ಅಂಗನವಾಡಿಗಳ ಅಭಿವೃದ್ಧಿ ಹಾಗೂ ಪೂರ್ವ ಪ್ರಾಥಮಿಕ ಶಿಕ್ಷಣದ ಅಭಿವೃದ್ಧಿಯ ಬಗ್ಗೆ ಮೊದಲು ಕೇಂದ್ರ ಸರ್ಕಾರಕ್ಕೆ ಕೇಳಿದರೆ, ನಾವು ಸಮರ್ಪಕವಾಗಿ ಹಣ ವಿನಿಯೋಗಿಸುತ್ತಿದ್ದೇವೆ ಆದರೆ ರಾಜ್ಯ ಮಟ್ಟದಲ್ಲಿ ಅದರ ಬಳಕೆ ಮತ್ತು ಉಳಿಕೆ ಸರಿಯಿಲ್ಲಾ ಎಂದು ರಾಜ್ಯ ಸರಕಾರವನ್ನು ದೂರುತ್ತಾರೆ. ಇನ್ನು ರಾಜ್ಯ ಸರ್ಕಾರದ ಪರಿಸ್ಥಿತಿ ಇದಕ್ಕೆ ಹೊರತಾಗಿಲ್ಲಾ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳ ಮೇಲೆ ದೂರು ಹೇಳುತ್ತಾರೆ. ನಾವು ಅಧಿಕಾರಿಗಳನ್ನು ಕೇಳಿದಾಗ ಅವರು ಅಂಗನವಾಡಿ ಮಟ್ಟದಲ್ಲಿ ದೂರುತ್ತಾರೆ. ನಮ್ಮ ಅಂಗನವಾಡಿ ಕಾರ್ಯಕರ್ತರ ಹತ್ತಿರ ಹೋದರೆ ಸಾಕು " ಏನ್ ಮಾಡುವುದು ಸರ್ ನಮ್ಮ ಕೆಲಸ ಪೂರ್ವಪ್ರಾಥಮಿಕ ಶಿಕ್ಷಣ ಕೊಡುವುದಷ್ಟೆಯಿಲ್ಲ ಬದಲಾಗಿ ನಮ್ಮ ಕೆಲಸ ಹದಿನಾರು ಕಡೆಗೆ ಹರಿದು ಹಂಚಿ ತಿಂದಂತೆ ಮಾಡುತ್ತಿದ್ದಾರೆ " ನಾವು ಬರಿ ತಾಲೂಕ ಆಫೀಸಿಗೆ ಅಲೆದಾಡಿ, ಮಾಹಿತಿ ಕೊಡೊದೆ ನಮ್ಮ ಕೆಲಸ ಆಗಿದೆ ಇಲ್ಲಿ ಮಕ್ಕಳಿಗೆ ಕಲಿಸಬೇಕು ಎಂದರೆ, ಯಾವ ಪಾಲಕರು ಕೂಡ ಅಂಗನವಾಡಿಗೆ ಮಕ್ಕಳ ಕಳಿಸುತ್ತಿಲ್ಲಾ. ಅಧಿಕಾರಿಗಳು ಬಂದು ಮಕ್ಕಳ ಸಂಖ್ಯೆ ಮಾತ್ರ ಕೇಳತ್ತಾರೆ ಹೇಗೆ ನಮ್ಮ ಅಂಗನವಾಡಿಗಳು ಬದಲಾದವು ಹೇಳಿ " ಎಂದು ಪ್ರಶ್ನೆ ಮಾಡುತ್ತಾರೆ ನಮ್ಮ ಅಂಗನವಾಡಿ ಕಾರ್ಯಕರ್ತರು. ಇನ್ನು ಕೊನೆಯದಾಗಿ ನಮ್ಮ ಪಾಲಕ ಸಮುದಾಯಕ್ಕೆ ಈ ಬಗ್ಗೆ ಕೇಳಿದರೆ ಅವರ ಮಾತೆ ಬೇರೆ " ಸರ್ ಯಾವತ್ತು ಅಂಗನವಾಡಿ ತೆರೆಯಲ್ಲಾ, ಇನ್ನು ಅಲ್ಲಿ ಕಲಿಸೋದು ದೂರ ಅಲ್ಲಿನ ಆಹಾರ ಕೂಡ ಸರಿಯಾಗಿರಲ್ಲ ಅಂದಮೇಲೆ ನಮ್ಮ ಮಕ್ಕಳಿಗೆ ಹೇಗೆ ಅಂಗನವಾಡಿಗಳಿಗೆ ಕಳಿಸಬೇಕು" ಎನ್ನುತ್ತಾರೆ.
ಈ ಅನೇಕ ರೀತಿಯ ಗೊಂದಲಗಳ ಮಧ್ಯೆ ಶಿಕ್ಷಣ ವಂಚಿತ ಮಗು ಅಳುತ್ತಾ ನಿಂತಿದೆ. ಆ ಕಂದಮ್ಮನಿಗೆ ಮಾತ್ರ ಯಾರು ಕೇಳುವುವರಿಲ್ಲಾ. ಆ ಮಗುವಿನ ಬಗ್ಗೆ ಯಾರು ಮಾತನಾಡುವವರಿಲ್ಲಾ, ಅಪೌಷ್ಠಿಕತೆ ತಂದ ತಲ್ಲಣದಿಂದ ಪತ್ರಿಕೆಗಳ ಪ್ರಮುಖ ಸುದ್ದಿಯಾಗುತ್ತಿದೆ ಮತ್ತು ವಾಹಿನಿಗಳ ಬಾಯಿಗೆ ಸುದ್ದಿಯಾಗುತ್ತಿದೆ ಅಷ್ಟೆ.. ನಮ್ಮ ವಾಹಿನಿಗಳು ಮತ್ತು ಪತ್ರಿಕೆಗಳು ಮಾಡಿದ ಈ ಸುದ್ದಿಗಳು ಕಂಡ ಸರ್ಕಾರದ ಕೆಲವು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೆಲವು ಮಕ್ಕಳಿಗೆ ಆಹಾರ ಒದಗಿಸಿದಂತೆ ಮಾಡಿ, ಫೋಸುಕೊಟ್ಟು ಫೋಟು ತೆಗೆದುಕೊಂಡು ಪತ್ರಿಕೆಗೆ ಹಾಕಿ ಪ್ರಚಾರ ಗಿಟ್ಟಿಸಿಕೊಳ್ಳುವ ಕೆಲಸವಾಗುತ್ತಿದೆಯೆ ಹೊರತು, ಯಾವುದು ಗುಣಮಟ್ಟದ ಕೆಲಸವಾಗುತ್ತಿಲ್ಲ ಎಂಬುವುದು ವಿಪರ್ಯಾಸದ ಸಂಗತಿ.
ಮಕ್ಕಳಿಗಾಗಿಯೆ ಹೊರತಂದ ಅದೆಷ್ಟೋ ಕಾನುನೂಗಳು ಸರಿಯಾಗಿ ಅನುಷ್ಠಾನಗೊಳ್ಳದೆ ಹಳಿತಪ್ಪಿ ಹೋಗುತ್ತಿವೆ. ವಿಷೇಶವಾಗಿ ಅಂಗನವಾಡಿ ಮಟ್ಟದಲ್ಲಿಯೇ ಅನೇಕ ರೀತಿಯಾಗಿ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತಿವೆ. ನಾವೆಲ್ಲ ಪ್ರಾಥಮಿಕ ಮತ್ತು ಪ್ರೌಢ ಹಂತದಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಮಾತಾನಾಡುತ್ತೇವೆಯೆ ಹೊರತು ಅಂಗನವಾಡಿ ಮಟ್ಟದಲ್ಲಿ ಸರಿಯಾದ ಸಮಯಕ್ಕೆ ಆಹಾರ ಸರಬರಾಜು ಮಾಡದ ಸರ್ಕಾರವೆ ಮಕ್ಕಳ ಹಸಿವಿನ ಹಕ್ಕು ಕಸಿದುಕೊಳ್ಳುತ್ತಿದೆ. ಅತ್ತ ಮಕ್ಕಳ ಬಗ್ಗೆ ಮಾತಾಡುತ್ತಿರುವ ಮತ್ತು ಮಕ್ಕಳಿಗಾಗಿ ದುಡಿಯುತ್ತಿರುವ ಎಷ್ಟೊ ವ್ಯಕ್ತಿಗಳ ಹತ್ತಿರದಲ್ಲಿಯೆ ಮಕ್ಕಳ ನಿಜವಾದ ಹಕ್ಕಿನ ಉಲ್ಲಂಘನೆಯಾಗುತ್ತಿದ್ದರು ಯಾರ ಕಣ್ಣಿಗೂ ಬೀಳದೆ ಹೋಗುತ್ತಿವೆ.
ಅಲ್ಲಲ್ಲಿ ಮಕ್ಕಳ ಹಕ್ಕುಗಳ ಕುರಿತು, ಮಕ್ಕಳ ಶಿಕ್ಷಣ ಹಕ್ಕು ಕಾಯಿದೆ, ಮಕ್ಕಳ ನ್ಯಾಯ ಕಾಯಿದೆ, ಮಕ್ಕಳ ಕಲ್ಯಾಣ ಸಮಿತಿ, ಬಾಲಕಾರ್ಮಿಕತೆ, ಬಾಲ್ಯವಿವಾಹ ಹೀಗೆ ಅನೇಕ ಮಕ್ಕಳ ವಿಷಯಗಳ ಕುರಿತು ಇತ್ತೀಚಿಗೆ ಕಾರ್ಯಾಗಾರಗಳು ಭರಾಟೆಯಲ್ಲಿವೆ ಎನ್ನುವುದು ಸಂತೋಷ ಕೊಡುವ ವಿಷಯ ಆದರೆ ಅದೇ ಕಾರ್ಯಗಾರದ ಹಿಂದಿನ ಕೋಣೆಯಲ್ಲಿ ಮಕ್ಕಳು ಕಾರ್ಯಗಾರದವರು ಉಂಡು ಎಸೆದ ಊಟದ ತಟ್ಟೆಗಳನ್ನು ತೊಳೆಯುತ್ತಿರುತ್ತಾರೆ ಹಾಗಾದರೆ ಈ ಮಕ್ಕಳ ಕಾಯಿದೆ ಕಾನುನೂಗಳು ಎಲ್ಲಿ ಕೆಲಸ ಮಾಡುತ್ತಿವೆ ಎನ್ನುವ ವಿಚಾರ ಮಾಡಲೇಬೇಕು. ಎಲ್ಲವೂ ದಾಖಲಾತಿ ನೆವ ಅಷ್ಟೆ ಯಾವುದು ಕಾರ್ಯರೂಪಕ್ಕೆ ಬರುತ್ತಿಲ್ಲ . ನಮ್ಮ ಅಂಗನವಾಡಿ ಬದಲಾದರೆ ಇಡಿ ನಮ್ಮ ಶಿಕ್ಷಣ ಕ್ಷೇತ್ರವೆ ಬದಲಾಗುತ್ತದೆ ಎಂದು ಕೆಲವು ಶಿಕ್ಷಣ ತಜ್ಷರು ಮಾತನಾಡುತ್ತಾರೆ ಆದರೆ ಯಾವುದು ಕಾರ್ಯಗತವಾಗುತ್ತಿಲ್ಲ ಎನ್ನುವುದು ಸತ್ಯ .
ಅಂಗನವಾಡಿಗಳು( ಬಾಲವಾಡಿಗಳು ) ಬೆಳೆದು ಬಂದ ದಾರಿ:
ಪ್ರಾಚೀನ ಕಾಲದಲ್ಲಿ ನಮ್ಮ ಶಿಕ್ಷಣವು ಅನೌಪಚಾರಿಕವಾಗಿದ್ದು, ಮರದ ಕೆಳಗೆ ಗುರುಗಳ ಅದೀನದಲ್ಲಿದ್ದು ಅವರು ಹೇಳಿದಂತೆ ಕೇಳಿ ಗಿಳಿಪಾಠ ಕಲಿಯಬೇಕಿತ್ತು. ನಮ್ಮ ಅಭಿಪ್ರಾಯಗಳಿಗೆ ಅವಕಾಶವಿರಲಿಲ್ಲ, ಅವರು ಹೇಳಿದ್ದೆ ವೇದ ವಾಕ್ಯವಾಗಿತ್ತು. ನಮ್ಮ ಯಾವುದೇ ಮಾತು ಯಾರು ಕೇಳುತ್ತಿರಲಿಲ್ಲ. ನಮ್ಮೊಳಗಿರುವ ಕೌಶಲ್ಯ ಯಾರು ಗುರುತಿಸುತ್ತಿರಲಿಲ್ಲ ಅನೇಕ ರೀತಿಯ ಅವಕಾಶಗಳಿಂದ ವಂಚಿತರಾಗಿದ್ದೇವು. ನಮ್ಮ ಮೌಲ್ಯಗಳನ್ನು ಅರೆಯಲು ಇದರಿಂದ ಸಾಧ್ಯವಾಗುತ್ತಿರಲಿಲ್ಲ
ಅಂತಹ ಶಿಕ್ಷಣವನ್ನು ಹೋಗಲಾಡಿಸುತ್ತ ಬಂದ ನಮ್ಮನ್ನಾಳಿದ ಸರ್ಕಾರಗಳು ಮೊದಲಿಗೂ ಹಾಗೂ ಈಗಿನ ಶಿಕ್ಷಣಕ್ಕು ನಂಟನ್ನು ಬೆಸೆಯುತ್ತಾ ಬಂದಿದ್ದಾರೆ.
ಇದು ಮಾಹಾರಾಷ್ಟ್ರ ರಾಜ್ಯದ ಚಿಕ್ಕ ಹಳ್ಳಿಯ ಘಟನೆ. ಒಂದು ದಿನ ಮಾಹಾರಾಷ್ಟೃ ರಾಜ್ಯದ ಒಂದು ಚಿಕ್ಕ ಹಳ್ಳಿಯಲ್ಲಿ ಒಬ್ಬ ಮಹಿಳೆ ಅವಳ ಅಂಗಳದಲ್ಲಿ, ಕೆಲವು ಮಕ್ಕಳಿಗೆ ಅನೌಪಚಾರಿಕವಾಗಿ ಶಿಕ್ಷಣ ನೀಡುತ್ತ ತನ್ನ ಸಮಯ ಸದೂಪಯೋಗ ಪಡೆಸಿಕೊಳ್ಳುತ್ತಿದ್ದಳು. ಮರಾಠಿಯಲ್ಲಿ ಅಂಗನ್ ಎಂದರೆ ಕನ್ನಡದಲ್ಲಿ ಅಂಗಳ ಅಥವಾ ಹಿಂದಿಯಲ್ಲಿ ಆಂಗನ್ ಎಂದರೆ ತಾಯಿಯ ಮಡಿಲು, ಗೋದ ಎಂತಲೂ ಬಳಕೆಯಲ್ಲಿದೆ. ಈ ಅಂಗಳದಲ್ಲಿ ಕಲಿತ ಆ ಮಕ್ಕಳು ಮುಂದೆ ವಾರ್ಡ್ ಎಂದರೆ ಏರಿಯಾ ಅಥವಾ ಒಂದು ಓಣಿ ಎನ್ನುತ್ತೇವೆ. ಆ ಓಣಿಯ ಎಲ್ಲಾ ಮಕ್ಕಳು ಒಂದೆಡೆ ಸೇರಿ ಕಲಿಯುವ ಆ ಸ್ಥಳಕ್ಕೆ ಅಂಗನವಾಡಿ ಎಂದು ಕರೆದದ್ದು ಇದೇ ಮೊದಲು. ಆ ಹೆಣ್ಣು ಮಗಳು ಹೀಗೆ ಮುಂದುವರೆಯುತ್ತ ಅವುಗಳನ್ನು ಅಂಗನವಾಡಿಯಾಗಿ ಪರಿವರ್ತಿಸಲಾಯಿತು. ಅದಕ್ಕೆ ಈಗ ನಾವು ಕಾಣುತ್ತಿರುವ ಅಂಗನವಾಡಿಗಳು ಎಂದು ಕರೆಯುತ್ತೇವೆ.
ಸೂಮಾರು ೧೯೭೫ ರಲ್ಲಿ ಇವು ನಮ್ಮ ದೇಶದ ೩೫ ಬ್ಲಾಕ್ ಗಳಲ್ಲಿ ಪ್ರಾರಂಭವಾದವು. ಮೊದಲು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ದೇಶದ ಎಲ್ಲ ಅಂಗನವಾಡಿಗಳನ್ನು ನೋಡಿಕೊಳ್ಳುತ್ತಿತ್ತು. ಇತ್ತೀಚೆಗೆ ೨೦೦೬ ರಿಂದ ಇದನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಒಪ್ಪಿಸಲಾಯಿತು. ೧೯೮೬ ರ ರಾಷ್ಟ್ರೀಯಾ ಶಿಕ್ಷಣ ನೀತಿಯೂ ಮಗುವಿನ ಭೌತಿಕ,ಮಾನಸಿಕ,ಜ್ಞಾನಾತ್ಮಕ ಕೌಶಲ್ಯವನ್ನು ಬೆಳೆಸುವಂತೆ ಒತ್ತಾಯ ಮಾಡಿತ್ತು. ಆ ನಿಟ್ಟಿನಲ್ಲಿ ಅಂಗನವಾಡಿಗಳಿಗೆ ಬೇರೆ ಬೇರೆ ರಿತಿಯಲ್ಲಿ ಬದಲಾಗಲು ಅವಕಾಶ ಮತ್ತು ಮಾರ್ಗಗಳು ತೋರಿಸಿದವು. ಅದನ್ನು ಆದಾರವಾಗಿಟ್ಟುಕೊಂಡು ಮತ್ತು ಮುಂದೆ ಬಂದ ಮಕ್ಕಳ ಶಿಕ್ಷಣ ಹಕ್ಕು ಕಾಯಿದೆ ಅಲ್ಲದೆ ಸಂವಿಧಾನದ ೪೫ನೇ ತಿದ್ದುಪಡಿಯ ಮೂಲಕ ಜಾರಿಯಾಯಿತು. ಅಂಗನವಾಡಿಗಳ ಸಂಖ್ಯೆ ಕ್ರಮೇಣ ಏರಿತು ೨೦೧೦ ಜನಗಣತಿಯ ಪ್ರಕಾರ ೧೦,೭೮,೯೭೩ ಅಂಗನವಾಡಿ ಕೇಂದ್ರಗಳಿವೆ, ೭೨ ಮಿಲಿಯನ್ ಮಕ್ಕಳಿದ್ದಾರೆ, ೧೫ ಮಿಲಯನ್ ಬಾಣಂತಿ ತಾಯಂದಿರಿದ್ದಾರೆ, ಹೀಗೆ ಈ ಅಂಗನವಾಡಿಗಳು ಬೆಳೆದು ಬಂದವು .
ಶಾಲಾ ಪೂರ್ವ ಶಿಕ್ಷಣದ ಅಗತ್ಯತೆ:
ಮಗು ಮಾತು ಕಲಿತ ನಂತರ ತನ್ನ ಸುತ್ತಮುತ್ತಲಿನ ವಸ್ತುಗಳನ್ನು ನೋಡಿ ಪ್ರಶ್ನಿಸಲು ಪ್ರಾರಂಭಿಸುತ್ತದೆ. ಅದನ್ನು ನಿವಾರಿಸಲು ಶಾಲಾಪೂರ್ವ ಶಿಕ್ಷಣ ಬೇಕು. ಮಗುವಿನಲ್ಲಿರುವ ಕೂತುಹಲಕಾರಿ ಬೆಳೆವಣಿಗೆ ಮೂಡಲು ಶಾಲಾ ಪುರ್ವಶಿಕ್ಷಣ ಅವಶ್ಯಕ. ಮಗುವಿನಲ್ಲಿಯ ಇಂದ್ರಿಯ ಬೆಳವಣಿಗೆ ಆಗುವುದು ಈ ವಯಸ್ಸಿನಲ್ಲಿಯೆ ಅದನ್ನು ಈ ಶಿಕ್ಷಣ ಒದಗಿಸಿಕೊಡುತ್ತದೆ. ಮಗುವಿನ ಸ್ನಾಯೂ ಬೆಳವಣಿಗೆಗೆ ಈ ವಯಸ್ಸು ಸೂಕ್ತವಾಗಿದೆ ಅದನ್ನು ಈ ಶಿಕ್ಷಣ ಪುರೈಸುತ್ತದೆ. ಬಾಲ್ಯದಲ್ಲಿಯ ಹಠಮಾರಿತನ, ತುಂಟತನ, ಹೇಗೆ ಮುಂದಿನ ಜೀವನಕ್ಕೆ ಪೂರಕ ಹಾಗು ಮಾರಕ ಎಂಬುವುದು ಈ ಶಿಕ್ಷಣ ಕಲಿಸುತ್ತದೆ. ಎಳೆಯ ವಯಸ್ಸಿನ ಮಕ್ಕಳಲ್ಲಿ ಸದಾ ಚಟುವಟಿಕೆಯಿಂದ ಇರುವ ಮನಸ್ಸಿರುತ್ತದೆ. ಅದನ್ನು ಜಾಗೃತಗೊಳಿಸುವ ಕೆಲಸ ಈ ಶಿಕ್ಷಣ ಮಾಡುತ್ತದೆ. ಪೂರ್ವ ಪ್ರಾಥಮಿಕದಲ್ಲಿ ಚೆನ್ನಾಗಿ ಕಲಿತ ಮಕ್ಕಳು ಪ್ರಾಥಮಿಕ ಹಂತದ ಕಲಿಕೆ ಸರಾಗವಾಗಿ ಸಾಗುತ್ತದೆ ಮತ್ತು ಮಕ್ಕಳ ಸರಿಯಾದ ವಯಸ್ಸಿಗೆ ತಕ್ಕ ಬೆಳವಣಿಗೆ ಆಗುತ್ತದೆ.
ಯಾವ ವಯಸ್ಸಿಗೆ ಏನು? ಏಕ? ಹೇಗೆ? ಕಲಿಸಬೇಕು ಎನ್ನುವ ವಿಷಯ ಈ ಶಿಕ್ಷಣ ಒತ್ತಿ ಹೇಳುತ್ತದೆ. ಅದಕ್ಕಾಗಿ ಈ ಶಿಕ್ಷಣ ಬೇಕು. ಎಳೆಯ ವಯಸ್ಸಿನ ಮಕ್ಕಳು ಸ್ಪರ್ಶದ ಮೂಲಕ ಹೆಚ್ಚಿಗೆ ಕಲಿಯಲು ಆಸೆ ಪಡುತ್ತಾರೆ ಅದನ್ನು ಈ ಶಿಕ್ಷಣ ಒದಗಿಸುತ್ತದೆ. ಎಳೆಯ ವಯಸ್ಸಿನಲ್ಲಿ ಕಲಿತ ಯಾವ ವಿಷಯವು ಮರೆಯದೆ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಮಗುವಿನ ನಗು ಸದಾಕಾಲ ಉಳಿದು ಯಾವತ್ತೂ ಕ್ರೀಯಾಶಿಲವಾಗಿರಲು ನರ್ಸರಿ ಶಿಕ್ಷಣ ಬೇಕು. ಚಿಕ್ಕ ವಯಸ್ಸಿನಲ್ಲಿ ಕಲಿತ ವಿಷಯ ಮುಂದಿನ ಜೀವನದಲ್ಲಿ ಕಲಿಯುವ ಹೊಸ ವಿಷಯಕ್ಕೆ ಸಂಬಂಧ ಕಲ್ಪಸಿ ಕಲಿಯಲು ಈ ಶಿಕ್ಷಣದ ಅವಶ್ಯಕತೆಯಿದೆ. ಮಗುವಿನಲ್ಲಿ ಪೂರ್ಣ ಪ್ರಮಾಣದ ಶಾಲೆಗೆ ಹೋಗಲು ಅವಕಾಶ ಮಾಡಿಕೊಡುತ್ತದೆ.
ಅಂಗನವಾಡಿಗಳ ಈಗಿನ ಪರಿಸ್ಥಿತಿ:
ಸರಿಯಾದ ಸಮಯಕ್ಕೆ ಪ್ರಾರಂಭ ಆಗುವುದಿಲ್ಲ , ಕಾರ್ಯಕರ್ತರಿಗೆ ಕೆಲಸದ ಹೊರೆ ಹೆಚ್ಚಿದೆ, ಜಿಲ್ಲ ಹಾಗೂ ತಾಲೂಕು ಮಟ್ಟದಲ್ಲಿ ಮಾಹಿತಿಯಾ ಕೊರತೆಯಿದೆ, ಸರಿಯಾದ ಸಮಯಕ್ಕೆ ಆಹಾರದ ಸರಬರಾಜು ಆಗದಿರುವುದು. ಅಂಗನವಾಡಿಗಳಿಗೆ ಬಹು ಸಂಖ್ಯೆಯಲ್ಲಿ ಕಟ್ಟಡಗಳ ಕೊರತೆಯಿದೆ. ಅಂಗನವಾಡಿ ಕಾರ್ಯಕರ್ತರಿಗೆ ಕೌಶಲ್ಯ ಆಧಾರಿತ ತರಬೇತಿಗಳ ಅವಶ್ಯಕತೆಯಿದೆ. ಇತ್ತೀಚೆಗೆ ಹಳ್ಳಿಗೂ ಶಿಕ್ಷಣದ ಖಾಸಗೀಕರಣದಿಂದ ಖಾಸಗಿ ನರ್ಸರಿ ಶಾಲೆ ತೆಗೆದಿದ್ದು ಅಲ್ಲಿಗೆ ಮಕ್ಕಳನ್ನು ದಾಖಲು ಮಾಡಲಾಗುತ್ತಿದೆ. ಶಿಸ್ತಿನ ಹೆಸರಿನಲ್ಲಿ ನರ್ಸರಿ ಶಾಲೆಗಳು ಅಂಗನವಾಡಿಗಳಿಗೆ ಮಾರಕವಾಗಿ ಪರಿಣಮಿಸುತ್ತಿವೆ. ಪಾಲಕರಿಗೆ ಮಕ್ಕಳ ಶಿಶು ಶಿಕ್ಷಣ , ಶಾಲಾ ಪೂರ್ವ ಶಿಕ್ಷಣದ ಅರಿವಿಲ್ಲದಿರುವುದು ತಾಯಂದಿರು ಇಂದಿಗೂ ಮಕ್ಕಳ ನೊಡಿಕೊಳ್ಳಲು ಸಂಪ್ರದಾಯಿಕ ಪದ್ಧತಿಯನ್ನು ಬಳಸುತ್ತಿರುವುದು. ಪಾಲಕರಲ್ಲಿಯ ಅನರಕ್ಷರತೆ ಇದಕ್ಕೆ ಮಾರಕವಾಗಿ ಕಾಣುತ್ತಿದೆ. ಸರಕಾರದಿಂದ ಸರಿಯಾದ ಮೇಲ್ವಿಚಾರಣೆ ಇಲ್ಲ. ಸಮಯಕ್ಕೆ ತಕ್ಕಂತೆ ಸರಿಯಾದ ಸಭೆ ನಡೆಯುವುದಿಲ್ಲ, ಸಭೆ ನಡೆದರು ಚರ್ಚಿಸಬೆಕಾದ ವಿಷಯ ಚರ್ಚೆ ಆಗಲ್ಲ ಮತ್ತು ಚರ್ಚೆ ಆದ ವಿಷಯ ಅನುಷ್ಠಾನ ಆಗುವುದಿಲ್ಲಾ.
ಅಲ್ಪ ಶ್ರಿಮಂತರಾದವರು ಕೂಡಾ ತಮ್ಮ ಮಕ್ಕಳನ್ನು ಖಾಸಗಿ ನರ್ಸರಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಅಂಗನವಾಡಿ ಕಾರ್ಯಕರ್ತರು ಅವರಿಗೆ ಇರುವ ವಾರದ ವಿಷಯ ಯೋಜನೆ ಸಮಯ ಪಾಲನೆ ಅದರ ಅನುಷ್ಠಾನದ ಕಡೆ ಗಮನ ಹರೆಸದೆ ಇರುವುದು. ಸರಕಾರ ಹೊರತಂದಿರುವ ಚಿಲಿಪಿಲಿ ಚಟುವಟಿಕೆಗಳು ವರ್ಗಕೋಣೆಯಲ್ಲಿ ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳ್ಳದಿರುವದು. ಅಂಗನವಾಡಿ ಕಾರ್ಯಕರ್ತರಿಗೆ ಕಡಿಮೆ ಸಂಬಳ ಹೆಚ್ಚು ಕೆಲಸ ಇರುವುದು. ಈ ಇಲಾಖೆಯಲ್ಲಿ ಇತ್ತೀಚೆಗೆ ಯೋಜನೆಗಳು ಹೆಚ್ಚಾಗಿವೆ. ಮಕ್ಕಳಿಗೆ ಆಕರ್ಷಕವಾಗಿ ಅವರ ಗಮನ ಸೆಳೆಯುವಂತಹ ಕೇಂದ್ರ ಇಲ್ಲದಿರುವುದು. ಶಾಲಾ ಪೂರ್ವ ಶಿಕ್ಷಣ ಯೋಜನೆಗೆ ತಕ್ಕಂತೆ ನಡೆಯದಿರುವುದು. ಅಂಗನವಾಡಿ ಕಾರ್ಯಕರ್ತರಿಗೆ ಬೇರೆ ಕೆಲಸದ ಹೊರೆಯಾಗಿರುವುದು, ಅಂಗನಾಡಿ ಕಾರ್ಯಕರ್ತರು ಹೆಚ್ಚಾಗಿ ದಾಖಲಾತಿಗೆ ಒತ್ತುಕೊಡುವುದು. ಅಂಗನವಾಡಿ ಕಾರ್ಯಕರ್ತೆಯರಲ್ಲಿ ಅರ್ಹತೆ ಇದೆ ಆದರೆ ಆಸಕ್ತಿಯ ಕೊರತೆಯಿದೆ. ಇಲಾಖೆಯಿಂದ ಸೂಕ್ತ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆ ಇಲ್ಲದಿರುವುದು. ಅಂಗನವಾಡಿಗಳಲ್ಲಿ ಮಕ್ಕಳು ಆಡಲು ಆಟಿಕೆ ಸಾಮಾನು ಇಲ್ಲದಿರುದು. ಸಮುದಾಯ ತಮ್ಮ ಮಕ್ಕಳನ್ನು ಚಿಕ್ಕ ಚಿಕ್ಕ ಕೆಲಸಗಳಿಗೆ ಬಳಸಿಕೊಳ್ಳುವುದು. ಸಮುದಾಯದ ಜನರು ಪದೆ ಪದೆ ಗೂಳೆ ಹೊಗುವುದು. ಹೀಗೆ ಹಲವು ರೀತಿಯ ಸೂಚ್ಯಂಕಗಳಲ್ಲಿ ನಮ್ಮ ಅಂಗನವಾಡಿಗಳಿವೆ.
ಸರ್ಕಾರ ಹಾಗೂ ಅಧಿಕಾರಿಗಳು ಏನು ಮಾಡಬೇಕು.:
ಪ್ರತಿಯೊಬ್ಬ ಮೇಲ್ವಿಚಾರಕರಿಗೆ ಎಷ್ಟು ಅಂಗನವಾಡಿಗಳನ್ನು ನೋಡಿಕೊಳ್ಳಲು ಸಾಧ್ಯವಾಗುತ್ತದೆ ಎಂಬುವದನ್ನು ಗಮನಿಸಿ ಅವುಗಳ ಸಂಖ್ಯೆ ಇಳಿಸಿ ಹೆಚ್ಚಿನ ಮೇಲ್ವಿಚಾರಕರ ನೇಮಕಾತಿಯಾಗಬೇಕು. ಅವರವರ ವೇಗದ ಗತಿಗೆ ತಕ್ಕಂತೆ ಕೌಶಲ್ಯಭರಿತ ತರಬೇತಿ ನೀಡಬೇಕು ಕೊಟ್ಟ ತರಬೇತಿ ಎಷ್ಟು ಪರಿಣಾಮಕಾರಿಯಾಗಿ ಅನುಷ್ಠಾನ ಆಗುವುದನ್ನು ನೋಡಿಕೊಳ್ಳಬೇಕು. ಪರಿಣಾಮಕಾರಿಯಾದ ಮೇಲ್ವಿಚಾರಣೆ ಮಾಡಿ ಅದನ್ನು ಅನುಸರಿಸಬೇಕು . ಸರ್ಕಾರ ಕೊಟ್ಟ ಯೋಜನೆ ಸರಿಯಾಗಿ ಅನುಷ್ಠಾನವಾಗುತ್ತಿದೆಯೆ ಹಾಗೂ ಅಂಗನವಾಡಿ ಕಾರ್ಯಕರ್ತರು ಹೇಗೆ ಶ್ರಮಿಸುತ್ತಿದ್ದಾರೆ ಎಂಬುವುದು ಗಮನಿಸಿ ಅವರಿಗೆ ನಿರಂತರ ಪ್ರೋತ್ಸಹ ನೀಡಬೇಕು. ನಾವು ಬರಿ ಅವರನ್ನು ಬೈಯುವ ರೀತಿಯಲ್ಲಿ ಮಾತಾನಾಡಿ ಮೇಲ್ವಿಚಾರಣೆ ಮಾಡಿದರೆ ಸಾಲದು ನಾವು ಅವರು ಮಾಡುವ ಕಾರ್ಯಗಳನ್ನು ಪ್ರಶಂಸಿಬೇಕು ನಂತರ ನಿರಂತರ ಸಾಹಾಯ ನೀಡಬೇಕು. ಅವರಿಗೊಂದು ಅವಕಾಸ ನೀಡಿ ಅವರ ವ್ಯಕ್ತಿತ್ವ ಬೆಳವಣಿಗೆಗೆ ಅವಕಾಶ ಮಾಡಿ ಕೊಡಬೇಕು. ಕೌಶಲ್ಯಪೂರಿತ ತರಬೇತಿ ನೀಡಿವ ನಿಟ್ಟಿನಲ್ಲಿ ಕಾರ್ಯಗತವಾಗಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಈ ಯೋಜನೆಯಲ್ಲಿ ಭಾಗವಹಿಸಿದ ಎಲ್ಲರೂ ತಮ್ಮ ಪಾಲಿನ ಕಾರ್ಯವನ್ನು ನಿಷ್ಠೆ, ಪ್ರಮಾಣಿಕತೆ ಹಾಗೂ ವೈಚಾರಿಕ ಹಿನ್ನಲೆಯಲ್ಲಿ ಮಾಡಿದ್ದರೆ ಅದನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳಿಸಿದರೆ ಮಾತ್ರ ನಮ್ಮ ಶಾಲಾ ಪೂರ್ವ ಶಿಕ್ಷಣ ಸರಿಯಾಗಿ ಸುಂದರ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ.
ನಾವಿಂದು ಗುಣಾತ್ಮಕ ಶಿಕ್ಷಣ ನೀಡಬೇಕು ಎಂದು ಕನಸು ಕಾಣುತ್ತಿದ್ದೇವೆ, ನಮ್ಮ ಜಿಲ್ಲೆ ಹಾಗೂ ರಾಜ್ಯ ಸಂಪೂರ್ಣ ಸಾಕ್ಷರತೆ ಮಾಡಬೇಕು ಎಂದು ಪರದಾಡುತ್ತಿದ್ದೇವೆ ಮತ್ತು ಪ್ರಾಥಮಿಕ ಮತ್ತು ಪ್ರೌಢ ಹಂತದಲ್ಲಿ ಮಕ್ಕಳ ಗೈರು ಹಾಜರಿಯನ್ನು ತಡೆಗಟ್ಟುವ ಸಾವಿರಾರು ಯೋಜನೆಗಳು ಸಾವಿರ ಕೋಟಿ ಕೋಟಿ ಹಣ ವಿನಿಯೋಗಿಸಿ ಹೊಸ ಯೋಜನೆ ಹೊರತರುತ್ತಿದ್ದೇವೆಯೆ ಹೊರತು ನಮ್ಮ ಶಾಲಾ ಪೂರ್ವ ಶಿಕ್ಷಣದ ಕಡೆಗೆ ಹೆಚ್ಚು ಗಮನ ಕೊಡುತ್ತಿಲ್ಲಾ. ನಾವು ಮೊದಲು ನಮ್ಮ ಬುನಾದಿ ಗಟ್ಟಿಗೊಳಿಸಬೇಕಾದ ಅಗತ್ಯವಿದೆ. ಆಗ ಮಾತ್ರ ನಮ್ಮ ಮುಂದಿನ ಎಲ್ಲ ಶಿಕ್ಷಣ ವ್ಯವಸ್ಥೆ ಸರಿಯಾಗಿ ಸುಗಮವಾಗಿ ಸಾಗುತ್ತದೆ ಏಕೆಂದರೆ " ಬೆಳೆಯುವ ಸಿರಿ ಮೊಳಕೆಯಲ್ಲಿ " ಅಲ್ಲವೆ?.