ಹೀಗೆ ನಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿದ ನಾವುಗಳು ಅವರೆಲ್ಲಿ ಸಂತೋಷವಾಗಿದ್ದಾರೆಯೆಂಬ ವಿಚಾರ ಮಾಡುತ್ತಿದ್ದೇವೆಯೆ? ಒಮ್ಮೆ ಆಲೋಚಿಸಿರಿ ನಮ್ಮ ಮಕ್ಕಳು ಬಯಸಿದ ಶಾಲೆಯ ಶಿಕ್ಷಣದ ವಾತಾವರಣವನ್ನು ಅವರಿಗೆ ಕೊಟ್ಟಿದ್ದೇವೆಯೇ ಎಂಬ ಮೂಲಭೂತ ಪ್ರಶ್ನೆಯನ್ನು ಪಾಲಕ ಸಮುದಾಯ ತಮ್ಮೊಳಗೆ ಹಾಕಿಕೊಳ್ಳಬೇಕಿದೆ. ಕೋಟಿ ಖರ್ಚುಮಾಡಿ ಶಾಲೆ ಕಲಿಸುತ್ತಿದ್ದೇವೆ ಎನ್ನುವುದರ ಜೊತೆಗೆ ಆ ಶಿಕ್ಷಣ ಮತ್ತು ಶಾಲೆ ನಮ್ಮ ಮಗುವನ್ನು ಸಂತೋಷವಾಗಿರಿಸಿದೆಯೆ? ಎನ್ನುವ ಸಾಮಾನ್ಯವನ್ನು ಕೂಡ ನಾವು ಯೋಚಿಸಬೇಕು ಇಲ್ಲವಾದಲ್ಲಿ ನಮ್ಮ ಮಕ್ಕಳ ಬಾಳಿನಲ್ಲಿ ನಾವೇ ಹಾಳು ಮಾಡಿದಂತಾಗುತ್ತದೆ. ಶಾಲೆ ಹಾಗೂ ಶಿಕ್ಷಣ ಇದೀಗ ದುಬಾರಿಯಾಗಿರುವುದು ಸತ್ಯ ಅದರೊಂದಿಗೆ ನಮ್ಮ ಆಲೋಚನೆಗಳು ಕೂಡ ಬದಲಾಗಬೇಕಾದ ಅಗತ್ಯವಿದೆ. ನಮ್ಮ ಮಕ್ಕಳ ಮನಸ್ಸನ್ನು ಅವರ ಆಸಕ್ತಿಯನ್ನು ಅರೆತಕೊಂಡು ಅವರನ್ನು ರೂಪಿಸುವಲ್ಲಿ ನೆರವಾಗಬೇಕಾದ ಅಗತ್ಯವಿದೆ. ಶಿಕ್ಷಣದ ಜೊತೆಗೆ ಆ ಮಕ್ಕಳಿಗೆ ಆಸಕ್ತಿಯಿರುವ ಕ್ಷೇತ್ರದಲ್ಲಿ ಮಕ್ಕಳನ್ನು ಬೆಳೆಸುವ ಅನೇಕ ಅವಕಾಶಗಳನ್ನು ಕೊಡಬೇಕಾದ ಅತೀ ಅವಶ್ಯಕತೆಯಿದೆ.
ಪಾಲಕರು ಮಕ್ಕಳನ್ನು ಹೀಗೆ ಬೆಳೆಯಬೇಕು ಎಂಬುವುದು ಸರಿ ಆದರೆ ಅವರಿಗೆ ಒತ್ತಾಯ ಹೇರುವುದು ಅತ್ಯಂತ ದೊಡ್ಡ ತಪ್ಪು. ನಿಮ್ಮ ಮಕ್ಕಳು ನಿಮ್ಮವಲ್ಲಾ ಅವು ನಿಮ್ಮಿಂದ ಬಂದವುಗಳಷ್ಟೆ ನೀವು ಸರಿದಾರಿ ತೋರಿಸುವ ಕೆಲಸವಷ್ಟೆ ಉಳಿದದ್ದು ನಿಮ್ಮ ಮಕ್ಕಳಿಗೆ ಬಿಟ್ಟಿದ್ದು ಒತ್ತಾಯದ ಶಿಕ್ಷಣ ಮಕ್ಕಳಲ್ಲಿ ಮಾನಸಿಕ ಒತ್ತಡ ತರುತ್ತದೆ. ಮಕ್ಕಳ ಆಯ್ಕೆಗೆ ಮುಕ್ತ ಅವಕಾಶವಿರಲಿ. ನಮ್ಮ ಮಕ್ಕಳ ಸಂತೋಷಕ್ಕೆ ಮೊದಲು ಆದ್ಯತೆ ಕೊಡಿ. ಪ್ರೀತಿ ವಿಶ್ವಾಸದಿಂದ ಮಕ್ಕಳನ್ನು ಬೆಳೆಸಿ. ಅವರ ಸಂತೋಷದಲ್ಲಿ ನಿಮ್ಮ ಸಂತೋಷ ಕಾಣಿ. ನೇಪತ್ಯಕ್ಕೆ ಮಕ್ಕಳ ಹಡೆದು ಅವರ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಪಾಲಕರಾಗದೇ ಮಕ್ಕಳು ಬಯಸಿದ ಪಾಲಕರಾಗಿ. ನಮ್ಮ ಮಕ್ಕಳಿಗೆ ಸ್ವಾತಂತ್ರ ಕೊಡಿ ಮಕ್ಕಳೆಂಬ ಕರುಳ ಕುಡಿಗಳನ್ನು ಬೆಳಸಿ ಎಂಬುವುದಷ್ಟೆ ನನ್ನ ಆಶೆಯ.
-ಕೆ.ಎಂ.ವಿಶ್ವನಾಥ ಮರತೂರ.
ಯುವ ಬರಹಗಾರರು.