ಆಹಾರ ಪದಾರ್ಥಗಳ ಸ್ವಚ್ಛತೆ ಕಾಪಾಡುವುದು: ನಮ್ಮ ಆಹಾರದ ಹಲವು ಪದಾರ್ಥಗಳನ್ನು ನಾವು ಹಿಂದೆ ಮುಂದೆ ನೋಡದೇ ಈ ಅವಸರದ ಜೀವನದಲ್ಲಿ ಹಾಗೆ ತಿನ್ನುವ ಪರಿಯನ್ನು ಮನಗಂಡಿದ್ದೇವೆ ಆದರೆ ನಮ್ಮ ಆಹಾರ ಎಷ್ಟು ಸ್ವಚ್ಛ ಹಾಗೂ ಶುಭ್ರವಾಗಿರುತ್ತದೆಯೋ ಅಷ್ಟು ನಮ್ಮ ಆರೋಗ್ಯ ಉತ್ತಮವಾಗಿ ಇರಲು ಸಾಧ್ಯವಾಗಿದೆ. ಅದರಲ್ಲಿಯೂ ಹಣ್ಣು ಮತ್ತು ತರಕಾರಿಗಳನ್ನು ಸೊಪ್ಪುಗಳನ್ನು ಉಪಯೋಗಿಸುವಾಗ ಹೆಚ್ಚು ಗಮನ ಕೊಡಿ ಅವುಗಳ ಮೇಲೆ ದೂಳು,ಹುಳು ಕುಳುತ್ತಿರುತ್ತದೆ. ಕ್ರೀಮಿಕೀಟಗಳು ಹುಟ್ಟಿಕೊಂಡಿರುತ್ತವೆ ಅಲ್ಲದೆ ಸೂಕ್ಷ್ಮ ಬ್ಯಾಕ್ಟೇರಿಯ ಬೆಳೆಯುತ್ತವೆ. ಈ ಬ್ಯಾಕ್ಟೀರಿಯಾದಿಂದ ಮುಕ್ತಿ ನೀಡಲು ಅವುಗಳನ್ನು ನೀರಿನಲ್ಲಿ ತೊಳೆಯಿರಿ ಅಥವಾ ಉಪ್ಪು ನೀರಿನಲ್ಲಿ ಅವುಗಳನ್ನು ನೆನೆಸಿ ಹತ್ತು ನಿಮಿಷ ಇಡುವುದರಿಂದ ಅವುಗಳಲ್ಲಿರುವ ಕೀಟಾಣುಗಳನ್ನು ಹೋಗಲಾಡಿಸಬಹುದು. ಇವು ನೋಡಲು ಕಣ್ಣಿಗೆ ಕಾಣದೇ ಹೋದರು ಜೀವಕ್ಕೆ ಜೀವನಿರೋಧಕ ಶಕ್ತಿಗೆ ಬಹಳ ಕಿರುಕುಳವನ್ನು ಕೊಟ್ಟು ದೇಹದ ಸ್ಥಿತಿ ಕುಂದು ಹೋಗುವಂತೆ ಮಾಡುತ್ತವೆ. ಅದಕ್ಕಾಗಿ ಆಹಾರದ ಸ್ವಚ್ಛತೆ ಮಳೆಗಾಲದಲ್ಲಿ ಬಹುಮುಖ್ಯವಾಗುತ್ತದೆ.
ಆಹಾರ ಪದಾರ್ಥ ಬೇಯಿಸಿ ತಿನ್ನಬೇಕು : ಮಳೆಗಾಲವು ಹಲವು ಬದಲಾವಣೆಗೆ ಕಾರಣವಾಗುತ್ತದೆ. ಮಾಗಿದ ಬಿಸಿಲು ತನ್ನ ಅಸ್ತಿತ್ವ ಕಳೆದುಕೊಂಡು ಛಳಿ ಮತ್ತು ಮಳೆಯ ಕಾಲ ಕೂಡಿ ಬರುತ್ತದೆ. ಅದರ ಹಿನ್ನಲೆಯಲ್ಲಿ ನಾವು ಆದಷ್ಟು ಬಿಸಿ ಬಿಸಿ ಹಾಗೂ ಬೇಯಿಸಿದ ಆಹಾರ ತಿಂದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಳೆಯಿಂದ ವಾತಾವರಣ ತಂಪಾಗಿ ಹಲವು ಹೊಸ ಜೀವಿಗಳ ಉಗಮಕ್ಕೆ ಕಾರಣವಾಗುತ್ತವೆ. ಚೆನ್ನಾಗಿ ಬೇಯಿಸಿದ ಪದಾರ್ಥ ಉಪಯೋಗಿಸಿ ಹಸಿ ಮತ್ತು ಅರೆಬೆಂದ ಪದಾರ್ಥಗಳನ್ನು ತಿಂದರೆ ಸಮಸ್ಯೆಗಳು ಬರುವುದು ಖಂಡಿತ. ಕರೀದ ಆಹಾರ ಪದಾರ್ಥದಿಂದ ಆದಷ್ಟು ದೂರವಿರಿ ನಮ್ಮ ದೇಹದಲ್ಲಿ ಗೊಂದಲದ ಪರಿಸ್ಥಿತಿ ಉಂಟಾಗಲು ಬಹಳ ಮುಖ್ಯವಾದ ಕಾರಣವೆಂದರೆ ಅರೆಬೆಂದ ಹಾಗೂ ಎಣ್ಣೆಯಲ್ಲಿ ಕರೀದ ಆಹಾರ ಸೇವನೆಯಿಂದ ಅದಕ್ಕಾಗಿ ಅಂತಹ ಆಹಾರವನ್ನು ತ್ಯೆಜಿಸಿ ರಸ್ತೆ ಪಕ್ಕದಲ್ಲಿ ಕರೀದ ಆಹಾರ ತಿನ್ನುವುದಕ್ಕಿಂತ ಹಣ್ಣುಗಳನ್ನು ತಿನ್ನುವುದು ಬಹಳ ಸೂಕ್ತ ತಂಗಳು ಅಥವಾ ನಿನ್ನೆ ಉಳಿದ ಆಹಾರಗಳನ್ನು ತಿನ್ನುವುದನ್ನು ತಪ್ಪಿಸಿ.
ಮಳೆಗಾಲದಲ್ಲಿ ಜೀರ್ಣಕ್ರೀಯೆ ಸಮಸ್ಯೆ : ಈ ಮಳೆಗಾಲದಲ್ಲಿ ನಾವು ಸೇವಿಸುವ ಆಹಾರ ವೇಗದಲ್ಲಿ ಜೀರ್ಣವಾಗದೆ ಕೆಲವೊಮ್ಮೆ ಸಮಸ್ಯೆಯಾಗುವುದು ಸಹಜ ಅಂತಹ ಸಮಯದಲ್ಲಿ ನಾವು ಫುಡ್ ಮಾಡರೇಶನ್ ಒಂದು ಕೀಲಿ,ಎಲ್ಲಾ ಸಮಯದಲ್ಲೂ ಅದರಲ್ಲೂ ಮಳೆಗಾಲದಲ್ಲಿ ದೇಹ ಆಹಾರವನ್ನು ಅಷ್ಟು ಸುಲಭವಾಗಿ ಜೀರ್ಣಿಸಿಕೊಳ್ಳುವುದಿಲ್ಲ ಜೀರ್ಣಕ್ರಿಯೆ ಹೆಚ್ಚಿಸಲು ಮತ್ತು ಶುದ್ಧ ಮಾಡಲು ಶುಂಠಿ, ಬೆಳ್ಳುಳ್ಳಿ, ಕರಿಮೆಣಸು, ಕೊತ್ತುಂಬರಿ ಮತ್ತು ಅರಿಶಿಣಗಳನ್ನು ಹೆಚ್ಚು ಬಳಸಿ ಸೂಪ್ ನಾನ್ ವೆಜ್ ಪ್ರೀಯರಾದರೆ ಹೆಚ್ಚು ಮಾಂಸಾಹಾರ ತಿನ್ನುವ ಬದಲು ಲೈಟ್ ಆಗಿರುವ ಸೂಪ್ ಗಳನ್ನು ಬಳಸಿ.
ಹಾಳುಮೂಳು ತಿಂಡಿಗಳು ದಯವಿಟ್ಟು ಬೇಡಾ: ಮಳೆಗಾಲದಲ್ಲಿ ರಸ್ತೆಯ ಬದಿಯಲ್ಲಿ ಪ್ರೀಯಕರನ ಜೊತೆಯಲ್ಲಿ ತಿನ್ನುವ ಮಜವೆ ಬೇರೆ ನಿಜ ಆದರೆ ಅದು ನೀಡುವ ದೊಡ್ಡ ರೋಗದ ಬಗ್ಗೆ ಚಿಂತಿಸಿದರೆ ವಿಚಿತ್ರ ಅನಿಸುತ್ತದೆ . ಆದಷ್ಟು ಗೆಳೆಯ ಗೆಳತಿಯರು ಕೊಡಿಸುವ ಈ ತಿಂಡಿಗಳನ್ನು ನಿರಾಕರಿಸುವುದು ಕಷ್ಟವಾದರೂ ಕೂಡ ಅದರಲ್ಲಿ ವಿವಿಧ ರೀತಿಯ ರೋಗಗಳನ್ನು ಉಂಟುಮಾಡುವ ಸೂಕ್ಷ್ಮ ಜೀವಿಗಳಿರುವುದರಿಂದ ಅವುಗಳಿಂದ ಆದಷ್ಟು ದೂರವಿರುವ ಪ್ರಯತ್ನ ಮಾಡಿ. ನಮ್ಮ ದೇಹವನ್ನು ಹಾಳು ಮಾಡುವ ಈ ತಿಂಡಿಗಳಲ್ಲಿ ರುಚಿಕೊಡುವ ನಮ್ಮನ್ನು ಆಕರ್ಷಿಸುವ ಕೆಲಸ ಹೆಚ್ಚು ಅದಕ್ಕಾಗಿ ನಾವು ಅವುಗಳಿಂದ ಆದಷ್ಟು ದೂರವಿರಲು ಪ್ರಯತ್ನ ನಮ್ಮದಾಗಬೇಕು.
ಪದಾರ್ಥದ ಶುದ್ಧತೆಗೆ ಆದ್ಯತೆ ಕೊಡಿ : ನಮ್ಮ ಜೀವನ ಈ ಮೊದಲು ನೂರು ವರ್ಷ ಎನ್ನುತ್ತಿದ್ದೇವು ಈಗ ಅರವತ್ತು ಹಾಗೂ ಮತ್ತೆ ಇಪ್ಪತ್ತು ಕಡಿಮೆಯಾಗುವ ಕಾಲ ಒದಗಿ ಬಂದಿದೆ ಇದಕ್ಕೆ ಮೂಲಕಾರಣ ನಾವು ಬಳಸುತ್ತಿರುವ ಅನೇಕ ಅಪಯಾಕಾರಿ ವಸ್ತುಗಳು ದೇಹಕ್ಕೆ ಹಾನಿಮಾಡುವ ವಸ್ತುಗಳು . ನಿತ್ಯ ಜೀವನದಲ್ಲಿ ಬಳಸುವ ಅದೆಷ್ಟೊ ಸಾಮಾನುಗಳು ನಮ್ಮ ಜೀವನವನ್ನು ಕಿತ್ತು ತಿನ್ನುತ್ತಿವೆ ಅದಕ್ಕೆ ಮೂಲಕಾರಣ ಹುಡುಕದೆ ನಾವು ಸಾಗುತ್ತಿದ್ದೇವೆ. ತರಕಾರಿ ಕತ್ತರಿಸಲು ಬಳಸುವ ಚಾಕುಗಳನ್ನು ಉಪಯೋಗಿಸುವ ಮೊದಲು ಸರಿಯಾಗಿ ತೊಳೆದುಕೊಳ್ಳಿ. ಏನನ್ನಾದರೂ ತಿನ್ನುವ ಮೊದಲು ಸರಿಯಾಗಿ ಕೈ ತೊಳೆದುಕೊಳ್ಳಿ. ಟಾಯ್ಲೆಟ್ ಗೆ ಹೋದ ನಂತರ ಕೂಡ ಕೈಯನ್ನು ಸೋಪು ಹಾಕಿ ತೊಳೆಯಿರಿ. ಶುಚಿತ್ವ ಕಾಪಾಡಿಕೊಳ್ಳಿ. ನಾವು ಬಳಸುವ ಪ್ರತಿಯೊಂದರಲ್ಲೂ ಒಂದಲ್ಲಾ ಒಂದು ರೀತಿಯ ಕ್ರೀಮಿಕೀಟಗಳ ರಾಜರು ಇದ್ದೆ ಇರುತ್ತಾರೆ ನಾವು ಯಾವುದನ್ನು ಕಡೆಗಣಿಸುವ ಹಾಗಿಲ್ಲ ಚಿಕ್ಕದದೊ ದೊಡ್ಡದೊ ಎನ್ನುವ ಹಾಗಿಲ್ಲ ಎಲ್ಲವು ಭಯಾನಕ ಎಂಬ ಕಲ್ಪನೆಯಿರಲಿ. ಪ್ರತಿಯೊಂದರಲ್ಲಿ ಸ್ವಚ್ಛತೆಗೆ ಆದ್ಯತೆ ಕೊಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ.
ನೀರಿನ ಮಹತ್ವ : ಮನುಷ್ಯನ ದೇಹ ಆರೋಗ್ಯವಾಗಿರಲು ನೀರು ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ . ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಿದ್ದರೆ ಅನಾರೋಗ್ಯ ಖಂಡಿತ ಎಂದು ವೈದ್ಯ ಸಮೂಹವೆ ಹೇಳುತ್ತದೆ. ಈ ಮಳೆಗಾಲದಲ್ಲಿ ತಂಪಗಿನ ವಾತಾವರಣ ನೀರನ್ನು ಸ್ವಲ್ಪ ದೂರವಿರಲು ಹೇಳುತ್ತದೆ ಆದರೆ ಈ ಮಳೆಗಾಲದಲ್ಲಿ ನಾವು ನೀರನ್ನು ಕುದಿಸಿ ಆರಿಸಿದ ನೀರನ್ನೇ ಕುಡಿಯಿರಿ ಮತ್ತು ಸೂಕ್ಷ್ಮಾಣುಗಳಿಂದ ದೂರವಿರಲು ಶುಂಠಿ ಟೀ, ಲೆಮನ್ ಟೀ ಇವುಗಳನ್ನು ಕುಡಿಯಿರಿ ನೀವು ಟೀ ಕುಡಿಯುವುದಾದರೆ ಬಿಸಿಬಿಸಿ ತರಕಾರಿ ಸೂಪ್ ಕುಡಿಯಿರಿ.
ನೊಣ ಹಾಗೂ ಸೊಳ್ಳೆಯಿಂದ ರಕ್ಷಣೆ : ಇತ್ತೀಚಿಗೆ ಸೊಳ್ಳೆಯಿಂದ ಅನೇಕ ರೋಗಗಳು ಹುಟ್ಟಿಕೊಳ್ಳುತ್ತಿರುವುದು ಎಲ್ಲರಿಗೂ ಮನವರಿಕೆಯ ವಿಷಯ. ಮಳೆಗಾಲದಲ್ಲಿ ಅಲ್ಲಲ್ಲಿ ನಿಲ್ಲುವ ನೀರಿನಿಂದ ನಿಂತ ನೀರಿನಲ್ಲಿ ಬೆಳೆದು ಅನೇಕ ಮಾರಕ ರೋಗಗಳನ್ನು ಹರಡುವ ಕೆಲಸ ಈ ಸೊಳ್ಳೆಗಳು ಮಾಡುತ್ತವೆ. ನೊಣ ಈ ಕಾಲದಲ್ಲಿ ಎತೇಚ್ಚವಾಗಿ ಹೆಚ್ಚಾಗಿ ಹುಟ್ಟುತ್ತವೆ ಹಾಗೂ ಅವು ಕೂಡ ಅನೇಕ ರೋಗಗಳಿಗೆ ಪೂರಕಾವಗುತ್ತವೆ. ಸೊಳ್ಳೆ,ನೊಣ,ಜಿರಲೆಗಳಿಂದ ದೂರವಿರಲು ಕೀಟಾಣು ನಿವಾರಕಗಳನ್ನು ಬಳಸಿ. ಸೊಳ್ಳೆಗಳ ಹಾವಳಿಗಳಿಂದ ತಪ್ಪಿಸಿಕೊಳ್ಳಲು ಬೇವಿನ ಕರ್ಪೂರ ಮತ್ತು ಲವಂಗಗಳನ್ನು ಬಳಸಿ. ಆರೋಗ್ಯಯುತ ಆಗಿರಲು ಆರೋಗ್ಯಕರ ಆಹಾರವನ್ನು ಈ ಮಳೆಗಾಲದಲ್ಲಿ ಸೇವಿಸಿ.
ಮಳೆಗಾಲವು ಅನೇಕ ಹೊಸ ರೋಗಗಳಿ ಪೂರಕವಾಗಿರುವ ವಾತವರಣ, ಮನುಷ್ಯನ ಜೀವಕ್ಕೆ ರೋಗ ನಿರೋಧಕ ಶಕ್ತಿ ಕಡಿಮೆ ಮಾಡಲು ಬೇಕಾದ ಎಲ್ಲಾ ಹುನ್ನಾರ ಹೊಂದಿಕೊಳ್ಳುವ ಕೆಲಸ ಪ್ರಕೃತಿ ಮಾಡುತ್ತದೆ. ಅದಕ್ಕೆ ತಕ್ಕ ಹಾಗೆ ಹೊಂದಿಕೊಳ್ಳುವ ಕೆಲಸ ಮಾನವ ಮಾಡಬೇಕಾದ ಅಗತ್ಯವಿದೆ. ಮಳೆ ಸುರಿದು ಅಲ್ಲಲ್ಲಿ ಹರಿಯದೆ ನಿಂತ ನೀರು ಹಲವು ಮಾರಕ ರೋಗಗಳ ತಾಣವಾಗಿ ಪರಿಣಮಿಸುತ್ತದೆ. ಅದನ್ನು ತಡೆಯದೇಯಿದ್ದರೆ ಸುತ್ತಮುತ್ತಲಿನ ಜನರಿಗೆ ರೋಗಗಳು ತಪ್ಪಿದ್ದಲ್ಲ. ನಾವು ಕಾಲಕ್ಕೆ ತಕ್ಕಂತೆ ಹೊಂದಿಕೊಂಡು ಅವಶ್ಯಕವಾದ ರೋಗ ನಿರೋಧಕ ಬಳಸಿಕೊಂಡು ಬದುಕುವುದರಲ್ಲಿ ನಮ್ಮ ಜಾಣತನ ಅಡಗಿದೆ. ಆತ್ಮೀಯರೆ ನಾವು ಸ್ವಚ್ಛವಾಗಿದ್ದು ನಮ್ಮ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿಟ್ಟು ಉತ್ತಮ ಆರೋಗ್ಯ ಹೊಂದೋಣವೆ?
ಕೆ.ಎಂ.ವಿಶ್ವನಾಥ ಮರತೂರ.9686714046