ಡ್ರಗ್ಸ್, ಮಧ್ಯ ಮತ್ತು ಇತರೆ ದುಶ್ಚಟಗಳು
ಈ ದುಶ್ಚಟಗಳು ಹೆಚ್ಚಾಗಿ ನಗರ ಪ್ರದೇಶದ ಮಕ್ಕಳಲ್ಲಿ ಕಂಡು ಬರುತ್ತವೆ. ಹೈಸ್ಕೂಲ್ ಹಂತ ಇರುವಾಗಲೆ, ನಗರದ ಮಕ್ಕಳು ಪಾರ್ಟಿ ಮಾಡುವುದನ್ನು ಇಷ್ಟ ಪಡುತ್ತಾರೆ. ಹದಿಹರೆಯಕ್ಕೆ ಕಾಲಿಟ್ಟಂತೆ, ಇದರ ಆಸೆ ಮತ್ತಷ್ಟು ಹೆಚ್ಚುತ್ತದೆ. ಪಾರ್ಟಿಗಳಲ್ಲಿ ವಿವಿಧ ಸಾಮಾಜಿಕ ಹಿನ್ನಲೆಯುಳ್ಳವರು, ಭೇಟಿಯಾಗುವ ಕಾರಣ ಡ್ರಗ್ಸ್ ಮಧ್ಯ ಮತ್ತು ಇತರೆ ಕೆಲವು ಚಟಗಳ ದಾಸಾರಾಗುತ್ತಾರೆ. ಗೆಳೆಯರೊಂದಿಗೆ ಸೇರಿ ತಾವು ಯಾರಿಗೇನು ಕಡಿಮೆಯಿಲ್ಲಾ ಎನ್ನುವ ಭಾವನೆಯೊಂದಿಗೆ, ಹಲವು ಕೆಟ್ಟ ಚಟಗಳಿಗೆ ಬಲಿಯಾಗುತ್ತಾರೆ. ಈ ಸಮಯದಲ್ಲಿ ಈ ಮಕ್ಕಳಿಗೆ ಹಿರಿಯರಿಂದ ಸರಿಯಾದ ಮಾರ್ಗದರ್ಶನ ನೀಡದಿದ್ದರೆ, ಅವರು ಹಲವರ ಒತ್ತಡಕ್ಕೆ ಮಣಿದು ದುರಾಭ್ಯಾಸಗಳಿಗೆ ಬಲಿಯಾಗುತ್ತಾರೆ. ಅದಕ್ಕಾಗಿ ಮಕ್ಕಳಿಗೆ ಈ ಸಮಯದಲ್ಲಿ ಸೂಕ್ತವಾದ ಮಾರ್ಗದರ್ಶನ ನೀಡಬೇಕು. ಇಂತಹ ಚಟವಿರುವ ಗೆಳೆಯರಿಂದ ದೂರವಿರುವಂತೆ ನೋಡಿಕೊಳ್ಳಬೇಕು. ಮನೆಯಲ್ಲಿ ಈ ವಾತಾವರಣದಿಂದ ಮೊದಲು ಮುಕ್ತಿ ನೀಡಬೇಕು. ಪಾಲಕರಾದವರು ಸ್ವತ: ಇದರಿಂದ ದೂರವಿದ್ದು ಮಕ್ಕಳಿಗೆ ಮಾದರಿಯಾಗಬೇಕು. ಈ ಚಟಗಳಿಂದ ಆಗಬಹುದಾದ ಅನಾಹುತಗಳ ಬಗ್ಗೆ ಮಕ್ಕಳಿಗೆ ಮನವರಿಕೆಯಾಗುವಂತೆ ತಿಳಿಸಬೇಕು.
ಹಣದೊಂದಿಗೆ ವ್ಯವಹಾರ
ಹಣ ಜೀವನದ ಒಂದು ಬಹುಮುಖ್ಯ ಭಾಗ, ಪ್ರಪಂಚದಲ್ಲಿ ಹಣವಿದ್ದರೆ ಮಾತ್ರ ಬೆಲೆಯಿದೆ. ನಿಮ್ಮ ಮಗ ಅಥವಾ ಮಗಳು ಈ ವಯಸ್ಸಿನಲ್ಲಿ ಸಂಪಾದನೆ ಮಾಡುತ್ತಿದ್ದರೆ, ಅವರು ನಿಮ್ಮ ಮಾತು ಕೇಳುವುದು ಸ್ವಲ್ಪ ಕಡಿಮೆಯೆ ಹೌದು. ಅವರಿಗೆ ಹಣದ ಮೌಲ್ಯ ಮತ್ತು ಅದನ್ನು ಉಳಿತಾಯ ಮಾಡುವ ಬಗ್ಗೆ ತಿಳಿಸಬೇಕು. ಇಂದಿನ ಉಳಿತಾಯ ನಾಳಿನ ಬಾಳಿನಲ್ಲಿ ನಮ್ಮ ಜೀವನ ಸುಗಮವಾಗಲು ಹೇಗೆ ಸಹಾಯಕಾರಿಯಾಗಿದೆ ಎಂಬ ಮಾತು ಅವರಿಗೆ ಕಲಿಸಬೇಕಾದದ್ದು ಹಿರಿಯರ ಆದ್ಯ ಕರ್ತವ್ಯವಾಗಿದೆ. ಒಂದು ವೇಳೆ ಆತನಿಗೆ/ಅವಳಿಗೆ ಉಳಿತಾಯದ ಬಗ್ಗೆ ಜೀವನದ ಬಗ್ಗೆ ತಿಳಿದಿಲ್ಲವಾದರೆ ಹೆತ್ತವರು ಮಕ್ಕಳಿಗೆ ಕಲಿಸಿಕೊಡಬೇಕು. ಉಳಿತಾಯ ಹಾಗೂ ಖರ್ಚಿನ ಬಗ್ಗೆ ಅರಿವು ಮೂಡಿಸಬೇಕು. ಬ್ಯಾಂಕಲ್ಲಿ ಎಪ್ ಡಿ, ಬಿ.ಸಿ., ವಸ್ತುಗಳ ಖರೀದಿ ಹೀಗೆ ಹಲವು ದಾರಿಗಳಲ್ಲಿ ನಿಮ್ಮ ಮಕ್ಕಳನ್ನು ಕಲಿಸಬೇಕು.
ಕುಟುಂಬದ ಪ್ರಾಮುಖ್ಯತೆ
ಇತ್ತೀಚಿಗೆ ಹದಿಹರೆಯದವರಲ್ಲಿ ಈ ಸಂಬಂಧ ಅನುಬಂಧವೆಲ್ಲಾ ಬರಿ ಪುಸ್ತಕದಲ್ಲಿ ಓದಿ ಕಲಿಬೇಕಾದ ಪರಿಸ್ಥಿತಿ ಕಾಣುತ್ತಿದ್ದೇವೆ, ಹೆತ್ತವರು, ಹೊತ್ತವರು ಯಾರು ಬೇಡ ಎನ್ನುವ ಲೆಕ್ಕಚಾರ ಪ್ರಾರಂಭವಾಗಿದೆ. ಹದಿಹರೆಯದವರು ಮನೆಯ ಹೊರಗೆ ಹೆಚ್ಚು ಸಮಯ ಕಳಿಯುವ ಕಾರಣ ಕುಟುಂಬದವರೊಂದಿಗೆ ಇರುವುದು ಕಡಿಮೆ ಮತ್ತು ಕುಟುಂಬದವರೊಂದಿಗೆ ಸಮಯ ಕಳಿಯುವುದು ತುಂಬಾ ಬೋರಿಂಗ ಎಂದು ಭಾವಿಸುತ್ತಾರೆ. ಕುಟುಂಬದ ಪ್ರಾಮುಖ್ಯತೆ ಬಗ್ಗೆ ತಿಳಿಹೇಳಿ ಮತ್ತು ಹದಿಹರೆಯದವರು ಮನೆಯ ಪ್ರತಿಯೊಬ್ಬರೊಂದಿಗೆ ಬೆರೆಯುವಂತೆ ನೋಡಿಕೊಳ್ಳಿ. ಈ ಸಂಬಂದಗಳ ಬಗ್ಗೆ ಅವರೊಂದಿಗೆ ಮಾತನಾಡಿ ಮುಕ್ತವಾಗಿ ಚರ್ಚಿಸಿ ಅವರ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡಿರಿ.
ಡೇಟಿಂಗ್ ಮತ್ತು ಸಂಬಂಧ
ಈ ಕಲಿಯುಗದಲ್ಲಿ ಹದಿಹರೆಯದವರು ಈ ಡೇಟಿಂಗ್ ಹಾಗೂ ಮೀಟಿಂಗ್ ಎನ್ನುವ ವಿಚಾರ ತುಂಬಾ ಇದೆ. ಈ ಗರ್ಲಫ್ರೇಂಡ್, ಬಾಯ್ ಫ್ರೇಂಡ್, ಮಾಡಿಕೊಳ್ಳುವುದು, ಅವರೊಂದಿಗೆ ಸುತ್ತಾಡುವುದು ಅಲ್ಲದೆ ಈ ಜೊತೆಗಾರರನ್ನು ಸತತವಾಗಿ ಬದಲಾವಣೆ ಮಾಡುವುದು ಸಾಮಾನ್ಯ ಸಂಗತಿಯಂದು ಹದಿಹರೆಯದವರು ಭಾವಿಸುತ್ತಾರೆ. ಇಂತಹ ತಪ್ಪು ಕಲ್ಪನೆಯೊಂದಿಗೆ ಹದಿಹರೆಯದವರನ್ನು ಬೆಳೆಯಲು ಬಿಡಬೇಡಿ ಮಕ್ಕಳೊಂದಿಗೆ ಸ್ನೇಹಿತರಂತೆ ವರ್ತಿಸಿ ಡೇಟಿಂಗ್ ಮತ್ತು ಸಂಬಂಧದ ಮೌಲ್ಯಗಳ ಬಗ್ಗೆ ವಿವರಿಸಿ. ಇದರಿಂದ ಆಗುವ ಅನಾಹುತಗಳ ಬಗ್ಗೆ ಅವರಿಗೆ ತಿಳಿಸಿ ಹೇಳಿ.
ಸದಾ ಇಂಟರನೆಟ್ ಸಂಗ
ಈ ಮೂಬೈಲ್ ಮೊದಲು ಬರಿ ಮಾತನಾಡಲು ಬಂದಿದ್ದು, ಈಗ ಇಂಟರ್ ನೆಟ್ ಸೇರಿಕೊಂಡು ಪ್ರತಿಯೊಬ್ಬರಿಗೂ ಸರಳ ಹಾಗೂ ಸುಲಭವಾಗಿ ಸಿಗಬಲ್ಲಾ ತುತ್ತಾಗಿದೆ. ಇಂದಿನ ಹದಿಹರೆಯವರು ಸಾಮಾಜಿಕ ತಾಣಗಳಲ್ಲಿ ದಿನದ ಹೆಚ್ಚಿನ ಸಮಯ ಕಳಿಯುತ್ತಾರೆ. ಇದು ಅವರ ಭವಿಷ್ಯ ಹಾಗೂ ಉದ್ಯೋಗದ ಮೇಲೆ ಪರಿಣಾಮ ಬೀರುತ್ತದೆ. ಎನ್ನುವುದು ಮರೆಯುತ್ತಾರೆ. ಹದಿಹರೆಯದ ಮಕ್ಕಳ ಆನ್ ಲೈನ್ ಚಟುವಟಿಕೆಗಳ ಬಗ್ಗೆ ಹೆಚ್ಚಿನ ನಿಗಾ ಇಡಲು ಸಾಧ್ಯವಾಗದಿದ್ದರೆ ಇದರಿಂದ ಆಗುವ ಪರಿಣಾಮಗಳ ಬಗ್ಗೆ ಬುದ್ದಿಮಾತು ಹೇಳಿ. ಸಾದ್ಯವಾದಷ್ಟು ಈ ತಾಣಗಳಲ್ಲಿ ಒಳ್ಳೆಯ ವಿಷಯ ಆಯ್ಕೆ ಮಾಡಲು ತಿಳಿಸಿ. ಅಹಿತಕರ ತಾಣಗಳನ್ನು ಆದಷ್ಟು ಕಡಿಮೆ ಮಾಡಿದರೆ ಒಳಿತು ಎಂಬ ಮಾತು ಅವರೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಿ.
ಯಶಸ್ಸಿನ ಅರ್ಥ
ಯಶಸ್ಸು ಸಾಧಕರ ಸೊತ್ತು, ಈ ವಯಸ್ಸಿನಲ್ಲಿ ತೆಗೆದುಕೊಂಡ ನಿರ್ಧಾರ ಅವರ ಭವಿಷ್ಯದಲ್ಲಿ ತುಂಬಾ ಪರಿಣಾಮ ಬೀರುವುದು. ಸಾಧನೆ ಎಂದರೇನು? ಹೇಗೆ? ಮಾಡುವುದು ಅದಕ್ಕೆ ಬೇಕಾದ ಅವಶ್ಯಕತೆಗಳೇನು? ಹೀಗೆ ಅನೇಕ ವಿಷಯಗಳ ಕುರಿತು ಮಕ್ಕಳಿಗೆ ಮನವರಿಕೆ ಮಾಡಬೇಕಾದ್ದು ಹಿರಿಯರ ಆದ್ಯ ಕರ್ತವ್ಯ. ಮಕ್ಕಳಿಗೆ ಯಶಸ್ಸಿನ ಸಿಹಿ ಹೇಗಿರುತ್ತದೆ ಎನ್ನುವುದನ್ನು ಹೇಳಿ ಯಶಸ್ಸು ಪಡೆಯಲು ಜೀವನದಲ್ಲಿ ಏನೆಲ್ಲಾ ಮಾಡಬೇಕು ಎನ್ನುವ ವಿಚಾರ ಕುರಿತು ಅವರಿಗೆ ಮಾರ್ಗದರ್ಶನ ಮಾಡಿ, ಅವರ ಆಸಕ್ತಿ ಗಮನಿಸಿ ಆ ಕ್ಷೇತ್ರದಲ್ಲಿ ಸಾಧನೆ ಮಾಡಲು ಅವರಿಗೆ ಪ್ರಚೋಧನೆ ನೀಡಿ. ಈಗಾಗಲೇ ಸಾಧನೆ ಮಾಡಿರುವ ವ್ಯಕ್ತಿಗಳ ಬಗ್ಗೆ ತಿಳಿಸಿ ವರ್ತಮಾನದಲ್ಲಿ ಸಾಧನೆ ಮಾಡುತ್ತಿರುವರ ಬಗ್ಗೆ ಹೆಚ್ಚಿನ ಮಾಹಿತಿ ಕೊಟ್ಟರೆ ತುಂಬಾ ಪ್ರಯೋಜನವಾಗುತ್ತದೆ. ಹಲವು ಕಷ್ಟಗಳ ಮದ್ಯೆ ಸಾಧನೆ ಮಾಡಿರುವ ವ್ಯಕ್ತಿಗಳು ತುಂಬಾ ಮಾದರಿಯಾಗುತ್ತಾರೆ.
ಲೈಂಗಿಕ ಶಿಕ್ಷಣ
ನಿಮ್ಮ ಹದಿಹರೆಯದ ಮಕ್ಕಳು ಲೈಂಗಿಕತೆಯ ಬಗ್ಗೆ ಯಾವುದೇ ಮಾಧ್ಯಮ ಅಥವಾ ಆತನ ಆಕೆಯ ವೈಯಕ್ತಿಕ ಅನುಭವದಿಂದ ತಿಳಿದುಕೊಳ್ಳಬಹುದು, ಇಂತಹ ಸಮಯದಲ್ಲಿ ಗರ್ಭನಿರೋಧಕ ಬೇಡವಾದ ಗರ್ಭ ಮತ್ತು ಗರ್ಭಪಾತದ ಬಗ್ಗೆ ಚರ್ಚಿಸಿ ಹೇಗೆ ವಿವೇಚನೆಯಿಂದ ಇರಬೇಕು ಮತ್ತು ಯಾರೊಂದಿಗೆ ಹೇಗೆ ವರ್ತಿಸಬೇಕೆನ್ನುವುದನ್ನು ಕಲಿಸಿ. ಈ ವಿಷಯದಿಂದ ಎದುರಾಗಬಹುದಾಗ ಹಲವು ತೊಂದರೆಗಳ ಕುರಿತು ಮಕ್ಕಳಿಗೆ ಮನವರಿಕೆ ಮಾಡಿಕೊಡಿ, ಈ ಸಮಯದಲ್ಲಿ ಯೋಚಿಸಿ ಮುನ್ನುಗ್ಗದಿದ್ದರೆ ಆಗಬಹುದಾದ ಅನಾಹುತಗಳ ಬಗ್ಗೆ ನೈಜ ಉದಾಹರಣೆಯೊಂದಿಗೆ ತಿಳಿಸಿಕೊಡಿ ಆಗ ಮಕ್ಕಳು ಈ ವಾತಾವರಣದಿಂದ ಮುಕ್ತರಾಗಿ ಜೀವನ ಸಾಧನೆಯತ್ತ ಗಮನ ಹರಿಸುವರು.
ಯುವಕರ ಸಾಮಾಜಿಕ ಮನಸ್ಥಿತಿಗತಿ
ಬೆಳಿಯುತ್ತಿರುವ ಯುವಕರು, ಹೆಚ್ಚಾಗಿ ಒಂಟಿ ಜೀವನ ಇಷ್ಟ ಪಡುತ್ತಾರೆ. ಇಲ್ಲವೆ ಅವರ ವಯಸ್ಸಿನವರ ಜೊತೆಗೆ ಕಾಲ ಕಳಿಯಲು ಇಷ್ಟ ಪಡುತ್ತಾರೆ. ಇಲ್ಲಿ ಯುವಕರಾಗಿ ತಾವು ಬೆರೆಯಬೇಕಾದ ಸಮಾಜವನ್ನು ಮರೆಯುತ್ತಾರೆ. ಸಮಾಜವು ಯುವಕರಿಂದ ಒಂದಿಷ್ಟು ಸೇವೆ, ಒಂದಿಷ್ಟು ಕೆಲಸ ಬಯಸುತ್ತದೆ ಎಂಬ ಸತ್ಯ ಮರೆಯುತ್ತಾರೆ. ಹಿರಿಯರು ಈ ಜವಾಬ್ದಾರಿಯನ್ನು ಯುವಕರಿಗೆ ತಿಳಿಸಿ ಹೇಳಬೇಕಾದ ಅಗತ್ಯ ಹಾಗೂ ಅನಿವಾರ್ಯವಿದೆ. ಸಮಾಜದಲ್ಲಿಯ ಹಲವು ಆಗು ಹೋಗುಗಳನ್ನು ಯುವಕರು ಅರೆಯಬೇಕು. ಇರುವ ಸಮಸ್ಯೆಗಳತ್ತ ಗಮನ ಹರಿಸಬೇಕು. ಸಮಾಜದ ಎಲ್ಲಾ ವರ್ಗದ ಜನರ ಜೊತೆಗೆ ಬೆರೆತು ಜೀವನದ ಘಟ್ಟಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಪ್ರತಿಯೊಂದು ಸಂಬಂಧಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಪ್ರತಿಯೊಬ್ಬರ ಜೊತೆಗೆ ಸಾಮಾಜಿಕ ಹೊಂದಾಣಿಕೆ ಮಾಡಿಕೊಂಡು ಬದುಕುವ ಕಲೆ ಮೊದಲಿನಿಂದಲೆ ಕಲಿಯಬೇಕು ಅದನ್ನು ಸರಿಯಾಗಿ ಅನುಷ್ಠಾನ ಮಾಡಿಕೊಳ್ಳಬೇಕು.
ಸ್ವಾಮಿ ವಿವೇಕಾನಂದ ತನ್ನ ಹರೆಯದ ವಯಸ್ಸಿನಲ್ಲಿಯೆ ಹಲವು ರೀತಿಯ ಸಂಕಲ್ಪ ಮಾಡಿ ಜೀವನದಲ್ಲಿ ತುಂಬಾ ದೊಡ್ಡ ಸಾಧನೆಯನ್ನು ಸಾಧಿಸಿ ತೋರಿಸಿದ ಎಂದು ಇತಿಹಾಸ ಸಾರಿ ಸಾರಿ ಹೇಳುತ್ತದೆ. ಆದರೆ ಇಂದಿನ ಯುವಜನತೆ ಸಾಧಿಸಬೇಕಾದ ವಯಸ್ಸಲ್ಲಿ ಸಾಕಷ್ಟು ದುಶ್ಚಟಗಳಿಗೆ ಬಲಿಯಾಗಿ ದುರ್ಗುಣಗಳನ್ನು ಕಲಿತು, ಜೀವನ ಒಂದು ಗೊಂದಲಗಳ ಗೂಡಾಗಿಸಿಕೊಂಡು ಬದುಕುತ್ತಿರುವರು ಕಾರಣ ಆಯಾ ವಯಸ್ಸಿನಲ್ಲಿ ಅವರಿಗೆ ಸಿಗಬೇಕಾದ ಮಾರ್ಗದರ್ಶನ ದೊರೆಯದಿರುವುದೆ ಮೂಲ ಕಾರಣ.
ಹಿರಿಯರಾದವರು ನಮ್ಮ ಮಕ್ಕಳಿಗೆ ಯಾವ ವಯಸ್ಸಲ್ಲಿ ಯಾವ ರೀತಿಯ ಮಾರ್ಗದರ್ಶನ ಕೊಡಬೇಕು ಅದನ್ನು ಕೊಟ್ಟರೆ ಮಾತ್ರ ನಮ್ಮ ಮಕ್ಕಳನ್ನು ಸರಿಯಾಗಿ ಬೆಳಿಸಿದಂತೆ ಆಗುತ್ತದೆ. ಇಲ್ಲವಾದಲ್ಲಿ ಮಕ್ಕಳು ಎಡವಿ ಬೀಳುವ ಸ್ಥಿತಿ ಉಂಟಾಗಿ ಜೀವನ ದಾರಿ ತಪ್ಪುವ ಸ್ಥಿತಿ ಬರುತ್ತದೆ. ಬದುಕು ಬದಲಾವಣೆ ಬಯಸುವ ಸಂಧರ್ಭದಲ್ಲಿ ಅರೆತು ಜೀವನ ಮಾಡದಿದ್ದರೆ ಮುಂದಿನ ಜೀವನ ನಶ್ವರ ಎನ್ನುವ ಮಾತು ಈ ಜೀವನ ಕಲಿಸಿಕೊಡುತ್ತದೆ. ಅದಕ್ಕಾಗಿ ಮಕ್ಕಳು ಈ ಮೇಲಿನ ವಿಷಯಗಳ ಕಡೆಗೆ ಗಮನಕೊಡುವಂತೆ ಆಗಬೇಕು. ಹಿರಿಯರೆಲ್ಲಾ ನಿಮ್ಮ ಈ ವಯಸ್ಸಿನ ಮಕ್ಕಳಿಗೆ ಮೇಲಿನ ವಿಷಯದಲ್ಲಿ ಸೂಕ್ತವಾದ ಮಾರ್ಗದರ್ಶನ ನೀಡಿ ಸ್ನಹಿತರಾಗಿ, ಪಾಲಕರಾಗಿ ನಿಮ್ಮ ಕರ್ತವ್ಯ ಪಾಲಿಸಿದರೆ ನಮ್ಮ ದೇಶದ ಯುವಕರು ಹಾಗೂ ಭಾವಿ ಪ್ರಜೆಗಳ ಬದುಕು ಹಸನಾಗುತ್ತದೆ. ಭೌವ್ಯ ಭಾರತ ನಿರ್ಮಾಣವಾಗುತ್ತದೆ.