ಮಾನ್ಯ ಪ್ರಧಾನಿಗಳು ತಮ್ಮ ಪ್ರಭಾವಿ ಭಾಷಣದ ಜೊತೆಗೆ ಹಲವು ಜನಪರ ಕಾಳಜಿಯುಳ್ಳ ದೇಶದ ಅಭಿವೃದ್ಧಿ ಮಾಡುವ ಯೋಜನೆಗಳನ್ನು ಜಾರಿಗೆ ತಂದರು. ದೇಶದ ಬಗ್ಗೆ ಅವರಿಗಿರುವ ಕಾಳಜಿ, ದೂರದೃಷ್ಠಿ, ಮುಂದಾಲೋಚನೆಗಳು ಜನಮೆಚ್ಚುಗೆಗೆ ಪಾತ್ರವಾದವು. ಇಡಿ ಭಾರತ ಹೇಗೆ ಅಭಿವೃದ್ಧಿ ಹೊಂದಬಹುದು ಯಾವ ಕ್ಷೇತ್ರದಲ್ಲಿ ಯಾವ ರೀತಿಯ ಅಭಿವೃದ್ಧಿ ಮಾಡಬೇಕು ಎಂಬ ಯೋಜನೆಗಳನ್ನು ರೂಪಿಸುವಲ್ಲಿ ಮೋದಿ ಯಶಸ್ವೀಯಾದರು. ಆಡಳಿತ ಹಿಡಿದ ಹೊಸದರಲ್ಲಿ ದೊಡ್ಡ ಪ್ರಮಾಣದ ಯೋಜನೆಗಳನ್ನೇ ಕೈಗೆತ್ತಿಕೊಂಡರು. ತಮ್ಮ ಪ್ರಧಾನಿ ಹುದ್ದೆಯಿಂದ ಹಿಡಿದು ಸಚಿವರುಗಳ ಖಾತೆಗಳ ವಿಲೆವಾರಿಯಲ್ಲಿಯೂ ಜಾಣತನ ತೋರಿದರು. ಖಾತೆಗಾಗಿ ಖ್ಯಾತೆ ತೆಗೆಯುವ ಯಾವ ಒಬ್ಬ ಸಂಸದರು ಬೆಳಕಿಗೆ ಬರಲಿಲ್ಲ ಎಲ್ಲರೂ ಮೋದಿಯವರ ಮುಂದಾಳತ್ವದಲ್ಲಿ ದೇಶದ ಅಭಿವೃದ್ಧಿ ಮಾಡುವತ್ತ ಚಿತ್ತ ಹರೆಸಿದರು. ಒಂದು ವರ್ಷದಲ್ಲಿ ಕಳಂಕಿತವಿಲ್ಲದ ಆಡಳಿತವನ್ನು ಇಡಿ ದೇಶಕ್ಕೆ ನೀಡುವಲ್ಲಿ ಮೋದಿ ಟೀಮ್ ಯಶಸ್ವೀಯಾಯಿತು.
ಜನಧನ್ ಎಂಬ ಬೃಹತ್ ಯೋಜನೆ ಮೊದಲಿಗೆ ಇಡಿ ದೇಶದ ಜನತೆಯಲ್ಲಿ ಸಂತಸ ಮೂಡಿಸಿತು. ಇದು ಇಲ್ಲಿಯವರೆಗೂ ಯಾರು ಯೋಚನೆ ಮಾಡಿರದ ಯೋಜನೆಯಿದು. ದೇಶದ ಸಾಮಾನ್ಯ ಪ್ರಜೆಯೂ ತನ್ನದೇ ಆದ ಅಕೌಂಟ್ ಹೊಂದುವುದು ಒಂದು ಯೋಚನೆ ಮೋದಿಯವರದ್ದು. ಅಕೌಂಟ್ ಮಾಡಿಸುವುದು ಸಣ್ಣ ಕೆಲಸವೇ ಆದರೂ ಅದರ ಮಹತ್ವ ಅರೆಯುವ ಕಾಲವನ್ನು ಮೋದಿ ಈ ಯೋಜನೆ ಮೂಲಕ ಹೊರತಂದರು. ಈ ಅಕೌಂಟ್ ಕ್ರಿಯೇಷನ್ ಮೂಲಕ ಎಲ್ಲರಿಗೆ ಸಮಬಾಳು ಎಂಬ ಮಂತ್ರ ಜನರ ಮನದೊಳಗೆ ಮೂಡಿಸಿದರು. ಒಂದೇ ವರ್ಷದಲ್ಲಿ ಕೋಟಿ ಕೋಟಿ ಅಕೌಂಟ್ ಕೊಟ್ಟು ಇತಿಹಾಸ ಬರೆದರು.
ಮೇಕ್ ಇನ್ ಇಂಡಿಯಾದ ಮೂಲಕ ಕಾರ್ಪೋರೇಟ್ ವಲಯವನ್ನು ಭಾರತದ ಮಡಿಲಿಗೆ ತಂದು ಹಾಕಿದವರು ಮೋದಿ. ನಮ್ಮ ದೇಶದಲ್ಲಿ ಹೂಡಿಕೆ ಮಾಡುವವರ ಕೊರತೆಯನ್ನು ಕಂಡ ಮೋದಿ ಮೇಕ್ ಇಂಡಿಯಾದ ಮೂಲಕ ಹಲವು ರೀತಿಯ ಸದಾವಕಾಶಗಳನ್ನು ಭಾರತದ ಜನರಿಗೆ ಮೋದಿ ನೀಡಿದರು. ಭಾರತವನ್ನು ಇಡಿ ಪ್ರಪಂಚವೇ ತಿರುಗಿ ನೋಡುವಂತೆ ಮಾಡುವಲ್ಲಿ ಮೋದಿ ಯಶಸ್ವೀಯಾದರು. ಸರಕಾರ ಸೋಟಬೂಟ ಹಾಕಿದರು ಪರವಾಗಿಲ್ಲ ಯೋಜನೆಗಳು ಜನಪರವಾಗಿವೆ ಎಂಬ ಮಾತು ಅಕ್ಷರಸ ಸತ್ಯವಾಗಿದೆ. ಸಾಮಾನ್ಯ ಜನರ ಜೀವನಮಟ್ಟ ಸುಧಾರಿಸಲು ಹಲವು ಪಿಂಚಣಿ ಯೋಜನೆಗಳು ಎಂದಿಗೂ ಮಾಸದ ಅವಕಾಶಗಳನ್ನು ತೆರೆದುಕಳ್ಳುವಂತೆ ಮಾಡಿದರು. ಪುರುಷ ಮಹಿಳೆ ವೃದ್ಧರು ಮಕ್ಕಳು ಎಲ್ಲರನ್ನು ಒಳಗೊಳ್ಳುವ ಅವರ ಯೋಜನೆಗಳು ದೇಶವನ್ನು ನೈಜ ಅಭಿವೃದ್ಧಿಯತ್ತ ಕೊಂಡಯ್ಯೂತ್ತವೆ ಎಂದರೆ ತಪ್ಪಾಗಲಾರದು.
ಭಾರತದ ಪ್ರತಿ ರಾಜ್ಯವು ಕೌಶಲ್ಯ ಅಭಿವೃದ್ಧಿ ಶಿಕ್ಷಣ ಅಭಿವೃದ್ಧಿ ಮಾಡುವಲ್ಲಿ ಮೋದಿ ಮಂತ್ರ ಯಶಸ್ವೀಯಾಯಿತು. ಕಪ್ಪು ಹಣ ವಾಪಸ್ಸು ತರುವಲ್ಲಿ ಮೋದಿಯವರು ಇಟ್ಟಿರುವ ದಿಟ್ಟ ಹೆಜ್ಜೆ ದೇಶದ ಜನರನ್ನು ಸಂತಸದಲ್ಲಿ ಮುಳಗಿಸಿತು. ಇದೀಗ ಅನೇಕ ಭಾರತೀಯ ಹೆಸರು ಬಹಿರಂಗವಾಗುತ್ತಿದ್ದು ಆದಷ್ಟು ಬೇಗ ಭಾರತದ ಕಪ್ಪುಹಣ ವಾಪಸ್ಸು ಬರುವ ಸಾಧ್ಯತೆಗಳಿವೆ. ಮೋದಿಯವರು ದೇಶದಲ್ಲಿ ಉದ್ಯೋಗ, ಶಿಕ್ಷಣ ಅವಕಾಶಗಳನ್ನು ಹೇರಳವಾಗಿ ತೆರೆದಿಟ್ಟರು. ಯುವಕರು ಇಂದು ಅವರ ಅರ್ಹತೆಗೆ ತಕ್ಕಂತಹ ಉದ್ಯೋಗ ಪಡೆಯುವ ಅವಕಾಶಗಳನ್ನು ಸೃಷ್ಠಿಸಿದರು.
ಈ ದೇಶದಲ್ಲಿ ಭ್ರಷ್ಠಾಚಾರವನ್ನು ಮಟ್ಟಹಾಕುವ ಕೆಲಸ ಮೋದಿ ಮಾಡುವಲ್ಲಿ ಯಶಸ್ವೀಯಾದರು. ಕಾಂಗ್ರೆಸ್ ಭ್ರಷ್ಠಾಚಾರ ಮಾಡಿದೇ ಎಂದು ಹೇಳುತ್ತ ಕೂರದೇ ಸ್ವತ: ಭ್ರಷ್ಟಾಚಾರ ಮಾಡದೇ ತಮ್ಮ ಸಚಿವರಿಗೂ ಈ ಪರಿಪಾಠ ಹೇಳುವತ್ತ ಗಮನಹರೆಸಿದರು ಮಾನ್ಯ ಮೋದಿ. ಕಳೆದ ಒಂದು ವರ್ಷದಲ್ಲಿ ಭ್ರಷ್ಠಾಚಾರ ಮುಕ್ತ ಭಾರತ ಕಟ್ಟುವಲ್ಲಿ ನರೇಂದ್ರ ಮೋದಿ ಯಶಸ್ವೀಯಾದರು. ಒಂದು ವರ್ಷ ಕಳೆದ ಮೋದಿ ಪ್ರಜಾಪ್ರಭು ಮೆಚ್ಚುವಂತೆ ಮಾಡಿತು. ಕೋಟು ತೊಟ್ಟ ಮೋದಿ ಕೋಟಿ ಕೋಟಿ ಜನರ ಆಸೆಗಳನ್ನು ಪೂರೈಸುವತ್ತ ಗಮನಕೊಟ್ಟಿದ್ದು ಇದೀಗ ಒಂದು ವರ್ಷದಲ್ಲಿ ಹಲವಾರು ಜನರಪ ಕಾಳಜಿಯ ಯೋಜನೆಗಳು ನೀಡಿದ್ದಾರೆ.
ಬೇಟಿ ಬಚಾವೊ , ಬೇಟಿ ಪಡಾವೊ, ಸಮಾನ ಶಿಕ್ಷಣ, ಮಹಿಳಾ ಶಿಕ್ಷಣ, ಗುಜರಾತಿನ ಮಾದರಿ ಸರಕಾರವನ್ನು ನೀಡುವತ್ತ ಇಡಿ ವರ್ಷ ಮೋದಿಯವರು ತಮ್ಮ ತದೇಕಚಿತ್ತ ಹರೆಸಿದರು. ಕೃಷಿ, ನಗರಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಬಗ್ಗೆ ದೇಶದ ಆರೋಗ್ಯದ ಬಗ್ಗೆ ಚಿಂತನೆ ಮಾಡಿರುವ ಮೋದಿ. ಒಂದು ವರ್ಷದಲ್ಲಿ ಹಲವಾರು ಕೆಲಸಗಳನ್ನು ಶ್ರದ್ಧೆಯಿಂದ ಜನರ ಆಶೋತ್ತರಗಳನ್ನು ಇಡೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಲವಾರು ಜನರು ಹಲವು ರೀತಿಯಲ್ಲಿ ಟೀಕಿಸಿದರು ತೆಲೆಗೊಡದ ಮೋದಿ ಒಂದು ವರ್ಷದಲ್ಲಿ ಒಬ್ಬ ಪ್ರಧಾನಿ ಮಾಡಬೇಕಾದ ಅಗತ್ಯ ಅವಶ್ಯಕ ಕೆಲಸಗಳನ್ನು ಮಾಡಿದ್ದಾರೆ. ಭಾರತಕ್ಕೆ ಮುಂದಿನ ಅನೇಕ ದಾರಿಗಳನ್ನು ಸುಗಮಗೊಳಿಸಿದ್ದಾರೆ. ಸ್ಥಿರ ಮತ್ತು ಉತ್ತಮ ಆಡಳಿತವನ್ನು ನೀಡಿದ್ದಾರೆ. ಪ್ರತಿಯೊಬ್ಬ ಪ್ರಜೆಯೂ ಸಂತಸಗೊಳ್ಳುವ ಹಾಗೆ ಯೋಜನೆಗಳನ್ನು ರೂಪಿಸಿದ್ದಾರೆ. ಕಾಂಗ್ರೆಸ್ನ ದಶಕದ ಆಡಳಿತಕ್ಕೆ ನಾಚಿಕೆ ಮೂಡುವಷ್ಟು ಕೆಲಸದ ಯೋಜನೆ ಹಾಕಿದ್ದಾರೆ ಎಂಬ ಸತ್ಯ ಮರೆಯುವಂತಿಲ್ಲ.
ಕೆ.ಎಂ.ವಿಶ್ವನಾಥ ಮರತೂರ.
ಯುವ ಬರಹಗಾರರು.
ಮೂ: 9686714046