ಇತಿಹಾಸದ ಪುಟಗಳಲ್ಲಿ ಮಾಹಾತ್ಮ ಗಾಂಧೀಜಿ ಹೇಳಿದಂತೆ ಸ್ವಚ್ಛತೆಗೆ ಹೆಚ್ಚಿನ ಆಧ್ಯತೆ ಕೊಡಬೇಕು. ನಿರ್ಮಲ ಗ್ರಾಮ ನಿರ್ಮಾಣವಾಗಿ ರಾಮರಾಜ್ಯ ನಿರ್ಮಾಣ ಮಾಡಬೇಕು ಎಂಬ ಕನಸು ಕಂಡ ಬಾಪೂಜಿ ಈ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಕೊಟ್ಟರು. ಅವರ ಕನಸನ್ನು ನೆನಸು ಮಾಡುವ ಆಸೆ ಹೊಂದಿರುವ ಮಾನ್ಯ ಮೋದಿಯವರು “ಹೊಸ ಚಿಗುರು ಹಳೆ, ಬೇರು” ಎನ್ನುವ ಹಾಗೆ ಸ್ವಚ್ಛ ಭಾರತ ಎಂಬ ಯೋಜನೆ ಹೊರತಂದಿದ್ದು ಇಂದು ಇಡಿ ಪ್ರಪಂಚವೇ ಕಣ್ಣರಳಿಸಿ ನೋಡುತ್ತಿದೆ. ಬಗೆ ಬಗೆಯ ವಿಮರ್ಶೆಗಳು ಕೇಳಿ ಬರುತ್ತವೆ. ಪ್ರತಿಯೊಂದು ಯೋಜನೆಯೂ ವಿಮರ್ಶೆಗಳು ಬರುವುದು ಸಹಜ ಅದರಂತೆ ಸ್ವಚ್ಛ ಭಾರತ ಅಭಿಯಾನ ಯೋಜನೆಗೆ ಹಲವು ರೀತಿಯ ವಿಮರ್ಶೆಗಳು ಕೇಳಿಬಂದವು.
ಸ್ವಚ್ಛ ಭಾರತ ಅಭಿಯಾನ :
ವಿದೇಶಿಯರು ಏನೆಂದರು: ಮೊನ್ನೆ ವಿದೇಶದ ಪತ್ರಿಕೆಯಲ್ಲಿ ಮುಖ್ಯವಾಗಿ ಮೋದಿಯವರ ಸ್ವಚ್ಛ ಭಾರತ ಅಭಿಯಾನದ ಯೋಜನೆಯ ಕುರಿತು ಬಹುಮುಖ್ಯ ಚರ್ಚೆಯಾಗಿತ್ತು ಸಂಪಾದಕರೊಬ್ಬರು ಮೋದಿ ತಮ್ಮ ಭಾರತ ಇಲ್ಲಿಯವರೆಗೂ ಹೊಲಸಿನಲ್ಲಿಯೇ ಇದ್ದರೆ ಎಂದು ನೇರವಾಗಿ ಕೇಳಿದ್ದರಂತೆ. ಇಲ್ಲಿಯತನಕ ಸ್ವಚ್ಛತೆಯ ಬಗ್ಗೆ ಕಲ್ಪನೆ ಭಾರತೀಯರಿಗೆ ಇರಲಿಲ್ಲವೇ ಅಥವಾ ಅರಿವಿದ್ದರು ಅದರೊಳಗೆ ಇದ್ದರೆ ಎಂಬ ಸಹಜ ಸಂಗತಿ ಕೇಳಿಬರುತ್ತದೆ.
ಪ್ರಪಂಚದಲ್ಲಿ ಸ್ವಚ್ಛತೆಗೆ ಸ್ವಯಂ ಕಾರ್ಯಕ್ಕೆ ಅನೇಕ ದೇಶಗಳು ಹೆಸರುವಾಸಿಯಾಗಿವೆ ಯೂರೋಪ ರಾಷ್ಟ್ರಗಳಲ್ಲಿ ಇಂತಹ ಅನೇಕ ಭಾಗಗಳನ್ನು ಕಾಣಬಹುದು ಆ ದೇಶಗಳಂತು ಭಾರತವನ್ನು ಬಹುವಾಗಿ ಆಡಿಕೊಂಡವು ಎನ್ನುವುದು ಈಗಾಗಲೇ ಸುದ್ದಿಯಾಗಿವೆ. ಈ ದೇಶಗಳಿಗೆ ನಾನು ಕೊಡುವ ದಿಟ್ಟ ಉತ್ತರವಿಷ್ಟೆ ಯೋಚನೆ ಹಳೆಯದಾಗಿರಬಹುದು ಇದೀಗ ಸ್ವಚ್ಚಗೊಳಿಸೋಣ ಎಂಬ ಮಾತು ಹಳೆಯದಿರÀಬಹುದು ಆದರೆ ಮೋದಿಯವರು ಇಟ್ಟಿರುವ ಹೆಜ್ಜೆ ಹೊಚ್ಚಹೊಸದಾಗಿದೆ. ಗಾಂಧೀಜಿಯಂತವರು ಹುಟ್ಟಿದ ದಿನವೇ ಈ ಯೋಜನೆಗೆ ಚಾಲನೇ ಸಿಕ್ಕು ಪ್ರತಿಯೊಬ್ಬ ಬಾರತೀಯ ಎಚ್ಚತ್ತು ಮೋದಿಯವರ ಕನಸಿನ ಭಾರತ ರಚಿಸಲು ಮುಂದಾಗಿ ಸಂಕಲ್ಪತೊಟ್ಟು ಯಾವ ಭೇದವಿಲ್ಲದೇ ದುಡಿಯುತ್ತಿರುವವುದು ಗಮನಿಸಲೇಬೇಕಾದ ವಿಷಯ ಅಲ್ಲವೇ?
ಸ್ವಚ್ಛ ಭಾರತ ಅಭಿಯಾನದ ಉದ್ದೇಶಗಳು:
ದೇಶದ ಪ್ರತಿಯೊಂದು ಸಾರ್ವಜನಿಕ ಆಸ್ತಿಪಾಸ್ತಿಗಳು ಸ್ವಚ್ಛವಾಗಿದ್ದು ಅಲ್ಲಿನ ಪರಿಸರ ನಿರ್ಮಲವಾಗಿರಬೇಕು.
ಪ್ರತಿಯೊಂದು ಮನೆ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಒಳಗಿನ ಮನುಷ್ಯ ಜಾಗೃತನಾಗಬೇಕು ಸ್ವಚ್ಛತೆಯ ಅರಿವು ಮೂಡಬೇಕು.
ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ಸ್ವಚ್ಛತೆಯ ಅವಶ್ಯಕತೆ ದೇಶದ ಯುವಜನತೆಗೆ ಹೇಗೆ ಸಹಕಾರಿ ಎಂಬ ವಿಷಯ ತಿಳಿಸುವುದು.
ಮನೆ,ಶಾಲೆ, ಆಸ್ಪತ್ರೆ, ಹಳ್ಳಿ, ನಗರ, ರಾಜ್ಯ ದೇಶ ಎಲ್ಲಿ ನೋಡಿದರು ಸ್ವಚ್ಛತೆ ಇರಬೇಕು. ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿದ್ದಲ್ಲಿ ಮನುಷ್ಯರಿಗೆ ತಗುಲುವ ರೋಗಗಳಿಂದ ಮುಕ್ತಿ ದೊರೆಯುತ್ತದೆ.
ಗಾಂಧೀಜಿ ಕಂಡ ಕನಸು ನೆನಸು ಮಾಡುವುದು. ಸ್ವಚ್ಛ ದೇಶವನ್ನು ನಿರ್ಮಾಣ ಮಾಡುವುದು. ಗಾಂಧೀಜಿಯವರ ಹುಟ್ಟು ಹಬ್ಬಕ್ಕೊಂದು ಅರ್ಥ ಕೊಡುವುದು.
ದೇಶದ ಎಲ್ಲಾ ಜನರಲ್ಲಿ ಸ್ವಚ್ಛತೆಯ ಅರಿವು ಮೂಡಿಸಿ ದೇಶ ಕಟ್ಟುವ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಉತ್ತೇಜನ ನೀಡುವುದು.
ದೇಶದಲ್ಲಿ ದಾರಿದ್ರ್ಯ ಬಡತನ ಹೋಗಲಾಡಿಸಿ ಎಲ್ಲರಿಗೂ ಸಮಬಾಳು ಸಮಪಾಲು ನೀಡುವುದು. ನಮ್ಮೊಳಗಿನ ಸ್ವಚ್ಛತೆಯ ಭಾವ ದೇಶಕ್ಕಾಗಿ ದುಡಿದು ಉತ್ತಮ ರಾಷ್ಟ್ರ ನಿರ್ಮಾಣ ಮಾಡಲು ಪಣ ತೊಡುವುದು.
ಸಾಂಸ್ಕೃತಿಕ ವಿಮರ್ಶೆ:
ಸ್ವಚ್ಛ ಭಾರತ ಅಭಿಯಾನ ಯೋಜನೆ ಭಾರತದಂತಹ ಅತೀದೊಡ್ಡ ಜನಸಂಖ್ಯೆ ಹೊಂದಿರುವ ಕಾರಣ ಅತೀ ಅವಶ್ಯಕತೆ ಇದೆ. ಕಲ್ಪನೆ ಹಳೇಯದಾಗಿರಬಹುದು ಆದರೆ ಇಟ್ಟಿರುವ ಹೆಜ್ಜೆ ನವೀನವಾಗಿದೆ. ದೇಶದ ಯುವಜನತೆಯಲ್ಲಿ ದೇಶದ ಅಭಿವೃದ್ಧಿಯ ಸಲುವಾಗಿ ದುಡಿಯುವ ಕಿಚ್ಚು ಹಚ್ಚಿರುವ ಕೇಂದ್ರ ಸರಕಾರದ ಈ ಯೋಜನೆಯ ಮೂಲಕ ಹೊಸ ಆಯಾಮದಲ್ಲಿ ಯೋಚಿಸಿಲು ಯುವಜನತೆಗೆ ಅನುವು ಮಾಡಿಕೊಟ್ಟಿದೆ. ತನ್ನ ತಾನು ಅರೆತುಕೊಳ್ಳುವ ಒಂದು ಹೊಸ ರೀತಿಯ ನಂಬಿಕೆಗೆ ಯೋಚೆನೆಗೆ ದಾರಿಮಾಡಿಕೊಟ್ಟಿದೆ.
ಮಾಹಾತ್ಮ ಗಾಂಧೀಜಿ ಜಯಂತಿಯೆಂದು ಸಾಮಾನ್ಯವಾಗಿ ಸಾರ್ವತ್ರಿಕ ರಜೆ ಇದ್ದು ಅದರ ಲಾಭದ ಪ್ರಕಾರ ಎಲ್ಲಾ ಸರಕಾರಿ ನೌಕರರೂ ರಜೆಯನ್ನು ಮಜವಾಗಿ ಆಚರಿಸುವ ಕಾಟಾಚಾರಕ್ಕೆ ಗಾಂಧೀಜಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಜಯಂತಿಯನ್ನು ಆಚರಿಸುವ ಪರಿಯನ್ನು ಸ್ವಚ್ಛ ಭಾರತ ಅಭಿಯಾನ ಈ ಬಾರಿ ತಳ್ಳಿ ಹಾಕಿದೆ. ಈ ದಿನದಂದು ಎಲ್ಲಾ ನೌಕರರು ತಮ್ಮ ತಮ್ಮ ಕಛೇರಿಗಳನ್ನು ಸ್ವಚ್ಛತೆಗೊಳಿಸಿಕೊಳ್ಳುವ ಕೆಲಸ ನೀಡಿದೆ ಇದೊಂದು ಸ್ವಾಗರ್ಹವಾದ ವಿಚಾರವಾಗಿದೆ.
ಮಾಹಾತ್ಮ ಗಾಂಧೀಜಿಯವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಕೇಂದ್ರ ಸರಕಾರ ಒಂದು ಉತ್ತಮವಾದ ಹೆಜ್ಜೆ ಇಟ್ಟಿರುವುದು ಎಲ್ಲರೂ ಪಕ್ಷಭೇಧ ಮರೆತು ಸ್ಪಂಧಿಸಬೇಕಾದ ಅಗತ್ಯವಿದೆ.
ಈ ಸ್ವಚ್ಛಭಾರತ ಯೋಜನೆ ಸರಕಾರಿ ನೌಕರರಿಗೆ ಹಾಗೂ ಇಂತಹ ಸರಕಾರಿ ರಜೆಗಳಿಗೆ ಹೊಸ ಆಯಾಮವನ್ನು ನೀಡಿ ಮತ್ತಷ್ಟು ಅರ್ಥಪೂರ್ಣವಾದ ರಾಷ್ಟ್ರಸಬಲೀಕರಣದ ಹೆಜ್ಜೆ ಹಾಕುವಲ್ಲಿ ಯಶಸ್ವಿಯಾಗಿದೆ.
ಎತ್ತ ಸಾಗಿದೆ ಭಾರತ ಎಂಬ ಆತಂಕ ಜನರ ಮನಸ್ಸಲ್ಲಿ ಮನೆ ಮಾಡಿತ್ತು. ಮುಂದೆಂದೂ ದೇಶ ಈ ಅನುವಂಶೀಯ ರಾಜಕಾರಣದಿಂದ ಮುಕ್ತಿ ಯಾವಾಗ ಎಂದು ಕಾಯುತ್ತಿದ್ದರು. ಇದೀಗ ದೇಶದ ಕನಸೊಂದು ನೆನಸಾಗಿ, ಹೊಸದೊಂದು ರಾಜಕೀಯ ಭವಿಷ್ಯ ಬರೆದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದಲ್ಲಿ ಸ್ವಚ್ಛತೆ ತರುವ ನಿಟ್ಟಿನಲ್ಲಿ ಗಣನೀಯವಾದ ಹೆಜ್ಜೆ ಹಾಕಿದ್ದಾರೆ. ಹೊಸದೊಂದು ಆಶಾಕಿರಣ ಮೂಡಿಸಲಿರುವ ಸ್ವಚ್ಛ ಭಾರತ್ ಅಭಿಯಾನ್ ಜನಪರವಾಗಲಿದೆ.
ದೇಶದಲ್ಲಿ ಪ್ರತಿಯೊಬ್ಬರೂ ಎಲ್ಲ ಬಗೆಯ ಸ್ವಚ್ಛತೆಯ ಸೌಲಭ್ಯಗಳನ್ನು ಕಲ್ಪಿಸುವುದೇ ಯೋಜನೆಯ ಮುಖ್ಯ ಮತ್ತು ಮೊದಲ ಗುರಿ. ಎಂಬ ಧ್ಯೇಯವ್ಯಾಕ್ಯದೆಡೆಗೆ ಜನರನ್ನು ಕರೆದೊಯ್ಯೂವ ಮಹತ್ವದ ಹೆಜ್ಜೆಗೆ ಅಣಿಯಾಗಿರುವ ಮಾನ್ಯ ಪ್ರಧಾನಮಂತ್ರಿಗಳು, ದೇಶದಲ್ಲಿಯ ಅನಾರೋಗ್ಯ ಹೊಡೆದೂಡಿಸಲು ಶ್ರಮವಹಿಸುತ್ತಿದ್ದಾರೆ.
ಈ ಯೋಜನೆಯೂ ನಗರ ಮತ್ತು ಗ್ರಾಮೀಣ ಜನತೆಯನ್ನು ಒಳಗೊಳ್ಳಲಿದ್ದು ಎಲ್ಲಿರಿಗೂ ಸ್ವಚ್ಛತೆಯ ಮಹತ್ವ ಹೇಳಿಕೊಡಲಿದೆ. ನರೇಂದ್ರ ಮೋದಿಯ ಕಲ್ಪನೆಯಂತೆ ಸ್ವಚ್ಛ ಭಾರತ ಕನಸಿಗೆ ಪೂರಕವಾಗಿ ದೇಶದಲ್ಲಿ ಸ್ವಚ್ಛತೆಯ ಅಡಿಪಾಯ ಹಾಕಲಿದೆ.
ಈ ಯೋಜನೆಯೂ ತನ್ನ ಸ್ಪಷ್ಟವಾದ ಗುರಿ ಮತ್ತು ಉದ್ದೇಶ ಹೊಂದಿದೆ. ದೇಶದ ಕೊಳೆಯನ್ನು ತೊಳೆಯುವ ಕೆಲಸದಲ್ಲಿ ಪ್ರಧಾನಿ ನಿರತರಾಗಿದ್ದಾರೆ. ಗಾಂಧೀಜಿಯವರ ಕನಸು ನೆನಸು ಮಾಡುವಲ್ಲಿ ಶ್ರಮಿಸುತ್ತಿದ್ದಾರೆ.
ನರೇಂದ್ರ ಮೋದಿ ಕನಸಿನ ಹಾಗೂ ಮಹತ್ವದ ಯೋಜನೆ ಜಾರಿಯಾಗಿದ್ದು ಅಕ್ಟೋಬರ್ 02 ರಂದು ಸ್ವತ: ಪ್ರಧಾನ ಮಂತ್ರಿಯವರೇ ಚಾಲನೆ ನೀಡಿದರು. ದೇಶದ ಪ್ರಮುಖ ನಗರಗಳಲ್ಲಿ ಸ್ವಚ್ಛಗೊಳಿಸುವ ಕೆಲಸ ಮಾಡಲಾಯಿತು. ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸಲು ಶಿಬಿರಗಳನ್ನು ಹಮ್ಮಿಕೊಳ್ಳಲಾಯಿತು.
ಈ ಮಹತ್ವದ ಯೋಜನೆಯೂ ಜಾರಿಗೆ ತರಲು ಮೂಲಕಾರಣ ದೇಶವನ್ನು ಸ್ವಚ್ಛಗೊಳಿಸುವುದು ದೇಶದಲ್ಲಿ ನಾವು ಇಲ್ಲಿಯವರೆಗೆ ಯಾವುದ್ದಕ್ಕೆ ಹೆಚ್ಚು ಮಹತ್ವ ಕೊಡುವ ಅವಶ್ಯಕತೆಯಿತ್ತು ಅದಕ್ಕೆ ಕೊಡಲಿಲ್ಲ ದೇಶದ ಸ್ವಚ್ಛತೆ ಎಷ್ಟು ಮಹತ್ವವೆಂಬ ವಿಷಯ ಈ ಯೋಜನೆ ತಿಳಿಸಿಕೊಟ್ಟಿತು.
ನರೇಂದ್ರ ಮೋದಿ ಒಬ್ಬ ದೇಶದ ಸ್ವಚ್ಛತೆ ಬಗ್ಗೆ ಅರಿವಿರುವ ವ್ಯಕ್ತಿಯೆಂಬುವುದು ಈ ಯೋಜನೆಯ ಮೂಲಕ ಪ್ರಸ್ತುತ ಪಡಿಸಿದ್ದಾರೆ. ದೇಶದ ಸ್ವಚ್ಛತೆಯಿಂದ ದೇಶದ ಅಭಿವೃದ್ಧಿಯಾಗಲಿದೆ ಮತ್ತು ಜನರು ಮುಖ್ಯವಾಹಿನಿಗೆ ಕರೆತರುವಲ್ಲಿ ಯೋಜನೆ ಸಹಕಾರಿಯಾಗಲಿದೆ. ಎಂಬ ಬಲವಾದ ನಂಬಿಕೆಯೊಂದಿಗೆ ಯೋಜನೆ ಚಾಲನೆಗೊಂಡಿದೆ. ಈ ಯೋಜನೆಯ ಅನುಪಾಲನೆಯಾದಲ್ಲಿ ದೇಶದ ಸ್ವಚ್ಛತೆಯ ಮಹತ್ವದ ಘಟ್ಟವೊಂದು ಹೊರಬರಲಿದೆ. ಹಲವು ಉತ್ತಮ ಅಂಶಗಳನ್ನು ಒಳಗೊಂಡ ಈ ಸ್ವಚ್ಛಭಾರತ ಅಭಿಯಾನವು ನಮ್ಮ ನಮ್ಮ ಮನೆ ಮನಗಳಿಂದ ಜಾರಿಯಾಗಲಿ ಎಂಬುವುದು ನನ್ನ ಆಶೆಯ.