ಕರ್ನಾಟಕದ ಇತಿಹಾಸದುದ್ದಕ್ಕೂ ಜಾತಿಧರ್ಮದ ಆಧಾರದ ಮೇಲೆಯೇ ಜನರನ್ನು ಅವರ ಪ್ರತಿಭೆಯನ್ನು ಅಳೆಯುವ ನಾವು, ಇದೀಗ ಮತ್ತೊಮ್ಮೆ ಜಾತಿ ಆಧಾರದಲ್ಲಿ ಸಮ್ಮೇಳನಾಧ್ಯಕ್ಷರನ್ನು ಗುರುತಿಸಿ, ಮತ್ತೊಮ್ಮೆ ದಲಿತರ ಮಧ್ಯದೊಳಗೆ ಹೊಸದೊಂದು ದಲಿತ ವಿಚಾರಕ್ಕೆ ಹರವು ನೀಡಿದ್ದಾರೆ. ಮೊದಲಿಗೆ ದೇವನೂರ ಎಂಬ ದಲಿತ ಕವಿಗೆ ಸಮ್ಮೇಳಾಧ್ಯಕ್ಷ ಪಟ್ಟಕಟ್ಟಿ ಅವರು ಭಾಷಾಮಾಧ್ಯಮದ ಕುರಿತು ಹೋರಾಟಕ್ಕೆ ಪರಿಷತ್ತು ಸಾತ್ ನೀಡಲಿ ಎಂದು ಕೇಳಿ ತಮಗೆ ಒಲಿದುಬಂದ ಅಧ್ಯಕ್ಷ ಸ್ಥಾನವನ್ನು ತ್ಯೇಜಿಸಿ, ಸಮ್ಮೇಳನವೇ ಬೇಡ ಅದರ ಮೂಲಕ ಹೋರಾಟ ಮಾಡಿ ಕನ್ನಡ ಭಾಷೆಗೊಂದು ಜಯ ತರೋಣವೆಂದರು. ಪರಿಷತ್ತು ನೈಸ್ ಆಗಿಯೇ ಒಪ್ಪಿಗೆ ನೀಡಿ, ಇದೀಗ ಮೌನ ಹೋರಾಟದಲ್ಲಿ ನಿರತರಾಗಿರುವ ಕವಿ ಸಿದ್ಧಲಿಂಗಯ್ಯನವರ ಆಯ್ಕೆ ಮಾಡಿ ದಲಿತ ಕುಲದೊಳಗೆ ಕಾವು ಹೆಚ್ಚಿಸಿ ಮತ್ತೆ ಅನುಮಾನಕ್ಕೆ ಒಳಗಾಗುವ ಹಾಗೆ ಮಾಡಿದ್ದಾರೆ.
ಭಾರತದಲ್ಲಿ ಬ್ರಿಟಿಷರು ಬಾರತೀಯರ ಮಧ್ಯೆಯೇ ಜಗಳವನ್ನು ಹಚ್ಚಿ ಅವರನ್ನು ಒಡೆದಾಳುವ ನೀತಿ ಅನುಸರಿಸಿ ಪ್ರದೇಶ ಪ್ರದೇಶಗಳ ಮಧ್ಯೆ ಗುದ್ದಾಟ ಮಾಡಿಸಿ ನಿಂತು ನೋಡಿದಹಾಗೆ ಮಾಡಿದರು. ಇಂದು ಸಾಹಿತ್ಯ ಪರಿಷತ್ತು ಸ್ವತ: ಹುಟ್ಟುಹಾಕಿರುವ ಸಮ್ಮೇಳನಾಧ್ಯಕ್ಷರ ಮಧ್ಯದೊಳಗೆ ಒಂದೇ ಜಾತಿಯ ಇಬ್ಬರನ್ನು ಆಯ್ಕೆ ಮಾಡಿ ಒಬ್ಬರು ಬೇಡವೆಂದಾಗ ಇನ್ನೊಬ್ಬರನ್ನು ಆಯ್ಕೆ ಮಾಡಿ ಕುಲದೊಳಗೆ ಕಿಚ್ಚು ಹೊತ್ತಿಸುವ ಕೆಲಸ ಪರಿಷತ್ತು ಮಾಡಿದೆ ಎಂದರೆ ತಪ್ಪಾಗದು.
ಇಬ್ಬರೂ ಸಾಹಿತಿಗಳು ಒಂದೇ ಜಾತಿಯವರಾದರೂ ಸಾಮ್ಯತೇಯಿಲ್ಲ ಎಂಬ ವಿಷಯ ಇದೀಗ ಸ್ಪಷ್ಟವಾಗಿದೆ. ಇಬ್ಬರಲ್ಲಿಯೂ ನಿಜವಾದ ಕನ್ನಡ ಭಾಷೆಯ ಕಾಳಜಿ ಎದ್ದು ಕಾಣುವುದಿಲ್ಲ ಎನಿಸುತ್ತದೆ. ಒಬ್ಬರೂ ಸಮ್ಮೇಳಾಧ್ಯಕ್ಷರ ಪಟ್ಟ ತ್ಯೇಜಿಸಿ ಹೋರಾಟ ಮಾಡುವೆಯೆಂದರೆ ಇನ್ನೊಬ್ಬರೂ ಸಮ್ಮೇಳಾಧ್ಯಕ್ಷರ ಪಟ್ಟದಲ್ಲಿದ್ದು ಕನ್ನಡ ಭಾಷಾ ಮಾಧ್ಯಮಕ್ಕಾಗಿ ಹೋರಾಡುವೇ ಎಂದಿದ್ದಾರೆ. ಇವರಿಬ್ಬರನ್ನು ಅನುಸರಿಸಿ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿರುವ ಯುವ ಸಾಹಿತಿಗಳು ಯಾವುದು ನಂಬಬೇಕು ಎಂಬ ಗೊಂದಲದೊಳಗೆ ಮುಳಗಿರುವುದು ಅತೀವ ಸತ್ಯವಾದ ಮಾತು. ನಮ್ಮ ದೇಶದಲ್ಲಿ ಸಾಹಿತ್ಯ ಸಾಹಿತ್ಯವಾಗಿ ಉಳಿಯದೇ ಜಾತಿವಾರು ಸಾಹಿತ್ಯವೆಂಬುವುದಕ್ಕೆ ಪರಿಪಾಠವ ಹಾಕಿ ನಾಡು ನುಡಿಯಲ್ಲಿಯೂ ಜಾತಿಯ ಬೇರು ಯಾರ ಲಗ್ಗೆಯಿಲ್ಲದೇ ಓಡುವ ಹಾಗೆ ಮಾಡಿದೆ ಈ ಬಾರಿಯ ಸಾಹಿತ್ಯ ಸಮ್ಮೇಳನ.
ಸೀತೆಗೆ ಅಗ್ನಿ ಆಹುತಿಯಾಗುವ ಮುನ್ನ ರಾಮ ವಿಚಾರಿಸಲಿಲ್ಲ ಹಾಗೆ ಸಾಹಿತಿಗಳಾಗುವ ಮುನ್ನ ನೀವು ದಲಿತರೆ ಇಲ್ಲವೇ? ಎಂಬ ಪ್ರಶ್ನೆ ಸಾಹಿತ್ಯ ಪರಿಷತ್ತು ಕೇಳಿದೆ ಎಂಬ ವಿಚಾರ ಮನದ ಪಟದೊಳಗೆ ಮೂಡಿಬರುತ್ತದೆ. ಹೊಸದೊಂದು ದ್ವಂದ ನೀತಿಗೆ ಎಡೆಮಾಡಿಕೊಡುತ್ತದೆ. ಜ್ಯಾತ್ಯಾತೀತ ರಾಮರಾಜ್ಯ ನಮ್ಮದು ಎನ್ನುವ ದೇಶದಲ್ಲಿ ಪ್ರತಿಯೊಂದು ರಂಗದಲ್ಲಿಯೂ ನಮ್ಮ ಜಾತಿ ವ್ಯವಸ್ಥೆ ಎದ್ದು ಕಾಣುತ್ತದೆ. ಬಡವ ಬಲ್ಲಿದ ಎಂಬ ಸ್ಪಷ್ಟವಾದ ಮಾತುಗಳು ಹೊರಬೀಳುತ್ತವೆ. ಅಚ್ಚರಿಯ ಸಂಗತಿಯೆಂದರೆ ಒಂದೇ ಜಾತಿಯನ್ನು ಒಡೆದಾಳುವ ಈ ನೀತಿಗೆ ಯಾವ ರೀತಿ ಹೇಳಬೇಕು ತಿಳಿಯದು ಎಲ್ಲಿಯವರೆಗೂ ಪ್ರತಿಭೆಗೆ ಅವಕಾವಿತ್ತು ಜಾತಿ ವ್ಯವಸ್ಥೆ ದೂರಮಾಡಿದಾಗ ಮಾತ್ರ ಎಲ್ಲದ್ದಕ್ಕೂ ಬೆಲೆ ಬರುತ್ತದೆ . ಇಲ್ಲವಾದಲ್ಲಿ ನಮ್ಮ ರಾಜ್ಯದಲ್ಲಿ ಜಾತಿಯೆಂಬ ಭೂತ ತನ್ನ ಅಸ್ತಿತ್ವ ಉಳಿಸಿಕೊಂಡೆ ಬದುಕುತ್ತದೆ.
ಈ ಬಾರಿಯ ಸಮ್ಮೇಳನದಲ್ಲಿ ಪ್ರತಿಯೊಂದು ಗೋಷ್ಠಿಯಲ್ಲಿ ದಲಿತರ ಸಂಖ್ಯೆ ಹೆಚ್ಚಲಿದೆ, ಏಕೆಂದರೆ ದಲಿತ ಸಾಹಿತಿ ಸಮ್ಮೇಳಾಧ್ಯಕ್ಷರಾಗಿರುವ ಹಿನ್ನಲೆಯಲ್ಲಿ ಸಮ್ಮೇಳನದ ಪ್ರತಿಯೊಂದು ಕೆಲಸದಲ್ಲಿ ದಲಿತರೇ ಎದ್ದು ಕಾಣುವ ಸಂಭವವಿದೆ. ಸಾಹಿತ್ಯ ಬೆಳೆಸಬೇಕು ಎನ್ನುವ ನಿಟ್ಟಿನಲ್ಲಿ ನಡೆಯುವ ಸಮ್ಮೇಳನ ಇದೀಗ ಜಾತಿಯ ರೂಪ ಪಡೆದು ಮತ್ತೆ ಎಂತೆಂತಹ ಅವಾಂತರಗಳಿಗೆ ಅವಕಾಶ ಮಾಡಿಕೊಡುವುದೊ ತಿಳಿಯದಾಗಿದೆ. ಒಬ್ಬ ದಲಿತ ಸಮ್ಮೇಳಧ್ಯಕ್ಷರಿಗೆ ಯಾವ ರೀತಿಯ ರಾಜಮರಿಯ್ಯಾದೆ ಕೊಡುವರು ಎಂಬ ಆತಂಕ ಸಾಮಾನ್ಯ ದಲಿತನೊಳಗೆ ಮೂಡಿದೆ. ಎಷ್ಟೆ ಜಾತಿ ಹೋಗಲಾಡಿದೆ ಎಂಬ ಕೂಗಿಗೆ ಈ ಬಾರಿಯ ಸಮ್ಮೇಳನ ಸೊಪ್ಪು ಹಾಕುವುದು ಮತ್ತೆ ಭುಗಿಲೆದ್ದ ಜಾತಿ ವ್ಯವಸ್ಥೆ ಈ ಬಾರಿಯ ಸಮ್ಮೇಳನದಲ್ಲಿ ಹೊಬರುವುದು.
ಸಾಮಾನ್ಯ ಜನತೆಯಲ್ಲಿ ಹುಟ್ಟಿರುವ ಅಸಾಮಾನ್ಯ ಪ್ರಶ್ನೆಗಳು.
ಭಾಷಾಮಾಧ್ಯಮ ನೀತಿ ಇದೀಗ ಹುಟ್ಟಿರುವ ಹೋರಾಟವೇ? ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಇದೀಗ ಭಾಷಾಮಾಧ್ಯಮದ ಒಲವು ಮೂಡಿತೇ?
ಇಲ್ಲಿಯವರೆಗೂ ಅಧ್ಯಕ್ಷರಾಗಿರುವ ಸಾಹಿತಿಗಳಿಗೆ ಈ ಬಾಷಾಮಾಧ್ಯಮದ ಕುರಿತು ಒಲವು ಇರಲಿಲ್ಲವೇ? ದಲಿತ ಕವಿಯಾದ ದೇವನೂರು ಒಬ್ಬರು ಮಾತ್ರ ಭಾಷಾಮಾಧ್ಯಮದ ವಿರುದ್ಧ ಹೋರಾಟಗಾಗರರೆ?
ಇಲ್ಲಿಯವರೆಗೆ ಅಧ್ಯಕ್ಷರಾದ ಸಾಹಿತಿಗಳು ಏಕೆ ಭಾಷಾಮಾಧ್ಯಮದ ಬಗ್ಗೆ ಮಾತುಗಳಾಡಿ ತಮ್ಮ ಅಧ್ಯಕ್ಷ ಸ್ಥಾನವನ್ನು ತ್ಯೇಜಿಸಲಿಲ್ಲ ಎಲ್ಲವನ್ನು ದಲಿತರೇ ಧ್ವನಿಯೆತ್ತಬೇಕೆ?
ಹಿಂದಿನ ಸಮ್ಮೇಳನದಲ್ಲಿ ಕೈಗೊಂಡ ಕನ್ನಡ ಸಾಹಿತ್ಯದ ನಿರ್ಣಯಗಳು ಅದೆಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ ಮತ್ತು ಇಡೇರಿವೆ ಎಂಬ ವಿಷಯ ಪರಿಷತ್ತು ಹೊರಹಾಕಿದೆಯೇ?
ಮುಂದಿನ ಸಮ್ಮೇಳನ ಮಾಡುವ ಮುನ್ನ ಹಿಂದಿನ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಗಳ ಸ್ಥಿತಿಗತಿಯೇನಾಗಿದೆ ಎಂಬ ವಿಚಾರವನ್ನು ಮಾಧ್ಯಗಳಲ್ಲಿ ಪರಿಷತ್ತು ಬಿತ್ತರಿಸಿಲು ಏಕೆ ಮುಂದಾಗಿಲ್ಲ?
ಸಾಹಿತ್ಯ ಜಾತ್ರೆ ಮಾಡುವ ಭರಾಟೆಯಲ್ಲಿ ಇಲ್ಲಿಯವರೆಗೆ ದಲಿತ ಸಾಹಿತಿಗಳನ್ನು ಮರೆತೆಬಿಟ್ಟಿತೆ ಪರಿಷತ್ತು ಇದೀಗ ಮಾತ್ರ ಕಣ್ಣು ತರೆದು ದಲಿತ ಸಾಹಿತಿಗೆ ಸಮ್ಮೇಳನದ ಅಧ್ಯಕ್ಷಗಿರಿಯ ಅವಕಾಶ ನೀಡಿತೆ?
ದಲಿತರಿಗೆ ಅವಕಾಶ ನೀಡುತ್ತೇವೆ ಎಂಬ ನೆಪದಲ್ಲಿ ದಲಿತ ದಲಿತರ ಮಧ್ಯೆ ಗದ್ದುಗೆಗೆ ಗುದ್ದಾಟ ಎಂಬಿಸಿರುವ ಪರಿಷತ್ತು ಜಾತಿವಾದವನ್ನು ಹುಟ್ಟುಹಾಕುತ್ತಿದೆಯೆ?
ದಲಿತ ಸಾಹಿತ್ಯ ಪರಿಷತ್ತು ಎಂದೇ ನೇಮಕ ಮಾಡಿರುವ ಪರಿಷತ್ತು ಅದರ ಸಾಧಕಭಾದಕಗಳನ್ನು ಎಲ್ಲಿಯೂ ಹೇಳಿಕೊಂಡಿಲ್ಲ ಅದರ ಅಡಿಯಲ್ಲಿ ನಡೆಯುವ ದಲಿತರ ಕಾರ್ಯಚಟುವಟಿಕೆಗಳನ್ನು ಎಲ್ಲಿಯೂ ಬಹಿರಂಗ ಪಡಿಸಿಲ್ಲ ಏಕೆ?
ಪರಿಷತ್ತಿನ ವತಿಯಿಂದ ನಡೆಯುವ ಹಲವು ಚಟುವಟಿಕೆಗಳಲ್ಲಿ ದಲಿತರಗೆ ಯಾವ ಪಾಲು ಹೇಗೆ ನೀಡಿದ್ದಾರೆ ಎಂಬ ಮಾತು ಎಲ್ಲಿಯೂ ಹಂಚಿಕೊಳ್ಳದ ಪರಿಷತ್ತು ಸಮ್ಮೇಳನ ಅಧ್ಯಕ್ಷರ ಆಯ್ಕೆಯಲ್ಲಿ ಮಾತ್ರ ಏಕೆ ದಲಿತರನ್ನಾಗಿ ನೇಮಿಸಿತು.
ಕನ್ನಡ ಸಾಹಿತ್ಯ ಕಟ್ಟುವ ಕೆಲಸದಲ್ಲಿ ದಲಿತರು ಮಾತ್ರ ಹೋರಾಟಗಾರರೆ ಉಳಿದ ಸಾಹಿತಿಗಳಿಗೇಕೆ ಈ ವಿಷಯ ಕುರಿತು ಒಲವಿಲ್ಲ?
ಇತ್ತೀಚೆಗೆ ದಲಿತ ಮಹಿಳೆಯ ಮೇಲೆ ನಡೆಯುತ್ತಿರುವ ಅತ್ಯಚಾರ ಪ್ರಕರಣದ ಬಗ್ಗೆ ಸಮ್ಮೇಳನ ಧ್ವನಿಯೆತ್ತುವುದೇ? ಅಥವಾ ಮರೆತುಬಿಡುವುದೇ?
ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯಲ್ಲಿನ ಭಾಷಾ ಮಾಧ್ಯಮ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಲ್ಲಿ ಸಮ್ಮೇಳನ ಸಾಕ್ಷಿಯಾಗುವದೇ ಅಥವಾ ಮರೆತುಬಿಡುವುದೇ?
ಕರ್ನಾಟಕದ ಅನೇಕ ಅಕ್ರಮ ಕನ್ನಡ ಶಾಲೆಗಳ ವಿರುದ್ಧ ಈ ಬಾರಿಯ ಸಮ್ಮೇಳನ ಧ್ವನಿಯೆತ್ತಿ ಮಾತನಾಡುವುದೇ ಅಥವಾ ಕನ್ನಡ ನಾಮಫಲಕದ ಕೆಳಗೆ ಇಂಗ್ಲೀಷ್ ಶಾಲೆಗಳಿಗೆ ಕುಮ್ಮಕ್ಕು ನೀಡಿ ಸುಮ್ಮನೆ ಕನ್ನಡ ಜಾತ್ರೆ ನಡೆಯುವುದೇ?
ಹಾಸನದಲ್ಲಿ ನಡೆಯುವ ಜಾತ್ರೆಗೆ ಹಾಸನದ ಸಾಹಿತಿಗಳು ಮಾತ್ರ ಸೀಮಿತರಾಗುವರೇ ನಾಡಿನಾದ್ಯಂತದ ಸಾಹಿತಿಗಳನ್ನು ಒಳಗೊಂಡ ಸೂಕ್ತ ಸಮ್ಮೇಳನವಾಗುವುದೇ?
ಪ್ರತಿಬಾರಿಯಂತೆ ಈ ಬಾರಿಯೂ ಸಮ್ಮೇಳನದಲ್ಲಿ ಹಲವು ವಿಚಾರಗಳು ಹೊಬರುವವು ಕಳೆದ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಅದೆಷ್ಟು ಸರಿಯಾಗಿ ಅನುಷ್ಠಾನಕ್ಕೆ ಬಂದಿವೆ ಎಂಬ ಗೊಂದಲಕ್ಕೆ ಮಾತ್ರ ಯಾರೂ ತಲೆಕೊಡುವುದಿಲ್ಲ . ಈ ಬಾರಿಯ ಸಮ್ಮೇಳನದಲ್ಲಿ ಮತ್ತೆ ಹೊಸ ನಿರ್ಣಯಗಳನ್ನು ಕೈಗೊಳ್ಳುವಲ್ಲಿ ಮುಂದಾಗುವರು. ಮತ್ತದೇ ಗದ್ದಲ ಗೊಂದಲಗಳ ಮಧ್ಯೇ ದಶಮಾನೋತ್ಸವ ಆಚರಿಸಿಕೊಳ್ಳುವ ಪರಿಷತ್ತು ಇನ್ನಾದರು ಸಮ್ಮೇಳನಗಳು ಪಾರದರ್ಶಕತೆಯ ಹೊನಲಲ್ಲಿ ಬೆಳಗಲಿ ಎಂಬುವುದೇ ನನ್ನ ಆಶೆಯ. ಜಾತಿಗಳಲ್ಲಿದ, ಸಾಹಿತ್ಯ ಜ್ಯೋತಿಗಳನ್ನು ಅತೀ ಜಾಗೃತೆಯಿಂದ ಹಚ್ಚಲು ಈ ಸಮ್ಮೇಳನ ಅಣಿಯಾಗಲಿ ಸಾಹಿತ್ಯದ ತೇರು ಸುಗಮವಾಗಿ ಸಾಗಲಿ ಎಲ್ಲರ ಬಾಳಿನಲ್ಲಿ ಕನ್ನಡದ ಕಂಪು ಸೂಸಲಿ.