ಇತ್ತೀಚಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆಗೆ ಸರಕಾರಿ ಶಾಲೆಗಳಲ್ಲಿನ ಬೇಸಿಗೆ ಸಂಭ್ರಮ ಕಾರ್ಯಕ್ರಮಕ್ಕೆ ಬೇಟಿ ನೀಡಿದೆ. ಗ್ರಾಮಗಳಲ್ಲಿ ಈ ಕಾರ್ಯಕ್ರಮದ ಕುರಿತು ಮಾತನಾಡಿದಾಗ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಶಿಬಿರಗಳಲ್ಲಿ ಭಾಗವಹಿಸುವ ಮಕ್ಕಳನ್ನು ಮಾತನಾಡಿಸಿದರೆ, “ಬೇಸಿಗೆ ಸಂಭ್ರಮಕ್ಕೆ ಯಾಕೆ ಬರುತ್ತೀರಾ? ಎಂದು ಕೇಳಿದರೆ ಮಕ್ಕಳ ಥಟ್ಟನೇ ಉತ್ತರ, ಬಿಸಿಯೂಟಕ್ಕೆ ಸರ್” ಎಂದಿರುತ್ತದೆ. ಈ ವಾಕ್ಯದ ನಂತರ ಕಲಿಕೆಯ ಬಗ್ಗೆ ಮಾತನಾಡುತ್ತಾರೆ. ಇದರ ಅರ್ಥ ಸರಕಾರದ ಶಿಕ್ಷಣ ಇಲಾಖೆ ಮಕ್ಕಳ ಹಸಿವು ನೀಗಿಸುತ್ತಿದೆ ಜೊತೆಗೆ ಅಕ್ಷರ ಕಲಿಸುತ್ತಿದೆ. ಸಾಕ್ಷರ ಭಾರತವನ್ನು ಉಜ್ವಲಗೊಳಿಸುತ್ತಿದೆ ಎಂದು ಅರ್ಥ. ನನಗೆ ಆ ಮಕ್ಕಳ ಮಾತಿನಲ್ಲಿ ಹೊಳೆದಿದ್ದು ಗ್ರಾಮೀಣ ಭಾಗದ ಮಕ್ಕಳಿಗೆ ಈ ಬಿಸಿಯೂಟ ಎಷ್ಟು ಮಹತ್ವದ ಸ್ಥಾನ ಪಡೆದಿದೆ ಎಂದು. ಜ್ಞಾನದ ಜೊತೆಗೆ ಹಸಿವು ನೀಗಿಸುವ ಈ ಯೋಜನೆ ಬಡಮಕ್ಕಳ ಪಾಲಿಗೆ ವಿಶೇಷವಾಗಿದೆ. ಕೆ.ಎಂ.ವಿಶ್ವನಾಥ ಮರತೂರ.
0 Comments
Leave a Reply. |
ಇಲ್ಲಿಯವರೆಗೆ...
October 2023
"
|