ಈ ವಿಧ್ಯಾರ್ಥಿ ತನ್ನ ಸಾವನ್ನು ಸಮರ್ಥಿಕೊಂಡಿದ್ದಾನೆ. ತನ್ನೊಳಗಿನ ನೋವನ್ನು ಬಹಳ ಸೂಕ್ಷ್ಮಿವಾಗಿ ತೆರೆದಿಟ್ಟಿದ್ದಾನೆ. ಮಾನವನ ಮೌಲ್ಯವನ್ನು ವೋಟ್ ಬ್ಯಾಂಕ್ ಮಾಡಿಕೊಂಡಿರುವ ರಾಜಕೀಯವನ್ನು ಅಲ್ಲಗಳೆದಿದ್ದಾನೆ. ಭಾರತದಲ್ಲಿ ಮನಸ್ಸು ಹೊಂದಿದವರಿಗೆ ಪರಿಗಣಿಸಲಾಗುತ್ತಿಲ್ಲವೆಂಬ ಅವನ ಮಾತು ಎಲ್ಲರಿಗೂ ಮನಕಲಕುತ್ತದೆ. ಆತ ತನ್ನ ಪತ್ರದ ಕೊನೆಯಲ್ಲಿ ಭಾರತೀಯ ಜಾತಿ ಪದ್ಧತಿಯ ಸಂಪ್ರದಾಯವನ್ನು ಬಿಚ್ಚಿ ಹೇಳಲು ಹೆದರಿದ್ದಾನೆ. ತನ್ನ ಮನಸ್ಸು ಹೃದಯಕ್ಕಾಗಿರುವ ಗಾಯವನ್ನು ಹೇಗೆ ಹೇಳುವುದು ಎಂಬ ಗೊಂದಲಕ್ಕೀಡಾಗಿ ಜೀವನ ಬೇಸರಿಸಿಕೊಂಡಿದ್ದಾನೆ. ದಲಿತರ ಮೇಲಿನ ದೈಹಿಕ ಹಲ್ಲೆಗಳ ಜೊತೆಗೆ ಮಾನಸಿಕ ಹಲ್ಲೆಗಳು ಕೂಡ ಜಗಾಜಾಹಿರವಾಗಿ ಲಗ್ಗೆಯಿಲ್ಲದೇ ಓಡುತ್ತಿವೆ ಎಂದು ಸ್ಪಷ್ಟವಾಗಿ ಕಾಣುತ್ತದೆ. ಇದನ್ನೆ ಎನ್ ಕ್ಯಾಶ್ ಮಾಡಿಕೊಂಡಿರುವ ರಾಜಕಾರಣಿಗಳು ತಮ್ಮ ರಾಜಕೀಯ ಚದುರಂಗದಾಟದಲ್ಲಿ ದಾಳವಾಗಿ ಬಳಸಿಕೊಳ್ಳುವುದು ಮಾಡುತ್ತಿದ್ದಾರೆ.
ಓದುವ ಮನಸ್ಸುಗಳಿಗೆ ಇತಿಹಾಸದಲ್ಲಿ ಈ ಜಾತಿ ವ್ಯವಸ್ಥೆ ತುಂಬಾ ಕಷ್ಟ ಕೊಟ್ಟಿದೆ. ಮೇಲು ಕೀಳೆಂಬ ಕೆಟ್ಟ ಕೊಳವೆ ಭಾವಿಯೋಳಗೆ ನಮ್ಮನ್ನು ನೂಕಿ ನರಕಯಾತನೆ ನೂರು ನೋವು ನೀಡಿದೆ. ದಲಿತರನ್ನು ಮೂಲೆಗುಂಪು ಮಾಡಿದ್ದು ಡಾ.ಅಂಬೇಡ್ಕರ್ ಅವರ ಅಲ್ಪವಿರಾದನಂತರ ಮರೆಯಾಗಿದೆಯೆಂದರೆ ಅದು ತನ್ನ ಮತ್ತಷ್ಟು ವಿರಾಟ ರೂಪದೊಂದಿಗೆ ಮತ್ತೆ ತಾಂಡವಾಡುತ್ತಿದೆ. ದಲಿತರ ಸಾವು ನೋವುಗಳು ಸಾಕು ಸಮಾನತೆಯ ಬದುಕು ಬೇಕು ಎಂಬ ಹೋರಾಟಗಳು ಮತ್ತೆ ಭುಗಿಲೇಳುವ ವಾತಾವರಣ ಭಾರತದಲ್ಲಿ ಸೃಷ್ಠಿಯಾಗುತ್ತಿದೆ. ತಾ ಮೇಲು, ನೀ ಕೀಳೆಂಬ, ಕುಲ ಕುಲವೆಂದು ಹೊಡೆದಾಡುವ ಕಾಲ ಮತ್ತೆ ಮರುಕಳಿಸುವ ಆತಂಕ ಕಾಡುತ್ತಿದೆ. ಪ್ರಾಥಮಿಕ ಶಾಲೆಯಿಂದ ವಿಶ್ವವಿದ್ಯಾಲಯದ ಶಿಕ್ಷಣದವರೆಗೂ ವ್ಯವಸ್ಥೆಯೊಳಗೆ ಜಾತಿಯತೆ ಮಾನೆ ಮಾಡಿದ್ದು ದಲಿತ ವಿಧ್ಯಾರ್ಥಿಗಳ ಆತ್ಮಹತ್ಯೆಗಳ ಮೂಲಕ ತನ್ನ ಇರುವಿಕೆಯೆನ್ನು ಪ್ರಸ್ತುತಪಡಿಸುತ್ತಿದೆ. ಈ ಜಾತಿಯತೆ, ಅಸಮಾನತೆ, ಅಸ್ಪøಷ್ಯತೆ, ಅಸಹಿಷ್ಣುತೆ ಇತ್ಯಾದಿಗಳನ್ನು ಒಳಗೊಳಗೆ ಎದುರಿಸಿ ಅಳುತ್ತಿರುವ ದಲಿತ ಜೀವಗಳು ಆತ್ಮಹತ್ಯೆಗೆ ಬಲಿಯಾದರೆ, ಇನ್ನು ಕೆಲವು ಜೀವಗಳು ಅದನ್ನು ಪ್ರತಿಭಟಿಸಿದಾಗ ಕೊಲೆಯಾಗುವ ಎಲ್ಲಾ ಲಕ್ಷಣಗಳನ್ನು ಕಲಬುರಗಿ ಕೊಲೆ ಪ್ರಕರಣ ಹಿಡಿದ ಕನ್ನಡಿಯಾಗಿದೆ.
ರೋಹಿತ್ನ ಸಾವು ಆತ್ಮಹತ್ಯೆಯೆಂಬ ವಿಷಯ ಸ್ಪಷ್ಟವಾಗಿ ಕಂಡರು, ಅವನ ಪತ್ರದ ಅರ್ಥವನ್ನು ಮಾಡಿಕೊಂಡವರು ವ್ಯವಸ್ಥೆಯ ಹುಳಕನ್ನು ನಂಬಲೇಬೇಕು. ನಾವು ಆಡಳಿತಾತ್ಮಕವಾಗಿ, ರಾಜಕೀಯವಾಗಿ, ಉದ್ಯೋಗದಲ್ಲಿ ಜಾತಿಯತೆ ಹಾಗೂ ಮೀಸಲಾತಿಯನ್ನು ಅನುಸರಿಸಿದ್ದೇವೆಯೆ ಹೊರತು ಮನಸ್ಸೆಂಬ ಮರಕೋತಿ ಮಾತ್ರ ನಮ್ಮಿಂದ ಮರೆಯಾಗಿಲ್ಲ. ನಾವೆಲ್ಲ ಆಡಳಿತಾತ್ಮಕವಾಗಿ ಬದಲಾಗಿದ್ದೇವೆಯೇ ಹೊರತು ಮನುಷ್ಯತ್ವದ ಹಿನ್ನಲೆಯಲ್ಲಿ ಅಲ್ಲಾ ಎಂಬ ಸ್ಪಷ್ಟ ಸಂದೇಶವನ್ನು ರೋಹಿತ್ ಅವರ ಆತ್ಮಹತ್ಯೆ ಪ್ರಕರಣ ತಿಳಿಸುತ್ತದೆ. ಈ ಸಾಮಾಜಿಕ ಸಂಪ್ರದಾಯಗಳನ್ನು ಕೈಬಿಡಲು ಪುಸ್ತಕದಲ್ಲಿ ಒಪ್ಪಿದ್ದೇವೆಯೆ ಹೊರತು ಮಸ್ತಕದಿಂದಲ್ಲಾ. ಈ ಜಾತಿ ಪದ್ಧತಿಯು ಹೋಗಲಾಡಿದ್ದು ಪುಸ್ತಕದಲ್ಲಿ ಮಾತ್ರ ನಮ್ಮ ಮನಸ್ಸಿನಲ್ಲಿ ಅದರ ಬೇರು ಆಲದ ಮರದಷ್ಟೆ ದೂರ ದೂರ ಹರಡಿದೆ, ಅದಕ್ಕಾಗಿಯೇ ಭಾರತದಲ್ಲಿ ಇಂದಿಗೂ ದಲಿತರ ಮೇಲಿನ ಜಾತಿ ದೌರ್ಜನ್ಯ ತನ್ನ ಅಸ್ತಿತ್ವ ತೋರುತ್ತಿದೆ. ದಲಿತರ ಸಾವಿನ ಮನೆಯೊಳಗೆ ನಮ್ಮ ಸೂಕ್ಷ್ಮ ರಾಜಕಾರಣಿಗಳು ತಮ್ಮ ಪ್ರಚಾರದ ಮೈಲಿಗಲ್ಲಿಗೆ ಏಣಿ ಮಾಡಿಕೊಳ್ಳುವತ್ತ ನಿಗಾವಹಿಸುತ್ತಿದ್ದಾರೆ.
ಒಬ್ಬ ಪ್ರಜ್ಞಾವಂತ ಭಾರತೀಯ ಪ್ರಜೆಯ ಕೊಲೆ ಅಥವಾ ಆತ್ಮಹತ್ಯೆಯಾದಾಗ ಅದನ್ನು ಸಂಭ್ರಮಿಸುವ ರಾಜಾಕಾರಣ ನಿರ್ಮಾಣವಾಗಿದೆ. ಮನುಷ್ಯತ್ವದ ಗುರುತು ಬಲಿಯಾದಾಗ ರಾಜಕೀಯದವರು ಅದನ್ನು ಬಲವಾಗಿಸಿಕೊಂಡು ಬಳಸಿಕೊಳ್ಳುವ ಯೋಜನೆ ಜಾರಿಯಲ್ಲಿದೆ. ಭಾವನಾತ್ಮಕವಾಗಿ ಸ್ಪಂದಿಸಬೇಕಾದವರು ಭಾಷೆ, ಜಾತಿ, ಪ್ರಾಂತ್ಯವಾರು ಒಡೆದಾಳುವ ಬ್ರಿಟೀಷರ ನೀತಿ ಅನುಸರಿಸುತ್ತಿದ್ದಾರೆ. ಭಾರತೀಯ ನೆಲದ ಋಣ ಮರೆತ ಪ್ರಸ್ತುತ ರಾಜಕಾರಣಿಗಳು, ತಮ್ಮ ರಕ್ತದ ಕಣಕಣದಲ್ಲಿಯೂ ಜಾತಿ, ಅಸಮಾನತೆ, ಅಸಹಿಷ್ಣುತೆ ತುಂಬಿಕೊಂಡಿದ್ದಾರೆ. ಖಾಧಿ ಬಟ್ಟೆ ಧರಿಸಿ ಕರುಣೆಯಿಲ್ಲದಾಗಿದ್ದಾರೆ. ಬಿಳಿ ಬಣ್ಣದ ಬಟ್ಟೆ ತೊಟ್ಟು ಶಾಂತಿಯಿಲ್ಲದಾಗಿದ್ದಾರೆ. ಪ್ರಜಾಪ್ರಭುತ್ವದ ಬುನಾದಿಯಾದ ಭಾರತದಲ್ಲಿ ಪ್ರಜೆಗಳ ಸಾವಿನಲ್ಲಿ ಸಂಭ್ರಮಿಸುತ್ತಿದ್ದಾರೆ. ಸಾವಿನಲ್ಲಿ ಸೋತ ಜೀವಗಳಿಗೆ, ಸಾಂತ್ವನ ಹೇಳುವ ನೆಪದಲ್ಲಿ, ಸಾವೆಂಬ ಸೂತಕದ ಛಾಯೆಯಲ್ಲಿ ಮಲಗಿದ್ದಾರೆ. ದಲಿತರ ಹೆಸರಿನಲ್ಲಿ ಅಧಿಕಾರ ಹಿಡಿದ ಸರಕಾರಗಳು ದಲಿತರ ಸಾವಿನಲ್ಲಿ ರಾಜಕೀಯ ಸಂಭ್ರಮ ಆಚರಿಸುತ್ತಿದ್ದಾರೆ.
-ಕೆ.ಎಂ.ವಿಶ್ವನಾಥ ಮರತೂರ.
9686714046