ಈ ದೇಶದ ಸಾವಿರ ವರ್ಷದ ಭವಿಷ್ಯ ನಿರ್ಧಾರ ಮಾಡುವ ಮೂಲಕ ಈ ದೇಶದಲ್ಲಿನ ಅಸಮಾನತೆ ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರ ನಮ್ಮ ಶ್ರೇಷ್ಠ ಸಂವಿಧಾನಕ್ಕಿದೆ. ಬಡವರ ಬದುಕನ್ನು ಶ್ರೀಮಂತವಾಗಿಸುವ ಶಕ್ತಿ ಸಂವಿಧಾನಕ್ಕಿದೆ. ಬಡವರ ಮನೆಯ ಮಕ್ಕಳೆಲ್ಲ ಉನ್ನತ ಹುದ್ದೆಯಲ್ಲಿ ಕಂಗೊಳಿಸುವಂತೆ ಮಾಡುವ ಅದಮ್ಯವಾದ ಬಯಕೆ ಸಂವಿಧಾನದಲ್ಲಿದೆ. ಭಾರತದ ಬಡತನ ನಿವಾರಿಸಿ ಗುಡಿಸಲುಗಳನ್ನು ಕಡಿಮೆಗೊಳಿಸುವ ಶಕ್ತಿ ಸಂವಿಧಾನಕ್ಕಿದೆ. ಪ್ರಾಚೀನ ಭಾರತದ ಅಸಡ್ಡೆ ಸಂಪ್ರದಾಯಗಳಿಗೆ, ತುಳುಯುವ ಸಂಸ್ಕೃತಿಗೆ ಬೆಂಕಿ ಹಚ್ಚಿ ಸರ್ವರಿಗೂ ಸಮಬಾಳು ಎಂಬ ತತ್ವವನ್ನು ಸಾರುತ್ತದೆ. ಕಲ್ಪನೆಯೊಳಗೆ ಕಾಗಕ್ಕ ಗುಬ್ಬಕನ ಕಥೆಗೆ ನಂಬಿ ಕುಳಿತಿರುವ ನಾವೆಲ್ಲ ಸತ್ಯ ಬಿಂಬಿಸುವ ಸಂವಿಧಾನದ ಆಶೆಯ ಅರಗಿಸಿಕೊಳ್ಳುವುದು ಕಷ್ಟವಾಗಿದೆ ಅದಕ್ಕಾಗಿಯೇ ಸಂವಿಧಾನ ವಿರೋಧಿ ಹೇಳಿಕೆಗಳು ವಿಕೃತ ಮನಸ್ಸುಗಳಿಂದ ಹೊರಬರುತ್ತಿವೆ.
ಭಾರತದಲ್ಲಿ ಇತ್ತೀಚೆಗೆ ಸಂವಿಧಾನ, ಅಹಿಂದ ವರ್ಗ, ಅಂಬೇಡ್ಕರ್ ಕುರಿತಂತೆ ಅವಹೇಳನಕಾರಿ ಹೇಳಿಕೆಗಳು ಹೆಚ್ಚಾಗುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಡುತ್ತಿವೆ. ಕೇಂದ್ರದಲ್ಲಿ ಆರ್.ಎಸ್.ಎಸ್. ಕೈಗೊಂಬೆಯಾಗಿರುವ ಬಿಜೆಪಿ ಮುಖಮುಚ್ಚಿಕೊಂಡು ದೂರದಿಂದಲೇ ಇಂತಹ ಕೆಲಸಗಳಿಗೆ ಕುಮ್ಮಕ್ಕು ನೀಡುತ್ತಿದೆ. ನೀವು ಹೇಳಿಕೆ ನೀಡಬಹುದು ಇತಿಹಾದ ಬದಲಿಸಲು ನಿಮ್ಮಿಂದ ಸಾಧ್ಯವಿಲ್ಲಯಂಬ ಅಂಶ ಇವರಿಗೆ ಹೊಳೆಯುತ್ತಿಲ್ಲ. ಯಾರು ಸಂವಿಧಾನ ವಿರುದ್ಧ ಮಾತನಾಡುತ್ತಾರೊ ಅವರೆಲ್ಲ ಸಂವಿಧಾನ ಕಾಲಿನ ಧೂಳಿಗೂ ಸಮಾನರಲ್ಲಾ ಅಪ್ರಬುದ್ಧವಾದ ಹೇಳಿಕೆಗಳನ್ನು ಸಮ್ಮತಿಸದೆ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾದದ್ದು ಕೇಂದ್ರ ಸರಕಾರದ್ದು ನೇರ ಜವಾಬ್ದಾರಿಯಾಗಿದೆ ಆದರೆ ಕೇಂದ್ರದ ಬಿಜೆಪಿಯು ಈ ಕೃತ್ಯಕ್ಕೆ ಹಿನ್ನೆಲೆ ಸಂಗೀತ ನೀಡಿದಂತೆ ಭಾಸವಾಗುತ್ತದೆ.
ಸಂವಿಧಾನವನ್ನು ಸುಟ್ಟು ಹಾಕುತ್ತೇನೆ ಎಂದು ಹೇಳಿದ ರಾಮ್ ಬಹದ್ದೂರ್ ರಾಯ್ ಬಡವರ ಕೋಪಕ್ಕೆ ಗುರಿಯಾದರೆ ತಾನೆ ಸುಟ್ಟು ಹೋಗುವನು ಎಂಬ ಅರಿವಿಲ್ಲದ ವ್ಯಕ್ತಿಯನಿಸುತ್ತದೆ. ಹುಚ್ಚರಂತೆ ವರ್ತನೆ ಮಾಡುವ ವ್ಯಕ್ತಿಗಳನ್ನು ಇನ್ನು ಜೀವಂತವಾಗಿಟ್ಟಿದ್ದು ನಮ್ಮ ದೇಶದ ದೊಡ್ಡ ದುರಂತವೆ ಸರಿ. ಆರ್.ಎಸ್.ಎಸ್. ಎಂತಹ ವಿಕೃತ ಮನಸ್ಸುಗಳನ್ನು ಹುಟ್ಟುಹಾಕಿದೆ ಎಂಬ ಅಂಶ ಈ ಹೇಳಿಕೆಯಿಂದ ಕಂಡುಬರುತ್ತದೆ. ಇವರೆಲ್ಲ ನಮ್ಮ ಬೆಳೆಯುತ್ತಿರುವ ಭಾರತಕ್ಕೆ ಮಾರಿಯಾಗಿ ಪರಿಣಮಿಸಲಿದ್ದಾರೆ. ದಿನ ಉರುಳಿದಂತೆ ಇವರ ಅಟ್ಟಹಾಸ ಹೆಚ್ಚಾಗುತ್ತಿದೆ. ವಿಕೃತ ಮನಸ್ಸುಗಳು ಒಂದು ಗೂಡಿ ದೇಶದ ನೆಲದ ಮೂಲದವರಿಗೆ ನೆಲೆಯಿಲ್ಲದಂತೆ ಮಾಡುವ ಹುನ್ನಾರ ಮಾಡುತ್ತಿದ್ದಾರೆ. ಬದಲಾವಣೆ ಬಯಸಿ ಬಿಜೆಪಿಗೆ ಮತಹಾಕಿ ಕೇಂದ್ರದಲ್ಲಿ ಮಣಿಹಾಕಿ ಅಧಿಕಾರ ಕೊಟ್ಟ ಪ್ರಜೆಗಳಿಗೆ ಇಂತಹ ಹೇಳಿಕೆಯ ಮೂಲಕ ಮತ್ತದೇ ಅನ್ಯಾಯದ ಕೂಪದೊಳಗೆ ತಳ್ಳಿ ತಮಾಷೆ ನೋಡಬೇಕೆಂಬ ಮನಸ್ಸು ಇಂತಹ ವ್ಯಕ್ತಿಗಳದ್ದು ಆದರೆ ಇವರಿಗೆ ನೆನಪಿರಲಿ ಈ ದೇಶದ ಬಹುದೊಡ್ಡ ಜನಸಂಖ್ಯೆ ಸಂವಿಧಾನದ ಪರವಾಗಿದ್ದು ಅವರೆಲ್ಲ ತಿರುಗಿಬಿದ್ದರೆ ನಿಮ್ಮ ಪಾಡೆನು ನೀವು ಎಲ್ಲಿರುತ್ತೀರಿ ಎಂದು ಊಹಿಸಲು ಸಾಧ್ಯವಿಲ್ಲ.
ಈ ದೇಶದ ಪ್ರಜೆಗಳು ಎಷ್ಟು ಬುದ್ಧಿವಂತರು ಎಂಬುವುದು ಸಾಬೀತುಪಡಿಸಿದ್ದಾರೆ. ಭ್ರಷ್ಠಾಚಾರ ಅವಹೇಳನಕಾರಿ ಜನರಿಗೆ ಬುದ್ಧಿ ಕಲಿಸುವ ಕಲೆ ಇಲ್ಲಿನ ಪ್ರಜೆಗಳಿಗೆ ಕರಗತವಾಗಿದೆ. ಇದಕ್ಕೆ ತಕ್ಕ ನೈಜ ಉದಾಹರಣೆ ನಿಮ್ಮ ಕಣ್ಣ ಮುಂದೆಯದೆ. ಈ ದೇಶದ ಜನರನ್ನು ಕುರುಡ ಎಂದು ತಿಳಿಯಬೇಡಿ ಅವರ ಜ್ಞಾನ ಪರಿಕ್ಷಿಸಬೇಡಿ. ಅವರ ಕೋಪ ಕಟ್ಟೆಯೊಡೆದರೆ ನೀವು ಕೊಚ್ಚಿ ಹೋಗುವುದು ಗ್ಯಾರಂಟಿ ನೆನಪಿರಲಿ.
ಇಷ್ಟಕ್ಕೂ ಸ್ವತ: ಸಂವಿಧಾನವೆ ಚರ್ಚೆಗೆ ಹಾಗೂ ತಿದ್ದುಪಡಿಗೆ ಅವಕಾಶ ಮತ್ತು ಅಧಿಕಾರವನ್ನು ನೀಡಿದೆ ವಿಷಯವನ್ನು ಆರೋಗ್ಯಕರವಾದ ಚರ್ಚೆ ಮಾಡಲಿ ಯಾರು ಬೇಡವೆನ್ನುವುದಿಲ್ಲ ಆದರೆ ಒಂದು ರಾಷ್ಟ್ರೀಯ ಆಸ್ತಿಯನ್ನು ಸುಟ್ಟು ಹಾಕುತ್ತೇನೆ ಎಂಬುವುದು ಅವನ ದಡ್ಡತನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸಂವಿಧಾನದಲ್ಲಿ ಈಗಾಗಲೇ ಅನೇಕ ತಿದ್ದುಪಡಿಗಳಾಗಿದ್ದು ಅವೆಲ್ಲ ಜನಹಿತಕ್ಕಾಗಿ ಜಾರಿ ಮಾಡಿರುವ ಅಂಶಗಳು ನಿಮಗೆ ಅನಿಸಿದ ಹಾಗೆ ಮಾತನಾಡಿದ್ದು ಅಲ್ಲಾ ಬದಲಾಗಿದೆ ಪ್ರಜೆಗಳ ಹಿತಾಸಕ್ತಿಯನ್ನು ಕಾಪಾಡುವ ಸಲುವಾಗಿ ಬದಲಾಯಿಸಿದ್ದು ಸಂವಿಧಾನದ ಆಶೆಯ ಗುರಿ ಉದ್ದೇಶ ಅರ್ಥಮಾಡಿಕೊಳ್ಳದ ನೀವು ಮತ್ತು ನಿಮ್ಮ ಮನಸ್ಸು ಬಡವರ ಬೆನ್ನಮೇಲೆ ಚೂರಿ ಹಾಕುವಂತಹದ್ದು ಎಂದು ಬಿಡಿಸಿಹೇಳಬೇಕಿಲ್ಲ ಅಲ್ಲವೆ?
ಇನ್ನು ಭಾರತದ ಪ್ರಜ್ಞಾವಂತರು ಸುಖಾಸುಮ್ಮನೆ ಇದನ್ನು ಕೇಳಿ ಕೂರುವುದು ಸರಿಯಲ್ಲ. ಇಂತಹ ಹೇಳಿಕೆಗಳನ್ನು ಕೊಡುವ ಮೂಲಕ ಈ ದೇಶದ ಸಂವಿಧಾನವನ್ನೆ ಮುಟುಕುಗೊಳಿಸಿ ಮತ್ತೆ ಮನುಸ್ಮೃತಿಯಂತಹ ಏಕಚೆಕ್ರಾದಿಪತ್ಯ ನಿರ್ಮಿಸಿ ಮಜಾ ನೋಡುವ ಮನಸ್ಸು ಮಾಡಿದ್ದಾರೆ. ಇದರ ವಿರುದ್ಧ ಧ್ವನಿಗಳು ಒಂದಾಗಬೇಕು. ಇಂತಹ ವ್ಯಕ್ತಿಗಳು ಮತ್ತೆ ಇಂತಹ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ತಡೆಯಬೇಕು. ಪ್ರಸ್ತುತ ಸರಕಾರಗಳು ಈ ರೀತಿಯಲ್ಲಿ ಹೇಳಿಕೆ ನೀಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಿಬೇಕು. ಇವೆಲ್ಲ ಮನುಷ್ಯತ್ವದ ವಿರೋಧಿ ಹೇಳಿಕೆಗಳು. ಈ ದೇಶದ ಮೂಲನಿವಾಸಿಗಳನ್ನು ಮೂಲೆಗುಂಪು ಮಾಡುವ ಇಂತಹ ಕೃತ್ಯ ಖಂಡನೀಯವಾಗಿದೆ. ಬಾಯಲ್ಲಿ ಬಾಬಾಸಾಹೇಬ್ ಮನಸ್ಸಲ್ಲಿ ಚೂಪಿಸಿದ ಕೊಡಲಿಯಿಟ್ಟುಕೊಂಡು ಓಡಾಡುವ ಇವರ ದಾರಿಗೆ ಖಾಯಂ ಕೀಲಿ ಹಾಕಬೇಕು. ಪ್ರಜಾಪ್ರಭುತ್ವ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರದ ದುರುಪಯೋಗವಾಗುದನ್ನು ತಡೆಹಿಡಿಯಬೇಕು. ಇಲ್ಲವಾದಲ್ಲಿ ಈ ದೇಶದ ಬಹುದೊಡ್ಡ ಸಮುದಾಯಕ್ಕೆ ಅನ್ಯಾಯ ಕಟ್ಟಿಟ್ಟಬುತ್ತಿ ಯೋಚಿಸಿ.
ಕೊನೆಯ ತುತ್ತು: ಈ ನೆಲವನ್ನು ಊಳುವರು ನಾವು, ಈ ಗುಡಿಯ ಕಲ್ಲು ಕಟೆದವರು ನಾವು, ಈ ದೇಶ ಕಟ್ಟಿ ಬೆಳೆಸಿದವರು ನಾವು ನಮ್ಮ ಮೇಲೆಕೆ ನಿಮ್ಮ ವಿಕೃತ ಮನಸ್ಸು ಹಾಯಿಸುವಿರಿ. ಭಾರತದಲ್ಲಿ ಅನೇಕ ಕಾಗಕ್ಕ ಗುಬ್ಬಕ್ಕನ ಕಥೆಗಳ ಪುಸ್ತಕಗಳಿಗೆ ಮನ್ನಣೆ ನೀಡಿರುವ ನೀವು ಈ ದೇಶದ ನೆಲವನ್ನು ಜಲವನ್ನು ಉಸಿರನ್ನು ಕಾಯುತ್ತಿರುವ ಭಾರತದ ಸರ್ವಶ್ರೇಷ್ಠ ಸಂವಿಧಾನದ ಮೇಲೆ ನಿಮ್ಮ ವಿಕೃತ ಮನಸ್ಸಿನ ಕಣ್ಣೇಕೆ. ಈ ರೀತಿಯ ಹೇಳಿಕೆಗಳನ್ನು ಗಮನಿಸಿದ ಸರಕಾರಗಳು ಕೂಡ ಕಣ್ಣು ಮುಚ್ಚಿ ಕುಳಿತುಕೊಳ್ಳುವುದೇಕೆ? ಮತ್ತು ಕುಮ್ಮಕ್ಕು ನೀಡುವುದೇಕೆ?