ಆದರೆ ನಮ್ಮ ಹಳ್ಳಿಗಳಲ್ಲಿ ಮಹಿಳಾ ಶಿಕ್ಷಣವು ಕುಂಟಿತವಾಗುವ ಸತ್ಯ ಮಾತ್ರ ಮರೆಯುವಂತಿಲ್ಲ. ಹಳ್ಳಿಗಳಲ್ಲಿ ಸಾರ್ವಜನಿಕರು ತಮ್ಮ ಮನೆಯ ಚಿಕ್ಕ ಚಿಕ್ಕ ಕೆಲಸಗಳಿಗೆ ತಮ್ಮ ಹೆಣ್ಣು ಮಕ್ಕಳನ್ನು ಬಳಸಿಕೊಂಡು ಅವರ ಶಿಕ್ಷಣಕ್ಕೆ ಕೊಡಲಿಪೆಟ್ಟು ಕೊಡುತ್ತಿದ್ದಾರೆ. ಮನೆಯ ಸಣ್ಣ ಸಣ್ಣ ಕೆಲಸಗಳನ್ನು ಮಾಡಿಸುವ ನೆಪದಲ್ಲಿ ನಮ್ಮ ಹೆಣ್ಣು ಮಕ್ಕಳು ಶಾಲೆಯೆಂಬ ನಗುವನ್ನು ಕಳೆದುಕೊಂಡು ತಮ್ಮ ಮನೆಯ ಮಗುವನ್ನು ತಮ್ಮತ್ತ ಎಳೆದುಕೊಳ್ಳುವಲ್ಲಿ ನಿರತರಾಗಿದ್ದಾರೆ.
ಕರ್ನಾಟಕದ ಜನಗಣತಿಯಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿದೆ. ಇನ್ನು ಹುಡುಗೀಯರ ಸಂಖ್ಯೆಯಲ್ಲಿಯೂ ಏರುಮುಖವಿದೆ. ಪ್ರತಿವರ್ಷ ಹಲವಾರು ಯೋಜನೆಗಳು ಮಹಿಳೆಯರಿಗಾಗಿಯೇ ಮಾಡಿರುವುದರಿಂದ ಅವರ ಜನನ ಪ್ರಮಾಣದಲ್ಲಿಯೂ ಏರುಮುಖವಾಗಿದೆ. ಇದರ ಜೊತೆಗೆ ಶಾಲೆ ಬಿಡುವ ಹೆಣ್ಣು ಮಕ್ಕಳ ಸಂಖ್ಯೆಯಲ್ಲಿಯೂ ಗಣನೀಯವಾಗಿದೆ. ಪ್ರತಿ ವರ್ಷ ಶಾಲೆ ಬಿಡುವ ಮಕ್ಕಳ ಸಂಖ್ಯೆ ಏರುತ್ತಿದೆ. ಐದನೇಯ, ಏಳನೇಯ ಮತ್ತು ಹತ್ತನೇಯ ತರಗತಿಗೆ ಬಂದಾಗ ಹೆಣ್ಣು ಮಕ್ಕಳು ಶಾಲೆ ಬಿಡುತ್ತಾರೆ. ಹಳ್ಳಿಗಳಲ್ಲಿನ ವಾತವರಣ ಮಕ್ಕಳನ್ನು ಶಾಲೆ ಬಿಡಲು ನಾನಾ ರೀತಿಯ ಕಾಣಗಳನ್ನು ನಿರ್ಮಾಣ ಮಾಡುತ್ತದೆ.
ಶಾಲೆ ಬಿಡುವ ಮಕ್ಕಳಲ್ಲಿ ಜಾತಿವಾರು ಲೆಕ್ಕಾಚಾರವು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಹಿಂದುಳಿದ ವರ್ಗ, ಪರಿಶಿಷ್ಠರು ಈ ಸಂಖ್ಯೆಯಲ್ಲಿ ಮುಂದೆಯಿದ್ದಾರೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಹೆಚ್ಚು ಹೆಣ್ಣು ಮಕ್ಕಳೇ ಶಾಲೆ ಬಿಡುತ್ತಾರೆ. ನಾವು ಹಳ್ಳಿಗಳ ಶಾಲೆಗೆ ಭೇಟಿ ನೀಡಿದರೆ, ಸಾಮಾನ್ಯವಾಗಿ ಕೆಲವು ಅಂಶಗಳು ಗಮನಕ್ಕೆ ಬರುತ್ತವೆ. ಮನೆಯಲ್ಲಿ ಬೆಳೆಗ್ಗೆ ಮತ್ತು ಸಂಜೆಗೆ ಅಡುಗೆ ಮಾಡಲು, ಮನೆಯ ಕೆಲಸ, ಚಿಕ್ಕ ತಮ್ಮನನ್ನು ನೋಡಿಕೊಳ್ಳಲು, ಹೊಲಕ್ಕೆ ಬುತ್ತಿ ಕೊಡಲು, ನಳದ ನೀರು ಬರದಿದ್ದಾಗ, ಅಪ್ಪ ಅಮ್ಮ ಮನೆಯಲ್ಲಿ ಇಲ್ಲದಾಗ, ಜಾತ್ರೆ ಮತ್ತು ಸಂತೆಗೆ ಹೋಗಬೇಕಾದಾಗ, ಮದುವೆಗೆ ಹೋಗಬೇಕಾದಾಗ, ಹೀಗೆ ಅತೀ ಚಿಕ್ಕ ಚಿಕ್ಕ ಕಾರಣಕ್ಕಾಗಿಯೇ ಮಕ್ಕಳು ಶಾಲೆ ಬಿಡುತ್ತಾರೆ.
“ಏನ್ ಸಾರ್ ನಮ್ಮ ಮಕ್ಕಳು ಒಂದು ದಿನ ಶಾಲೆ ಬಿಟ್ಟರೆ ಏನಾಗುತ್ತದೆ?” ಎಂಬ ಮೊಂಡುವಾದ ಮಾಡುವ ಪಾಲಕರಿದ್ದಾರೆ. ಐದಾರು ಮಕ್ಕಳಲ್ಲಿ ಒಂದು ಮಗು ಶಾಲೆ ಬಿಟ್ಟರೆ ಏನು ಆಗ್ತ್ತಾದ ಬಿಡ್ರಿ ಸಾರ್ ಎನ್ನುತ್ತಾರೆ. ಆದರೆ ಚಿಕ್ಕ ಚಿಕ್ಕ ಕಾರಣಗಳೆ ಹೇಗೆ ಮಗುವಿನ ಜೀವನದಲ್ಲಿ ಆಟ ಆಡುತ್ತವೆ ಎನ್ನುವುದು ನಮ್ಮ ಅರಿವಿಗೆ ಬರುವುದೇಯಿಲ್ಲ.
ನಾವು 2011ರಲ್ಲಿ ಒಂದು ಶಾಲೆಯಲ್ಲಿ ನಮ್ಮ ಕಾರ್ಯಕ್ರಮಗಳನ್ನು ಮಾಡುವಾಗ ನಡೆದ ಸತ್ಯ ಘಟನೆಯನ್ನು ನಿಮ್ಮ ಮುಂದೆ ಹೇಳಲೇಬೇಕು. ಮಗುವಿನ ತರಗತಿ ಐದು ಈ ಹಿಂದೆ ಎರಡು ವರ್ಷ ಬೆಂಗಳೂರಿಗೆ ವಲಸೆ ಹೋಗಿತ್ತು ಆಗತಾನೆ ಜೂನ್ ತಿಂಗಳಲ್ಲಿ ಶಾಲೆಗೆ ಭೇಟಿ ನೀಡಿದ ಪಾಲಕರು ಇಲ್ಲಾ ಸಾರ್ ಈ ವರ್ಷ ಎಲ್ಲಿಗೂ ಹೋಗಲ್ಲಾ ನಮ್ಮ ಹುಡುಗಿಗೆ ಹೆಸರು ಹಚ್ಚಿಕೊಳ್ಳಿ ಎಂದರು. ಮುಖ್ಯ ಗುರುಗಳು ನೋಡಿ ಸರಕಾರ ಈಗ ಎಲ್ಲವೂ ತುಂಬಾ ಸ್ಟಿಕ್ಟ್ ಮಾಡಿದೆ ನೀವು ಈಗಾಗಲೇ ಮೂರು ವರ್ಷವಾಯಿತು ಹೆಸರು ಹಚ್ಚತ್ತೀರಿ ವಲಸೆ ಹೋಗುತ್ತೀರಿ ಶಾಲೆಯ ಬಟ್ಟೆ ಪುಸ್ತಕ ಒಯಿತ್ತೀರಿ ಆದರೆ ಮಗಳಿಗೆ ಶಾಲೆಗೆ ಕಳಿಸೋದಿಲ್ಲ ಈ ಬಾರಿಯಾದರು ಬಿಡಿಸಬೇಡಿ ಎಂದು ತಿಳುವಳಿಕೆ ಹೇಳಿದರು.
ಇದನ್ನು ಒಪ್ಪಿದ ಪಾಲಕರು ಮಗುವಿಗೆ ಐದನೆ ತರಗತಿ ನೇರವಾಗಿ ಹಾಕಿದರು ಶಾಲೆ ಪ್ರಾರಂಭವಾದ ಎರಡುವಾರ ಮಗು ಶಾಲೆಗೆ ಕೂಡ ಬಂತು ನಾಲ್ಕನೆಯ ವಾರಕ್ಕೆ ಎರಡು ದಿನ ಬರಲಿಲ್ಲ, ಮನೆಗೆ ಬೇಟಿ ನೀಡಿದಾಗ ಮನೆಯಲ್ಲಿ ಯಾರು ಇರಲಿಲ್ಲ ಸರ್ ಅದಕ್ಕೆ ಎಂದರು, ಮತ್ತೇ ಮೂರು ದಿನ ಬರಲಿಲ್ಲ ಕೇಳಿದ್ದಕ್ಕೆ ನಮ್ಮ ಚಿಕ್ಕ ಮಗನಿಗೆ ಎತ್ತಿಕೊಳ್ಳೋರು ಯಾರು ಇಲ್ಲ ಸರ್ ಎಂದರು, ಐದನೇಯ ವಾರಕ್ಕೆ ಮಗುವು ಈಗಾಗಲೇ ಮನಸ್ಸು ಮುರಿದುಹೋಗಿತ್ತು ಕೊನೆಗೆ ಮಗು ನಾನು ಶಾಲೆ ಹೋಗಲ್ಲಾ ಅಲ್ಲಿ ಎಲ್ಲರೂ ಚೆನ್ನಾಗಿ ಓದುತ್ತಾರೆ ನನಗೆ ಓದಲು ಬರೆಯಲು ಅವರಷ್ಟು ಬರೋದಿಲ್ಲ ನನಗೆ ಬೇಸರ ಅನಿಸುತ್ತದೆ ನಾನು ಶಾಲೆಗೆ ಯಾವುದೇ ಕಾರಣಕ್ಕೂ ಹೋಗುವುದಿಲ್ಲ ಎಂದು ನಿರ್ಧಸಿಬಿಟ್ಟಿತು.
ಮುಂದಿನ ಎರಡು ವರ್ಷ ಮಗುವು ಹಾಗೂ ಪಾಲಕರು ಇದೆ ಕಾಯಕ ಮುಂದುವರೆಸಿದರು. ಮುಖ್ಯ ಗುರುಗಳು ಸರಕಾರ ಹೇಳಿದ ಎಲ್ಲ ಕಾರ್ಯಕ್ರಮಗಳು ಉಪಯೋಗಿಸಿ ಮಗು ಶಾಲೆಗೆ ಬರಲು ಪ್ರೋತ್ಸಾಹ ನೀಡಿದರು ಫಲಕಾಣಲಿಲ್ಲ. ಆದರೂ ಆ ಹುಡುಗಿ ಪ್ರತಿ ವರ್ಷ ಪರೀಕ್ಷೆಗೆ ತಪ್ಪದೇ ಹಾಜರಾದಳು ಜೊತೆಗೆ ಪಾಸು ಕೂಡ ಆದಳು ಏಕೆಂದರೆ ಹತ್ತನೇಯ ತರಗತಿವರೆಗೂ ಫೇಲ್ ಮಾಡಬಾರದು ಅಲ್ಲವಾ? ಮುಂದೆ ಈ ಊರಿನಿಂದ ಬೇರೆ ಊರಿಗೆ ಎಂಟನೇಯ ತರಗತಿಗೆ ಪ್ರವೇಶ ಪಡೆದಾಗ ಆ ಪ್ರೌಢ ಹಂತದಲ್ಲಿ ಮಕ್ಕಳನ್ನು ಗಮನಿಸಿದ ಈ ಹೆಣ್ಣು ಮಗು ದಿಗ್ಬ್ರಾಂತಳಾದಳು ಉಳಿದ ಮಕ್ಕಳ ಮಾತುಗಾರಿಕೆ, ಕೌಶಲ್ಯ, ವಿದ್ಯೆ, ಜಾಣತನ ನನಗೆ ಬರಲಿಲ್ಲ ಎಂಬ ಅಸಹಾಯಕತೆ ಅವಳನ್ನು ತುಂಬಾ ಕಾಡಿತು. ಆ ಮುಗ್ಧ ಮನಸ್ಸಿನ ಮೇಲೆ ಘೋರ ಪರಿಣಾಮ ಬೀರಿತು. ತನ್ನ ಹೆತ್ತವರಿಗೆ ಹಿಡಿ ಶಾಪ ಹಾಕುತ್ತಾ ತಾನು ಏಕೆ ಶಾಲೆ ಕಲಿಯಲಿಲ್ಲ ಎಂಬ ಕೊರಗಿನಲ್ಲಿಯೇ ಇಂದಿಗೂ ಮೂಕಳಾಗಿ ಅದೇ ಗ್ರಾಮದವನೊಬ್ಬನನ್ನು ಮದುವೆಯಾಗಿ ತನ್ನ ಒಬ್ಬಳೇ ಮಗಳಿಗೆ ತಪ್ಪದೇ ದಿನಾಲು ಶಾಲೆಗೆ ಕಳುಹಿಸುತ್ತಾಳೆ. ಈ ಇಬ್ಬರೂ ಮಕ್ಕಳನ್ನು ಈಗಲೂ ನೋಡಿದಾಗಲೆಲ್ಲ ಮಹಿಳಾ ಶಿಕ್ಷಣದ ಬಗ್ಗೆ ಅವರ ಸಬಲೀಕರಣದ ಬಗ್ಗೆ ಮಾತನಾಡುವವರಿಗೆ ಇಂತಹ ಅನೇಕ ಹೆಣ್ಣು ಮಕ್ಕಳ ಬದುಕು ತೋರಿಸಬೇಕು ಎನಿಸುತ್ತದೆ ಅಲ್ಲವಾ?