ಕನ್ನಡ ನಮ್ಮ ಮಾತೃ ಭಾಷೆಯಾಗಿದೆ. ಅದನ್ನು ಅರ್ಥಮಾಡಿಕೊಳ್ಳುವ ಕೌಶಲ್ಯ ನಮಗೆ ಹೆಚ್ಚಿದೆ ಎಂದು ನಾವೆಲ್ಲ ಯೋಚಿಸುತ್ತೇವೆ ಮತ್ತು ಕಲಿಯಲು ಅಣಿಯಾಗುತ್ತೇವೆ. ಕನ್ನಡ ಅತ್ಯಂತ ಸರಳ ಎಂದು ಅನೇಕರು ಭಾವಿಸಿರುತ್ತಾರೆ. ಈ ಕನ್ನಡ ಕಲಿಕೆಯೆಂಬುವುದು ಬೆಳೆದುಬಂದ ಹಾದಿಯೆನ್ನೊಮ್ಮೆ ಗಮನಿಸಿದರೆ ನಿಜಕ್ಕೂ ಅದರ ವ್ಯಾಪ್ತಿ ಅರ್ಥವಾಗುತ್ತದೆ. ನಾವೆಲ್ಲ ಸೈದ್ಧಾಂತಿಕವಾಗಿ ಕನ್ನಡದ ಬಗ್ಗೆ ಮಾತನಾಡಬಹುದಾಗಿದೆ ಆದರೆ ಚಿಕ್ಕ ಮಕ್ಕಳಿಗೆ ಕನ್ನಡ ಕಲಿಸಿ ಎಂದು ಹೇಳಿದರೆ ನಿಜಕ್ಕೂ ನಮ್ಮ ಕೈಯಿಂದ ನೀಗಲಾರದ ಕೆಲಸವಾಗಿದೆ. ಅನಾದಿಕಾಲದಿಂದಲೂ ಕನ್ನಡಕ್ಕೆ ತನ್ನದೇ ಆದ ಛಾಪುಯಿದೆ ಒಂದು ವಿಶಿಷ್ಠವಾದ ಹಾದಿಯಿದೆ ಈ ಹಾದಿಯಲ್ಲಿ ಕನ್ನಡ ಭಾಷೆ ಸಾಗಿ ಬಂದಿದೆ. ಭಾಷಾ ಕಲಿಕೆಯ ಒಂದು ಒಳನೋಟ ಬೀರಿದಾಗ ನಮಗೆ ಅದರ ಒಳಹರವು ಅರ್ಥವಾಗುತ್ತದೆ. ಈ ಅಧ್ಯಾಯ ಅದನ್ನು ಪೂರೈಸುತ್ತದೆ.
ಜಾಗತೀಕರಣದ ಹಿನ್ನಲೆಯಲ್ಲಿ ಪ್ರಾಥಮಿಕ ಶಾಲಾ ಹಂತದಲ್ಲಿ ಕನ್ನಡ ಕಲಿಕೆಯ ಬಿಕ್ಕಟ್ಟುಗಳು:
ಪ್ರಾಥಮಿಕ ಹಂತದಲ್ಲಿ ಮಕ್ಕಳು ಕನ್ನಡ ಕಲಿಯುವ ಸುಲಭದ ದಾರಿಯಿದ್ದು ಅದನ್ನು ಅನುಷ್ಠಾನಗೊಳಿಸುವ ಹಂತದಲ್ಲಿ ತೊಂದರೆಯಿದ್ದು ಮಕ್ಕಳು ಕಲಿಯಲಾಗುತ್ತಿಲ್ಲ. ಸರಕಾರದ ಯೋಜನೆಯೆಂತೆ ಫಲಶೃತಿಯಾದರೆ ಕನ್ನಡ ಸರಾಗವಾಗಿ ಮಕ್ಕಳು ಕಲಿಯಬಹುದಾಗಿದೆ ಆದರೆ ಅತಿಯಾದ ಮಕ್ಕಳ ಸಂಖ್ಯೆ ಇದಕ್ಕೆ ಮಾರಕವಾಗಿ ಪರಿಣಮಿಸಿದೆ. ಶಿಕ್ಷಕರಿಗೆ ತರಬೇತಿಗಳು ತುಂಬಾ ಇದ್ದು ನಿಜವಾದ ಕನ್ನಡ ಕಲಿಕೆಯ ರೀತಿ ನೀತಿಗಳ ಕಡೆಗೆ ಗಮನಕೊಡದಿರುವುದು ಬಿಕ್ಕಟ್ಟಾಗಿ ಪರಿಣಮಿಸಿದೆ.
ಕನ್ನಡ ಕಲಿಸುವ ಶಿಕ್ಷಕನಿಗೆ ಕಲಿಕೆ ನಿರಂತರವಾದದ್ದು ಎಂಬ ಸತ್ಯ ದೂರವಾಗಿ ನಿಂತಿದೆ. ಮಕ್ಕಳಿಗೆ ಸುತ್ತಲಿನ ಪರಿಸರ, ಕೌಟುಂಬಿಕ ಸ್ಥಿತಿಗತಿ, ಸತತ ಗೈರುಹಾಜರಿ, ಬೇರೆ ಭಾಷೆಯ ಪ್ರಭಾವ, ಅತಿಯಾದ ಇಂಗ್ಲೀಷ್ ವ್ಯಾಮೋಹ ಇವೆಲ್ಲವೂ ಒಂದಾಗಿ ಪ್ರಾಥಮಿಕ ಹಂತದ ಮಕ್ಕಳು ಮತ್ತು ಕನ್ನಡ ಕಲಿಕೆಯಲ್ಲಿ ತೊಂದರೆಯಾಗುತ್ತಿದೆ. ಶಾಲಾ ವಾತಾವರಣದಲ್ಲಿ ಆಡು ಭಾಷೆ ಹಾಗೂ ಪುಸ್ತಕೀಯ ಭಾಷೆಗಳು ತಳುಕು ಹಾಕಿಕೊಂಡು ಭಾಷೆ ಕಲಿಸುವ ಹಾಗೂ ಕಲಿಯುವವ ಇಕ್ಕಟ್ಟಿನೊಳಗೆ ಸಿಲುಕಿದ್ದಾರೆ.
ಗಡಿ ಪ್ರದೇಶದಲ್ಲಿ ಪಕ್ಕದ ರಾಜ್ಯಗಳ ಭಾಷೆ ತುಂಬಾ ಪರಿಣಾಮ ಬೀರುತ್ತಿದೆ. ಸಧ್ಯ ಮಕ್ಕಳೆಲ್ಲರೂ ಸ್ಪರ್ಧಾತ್ಮಕವಾಗಿ ಯೋಚಿಸುತ್ತಿರುವುದರಿಂದ ಯೋಚಿಸುವ ಭಾಷೆಯೂ ಕೂಡ ಕನ್ನಡ ಅಲ್ಲಾ ಎಂಬ ಕೂಗು ಕೇಳಿಬರುತ್ತಿದೆ. ಬೆಳೆದು ನಿಂತಿರುವ ಇಂಗ್ಲೀಷ್ ಶಾಲೆಗಳು, ಕುಟುಂಬದ ಸದಸ್ಯರೆಲ್ಲರೂ ಖಾಸಗಿ ಶಾಲೆಗಳ ಕಡೆಗೆ, ಇಂಗ್ಲೀಷ್ ಶಾಲೆಗಳ ಕಡೆಗೆ ಮುಖ ಮಾಡಿರುವ ಕಾರಣ ಕನ್ನಡ ತನ್ನ ಕಲಿಕೆಯನ್ನು ಮಟುಕುಗೊಳಿಸುತ್ತಿದೆ.
ಜಾಗತೀಕರಣವು "ಒಂದು ವ್ಯಾಪಕವಾದ ಪರಿಕಲ್ಪನೆಯಾಗಿದ್ದು ವಿವಿಧ ರೀತಿಯಲ್ಲಿ ಇದನ್ನು ವಿವರಿಸಬಹುದಾಗಿದೆ. ಆರ್ಥಿಕ ಸಂದರ್ಭದಲ್ಲಿ ಉಪಯೋಗಿಸಿದಾಗ ಇದು ಸರಕುಗಳು, ಬಂಡವಾಳಗಳ, ಸೇವೆ ಮತ್ತು ಶ್ರಮದ ಹರಿವಿನ ಸೌಲಭ್ಯಕ್ಕೆ ರಾಷ್ಟ್ರೀಯ ಗಡಿಯ ಮಿತಿಯನ್ನು ತೆಗೆಯುತ್ತದೆ ಮತ್ತು ಕಡಿಮೆಗೊಳಿಸುತ್ತದೆ. ಆದರೂ ಶ್ರಮಕ್ಕೆ ಸಂಬಂಧಪಟ್ಟ ಕೆಲವು ಪ್ರತಿಬಂಧಗಳು ಶ್ರಮದ ಹರಿವಿಗೆ ಕುರಿತಾದಂತೆ ಇನ್ನೂ ಇದೆ. ಜಾಗತೀಕರಣವು ಹೊಸ ವಿದ್ಯಮಾನವಲ್ಲ.
ಇದು 90ರ ದಶಕದ ಉತ್ತರಾರ್ಧದಿಂದ ಪ್ರಾರಂಭವಾಯಿತು, ಮೊದಲ ಜಾಗತಿಕ ಯುದ್ಧದ ಸಂದರ್ಭದಲ್ಲಿ ಕುಂಟಿತಗೊಂಡ ಜಾಗತೀಕರಣ ಪ್ರಕ್ರಿಯೆಯು ಇಪ್ಪತ್ತನೇ ಶತಮಾನದ ಮೂರನೇ ಭಾಗದವರೆಗೂ ಮುಂದುವರೆದಿದೆ. ಜಾಗತಿಕರಣ ಹರಡುವಿಕೆಯು ಕುಂಟಿತವಾಗಲು ಕಾರಣ ಹಲವು ದೇಶಗಳು ತಮ್ಮ ದೇಶದ ಪ್ರಮುಖ ಉದ್ಯಮಗಳನ್ನು ರಕ್ಷಿಸಿಕೊಳ್ಳುವ ಸಲುವಾಗಿ ಜಾಗತೀಕರಣಕ್ಕೆ ವಿರುದ್ಧವಾದ ಕೆಲವು ನಿಯಮಗಳನ್ನು ಜಾರಿಗೆ ತಂದವು. ಏನೇ ಆದರೂ ಜಾಗತೀಕರಣವು ವೇಗವಾಗಿ ಬೆಳೆದದ್ದು ಇಪ್ಪತ್ತನೇ ಶತಮಾನದ ನಾಲ್ಕನೇ ಭಾಗದ ಅವಧಿಯಲ್ಲಿ.
ಸಸ್ಕಿಯ ಸಸ್ಸೆನ್ ಹೇಳುವಂತೆ "ಜಾಗತೀಕರಣದ ಒಂದು ಉತ್ತಮ ಲಕ್ಷಣ ಎಂದರೆ ಇದು ಹಲವು ಸೂಕ್ಷ್ಮ-ಪ್ರಕ್ರಿಯೆಗಳ ಮೂಲಕ ರಾಷ್ಟ್ರ್ರೀಯ ಎಂದುಕೊಂಡ ವಿಷಯಗಳನ್ನು, ಉದಾಹರಣೆಗೆ ನಿಯಮಗಳು, ಬಂಡವಾಳವಾಳ, ರಾಜಕೀಯ ವಿಷಯಾಸಕ್ತಿ, ನಗರ ಸ್ಥಳ, ಐಹಿಕ ಚೌಕಟ್ಟು ಅಥವಾ ಯಾವುದೇ ರೀತಿಯ ಚಟುವಟಿಕೆ ಮತ್ತು ಕಾರ್ಯಕ್ಷೇತ್ರಗಳನ್ನು ರಾಷ್ಟ್ರೀಕರಣದಿಂದ ಮುಕ್ತಗೊಳಿಸಿ ಅಂತರಾಷ್ಟ್ರೀಕರಣ ಪ್ರಕ್ರಿಯೆಗೆ ತೊಡಗುತ್ತದೆ
ಜಾಗತೀಕರಣ ಉಗಮದ ಇತಿಹಾಸವು ನಿರಂತರ ಚರ್ಚೆಗೆ ಒಳಪಡುತ್ತಲೇ ಇದೆ.ಕೆಲವು ವಿದ್ವಾಂಸರು ಜಾಗತೀಕರಣ ಪ್ರಕ್ರಿಯೆಯು ಆಧುನಿಕ ಕಾಲದಲ್ಲೇ ಪ್ರಾರಂಭವಾಗಿದೆ ಎಂದು ಹೇಳುತ್ತಾರೆ. ಉಳಿದವರ ಪ್ರಕಾರ ಜಾಗತೀಕರಣವು ದೊಡ್ಡ ಇತಿಹಾಸ ಹೊಂದಿರುವ ವಿದ್ಯಮಾನವಾಗಿದೆ.
ಜಾಗತೀಕರಣದ ಅತೀ ಆಳದ ಐತಿಹಾಸಿಕ ವ್ಯುತ್ಪತ್ತಿಯ ಬಗ್ಗೆ ಪರಮಾವಧಿಯ ತತ್ವ ಪ್ರತಿಪಾದನೆ ಮಾಡಿದವರಲ್ಲಿ ಅವಲಂಬಿತ ಸಿದ್ದಾಂತದ ಪ್ರತಿಪಾದಕ ಅರ್ಥಶಾಸ್ತ್ರಜ್ಞ ಆಂಡ್ರೆ ಗುಂಡರ್ ಫ್ರಾಂಕ್ ಪ್ರಮುಖರು.ಮೂರನೇ ಮಿಲೆನಿಯಂ ಬಿ.ಸಿ ಯಲ್ಲಿನ ಸಮ್ಮರ್ ಮತ್ತು ಇಂಡಸ್ ಕಣಿವೆಯ ನಾಗರೀಕತೆಯ ಮಧ್ಯೆ ನಡೆದ ವ್ಯಾಪಾರ ಸಂಬಂಧದ ಸಮಯದಲ್ಲೇ ಜಾಗತೀಕರಣ ಪ್ರಕ್ರಿಯೆಯು ಇತ್ತು ಎಂದು ಫ್ರಾಂಕ್ ವಾದಿಸುತ್ತಾರೆ. ಈ ವಿವರಣೆಯನ್ನು ಪ್ರತಿಪಾದಿಸುವವರು ಇದು ಜಾಗತೀಕರಣರಣ ಐರಿಹಾಸಿಕ ವೈಶಾಲ್ಯತೆಯನ್ನು ಸೂಚಿಸುತ್ತದೆ ಎಂದು ಹೇಳುತ್ತಾರೆ.
ಆಧುನೀಕರಣದತ್ತ ಜಾಗತೀಕರಣವು ಸಾಗುತ್ತಿರುವುದಕ್ಕೆ 19ನೇ ಶತಮಾನವು ಸಾಕ್ಷಿಯಾಯಿತು. ಕೈಗಾರಿಕೀಕರಣವು ಕಡಿಮೆ ಖರ್ಚಿನಲ್ಲಿ ಆರ್ಥಿಕ ಮಟ್ಟವನ್ನು ಗಮನದಲ್ಲಿರಿಸಿಕೊಂಡು ಮನೆಬಳಕೆಯ ವಸ್ತುಗಳ ತಯಾರಿಕೆ ಮಾಡಲು ಪ್ರೇರಣೆ ನೀಡಿತು. ಹೆಚ್ಚುತ್ತಿದ್ದ ಜನಸಂಖ್ಯೆಯು ಈ ಉತ್ಪನ್ನಗಳಿಗೆ ನಿರಂತರ ಬೇಡಿಕೆ ಇರುವಂತೆ ನೋಡಿಕೊಂಡಿತು. ಈ ಸಮಯದಲ್ಲಿ ಜಾಗತೀಕರಣವು 19ನೇ ಶತಮಾನದ ಸಾಮ್ರಾಜ್ಯಶಾಹಿ ಆಡಳಿತದಿಂದಾಗಿ ಸ್ಪಷ್ಟ ಆಕಾರವನ್ನು ಪಡೆಯಿತು. ಅಫಿಮ್ ಯುದ್ಧ ಮತ್ತು ಭಾರತದಲ್ಲಿ ಬ್ರೀಟಿಷ್ ಆಡಳಿತದ ಕೊನೆಗೊಳ್ಳುವಿಕೆಯಿಂದ ಆ ಪ್ರದೇಶಗಳಲ್ಲಿಯ ಹೆಚ್ಚಿನ ಜನಸಂಖ್ಯೆಯು ಯುರೋಪ್ ದೇಶಗಳ ರಪ್ತು ವಸ್ತುಗಳನ್ನು ಬಳಸುವ ಗ್ರಾಹಕರಾದರು. ಈ ಮಧ್ಯೆ ಯುರೋಪ್ ತನ್ನ ಶಕ್ತಿಯಿಂದ ಪ್ರಪಂಚದ ಕೆಲವು ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಪ್ರಾರಂಭಿಸಿತು ಅದರಲ್ಲೂ ಆಫ್ರಿಕಾ ಸಹಾರಾದ ಕೆಲ ಪ್ರದೇಶಗಳನ್ನು ವಶಪಡಿಸಿಕೊಂಡು ಅಲ್ಲಿಯ ನೈಸರ್ಗಿಕ ಸಂಪತ್ತಾದ ರಬ್ಬರ್, ವಜ್ರ, ಮತ್ತು ಕಲ್ಲಿದ್ದಲುಗಳಿಂದಾಗಿ ಯುರೋಪ್ನ ಕೆಲವು ವಸಾಹತುಗಳು ಹಾಗೂ ಸಂಯುಕ್ತ ಸಂಸ್ಥಾನದ ನಡುವೆ ಬಂಡವಾಳ ಹೂಡಿಕೆಗೆ ಎಡೆಮಾಡಿಕೊಟ್ಟಿತು.
ಪ್ರಜಾಪ್ರಭುತ್ವ ಜಾಗತೀಕರಣದ ಬೆಂಬಲಿಗರನ್ನು ಕೆಲವೊಮ್ಮೆ ಪರ್ಯಾಯ ಜಾಗತೀಕರಣದ ಪ್ರತಿಪಾದಕರು ಎಂದು ಕರೆಯಲಾಗುತ್ತದೆ. ಮಾರುಕಟ್ಟೆ ಪ್ರಭಾವದ ಜಾಗತೀಕರಣದ ಮೊದಲ ಹಂತವನ್ನು, ಜಾಗತಿಕ ನಾಗರಿಕರನ್ನು ಪ್ರತಿನಿಧಿಸುವ ಜಾಗತಿಕ ರಾಜಕೀಯ ಸಂಸ್ಥೆಗಳ ಘಟ್ಟದ ನಿರ್ಮಾಣವೆಂದು ಅವರು ನಂಬುತ್ತಾರೆ. ಇತರ ಜಾಗತೀಕರಣ ವಾದಿಗಳಿಂದ ವಿಭಿನ್ನವಾದದ್ದೆಂದರೆ, ಅವರು ಯಾವುದೇ ನಿರ್ಣಾಯಕ ಸಿದ್ಧಾಂತವನ್ನು ಮೊದಲೇ ವಿವರಿಸುವುದಿಲ್ಲ ಆದರೆ ಪ್ರಜಾಪ್ರಭುತ್ವದ ನಡಾವಳಿಕೆಯ ಮೂಲಕ ಈ ನಾಗರಿಕರಿಗೆ ಮುಕ್ತ ಆಯ್ಕೆಯನ್ನು ಬಿಡುತ್ತಾರೆ.
ಸುಲಭ ನೋಟ ಜಾಗತೀಕರಣವು, ಸ್ವಾಗತಿಸಬಹುದಾದ ಮತ್ತು ಆಯ್ಕೆಯಲ್ಲದ ಅಂತರರಾಷ್ಟ್ರೀಯ ಮಂಡಳಿಗಳನ್ನು ಕಣ್ತಪ್ಪನ್ನು ಸರಿಪಡಿಸಲು ನೇರ ಆಯ್ಕೆಯ ಯುನೈಟೆಡ್ ನೇಶನ್ಸ್ ಪಾರ್ಲಿಮೆಂಟರಿ ಅಸ್ಸೆಂಬ್ಲಿಯಂತಹ ಸಂಸ್ಥೆಗಳ ನಿರ್ಮಾಣಕ್ಕೆ ಮಾಜಿ ಕೆನಡಿಯನ್ ಸೆನೆಟರ್ ಡಗ್ಲಾಸ್ ರೋಶೆ ಓ.ಸಿ ಯಂತಹ ಕೆಲವರು ವಾದಿಸುತ್ತಾರೆ. ಇಂದಿನ ಜಾಗತೀಕರಣದ ವಿಮರ್ಶೆಯೆಂದರೆ ಎರಡೂ ಗ್ರಹದ ಮೇಲಿನ ಹಾನಿಯನ್ನು ನೋಡಿದಾಗ ಮಾನವನ ಶ್ರಮದ ಬೆಲೆಯ ತಿಳುವಳಿಕೆಯಾದಂತಹ ಬಡತನ, ಅಸಮಾನತೆ, ಅನ್ಯಾಯವು ಜೀವಿಗಳ ಮೇಲೆ ಪ್ರಭಾವ ಬೀರಿವೆ.
ಪರಹಾರಗಳು:
ಜಾಗತೀಕರಣದ ಸಂದರ್ಭದಲ್ಲಿ ಕನ್ನಡದ ಬಗ್ಗೆ ಎಲ್ಲರಲ್ಲಿ ಅಭಿಮಾನ ಮೂಡಬೇಕಾದರೆ, ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳು ದೊರೆಯಬೇಕು. ಕರ್ನಾಟಕ ಅಷ್ಟೆ ಅಲ್ಲದೆ ಇಡಿ ಭಾರತದ ಯಾವುದೆ ಭಾಗದಲ್ಲಿಯೂ ಕನ್ನಡಿಗರಿಗೆ ಆದ್ಯತೆಗಳು ಹೆಚ್ಚಾಗಬೇಕು ಆಗ ಮಾತ್ರ ಕನ್ನಡತನ ಉಳಿಯಲು ಸಾಧ್ಯವಾಗುತ್ತದೆ.
ಕನ್ನಡ ಮಾಧ್ಯಮವೆಂದು ನಾಮಪಳಕ ಹಾಕಿ ಅದರ ನೆರಳಿನೊಳಗೆ ಇಂಗ್ಲೀಷ್ ಶಾಲೆ ನಡೆಸುತ್ತಿರುವ ಪ್ರಸ್ತುತ ಶೈಕ್ಷಣಿಕ ಸಂಸ್ಥೆಗಳನ್ನು ಕೂಡಲೆ ರದ್ದುಗೊಳಿಸುವ ಧೈರ್ಯ ಪ್ರಸ್ತುತ ಸರಕಾರಗಳು ಮಾಡಬೇಕು. ಕನ್ನಡ ಉಳಿಯಬೇಕಾದರೆ ಬೆಳೆಯಬೇಕಾದರೆ ಕನ್ನಡಪರವಾದ ಕಾಳಜಿ ಎಲ್ಲರಲ್ಲಿ ಬೆಳೆದುಬರಬೇಕಿದೆ. ಕನ್ನಡ ಕಟ್ಟುವ ಮನಸ್ಸುಗಳು ಒಂದಾಗಬೇಕಿದೆ.
ಕನ್ನಡ ಶಾಸ್ರೀಯ ಭಾಷೆಯಾಗಿ ಇದೀಗ ರ್ಷಗಳೆ ಗತಿಸಿದರು ಇನ್ನು ಕನ್ನಡ ಭಾಷೆಗೆ ವಿವಿಧ ಕ್ಷೇತ್ರದಲ್ಲಿ ಸಿಗಬೇಕಾದ ಅವಕಾಶವಾಗಲಿ ಅನುಕೂಲಗಳಾಗಲಿ ಅವಶ್ಯಕತೆಗಳಾಗಲಿ ಇನ್ನು ದೊರೆತಿಲ್ಲ. ಕನ್ನಡವನ್ನು ಆನಂದಮಯವಾಗಿ ಆನಂದಿಸುವ ಮನಸ್ಸುಗಳು ಇನ್ನು ಬೆಳೆಸಬೇಕಿದೆ. ಕನ್ನಡತನವನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ.
ಕನ್ನಡವು ದ್ವತೀಯ ಹಾಗೂ ಪ್ರಥಮ ಭಾಷೆಯಾಗಿ ಬೆಳೆಯುತ್ತಿರಬಹುದು ಆದರೆ ವಾಸ್ತವದಲ್ಲಿ ಕನ್ನಡ ಆಸ್ತಿ ಪಾಸ್ತಿಗಳನ್ನು ಅಸ್ತಿಪಂಜರವಾಗಿಸುವ ಪುಡಾರಿಗಳಿಂದ ಕನ್ನಡವನ್ನು ರಕ್ಷಿಸಬೇಕಿದೆ. ಕನ್ನಡದ ಹೆಸರಿನಲ್ಲಿ ಕಂಡದ್ದು ಮಾಡುವ ಮನಸ್ಸುಗಳನ್ನು ಕನ್ನಡದಿಂದ ದೂರಯಿಡಬೇಕಿದೆ. ಸಾವೆ ಬಂದರು ಕನ್ನಡ ಉಳಿಯಬೇಕು ಎಂಬ ಹಂಬಲ ಕನ್ನಡಿಗರಲ್ಲಿ ಒಡಮೂಡಿ ಬರಬೇಕಿದೆ.
ಗ್ರಾಮ ಮಟ್ಟದಿಂದ ಕನ್ನಡವನ್ನು ಉಳಿಸುವ ಬೆಳೆಸುವ ಮಕ್ಕಳಲ್ಲಿ ಕನ್ನಡದ ಪ್ರೀತಿ ಬೆಳೆಸುವ ಕೆಲಸವು ನಿರಂತರವಾಗಿ ನಡೆಯಬೇಕಿದೆ. ನೋವು ಏನೆ ಬರಲಿ ಕನ್ನಡ ಸದಾ ಬೆಳಗಲಿ ಎಂಬ ಭಾವನೆ ಎಲ್ಲರ ಮನಸ್ಸಿನ ಪುಟದಲ್ಲಿ ರಾರಾಜಿಸಬೇಕಿದೆ. ಸೋಲುಂಡರು ಪರವಾಗಿಲ್ಲ ಕನ್ನಡದ ಫಲಿತಾಂಶಗಳು ಮಾತ್ರ ಮುಂಚುಣಿಯಲ್ಲಿರಬೇಕಾಗಿದೆ.
ಕೊನೆಯ ತುತ್ತು: ಕನ್ನಡ ಭಾಷೆಯೆಂಬುವುದು ಒಂದು ಸುಂದರವಾದ ಕಲ್ಪನೆಯೊಂದಿಗೆ ಬೆರೆಯುವ ವಾತ್ಸವ. ನಾವೆಲ್ಲ ಉನ್ನತ ವ್ಯಾಸಂಗದಲ್ಲಿರುವ ವಿಧ್ಯಾರ್ಥಿಗಳಿಗೆ ಕನ್ನಡ ಕಲಿಸುವ ಕೆಲಸ ಮಾಡಬಹುದು ಆದರೆ ಇದೀಗತಾನೆ ಭಾಷೆಯನ್ನು ಕಲಿಯಲು ಪ್ರಾರಂಭ ಮಾಡಿರುವ ಮಕ್ಕಳಿಗೆ ಭಾಷೆ ಕಲಿಸುವುದ್ದಕ್ಕೆ ಆಗುವುದಿಲ್ಲ ಏಕೆಂದರೆ ಕನ್ನಡ ಕಲಿಕೆ ಅಷ್ಟು ಸುಲಭದ ಮಾತಲ್ಲ. ಭಾಷೆಯೆಂಬುವುದು ಇಂದು ಪ್ರತಿ ರಂಗದಲ್ಲಿಯೂ ಹಾಸುಹೊಕ್ಕಾಗಿದೆ. ಕನ್ನಡಿಗರಾದ ನಾವೆಲ್ಲ ಕನ್ನಡವನ್ನು ತಪ್ಪಿಲ್ಲದೇ ಕಲಿಯಬೇಕಾದರೆ ಮೂಲತಹ ನಮ್ಮ ಕನ್ನಡ ಕಲಿಕೆ ಶುದ್ಧವಾಗಿರಬೇಕು ಅದಕ್ಕಾಗಿ ಪ್ರಾಥಮಿಕ ಹಂತದ ಮಕ್ಕಳಲ್ಲಿ ಇಂದಿಗೂ ಅನೇಕ ಬಿಕ್ಕಟ್ಟುಗಳನ್ನು ನಾವೆಲ್ಲ ಕಾಣುತ್ತೇವೆ. ಅವುಗಳನ್ನು ಹೋಗಲಾಡಿಸಿ ಕನ್ನಡ ಕಲಿಕೆ ಉತ್ತಮಗೊಳಿಸಲು ನಾವೆಲ್ಲ ಈ ಮೇಲಿನ ಹಲವು ಅಂಶಗಳು ಕಾರ್ಯರೂಪಕ್ಕೆ ತರುವುದಾದರೆ ನಮ್ಮ ಮಕ್ಕಳು ಸರಾಗವಾಗಿ ಕನ್ನಡ ಕಲಿತು ಮುಂದಿನ ವಿಷಯಗಳ ವಿಧ್ಯಾಭ್ಯಾಸ ಸರಿಯಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.