮ ತಮ್ಮಲ್ಲಿಯೆ ಹುಚ್ಚು ಜಗಳಗಳನ್ನು ಆಡುವುದಕ್ಕೆ ಈ ಅಧಿವೇಶನಗಳನ್ನು ಬಳಸಿಕೊಳ್ಳುತ್ತಿದ್ದಾರೆ. ರಾಜಕೀಯ ಲಾಭ ಪಡೆಯುವ ಎಲ್ಲಾ ಲಕ್ಷಣಗಳು ಅಧಿವೇಶನದಲ್ಲಿ ಎದ್ದು ಕಾಣುತ್ತಿವೆ.
ರಾಜ್ಯದ ಹಲವು ಗಂಭೀರ ಸಮಸ್ಯೆಗಳ ಚರ್ಚೆಯಾಗುತ್ತಿಲ್ಲಾ ಎಂಬ ಮಾತು ಸಧನದ ಮಂದಿಯೆ ಹಲವು ಬಾರಿ ಮಾತನಾಡಿದ್ದಾರೆ. ಈ ಬಗ್ಗೆ ಯಾವುದೆ ನಿರ್ಧಾರ ತೆಗೆದುಕೊಳ್ಳದ ಶ್ರೀ ಸಿದ್ಧರಾಮಯ್ಯ ತಾವು ಆಡಿದ ಆಡಳಿತ ಪೂರ್ವ ಮಾತುಗಳನ್ನು ಮರೆತಿದ್ದಾರೆ.
ರಾಜ್ಯದಲ್ಲಿ ನೇಕಾರರು, ಕೃಷಿ ಕಾರ್ಮಿಕರು, ಕೂಲಿ ಕಾರ್ಮಿಕರು, ಅಂಗನವಾಡಿ ಶಿಕ್ಷಕರು, ಡಿ.ಈಡಿ. ಬಿ.ಈಡಿ. ಕಲಿತ ಶಿಕ್ಷಕರು, ದಿನಗೂಲಿ ನೌಕರರು , ಇವರೆಲ್ಲರು ತಮ್ಮ ಹಕ್ಕು ಭಾಧ್ಯತೆಗಾಗಿ ಹೋರಾಟ ಚೀರಾಟ ಮಾಡುತ್ತಿದ್ದರೆ ಶ್ರೀ ಸಿದ್ಧರಾಮಯ್ಯನವರು ಕಾಳಜಿಯೆ ಇಲ್ಲದಂತೆ ವರ್ತಿಸುತ್ತಿದ್ದಾರೆ. ಯಾರ ಕೈಗೂ ಸಿಗದೆ ಹೋಗುತ್ತಿದ್ದಾರೆ
ಸರಕಾರ ಹಲವು ಸಮಸ್ಯೆಗಳನ್ನು ಕಣ್ಣತೆರದು ನೋಡುತ್ತಿಲ್ಲಾ. ಬೆಲೆ ಏರಿಕೆ, ರೈತರ ಮರಣ, ದಲಿತರ ಮೇಲೆ ಹಲ್ಲೆ, ಆಸಿಡ್ ದಾಳಿ , ಮೂಲಭೂತ ಸೌಲಭ್ಯಗಳ ಬೇಡಿಕೆಗಳು, ರಾಜ್ಯ ಯೋಜನೆಗಳ ಪರಿಶೀಲನೆ ಹೀಗೆ ಇವೆಲ್ಲವುಗಳನ್ನು ಮರೆತು ನಡೆದ ರಾಜ್ಯ ರಾಜಕೀಯ ಲೋಕಸಭೆ ಚುನಾವಣೆ ಮುಂದೆ ಮಾಡಿಕೊಂಡು ಜನರ ಆಶೊತ್ತರಗಳನ್ನು ಮಣ್ಣುಪಾಲು ಮಾಡುತ್ತಿದೆ. ಜನರಲ್ಲಿ ಅಪನಂಬಿಕೆಗಳನ್ನು ಹುಟ್ಟು ಹಾಕುತ್ತಿದೆ.
ಅಧಿಕಾರ ಹಿಡಿಯುವ ಮೊದಲು ಕಳಂಕಿತರನ್ನು ಸಂಪುಟಕ್ಕೆ ಸೇರ್ಪಡೆಯಿಲ್ಲಾ ಎಂದಿದ್ದ ಶ್ರೀ ಸಿದ್ಧರಾಮಯ್ಯ ಸದ್ಯ ಹಲವರನ್ನು ಸೇರಿಸಿಕೊಂಡು ಕೆಲವರನ್ನು ರಾಜೀನಾಮೆ ಕೊಡಿಸಿ ಹಲವು ನಿಷ್ಠಾವಂತ ಶಾಸಕರು ಅಧಿಕಾರವಿಲ್ಲದೆ ಹಾಗೆ ಉಳಿದಿದ್ದಾರೆ. ಅಧಿವೇಶನ ಮುಗಿಯಿತು ಆದರೆ ಸಮಸ್ಯೆಗಳು ಮುಗಿಯಲಿಲ್ಲವಲ್ಲ ಎಂಬ ಆಸೆ ಮಾತ್ರ ಸರಕಾರ ಹಾಗೆ ಉಳಿಸಿದೆ.
ಇನ್ನು ಶ್ರೀ ಸಿದ್ಧರಾಮಯ್ಯನವರು ಕೆಲವು ದಿನಗಳಲ್ಲಿ ಈ ವರ್ಷದ ಬಜೆಟ್ ಮಂಡನೆ ಮಾಡುವ ಸಿದ್ಧತೆಯಲ್ಲಿ ಇದ್ದಾರೆ. ಈ ಬಜೆಟ್ ರಾಜಕೀಯ ಲಾಭವಾಗದೆ ನಮ್ಮ ರಾಜ್ಯದ ಬಡತನ, ನಿರೂದ್ಯೋಗ, ಅಪೌಷ್ಠಿಕತೆ, ರಾಜಕೀಯ ತಲ್ಲಣಗಳು ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಹೋಗಲಾಡಿಸುವ ಅಸ್ತ್ರವಾಗಬೇಕು. ಪ್ರತಿ ಸಮುದಾಯವು ನಿಟ್ಟುಸಿರು ಬಿಡುವ ಉತ್ತಮ ಎನ್ನುವ ಬಜೆಟ್ ಮಂಡನೆಯಾಗಬೇಕು. ಜನರ ಆಶೊತ್ತರಗಳನ್ನು ಈಡೇರಿಸುವ ಬಲವಾದ ಅಸ್ತ್ರವಾಗಿ ಕೆಲಸ ಮಾಡಲಿ ಎನ್ನುವುದೆ ನನ್ನ ಹಂಬಲ.
ಅಧಿವೇಶನಗಳು ಮೊದಲು ಶಾಂತಿಯುತವಾಗಿ ಇರುವಂತಾಗಲಿ ಶಾಸಕರು ಸಚಿವರನ್ನು ಸ್ಪೀಕರ್ ನಿಭಾಯಿಸಲಿ, ಶಾಸಕರು ಸಚಿರಾರು ಮಕ್ಕಳಲ್ಲಾ ಕುಳಿತುಕೊಳ್ಳಿ ಶಾಂತರಾಗಿ ಅಂತಾ ಹೇಳಲು ಇಂದು ನಾವು ಎಲ್ಲಿದ್ದೇವೆ ಎಂಬ ವಿಚಾರ ಎಲ್ಲರ ಮನಸ್ಸಲ್ಲಿರಲಿ ಮುಖ್ಯಮಂತ್ರಿಯಾದವರು ಎಲ್ಲರನ್ನು ಗಮನಕ್ಕೆ ತೆಗೆದುಕೊಳ್ಳಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಷಯ ಚರ್ಚಿತವಾಗಲಿ ಸರ್ವಧಿಕಾರದ ಮಾತು ಬಿಟ್ಟು ಇದು ಜನತಾ ಸರಕಾರ ಎನ್ನುವ ವಿಚಾರ ಮಾಡಲಿ ಒಂದೊಂದಾಗಿ ಸಮಸ್ಯೆಗಳತ್ತ ಚಿತ್ತ ಹರಿಸಲಿ ಎಲ್ಲರು ಆ ಸಮಸ್ಯೆಯ ಸಾಧ ಭಾಧಕಗಳನ್ನು ಗಹನವಾಗಿ ಚರ್ಚಿಸಲು ಸಾದ್ಯವಾಗುತ್ತದೆಯೆ ಇಲ್ಲವೊ ಎಂಬ ವಿಚಾರ ಮಾತನಾಡಿ ನಿರ್ಧಾರ ಕೈಗೊಳ್ಳಲಿ
ಇಲ್ಲಿಯವರೆಗೂ ನಡೆದ ಅಧಿವೇಶನಗಳು ಹಲವು ಪರಿಣಾಮಕಾರಿ ನಿಲುವುಗಳಿಗೆ ಪ್ರತಿಕ್ರಿಯೆ ನೀಡಿದರು, ಅವು ಜನರಿಗೆ ಮುಟ್ಟುವ ರೀತಿಯಲ್ಲಿ ಮಾತ್ರ ವ್ಯತ್ಯಾಸವಾಗಿವೆ. ಹಲವು ಗಂಭೀರ ಚರ್ಚೆಗಳು ನೆಲಕ್ಕುರುಳಿ ರಾಜಕೀಯ ತನ್ನ ಗಂಭೀರತೆ ಕಳೆದುಕೊಂಡಿದೆ ಅದನ್ನು ಇನ್ನು ಮುಂದಾದರು ಮೆಟ್ಟಿನಿಂತು ಅಧಿವೇಶನಗಳು ಉತ್ತಮ ದಾರಿಯಲ್ಲಿ ಸಾಗಲಿ, ಈ ರಾಜ್ಯದ ಹಿತದೃಷ್ಠಿಯಿಂದ ಹಿತಕರ ಕೆಲಸಗಳು ಜನಸಾಮಾನ್ಯರಿಗೆ ಮುಟ್ಟಲಿ, ಮಾನ್ಯ ಸಿದ್ಧರಾಮಯ್ಯನವರ ಸರಕಾರ ಇನ್ನಾದರು ಕಣ್ಣು ತೆರೆಯಲಿ.
ರಾಜ್ಯ ರಾಜಕೀಯದಲ್ಲಿ, ಎಲ್ಲವು ಸರಿಯಾಗಿದೆ ಎಂಬ ಮಾತು ಇದೀಗ ಸುಳ್ಳಾಗುವ ಎಲ್ಲಾ ಸಾದ್ಯತೆಗಳನ್ನು ಎತ್ತಿ ತೋರುತ್ತಿದೆ. ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಮಾನ್ಯ ಸಿದ್ಧರಾಮಯ್ಯ ಎಲ್ಲವು ಗೊತ್ತಿದ್ದು ಒಮ್ಮೆ ಅದರ ಬಗ್ಗೆ ಹೊರ ಹಾಕುತ್ತಾರೆ, ಇನ್ನೊಮ್ಮೆ ಎಲ್ಲವು ಸರಿಯಾಗಿದೆ ನಾವೆಲ್ಲಾ ಒಗ್ಗಟ್ಟಾಗಿದ್ದೇವೆ ಎಂಬ ಮಾತು ಹೇಳುತ್ತಾರೆ.
ಕಾಂಗ್ರೆಸ್ನಲ್ಲಿ ಸದ್ಯ ಭುಗಿಲೆದ್ದ ಬಂಡಾಯ ಸಿದ್ಧರಾಮಯ್ಯನವರ ಕುರ್ಚಿ ಬಲಿತೆಗೆದುಕೊಳ್ಳುವುದೇನೊ ಎಂಬ ಭಯ ಕಾಡುತ್ತಿದೆ. ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿರುವಾಗಿನಿಂದ ಇಲ್ಲಿಯವರೆಗೆ ಮಾನ್ಯ ಸಿದ್ಧರಾಮಯ್ಯ ಒಳಗೊಳಗೆ ಕುದಿಯುತ್ತಿರುವುದು ಒಂದಿಷ್ಟು ವಿಷಯಗಳನ್ನು ಸಹಿಸಿಕೊಳ್ಳುತ್ತಿರುವುದು ಅವರು ಹೇಳಿಕೊಳ್ಳದಿದ್ದರು ತಿಳಿಯುವ ಅಷ್ಟೆ ಸತ್ಯವಾದ ಮಾತು.
ಕೇಂದ್ರದಲ್ಲಿಯ ಹೈಕಮಾಂಡ್ ಮೇಲೆ ಗೂಬೆ ಕೂಡಿಸಿ ನಾವು ಬರಿ ಹೈಕಮಾಂಡ್ ಹೇಳಿದ್ದು ಮಾತ್ರ ಕೇಳುತ್ತೇವೆ ಎನ್ನುವರಿಗೆ ಹೈಕಮಾಂಡ್ ಒಂದಾಗಿರಬೇಕು ಬಂಡಾಯ ಭುಗಿಲೇಳದ ಹಾಗೆ ನೋಡಿಕೊಳ್ಳಿ ಎಂದು ಹೇಳುವುದಿಲ್ಲವೆ? ಅಥವಾ ಎಲ್ಲವು ಗೊತ್ತಿರುವ ಸಚಿವರು ಶಾಸಕರು ಹೀಗೆ ಮಾಡುತ್ತಿರುವರು ತಿಳಿಯದು.
ಕಾಂಗ್ರೆಸ್ ಅಧಿಕಾರ ಹಿಡಿದಾಗ ನಮ್ಮ ಸಚಿವ ಸಂಪುಟ ಕಳಂಕಿತರನ್ನು ಹೊಂದಿರುವವುದಿಲ್ಲ ಎಂದಿದ್ದರು ಆದರೆ ಸಂತೋಷ ಲಾಡ್ ಅವರನ್ನು ಮಾನ್ಯ ಸಿದ್ಧರಾಮಯ್ಯ ಸಚಿವ ಸ್ಥಾನ ಕೊಟ್ಟು ಎಲ್ಲಾ ಕೊಳ್ಳೆ ಹೊಡಿಸಿ ಈಗ ರಾಜಿನಾಮೆ ಕೊಡಿಸಿ ಎಲ್ಲರ ಕಣ್ಣಲ್ಲಿ ಮಣ್ಣೆರಚುವ ಕೆಲಸ ಮಾಡಿದರೇನೊ ಅನಿಸುತ್ತದೆ.
ಒಬ್ಬ ಹಿಂದೂಳಿದ ವರ್ಗದ ವ್ಯಕ್ತಿ ಮುಖ್ಯಮಂತ್ರಿಯಾದಾಗ ಆತ ಅನುಭವಿಸಬೇಕಾದ ಹಲವು ತೊಂದರೆಗಳನ್ನು ಮಾನ್ಯ ಸಿದ್ಧರಾಮಯ್ಯ ಈಗಾಗಲೇ ಅನುಭವಿಸುತ್ತಿದ್ದಾರೆ ಕಾಂಗ್ರೆಸ್ ಜಗಳದಲ್ಲಿ ಬಿಜೆಪಿಯನ್ನು ಹೊರತುಪಡಿಸಿಲ್ಲಾ ಎಂಬ ಮಾತು ಕಾಂಗ್ರೆಸ್ ಅಧಿಕಾರ ಹಿಡಿದಮೇಲೆ ತಿಳಿದಿದ್ದು. ಹೈ ಕಮಾಂಡ್ ರಾಜ್ಯ ರಾಜಕೀಯದತ್ತ ಇನ್ನಾದರು ಗಮನಹರಿಸಲಿ ಇಲ್ಲವಾದರೆ ಕಾಂಗ್ರಸ್ ಜಗಳದ ಗೂಡಾಗಿ ಬಿಜೆಪಿಯ ಹಾಗೆ ಛಿದ್ರವಾಗುವುದು ಕಾಂಗ್ರೆಸ್ ಕಣ್ಣು ತೆರೆಯುವ ಅವಶ್ಯಕತೆಯಿದೆ.