ಅವಳು ಆಗತಾನೆ ನೌಕರಿಗೆ ಸೇರಿದ ಸುಂದರ ಯುವತಿ ಅವಳು ಮಾತಿನಲ್ಲಿ ಸೌಂದರ್ಯದಲ್ಲಿ ಕಲಸದಲ್ಲಿ ಚೆನ್ನಾಗಿದ್ದಳು. ಇವನು ಮೊದಲನೆ ದಿನ ಅವಳಿಗೆ ನೋಡಿ ಹಾಗೇನು ಭಾವನೆ ಬದಲಾಗಲಿಲ್ಲಾ. ಇವನು ಈ ಪ್ರೀತಿ ಪ್ರೇಮದ ಬಗ್ಗೆ ತಲೆಯು ಕೆಡಿಸಿಕೊಂಡಿರಲಿಲ್ಲಾ. ಆದರೆ ಸ್ವಲ್ಪ ದಿನಗಳ ನಂತರ ಇಬ್ಬರ ಮಧ್ಯೆ ಚಿಕ್ಕಾದಾಗಿ ಪ್ರೀತಿ ಶುರುವಾಯಿತು. ಅದೂ ಬ್ಯಾಂಕ್ ನ ವೋಚರ ಸ್ಲಿಪ್ ಮೂಲಕ ಆಕೆಯು ಬ್ಯಾಂಕ್ ನ ವೊಚರ ಹಿಂದಗಡೆ ಒಂದೊಂದೆ ಪ್ರಶ್ನೆ ಕೆಳುವಳು ಆತ ಒಂದೊಂದೆ ಉತ್ತರ ಬರೆದು ಕೊಡುವ ಮೊದಲೆ ಪ್ರಶ್ನೆ ಅರ್ಥವಾಗಲಿಲ್ಲಾ ಅವಸರದಲ್ಲಿ ಏನೋನೋ ಗೀಚಿ ಕೊಟ್ಟಿದ್ದಳು ಅದಕ್ಕೆ ಅವನು ಸರಿಯಾಗಿ ಬರೆಯಿರಿ ನನಗೆ ಅರ್ಥವಾಗಲಿಲ್ಲಾ ಎಂದು ಬರೆದಿದ್ದ ಆಗ ಅವಳು ನಿನ್ನ ಹೆಸರೇನು ಎಂಬದರಿಂದ ಪ್ರಾರಂಭವಾದ ಇವರ ಪರಿಚಯ ತಾವು ಯಾವಾಗ ಬೇಟಿಯಾಗಬೇಕು ಎನ್ನುವ ವಿಷಯದ ವರೆಗೆ ಮುಂದುವರೆಯಿತು.
ಅಂದು ಸಂಜೆಗೆ ಬೇಟಿಯಾಗೋಣ ಎಂಬ ಮಾತಿನೊಂದಿಗೆ ಅಂದು ಸಂಜೆಗೆ ಅವರಿಬ್ಬರು ಸೂಚಿಸಿದ ಸ್ಥಳಕ್ಕೆ ಬಂದರು. ಅದು ಸಾಯಂಕಾಲದ ಸಮಯ ಸೂರ್ಯ ತಾಯಿಯ ಗರ್ಭದೊಳಗೆ ಹೋಗಲು ಸಿದ್ಧನಿದ್ದ ಆಗ ವಿಶ್ವ ತನ್ನ ಪಾಡಿಗೆ ನಿಂತಿದ್ದಾನೆ ಇತ್ತ ಸೌಮ್ಯ ಮಾತಾಡದೆ ಹಾಗೆ ನಿಂತಿದ್ದಾಳೆ. ಆಗ ಮರದಿಂದ ಒಂದು ಕಾಯಿ ವಿಶ್ವನ ತಲೆಯ ಮೇಲೆ ಬೀಳುತ್ತದೆ. ವಿಶ್ವ ಅಮ್ಮ ಎನ್ನುತ್ತಾನೆ. ಆಗ ಇತ್ತ ತಿರುಗಿದ ಸೌಮ್ಯ ಅವನಿಗೆ ಬಂದು ತಲೆ ಹಿಡಿದು ಕೇಳುತ್ತಾಳೆ ತುಂಬಾ ಪೆಟ್ಟಾ ಆಯಿತೇನರಿ ಅಂತಾ ಆಗ ವಿಶ್ವ ಓ ಮರವೆ ನಿನಗೆ ಥ್ಯಾಂಕ್ಸ್ ಅಂತಾನೆ ಆಗ ಮುನಿಸಕೊಂಡು ಇಬ್ಬರು ಮಾತಾಡಲು ಪ್ರಾರಂಭಿಸುತ್ತಾರೆ. ಹೀಗೆ ಅವರಿಬ್ಬರಲ್ಲಿ ಸ್ನೇಹ ಬೆಳೆಯುತ್ತದೆ. ದಿನಾಲು ಬೇಟಿಯಾಗುವುದು ಮಾತನಾಡುವುದು ಮಾಡುತ್ತಾರೆ. ಅವರು ಇಬ್ಬರು ಒಂದು ದಿನ ಕೂಡಾ ಮಿಸ್ ಮಾಡಿಕೊಳ್ಳದೆ ಹೋಗುತ್ತಾರೆ. ಅವರ ಒಡನಾಟ ಜನರ ಕಣ್ಣಿಗೆ ಪ್ರೀತಿಯಾಗಿ ಕಾಣುತ್ತೆ ಆದರೆ ಇವರಿಬ್ಬರು ಮಾತ್ರ ಒಬ್ಬರಿಗೊಬ್ಬರು ಇನ್ನು ಪ್ರೀತಿ ಅಂತಾ ಹೇಳಿರುವುದಿಲ್ಲಾ. ಆದರೆ ಇಬ್ಬರು ಮನಸ್ಸಾ ಪೂರಕವಾಗಿ ಪ್ರೀತಿಸುತ್ತಿರುತ್ತಾರೆ. ಅವರ ಮನದ ಪ್ರೀತಿ ಬಹಳ ದಿನಗಳ ನಂತರ ಬಿಚ್ಚಿಡುವ ಕಾಲ ಬರುತ್ತದೆ.
ಒಂದು ದಿನ ರಾತ್ರಿ ವಿಶ್ವ ತನ್ನ ಮನೆಯಲ್ಲಿ ಊಟಕ್ಕೆ ಕುಳಿತಿರುತ್ತಾನೆ. ಆಗ ಸೌಮ್ಯಳ ಕರೆ ಬರುತ್ತದೆ . ಆಗ ಊಟದ ಜೊತೆಗೆ ಅವಳ ಕಾಲ ರಿಸಿವ್ ಮಾಡಿ ಮಾತಾಡುತ್ತಾನೆ. ಬನ್ನಿ ಊಟಾ ಮಾಡೋಣಾ ಅಂದಾಗ ಸೌಮ್ಯ ಫೋನ್ ನಲ್ಲಿ ಅಳುತ್ತಾಳೆ. ಅವಳ ಅಳುವ ದ್ವನಿ ಕೇಳಿ ಗಾಭರಿಯಾದ ವಿಶ್ವ ಏನು ತಿಳಿಯದಾಗುತ್ತಾನೆ. ಹಾಗೆ ಊಟ ಬಂದ ಮಾಡಿ ಮಹಡಿ ಮೇಲೆ ಹೋಗಿ ಫೋನಲ್ಲಿ ಹೇಳತ್ತಾನೆ. ಏನಾಯಿತು ಸೌಮ್ಯ ಯಾಕ ಅಳತ್ತಿದ್ದಿಯಾ ಯಾವ ಕಾರಣಕ್ಕಾಗಿ ಅಳತೀಯ ಹೇಳು ಏನಾಯಿತು ಭಾವುಕನಾಗಿ ಹೇಳುತ್ತಾನೆ. ಆಗ ಸೌಮ್ಯ ಹೇಳುತ್ತಾಳೆ ವಿಶ್ವ ನೀನು ನನಗೆ ಮೊದಲೆ ಏಕೆ ಸಿಗಲಿಲ್ಲಾ ನನ್ನ ಜೀವನದಲ್ಲಿ ಯಾವ ರೀತಿಯ ಆಟ ಆಗಿದೆ ಈ ವಿಧಿಯಿಂದ ಹೇಗೆ ಮಾಡಲಿ ಅಂತಾ ಹೇಳತಾನೆ. ನೀನು ಮೊದಲೆ ಏಕೆ ಪರಿಚಯವಾಗಲಿಲ್ಲಾ ನಾವಿಬ್ಬರು ಮೊದಲೆ ಏಕೆ ಪ್ರೀತಿಸಲಿಲ್ಲಾ ಈಗ ನನ್ನ ಮನೆಯಲ್ಲಿ ನನಗೆ ಮದುವೆ ಮಾಡುತ್ತಿದ್ದಾರೆ. ನಾನು ಏನು ಮಾಡಲಿ ಅಂತಾ ತಿಳಿತಾಯಿಲ್ಲಾ ವಿಶ್ವ ಆ ಲವ್ ಯು ಅಂತಾಳೆ ಅದಕ್ಕೆ ಸಂತೋಷಗೊಂಡ ವಿಶ್ವ ಅದಕ್ಕೆ ಅತ್ತರೆ ಅಗೊದಿಲ್ಲಾ ನೀನು ಯಾವುದಾದರು ಒಂದು ನಿರ್ಧಾರ ಮಾಡಬೇಕು ಇಲ್ಲವಾದಲ್ಲಿ ಎಲ್ಲವು ಜಾರಿ ಹೋಗುತ್ತೆ ಸರಿಯಾಗಿ ಯೋಚಿಸು ಅವಸರ ಮಾಡಿ ಅಘಾತಕ್ಕೆ ಈಡಾಗಬೇಡಾ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಅಂದಾಗ ಫೋನ ಕಟ್ ಆಯಿತು ನಂತರ ಸುಮಾರು ದಿನಗಳಾಗುವುದು.
ಅವಳ ಫೋನ್ ಬಂದ ಆಗುತ್ತೆ ಇಬ್ಬರಿಗೂ ಇಪ್ಪತ್ತು ದಿನಗಳ ಅಂತರ ಇರುತ್ತೆ ಆಗ ಇತ್ತ ವಿಶ್ವ ಚಿಂತೆಯಲ್ಲಿ ಅತ್ತ ಸೌಮ್ಯನು ಚಿಂತೆಯಲ್ಲಿ ಕಾಲ ಕಳೆಯುತ್ತಾಳೆ. ಹೀಗೆ ಒಂದು ದಿನ ವಿಶ್ವ ಯಾರದೋ ದೂರದ ಸಂಬಂದಿಯನ್ನು ನೋಡಲು ಜಿಲ್ಲೆಯ ಪ್ರತಿಷ್ಠಿತ ಆಸ್ಪತ್ರೆಗೆ ಹೋಗಿರುತ್ತಾನೆ. ಹಾಗೆ ಆಸ್ಪತ್ರೆಯ ಒಳಗೆ ಹೋದ ವಿಶ್ವ ಸುತ್ತೆಲ್ಲಾ ಕಣ್ಣು ಹಾಯಿಸಿದಾಗ ಅವನ ಕಣ್ಣು ಬಿದ್ದಿದ್ದು ಆ ಕಡೆಯ ಹಾಸಿಗೆಯ ಮೇಲೆ ಮಲಗಿರುವ ಯುವತಿಯ ಮೇಲೆ ಅವಳು ತನ್ನ ಎರಡು ಕಣ್ಣು ಮುಚ್ಚಿ ತನ್ನ ಪ್ರೀಯಕರನ ನೆನಪು ಮಾಡುತ್ತಿರುವಂತಹ ಸನ್ನಿವೇಶ ಅದೂ ಅನಿಸಿತು. ಹಾಗೆ ಸನಿಹ ಹೋಗಿ ನೋಡತ್ತಾನೆ ಅವಳೆ ಸೌಮ್ಯ ವಿಶ್ವ ಗಾಭರಿಯ ಜೊತೆಗೆ ಆಶ್ಚರ್ಯವು ಆದ ಅವಳ ಈ ಸ್ಥಿಯಲ್ಲಿ ನೋಡಿ ದು:ಖಿತನಾದ ಅವಳ ಸುತ್ತಮುತ್ತ ಇದ್ದ ಜನರನ್ನು ನೋಡಿ ಅವಳ ಹತ್ತಿರ ಹೋಗಲಿಲ್ಲಾ ತನ್ನಲ್ಲಿಯೆ ಅವಳ ನೆನಸಿ ಮತ್ತೆ ಹಿಂದೆ ಸರಿದ .
ಹಾಗೆ ಆ ಆಸ್ಪತ್ರೆಗೆ ದಿನಾಲು ಬರತೊಡಗಿದ . ಒಂದು ದಿನ ಸೌಮ್ಯ ಕಣ್ಣು ತೆರದು ಕುಳಿತುಕೊಂಡ ದೃಶ್ಯ ನೋಡಿದ ಅವಾಗ ಯಾರಿಗೂ ಹೆದರದೆ ಅವಳ ಮುಂದೆ ನಿಂತ ಆಗ ಅವಳು ಬನ್ನಿ ವಿಶ್ವ ಹೇಗಿದ್ದಿರಾ ಅಂದಳು ಅವಾಗ ಅವನಿಗೆ ಆನಂದವಾಯಿತು. ನಂತರ ಕುಳಿತು ಎಲ್ಲರಿಗೂ ಪರಿಚಯ ಮಾಡಕೊಟ್ಟಳು ಆಗ ಅವಳು ತನಾಗಾದ ಕಥೆಯನ್ನು ವಿವರಿಸುತ್ತಾ ಹೇಳಿದ್ದು ಇಷ್ಟು " ನಮ್ಮ ಮನೆಯಲ್ಲಿ ನನಗೆ ಬಲವಂತಕ್ಕೆ ಮದುವೆ ಮಾಡುತ್ತಿದ್ದಾರೆ ನಮ್ಮ ಸೋದರಮಾವ ಅವನ ಮಾತು ನೀತಿ ರೀತಿ ನನಗೆ ಯಾವುದು ಇಷ್ಟವಿಲ್ಲಾ ಆದರೆ ಮನೆಯಲ್ಲಿ ಒತ್ತಾಯ ಮಾಡುತ್ತಿದ್ದಾರೆ. ಅದಕ್ಕಾಗಿ ನನಗೆ ಒಪ್ಪಿಸಿ ನನ್ನ ನಿಶ್ಚಿತಾರ್ತ ಮುಗಿಸಿದರು. ಅದಕ್ಕಾಗಿ ನಾನು ವಿಷ ತೆಗೆದುಕೊಂಡಿದ್ದೆ ಅದಕ್ಕೆ ಇಲ್ಲಿಗೆ ಬರೋಣಾವಾಯಿತು. ಇನ್ನು ನಿನ್ನ ಫೋನ್ ನಂಬರ ಕಳಿದುಹೋಯಿತು ಏನು ಮಾಡುವುದು ತಿಳಿಯದಾಯಿತು ಅಸಹಾಯಕಳಾದೆ " ಅಂದಾಗ ಆಕೆಯ ಕಣ್ಣೀರು ಹರಿಯಿತು. ಅವಳ ಈ ಮಾತು ಕೇಳಿದ ನನಗೆ ಏನು ಹೇಳಬೇಕು ಅಂತಾ ತಿಳಿಯಲೇ ಇಲ್ಲಾ ಅವಳ ಮಾತು ನಾನು ಆಲಿಸಿದ ಮೊದಲ ವ್ಯಕ್ತಿ ಎನ್ನುವಂತೆ ಭಾಸವಾಯಿತು. ನನ್ನ ಬದುಕಿನ ಭರವಸೆಯೊಂದು ಮತ್ತೆ ಚಿಗುರಿತು ಅವಳು ಸಿಕ್ಕಳಲ್ಲಾ ಇನ್ನೆನು ಬೇಕು ಎನಿಸಿತು.
ಅವಳ ಈ ಮಾತಿನಲ್ಲಿ ನನ್ನ ಹೃದಯ ಒಡೆದು ಹೋಗುತ್ತೇನೊ ಅನಿಸಿತು. ತಾನು ಸಿಕ್ಕಿರುವ ಸಂತೋಷ ಆಕೆಯ ಕಣ್ಣಲ್ಲಿ ಕಂಡರು ಮಾತಿನಲ್ಲಿ ಯಾಕೊ ಬೇಡಾ ಎನ್ನುವ ಸೂತ್ರವಿತ್ತು. . ಆದರೂ ಅವಳ ಆ ಮುಖ ನೋಡಲು ಬಲು ಸುಂದರವಿತ್ತು. ಹಾಗೆ ಮಾತು ಮುಗಿಸಿ ಮನೆಗೆ ಹೋಗಿ ಹಾಯಾಗಿ ಮಲಗಿದಾಗ ನನ್ನ ಕನಸಲ್ಲಿ ಬಂದ ಚೋರಿ ಅವಳು ಅವಳ ನೆನಪುಗಳೆ ಹಿಂಗೆ ಈ ಹೃದಯ ಜುಮ್ಮೆನಿಸುವ ಹಾಗೆ ನನ್ನ ಹೃದಯ ಒಡೆದು ಚೂರಾಗುವ ಹಾಗೆ ಎನ್ನ ಮನದ ಮುಗಿಲಲ್ಲಿ ಅವಳ ಈ ಮಾತುಗಳು ಅಚ್ಚಳಿಯದೆ ಉಳಿದ ಹಾಗೆ ನನ್ನ ಮನಸ್ಸೊಂದು ಜಾರಿ ಅವಳ ಜೋಳಿಗೆಯ ಮೇಲೆ ಬಿದ್ದ ಹಾಗೆ.
ಮೂರು ದಿನಗಳ ನಂತರ ಆಕೆಗೆ ಒಂದು ಕರೆ ಮಾಡಿದೆ ಆ ಕಡೆಯಿಂದ ಮಾತಾಡಿದ್ದು ಗಂಡಸಿನ ಧ್ವನಿ " ಯಾರು ನೀನು ಅಂತಾ ನಾನು ನೀನು ಯಾರು ಮಾತಾಡುವುದು . ಆಗ ಏ ಮೊದಲು ಕಾಲ ಮಾಡಿದ್ದು ನೀನು ಅದಕ್ಕೆ ನೀನು ಯಾರು ಹೇಳು ಅಂದಾ ನಾನು ಏ ನನ್ನ ಹುಡುಗಿ ಫೋನ್ ಎತ್ತಿದ್ದು ನೀನು ಯಾರು ಹೀಗೆ ವಾದ ವಿವಾದಗಳು ನಡೆದವು ಅದರ ಹಿನ್ನಲೆಯಲ್ಲಿ ನಾವು ಇಬ್ಬರು ಸ್ವಲ್ಪ ಜಗಳದ ನಂತರ ತಿಳಿತು ಈ ಧ್ವನಿ ಅವಳೊಂದಿಗೆ ಮದುವೆಯಾಗಬೇಕಿದ್ದ ಎಂಗೇಜಮೆಂಟ್ ಮಾಡಿಕೊಂಡ ಯಜಮಾನರದು ಅಂತಾ.
ಆಗ ಸೌಮ್ಯ ಅತ್ತು ಕೈಮುಗಿದು ಹೇಳಿದಳು ನನ್ನ ಮರೆತು ಬಿಡಿ ನನ್ನ ಜೀವನದಲ್ಲಿ ಮತ್ತೆ ಸಿಗಬೇಡಿ ನನ್ನದು ಈಗ ಮದುವೆ ಆಗಿದೆ ಸುಮ್ಮನೆ ಕಾಡಬೇಡಿ ಎಂದಳು. ಈ ಮಾತಿಗೆ ನನ್ನ ಅರ್ದ ಶಕ್ತಿ ಕುಂದಿ ಹೋಯಿತು. ಅವಳ ಮಾತಿನಿಂದ ಎದ್ದು ನಿಲ್ಲಬೇಕು ಎಂದು ಪ್ರಚೋದನೆ ಪಡೆದ ನಾನು ಇಂದು ತುಂಬಾ ಅಸಹಾಯಕನಾದೆ ಎನಿಸಿತು. ಅವಳಿಂದ ಮೋಸ ಹೋದೆ ಎನಿಸಿತು. ಅಲ್ಲಿಂದ ಶುರುವಾಯಿತು. ನಮ್ಮ ಹೊಸ ಅವತಾರ ಮನೆಯಲ್ಲಿ ನನ್ನ ವರ್ತನೆ ವಿಚಿತ್ರವಾಯಿತು. ಯಾರ ಮಾತು ಕೇಳದೆ ಹೋಗುವ ಧಾಟಿ ಶುರುವಾಯಿತು.
ನಾನು ಯಾವತ್ತು ಮನೆಯ ಮಗನಾಗಿದ್ದು ಇಂದು ಯಾರ ಬಗ್ಗೆಯು ಚಿಂತಿಸದೆ ಹೋದೆ ಬರಿ ಅವಳದೆ ನೆನಪು ನಾನು ಅವಳಿಲ್ಲದ ಈ ಬದುಕು ಹೇಗೆ ಕಳೆಯಲಿ ಎನ್ನುವ ತವಕ ತುಂಬಾ ಸಂಕಟ ಮತ್ತು ನೋವು ಅನುಭವಿಸಿದೆ. ಅದರ ರೀತಿ ಹೇಳತೀರದು ಅವಳು ಇಲ್ಲದೆ ನನ್ನ ಬದುಕು ಹೇಗೆ ಎನ್ನುವ ಮಾತು ಪದೆ ಪದೆ ನನ್ನ ಕೊರಗುವಂತೆ ಮಾಡಿತು. ಅವಳ ಪ್ರೀತಿ ಪ್ರತಿಕ್ಷಣ ನನ್ನ ಕಾಡಿತು. ಅವಳೊಂದಿಗೆ ಕಳಿದ ನೆನಪುಗಳು ಅವಳೊಂದಿಗೆ ಆಡಿದ ಮಾತುಗಳು ಎಲ್ಲವು ನನೆಪಾಗಿ ನನ್ನ ಪುಟ್ಟ ಹೃದಯ ಘಾಸಿಯಾಗುವಂತೆ ಮಾಡಿದವು. ನನಗೆ ಊಟ ಸೇರಲಿಲ್ಲಾ ಮತ್ತು ಮನಸ್ಸು ಬರಲಿಲ್ಲಾ ಅವಾಗ ಸಾತ ಕೊಟ್ಟಿದ್ದು ಈ ಸರಾಯಿ ಕುಡಿದಾಗ ಸುಖ ಇರದಿದ್ದಾಗ ಮತ್ತೆ ಆಕೆಯ ನೆನಪು. ಅವಳ ಈ ನೆನಪೆ ನನ್ನ ಹೀನಾಯ ಸ್ಥಿತಿ ಮಾಡಿತು. ತುಂಬಾ ದೇಹದ ಸ್ಥಿತಿ ಕೆಟ್ಟಿತು . ನಾನು ಆಸ್ಪತ್ರೆ ಸೇರಿದೆ ನನ್ನ ಕುಟುಂಬ ಚಿಂತೆಯಲ್ಲಿ ಬಿತ್ತು ಕಾರಣ ಯಾರಿಗೂ ತಿಳಿಯಲಿಲ್ಲಾ.
ಒಂದು ದಿನ ನಾನು ಆಸ್ಪತ್ರೆಯಲ್ಲಿ ನಾನು ಮಲಗಿದ್ದಾಗ ಯಾರೊ ಬಂದು ಎಬ್ಬಿಸಿದಂತಾಯಿತು ಎದ್ದು ನೋಡಿದರೆ ಇದು ಕನಸಿತ್ತು. ಕೆಲವು ದಿನಗಳ ನಂತರ ಮನೆಗೆ ಬಂದೆ ಆಗ ನಮ್ಮ ಮನೆಯಲ್ಲಿ ನನಗೆ ಒಂದು ಸುಂದರ ಕನ್ನೆ ನೋಡಿ ಮದುವೆಗೆ ಸಿದ್ದ ಮಾಡಿದರು ನಾನು ಯಾವ ದಾರಿಯು ಇಲ್ಲದೆ ಒಪ್ಪಿಕೊಂಡೆ ಆಗ ನಡೆದ ನನ್ನ ಜೀವನವೇ ವಿಚಿತ್ರ ಅನಿಸಿತು ಕಾರಣ ಇಷ್ಟೆ ಅವಳು ನನ್ನ ಬದುಕಿನ ಕೆಲವು ದಿನಗಳು ನೆನಪಿಸಿಯೆ ನನ್ನ ಜೀವನದ ಹೊಸ ದಿನಗಳತ್ತ ಸಾಗುತ್ತಿದ್ದಳು. ಅದಕ್ಕಾಗಿ ಆಕೆಯ ನೆನಪು ಇನ್ನು ಹಸಿರಾಗಿಯೆ ಇದೆ ಮೊದಲ ಪ್ರೇಮ ಮರೆಯಲು ಸಾದ್ಯವಿಲ್ಲಾ ರಿ ನಾನು ನಿನ್ನ ಮದುವೆಯಾದ ಮೇಲೆ ನೀನು ನನ್ನ ಮೊದಲ ಪ್ರೇಮ ಅಂತಾ ಆಗಾಗ ನನ್ನ ಹೆಂಡತಿ ಹೇಳತಾಳೆ ನಾನು ಆಕೆಗೆ ಮೊದಲ ಪ್ರೇಮವಾದರೆ ನನಗೆ ಸೌಮ್ಯ ಮೊದಲ ಪ್ರೀತಿ ಅವಳು ಈಗಲು ಎದುರು ಬಂದರೆ ಹೃದಯ ಅವಳ ಕಡೆಗೆ ವಾಲುತ್ತೆ ಯಾಕೆ ಹೀಗೆ ಈ ಪ್ರೀತಿ ಎದುರಿಗೆ ಇದ್ದರು ಪ್ರೀತಿಸಲ್ಲಾ , ಇಲ್ಲವಾದವರ ನೆನಸಿ ನೆನಸಿ ಸಾಯುತ್ತೆ. ಈ ಪ್ರೀತಿನೆ ಹೀಗೆ " ಇದ್ದಾಗ ಮಾಡುವ ಆಸೆ ಇರಲ್ಲಾ ಆಸೆ ಇದ್ದಾಗ ಈ ಪ್ರೀತಿ ಸಿಗಲ್ಲಾ .” ಈ ಪ್ರೀತಿಯೆ ಹೀಗೆ ಯಾರು ಅಂದುಕೊಳ್ಳದ ಹಾಗೆ. ಈ ಕಥೆಯ ನೀತಿ ಇಷ್ಟೆ ನಾವು ಬಯಸಿದ್ದು ಸಿಗದಿದ್ದಾಗ ನಾವು ನಮ್ಮವರಿಗಾಗಿ ಮತ್ತು ನಮ್ಮನ್ನು ಪ್ರೀತಿಸುವವರಿಗಾಗಿ ಕೆಲವು ತ್ಯಾಗಗಳನ್ನು ಮಾಡಬೇಕಾಗುತ್ತದೆ. ಏಕೆಂದರೆ ಪ್ರೀತಿಯ ಮತ್ತೊಂದು ನೈಜ ಅರ್ಥ ತ್ಯಾಗ ಅಲ್ಲವೆ.