ನಮ್ಮ ದೇಶ ಸುಮಾರು ವರ್ಷಗಳಿಂದ ರಾಜಕೀಯ ಲಾಭಕ್ಕಾಗಿ ದೇಶದ ಸಂಪತ್ತನ್ನು ಲೂಟಿ ಮಾಡಿ ಬಡ ರಾಷ್ಟ್ರವಾಗಿಸಿದ್ದಾರೆ. ಇದೀಗ ನಾನು ಈ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ದೇಶದ ಜನರೆಲ್ಲರೂ ನನ್ನ ಮೇಲೆ ಅಪಾರವಾದ ನಂಬಿಕೆಯಿಟ್ಟು ಪ್ರಧಾನಿ ಮಾಡಿದ್ದಾರೆ. ನಾನು ನನ್ನ ಶ್ರಮವೆಲ್ಲ ವ್ಯಯಮಾಡಿ ಇವತ್ತಿಗೆ ನಾನು ನನ್ನ ಆಡಳಿತ ನೀಡಿ ಮೂರು ವರ್ಷ ಮುಗಿಸಿದ ಸಂದರ್ಭದಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದೇನೆ. ಆ ಸಂಧರ್ಭದಲ್ಲಿ ಪತ್ರಕರ್ತರ ಎದುರು ನಾನು ದೇಶಕ್ಕಾಗಿ ಮಾಡಿರುವ ಸಾಧನೆಗಳನ್ನು ಮತ್ತು ದೇಶದ ಅಭಿವೃದ್ಧಿಯನ್ನು ಹೇಳುತ್ತಿದ್ದೇನೆ.
ಈ ದೇಶದವನ್ನು ಸ್ವಚ್ಚ ಮಾಡುವ ಕಾರ್ಯದಲ್ಲಿ ನೈರ್ಮಲ್ಯೀಕರಣಗೊಳಿಸುವ ಕಾರ್ಯದಲ್ಲಿ ಪ್ರಧಾನಿಯಾಗಿ ನನ್ನ ನಾನು ತೊಡಗಿಸಿಕೊಂಡಿದ್ದೇನೆ. ನನ್ನ ಗುರಿ ರಾಜಕೀಯ ಮಾಡುವದಾಗಲಿ, ಪ್ರತಿಪಕ್ಷಗಳಿಗೆ ಏಟು ಎದುರೇಟು ಕೊಡುವುದಾಗಲಿ ಮಾಡುತ್ತಿರಲಿಲ್ಲ ನನ್ನ ಚಿತ್ತ ಅಭಿವೃದ್ಧಿಯತ್ತ ಮಾತ್ರ ಇರುತ್ತಿತ್ತು. ನನ್ನ ಮನಸ್ಸು ದೇಶದ ರೈತ, ಬಡವ, ಯುವಕ ಇವರೊಂದಿಗೆ ಇರುತ್ತಿತ್ತು. ಅವರ ಅಭಿವೃದ್ಧಿಯೇ ನನ್ನ ಅಧಿಕಾರದ ಅವಧಿಯ ಪರಮ ಗುರಿಯಾಗಿತ್ತು. ಅದಕ್ಕಾಗಿಯೇ ದೇಶದ ಜನತೆ ಕೇಳಿದ ಆಡಳಿತವನ್ನು ಈ ದೇಶಕ್ಕೆ ನೀಡಿದ್ದೇನೆ.
ಈ ದೇಶದಲ್ಲಿ ಕಳೆದ ಸುಮಾರು ವರ್ಷಗಳಿಂದ ಎಲ್ಲಿಲ್ಲದ ಭ್ರಷ್ಠಚಾರ, ದೇಶ ದರೋಢೆಯಾಗಿದೆ ಅದನ್ನು ಬುಡಸಮೇತ ಕಿತ್ತೊಗೆಯಲು ನನ್ನ ಶ್ರಮ ಹಾಕಿದ್ದೇನೆ. ಎಲ್ಲವೂ ಕುಲಂಕುಶವಾದ ವಿಚಾರಣೆ ಮಾಡಿಸಿ ಅದರಲ್ಲಿ ತಪ್ಪಿತಸ್ತರಾದ ಎಲ್ಲರನ್ನು ಕಾನೂನು ಕ್ರಮ ತೆಗೆದುಕೊಳ್ಳುವಂತೆ ಕೋರ್ಟಿಗೆ ಸ್ವತ: ಮನವಿ ಮಾಡಿ ಈ ದೇಶದ ಜನತೆಗೆ ಅನೂಕೂಲವಾಗುವ ರೀತಿಯಲ್ಲಿ ಈ ದೇಶದ ಜನತೆಯ ಅಭಿವೃದ್ಧಿ ದೃಷ್ಠಿಯಲ್ಲಿ ಹಲವು ಕಾನುನುಗಳನ್ನು ಬಲಗೊಳಿಸುವ ಕೆಲಸವನ್ನು ಬಹುನಿಷ್ಠೆಯಿಂದ ಮಾಡಿ ಮುಗಿಸಿದ್ದೇನೆ. ಈ ನಿಟ್ಟಿನಲ್ಲಿ ಈಗಾಗಲೇ ನಮ್ಮ ದೇಶದ ಉನ್ನತಮಟ್ಟದ ಸಂಸ್ಥೆಯಾದ ಸಿಬಿಐನಲ್ಲಿ ನೆನಗುದಿಗೆ ಬಿದ್ದಿರುವ ಎಲ್ಲಾ ಪ್ರಕರಣಗಳ ಇತ್ಯರ್ಥಗೊಳಿಸಿದ್ದೇನೆ. ತಪ್ಪು ಮಾಡಿದವರೆಲ್ಲ ಈಗಾಗಲೇ ಜೈಲುವಾಸದಲ್ಲಿದ್ದಾರೆ. ಅವರಲ್ಲಿ ರಾಜಕೀಯ ಪುಡಾರಿಗಳೆ ಹೆಚ್ಚು ಜನರಿದ್ದಾರೆ ಎಂಬುವುದು ಎಲ್ಲರೂ ಗಮನಿಸಬೇಕಾದ ಅಂಶ.
ಈ ದೇಶದ ಬೆನ್ನೆಲುಬು ರೈತ ಅವರಿಗಾಗಿ ಪ್ರತ್ಯೇಕವಾದ ಬಜೆಟ್ ಮಂಡೆನೆ ಮಾಡಿದೆ, ಅದನ್ನು ಅನುಷ್ಠಾನಗೊಳಿಸಿ ಅವರ ಅಭಿವೃದ್ಧಿ ಮಾಡಿದೆ. ರೈತನ ಕೋರಿಕೇನು? ಯಾವ ರೀತಿಯ ಬೆಳೆಗಳನ್ನು ಬೆಳೆಯಬೇಕು? ಹೇಗೆ ಬೆಳೆಯಬೇಕು? ಮಣ್ಣನ್ನು ಹೇಗೆ ರಕ್ಷಿಸಬೇಕು? ಯಾವ ಮಣ್ಣಿಗೆ ಏನು? ಸೂಕ್ತ ಎಂಬ ಮಾಹಿತಿಯನ್ನು ಬೆರಳ ತುದಿಯಲ್ಲಿ ನೀಡುವ ಕೆಲಸ ರೈತಿಗಾಗಿ ಮಾಡಿರುವೆ. ರೈತ ಬೆಳೆದ ಪ್ರತಿ ಬೆಳೆಗೂ ಬೆಂಬಲ ಬೆಲೆ ಕೊಡಿಸುವ ಪ್ರಯತ್ನ ಪ್ರಮಾಣಿಕವಾಗಿ ಮಾಡಿರುವೆ. ರೈತರು ದೇಶದ ಅಭಿವೃದ್ಧಿಯಲ್ಲಿ ಹೇಗೆ ಪೂರಕವೆಂಬ ಮಾಹಿತಿ ರೈತರಿಗೆ ಕೊಟ್ಟಿದ್ದೇನೆ. ದಿನದ 24 ಗಂಟೆಗಳು ಅವರಿಗಾಗಿ ಮಾಹಿತಿ ಕೇಂದ್ರಗಳನ್ನು ತೆರೆದು ಅವರ ಅಭಿವೃದ್ಧಿಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ತಂತ್ರಗಳನ್ನು ಒದಗಿಸಿಕೊಟ್ಟಿರುವೆ. ಎಲ್ಲಾ ರೈತರು ಇದೀಗ ಸಮೃದ್ಧವಾಗಿ ಜೀವನ ಸಾಗಿಸುತ್ತಿದ್ದಾರೆ.
ಈ ದೇಶದ ಬಹುದೊಡ್ಡ ಸಮಸ್ಯೆ ನಿರೂದ್ಯೋಗ ಇದನ್ನು ಹೋಗಲಾಡಿಸಲು ನನ್ನಲ್ಲಿ ಒಂದು ಹೊಸ ವಿಚಾರವಿದೆ. ಮೊದಲು ಶಿಕ್ಷಣ ಇಲಾಖೆ ಶುದ್ಧಗೊಳಿಸುವ ಇಲಾಖೆಯ ಅಧಿಕಾರಿಗಳನ್ನು ಶುದ್ಧಗೊಳಿಸುವ ಪ್ರಾರಂಭಿಕ ಕೆಲಸ ಮಾಡಿದೆ. ದುಡಿಯಲು ಆಸಕ್ತಿಯಿರುವ ಪ್ರತಿಯೊಬ್ಬರೂ ದುಡಿಯುವ ಅವಕಾಶಗಳನ್ನು ದೇಶದಲ್ಲಿಯೇ ಸೃಷ್ಠಿ ಮಾಡಿಕೊಟ್ಟೆ. ಈ ದೇಶದ ನಿರುದ್ಯೋಗ ಅತೀದೊಡ್ಡ ಸಮಸ್ಯೆ ಇದು ಹೋಗಲಾಡಿಸಬೇಕು. ಕಲಿತ ವಿದ್ಯೆಗೆ ತಕ್ಕಂತೆ ಹಾಗೂ ಅವರ ಅರ್ಹತೆಗೆ ತಕ್ಕಂತೆ ಉದ್ಯೋಗ ದೊರೆತು ದೇಶದ ಸೇವೆಯಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಮಾಡಿದ್ದೇನೆ. ನಮ್ಮ ದೇಶದಲ್ಲಿ ಯಾರ ಬೇಡಿಕೆಯಿದೆ ಎಂಬ ವಿಷಯವನ್ನು ಮೊದಲು ಅರ್ಥ ಮಾಡಿಕೊಂಡು ನಂತರ ಅಂತಹ ಶಿಕ್ಷಣ ನೀಡಲು ಶಿಕ್ಷಣ ಇಲಾಖೆಗೆ ಅವಕಾಶ ಪರವಾನಿಗೆ ಕೊಡುತ್ತೇನೆ.
ನಮಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗವಿದ್ದರೆ ಅದನ್ನು ಪೂರ್ಣಗೊಳಿಸುವ ಕೋರ್ಸ್ ಪ್ರಾರಂಭಿಸಬೇಕು, ಶಿಕ್ಷಕರ ಕೊರತೆಯಿದ್ದರೆ ಶಿಕ್ಷಕರ ಶಿಕ್ಷಣ ನೀಡಬೇಕು, ಮೆಕ್ಯಾನಿಕ್ಗಳ ಅವಶ್ಯಕತೆಯಿದ್ದಾಗ ನಾವು ಬರಿ ಶಿಕ್ಷಕರನ್ನೆ ನಿರ್ಮಾಣ ಮಾಡುತ್ತಾ ಹೋದರೆ ನೈಜವಾಗಿ ನಿರೂದ್ಯೋಗ ಸಮಸ್ಯೆ ಏಳುತ್ತದೆ. ನಮ್ಮ ದೇಶಕ್ಕೆ ಚಪ್ಪಲಿಗಳ ಅವಶ್ಯಕತೆಯಿದ್ದರೆ ಅದರ ತರಬೇತಿಯೂ ನೀಡುವ ತರಗತಿಗಳನ್ನು ತೆರೆಯಬೇಕಾದ ಅಗತ್ಯವಿದೆ. ಅದಕ್ಕಾಗಿ ನಾವು ಮೊದಲು ನಮ್ಮ ದೇಶಕ್ಕೆ ಏನು ಬೇಕು ಎಂಬ ವಿಷಯ ಮನಗೊಂಡು ನಂತರ ಅದನ್ನು ತೆರೆಯಲು ಮುಂದಾಗಬೇಕು ಇದಾದ ಬಳಿಕ ಬೇರೆ ದೇಶಗಳಿಗೆ ಬೇಕಾಗುವ ಸಾಮಾನುಗಳನ್ನು ತಯಾರಿಸುವ ಮತ್ತು ಮಾರಾಟ ಮಾಡುವ ಉದ್ಯೋಗಳನ್ನು ಸೃಷ್ಠಿ ಮಾಡಿಕೊಳ್ಳಬೇಕು. ಎಂಬ ಸತ್ಯ ಭಾರತದ ಜನರಿಗೆ ತೋರಿಸಿದ್ದೇನೆ.
ಭಾರತವು ಅತೀ ಬೇಗ ಮುಂದುವರೆದ ರಾಷ್ಟ್ರಗಳಲ್ಲಿ ಹೆಸರು ಪಡೆದಿದೆ. ಈ ದೇಶದ ಮೂಲೆ ಮೂಲೆಯಲ್ಲಿರುವ ಹಲವು ಬಡತನದ ಜನರಿಗೆ ಸರಕಾರದ ಯೋಜನೆಗಳು ಮುಟ್ಟಿವೆ. ಸರಕಾರದ ಯೋಜನೆಗಳು ರಚನೆ ಮಾಡುವಾಗ ಹಳ್ಳಿಮಟ್ಟದಲ್ಲಿ ನೈಜ ಜನತೆಯ ಜೊತೆಗೂಡಿ ಅವರಿಗೆ ಬೇಕಾಗುವ ರೀತಿಯಲ್ಲಿ ಯೋಜನೆಗಳು ರೂಪಿಸಿದೆ, ಸರಕಾರ ರಚಿಸಿದ ಪ್ರತಿಯೊಂದು ಯೋಜನೆಗಳು ಸೂಕ್ತ ಫಲಾನುಭವಿಗಳಿಗೆ ದೊರೆತಿವೆ. ಯೋಜನೆಯ ಪೂರ್ಣಫಲ ಜನರಿಗೆ ಮುಟ್ಟಿವೆ. ಹಳ್ಳಿ ಉದ್ಧಾರದ ಕನಸನ್ನು ನಮ್ಮ ಸರಕಾರದ ಪ್ರತಿಯೊಂದು ಯೋಜನೆ ಒಳಗೊಂಡಿದೆ. ನೈಜತೆಗೆ ಒತ್ತು ನೀಡಿ ದೇಶದ ಅಭಿವೃದ್ಧಿಯಲ್ಲಿ ಯೋಜನೆ ಪ್ರಮುಖ ಪಾತ್ರ ನಿರ್ವಹಿಸಿವೆ. ನೈಜವಾಗಿ ಸಿಗಬೇಕಾದ ಹಕ್ಕುಗಳು ಜನರಿಗೆ ಸಿಗುವಲ್ಲಿ ನಾನು ಮುಂಚುಣಿಯ ಹೆಜ್ಜೆ ಇಟ್ಟಿರುವೆ.
ಹಸಿವು ಮುಕ್ತ ಭಾರತ, ದುಡಿಯುವ ವರ್ಗ, ರಚನೆ ಮಾಡಿರುವೆ. ಪ್ರತಿ ಮನೆ ಹಾಗೂ ಪ್ರತಿ ಮನಸ್ಸುಗಳು ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ, ಸ್ವತಂತ್ರವಾಗಿ ಸ್ವಚ್ಛಗೊಂಡಿವೆ. ನಮ್ಮ ದೇಶವು ಕೆಟ್ಟ ಗಾಳಿ, ವಾತಾವರಣದಿಂದ ಮುಕ್ತಗೊಂಡಿದೆ. ಶಕ್ತಿಯುತ ದೇಶವಾಗಿ ತಲೆಯೆತ್ತುತ್ತಿದೆ. ನಮ್ಮ ದೇಶದಲ್ಲಿ ಪ್ರತಿಯೊಂದು ಹಳ್ಳಿಯಲ್ಲಿಯೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪ್ರತಿಯೊಬ್ಬ ಪ್ರಜೆಗೂ/ಮಗುವಿಗೂ ಸಿಗುತ್ತಿದೆ. ಅನ್ನ, ಅಕ್ಷರ, ಜೀವನಾಂಶ ಮನುಷ್ಯನ ಮೂಲಭೂತವಾದ ಅವಶ್ಯಕತೆಗಳು ನಮ್ಮ ದೇಶದಲ್ಲಿ ಇವೆಲ್ಲ ಪ್ರತಿಯೊಬ್ಬ ಪ್ರಜೆಗೂ ಕೊಡಿಸುವಲ್ಲಿ ಪ್ರಯತ್ನ ಮಾಡಿರುವೆ.
ಭಾರತದ ಆರ್ಥಿಕತೆ ಸುಧಾರಿಸುವ ಹಲವು ಫಲಭರಿತ ಯೋಜನೆಗಳು ರಚನೆಯಾಗಿ ದೇಶದ ಆರ್ಥಿಕತೆ ಉತ್ತಮಗೊಳ್ಳುವ ಕೆಲಸ ಮಾಡಿದ್ದೇನೆ. ನಾಡು ನುಡಿಯ ಸೇವೆ ಮಾಡುವ ಯುವವರ್ಗ ರಚನೆಯಾಗಿ, ದೇಶ ಕಟ್ಟುವ, ನಾಡ ಸೇವೆಯಲ್ಲಿ ನೈಜತೆ ಎದ್ದು ಕಾಣುವ, ಶಾಲಾಪೂರ್ವ ಶಿಕ್ಷಣ, ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣ, ಕಾಲೇಜು ಶಿಕ್ಷಣ, ಉನ್ನತ ಶಿಕ್ಷಣ, ವೃತ್ತಿ ಶಿಕ್ಷಣ ಹೀಗೆ ಎಲ್ಲಾ ಶಿಕ್ಷಣ ವ್ಯವಸ್ಥೆಯಲ್ಲಿಯೂ ಪ್ರಮಾಣಿಕತೆ ತಂದಿರುವೆ. ಎಲ್ಲಾ ಮಕ್ಕಳು ಕಲಿಯಬೇಕು. ಶಿಕ್ಷಣ ಎಲ್ಲರ ಸ್ವತ್ತಾಗಬೇಕು ಶೈಕ್ಷಣಿಕ ಸ್ಥಿತಿಗತಿ ಸುಧಾರಿಸಬೇಕು. ಸಾಕ್ಷರತೆಯ ಪ್ರಮಾಣ ಹಳ್ಳಿ ಮಟ್ಟದಿಂದಲೂ ಉತ್ತಮಗೊಳ್ಳಬೇಕು. ಭಾರತದಲ್ಲಿ ಜ್ಯಾತೀಯತೆ ಮುಕ್ತವಾಗಿ ಎಲ್ಲರೂ ಸಮಾನರು ಎಂಬ ಮನೋಧೋರಣೆ ಬೆಳೆಯಬೇಕು. ದೇಶವು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಅಭಿವೃದ್ಧಿ ಸಾಧಿಸಲು ನಾನು ಶ್ರಮಿಸಿದ್ದೇನೆ.
ಭಾರತದಲ್ಲಿ ಲಿಂಗ ಅಸಮಾನತೆ ಹೋಗಲಾಡಬೇಕು. ಗಂಡು ಹೆಣ್ಣು ಎರಡು ಜಾತಿಗಳನ್ನು ಸಮಾನತೆಯಿಂದ ಕಂಡುಕೊಳ್ಳಬೇಕು. ಈ ದೇಶದಲ್ಲಿ ಇತಿಹಾಸದಿಂದ ಇಲ್ಲಿಯವರೆಗೆ ಹಿಂದುಳಿದ ಹಾಗೂ ದಲಿತರ ಅಭಿವೃದ್ಧಿ ಆಮೆಗತಯಲ್ಲಿದೆ ಅದು ತೀವ್ರಗೊಳಿಸಿ. ಶಿಕ್ಷಣದಲ್ಲಿ ಸಾಕ್ಷರತೆಯ ಪ್ರಮಾಣವು 100% ಭಾರತ ಸಾಧಿಸಿದೆ. ಶಾಲೆಗೆ ದಾಖಲಾದ ಮಕ್ಕಳು ಶೇಕಡಾ 100 ರಷ್ಟು ಶಾಲೆಯಲ್ಲಿದ್ದಾರೆ. ಮಕ್ಕಳ ಮರಣ ಪ್ರಮಾಣ ಕಡಿಮೆಗೊಳಿಸುವಲ್ಲಿ ನಮ್ಮ ಸರಕಾರ ಪ್ರಮಾಣಿಕ ಪ್ರಯತ್ನ ಮಾಡಿದೆ. ಭಾರತದಲ್ಲಿ ಜೀವನಮಟ್ಟ ಸುಧಾರಣೆಗೆ ಅಡುಗೆ ಇಂಧನ ದೊರೆಯುತ್ತಿರುವ ಕುಟುಂಬಗಳ ಪ್ರಮಾಣ ಎಲ್ಪಿಜಿ, ವಿದ್ಯುತ್, ಗ್ಯಾಸ್, ಇತ್ಯಾದಿಗಳಂತಹ ಆಧುನಿಕ ಇಂಧನಗಳನ್ನು ಬಳಸುತ್ತಿರುವ ಕುಟುಂಬಗಳ ಸಂಖ್ಯೆ ಶೇಕಡಾ 100%ನ್ನು ಸಾಧಿಸಲಾಗಿದೆ.
ಶೌಚಾಲಯಗಳು ಲಭ್ಯವಿರುವ ಕುಟುಂಬಗಳ ಪ್ರಮಾಣ ಶೇಕಡಾ 100ರಷ್ಟು ಸಾಧಿಸುವಲ್ಲಿ ನಮ್ಮ ಸರಕಾರ ಸಫಲವಾಗಿದೆ. ಭಾರತದಲ್ಲಿ ಶುದ್ಧ ನೀರು ದೊರೆಯುವಿಕೆ ಪ್ರಮಾಣ ಸಂಖ್ಯೆ ಶೇಕಡಾ 100ರಷ್ಟು ಪ್ರಮಾಣ ಸಾಧಿಸಿದ್ದೇವೆ. ಭಾರತದಲ್ಲಿರುವ ಗುಡಿಸಲುಗಳು ಮಾಯವಾಗಿ ಪಕ್ಕಾ ಮನೆಗಳ ಸಂಖ್ಯೆ ಶೇಕಡಾ 100ರಷ್ಟು ಸಾಧಿಸಿದ್ದೇವೆ. ಕೃಷಿ, ಕೃಷಿಯೇತರ ಕಾರ್ಮಿಕರ ತಲಾ ಆದಾಯದಲ್ಲಿ ಗಣನೀಯ ಬದಲಾವಣೆ ಮಾಡುವಲ್ಲಿ ನಮ್ಮ ಸರಕಾರ ಯಶಸ್ವಿಯಾಗಿದೆ.
ನಮ್ಮ ಭಾರತ ಸರಕಾರದ ಬಾಲವಾಡಿ ಕೇಂದ್ರಗಳು ಕ್ರಿಯಾತ್ಮಕಗೊಳಿಸಿದ್ದೇವೆ. ಅಂಗನವಾಡಿ ಹಾಗೂ ಪ್ರಾಥಮಿಕ ಶಿಕ್ಷಕರ ಸಂಬಳ ಹೆಚ್ಚುಗೊಳಿಸಿ ಅವರಿಗೆ ಪ್ರೋತ್ಸಾಹ ನೀಡಿದ್ದೇವೆ. ಭಾರತದಲ್ಲಿ ಅಪೌಷ್ಠಿಕತೆ ತಡೆಯಲು ಅಂಗನವಾಡಿಗಳಿಗೆ ಅಪೌಷ್ಠಿಕ ಮಕ್ಕಳಿಗಾಗಿ ಹಾಲೂ ಮತ್ತಿತರ ಸೌಲಭ್ಯ ಕೊಡಲಾಗುತ್ತಿದೆ. ಭಾರತದಲ್ಲಿ ಅಪೌಷ್ಠಿಕತೆಗೆ ಪೌಷ್ಠಿಕಾಂಶಗಳ ಜೊತೆಗೆ, ಮಕ್ಕಳಿಗೆ ಹಾಗೂ ಪೋಷಕರಿಗೆ ಆರೋಗ್ಯ & ನೈರ್ಮಲ್ಯದ ಬಗ್ಗೆ ಸಂವೇದನೆ ನೀಡಲು ಹೆಚ್ಚಿನ ಗಮನ ನೀಡಲಾಗಿದೆ. ಭಾರತದಲ್ಲಿ ಪ್ರತಿ ರಂಗಕ್ಕೂ ಒಂದೊಂದು ಇಂಟಲಿಜೆನ್ಸ್ ಬ್ಯೂರೋ ತೆಗೆಯಲಾಗಿದೆ. ಅದರ ಮೂಲಕ ಜನರ ಸಮಸ್ಯೆಗಳಿಗೆ ನೇರವಾಗಿ ಪ್ರಧಾನಿಮಂತ್ರಿಯೇ ಉತ್ತರ ಕೊಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲಿ ನಿಮ್ಮ ಎಲ್ಲಾ ಕುಂದುಕೊರತೆಗಳನ್ನು ನಿವಾರಿಸಲು ಶ್ರಮವಹಿಸಲಾಗಿದೆ.
ಸ್ನೇಹಿತರೆ ಈ ದೇಶದ ಐತಿಹಾಸಿಕ ನೆಲೆಯನ್ನು ಗಮನಿಸಿದಾಗ ಅಘಾದವಾದ ಭಾವನೆ ಮೂಡುತ್ತದೆ. ಈ ದೇಶದ ನಡೆ, ನುಡಿ, ಭಾಷೆ, ಸಂಸ್ಕೃತಿ ಇಡಿ ಪ್ರಪಂಚವೇ ಕಣ್ಣರಳಿಸಿ ನೋಡುವಂತಹದ್ದಿದೆ. ಈ ಭಾರತವು ಗೋದಾವರಿಯಿಂದ ಕೃಷ್ಣೆಯವರೆಗೆ ಸಮೃದ್ಧವಾಗಿ ಬೆಳೆದು ಮೈದುಂಬಿ ನಿಂತಿದೆ. ನೋಡುಗರ ಕಣ್ಣಸೆಳೆಯುವ ತಾಣಗಳು ಈ ದೇಶದಲ್ಲಿವೆ. ಇಂತಹ ಸುಸಂಸ್ಕೃತ ಭಾರತ ಎಲ್ಲಾ ರಂಗದಲ್ಲೂ ಇಡಿ ಪ್ರಪಂಚಕ್ಕೆ ಮಾದರಿಯಾಗಲೂ ಇನ್ನು ಎರಡು ಹೆಜ್ಜೆ ಇಡುವ ಅವಶ್ಯಕತೆಯಿದೆ. ಇದಕ್ಕಾಗಿ ನಾವೆಲ್ಲರೂ ನಮ್ಮ ನಮ್ಮ ಮನೆ ಮನಗಳಿಂದಲೇ ಶ್ರಮವಹಿಸಬೇಕಾದ ಅಗತ್ಯವಿದೆ. ಬದಲಾವಣೆಯು ಪ್ರತಿಯೊಬ್ಬರ ಮನದೊಳಗೆ ಮೂಡಬೇಕಾದ ಅವಶ್ಯಕತೆಯಿದೆ. ಈ ದೇಶದ ಹಿತದೃಷ್ಠಿಯಿಂದ ದೇಶಕ್ಕಾಗಿ ನಾನು ಮಾಡಬೇಕಾದ ಕೆಲಸ ಶ್ರದ್ಧೆ ನಿಷ್ಠೆಯಿಂದ ಮಾಡೋಣ, “ನಾವು ಬದಲಾದರೆ, ನಾಡು ತಾನಾಗಿಯೇ ಬದಲಾಗುತ್ತದೆ” ಒಮ್ಮೆ ಯೋಚಿಸಿ ನೋಡಿ
“ದೇಶ ಸೇವೆಯೇ ಈಶ ಸೇವೆ” ಹೇಳೊದ್ದಕ್ಕೆ ಸುಲಭ ಆದರೆ ಮಾಡೋದ್ದಕ್ಕೆ ಕಷ್ಟ ಅನಿಸಬಹದು ಆದರೆ ಎಲ್ಲವೂ ಸುಲಭ, ಮಾಡುವ ಮನಸ್ಸಿದ್ದರೆ ಮಾತ್ರ. ಈ ದೇಶದಲ್ಲಿ ಇದೀಗ ಎರಡು ಪರ್ವಗಳು ಕಾಣುತ್ತಿವೆ. ಒಂದು ರಾಜ್ಯ ಸರಕಾರದ ಎರಡು ವರ್ಷ ಮತ್ತು ಕೇಂದ್ರ ಸರಕಾರದ ಒಂದು ವರ್ಷ. ಈ ಎರಡು ಪರ್ವಗಳನ್ನು ನೆನಸಿಕೊಂಡು ನಿನ್ನೆ ನಿದ್ರೆಗೆ ಜಾರಿದಾಗ ನನಗೆ ಕನಸಿನೊಳಗೆ ಹೊಳೆದದ್ದು ಅಕ್ಷರ ರೂಪಕ್ಕೀಳಿಸುವ ಪ್ರಯತ್ನ ಮಾಡಿದ್ದೇನೆ. ಇದು ಒಂದು ಕನಸೇ ಆದರೂ ಕನಸುಗಳನ್ನು ಸಾಕಾರಗಳಿಸುವ ರಾಜಕೀಯ ದೂರಿಣರು ನಮಗೆ ಬೇಕು ಅನಿಸುವುದಿಲ್ಲವೆ?
-ಕೆ.ಎಂ.ವಿಶ್ವನಾಥ ಮರತೂರ.
ಲೇಖಕರು.
ಮು: ಪೋ: ಮರತೂರ.
ತಾ: ಚಿತ್ತಾಪೂರ ಜಿ: ಕಲಬುರಗಿ 585229
ಮೂ: 9686714046