ಒಂದು ಪಕ್ಷಕ್ಕಾಗಿ ಸತತ ದುಡಿದರೆ ಮಾತ್ರ ನಮಗೆ ಸಿಗುವ ಸ್ಥಾನಮಾನ ತಾನಾಗಿಯೆ ಸಿಗುತ್ತದೆ. ನಮಗೆ ಮೊದಲು ಬದ್ಧತೆ ಬೇಕು, ಒಂದು ಪಕ್ಷಕ್ಕೆ ನಿಷ್ಠರಾಗಿ ಕಾರ್ಯ ಮಾಡಬೇಕು, ಆ ಪಕ್ಷದ ನಿರ್ಣಯಗಳಿಗೆ ಬದ್ಧರಾಗಿರಬೇಕು, ಪಕ್ಷದ ನಡಾವಳಿಗಳಿಗೆ ನಿಯಮಗಳಿಗೆ ಭಂಗ ಬರುವ ರೀತಿಯಲ್ಲಿ ನಡೆದುಕೊಂಡರೆ ಅದು ನಮ್ಮ ಬದ್ಧತೆಯಲ್ಲ ನಾವು ಸಂಕುಚಿತವಾಗಿ ಯೋಚಿಸದೆ ವಿಶಾಲವಾಗಿ ಯೋಚಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಹೀಗೆ ಮಾತಿನುದ್ದಕ್ಕು ನೇರ ದಿಟ್ಟ ಉತ್ತರಗಳನ್ನು ನೀಡುತ್ತ ತಮ್ಮ ಹಿರಿಮೆಯನ್ನು ಮೆರೆದ ಮಾದರಿ ರಾಜಕಾರಣಿ ಶ್ರೀ ಮಲ್ಲಿಕಾರ್ಜುನ ಖರ್ಗೆಜಿ.
ಇಂದು ಇವರು ರಾಜಕಾರಣದಲ್ಲಿ ಇಷ್ಟು ಎತ್ತರಕ್ಕೆ ಬೆಳೆಯಲು ಮೂಲ ಕಾರಣ ಅವರು ಪಕ್ಷದಲ್ಲಿ ತೋರಿದ ಬದ್ಧತೆ, ಅವರು ಕೈಗೆತ್ತಿಕೊಳ್ಳುವ ಅಭಿವೃದ್ಧಿ ಯೋಜನೆಗಳು, ಅವರ ಜನಪರ ಕಾಳಜಿ, ಕ್ಷೇತ್ರಕ್ಕಾಗಿ ಅವರು ನೀಡುವ ಕೊಡುಗೆಗಳು ಇವೆಲ್ಲವುದರಿಂದ ಖರ್ಗೆಜಿ ಇವತ್ತು ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಬಹು ನಿರ್ಣಾಯಕ ಪಾತ್ರ ನಿರ್ವಹಿಸುತ್ತಿದ್ದಾರೆ. ತಮಗೆ ನೀಡಿರುವ ಕೆಲಸದಲ್ಲಿ ಹೊಸತನದಿಂದ ಕೆಲಸ ಮಾಡಿ ತೋರಿಸುವ ಶ್ರೇಷ್ಠ ರಾಜಕಾರಣಿ ಶ್ರೀ ಮಲಿಕಾರ್ಜುನ ಖರ್ಗೆಜಿ. ಯಾವುದೇ ಹುದ್ದೆಯಾಗಲಿ, ಯಾವುದೇ ಖಾತೆಯಾಗಲಿ ಸಮರ್ಥವಾಗಿ ನಿಭಾಯಿಸಿ ತಮ್ಮ ಕ್ಷೇತ್ರಕ್ಕೆ ಸಾಮಾಜಿಕ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವರು ಮಾನ್ಯ ಮಲ್ಲಿಕಾರ್ಜುನ ಖರ್ಗೆಜಿ ಅದಕ್ಕಾಗಿಯೇ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಇಂದು ಮಿಂಚಿನ ರಾಜಕಾರಣಿಯಾಗಿ ಪರಿಣಮಿಸಿದ್ದಾರೆ.
ಈ ರಾಜ್ಯ ಹಾಗೂ ದೇಶ ಕಂಡ ಅನೇಕ ಅದ್ಭುತ ರಾಜಕಾರಣಿಗಳಲ್ಲಿ ಮಾನ್ಯರು ಒಬ್ಬರು ಎಂದರೆ ತಪ್ಪಾಗಲಾರದು. ಎಲ್ಲಿಯು ಮತ್ತೊಬ್ಬರ ಮೇಲೆ ಗೂಬೆ ಕೂರಿಸದೆ ತಮ್ಮ ಪಾಲಿಗೆ ತಾವು ನಿಷ್ಠೆಯಿಂದ ಕೆಲಸ ಮಾಡುವತ್ತ ಗಮನ ಹರಿಸುವ ಏಕೈಕ ರಾಜಕಾರಣಿ ಶ್ರೀ ಖರ್ಗೆಜಿ. ಎಲ್ಲಿಯು ಕಳಂಕ ಬರುವಂತಹ ಕೆಲಸಕ್ಕೆ ಕೈ ಹಾಕದೇ, ಸದಾ ಪಕ್ಷದ ನಿಷ್ಠೆಗಳನ್ನು ಜೊತೆಗೆ ವಯಕ್ತಿಕ ಒಳ್ಳೆಯ ನಿಲುವುಗಳನ್ನು ಕಾಪಾಡಿಕೊಂಡು ಬಂದಿರುವ ಇವರು ಹಳ್ಳಿಯಿಂದ ತಮ್ಮ ರಾಜಕಾರಣವನ್ನು ಇಂದು ದಿಲ್ಲಿಯವರೆಗೂ ವಿಸ್ತರಿಸಿದ್ದು ಒಂದು ಸಾಧನೆಯೆ ಸರಿ.
ಕಾಂಗ್ರೆಸ್ ಪಕ್ಷದಲ್ಲಿನ ಹತ್ತು ಅಂಶದ ಕಾರ್ಯಕ್ರಮದಿಂದ ಪ್ರಭಾವಿತರಾದ ಶ್ರೀಯುತರು ಇಂದಿರಾಗಾಂಧಿಯ ಅನುಯಾಯಿಯಾದರು. ಯುವ ವಯಸ್ಸಿನಲ್ಲೇ ರಾಜಾಕರಣಕ್ಕೆ ಸೇವಕನಾಗಿ ವಿದ್ಯಾರ್ಥಿಯಾಗಿ ಸೇರಿದ ಖರ್ಗೆಜಿ, ಇಂದು ಅವರ ಕೆಲಸಗಳಿಂದ ಜನರಿಗೆ ಸ್ಪಂದಿಸುವ ರೀತಿಯಿಂದ ಮೇರು ವ್ಯಕ್ತಿತ್ವದ ನೇರ ನಡೆಯ ಪ್ರಮಾಣಿಕ ರಾಜಕಾರಣಿಯಂದು ವಿರೋಧ ಪಕ್ಷದಲ್ಲಿಯು ಮಾತನಾಡುವಂತಹ ರಾಜಕಾರಣಿಯಾಗಿದ್ದಾರೆ.
ಅವರ ಮಾತಿನುದ್ದುಕ್ಕು ಪಕ್ಷದ ಹಾಗೂ ಸ್ವವಿಚಾರದತ್ತ ಅಭಿವೃದ್ದಿ ಕೆಲಸಗಳತ್ತ ಗಮನ ಹರಿಸಿದರು ಅವರು ವಯಕ್ತಿಕ ನಿಂದನೆ ಎಂದಿಗೂ ಮಾಡಿದವರಲ್ಲ ಎಂಬುವುದು ಅವರ ಮಾತುಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಕರುನಾಡ ಮಣ್ಣಲ್ಲಿ ಇಂತಹ ಒಬ್ಬ ರಾಜಕಾರಣಿ ಇರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಹಿರಿಯರ ಬಗ್ಗೆ ಗೌರವ, ಪಕ್ಷದ ಬಗ್ಗೆ ಹೆಮ್ಮೆ, ನಾಡಿನ ಹೆಸರಾಂತ ಜೀವಿಗಳ ಬಾಯಲ್ಲಿ ಸಾಮಾನ್ಯ ಜನರ ಮನಸ್ಸಲ್ಲಿ ಮನೆಮಾಡಿರುವ ವ್ಯಕ್ತಿ ಇವರು ಖರ್ಗೆಜಿ.
ಮಾತಿನ ನಡುವೆ ಜಾನಪದ ಸೊಗಡಿನ ಮಾತುಗಳನ್ನು ಸೇರಿಸುತ್ತ ಮಾತನಾಡುವುದು ಎಷ್ಟು ಸೊಗಸಾಗಿತ್ತು ಎಂದರೆ ಇದರಿಂದ ಅವರು ಇನ್ನು ಹಳ್ಳಿಯ ಭಾಷೆ ಮರೆತಿಲ್ಲ ಎನ್ನುವುದು ಸ್ಪಷ್ಟವಾಗಿ ತೋರುತ್ತದೆ. ಪತ್ರಕರ್ತರು ವಿಷಯಾಂತರ ಮಾಡುವಾಗ, ಮತ್ತೊಬ್ಬ ರಾಜಕಾರಣಿಗಳ ಮೇಲೆ ಎತ್ತಿಕಟ್ಟಿ ವಿರುದ್ಧ ಮಾತನಾಡುವಾಗ ಹೇಗೆ ಯಾವ ಉತ್ತರ ನೀಡಬೇಕು ಎನ್ನುವ ಚಾಣಕ್ಷತನ ಅವರ ಮಾತುಗಳಲ್ಲಿ ಕಂಡು ಬರುತ್ತದೆ.
ವಿಷಯಗಳನ್ನು ಮಾತನಾಡುವಾಗ ಇರುವ ಸ್ಪಷ್ಟತೆ, ಅದನ್ನು ಮನಗೊಂಡ ಖರ್ಗೆಜಿ ಹಗರಣದಲ್ಲಿ ನೈಜವಾಗಿ ಆಗಿದ್ದು ಏನು ಯಾವುದನ್ನು ಬಿಂಬಿಸಲಾಗುತ್ತಿದೆ ಎಂಬುವುದು ಸ್ವತ: ತಮ್ಮ ವಕೀಲಿ ಭಾಷೆಯಲ್ಲಿ ಮಾತನಾಡಿದ್ದು ಇವರೊಬ್ಬ ಸಮರ್ಥ ವಕೀಲರು ಎಂಬ ವಿಷಯ ಅರ್ಥವಾಗುತ್ತದೆ. ಕಾಂಗ್ರೆಸ್ ಪಕ್ಷ ಏನು ತಪ್ಪು ಮಾಡಿಲ್ಲ ಎಂದಲ್ಲ ಆದರೆ ಮಾಡುವ ಮುಂಚೆಯೆ ಅದನ್ನು ಬಿಂಬಿಸಲಾಗುತ್ತಿದೆ. ಮೇಲಿನ ವಿಷಯಗಳು ಮಾತ್ರ ಜನರ ಮುಂದೆ ಮಾದ್ಯಮಗಳು ಇಟ್ಟು ಜನರಿಗೆ ವಿಷಯಾಂತರ ಮಾಡುತ್ತಿರುವುದು ನಿಜಕ್ಕು ವಿಪರ್ಯಾಸವೆಂದರು. ಇನ್ನು ಹಲವು ಸತ್ಯಗಳನ್ನು ಮಾದ್ಯಮಗಳು ಬಿತ್ತರಿಸುವ ಅಗತ್ಯವಿದೆ ಎನ್ನುವುದು ಅವರ ಮಾತಿನ ಒಟ್ಟು ತಾತ್ಪರ್ಯವಾಗಿತ್ತು.
ಅವರ ಮಾತಿನ ಮದ್ಯದಲ್ಲಿ ಇಂಗ್ಲೀಷ ಪದಗಳ ಬಳಕೆ, ರಾಜಾಕೀಯ ಪದಗಳ ಬಳಕೆ, ದೇಶದ ಅಭಿವೃದ್ದಿ ಪಥದತ್ತ ಒಯ್ಯುವ ಅವರ ಕನಸು ಎಲ್ಲವು ಪ್ರತಿಬಿಂಬಿತವಾಗುತ್ತದೆ. ಈ ದೇಶದ ಹಿಂದುಳಿದವರ ಬಗ್ಗೆ ಅವರಿಗಿರುವ ಕನಿಕರ ಕಾಳಜಿ ಎಲ್ಲವು ಎದ್ದು ಕಾಣುತ್ತದೆ. ಅವರಿಗೆ ರಾಜಕೀಯದಿಂದ ಲಾಭ ಪಡೆಯುವ ಆಸೆಯಿಲ್ಲ ಆದರೆ ಜನರಿಗಾಗಿ ತಮ್ಮ ಅಧಿಕಾರದ ಅವಧಿ ಇರುವಾಗಲೇ ಏನಾದರು ಮಾಡಿ ಕೊಡಬೇಕು ಎನ್ನುವ ಅಗಾಧ ಮನಸ್ಸು ಅವರದು. ಇಂತಹ ಒಬ್ಬ ಅಪರೂಪದ ರಾಜಕಾರಣಿಯನ್ನು ಪಡೆದ ನಾವೆಲ್ಲರು ಧನ್ಯರು ಎನಿಸಿತು.
ಅವರು ಮಾದ್ಯಮಗಳಲ್ಲಿ ಕಾಣಿಸಿಕೊಳ್ಳುವುದೇ ಅಪರೂಪ, ಎಲ್ಲಿಯು ಪ್ರಚಾರದ ಭರಾಟೆಯಿಲ್ಲ ಕೆಲಸ ನೋಡಿ ಅವಕಾಶ ಕೊಡಿ ಎನ್ನುವ ಮನುಷ್ಯ, ಜನರ ಹೊಗಳಿಕೆಗಳಿಗೆ ಮನಸೋಲುವ ರಾಜಕಾರಣಿಯಲ್ಲ, ಮತ್ತೊಬ್ಬರನ್ನು ನಿಂದಿಸಿ ಮನನೋಯುವಂತೆ ಮಾತನಾಡುವ ವ್ಯಕ್ತಿಯಂತು ಮೊದಲೆ ಅಲ್ಲ ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ತಮ್ಮ ಕ್ಷೇತ್ರದ ಜನತೆಗಾಗಿ ಏನು ಮಾಡಬಹುದು ಹೊಸದನ್ನು ಏನು ಕೊಡಬಹುದು ಎಂಬ ವಿಚಾರವಂತ ಇವರು. ಇವರನ್ನು ಗಮನಿಸಿದ ನಮ್ಮ ನಾಡಿನ ತಾಯಂದಿರು ನಮ್ಮ ಮಕ್ಕಳನ್ನು ಮಗು ನೀನು ರಾಜಕಾರಣಿಯಾದರೆ ಮಾನ್ಯ ಮಲ್ಲಿಕಾರ್ಜುನ ಖರ್ಗೆಜಿಯಂತಾಗು ಎನ್ನುವ ಮಾತುಗಳು ಇನ್ನು ಸನ್ನಿಹಿತ ಎನಿಸುತ್ತದೆ.
‘ಹಳ್ಳಿ ಹುಡುಗನೊಬ್ಬ ದಿಲ್ಲಿಗೆ ಹೋಗುವುದು’ ಇದೊಂದು ದೊಡ್ಡ ಸಾಹಸ. ಪ್ರಾಮಾಣಿಕತೆ, ಕಠಿಣ ಪರಿಶ್ರಮದೊಂದಿಗೆ ದಕ್ಷತೆ ಮತ್ತು ಪಕ್ಷ ನಿಷ್ಠೆ ಅತ್ಯಂತ ಮುಖ್ಯ. ಇವುಗಳೊಂದಿಗೆ ತಾವು ಅನುಭವಿಸಿದ ಬಡತನ, ಕಷ್ಟಗಳನ್ನು ಮುಂದಿನ ಜನಾಂಗ ಅನುಭವಿಸಬಾರದು ಎಂಬ ದೂರದೃಷ್ಠಿಯೊಂದಿಗೆ ಅಧಿಕಾರ ಸಿಕ್ಕಾಗ ಯೋಜನೆಗಳನ್ನು ರೂಪಿಸಿ, ಅವುಗಳನ್ನು ಅನುಷ್ಠಾನಗೊಳಿಸುವ ಮೂಲಕ ಜೀವನವನ್ನು ಸಾರ್ಥಕಗೊಳಿಸಿಕೊಳ್ಳುವುದು ಅವರ ಪ್ರಮುಖ ಗುಣ.
ಮಾನ್ಯ ಖರ್ಗೆಜಿಯವರು ಇಂದು ಕೇವಲ ನಾಯಕರಲ್ಲ, ಹಿರಿಯ ನಾಯಕರು ಒಂದು ರಾಷ್ಟ್ರದ ಪೂರ್ಣ ಚಿತ್ರಣ ಅವರಲ್ಲಿದೆ. ದೇಶ-ವಿದೇಶಗಳನ್ನು ಸುತ್ತಿ ತುಲನಾತ್ಮಕವಾಗಿ ನಮ್ಮ ಕೊರತೆಗಳನ್ನು ತುಂಬಿಕೊಳ್ಳುವ ಸಾಮಥ್ರ್ಯವೂ ಅವರಲ್ಲಿದೆ. ಅಂಥ ಯಾವುದೇ ಅವಕಾಶಗಳನ್ನು ಅವರು ಬಿಟ್ಟವರಲ್ಲ. ಅದನ್ನು ಮಾಡಿ ತೋರಿಸುವ ಛಲಗಾರಿಕೆಯ ನಾಯಕರು ಅವರು.
ಇಂಥ ನಾಯಕರು, ಹಳ್ಳಿಯಿಂದ ದಿಲ್ಲಿಗೆ ಸುಲಭವಾಗಿ ಹೋಗಲಿಲ್ಲ. ಯಾವ ಅಧಿಕಾರವೂ ಅವರನ್ನು ಅರಿಸಿಕೊಂಡು ಬರಲಿಲ್ಲ. ಅದರ ಹಿಂದೆ ಅವರ ಪರಿಶ್ರಮ ಮತ್ತು ಪ್ರಾಮಾಣಿಕತೆ, ನಿಷ್ಠೆ, ದಕ್ಷತೆಗಳಿವೆ. ತಮ್ಮ 45 ವರ್ಷಗಳ ರಾಜಕೀಯ ಜೀವನದಲ್ಲಿ ನಿಷ್ಕಳಂಕ ವ್ಯಕ್ತಿತ್ವದೊಂದಿಗೆ ಬೆಳೆದು ದಿಲ್ಲಿ ತಲುಪಿದವರು. ಅವರು ಕರ್ನಾಟಕದ ಮುಖ್ಯಮಂತ್ರಿಯಾಗಬೇಕಿತ್ತು. ಆದರೆ ಇಂದಿನ ಜಾತಿ ರಾಜಕಾರಣ ಅವರನ್ನು ಈ ಅವಕಾಶದಿಂದ ವಂಚಿತರನ್ನಾಗಿ ಮಾಡಿತು. ಆದರೆ ಅವರೆಂದೂ ಬೇಸರಿಸಿಕೊಳ್ಳದೇ, ‘ಕರ್ಮಣ್ಯೆ ವಾಧಿಕಾರಸ್ತೆ ಮಾಫಲೇಶು ಕದಾಚನ’ ಎಂಬ ಭಗವದ್ಗೀತೆಯ ವಾಣಿಯಂತೆ ತಮ್ಮ ಕರ್ಮವನ್ನು ಮಾಡುತ್ತ ಕಾಯಕ ಯೋಗಿ ಎನಿಸಿಕೊಂಡರು.
ಅವರೊಬ್ಬ ಯೋಗಿ ಎನ್ನುವುದಕ್ಕೆ ಮತ್ತೊಂದು ಕಾರಣ ಮಹಾನ್ ಮಾನವತವಾದಿ ಅಂಬೇಡ್ಕರ್ ಅನುಯಾಯಿಯಾಗಿ, ಬುದ್ಧನ ಪ್ರತಿರೂಪದಂತೆ ಎಲ್ಲರಿಗೂ ಒಳ್ಳೆಯದನ್ನು ಮಾಡುವ ಉದಾರ ಮನಸ್ಸಿನವರಾಗಿ ಎಲ್ಲರಿಗೂ ಬುದ್ಧನ ದರ್ಶನದೊಂದಿಗೆ ಆತನ ಪ್ರೇರಣೆಯಾಗಲಿ ಎಂದು ಕಲಬುರ್ಗಿ ಜಿಲ್ಲೆಯಲ್ಲೊಂದು ‘ಬುದ್ಧ ವಿಹಾರ’ವನ್ನೇ ನಿರ್ಮಿಸಿದರು. ಇದು ಬುದ್ಧ ನಡೆದಾಡಿದ ನೆಲ, ಇಲ್ಲಿ ಸತ್ಯ ಅಹಿಂಸೆ ತ್ಯಾಗ ಪರಿಶ್ರಮದ ಫಲ ಬೆಳೆಯಬೇಕು. ಬೌದ್ಧ ಧರ್ಮದ ಪುನರುತ್ಥಾನವಾಗಬೇಕು ಇಂದಲ್ಲ ನಾಳೆ ಆಗುತ್ತದೆ ಎಂಬ ನಂಬಿಕೆಯೇ ಈ ಮಹಾನ್ ದೇಗುಲ ಅದರ ನಿರ್ಮಾತೃ ಮಲ್ಲಿಕಾರ್ಜುನ ಖರ್ಗೆಜಿ.
ನಮ್ಮ ನಾಡಿನ ರಾಜಕೀಯ ಮುತ್ಸದ್ದಿ, ನೇತಾರ, ಬಡವರ ಬಂಧು, ದಿನ ದಲಿತರ ಆಶಾಕಿರಣ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಅಭಿವೃದ್ಧಿಗೆ ಹೆಚ್ಚು ಪ್ರಾಧ್ಯಾನತೆ ನೀಡುವ ಆದರಣೀಯ ತನ್ನ ಜೀವನದಲ್ಲಿ ತಂದೆ-ತಾಯಿಗೆ ಒಳ್ಳೆಯ ಸುಪುತ್ರನಾಗಿ ಶಾಲೆಯಲ್ಲಿ ಉತ್ತಮ ವಿದ್ಯಾರ್ಥಿಯಾಗಿ ಸಹ ಪಾಠಿಗಳಿಗೆ ಉತ್ತಮ ಸ್ನೇಹಿತನಾಗಿ, ವಕೀಲ ವೃತ್ತಿಯಲ್ಲಿದ್ದು, ಕಾನೂನು ಅರಿತುಕೊಂಡವರಾಗಿ ರಾಜಕೀಯ ಪ್ರವೇಶ ಮಾಡಿ ಏಳೆಂಟು ಬಾರಿ ಶಾಸಕರಾಗಿ, ಮಂತ್ರಿಯಾಗಿ, ಅಭಿವೃದ್ಧಿ ಹರಿಕಾರರಾಗಿ ಈಗ ಲೋಕಸಭೆ ಸದಸ್ಯರಾಗಿ, ಅದಕ್ಕೂ ಹೆಚ್ಚಾಗಿ ಕೇಂದ್ರದ ಕಾರ್ಮಿಕ ಖಾತೆ ಸಚಿವರಾಗುವುದು ರೈಲ್ವೆ ಖಾತೆ ಸಚಿವರಾಗುವುದು ಈ ಭಾಗಕ್ಕೆ ಒಂದು ಅವಿಸ್ಮರಣೀಯ ಸಂಗತಿ ಎಂದೇ ಹೇಳಬೇಕಾಗುತ್ತದೆ.
ಶ್ರೀ ಖರ್ಗೆಜಿ ಎಂಬ ಮಾಂತ್ರಿಕ ಮಾತ್ರ ಅಭಿವೃದ್ಧಿ ಚಿಂತನೆ ಮಾಡ್ತಾರೆ ಹಾಗೂ ಈ ನೆಲದ ಹಳ್ಳಿ ಹುಡುಗನೊಬ್ಬ ದಿಲ್ಲಿಯಲ್ಲಿ ಕೂತು ಆಡಳಿತ ಮಾಡುತ್ತಾರೆ ಎನ್ನುವುದೇ ಖುಷಿಯ ಸಂಗತಿ. ಪ್ರಾಮಾಣಿಕ, ಪಾರದರ್ಶಕ ವ್ಯಕ್ತಿತ್ವದ ಶ್ರೀ ಖರ್ಗೆಜಿಯವರು ತಾವು ಯಾವತ್ತೂ ಸುಮ್ಮನೆ ಕೂತವರಲ್ಲ. ತಾವು ಆರಿಸಿ ಬಂದ ಕ್ಷೇತ್ರಕ್ಕೆ ಸಕಲ-ಸವಲತ್ತುಗಳನ್ನು ಮೂಲಭೂತ ಸೌಲಭ್ಯಗಳನ್ನು ಮಾಡಿದ್ದಾರೆ. ಕ್ಷೇತ್ರದ ಋಣವನ್ನು ತೀರಿಸಿದ್ದಾರೆ. ಇಂತಹ ಒಬ್ಬ ದಕ್ಷ ಆಡಳಿತಗಾರರಾಗಿರುವ ಶ್ರೀ ಖರ್ಗೆಜಿಯವರು ಇದೀಗ ಮತ್ತೊಮ್ಮೆ ಜನರ ಮುಂದೆ ತಮ್ಮ ರಾಜಕೀಯ ಪರೀಕ್ಷಿಸಲು ಈ ಬಾರಿಯ ಲೋಕಸಭೆಗೆ ಸ್ಪರ್ಧೆಗಿಳಿದಿದ್ದಾರೆ ಅವರು ಎಲ್ಲಿಯು ಭಾಷಣದಲ್ಲಿ ನನಗೆ ಓಟು ಕೊಡಿ ಎನ್ನುವ ಮಾತಿಲ್ಲ ಆದರೆ ಅವರು ಮಾಡಿರುವ ಕೆಲಸಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತಿದ್ದಾರೆ. ನಾಡಿನ ಅನೇಕ ಮಾಹಾನ್ ವ್ಯಕ್ತಿಗಳು ಖರ್ಗೆಜಿಯವರು ಉತ್ತಮ ಕೆಲಸಗಳನ್ನು ಮಾಡಿ ನಾಡಿಗೆ ಕೀರ್ತಿ ತಂದಿದ್ದಾರೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿ ಎಂದಾಗ ಅವರನ್ನು ಅದನ್ನು ಬೇಡ ಪ್ರಜಾಪ್ರಭುತ್ವದ ಕೊಲೆ ಮಾಡುವುದು ನನಗೆ ಇಷ್ಟವಿಲ್ಲ ಇದೆಲ್ಲವನ್ನು ಜನರೇ ತೀರ್ಮಾನಿಸಲಿ ಅವರು ಕೊಡುವ ನಿರ್ಣಯಕ್ಕೆ ನಾನು ಬದ್ಧನಾಗುವೆ ಎನ್ನುವ ಮಾತು ಹೇಳಿದ ವ್ಯಕ್ತಿ ಇವರು.
ಈ ಬಾರಿಯ ಚುನಾವಣೆ ಖರ್ಗೆಜಿಯವರ ಬಾಳಿನಲ್ಲಿ ಬಹು ಮಹತ್ವದ ಸ್ಥಾನ ಪಡೆಯುವ ಸಾಧ್ಯತೆಯಿದೆ. ಒಬ್ಬ ಮತದಾರನ ಮನದೊಳಗೆ ಸತತ ಹತ್ತು ಬಾರಿ ಉಳಿಯಬೇಕಾದರೆ ಅದು ಸಾಮಾನ್ಯದ ಮಾತಲ್ಲ ಆ ರಾಜಕಾರಣಿಯ ಅಭಿವೃದ್ಧಿ ಕೆಲಸಗಳೆ ಅವರಿಗೆ ಶ್ರೀ ರಕ್ಷೆಯಾಗಿ ಮತ್ತೆ ಆರಿಸಿ ಬರಲಿ ಈ ನಾಡಿನ ಅವರ ಕ್ಷೇತ್ರದ ಇನ್ನು ಹಲವು ಜನಪರ ಕೆಲಸಗಳು ಮಾಡಲಿ ಎನ್ನುವುದರ ಜೊತೆಗೆ ಈ ಭಾಗದ ಜನರ ಆಶೊತ್ತರಗಳಿಗೆ ಸ್ಪಂದಿಸಲಿ ಎನ್ನುವ ಕಳ ಕಳಿಯ ಮನವಿ.
ಇನ್ನೂ ಮತದಾರರ ಮನದೊಳಗೇನಿದೆ ಯಾರು ಅರೆಯಲು ಸಾಧ್ಯವಿಲ್ಲ, ಲೋಕಸಭೆಯು ಮಕ್ಕಳಾವೂ ಅಲ್ಲ, ಪ್ರತಿಯೊಂದು ಪಕ್ಷವು ಈ ಬಾರಿ ತನ್ನದೆ ದಾರಿಯಲ್ಲಿ ಪ್ರಚಾರದ ಭರಾಟೆಯಲ್ಲಿರುವುದು ಅತ್ಯಂತ ಸತ್ಯ. ದೆಹಲಿ ಚುನಾವಣೆಯ ಬಿಸಿ ಇನ್ನೂ ಆರಿಲ್ಲ ಅಲ್ಲಿ ನಡೆದ ರಾಜಕೀಯ ಸಾಮಾನ್ಯ ಜನರ ಮನದೊಳಗಿದ್ದು ಜೊತೆಗೆ ದೇಶದಲ್ಲಿ ಮೋದಿಯೆಂಬ ಮಾಹಾನ್ ವ್ಯಕ್ತಿಯ ಅಲೆ ಇದೀಗ ಜೋರಾಗಿ ಬೀಸುತ್ತಿದೆ, ಅನೇಕ ರಾಜಕೀಯ ಪಕ್ಷಗಳ ಹುಟ್ಟಿವೆ ರಾಜಕೀಯ ಯಾವಾಗ ಯಾವ ರೀತಿಯಾಗಿ ಪರಿಣಾಮ ಬೀರುವುದು ಕಾದು ನೋಡಬೇಕು. ಖರ್ಗೆ ಮಾಡಿರುವ ಕೆಲಸಗಳು ಮತದಾರ ಪ್ರಭುವಿಗೆ ಸರಿ ಅನಿಸಿದರೆ ಮಾತ್ರ ಮತಹಾಕುವರು ಇಲ್ಲವಾದರೆ ಅಭ್ಯರ್ಥಿ ಯಾರೆ ಆಗಲಿ ಮನೆಗೆ ಕಳಿಸುವರು. ಯಾವುದಕ್ಕೂ ಜನಭಿಪ್ರಾಯದ ಮುಂದೆ ಎಲ್ಲರು ಶೂನ್ಯ ಎನ್ನುವುದು ಮಾತ್ರ ಮರೆಯಬೇಡಿ.