ಮೊದಲು ನಾವಿಬ್ಬರು ಪರಿಚಯ ವಾಗಿದ್ದು ಹಾಸ್ಟೆಲ್ ನಲ್ಲಿಯೆ ಆದರೂ ಸರಿಯಾಗಿ ಗೆಳೆತನ ಆದದ್ದು ಆ ಶಾಲೆಯ ಹುಡುಗಿ ಸೌಮ್ಯಳಿಂದ. ಇದೆ ಶಾಲೆಯಲ್ಲಿ ಓದುತ್ತಿದ್ದ ಸೌಮ್ಯ ಅದೇ ಊರಿನ ಬಡ ಕುಟುಂಬದಲ್ಲಿ ಹುಟ್ಟಿದವಳು. ಅಪ್ಪ ರಾಜಾರಾಮ್ ತೀರಿಹೋಗಿದ್ದ, ಅಮ್ಮ ಶಾರದಮ್ಮ ಆ ಊರಿನಲ್ಲಿಯೆ ತನ್ನ ಮಗಳೊಂದಿಗೆ ನಿಯತ್ತಿನ ಜೀವನ ನಡೆಸುತ್ತಿದ್ದಳು. ಮಗಳಿಗೆ ಓದಿಸಿ ಸರಿಯಾದ ಮನೆತನ ನೋಡಿ ಕೊಡಬೇಕು ಎನ್ನುವುದು ಶಾರದಮ್ಮಳ ಆಸೆ. ತರಗತಿಯಲ್ಲಿ ನನ್ನ ಪಕ್ಕದಲ್ಲಿ ಕೂಳಿತ್ತಿದ್ದ ವಿಶ್ವ ಮೊದಲೆರಡು ತಿಂಗಳು ಸರಿಯಾಗಿ ಕುಳಿತು ಮುಂದಿನ ದಿನಗಳು ಯಾಕೊ ವಿಚಿತ್ರವಾಗಿ ಅಡ ತೊಡಗಿದ . ಆ ಹುಡುಗಿಗೆ ನೋಡಲು ನನಗೆ ಹೇಳುವುದು ಹಾಗೂ ಸ್ಥಾನ ಬದಲಿಸುವುದು, ಮಾಡತೊಡಗಿದ. ನನಗೂ ಅರ್ಥವಾಗಲಿಲ್ಲಾ ಆದರೆ ನಿಜವಾಗಿ ಗಿನ ಸ್ಥಿತಿಯಲ್ಲಿ ನನಗೆ ಇವರು ಯಾಕೆ? ಹೀಗೆ ನೋಡತಾರೆ ಅಂತಾ ತಿಳಿತಿರಲಿಲ್ಲಾ.
ಒಂದು ದಿನ ವಿಶ್ವ ಅರ್ಧ ರಾತ್ರಿಗೆ ಚಿಂತೆ ಮಾಡುತ್ತ ಕುಳಿತಿದ್ದ ಅವನ ಕೈಯಲ್ಲಿ ಒಂದು ಚೀಟಿಯಿತ್ತು. ಅದನ್ನು ಪುಸ್ತಕದಲ್ಲಿ ಮುಚ್ಚಿಟ್ಟು ಓದುತ್ತಿದ್ದ, ನಾನು ಎದ್ದು "ಅದೇನಲೆ ಇಷ್ಟು ರಾತ್ರಿ ಎದ್ದು ಓದುತ್ತೀಯಾ" ಮಲಗು ನಸುಕಿನ ಜಾವದಲ್ಲಿ ಎಬ್ಬಿಸುತ್ತೀನಿ ಮಲಗು ಅಂದೆ ಅಷ್ಟಕ್ಕೆ ಆತನಲ್ಲಿಯ ಕಣ್ಣೀರು ಧಾರೆ ಹರಿಯತೊಡಗಿತು" ಲೇ ಏನಾಯತಲೆ? ಮಲಗು ಅಂದರೆ ಹುಡಿಗಿ ತರಹ ಅಳತಿಯಲ್ಲಾ ಯಾಕೆ? ಅಂದೆ ಆಗ "ದೊಸ್ತಾ ನಿನಗೆ ಒಂದು ವಿಷಯ ಹೇಳಬೇಕು ಅಂತಾ ಎಷ್ಟ ದಿನ ಆಯಿತು ಆಗಿಲ್ಲಾ ನಾನೊಬ್ಬನೆ ತುಂಬಾ ಕಷ್ಟ ಪಡತ್ತಿದ್ದೀನಿ. ಏನು ಮಾಡಲಿ ಅಂತಾ ಗೊತ್ತಿಲ್ಲಾ. ಸರಿ ವಿಷಯ ಏನಪ್ಪಾ ಅಂತಾ ಕೇಳಿದೆ ಮುಂದೆ ಮಾತಾಡದೆ ಒಂದು ಪತ್ರ ನನ್ನ ಕೈಗಿಟ್ಟ ಅದರಲ್ಲಿಯ ವಿಷಯ ಓದಿ ನಾನೆ ದಿಗಿಲಾದೆ ಅದರಲ್ಲಿ ಬರೆದಿದ್ದು ಇಷ್ಟು
ರಾಜ ಇರುವನು ಅರಮನೆಯಲ್ಲಿ !
ರಾಣಿ ಇರುವಳು ರಾಜನ ಪಕ್ಕದಲ್ಲಿ !
ಗಿಳಿ ಇರುವುದು ಪಂಜರದಲ್ಲಿ !
ಆದರೆ ನೀನು ಇರುವುದು ನನ್ನ ಮನದಲ್ಲಿ !
“ ನಾನು ನಿನ್ನ ಪ್ರೀತಿಸುವೆ , ನಿನ್ನ ಉತ್ತರಕ್ಕಾಗಿ ಕಾಯುತ್ತಿರುವೆ ಇಂತಿ ನಿನ್ನ ಸೌಮ್ಯ.............. ಇದು ಓದಿದ ಮೇಲೆ .ಲೇ ಇದು ಎಂತಹ ಸಾಹಿತ್ಯ ತುಂಬಾ ಚೆನ್ನಾಗಿದೆ ಯಾವುದಾದರು ಪತ್ರಿಕೆಗೆ ಕೊಡು ಹಾಕಲಿ ಅಂದೆ ಅದಕ್ಕೆ ಲೇ ನಾನು ಅದನ್ನು ಹೇಳಿಲ್ಲಾ ಈಗ ನಾನು ಉತ್ತರ ಏನಂತಾ ಕೊಡಲಿ ಹೇಳು ನಾನು ಓದಕ್ಕು ಮನಸ್ಆಗತ್ತಿಲ್ಲಾ ಬರೆಯಕ್ಕು, ಮನಸ್ಸಾಗುತ್ತಿಲ್ಲಾ ಬರಿ ಅವಳೆದೆ ನೆನಪು ಬರುತ್ತೆ ದಿನಾ ಶಾಲೆಯಲ್ಲಿ ನಾವಿಬ್ಬರು ಪಾಠನೆ ಕೇಳಲ್ಲಾ ತರಗತಿಯಲ್ಲಿ ಬರಿ ನೋಡತಾ ಕೂತಿರುತ್ತೀವಿ ನನಗೆ ಅವಳ ಕಣ್ಣಲ್ಲೆ ಏನೆನೊ ಹೇಳಿದಂತೆ ಭಾಸವಾಗುತ್ತೆ ಅವಳ ಮುಖ ಸದಾ ನೋಡತಾಯಿರಬೇಕು ಅನಿಸುತ್ತೆ ಇದು ಈಗ ಮಾಡಿದರೆ ಸರಿನಾ ತಪ್ಪಾ ಅಂತಾ ನಿರ್ಧಾರ ಮಾಡಕ್ಕೆ ಆಗತ್ತಿಲ್ಲಾ ಅವಳು ಮೊನ್ನೆ ನೀನು ಹುಡುಗ ಬೇಗಾ ಉತ್ತರ ಕೊಡಬೇಕು ನಾನು ಇದೆ ಊರವಳು ಒಂದು ಹುಡುಗಿಯಾಗಿ ಅಂಜದೆ ನಿನಗೆ ಹೇಳಿದ್ದೀನಿ ನೀನೇಕೆ ಲೇಟು ಅಂತಿದ್ದಾಳೆ. ಈಗ ನೀನೆ ಹೇಳು ಅಂದಾ ಆಗ ನಾನು ಹೇಳಿದ್ದು ನಿನಗೆ ಆ ಹುಡುಗಿ ಇಷ್ಟನಾ ಅವಳೊಂದಿಗೆ ಮದುವೆಯಾಗಿ ಸುಖವಾಗಿರುತ್ತಿನಿ ಅಂತಾ ಅನಿಸುತ್ತಾ ಹಾಗಾದರೆ ನೀನು ತಯಾರಿದ್ದರೆ ನಾನು ನಿನಗೆ ಸಹಾಯ ಮಾಡಬಲ್ಲೆ ಎಂದೆ ಅದಕ್ಕೆ ಅವನು ಒಪ್ಪಿದ .
ಆಗ ಶುರುವಾಯಿತು ಪ್ರೇಮ ಪತ್ರಗಳ ಸರಣಿ ಅವಳೊಂದು ಬರೆಯುವಳು ಅದಕ್ಕೆ ಉತ್ತರ ಅವನು ಬರೆದಂತೆ ನಾನು ಬರೆಯುವುದು ದಿನಾಲು ನಮ್ಮಿಬ್ಬರದು ಇದೆ ಒಂದು ದೊಡ್ಡ ಕೆಲಸವಾಯಿತು. ದಿನಾ ಕವನ ಪತ್ರ ಬರೆಯುವುದು ಸುಮಾರು ದಿನಗಳು ತಿಂಗಳೆ ಕಳೆಯಿತು. ಒಂದು ದಿನ ತರಗತಿ ಅಲ್ಪ ವಿರಾಮದ ಸಮಯ ನಾನು ಬರೆಯುತ್ತಾ ಕುಳಿತ್ತಿದ್ದೆ, ಆಗ ಸೌಮ್ಯ ನನ್ನ ಹತ್ತಿರ ಬಂದು ನೀವು ಬರಿ ನೋಟ್ಸ್ ಬರೆಯುವುದು ಓದುವುದರಲ್ಲೆ ನೀಸ್ಸೀಮರು ಅಂತಾ ಗೊತ್ತಿತ್ತು ಆದರೆ ಇಷ್ಟು ಚೆನ್ನಾಗಿ ಪ್ರೇಮ ಪತ್ರ ಬರಿತೀರಿ ಅನ್ನಕೊಂಡಿರಲಿಲ್ಲಾ ಅಂದಳು ಅದಕ್ಕೆ ನಾನು ಯಾವ ಪತ್ರ ಯಾರೂ ಬರೆದಿದ್ದು ಅಂದೆ ಅದಕ್ಕೆ ಸೌಮ್ಯಳ ಗೆಳತಿಯೊಬ್ಬಳು ಇದೆಲ್ಲಾ ಬ್ಯಾಡರಿ ನಮಗೆ ಗೊತ್ತಾಗಿದೆ ಎಲ್ಲಾ ನಿಮ್ಮ ಫ್ರೆಂಡ ಹೇಳಿದ್ದಾರೆ. ಆದರು ನಿಮ್ಮ ಪ್ರೇಮ ಪತ್ರಗಳು ತುಂಬಾ ಸೊಗಸಾಗಿವೆ ಎಂದು ಹೇಳಿದರು.
ಸಂಜೆ ವಿಶ್ವ ನಿಗೆ ಕೇಳಿದೆ ಅವರಿಗೆ ಹೇಳು ಅಂತಾ ಹೇಳಿದವರು ಯಾರು? ನನಗೆ ಅವರು ಹೇಗೆ ಮಾತಾಡಿದರು ಅಂತಾ ಗೊತ್ತಾ ಅಂದೆ ಅದಕ್ಕೆ ಅವನು ಹೇಳಿದ್ದು ಇರಲಿ ಬಿಡು ಅವರು ನಿನಗೆ ಹೊಗಳಿದ್ದಾರೆ ಅನ್ನೊದು ಮರಿಬೇಡಾ ನಿನ್ನಲ್ಲಿ ಬರವಣಿಗೆ ಶೈಲಿಯಿದೆ ಅದನ್ನು ಮುಂದುವರೆಸು ಅಂದಾ ನನಗೆ ಅವಾಗಲೆ ಗೊತ್ತಾಗಿದ್ದು ನನಗೆ ಪ್ರೇಮ ಪತ್ರ ಬರೆಯಲು ಬರುತ್ತೆ ಅಂತಾ.
ಹೀಗೆ ಅವರಿಬ್ಬರ ಪ್ರೇಮ ಮುಂದುವರಿತು ಹಾಗೆ ಅಕ್ಟೋಬರ್ ತಿಂಗಳ ರಜೆ ಬಂದವು ಎಲ್ಲಾ ನಮ್ಮ ಹಾಸ್ಟೆಲ್ ಗೆಳೆಯರು ಊರಿಗೆ ಹೋದರು ವಿಶ್ವ ಹೇಳಿದ ನಾವು ಹೋಗುವುದು ಬೇಡಾ ಇಲ್ಲಿಯೆ ಇದ್ದು ಓದೋಣಾ ಎಂದಾ. ಅದಕ್ಕೆ ನಮ್ಮ ಹಾಸ್ಟೆಲ್ ನ ವಾರ್ಡನ ಸರ್ ಕೂಡಾ ಒಪ್ಪಿದರು. ಎಲ್ಲರು ಅವರವರ ಊರಿಗೆ ಹೋದರೆ ನಾವಿಬ್ಬರು ಅದೆ ವಸತಿನಿಲಯದಲ್ಲಿ ಉಳಿದೆವು ಇನ್ನು ಊಟದ ಸಮಸ್ಯೆ ಬಂತಲ್ಲಾ ಅಂತಾ ನಾನು ಗಾಬರಿಯಾದೆ ಆಗ ಆರಾಮಾಗಿ ಮಲಗಿದ್ದ ವಿಶ್ವ ಲೇ ಈಗ ಊಟ ಮಾಡುವುದು ಹೇಗೆ ಅಂದೆ ಆಗ ಅವನು ಸ್ವಲ್ಪ ತಾವು ತಾಳತಿರಾ ಅದು ನೋಡಿ ಬಂತು ಊಟಾ ಎಂದು ಹೊರಗಡೆ ಕಿಟಕಿಯಲ್ಲಿ ತೋರಿಸಿದಾ ಅಲ್ಲಿ ಸೌಮ್ಯ ಮತ್ತು ಆಕೆಯ ಗೆಳತಿ ಕೈಯಲ್ಲಿ ಬುತ್ತಿ ಹಿಡಿದು ಬರುತ್ತಿದ್ದರು. ಇನ್ನು ಮುಂದೆ ಒಂದು ತಿಂಗಳು ಇವರೆ ಊಟ ಹಾಕುತ್ತಾರೆ ಅಂದಾ ನನಗೆ ಭಯವು ಆಯಿತು ಸಂತೋಷವು ಆಯಿತು ಮನೆಯ ಊಟ ಸಿಕ್ಕಿತು ಅನ್ನುಕೊಂಡೆ ಆದರೆ ಈ ವಿಷಯ ಈ ಊರಿನ ಜನಕ್ಕೆ ತಿಳಿದರೆ ನಮ್ಮ ಗತಿಯೇನು ಎಂದು ಯೋಚಿಸಿ ಗಾಬರಿಯಾದೆ. ಆದರೆ ಅವನು ಮಾತ್ರ ಅವರನ್ನು ನಗುನಗುತಾ ಬರಮಾಡಿಕೊಂಡು ಕೂಡಿಸಿ ಹೇಳಿದ ಎಲ್ಲರು ಸೇರಿ ಊಟಾ ಮಾಡೋಣಾ ಅಂದಾ ನನಗೆ ಮತ್ತಷ್ಟು ಭಯಾ ಆಯಿತು ಆ ಭಯದಲ್ಲೆ ನಾಲ್ಕು ಜನ ಊಟ ಮಾಡಿದೇವು ಹಾಗೆ ಸ್ವಲ್ಪ ಹೊತ್ತು ಓದಿನ ಬಗ್ಗೆ ಮಾತಾಡಿ ಹೋದರು .
ಈ ಕಾರ್ಯಕ್ರಮ ಸುಮಾರು ದಿನಗಳೆ ನಡೆಯಿತು ಅವರಿಬ್ಬರು ಊಟ ತರುವರು ನಾವಿಬ್ಬರು ಊಟ ಮಾಡುವರು ದಿನಾಲು ನಾವು ಹೇಳಿದ್ದು ಮಾಡಿಕೊಂಡು ಬರುವರು. ಹೀಗೆ ಆ ತಿಂಗಳು ಮುಗಿಯಿತು ಈತ್ತ ಇವರ ಪ್ರೀತಿಯ ವಾಸನೆ ಆ ಊರಿನ ಪ್ರಮುಖ ಬೀದಿಗಳಿಗೆ ಹರಡಿತು ಡಿಸೆಂಬರ್ ಹೊತ್ತಿಗೆ ಅದರ ಸುವಾಸನೆ ಹೋಗಿ ಜನರಿಗೆ ಗಬ್ಬುವಾಸನೆ ಸೇವಿಸದಂತಾಯಿತು ಈ ಸಾಹೆಬರು ಈಗ ಅವರ ಮನೆಗೆ ಹೋಗಲು ಅವರ ಮನಯೆಲ್ಲಿ ರಾತ್ರಿ ಕಳೆಯುವ ಲೆಕ್ಕಕ್ಕೆ ಬಂದರು ಊರಿನ ಓಣಿಯ ಜನರಿಗೆ ಇದು ಹಿಡಸದಾಯಿತು ಬೇರೆ ಊರಿನಿಂದ ಬಂದ ಈ ಹುಡುಗ ನಮ್ಮ ಓಣಿಯ ಹುಡುಗಿಯೊಂದಿಗೆ ಓಡಾಡುವುದು ಮನೆಗೆ ಬರುವುದು ಎಷ್ಟು ಸೂಕ್ತ ಎಂದು ಮಾತಾಡತೊಡಗಿದರು.
ಇದರ ಪರಿಣಾಮ ಒಂದು ದಿನ ರಾತ್ರಿ ನಮಗೆ ಅರಿವಾಯಿತು " ಅಂದು ರಾತ್ರಿ ಒಂಬತ್ತಕ್ಕೆ ಸರಿಯಾಗಿ ನಮ್ಮ ರೂಂನಲ್ಲಿ ಓದುತ್ತಾ ಕುಳಿತ್ತಿದ್ದೆವು ಆಗ ಆ ಓಣಿಯ ಮತ್ತು ಊರಿನ ಕೆಲವು ಪ್ರಮುಖ ಯುವಕರು ನಮ್ಮ ವಸತಿ ನಿಲಯದ ರೂಂಗೆ ಬಂದರು ಆರು ಜನಕ್ಕು ಹೆಚ್ಚು ಜನ ಒಳನುಗ್ಗಿದರು. ನಮಗೆ ಕೇಳಿದರು ಇದರಲ್ಲಿ ಸೌಮ್ಯಳಿಗೆ ಲವ್ ಮಾಡುತ್ತಿರುವರು ಯಾರು? ಎಂದರು ಅದಕ್ಕೆ ವಿಶ್ವ ನಾನೆ ಎಂದ ಅವನ ಧೈರ್ಯ ಮೆಚ್ಚುವಂತಿತ್ತು.ಆದರೆ ಈ ಶೈಲಿ ಅವರಿಗೆ ಇಷ್ಟವಾಗಲಿಲ್ಲಾ ಅಂತಾ ಕಾಣುತ್ತೆ ಎದ್ದು ಆತನಿಗೆ ಒದಿಯತೊಡಗಿದರು. ಯಾರು ಹೇಳಿದರು ಬಿಡಲಿಲ್ಲಾ ಅವನನ್ನು ಎಳೆದು ಕರೆದಕೊಂಡು ಹೋದರು ನಾವು ಬೇರೆ ಊರಿನವರಾದ್ದರಿಂದ ಏನು ಮಾಡಲು ಆಗಲಿಲ್ಲಾ ಸುಮ್ಮಾನಾದೇವು ಆಗ ಎಲ್ಲರು ಅವನ್ನು ಕರೆದುಕೊಂಡು ಹೋದರು ಆಗ ನಾನು ಅವನ ದಾರಿ ಕಾಯುತ್ತಾ ಕುಳಿತೇನು ಎಷ್ಟೊತ್ತಾದರು ಬರಲೇ ಇಲ್ಲಾ ರಾತ್ರಿ ಒಂದು ಗಂಟೆಗೆ ವಿಶ್ವ ಬಂದ ಅವನು ಹಾಗೆ ಬಂದವನೆ ಹಾಸಿಗೆಯ ಮೇಲೆ ಬಿದ್ದು ಒದ್ದಾಡ ತೊಡಗಿದ ಅವನ ಶರ್ಟ ಬಿಚ್ಚಿ ನೋಡಿದರೆ ಎಲ್ಲೆಲ್ಲು ರಕ್ತ ಅದನ್ನು ನಾನು ಸರಿಯಾಗಿ ಒರೆಸಿದೆ ನಡೆದ ಘಟನೆ ವಿವರಿಸಿದ ನಾನು ಅವಾಗ ಯೋಚನೆ ಮಾಡಿದೆ ವಿಶ್ವ ನೀನು ಈಗ ಇಲ್ಲಿ ಇರುವುದು ಸೂಕ್ತ ಅಲ್ಲಾ ನಿಮ್ಮ ಊರಿಗೆ ಸದ್ಯಕ್ಕೆ ಹೋಗಿ ಬಾ ಸ್ವಲ್ಪ ದಿನಗಾಳಾದ ನಂತರ ನಾನು ಹೇಳುತ್ತೇನೆ ಬರುವೆಯಂತೆ. ಅಂದು ಅವನಿಗೆ ಆಗಲೇ ಒಂದು ಅಟೋ ಮುಗಿಸಿ ಅವನ ಊರಿಗೆ ಕಳುಹಿಸಿದೆ. ಈ ಹೀನಾಯ ಸ್ಥಿತಿ ನೋಡಿದ ಮೇಲೆ ತಿಳಿಯಿತು ಪ್ರೀತಿ ಅಂದರೆ ಇದೆನಾ ಇಷ್ಟೆಲ್ಲಾ ಕಷ್ಟಾ ಇದೆಯಾ ಅಂತಾ . ಅಸಿತು.
ಕೆಲವು ದಿನಗಳು ಹೀಗೆ ಕಳಿದವು ಒಂದು ದಿನ ಈತ್ತ ಸದಾ ಅವನನ್ನೆ ಹುಡುಕುತ್ತುದ್ದ ಸೌಮ್ಯ ನನಗೆ ಬೇಟಿಮಾಡಲು ಹರಸಾಹಸಪಟ್ಟಳು ನಾನು ಬೇಕಂತಾನೆ ಸಿಗಲೇ ಇಲ್ಲಾ, ಮತ್ತೆ ನಾನು ಇವಳ ಸಲುವಾಗಿ ಈ ಊರಿನ ಜನರಿಂದ ಧರ್ಮದೇಟು ತಿನ್ನುವುದು ಬೇಡಾ ಅಂತಾ ಸುಮ್ಮನಾದೆ. ಆದರೂ ಅವಳಿಗೆ ವಿಶ್ವನಿಗೆ ಹೊಡೆದ ವಿಷಯ ಗೊತ್ತಿಲ್ಲವೆಂದು ತಿಳಿದು ನೊಂದುಕೊಂಡೆ ಇರಲಿ ಅಂತಾ ಬೇಟಿಯಾಗಿ ಹೇಳಿದೆ. ಅವನಿಗಾದ ಸ್ಥಿತಿಯನ್ನು ಕೇಳಿ ಒಂದೆ ಸಮನೆ ಅಳುವುದಕ್ಕೆ ಪ್ರಾರಂಭಿಸಿದಳು ಅವಳ ಆಕ್ರಂಧನ ಹೇಳತೀರದು. ಈಗ ಅವನನ್ನು ಮದುವೆಯಾಗಿದ್ದಾಳೋ ಅನ್ನೊ ಲೆವಲ್ಗೆ ಅಳುವುದಕ್ಕೆ ಶುರು ಮಾಡಿದಳು. ಮತ್ತೆ ಅವಳಿಗೆ ಸಾಂತ್ವನ ಹೇಳಿ ಅವನಿಗೆ ಕರೆಸಿ ಇಬ್ಬರಿಗೂ ಈಗ ಸದ್ಯಕ್ಕೆ ನಿಮ್ಮ ಪ್ರೀತಿಗೆ ಒಂದು ಚಿಕ್ಕ ಬ್ರೇಕ್ ಕೊಡಿ ಈಗ ಪರೀಕ್ಷಾ ಸಮಯ ಓದಬೇಕಲ್ಲಾ ನೀವು ಇಬ್ಬರು ಇನ್ನು ಏನು ಓದಿಲ್ಲಾ ನೀವು ಪರೀಕ್ಷೆಯಲ್ಲಿ ಫೇಲ್ ಆದರೆ ಮರಿಯಾದೆ ಇರಲ್ಲಾ ಅದಕ್ಕಾಗಿ ಸರಿಯಾಗಿ ವಿಚಾರ ಮಾಡಿ ಸರಿಯಾಗಿ ಓದಿ ಪಾಸಾದರೆ ಮಾತ್ರ ನಿಮ್ಮ ಪ್ರೀತಿ ಸಾರ್ಥಕವಾಗುತ್ತೆ. ಅಂದಾಗ ಇಬ್ಬರು ಒಪ್ಪಿದರು ಓದಲು ಪ್ರಾರಂಭಿಸಿದರು .
ಮುಂದೆ ಪರೀಕ್ಷೆ ಆಗ ಹತ್ತನೆಯ ತರಗತಿಯ ಪರೀಕ್ಷೆ ಅಂದರೆ ತುಂಬಾ ಕಠಿಣ ಬೋರ್ಡ ಹಾಗೆ ಹೀಗೆ ಅಂತಾ ಹೆದರಿಸುವರು. ಅದರಲ್ಲಿ ನಾನು ಮತ್ತು ವಿಶ್ವ ಬೇರೆ ಊರಿನಿಂದ ಬಂದವರು ಅಲ್ಲಿ ಕಡ್ಡಾಯವಾಗಿ ಪಾಸಾಗಲೇಬೇಕು ಇಲ್ಲದಿದ್ದರೆ ನಮ್ಮ ಮಾನ ಮರಿಯಾದೆ ಹೋಗುತ್ತದೆ. ಎನ್ನುವುದು ಮರೆಯುವಂತಿಲ್ಲಾ. ನಾನು ಮತ್ತು ವಿಶ್ವ ದಿನಾಲು ಸರಿಯಾಗಿ ಸಮಯ ಪಾಲನೆ ಮಾಡಿ ಓದತೊಡಗಿದೇವು ಆಗಾಗ ಈತ ಮಾತ್ರ ಬಿಟ್ಟು ಆಕೆಯನ್ನು ಒಂದಸಲ ನೋಡಿ ಬರುತ್ತೇನೆ ಅಂತಾ ಓಡಿಹೋಗುವನು ಆಗಾಗ ಓದುವನು ಎಷ್ಟೆ ಹೇಳಿದರು ಇವರಿಬ್ಬರು ಬೇಟಿಯಾಗುವುದು ಮಾತ್ರ ಬಿಡಲಿಲ್ಲಾ. ಕೊನೆಗೆ ಇಬ್ಬರು ಅವರ ಹೊಲದಲ್ಲಿ ನನಗೆ ಓದುತ್ತೀವಿ ಅಂತಾ ಹೇಳಿ ಹೋಗುವರು ಈ ಚಿಕ್ಕ ವಯಸ್ಸಿನ್ಲಲಿ ಅದೆಷ್ಟು ಮೋಹ ದಾಹ ಇವರಿಗೆ ತಿಳಿಯದು. ಹಾಗೆ ದಿನಗಳು ಉರುಳಿ ಅಂದು ಬಿಳ್ಕೊಡುವ ಸಮಾರಂಭವನ್ನು ಹತ್ತನೆಯ ತರಗತಿಯ ಮಕ್ಕಳಿಗೆ ಇಟ್ಟುಕೊಂಡರು ಅದರಲ್ಲಿ ನನ್ನ ನೆಚ್ಚಿನ ಗುರುಗಳೊಬ್ಬರು ಹೇಳಿದ ಮಾತು ಇಂದಿಗೂ ಪ್ರಸ್ಥುತ " ಮಕ್ಕಳೆ ನಿಮಗೆಲ್ಲಾ ನನ್ನ ವತಿಯಿಂದ ಹಾರ್ಧಿಕ ಶುಭಾಶಯಗಳು ಇಂದು ಜೀವನದ ಒಂದು ಪ್ರಮುಖ ಘಟ್ಟವಾದ ಮೆಟ್ರಿಕ್ ಮುಗಿಸಿ ಮುಂದಿನ ವಿಧ್ಯಾಭ್ಯಾಸಕ್ಕೆ ಕಾಲಿಡುವ ಸಮಯ ನಿವೆಲ್ಲಾ ಮಕ್ಕಳಿಂದ ಈಗ ಯುವಕರಾಗುತ್ತಿದ್ದೀರಿ ಟೀನೆಜ್ ಗೆ ಹೋಗುತ್ತಿದ್ದೀರಿ ಆದರೆ ಎಚ್ಚರ ನಿಮ್ಮ ಬದುಕಿನ ತಿರುವು ಈ ವಿಭಾಗ ನೀವು ಎಷ್ಟು ಸರಿಯಾಗಿ ಇರುತ್ತೀರೊ ಅಷ್ಟು ಒಳ್ಳೆಯದು ಈ ದಿನಗಳು ಆದರೆ ನೀವೆಲ್ಲ ಈಗ ಯಾವುದೊ ವ್ಯಾಮೋಹಕ್ಕೆ ಒಳಗಾಗಿ ನಿಮ್ಮ ಬದುಕನ್ನು ಕತ್ತಲಾಗಿಸಿಕೊಳ್ಳಬೇಡಿ ಸರಿಯಾಗಿ ವಿಚಾರಿಸಿ ಹೆಜ್ಜೆ ಇಡಿ ಈಗಿನ ಒಂದು ತ್ಯಾಗ ನಿಮ್ಮ ಭವಿಷ್ಯಕ್ಕೆ ಉತ್ತಮ ಹಾದಿ ಕೊಡುತ್ತದೆ. ಈಗನ ಒಂದು ವಿಲಾಸ ಜೀವನ ನಿಮ್ಮ ಮುಂದಿನ ಬದುಕನ್ನು ಹಾಳುಮಾಡಬಹುದು ನೆನಪಿರಲಿ" ಈ ಮಾತು ನೇರವಾಗಿ ನಮಗೆ ಅಂದರೆನೊ ಅನ್ನವಂತೆ ಭಾಸವಾಯಿತು . ಹೀಗೆ ನಾವೆಲ್ಲಾ ಈ ಕಾರ್ಯಕ್ರಮ ಮುಗಿಸಿ ನಮ್ಮ ಅಂತಿಮ ಪರೀಕ್ಷೆಯನ್ನು ಮುಗಿಸಿ ಕೊನೆಯ ದಿನ ಬೇಟಿಯಾಗಲು ಒಂದು ಕಡೆ ಸೇರಿದೇವು.
ಆಗ ನಾನು ಇಬ್ಬರಿಗೂ ಹೇಳಿದೆ ನಾನು ಇಲ್ಲಿಯವರೆಗೂ ಸಾಹಾಯ ಮಾಡಿದ್ದಿನಿ ನೀವು ಇನ್ನು ಮುಂದೆ ಸರಿಯಾಗಿ ಮದುವೆಯಾಗಿ ಜೀವನ ಮಾಡಿದರೆ ನಾನು ಮಾಡಿದ್ದಕ್ಕು ನಿಮ್ಮ ಪ್ರೀತಿಗೂ ಒಂದು ನ್ಯಾಯ ಸಿಗುತ್ತೆ ಸರಿಯಾಗಿ ಯೋಚನೆ ಮಾಡಿ ನಿರ್ಧಾರ ತೊಗೊಳ್ಳಿ ಮುಂದಿನ ಜೀವನ ಸುಗಮವಾಗಲಿ ನಿಮ್ಮಿಬ್ಬರಿಗೂ ಒಂದು ಒಳ್ಳೆಯ ಬದುಕು ಸಿಗಲಿ ಎಂದು ಹೇಳಿದಾಗ ಸೌಮ್ಯ ಕಣ್ಣೀರಿಟ್ಟಳು. ನೀನು ನಮಗೆ ಮಾಡಿದ ಸಹಾಯ ಮತ್ತು ಸಹಕಾರ ನಾವು ಯಾವತ್ತು ಮರೆಯಲ್ಲಾ ಆದರೆ ನಾವು ಮತ್ತೆ ಜೀವನದಲ್ಲಿ ಸಿಗುತ್ತೇವೊ ಇಲ್ಲವೊ ಗೊತ್ತಿಲ್ಲಾ ಆದರು ನಿಮ್ಮ ನೆನಪು ಮಾತ್ರ ನಮಗೆ ಇರುತ್ತೆ ನಿಮಗೂ ಶುಭವಾಗಲಿ ನೀವು ಮುಂದೆ ಯಾರಿಗಾದರು ಪ್ರೀತಿ ಮಾಡದರೆ ನಮ್ಮ ಹತ್ತಿರ ಬನ್ನಿ ನಿಮಗೆ ಸಾಹಾಯ ನೀಡುತ್ತೆವೆ. ಎಂದು ಜೋಕ್ ಮಾಡಿ ಅಲ್ಲಿಂದ ಹೊರಟೇವು.
ಅಲ್ಲಿಂದ ಹೊರಟ ನಾವು ಕೆಲವು ವರ್ಷಗಳೆ ಕಳಿದವು ಯಾರು ಒಬ್ಬರು ಸಿಗಲಿಲ್ಲಾ ನಾವು ಮತ್ತೆ ಜೀವನದಲ್ಲಿ ಸಿಗುವುದಿಲ್ಲಾ ಎನ್ನುವ ಹೊತ್ತಿನಲ್ಲಿ ಸುಮಾರು ಹತ್ತು ವರ್ಷಗಳ ನಂತರ ಕೈಯಲ್ಲಿ ಒಂದು ಹೆಣ್ಣುಮಗು ಇಬ್ಬರು ಗಂಡಹೆಂಡತಿಯನ್ನು ನಾನು ಸಿನಿಮಾ ಹಾಲ್ನಲ್ಲಿ ಕಂಡೆ ಇವರಿಗೆ ನೋಡಿದ ತಕ್ಷಣ ನನಗೆ ಹೊಳಿಯಿತು ಇವರನ್ನು ಎಲ್ಲಿಯೊ ನೋಡಿದ್ದೀನಿ ಅಲ್ಲಾ ಅನಿಸಿತು ಆಗ ನೆನಪಾಗಿದ್ದೆ ಆ ವಿಶ್ವ ಅಯ್ಯೋ ಇವರಿಬ್ಬರು ಮದುವೆಯಾದರಾ ? ಹಾಯ್ ಎಲ್ಲಿದ್ದೀಯಾ ಏನ್ ಮಾಡತ್ತಿದ್ದೀಯಾ? ಅಂದೆ ಅವನು ಕೂಡಾ ಗುರುತು ಹಿಡಿದು ಗಾಬರಿಯಾದ ಎನು ಎಷ್ಟು ದಿನಗಳ ನಂತರ ಬೇಟಿಯಾದೆವಲ್ಲ ನಡೆ ಮನೆಗ ಹೋಗೋಣ ಎಂದು ಅವನ ಚಿಕ್ಕ ಮನೆಗೆ ಕರೆದಕೊಂಡು ಹೋದ ಅಲ್ಲಿ ಹೋದಮೇಲೆ ತಿಳಿಯಿತು ಅವರಿಬ್ಬರ ಪ್ರೀತಿ ಹೇಗೆ ಮುಂದುವರೆಸಿದರು. ಹೇಗೆ ಮುಂದೆ ಮದುವೆಯಾದರು ಅಂತಾ ಅವರಿಬ್ಬರು ತುಂಬಾ ಕಷ್ಟ ಅನುಭವಿಸಿ ಜೀವನದಲ್ಲಿ ಸಾಧಿಸಿ ಈಗ ಸದ್ಯಕ್ಕೆ ಸೌಮ್ಯ ಸರಕಾರಿ ಶಾಲಾ ಶಿಕ್ಷಕಿ ಈ ವಿಶ್ವ ಮಾತ್ರ ಖಾಸಗಿಯೊಂದರಲ್ಲಿ ಕೆಲಸ ಇಬ್ಬರಿಗೂ ಒಬ್ಬಳು ಮಗಳು ಅವಳ ಹೆಸರು ವೈಷ್ಣವಿ ಅವರ ಜೀವನ ನೋಡುಗರ ಕಣ್ಣಿಗೆ ತುಂಬಾ ಸೊಗಸಾಗಿ ಅನಿಸಿದರು ಒಳಗಿನ ಸ್ಥಿತಿ ಅವರಿಬ್ಬರು ಬಿಚ್ಚಿ ಹೇಳಿದ್ದು ಅವರಿಬ್ಬರು ಮನೆಯವರ ವಿರುದ್ದವಾಗಿ ಮದುವೆಯಾದರು. ಇದರ ಪರಿಣಾಮ ಅನೇಕಬಾರಿ ಇಬ್ಬರು ಜೈಲಿಗೆಹೋದರು. ಅನೇಕ ಜನರಿಂದ ಅವಹೇಳನಕ್ಕೆ ಒಳಗಾದರು, ಅವರ ಬಂಧು ಭಾಂದವರಿಂದ ದೂರಾದರು , ಗೆಳೆಯರಿಂದ ದೂರಾದರು ಪ್ರತಿ ಹೆಜ್ಜೆ ಹೆಜ್ಜೆಗೂ ತುಂಬಾನೆ ಕಷ್ಟ ನೋವು ಅನುಭವಿಸಿದರು. ಮತ್ತೆ ಚೇತರಿಸಕೊಂಡು ನೀನು ನಮ್ಮ ಜೊತೆಗೆ ಇದ್ದಾಗ ಆದ ನೋರುಪಟ್ಟು ಕಷ್ಟ ಅದು ಮುಂದೆ ಅನುಭವಿಸಿದೇವು. ಇಷ್ಟು ಹೇಳುತ್ತಾ ಸೌಮ್ಯ ಕಣ್ಣೀರಿಟ್ಟಳು. ಆದರು ಜೀವನದಲ್ಲಿ ನೀವು ಇಬ್ಬರು ಪ್ರೀತಿ ಪಡೆದಿರಲ್ಲಾ ಅದು ತುಂಬಾ ಹೊಗಳುವಂತದ್ದು . ಸದ್ಯಕ್ಕೆ ಇಬ್ಬರು ಒಂದೆ ಕಡೆಗೆ ಸಿಂಪಲ್ ಆದರೂ ಹ್ಯಾಪಿ ಜೀವನ ಮಾಡುತ್ತಿದ್ದೀರಲ್ಲಾ ಅಷ್ಟು ಸಾಕು ಬಿಡಿ ಎಂದೆ. ಜೀವನ ಏಳುಬೀಳುಗಳ ಸಂಗಮ ಅದನ್ನು ತಲೆಕೆಡಿಕೊಳ್ಳುವುದರಲ್ಲಿ ಅರ್ಥವಿಲ್ಲಾ ನಾವು ಎಷ್ಟು ಸುಖವಾಗಿ ಇರತೀವಿ ಅಷ್ಟು ಒಳ್ಳೆಯದು. ಸೌಮ್ಯ ತನ್ನ ಮಗಳನ್ನು ಹೇಳಿದಳು ಹೋಗು ಅಂಕಲ್ ಹತ್ತಿರ ಅಂತಾ. ಆಗ ವೈಷ್ಣವಿ ನಮಸ್ಕಾರ ಅಂಕಲ್ ಎಂದಳು ನಾನು ಅವಳನ್ನು ಎತ್ತಿಕೊಂಡು ಒಂದು ಮುತ್ತು ಕೊಟ್ಟು ನೀನು ತುಂಬಾ ದೊಡ್ಡ ವ್ಯಕ್ತಿಯಾಗಬೇಕು ಅಂದಿದ್ದಕ್ಕೆ ನಾನು ಡಿ.ಸಿ. ಆಗತ್ತೀನಿ ಅಂದಳು ನಾಲ್ಕು ವರ್ಷದ ಹುಡುಗಿ ಅಬ್ಬಾ ಗುಡ್ ಹೀಗೆ ಬೆಳಿಯಮ್ಮ ಅಂದೆ ಈಗಲೂ ಆ ಹುಡುಗಿ ಕರೆ ಮಾಡಿದಾಗಲೆಲ್ಲಾ ನಾನು ಎನು ಡಿ.ಸಿ.ಯವರೆ ಏನ್ ಮಾಡತ್ತಿದ್ದೀರಾ ಅಂದರೆ ನಾನು ಓದುತ್ತಿದ್ದೀನಿ ಅಂಕಲ್ ಡಿ.ಸಿ. ಆಗಬೇಕಲ್ಲಾ ಅಂತಾ ತಮಾಷೆ ಮಾಡುತ್ತಾಳೆ.
ಇರಿಬ್ಬರ ಪ್ರೇಮ ಕಥೆಯಿಂದ ಕಲಿಯುವ ನೀತಿ ಇಷ್ಟೆ ನಾವು ಚಿಕ್ಕ ವಯಸ್ಸಿನ್ಲಲಿ ಮಾಡಿದ ಒಂದು ಚಿಕ್ಕ ತಪ್ಪು ನಮ್ಮ ಜೀವದುದ್ದಕ್ಕು ಅದರ ಪರಿಣಾಮ ಕಾಯ್ದುಕೊಂಡು ಬರುತ್ತದೆ ನಮ್ಮನ್ನು ದಿನೆ ದಿನೆ ಕೊಲ್ಲುತ್ತದೆ. ಅದರ ಈ ಪರಿಣಾಮ ನಾವೆ ಸ್ವತ: ಅನುಭವಿಸಬೇಕಾಗುತ್ತೆದೆ. ಹಾಗಾಗಿ ನಮ್ಮ ಜೀವನದ ಸಾಧನೆಯ ಹಾದಿಯಲ್ಲಿ ಈ ಪ್ರೀತಿ ಪ್ರೇಮದ ಬಲೆಗೆ ಬೀಳುವುದು ಬೇಡಾ ಮೊದಲು ನಾವು ನಮ್ಮ ತಂದೆತಾಯಿಗೆ ಅವರ ಬದುಕಿಗೆ ಏನು ಮಾಡುವುದು ಅವರು ನೀಡಿದ ಈ ಜೀವನಕ್ಕೆ ಅವರಿಗೇನು ಕೊಡುವುದು ಎನ್ನುವದನ್ನು ನೋಡಬೇಕು. ನಂತರ ನಾವು ಮತ್ತು ನಮ್ಮ ಜೀವನದ ಹಾದಿಯ ಕಡೆಗೆ ಗಮನಕೊಡಬೇಕು ಅವರಿಬ್ಬರು ಈಗ ಸುಖವಾಗಿರಬಹುದು ಆದರೆ ಅವರ ತಂದೆತಾಯಿಯ ಪಾಡೇನು ಗೊತ್ತೆ ಅವರ ಊರಿನವರ ಮರಿಯ್ಯಾದೆ ಏನಾಗಬೇಕು ಗೊತ್ತೆ ಅವರ ಸಂಬಂದಿಕರ ಸ್ಥಿತಿಗತಿ ಏನಾಗಬೇಕು ಗೊತ್ತೆ ಹೀಗೆ ನಾವು ಮೇಲ್ನೋಟಕ್ಕೆ ನಮ್ಮ ಜೀವನ ಸೀಮಿತ ಮಾಡಕೊಳ್ಳದೆ ಅದರ ಆಳವನ್ನು ಅರಿತು ಬಾಳಬೇಕಾದ ಅಗತ್ಯವಿದೆ ಅವರಿಬ್ಬರೂ ಹೇಳುವುದು ಕೊನೆ ಮಾತು ಯುವಕರೆಲ್ಲ ಆಲಿಸಲೇಬೇಕು.
" ನಮ್ಮ ದೃಷ್ಠಿಯಲ್ಲಿ ನೋಡಿದರೆ , ನಮ್ಮಷ್ಟು ನೆಮ್ಮದಿಯ ಬದುಕು ಯಾರದ್ದು ಇಲ್ಲಾ. ಬೆರೊಬ್ಬರ ದೃಷ್ಠಿಯಲ್ಲಿ ಗಮನಿಸಿದರೆ ನಮಗಿಂತ ಕನಿಷ್ಠ ಬದುಕು ಯಾರದು ಇಲ್ಲಾ ಅನಿಸುತ್ತೇ." ಈ ಪ್ರೀತಿಯೆ ಹೀಗೆ ಇದರ ಮುಂದೆ ಯಾವುದು ಕಾಣುವುದಿಲ್ಲಾ, ಎಲ್ಲವು ಶೂನ್ಯವಾಗಿ ಕಾಣುತ್ತೆ. ನಾವು ಪ್ರೀತಿ ಮಾಡಬೇಕು ಆದರೆ ಅದರಿಂದ ಹಾಳಾದೆ ಎನ್ನಬಾರದು ಆ ಪ್ರೀತಿಯಿಂದ ಪ್ರಚೋದನೆ ಪಡೆಯಬೇಕು. ಪ್ರೀತಿಯೆಂದರೆ ಉಳಿದುಹೋಗುವುದು ಅಳಿದುಹೋಗುವುದಲ್ಲಾ ನೆನಪಿರಲಿ.......................