ಮೊನ್ನೆ ವಿಚಾರ ಸಂಕೀರ್ಣವೊಂದರಲ್ಲಿ ಒಬ್ಬ ಯುವಕ ನಮ್ಮ ಕನ್ನಡ ನಾಡು ನುಡಿಯ ಬಗ್ಗೆ ಮಾತನಾಡುತ್ತಾ “ಕನ್ನಡ ಕನ್ನಡ ಬರಿ ನಮ್ಮ ಸಂಗಡ” ನಮ್ಮ ಕನ್ನಡ ನಾಡು ಉಳಿಯಬೇಕಾದರೆ ಹೋರಾಟಗಳು ತೀವ್ರವಾಗಬೇಕು, ಕನ್ನಡಕ್ಕೆ ಮಸಿ ಬಳಿಯುವವರನ್ನು ಸದೆಬಡಿಯಬೇಕು, ಎಂದನು. ಅವರು ಮಾತು ಮುಗಿಸಿ ಊಟಕ್ಕೆ ಕುಳಿತಾಗ, ನಾನು ಅವರಿಗೆ ಸಹಾಯ ಮಾಡಲು ಹೋಗಿ ನೀರು ಕೊಟ್ಟೆ ಅವರು ಏನು ಹೇಳಿದರು ಗೊತ್ತಾ? ಓ ಗುಡ್ ಥ್ಯಾಕ!್ಸ ಆಯ್ಯಾಮ ಹ್ಯಾಪಿ..... ಇದು ನಮ್ಮ ನಾಡಿನ ಹಾಗೂ ನುಡಿಯ ಮೇಲಿನ ನಮಗಿರುವ ಪ್ರೀತಿ ಪ್ರೇಮ. ನಾನು ಮುಂದುವರೆದು ಅವರ ಬಗ್ಗೆ ಒಂದಿಷ್ಟು ವಿಷಯ ಕಲೆಹಾಕಿದೆ, ಅವರ ಇಬ್ಬರು ಮಕ್ಕಳು ನಮ್ಮ ನಗರದ ಪ್ರತಿಷ್ಠಿತ ಇಂಗ್ಲೀಷ ಮಾಧ್ಯಮದಲ್ಲಿ ಓದುತ್ತಿದ್ದಾರೆ, ಇವರು ಕನ್ನಡ ಪುಸ್ತಕವಾಗಲಿ ಮನೆಯಲ್ಲಿ ಕನ್ನಡಿಗರ ಒಂದು ಫೋಟು ಇಲ್ಲಾ, ಇವರ ಗೆಳೆಯ ಹೇಳಿದ ಇವರು ಇಂಗ್ಲೀಷ್ ಸಿನಿಮಾ ಪ್ರೀಯರಂತೆ. ನಾನು ಇಲ್ಲಾ ಅವರದ್ದು ತಪ್ಪು ನಿಲುವು ಎನ್ನುತ್ತಿಲ್ಲಾ ಆದರೆ ನಮ್ಮ ನಾಡು ನುಡಿಯ ಸೇವೆಯಲ್ಲಿ ನೈಜತೆಯ ಕೊರತೆ ಸ್ಪಷ್ಟವಾಗಿ ಕಾಣುತ್ತಿದೆ. ಎನ್ನುವುದಷ್ಟೆ ನನ್ನ ಕಳಕಳಿ.
ಈ ವ್ಯಕ್ತಿ ಒಬ್ಬರೆ ಅಲ್ಲಾ ನಮ್ಮ ನಾಡಿನ ತುಂಬಾ ಇಂತಹ ಜನರ ಸಂಖ್ಯೆ ಹೆಚ್ಚಿದೆ. ಇದು ನಮ್ಮ ರಾಜ್ಯದಲ್ಲಿಯ ಹಾಗೂ ನಾವು ಕನ್ನಡ ಭಾಷೆಗೆ ಕೊಡುವ ಅಗೌರವ. ಭಾಷೆ ಸ್ವತಂತ್ರವಾಗಿ ಉಚ್ಛರಿಸುವ ಹಾಗೂ ಎಲ್ಲರು ಕಲಿಯುವುದು ಅದಕ್ಕೆ ನಿರ್ಭಂಧಗಳಿಲ್ಲಾ ಆದರೆ ನಾವು ಕಟ್ಟು ಪಾಡುಗಳನ್ನು ಹಾಕಿಕೊಂಡು ಅದಕ್ಕೆ ಮೂಲೆಗುಂಪು ಮಾಡುತ್ತಿರುವುದಂತು ಅಪ್ಪಟ ಸತ್ಯ. ನಮ್ಮ ನಾಡಿಗೆ ಬರುವ ಅದೆಷ್ಟೊ ವಿದೇಶಿಯರು ಕನ್ನಡವನ್ನು ಕಲಿತು ಅದನ್ನು ಚೆನ್ನಾಗಿ ಮಾತನಾಡಿ ಅದರ ಶ್ರೇಯಸ್ಸು ಉಳಿಸುವ ಕೆಲಸ ಮಾಡುವರು, ಆದರೆ ನಾವು ಮಾತ್ರ ಅದಕ್ಕೆ ಅಷ್ಟೆ ಸರಿಯಾಗಿ ಅವಹೇಳನ ಮಾಡುವ ಕೆಲಸದಲ್ಲಿ ನಿರತರಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಇನ್ನು ನಮ್ಮ ರಾಜ್ಯದಲ್ಲಿ ನಾಡು ನುಡಿ ಉಳಿಸಲು ಹೋರಾಟ ಚೀರಾಟಗಳಿಗೇನು ಕಮ್ಮಿಯಿಲ್ಲಾ, ಪ್ರತಿ ಗಲ್ಲಿಗಲ್ಲಿಯಲ್ಲೂ ಈ ಸಂಘಟನೆಗಳು ಗುಲ್ಲು ಎಬ್ಬಿಸುತ್ತಾ ನಿಜವಾದ ಸಂಘಟನೆ ಎಂದರೇನು? ಎನ್ನುವ ಮಾತು ಗಾಳಿಗೆ ತೂರಿ ನಡೆದಿವೆ.
“ಒಂದಸಲ ನಾವು ನಮ್ಮ ಜಿಲ್ಲೆಯ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿಗಳೊಂದಿಗೆ ಸಭೆ ನಡೆದಿತ್ತು ಇದು ಜಿಲ್ಲೆಯ ಕೆಲವು ವಿಷಯಗಳ ಕುರಿತು ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳ ಸಭೆಯಿತ್ತು. ಅತ್ತದಿಂದ ಕೂಗಾಡುತ್ತಾ ಬಂದ ನವಯುವಕರು ಜೈಕಾರ ಕೂಗುತ್ತಾ ಅಧಿಕಾರಿಗಳ ಮಧ್ಯದೊಳಗೆ ಒಳನುಗ್ಗಿಯೆ ಬಿಟ್ಟರು, ಅವರ ನೋಡಿದ ಅಧಿಕಾರಿಗಳು ಗಾಬರಿಯಾಗಿ ಸಭೆ ನಿಲ್ಲಿಸಿ ಅವರ ಅಹವಾಲು ಕೇಳಿದರು. ಒಬ್ಬರು ಒಂದು ವಿಷಯ ಸ್ಪಷ್ಟತೆಯಿಲ್ಲಾ ಅವರು ಬರೆದಿರುವ ಪತ್ರ ಕೂಡಾ ಕನ್ನಡದ ದೋಷಗಳಿಂದ ತುಂಬಿತ್ತು ಅವರಲ್ಲಿ ಹುಮ್ಮಸ್ಸಿತ್ತು ಆಗಲೇಬೇಕು, ಮಾಡಲೇಬೇಕು, ಆಗದಿದ್ದರೆ ಉಘ್ರ ಹೋರಾಟ, ಹೀಗೆ ಕೂಗಾಡುತ್ತಾ ನಿಂತರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಆಗಲಿ ಮಾಡುವೆ ಎಂದು ಒಪ್ಪಿ ಅವರ ಪತ್ರ ತೆಗೆದುಕೊಂಡರು. ಇಷ್ಟಕ್ಕೆ ಮುಗಿಸದ ಅವರು ಒಬ್ಬೊಬ್ಬರಾಗಿ ಮುಖ್ಯ ಕಾರ್ಯನಿರ್ವಾಣಾ ಅಧಿಕಾರಿಗಳ ಜೊತೆಗೆ ಪತ್ರ ಹಿಡಿದು ಕನಿಷ್ಠ ಮುವತ್ತು ನಿಮಿಷ ಭಾವಚಿತ್ರ ತೆಗೆಸಿಕೊಂಡರು . ಇದೇನಾ ಹೋರಾಟದ ಹಾದಿ ಎಂದು ಅಂದೆ ನನಗೆ ಭಾಸವಾಯಿತು.
ನಮ್ಮ ರಾಜ್ಯದ ಹಿತ ಕಾಯಬೇಕಾದರೆ ನಾವು ಹೋರಾಟ ಮಾಡಲೇಬೇಕೆ? ಅಥವಾ ನಾವು ಬರಿ ನಾಟಕೀಯವಾಗಿ ಈ ಹೋರಾಟ ಚೀರಾಟಗಳು ಮಾಡುತ್ತಿದ್ದೇವೆಯೆ? ಸ್ವಲ್ಪ ಯೋಚಿಸಬೇಕಾದ ಸಂಗತಿ ಜೊತೆಗೆ ಈಗಿನ ನಮ್ಮ ರಾಜ್ಯದ ಹೋರಾಟ ಸಮೀತಿಗಳ ಲೆಕ್ಕಾ ಹಾಕುತ್ತಾ ಹೋದರೆ ಲೆಕ್ಕ ತಪ್ಪಾಗಿ ಕೆಲವು ಬಿಟ್ಟು ಹೋಗಬಹುದು, ಏಕೆಂದರೆ ಮನೆಗೊಂದು ಸಂಘಟನೆಯಾಗಿರುವಷ್ಟು ಬೆಳಿದು ನಿಂತಿವೆ ನಮ್ಮ ನಾಡನ್ನು ಕಾಪಾಡಲು ನಮಗೆ ಇಷ್ಟು ಸಂಘಟನೆಗಳು ಬೇಕೆ? ಎನ್ನುವ ಚಿಂತನೆ ಯಾರು ಮಾಡಿಲ್ಲವೆ? ಸಧ್ಯ ಚಿಕ್ಕ ನಮ್ಮ ಊರಿನ ಉದಾಹರಣೆ ತೆಗೆದುಕೊಳ್ಳುವದಾದರೆ ನಮ್ಮ ಊರಿನ ಯಾವುದೆ ಮೂಲೆಯಲ್ಲಿ ನಿಂತು ಕಲ್ಲು ಎಸೆದರೆ ಅದು ಒಬ್ಬ ಸಂಘಟನೆಯ ಸದಸ್ಯನಿಗೆ ತಾಕುತ್ತದೆ. ಒಂದು ಚಿಕ್ಕ ಗ್ರಾಮದ ಸ್ಥಿತಿಗತಿ ಹೀಗಾದರೆ ಇನ್ನು ರಾಜ್ಯದ ಸ್ಥಿತಿಗತಿ ಏನು ನೀವೆ ಊಹಿಸಿ.
ಇನ್ನು ಎಲ್ಲಾ ಸಂಘಟನೆಗಳು ದಾರಿ ಒಂದೆ, ಉದ್ದೇಶವೊಂದೆ ಆದರೆ ಜನರು ಮಾತ್ರ ಬೇರೆಯವರು. ಎಲ್ಲರು ರಕ್ಷಣೆ ಮಾಡುತ್ತೇವೆ ಎನ್ನುವ ಹೆಸರಿನಲ್ಲಿ ತಮ್ಮ ಪ್ರಚಾರಕ್ಕಾಗಿ ಬಳಕೆ ಮಾಡುತ್ತಿರುವರು ಎನ್ನುವ ಮಾತು ಕೇಳು ಬರುತ್ತಿದೆ. ಇದಕ್ಕೆ ಕಾರಣವು ಇದೆ, ಇಂದು ಚಿಕ್ಕ ಸಂಘಟನೆಯ ಸದಸ್ಯ ಮುಂದೆ ಎಂ.ಎಲ್.ಎ.ಎಂ.ಪಿ ಆಗುವ ಬಯಕೆ, ಸ್ವಲ್ಪ ಸ್ಥಳ ಸಿಕ್ಕರೆ ಸಾಕು ರಾಜಕೀಯ ಮಾಡುವ ಲೆಕ್ಕಚಾರ. ಈ ಹೋರಾಟ ಚೀರಾಟಗಳ ಮುಂದಿನ ಯೋಜನೆಯೆ ರಾಜಕೀಯ ನಾನು ನಿಮಗಾಗಿ ಅದು ಮಾಡುವೆ, ಇದು ಮಾಡುವೆ, ಎನ್ನುವ ಇವರು ಬರಿ ಸ್ವಂತ ಲಾಭಕ್ಕಾಗಿ ಬಡೆದಾಡುವ ಜನರ ಸಂಖ್ಯೆ ತುಂಬಾ ಏರಿಕೆಯಾಗಿದೆ.
ಇನ್ನು ತಾವು ಒಬ್ಬ ಸಮಾಜ ಸೇವಕ, ತಾವು ಜನರ ಹಾಗೂ ಕನ್ನಡ ನಾಡಿನ ರಕ್ಷಣೆ ಮಾಡುವೆ ಎನ್ನುವ ಪ್ರಚಾರದ ಜೊತೆಗೆ ಈ ಸಂಘಟನೆಗಳು ಹಲವು ರೀತಿಯ ಸುಲಿಗೆ ಕೆಲಸದಲ್ಲಿ ನಿರತವಾಗಿವೆ. ಹಲವು ಅಧಿಕಾರಿಗಳು ಈ ಸಂಘಟನೆಗಳನ್ನು ಕಂಡರೆ ಹೆದರುವರು, ಕಾರಣ ಅವರಿಂದ ಪ್ರತಿ ತಿಂಗಳು ಹಣ ವಸೂಲಿ ಮಾಡುವ ಈ ಸಂಘಟನೆಗಳು ನೈಜತೆಗೆ ಬೆಲೆ ಕೊಡುವುದಿಲ್ಲ ಅಧಿಕಾರಿಗಳು ಒಂದಿಷ್ಟು ಹಣ ಬಾಯಲ್ಲಿ ತುರುಕಿದರೆ ಸಾಕು ಹೋರಾಟ ಚೀರಾಟ ಬಂದ ಮಾಡಿ ಬಾರ್ ಗೆ ಹೋಗಿ ಬೀರು ಕುಡಿದು, ಜಗಳ ಮಾಡಿ ಅವರವರ ಮನೆ ಸೇರುವ ಈ ಹೋರಾಟಗಳು ನಮಗೆ ಬೇಕೆ? ಎಂದು ಯೋಚಿಸಬೇಕಾಗಿದೆ.
ನಾವು ಕಂಡ ಜಿಲ್ಲಾ ಮಟ್ಟದ ಅನೇಕ ಅಧಿಕಾರಿಗಳು ಏನಿಲ್ಲಾ ಸರ್ ಆ ಎಲ್ಲಾ ಸಂಘಟನೆಗಳ ಒಬ್ಬ ಮುಖಂಡ ಹಿಡಿದರೆ ಸಾಕು ಎಲ್ಲರು ಕೈ ಬೆಚ್ಛಗೆ ಮಾಡಿಸುವುದು ಕಾಯುವರು. ಅಷ್ಟೆ ಏನಿಲ್ಲಾ ಕನ್ನಡ ಕಾಯಲ್ಲಾ, ದೇಶ ಕಾಯಲ್ಲಾ ಎಲ್ಲಾ ಕೆಲಸವಿಲ್ಲದವರು ಅವರವರ ಹೊಟ್ಟೆ ಪಾಡಿಗಾಗಿ ಮಾಡುವ ಕೆಲಸವಿದು ಅಷ್ಟೆ ಎನ್ನುವರು. ಹೀಗಾಗಿ ಈ ಹೋರಾಟ ಹಾಗೂ ಸಂಘಟನೆಗಳು ತಮ್ಮ ಅಸ್ತತ್ವ ಕಳಿದುಕೊಳ್ಳುತ್ತಿವೆ.
ಇನ್ನು ಒಂದೆ ಊರಿನಲ್ಲಿ ಅನೇಕ ಸಂಘಟನೆಗಳಿದ್ದು ಎಲ್ಲಾ ಸಂಘಟನೆಗಳು ಅಧಿಕಾರಿಗಳನ್ನು ಪೀಡಿಸಿದರೆ ಯಾರ ಮಾತು ಕೇಳುವುದು ಎನ್ನುವುದು ತಿಳಿಯದಾಗುತ್ತದೆ. ಎಲ್ಲಾ ಸಂಘಟನೆಗಳಿಗೆ ಚೆಂದಾಪಟ್ಟಿ ನೀಡಿ ಸಾಕಾಗುತ್ತದೆ. ಅದಕ್ಕಾಗಿ ಇಷ್ಟು ಸಂಘಟನೆ ನಮ್ಮ ರಾಜ್ಯಕ್ಕೆ ಬೇಕೆ? ಬೇಡವೆ? ಮತ್ತೊಮ್ಮೆ ವಿಚಾರ ಮಾಡಬೇಕಿದೆ.
ಯಾವುದೆ ಸಂಘಟನೆ ಮಾಡಿದರು ಕನ್ನಡ ನಾಡನ್ನು ಕಾಯುವ ಸತ್ಯವನ್ನು, ಸಾಹಿತ್ಯವನ್ನು, ಕನ್ನಡ ಭಾಷೆಯ ಅಭಿಮಾನ, ಬಿತ್ತರಿಸುವ ಕೆಲಸ ನಮ್ಮ ಮಕ್ಕಳಿಂದ ಪ್ರಾರಂಭವಾಗಬೇಕು ಸಂಘಟನೆಗಳ ಕೆಲಸ ಬರಿ ಹೋರಾಟ, ಚೀರಾಟ ಮಾತ್ರವಲ್ಲಾ ಅವು ನಾಡಿನ ಹಾಗೂ ನುಡಿಯ ಪರಿಚಯ ಹಲವು ವಿಧಗಳ ಮೂಲಕ ನಮ್ಮ ಮಕ್ಕಳಲ್ಲಿ ಬಿತ್ತರಿಸಬೇಕಾದ ಅಗತ್ಯವಿದೆ. ಆದರೆ ಆ ಕೆಲಸ ನಮ್ಮ ನಾಡಿನಲ್ಲಿ ಬೆರಳೆಣಿಕೆಗೆ ಮಾತ್ರ ಸಿಗುತ್ತದೆ. ನಾವು ನಾಡು ಕಾಯುತ್ತೇವೆ ಎನ್ನುವ ಎಷ್ಟೊ ಸಂಘಟನೆಗಳು ಇಂದು ಹಳಿ ತಪ್ಪಿ ಹೋಗುತ್ತಿವೆ. ಅವುಗಳು ನಾಡು ಕೊಳ್ಳೆ ಹೊಡೆಯುವ ಕೆಲಸ ಮಾಡುತ್ತಿವೆ. ಲಂಚ ಕೇಳುವುದು ಬರಿ ಅಧಿಕಾರಿಗಳು ಎಂದು ನಂಬಿಕೆಯಿದ್ದ ನಮಗೆ, ಇಂದು ಹೋರಾಟಗಳು ಹಫ್ತಾ ಎನ್ನುವ ಹೆಸರಲ್ಲಿ ಅಧಿಕಾರಿಗಳ ಜೊತೆಗೆ ಸೇರಿ ಈ ಸಂಘಟನೆಗಳು ಪಡೆಯುತ್ತಿವೆ. ಅದನ್ನು ಹೊರಹಾಕುವ ಕೆಲಸ ಮಾತ್ರ ಎಲ್ಲಾ ಕಡೆಗೆ ಶುನ್ಯವಿದೆ.
ನಿಜವಾಗಿಯೂ ನಮಗೆ ಭಾಷೆಯ ಮೇಲೆ ಪ್ರೇಮಿವಿದ್ದರೆ ಅದನ್ನು ಪ್ರತಿ ದಿನ ಪ್ರೀತಿಸಿ ಬರಿ ನವೆಂಬರ್ ಒಂದು ಮಾತ್ರವಲ್ಲಾ ಪ್ರತಿಕ್ಷಣ ಕನ್ನಡ ನಮ್ಮ ಉಸಿರಾಗಿರಬೇಕು. ನಾವು ಈ ಸಂಘಟನೆಯಿಂದ ಮಾತ್ರ ಕನ್ನಡ ನಾಡನ್ನು ಕಾಯುತ್ತೇವೆ ಎನ್ನುವ ನಂಬಿಕೆಯಿದೆಯಲ್ಲಾ ಅದು ತಪ್ಪು ಅದರಾಚೆಗೆ ಇದ್ದು ಮಾಡುವ ಕನ್ನಡ ಸೇವೆಯೂ ಇದೆ ಆದರೆ ನಾವು ಅದನ್ನು ಪರಿಗಣಿಸಬೇಕು. ಭಾಷೆಯು ನಮ್ಮ ಹೃದಯ ಮನಸ್ಸುಗಳಲ್ಲಿ ಹಾಸುಹೊಕ್ಕಾಗಬೇಕು ಕನಸು ಮನಸ್ಸುಗಳಲ್ಲಿ ಮಿಂದೇಳಬೇಕು. ನಮ್ಮ ಮಕ್ಕಳಿಗೆ ಮೊದಲು ಭಾಷೆ ಕನ್ನಡ ಕಲಿಸಿ ನಂತರ ಉಳಿದ ಭಾಷೆ ಕಲಿಸಿ ಆದರೆ ನಾವು ಉಳಿದ ಭಾಷೆಗಳು ಕಲಿಯಬಾರದು ಅಂತಾ ಯಾವುದೆ ಕಾನೂನು ಇಲ್ಲಾ, ಎಲ್ಲಾ ಬಾಷೆಗಳನ್ನು ಕಲಿಯಿರಿ ಆದರೆ ಕನ್ನಡ ಮರೆಯಬೇಡಿರಿ ಏಕೆಂದರೆ ನಾವು ಹುಟ್ಟಿ ನಮ್ಮ ನರನಾಡಿ ಅದರಿಂದಲೇತಾನೆ ನಾವಿರುವುದು ಅದಕ್ಕಾಗಿ ಎಲ್ಲಾ ಭಾಷೆ ಕಲಿಯಿರಿ ಏಕೆಂದರೆ ದೇಶದ ಯಾವುದೆ ಮೂಲೆಗೆ ಹೋದರು ಬೇರೆ ಭಾಷೆಯ ಅಗತ್ಯವಿದೆ, ಆದರೆ ಎಲ್ಲಿಯೂ ಕನ್ನಡ ಕೀಳಾಗಿ ನೋಡಬೇಡಿ ಅದು ನಮ್ಮ ತಾಯಿಗೆ ಮಾಡುವ ಅವಮಾನ. ನಾನು ನೋಡಿದಂತೆ ನಮ್ಮ ಕಛೇರಿಗೆ ಬರುವ ಅದೆಷ್ಟೊ ಜನ ಕರ್ನಾಟಕದವರೆ ಆಗಿದ್ದು ಓಹೊ ಐ ಆಯ್ಯಾಮ ಸ್ವಾರಿ ಐ ಡೊಂಟ ನೋ ಕನ್ನಡ ಅಂತಾರೆ ಅದೆ ಬೇರೆ ರಾಜ್ಯದಿಂದ ಬಂದ ಅದೆಷ್ಟೊ ವ್ಯಕ್ತಿಗಳು ಕೊನೆಯ ದಿನಗಳಲ್ಲಿ ನಮ್ಮ ಒಂದೆರಡು ಕನ್ನಡ ಮಾತನಾಡಿ ನಿಮ್ಮ ಭಾಷೆ ಚೆನ್ನಾಗಿದೆ ಅಂತಾರೆ. ಇದು ನಮ್ಮ ನಾಡಿನ ಸಂಪತ್ತು ನಮಗೆ ಅರ್ಥವಾಗಿಲ್ಲಾ ಆದರೆ ಬೇರೆಯವರಿಗೆ ಬಹಳ ಚೆನ್ನಾಗಿ ಅರ್ಥವಾಗಿರುವ ಸತ್ಯ .
ಬನ್ನಿ ಸ್ನೇಹಿತರೆ ನಮ್ಮ ನಾಡಿನ ಹಾಗೂ ನುಡಿಯ ಸೇವೆ ಹಲವು ವಿಧಾನಗಳ ಮೂಲಕ ಮಾಡೋಣಾ. ನಮ್ಮ ಕನ್ನಡಾಂಬೆಯ ತೇರು ಎಲ್ಲರು ಸೇರಿ ಎಳೆಯೋಣಾ. ಎಲ್ಲಾ ಭಾಷೆಗಳು ಕಲಿಯೋಣಾ ಕನ್ನಡ ಮರೆಯದೆ ಪ್ರೀತಿಸೋಣಾ ಅದರ ಪಾವಿತ್ರ್ಯತೆ ಕಾಪಾಡೋಣಾ.........