ದೇಶದ ನಾನಾ ಭಾಷೆಗಳಿಗೆ ಭಾಷಾಂತರವಾಗಿ, ಅನೇಕಬಾರಿ ಮುದ್ರಣವಾಗಿ, ಅನೇಕ ಓದುಗರನ್ನು ಸೆಳೆದು, ಈ ದೇಶದ ಒಬ್ಬ ಸಂಶೋಧಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಎಸ್.ಎಲ್.ಬೈರಪ್ಪನವರ ಕಾದಂಬರಿಗಳು ಸಮಾಜಕ್ಕೆ ಕೆಟ್ಟವು ಎನ್ನುತ್ತಿದ್ದಾರೆ. ಅವರ ಬರಹಗಳು ದೇಶ ನಾಶ ಮಾಡುವತ್ತ ಜಾತಿಯತೆ ಬಿತ್ತುವತ್ತ ಗಮನಕೊಡುತ್ತಿದೆ ಎನ್ನುವಂತಹ ವಾದ ಎದ್ದಿದೆ. ಇವರ ಕಾದಂಬರಿಗಳು ಎಷ್ಟು ಪರಿಣಾಮ ಬೀರಿವೆಯೆಂದರೆ ಅವರಿಗಾಗಿ ಒಂದು ಮ್ಯಾಗಜೀನ್ ತುಂಬ ಅವರದೇ ಬರಹಗಳ ವಿಮರ್ಷೆ ಕಂಡಿತು ಜೊತೆಗೆ ಕಾಡಿತು. ಬೈರಪ್ಪನವರ ಬರವಣಿಗೆ ಎಲ್ಲರನ್ನು ಕಾಡಿದೆ ಎಂಬ ಸತ್ಯ ಅರಿವಾಯಿತು. ಇಷ್ಟಕ್ಕೂ ಸಾಹಿತಿಗಳು ಬರೆಯುವ ಪ್ರತಿಯೊಂದರಲ್ಲಿಯೂ ಸರಿತಪ್ಪು ಪಾತ್ರಗಳು ಇರಲೇಬೇಕು, ಒಂದು ಸಮಾಜದಲ್ಲಿ ಸರಿಯಿರುವ ಜನರಿದ್ದಾರೆ, ತಪ್ಪುಮಾಡುವ ಜನರಿದ್ದಾರೆ, ಇದನ್ನು ಹೊರತುಪಡಿಸಿ ಒಬ್ಬ ಸಾಹಿತಿ ಏನು ಕೊಡಲು ಸಾಧ್ಯ, ಒಂದು ಕಥೆಯಲ್ಲಿ ಬರುವ ಒಳ್ಳೆಯ ಹಾಗೂ ಕೆಟ್ಟ ಪಾತ್ರಗಳನ್ನು ಸೃಷ್ಠಿಸುವ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲವೆ? ಅದನ್ನೇ ಬೈರಪ್ಪ ಮತ್ತು ಉಳಿದ ಸಾಹಿತಿಗಳು ಮಾಡಿದ್ದು ಅದರಲ್ಲಿಯೂ ಕೊಳಕು ಹುಡುಕುವ ವಾದಕ್ಕೆ ಏನು ಎನ್ನಬೇಕು ತಿಳಿಯದು ನನ್ನ ಪ್ರಕಾರ ಎಲ್ಲವು ಕವಿಯ ಕಲ್ಪನೆ ಮಾತ್ರ ಅದನ್ನು ಓದುವ ಎಂಜಾಯ್ ಮಾಡೋಣಾ ಅಷ್ಟೆ.
ಸಮಾಜದಲ್ಲಿ ಜಾತಿಯತೆ ಹೋಗಲಾಡಿಸಲು ಶರಣರ ಕಾಲದಲ್ಲಿಯೇ ಅಂತರಜಾತಿಯ ವಿವಾಹವನ್ನು ಮಾಡಿದರು. ಇಂದಿನ ಶರಣ ಮಾನ್ಯ ಪೇಜಾವರ ಶ್ರೀಗಳು ಅಂತರಜಾತಿ ವಿವಾಹವನ್ನು ವಿರೋಧಿಸುತ್ತಿದ್ದಾರೆ. ಇವರು ನಮ್ಮ ಸಮಾಜಕ್ಕೆ ನೀಡುವ ಕೊಡುಗೆಯಾದರು ಏನು ಬರಿ ವಿವಾದಗಳೆ ಕೊಡುವಾಗ ಮತ್ತೇನು ಕೊಡಲು ಸಾಧ್ಯವೆಂಬ ಸಂಶಯ ಕಾಡುತ್ತಿದೆ. ಶ್ರೀಗಳು ನಾಡಿನ ಹಿರಿಯರು ಅನೇಕರು ಇವರಿಗೆ ಹಿಂಬಾಲಕರು, ಮನಸ್ಸಿನೊಳಗೇಕೆ ಈ ರೀತಿಯ ವಿಷವಿಟ್ಟುಕೊಂಡಿದ್ದಾರೆ ತಿಳಿಯದು, ಇದ್ದರೂ ಅದನ್ನು ಸಮಾಜದ ಸ್ವಾತ್ಸ್ಯದ ಬಗ್ಗೆ ಯೋಚಿಸಿ ತಮ್ಮ ಹೇಳಿಕೆ ನೀಡಬೇಕು ಎಂಬ ವಿನಯ ನನ್ನದು. ಸಚ್ಯಾತ್ರಿ ತುಂಬಿದ ಈ ಭರತ ಭೂಮಿಯಲ್ಲಿ ಯಾವುದು ವಿವಾದ ಸೃಷ್ಠಿಸಿದೆ ಎಂಬ ಆತಂಕ ಯುವಸಮುದಾಯದಲ್ಲಿ ಹುಟ್ಟಿಸಲು ಶ್ರೀಗಳ ಮಾತು
ಅಂತರ ಜಾತಿ ವಿವಾಹಕ್ಕೆ ಪೇಜಾವರ ಶ್ರೀ ವಿರೋಧ ವ್ಯಕ್ತಪಡಿಸಿ ಸಮಾಜದೊಳಗೊಂದು ಹೊಸ ಹೊಲಸು ಕಿಚ್ಚನ್ನು ಹೊತ್ತಿಸಿದ್ದಾರೆ ಅದನ್ನು ಸ್ವೀಕರಿಸುವುದು ಬಿಡುವುದು ಅವರವರ ಬುದ್ದಿಗೆ ಬಿಟ್ಟಿದ್ದು ಹಿರಿಯರೆಲ್ಲ ಈ ರೀತಿಯ ವಿವಾಧ ಹುಟ್ಟುಹಾಕುವುದು ಮಾತ್ರ ಕೆಟ್ಟದ್ದು.
ಇನ್ನೊಂದು ವಿಶೇಷವೆಂದರೆ ಹಿರಿಯ ಸಾಹಿತಿಗಳು ಎಂ.ಎಂ. ಕಲಬುರ್ಗಿಯವರು ಹಿಂದು ಧರ್ಮ ಧರ್ಮವೇ ಇಲ್ಲ, ಅದಕ್ಕೆ ಧರ್ಮಗ್ರಂಥವೇಯಿಲ್ಲಯೆಂಬ ಮಾತು ಬಹಿರಂಗವಾಗಿ ಹೇಳಿ ಮತ್ತೊಂದು ವಿವಾದ ಪ್ರಾರಂಭ ಮಾಡಿದ್ದಾರೆ. ಇಲ್ಲಿಯವರೆಗೂ ನಾವೆಲ್ಲ ನಮ್ಮ ನಮ್ಮ ಸರ್ಟಿಫಿಕೇಟ್ ನಲ್ಲಿ ಧರ್ಮ ಎಂಬ ಕಾಲಂನಲ್ಲಿ ಬರೆದಿದ್ದು ಏನು? ಅದೆಷ್ಟೊ ಜನ ನಿಮ್ಮ ಧರ್ಮ ಯಾವುದು ಎಂದು ಕೇಳಿದರೆ ಕೊಟ್ಟ ದಿಟ್ಟ ಉತ್ತರ ಹಿಂದು. ಇದೀಗ ಹಿಂದು ಧರ್ಮವೇ ಇಲ್ಲಾ ಎಂಬ ಮಾತು ಹೇಳಿ ಸಮಾಜದ ಎಳೆಯನ್ನು ಎಲ್ಲಿ ಕೊಂಡ್ಯೂಯುತ್ತಿದ್ದಾರೆ ಎಂಬ ಅನುಮಾನ ಕಾಡುತ್ತಿದೆ. ಇಂದಿನ ಅನೇಕ ಮಕ್ಕಳ ಎಲ್ಲಾ ಸರ್ಟಿಫಿಕೇಟ್ನಲ್ಲಿ ಗಮನಿಸಿ ಹಿಂದು ಮೊದಲು ಬರೆದು ಅದರ ಮುಂದೆ ಉಪಜಾತಿಗಳನ್ನು ಬರೆಯುತ್ತಾರೆ. ಹಿರಿಯ ಸಾಹಿತಿಗಳಾದ ಎಂ.ಎಂ.ಕಲಬುರ್ಗಿಯವರು ತಮ್ಮ ಧರ್ಮ ಯಾವುದು ಎಂಬ ವಿಷಯ ಬಹಿರಂಗಪಡಿಸಲಿ ನಂತರ ಹಿಂದು ಧರ್ಮ ವಿಷಯ ಮಾತನಾಡಲಿ, ಈ ವಾದ ವಿವಾದದಿಂದ ನಮ್ಮ ಮಕ್ಕಳಿಗೆ ನೀಡುವ ಸಂದೇಶವೇನು ಎಂಬ ಮಾಹಿತಿ ನೀಡಲಿ.
ಪ್ರಾಚೀನ ಕಾಲದಿಂದಲೂ ಭಾರತದ ಜನರು ಓದುಕೊಂಡು ಅನುಸರಿಸಿಕೊಂಡಿರುವ, ಪವಿತ್ರ ಎಂದು ನಂಬಿರುವ ಪುಸ್ತಕ ಭಗವತ್ಗೀತೆ ಈ ಪುಸ್ತಕದ ಅನೇಕ ಸಂಧರ್ಭಗಳನ್ನು ಮನುಷ್ಯ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಬದುಕಿನತ್ತ ಸಾಗುತ್ತಿದ್ದರು. ಇದೀಗ ಬಿಜೆಪಿ ಸರಕಾರ ಭಗವತ್ಗೀಯನ್ನು ರಾಷ್ಟ್ರೀಯ ಗ್ರಂಥ ಮಾಡುತ್ತೇವೆ ಎಂಬ ವಾದ ಹುಟ್ಟುಹಾಕಿದರೆ ಇಲ್ಲಿ ಇನ್ನೊಬ್ಬ ಅದನ್ನು ಸುಟ್ಟುಹಾಕುತ್ತೇವೆ ಎಂಬ ಮೊಂಡ ವಾದವೊಂದನ್ನು ಹುಟ್ಟುಹಾಕಿ, ಸಮಾಜದ ಸ್ವಾತ್ಸ್ಯ ಹಾಳು ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರವೇ ಭಗವತ್ ಗೀತೆಯನ್ನು ರಾಷ್ಟ್ರೀಯ ಗ್ರಂಥ ಮಾಡುವ ಮಾತನಾಡುವುದು ನೈಜ ಜಾತಿಯತೆಗೆ ಹಿಡಿದ ಕೈಗನ್ನಡಿಯಾಗಿದೆ. ಅದನ್ನು ವಿರೋಧಿಸುವ ಜನರನ್ನು ಕಂಡಾಗ ಕೂಡ ನಮ್ಮ ದೇಶದಲ್ಲಿ ಜಾತಿಯತೆಯು ಹೇಗೆ ತನ್ನ ಅಸ್ತಿತ್ವ ಉಳಿಸಿಕೊಂಡಿದೆ ಎಂಬ ಉತ್ತರ ಕೊಡುತ್ತದೆ. ಗ್ರಂಥ ರಾಷ್ರ್ಟೀಕರಣಗೊಳಿಸುತ್ತೇವೆ ಎನ್ನುವುದು ಎಷ್ಟೊ ಮಾರಕವೊ ಅದನ್ನು ಅವಹೇಳನದ ಮಾತನಾಡುವ ಕೆಲಸವು ಅಷ್ಟೆ ಮಾರಕವಾಗಿದೆ. ನಮ್ಮ ಮಕ್ಕಳು ಇದನ್ನು ಗಮನಿಸಿ ಯಾವುದು ಸರಿ ಯಾವುದು ತಪ್ಪೆಂಬ ಗೊಂದಲದಲ್ಲಿದ್ದಾರೆ. ಭಗವತ್ ಗೀಯೆಯ ಈ ವಾದವು ಬೆಳೆಯುವ ಮಕ್ಕಳ ಮನಸ್ಸಿನ ಮೇಲೆ ಅಘಾದವಾದ ಪರಿಣಾಮ ಬೀರುತ್ತಿದೆ ಎಂಬ ಸತ್ಯ ಮರೆಯುವಂತಿಲ್ಲ.
ಹೀಗೆ ಸಮಾಜದೊಳಗಿನ ಅನೇಕ ವಿವಾಧಗಳು, ಭಾರತದ ಭವಿಷ್ಯವನ್ನು ವಿಭಿನ್ನ ದಿಕ್ಕಿನಲ್ಲಿ ಕೊಂಡುಯ್ಯೂತ್ತಿವೆ. ಭಾರತದಲ್ಲಿ ವಿವಾದಗಳೆಬ್ಬಿಸಿ ತಮ್ಮ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವವರು ದಯವಿಟ್ಟು ನಮ್ಮ ಮುಂದಿರುವ ಮಕ್ಕಳ ಬಗ್ಗೆ ಗಮನಕೊಟ್ಟರೆ ಒಳಿತು. ಸಮಾಜದಲ್ಲಿರುವ ಅನೇಕ ವರ್ಗದ ಮಕ್ಕಳು ನಿಮ್ಮ ಈ ವಿವಾದಗಳ ಸುಳಿಯಲ್ಲಿ ಸಿಲುಕಿ ದೇಶವನ್ನು ಎತ್ತ ಕೊಂಡುಯ್ಯೂತ್ತಾರೆ ಎಂಬ ಭಯ ಪ್ರಾರಂಭವಾಗಿದೆ. ಹಿರಿಯರೆಲ್ಲ ಮಕ್ಕಳ ಜೀವನ ದಾರಿತಪ್ಪಿಸುವ ವಿವಾದಗಳನ್ನು ಹುಟ್ಟುಹಾಕುವ ಮುನ್ನ ಯೋಚಿಸಬೇಕಾದ ಅಗತ್ಯ ಮತ್ತು ಅನಿವಾರ್ಯವಿದೆ. ಇಂದಿನ ಯುವಜನತೆ ಯೋಚಿಸಿ ಹೆಜ್ಜೆಯಿಡಬೇಕಾದ ಪರಿಸ್ಥಿತಿ ಎದುರಾಗಿದೆ. ಒಳ್ಳೆಯ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಕೆಟ್ಟ ವಿಚಾರಗಳತ್ತ ತಲೆಕೆಡಿಸಿಕೊಳ್ಳದಿರುವುದು ಅವಶ್ಯಕವಾಗಿದೆ. ಸಮಾಜದಲ್ಲಿ ಎದ್ದಿರುವ ಈ ವಾದ ವಿವಾದಗಳಲ್ಲಿ ಸರಿಯಾದದ್ದನ್ನು ಆರಿಸಿಕೊಂಡು ವಿಚಾರಿಸಿ ಹೆಜ್ಜೆಯಿಡಬೇಕಾಗಿದೆ. ಸ್ನೇಹಿತರೆ ಎಷ್ಟೆ ವಾದವಿವಾದಗಳು ಎದ್ದರು ಅವುಗಳನ್ನು ಅನುಸರಿಸುವುದರ ಜೊತೆಗೆ ಅದರ ಸಾಧಕ ಭಾಧಕಗಳನ್ನು ಅರ್ಥಮಾಡಿಕೊಂಡು, ಅದರಿಂದ ಸಮಾಜಕ್ಕೆ ಆಗುವ ಸಾಧಕ ಬಾಧಕಗಳನ್ನು ತಿಳಿದು ಅನುಸರಿಸಿ ಎಂಬುವುದಷ್ಟೆ ನನ್ನ ಆಶೆಯ.
ಕೆ.ಎಂ.ವಿಶ್ವನಾಥ ಮರತೂರ.