ಆಗ ನಡುವೆ ..... ಮಾತಾಡಿ ಓ ನಾನಂತು ಸ್ವರ್ಗದಲ್ಲಿದ್ದ ಅನುಭವ ಇದೆ. ಈಗ ನಾನು ಪ್ರಪಂಚದಲ್ಲಿರುವ ಎಲ್ಲರಿಗಿಂತಲು ಸಂತೋಷವಾಗಿದ್ದೇನೆ ಎಂದು ಭಾವಿಸುತ್ತೇನೆ ಎಂದಿತು ಕಾಗೆ . ಹೀಗೆ ಮಾತಿನ ನಡುವೆ ನವಿಲು ಹೇಳುತ್ತದೆ ನಡೆ ಬೇಗ ಎಲ್ಲಿಯಾದರು ಹೋಗಿ ಆಹಾರ ತಿನ್ನೋಣ ತುಂಬಾ ಹಸಿವಾಗುತ್ತಿದೆ ಎಂದಿತು .
ಆಗ ಕಾಗೆ ಸಂತೋಷದಿಂದ ಕೊಕ್ಕೆ ಹಾಕಿ ನಡೆ ಎಂದಿತು ಹಾಗೆ ಇಬ್ಬರು ಪ್ರೇಮಿಗಳು ಮಾತನಾಡುತ್ತ ಆಹಾರದ ಸ್ಥಳಕ್ಕೆ ಬಂದವು. ಅಷ್ಟರಲ್ಲೆ ಅಲ್ಲಿ ಅದೇ ಆಹಾರಕ್ಕಾಗಿ ಬೆಳ್ಳಕ್ಕಿಗಳ ದಂಡೊಂದು ಓಡಿ ಬಂದಿತು .
ಇಲ್ಲಿ ಈಗಾಗಲೆ ಆಹಾರ ಸೇವಿಸುತ್ತಿದ್ದ ಈ ಕಪ್ಪು ಬಿಳುಪಿನ ಪ್ರೆಮಿಗಳನ್ನು ನೋಡಿ ಅಪಹಾಸ್ಯ ಮಾಡಲು ಸಂಚುಹೂಡಿದವು. ಅವರಿಬ್ಬರನ್ನು ನಡುವೆ ಮಾಡಿಕೊಂಡು ಸುತ್ತಲು ತಿರುಗುತ್ತಾ ಹೀಗೆ ಹೇಳಿದವು " ಏ ಅಲ್ಲಿ ನೋಡಿರೊ ಕಪ್ಪು ಕಾಗೆ ನವಿಲಿನ ಸಂಗ ಮಾಡಿ ಬಿಳಿ ಆಗಬೇಕು ಅನ್ನೋ ಆಸೆ ಪಡುತ್ತಿದೆ . “ ಇನ್ನೊಂದು ಬೆಳ್ಳಕ್ಕಿ " ಏ ಇಲ್ಲಾ, ಕಾಗೆ ನವಿಲಿನೊಂದಿಗೆ ಸರಸವಾಡಿದರೆ ಅದರಂತೆ ಬಣ್ಣಬಣ್ಣದ ಮೈ ತನಗು ಆಗಬಹುದೆಂಬ ಹುಚ್ಚು ಕಲ್ಪನೆ ಇರಬಹುದು " ಎಂದು ಹೀಯಾಳಿಸಿ ಮಾತಾಡಿದವು . ಮತ್ತೊಂದು ಬೆಳ್ಳಕ್ಕಿ ಅಷ್ಟರಲ್ಲೆ " ಎಲ್ಲಾ ಅವರವರ ಕರ್ಮ ಯಾರು ಏನು ಮಾಡಲು ಸಾಧ್ಯವಿಲ್ಲಾ ಹಿಂದಿನ ಜನ್ಮದಲ್ಲಿ ಪಾಪ ಮಾಡಿದರೆ ಈ ಜನ್ಮದಲ್ಲಿ ಕಪ್ಪಾಗಿ ಹುಟ್ಟುತ್ತಾರಂತೆ . ಹುಟ್ಟುವುದು ಕಾಗೆ ಕೈಯಲ್ಲಿ ಇರಲಿಲ್ಲಾ ಅದಕ್ಕೆ ನವಿಲಿನ ಜೊತೆ ಕಟ್ಟಿ ಅದರಂತೆ ಆಗಬೇಕು ಅನಿಸಿರಬೇಕು " ಇನ್ನು ಈ ನವಿಲಿಗೆ ಬುದ್ಧಿ ಬೇಡವೆ? ಈ ಕಾಗೆ ಜೊತೆಗೆ ಸಂಗ ಮಾಡಿ ಅವರ ಸಂಬಂಧಗಳನ್ನು ಮುರಿದು ಬಂದಿದೆ, ಇದಕ್ಕೇನು ಹುಚ್ಚಾ ? ಅಲ್ಲಾ, ತಮ್ಮ ನವಿಲುಗಳಲ್ಲೆ ಎಷ್ಟೊ ಚೆಲಿವೆಯರು ಇರುವಾಗ ಇದರ ಬೆನ್ನೇಕೆ ಹತ್ತಿತೊ ಗೊತ್ತಿಲ್ಲಾ ಎನ್ನುವಷ್ಟರಲ್ಲಿ ನಡುವೆ ಬಾಯಿ ಹಾಕಿದ ಮಗದೊಂದು ಬೆಳ್ಳಕ್ಕಿ ಏ ಯಾವ ಲವ್ ಅಲ್ಲಾ, ಏನು ಇಲ್ಲಾ ಹಾಗೆ ಸುಮ್ಮನೆ ಎಂಜಾಯ್ ಮಾಡೋಣ ಇರಲಿ ಕೆಲಸಕ್ಕೆ ಬರುತ್ತೆ ಅಂತಾ ಮಜಾ ಮಾಡತ್ತಿದೆ .ಅಷ್ಟೆ ಅಲ್ಲವಾ ನವಿಲಣ್ಣ? ಎಂದಿತು.
ಹೀಗೆ ಅನೇಕ ಚುಚ್ಚು ಮಾತುಗಳಿಂದ ಇಬ್ಬರಿಗೂ ಹೀಯಾಳಿಸಿದವು . ಇದನ್ನು ಕೇಳಿದ ಇಬ್ಬರು ಮತ್ತೆ ಅತ್ತ ಇತ್ತ ನೋಡದೆ ತಮ್ಮ ಗೂಡಿನ ಕಡೆಗೆ ಓಡಿದವು ಇವರಿಗೆ ಈಗ ಎದುರು ಹಾಕಿಕೊಂಡರೆ ನಮಗೆ ತೊಂದರೆ ಯಾಕೆಂದರೆ ಅವರು ಈಗ ದೊಡ್ಡ ತಂಡವೆ ಇದೆ ಅದನ್ನು ಎದುರಿಸಿ ಸುಮ್ಮನೆ ಲಾಭವಿಲ್ಲಾ ಎಂದು ಹೊರಟವು .
ಹೀಗೆ ಕೆಲವು ದಿನಗಳು ಕಳೆದವು ಕಾಗೆ ಒಂದು ಮಗುವನ್ನು ತನ್ನ ಗರ್ಬದಲ್ಲಿ ಧರಿಸಿತು. ಇದನ್ನು ಅರಿತ ಕಾಗೆ ನೀನು ನನಗೆ ಮದುವೆಯಾಗು ನಾನೀಗ ನಿನ್ನ ಮಗುವಿಗೆ ತಾಯಿ ಆಗುತ್ತಿದ್ದೇನೆ ಎಂದು ನವಿಲಿನಲ್ಲಿ ಕೇಳಿತು. ಆದರೆ ನವಿಲು ಬೇರೆಯೇ ಉತ್ತರ ನೀಡಿತು. ಕಾಗೆ ಇದನ್ನು ಉಹಿಸಿಯೇ ಇರಲ್ಲಿಲ್ಲಾ. " ನೀನು ಕಪ್ಪು ಎಂದು ನನಗೆ ಮರಿಯಾದೆ ಸಿಗುತ್ತಿಲ್ಲಾ, ನಮ್ಮ ಸಂಬಂದಿಕರು ನನಗೆ ನಿನ್ನ ಜೊತೆಗೆ ನೋಡಲಾಗುತ್ತಿಲ್ಲಾ ಎಂದು ಹಿಯಾಳಿಸುತ್ತಿದ್ದಾರೆ ಅದಕ್ಕಾಗಿ ನಿನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಆ ಪಿಂಡವನ್ನು ತೆಗಿ ನಿನ್ನ ದಾರಿ ನಿನಗೆ ನನ್ನ ದಾರಿ ನನಗೆ ನಮ್ಮ ಮದುವೆ ಸಾಧ್ಯವಿಲ್ಲಾ ನೆಡೆದದ್ದು ಒಂದು ಕೆಟ್ಟ ಕನಸ್ಸು ಎಂದು ಮರೆತು ಬಿಡು ಎಂದಿತು.
ಈ ಮಾತು ಕೇಳಿದ ಕಾಗೆಗೆ ಸಿಡಿಲು ಬಡಿದಂತೆ ಭಾಸವಾಯಿತು. ನಾನು ನಿನಗಾಗಿ ನನ್ನ ಬಳಗವನ್ನೆಲ್ಲಾ ಬಿಟ್ಟು ಬಂದೆ ಆದರೆ ನೀನು ನನಗೆ ಮೋಸ ಮಾಡಿದೆ ಎಂದು ಗೋಗರಿಯಿತು. ತುಂಬಾ ದು:ಖದಿಂದ ನಮೃತೆಯಿಂದ ನವಿಲಿನಲ್ಲಿ ಅಂಗಾಲಾಚಿ ಬೇಡಿಕೊಂಡಿತು. ಆದರೆ ಕರುಣೆಯಿಲ್ಲದ ನವಿಲು ಒಪ್ಪಲಿಲ್ಲಾ ಬದಲಿಗೆ ಕಾಗೆಯನ್ನು ಧಿಕ್ಕರಿಸಿ ಹೋಯಿತು.
ಕಾಗೆಯ ಆಕ್ರಂಧನ ಮುಗಿಲು ಮುಟ್ಟಿತು, ತನ್ನ ದು::ಖ ತಾಳಲಾಗದೆ ""ಅಯ್ಯೋ ಶಿವನೆ ನಿನಗೆ ನನ್ನ (ರಚನೆ) ಮಾಡುವಾಗ ಬೇರೆ ಬಣ್ಣಗಳು ಸಿಗಲಿಲ್ಲವೆ ? ಅಥವಾ ನೀನು ನನಗೆ ಮೋಸ ಮಾಡಿದೆಯೋ ತಿಳಿಯದು “”. ದೇವರೆ ಮೋಸ ಮಾಡಿದಾಗ ನಾವು ಯಾರನ್ನು ಕೇಳಬೇಕು ಎಂದು ರೋಧಿಸತೊಡಗಿತು . ದಿನ ಕಳೆದಂತೆ ಕಾಗೆ ಕುಂದಿ ಹೋಯಿತು ತನ್ನ ಹೊಟ್ಟೆಯಲ್ಲಿ ಬೆಳಿಯುತ್ತಿರುವ ಈ ಮಗುವು ಹೊರಬಂದಮೆಲೆ ಈ ಸಮಾಜ ಕೇಳುವ ವಿಚಿತ್ರ ಪ್ರಶ್ನೆಗಳಿಗೆ ನಾನು ಉತ್ತರ ಕೊಡಲು ಅಸಹಾಯಕಳು ಎಂದು ಭಾವಿಸಿ ಆ ಮಗುವಿನ ಬ್ರೂಣ ಹತ್ಯೆ ಸ್ವತ: ಮಾಡುತ್ತದೆ. ಮುಗ್ದ ಜೀವವೊಂದು ಈ ಭೂಮಿಗೆ ಕಾಲಿಡುವ ಮೊದಲೆ ಸಾಯುತ್ತದೆ.
ಹೀಗೆ ಕಾಗೆಯ ಜೀವನ ಕಾಡಿನಲ್ಲಿ ಅಲ್ಲಿ ಇಲ್ಲಿ ಕಳೆಯುತ್ತದೆ .ದಿನಾಲು ನವಿಲಿನ ನೆನಪಿನಲ್ಲಿ ತನ್ನ ಜೀವನದಲ್ಲಿ ನಡೆದ ಘಟನೆ ನೆನೆಯುತ್ತಾ ದು:ಖಿಸುತ್ತಾ ಕಳಿಯುತ್ತದೆ . ಇನ್ನು ಈಗಾಗಲೆ ಹಾಳಾಗಿರುವ ಈ ಶೀಲವನ್ನು ಉಳಿಸಿಕೊಂಡು ಕೊರಗುವ ಪರಿಯೇಕೆ? ಎಂದು ತಾನು ಈ ಭೂಮಿಯ ಮೇಲೆ ಹೇಗೆ ಬದುಕಲಿ ಎಂದು ಬಯಸಿದಾಗ ಯಾವ ದಾರಿಯು ಕಾಣದಾಗುತ್ತೆ, ಆಗ ಜೀವನದ ಕೊನೆಯ ದಾರಿ ಎದುರಾಗುತ್ತೆ. ಅದೇ ವೈಶವಾಟಿಕೆ. ಈ ಕೆಲಸ ಕಾಗೆ ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಬಳಸುತ್ತದೆ. ತುಂಬಾ ದಿನಗಳು ಸೋತು ಸೋತು ಕೊನೆಗೆ ಈ ವಿಚಿತ್ರ ರೋಗಗಳಿಗೆ ತುತ್ತಾಗಿ ಕೊನೆ ಉಸಿರೆಳೆಯುತ್ತದೆ .
ಇದು ಒಂದು ಕಾಗೆಯ ಕಥೆಯಾಗಿದೆ ಇದು ಕಲ್ಪನೆ ಎಂದು ದೂರ ತಳ್ಳಬೇಡಿ ನಮ್ಮ ಈ ಪುರುಷ ಪ್ರಧಾನ ದೇಶದಲ್ಲಿ ಅದೆಷ್ಟೊ ಕಪ್ಪು ಬಣ್ಣ ಹೊತ್ತ ಹೆಣ್ಣು ಮಕ್ಕಳನ್ನು ಇದೆ ತೆರನಾಗಿ ಬಳಸಲಾಗುತ್ತಿದೆ . ಇನ್ನು ಈ ತರಹ ಹೆಣ್ಣು ಹಡೆದ ತಂದೆ ತಾಯಿ ನನ್ನ ಮಗಳ ಮದುವೆಯಾದರೆ ಸಾಕು ಎನ್ನುವ ಕುಂಟು ನೆಪದಲ್ಲಿ ಯಾರಿಗೊ ಮದುವೆ ಮಾಡಿ ಅವಳನ್ನು ಮಾರುತ್ತಿದ್ದಾರೆ .ಅಲ್ಲದೆ ನಮ್ಮ ಪುರುಷ ಸಮಾಜದಲ್ಲಿ ಈ ತರಹದ ಘಟನೆಗಳು ತುಂಬಾ ಸಿಗುತ್ತವೆ. ಕಪ್ಪಿದ್ದರೇನಾಯಿತು ಬೆಡಿದಷ್ಟು ವರದಕ್ಷಿಣೆ ಸಿಗುತ್ತೆ ಆಸ್ತಿ ಪಾಸ್ತಿ ಸಿಗುತ್ತೆ ಮುಂದೆ ಬೇಕಾದರೆ ಇವಳನ್ನು ಬದಲಾಯಿಸಬಹುದು ಎಂಬ ಲೆಕ್ಕಾಚಾರದಲ್ಲಿ ಇಂತಹವರನ್ನು ಮದುವೆಯಾಗಿ ದುರುಉಪಯೋಗ ಮಾಡಿಕೊಳ್ಳಲಾಗುತ್ತಿದೆ .
ಮೊದಲು ಮದುವೆಯಾಗಿ ಆಮೇಲೆ ಬೇರೆ ಬೇರೆ ಕಾರಣಗಳಿಂದ ಕೊಲೆ, ಡೈವರ್ಸ್ ಮಾಡುವ ಕೃತ್ಯಗಳು ನಡೆದಿವೆ. ಆದರೆ ನಾವು ಎಲ್ಲವು ತಿಳಿದು ಮೂಕಾರಾಗಿ ಕುಳಿತ್ತಿದ್ದೇವೆ . ಬರಿ ಮಾತಿನಲ್ಲಿ ಬರವಣಿಗೆಯಲ್ಲಿ ಮಾತ್ರ ಮಹಿಳಾ ಸಬಲೀಕರಣ ಎಂದು ಮಾತಾಡುತ್ತೇವೆ ಅಷ್ಟೆ . ಆದರೆ ಯಾರೊಬ್ಬರು ಅವರ ನಿಜವಾದ ಏಳ್ಗೆ ಬಯಸುತ್ತಿಲ್ಲಾ ಮತ್ತು ಅವರತ್ತ ದೃಷ್ಠಿ ಒಳ್ಳೆಯದಾಗಿ ಬೀರುತ್ತಿಲ್ಲಾ. ಬರಿ ಕಾಮುಕ ದೃಷ್ಠಿಯಿಂದ ನೋಡುವ ಈ ಪುರುಷ ಸಮಾಜ ಪ್ರತಿಯೊಂದು ಮಹಿಳೆಗೂ ಸಮಾನ ದೃಷ್ಠಿಯಿಂದ ನೋಡಿ ಒಳಗೂ ಹೊರಗು ಸರಿಯಾದ ರೀತಿಯಲ್ಲಿ ನಡೆದುಕೊಳ್ಳಬೇಕಾಗಿದೆ .(ಇಂದು) ನಾವೆಲ್ಲರು ಮಹಿಳೆಯನ್ನು ಒಳ್ಳೆಯ ದೃಷ್ಠಿಯಿಂದ ನೋಡೋಣವೆ?