ಪ್ರಸ್ತುತ ಮಾಧ್ಯಮ ಕ್ಷೇತ್ರದಲ್ಲಿ ಅತ್ಯಂತ ವೇಗವಾಗಿ ಜನರಿಗೆ ಮುಟ್ಟಿರುತ್ತಿರುವ ಮಾಧ್ಯಮ ದೃಶ್ಯ ಮಾಧ್ಯಮವಾಗಿದೆ. ಸುದ್ದಿ ಇದೀಗ ನಮ್ಮ ಬೆರಳ ತುದಿಯ ಮೇಲಿದೆ. ಬದುಕು ತುಂಬಾ ಸುಂದರವಾದ ವಾತಾವರಣದಲ್ಲಿ ತೇಲಾಡುವಂತೆ ಮಾಡುತ್ತಿದೆ. ಸುದ್ದಿಯನ್ನು ಮಾಹಿತಿಯನ್ನು ಎಲ್ಲರಿಗಿಂತ ಮೊದಲು ಮತ್ತು ವೇಗವಾಗಿ ಕೊಡಬೇಕೆಂಬ ಹಂಬದೊಳಗೆ ಇತ್ತೀಚೆನ ಕೆಲವು ದೃಶ್ಯ ಮಾಧ್ಯಮಗಳು ಕನ್ನಡ ಆಡುಭಾಷೆಯನ್ನೆ ತಮ್ಮ ದೃಶ್ಯ ಮಾಧ್ಯಮದ ಪ್ರಯೋಗ ಭಾಷೆಯಾಗಿ ಹೇಳುತ್ತಿವೆ ಅದರಿಂದ ಪ್ರಚಾರ ಸಿಕ್ಕಿದ್ದೇನೊ ನಿಜಾ ಆದರೆ ಅದರಿಂದ ಆಗುತ್ತಿರುವ ಅವಾಂತರಗಳನ್ನು ದೃಶ್ಯ ಮಾಧ್ಯಮಗಳು ಪರಿಗಣಿಸುತ್ತಿಲ್ಲ.
ಆಡುಭಾಷೆಗಳ ಪ್ರಯೋಗ:
ಟಿವಿ ವಾಹಿನಿಗಳು ದೌರ್ಜನ್ಯ, ಹಿಂಸೆಗೆ ಪ್ರೇರಣೆ ನೀಡುವ ಕಾರ್ಯಕ್ರಮಕ್ಕಿಂತ ಹೆಚ್ಚಿಗೆ ಸಾಮಾಜಿಕ ಪಿಡುಗು ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ರಮ ಪ್ರಸಾರ ಮಾಡಲು ಆದ್ಯತೆ ನೀಡುತ್ತಿಲ್ಲ. ಅಲ್ಲಿರುವ ಭಾಷೆಗಳಲ್ಲಿ ಈ ಕಡೆಗೆ ಹಳ್ಳಿ ಸೊಗಡುಯಿಲ್ಲ, ನಗರದ ದಾಟಿಯು ಇಲ್ಲವಾಗಿದೆ. ಸುಭದ್ರ ಸಮಾಜ ಹಾಗೂ ಅಭಿವೃದ್ಧಿ ದೇಶ ಕಟ್ಟಲು ದೃಶ್ಯ ಮಾಧ್ಯಮದಿಂದ ಸಾಧ್ಯವಾಗುತ್ತದೆ ಎಂಬ ವದಂತಿಯೊಳಗೆ ಕಾಲಿಟ್ಟು ಇದೀಗ ದೃಶ್ಯ ಮಾಧ್ಯಮ ತನ್ನ ಆಡುಭಾಷೆಯ ಬಳಕೆಯಲ್ಲಿ ನಿರತವಾಗಿದೆ. ಭಾರತದಲ್ಲಿ ಯುವ ಸಮೂಹ ಜನಸಂಖ್ಯೆಯ ಶೇ.40 ಭಾಗವಿದ್ದು, ಅವರನ್ನು ಸರಿ ದಾರಿಯಲ್ಲಿ ಕೊಂಡೊಯ್ಯುವ ಮೂಲಕ ದೇಶವನ್ನು ಪ್ರಗತಿ ಪಥದತ್ತ ಮುನ್ನಡೆಸಬೇಕು ದೃಶ್ಯ ಮಾಧ್ಯಮ ಆಡುಭಾಷೆಯ ಪ್ರಯೋಗದಲ್ಲಿ ಈ ನಿಲುವು ತುಂಬಾ ಕಡಿಮೆ ಪ್ರಯೋಗವಾಗುತ್ತಿದೆ.
ಸ್ಪರ್ಧಾತ್ಮಕ ಯುಗವಾಗಿರುವುದರಿಂದ ಅತ್ಯುತ್ತಮ ಜ್ಞಾನಕ್ಕೆ ಸದಾ ಅವಕಾಶಗಳು ಹೆಚ್ಚಿರುತ್ತವೆ. ಅಂಥ ಜ್ಞಾನಾರ್ಜನೆ ಮಾಡಬೇಕಾದರೆ ಸತತ ಶ್ರಮದಿಂದ ಕಲಿಕೆ ಮಾಡಬೇಕು. ಈ ವಿಷಯಗಳನ್ನು ದೃಶ್ಯ ಮಾಧ್ಯಮಗಳು ತಮ್ಮ ಆಡುಭಾಷೆಯ ಪ್ರಯೋಗದಲ್ಲಿ ಬಳಸಿಕೊಳ್ಳಬೇಕಾದ ಅತೀ ಅವಶ್ಯಕತೆಯಿದೆ.
ಇತ್ತೀಚೆಗೆ ಹೋಮ್ಸ್ಟೇಯಲ್ಲಿ ನಡೆದ ಹಲ್ಲೆ ಪ್ರಕರಣ ಖಂಡನೀಯ ವಾದದು. ಆದರೆ ಮಾಧ್ಯಮ ಅದ ರಲ್ಲೂ ಟಿ.ವಿ. ಮಾಧ್ಯಮಗಳ ನಡೆ ವಳಿಕೆ ಅತಿರೇಕ ಆಗುವಂಥದ್ದು. ನಮ್ಮ ಮಂಗಳೂರು ನಗರದಲ್ಲಿ ತಾಲಿಬಾನ್ ಎಂದು ಕರೆಯುವುದು ಯಾವ ನೆಲೆ ಯಲ್ಲಿ? ಕೆಲವೊಂದು ವ್ಯಕ್ತಿಗಳ ಮತ್ತು ಜನಪ್ರತಿನಿಧಿಗಳನ್ನು ಯಾಕೆ ಹೊಣೆ ಮಾಡಿ ತೆಗಳುತ್ತೀರಿ, ಮತ್ತು ಒಂದು ನಿರ್ದಿಷ್ಟ ಧರ್ಮವನ್ನು ಮತ್ತು ಸಂಸ್ಕೃತಿ ಯನ್ನು ತೆಗಳುತ್ತೀರಿ. ಒಬ್ಬ ವ್ಯಕ್ತಿ ಮತ್ತು ಗುಂಪು ಅಪರಾಧವೆಸಗಿದರೆ ಆತನ ಧರ್ಮ, ಸಂಸ್ಕೃತಿ ಸರಿಯಿಲ್ಲ ವೆಂದು ಯಾವ ನೆಲೆಯಲ್ಲಿ ಹೇಳುತ್ತೀರಿ. ಹೀಗೆ ಆಡು ಭಾಷೆಯನ್ನು ದೃಶ್ಯ ಮಾಧ್ಯಮಗಳು ಬಳಸಿ ವಾತಾವರಣವನ್ನು ಹದಗೆಡಿಸಿದ್ದು ಎಲ್ಲರಿಗೂ ನೆನಪಿದೆ.
ಘಟನೆಯ ದೃಶ್ಯವನ್ನು ಪದೇ ಪದೇ ಮತ್ತು ದಿನವಿಡೀ ಪ್ರಸಾರ ಮಾಡಿ ಅಲ್ಲಿ ಉಪಸ್ಥಿತ ಹುಡುಗಿಯರ ಮತ್ತು ಮನೆಯವರ ಮನಸ್ಸನ್ನು ಘಾಸಿ ಮಾಡುವ ನಿಮ್ಮ ಮಾಧ್ಯಮದವರ ಬೇಜ ವಾಬ್ದಾರಿ ವೃತ್ತಿ ಧರ್ಮವನ್ನು ಯಾವ ಸಂಸ್ಕೃತಿಯೆಂದು ಕರೆಯುವುದು? ಕೆಲವೊಂದು ಮಾಧ್ಯಮದವರಿಗೆ ಈ ಘಟನೆ ನಡೆಯುವ ಬಗ್ಗೆ ಮಾಹಿತಿಯಿದ್ದರೆ ಮತ್ತು ಆ ಸ್ಥಳಕ್ಕೆ ಧಾವಿಸಿದ ಮೇಲಾದರೂ ಪೆÇಲೀಸರಿಗೆ ಯಾಕೆ ಮಾಹಿತಿ ನೀಡಿಲ್ಲ? ಕೆಲವು ಅಧಿಕಾರಿ ಗಳು ಕರೆಯನ್ನು ಸ್ವೀಕರಿಸದಿದ್ದರೆ, ಕಂಟ್ರೋಲ್ ರೂಂಗೆ ಅಥವಾ ಮೇಲಧಿಕಾರಿಗಳಿಗೆ ತಡೆಯಬಹುದಿತ್ತು ಅಥವಾ ನಿಯಂತ್ರಿಸಬಹುದಿತ್ತು. ಆದರೆ ದೃಶ್ಯ ಮಾಧ್ಯಮಗಳು ತಮ್ಮ ಆಡುಭಾಷೆಯ ಬಳಕೆ ಮಾಡಿ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡಿದವೆ ಹೊರತು ಬೇರೆ ಮಾಡಲು ಆಗಲಿಲ್ಲ.
`ಶಾಲೆಯಿಂದ ದೂರ ವಿರುವ ಹಾಗೂ ಅಕ್ಷರ ಕಲಿಕೆ ಯಲ್ಲಿ ಆಸಕ್ತಿಯನ್ನು ಕಳೆದುಕೊಂಡಂತಹ ಮಕ್ಕಳನ್ನು ಆಕರ್ಷಿಸುವಲ್ಲಿ ದೃಶ್ಯ ಮಾಧ್ಯಮ ಯಶಸ್ವಿಯಾಗಿರಬಹುದು ಆದರೆ ಅಲ್ಲಿಯು ತನ್ನ ಆಡುಭಾಷೆ ಆಡಲು ಹೋಗಲಿ ಅದರ ಘನತೆಗೆ ಬೆಂಕಿ ಹಚ್ಚುತ್ತಿರುವ ಸತ್ಯ ಮಾತ್ರ ಮರೆಯುವಂತಿಲ್ಲ. ಪ್ರಜಾ ಪ್ರಭುತ್ವದ ವ್ಯವಸ್ಥೆಯಲ್ಲಿ ಉತ್ತಮ ಸಮಾಜಕ್ಕೆ ಮಾಧ್ಯಮದ ಕೊಡುಗೆ ಅಪಾರ ಹಾಗೂ ಅತ್ಯಗತ್ಯ. ಇವೆರಡೂ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಸ್ವಾತಂತ್ರ ಬಂದಾಗಿನಿಂದಲೂ ಹಿಡಿದು ಇತ್ತೀಚಿನ ದೆಹಲಿ ಗ್ಯಾಂಗ್ ರೇಪ್ ಪ್ರಕರಣ ಭ್ರಷ್ಟಾಚಾರ ಗಳನ್ನು ನೋಡಿದರೆ ಭವಿಷ್ಯದೆಡೆಗೆ ಆತಂಕ ಮೂಡುತ್ತಿದೆ.
ಮುಂದೊಂದು ದಿನ ನಾವು ಅಸಹಾಯಕತೆಯಿದ ಭಯೋತ್ಪಾದನೆಗೂ ಸಹ ತಲೆಬಾಗುವ ಸ್ಥಿತಿ ಎದುರಾದರೆ ಆಶ್ಚರ್ಯವಿಲ್ಲ. ಇಂತಹ ಸಂದರ್ಭದಲ್ಲಿ ದೃಶ್ಯಮಾಧ್ಯಮಗಳು ಆಡುಭಾಷೆಗೆ ಮಾರು ಹೋಗುತ್ತಿವೆ ಅದರ ಸರಿಯಾದ ಬಳಕೆಯಲ್ಲಿ ಯಡವುತ್ತಿವೆ.
ಇಂಥಹ ಪರ್ತಿಸ್ಥಿಯಲ್ಲೂ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ನಂಬುವುದು ಈ ಭ್ರಷ್ಟಾಚಾರ ಅತ್ಯಾಚರಗಳನ್ನು ತಡೆಯಲು ಸಮಾಜದ ನ್ಯೂನತೆಗಳನ್ನು ತಿದ್ದಲು, ಸಮಾಜದ ಸ್ವಾಸ್ಥ್ಯಕ್ಕಾಗಿ ಯಾವುದೇ ಒತ್ತಡಗಳಿಗೂ ಮಣಿಯದೇ ಕೆಲಸ ನಿರ್ವಹಿಸುವ ನ್ಯಾಯಾ'ಲಯ' ಹಾಗೂ ಪ್ರಜಾಪ್ರಭುತ್ವದಲ್ಲಿ 4ನೇ ಅಂಗ ಎಂದು ಕರೆಸಿಕೊಳ್ಳುವ ಮಾಧ್ಯಮವನ್ನು. ಇದೀಗ ಹೆಚ್ಚಾಗಿ ದೃಶ್ಯ ಮಾಧ್ಯಮದ ಮೇಲೆ ಎಲ್ಲರ ಕಣ್ಣುಗಳು ಕುಳಿತುಕೊಂಡಿವೆ. ಆದರೆ ಬದಲಾದ ಕಾಲಘಟ್ಟದಲ್ಲಿ ಜನರ ನಂಬಿಕೆ ಹಾಗೂ ಸಮಾಜಕ್ಕೋಸ್ಕರವೇ ಕೆಲಸ ನಿರ್ವಹಿಸುವ ನ್ಯಾಯಾಲಯ ಹಾಗೂ ಮಾಧ್ಯಮಗಳು ಬದಲಾಗಿದೆ ಎಷ್ಟರ ಮಟ್ಟಿಗೆ ಎಂದರೆ ತಾವು ನಿರ್ವಹಿಸುವ ಕಾರ್ಯಗಳ ಬಗ್ಗೆ, ತಮ್ಮ ಧ್ಯೇಯೋದ್ದೇಶಗಳನ್ನು ಮರೆತು ಅದನ್ನು ಮತ್ತೆ ಹುಡುಕುವ ನಿಟ್ಟಿನಲ್ಲಿ ಆತ್ಮ ವಿಮರ್ಶೆ ಮಾಡಿಕೊಳ್ಳುವ ಸಂದರ್ಭ ಮಾಧ್ಯಮ ಹಾಗೂ ನ್ಯಾಯಾಂಗಕ್ಕೆ ಬಂದೊದಗಿದೆ. ಆದರೆ ಇಂಥಹ ವಿಮರ್ಶೆಗಳು ಅಗತ್ಯವೂ ಸಹ. ಸರಿ, ಕಾಲಾನುಸಾರವಾಗಿ ಅದೆಷ್ಟೋ ಕಾನೂನುಗಳು ಬದಲಾಗುತ್ತವೆ ಇದರಿಂದ ಅದೆಷ್ಟೋ ಮಂದಿಗೆ ಸಹಾಯವೂ ಆಗಿರುವುದನ್ನು ನಾವೆಲ್ಲರೂ ಒಪ್ಪಿಕೊಳ್ಳಲೇ ಬೇಕು ನಮ್ಮ ದೃಶ್ಯ ಮಾಧ್ಯಮಗಳು ಸುದ್ದಿ ಬಿತ್ತರಿಸುವುದೂ ಅವುಗಳ ಕಾರ್ಯ ನಿರ್ವಹಣೆಯ ಶೈಲಿಯಲ್ಲಂತೂ ಅಗಾಧವಾದ ಬದಲಾವಣೆಗಳಾಗಿವೆ.
ಈ ವಿಷಯಗಳಿಗೆ ಸಂಬಂಧಿಸಿದಂತೆ ನ್ಯಾಯಾಂಗ, ಮಾಧ್ಯಮಗಳು ಕಾರ್ಯ ನಿರ್ವಹಿಸುವುದರ ಬಗ್ಗೆ ಜ.20ರಂದು ಸಹ ಏರ್ಪಡಿಸಲಾಗಿತ್ತು. ಅಲ್ಲಿ ಸಮಾಜದ ಒಳಿತಿಗಾಗಿ, ಎರಡೂ ಕ್ಷೇತ್ರಗಳ ನ್ಯೂನತೆಗಳನ್ನು ಚರ್ಚಿಸಿ ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಉತ್ತಮವಾದ ವಿಷಯಗಳು ಮಂಡನೆಯಾದವು.
ವಿಚಾರ ಸಂಕಿರಣದಲ್ಲಿ ಮಾಧ್ಯಮಗಳು ಮಿತಿಮೀರಿ ವರ್ತಿಸುತ್ತಿವೆ, ಪ್ರಮುಖವಾಗಿ ದೃಷ್ಯ ಮಾಧ್ಯಮಗಳು ಸುದ್ದಿಯ ಸತ್ಯಾಸತ್ಯತೆ ಅರಿಯದೆ ಸುದ್ದಿ ಬಿತ್ತರಿಸುತ್ತಿದೆ. ಅವು ಸ್ವಯಂ ಪ್ರೇರಿತರಾಗಿ ಕೆಲವು ವಿಷಯಗಳಲ್ಲಿ ತಮಗೆ ತಾವೇ ನಿರ್ಭಂಧ ಹಾಕಿಕೊಳ್ಳಬೇಕು ಎಂಬ ಇತ್ಯಾದಿ ಸಲಹೆಗಳನ್ನು ನೀಡದರು ಅಲ್ಲಿ ನೆರೆದಿದ್ದ ಸಭಿಕರು. ಮಾಧ್ಯಮದಲ್ಲಿ ಬಿತ್ತರವಾದ ಸುದ್ದಿಯನ್ನು ಆಧರಿಸಿ ಅಡಿಯಲ್ಲಿ ನ್ಯಾಯಾಲಯ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಅನೇಕ ಉದಹರಣೆಗಳಿವೆ ಈ ರೀತಿ ಮಾಧ್ಯಮಗಳಿವೆ ಈ ರೀತಿ ಮಾಧ್ಯಮಗಳಿಗೆ, ನೀಡುವ ಘನತೆಗೆ ಧಕ್ಕೆ ಬರಬಾರದೆಂಬ ಕಾರಣಕ್ಕೆ ಎಲ್ಲಾ ಸಲಹೆಗಳನ್ನು ಒಪ್ಪಲೇಬೇಕಾಗುತ್ತದೆ.
ಮಾಧ್ಯಮಗಳಿಗೆ ಈ ರೀತಿ ಸಲಹೆಗಳನ್ನು ನೀಡಲು ಇತ್ತೀಚಿನ ದಿನಗಳಲ್ಲಿ ಅವುಗಳ ವರ್ತನೆಯೂ ಸಹ ಹಾಗೆಯೇ ಇದೆ. ಉದಾಹರಣೆಗೆ ಇತ್ತೀಚೆಗೆ ಡಿಸೆಲ್ ದರ ಏರಿಕೆಯಾಗಿತ್ತು ಎಲ್ಲಾ ಮಾಧ್ಯಮಗಳು ಸಹ ಜನ ಸಾಮಾನ್ಯರ ಮೇಲೆ ಹೊರೆ ಬೀಳಲಿದ್ದ ಡಿಸೆಲ್ ಹಾಗೂ ಪೆಟ್ರೋಲ್ ದರ ಏರಿಸಿರುವುದರ ಬಗ್ಗೆ ವರದಿ ಹಾಗೂ ವಿಶ್ಲೇಷಣೆ ಮಾಡುವುದನ್ನು ಬಿಟ್ಟು ನಟ ದುನಿಯಾ ವಿಜಯ್ ಅವರ ಡಿವೋರ್ಸ್ ಪ್ರಕರಣವನ್ನು ದಿನ ಗಟ್ಟಲೆ ಪ್ರಸಾರ ಮಾಡಿತ್ತು. ಅಷ್ಟೇ ಏಕೆ ಯಾವುದೇ ಸೆಲೆಬ್ರಿಟಿಗಳ ಸ್ವಂತ ವಿಷಯವನ್ನು ಬಯಲಿಗೆಳೆಯಲ್ಲು ಚಾತಕ ಪಕ್ಷಿಗಳಂತೆ ಕಾಯುತ್ತಿರುತ್ತಾರೆ ನಮ್ಮ ದೃಶ್ಯ ಮಾಧ್ಯಮದವರು. ಅದು ಪಕ್ಕಾ ಆಡುಭಾಷೆ ಬಳಕೆ ಮಾಡಿ ಅವುಗಳ ಹೆಡ್ ಲೈನ್ ಕೇಳಿದರೆ ಬೆಚ್ಚಿಬೀಳುವಂತಿರುತ್ತವೆ. ಆದರೆ ಮತ್ತೊಂದು ದೃಷ್ಠಿಯಿಂದ ನೋಡಿದರೆ ಕೇವಲ ಮಾಧ್ಯಮ ಮತ್ತು ನ್ಯಾಯಾಂಗ ಹಾಗೂ ಅವುಗಳ ಕಾರ್ಯ ವ್ಯಾಪ್ತಿಯ ಬಗ್ಗೆ ವಿಮರ್ಶೆ ನಡೆಸುವುದರಿಂದ ಸಮಾಜಕ್ಕಾಗಲಿ ಅಥವಾ ಪ್ರಜಾಪ್ರಭುತ್ವಕ್ಕಗಲೀ ಯಾವುದೇ ಪರಿಣಾಮಕಾರಿ ಪ್ರಯೋಜನವಾಗುವುದಿಲ್ಲ.
ದೃಶ್ಯ ಮಾಧ್ಯಮ ಬೇಡದ ಸುದ್ದಿಗಳನ್ನು ಪ್ರಸಾರ ಮಾಡುತ್ತಿದೆ ಯಾವುದೇ ಸೆಲಬ್ರಿಟಿಗಳ ಖಾಸಗಿ ವಿಷಯಗಳನ್ನು ದಿನಗಟ್ಟಲೆ ಬಿತ್ತರಿಸುತ್ತಾರೆ. ನ್ಯಾಯಾಂಗವೂ ಸಹ ಕೆಲವು ಅಪರಾಧಿಗಳ ಅಪರಾಧಗಳು ಸಾಬೀತಾಗಿದ್ದರೂ ರಾಜಕೀಯ ಒತ್ತಡದಿಂದ ಎಷ್ಟೋ ಕೇಸ್ಗಳು ಖುಲಾಸೆಗೊಳಿಸುತ್ತದೆ. ಇಲ್ಲವೇ ಅಪರಾಧಿಗಳು ಯಾವುದೇ ಪ್ರಭಾವಿಗಳ ಮಕ್ಕಳೂ ಅಥವಾ ಸಂಬಂಧಿಗಳೋ ಆಗಿದ್ದರೆ ತೀರ್ಪು ಅವರ ಪರವಾಗಿ ಬಂದಿರುವ ಎಷ್ಟೋ ಪ್ರಕರಣಗಳು ಉದಾಹಣೆಯಾಗಿದೆ.
ಆದರೆ ಇಂಥಹ ಪರಿಸ್ಥಿತಿಯಲ್ಲೂ ದೆಹಲಿ ಗ್ಯಾಂಗ್ ರೇಪ್ ಪ್ರಕರಣದಂಥಹ ಪ್ರಕರಣದಲ್ಲಿ ಇಂದಿಗೂ ಸಹ ನ್ಯಾಯಾಂಗದ ಮೇಲಿರುವ ನಂಬಿಕೆ ಹಾಗೆಯೇ ಉಳಿದಿದೆ. ಆದರೆ ಇದೇ ನ್ಯಾಯಾಂಗ ದೆಹಲಿಯಲ್ಲಿ ಗ್ಯಾಂಗ್ ರೇಪ್ ನಡೆಯುವುದಕ್ಕೂ ಎರಡು ಮೂರು ದಿನಗಳ ಮುನ್ನ ಸಂದೇಶ್ ಅಭಂಗ್ ಎಂಬ ವ್ಯಕ್ತಿಯ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿ ಮಹತ್ವದ ತೀರ್ಪು ಪ್ರಕಟಿಸಿತ್ತು. ಇಂಥಹ ತೀರ್ಪುಗಳನ್ನು ಗಮನಿಸಿದಾಗ ಜನರಿಗೆ ನ್ಯಾಯಾಂಗ, ಹಾಗೂ ಮಾಧ್ಯಮದ ಮೇಲೆ ಒಂದು ಕ್ಷಣ ಬೇಸರವಾಗುತ್ತದೆ. ವಿಮರ್ಶೆ, ಚರ್ಚೆ,ಸಂಕಿರಣಗಳನ್ನು ಇಂಥಹ ವಿಷಯಗಳನ್ನು ಕುರಿತು ಮಾಡಬೇಕಾದ ಅಗತ್ಯವಿದೆ ಎಂದು ಹೇಳಬಹುದು.
ಇವತ್ತು ಗ್ಯಾಂಗ್ ರೇಪ್ ಮಾಡುವ ವ್ಯಕ್ತಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂಬ ಆಗ್ರಹ ಸಾಮಜದ ಮೂಲೆ ಮೂಲೆಗಳಿಂದ ಕೇಳಿಬರುತ್ತಿದೆ. ಒಂದು ವೇಳೆ ಇಂಥಹ ಪ್ರಕರಣದಲ್ಲಿ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗುವುದು ಸರಿ ಎಂದರೆ ಸಂದೇಶ್ ಅಭಂಗ್ ಗೂ ಸಹ ಮರಣ ದಂಡನೆ ಖಾಯಂ ಆಗಬೇಕಿತ್ತು. ಆ ವ್ಯಕ್ತಿ ಮಾಡಿದ ಅಪರಾಧವೆಂದರೆ ಸೆಂಪ್ಟೆಂಬರ್ 2007ರಲ್ಲಿ ಪುಣೆಯ ಮೇಲ್ವರ್ಗದ ಕಾಲೋನಿಯೊಂದರಲ್ಲಿ ಒಬ್ಬ ಮಹಿಳೆಯ ಮೇಲೆ ಅತ್ಯಾಚಾರವೆಸಗಿ, ಅದೇ ಮನೆಯಲ್ಲಿ 65ವರ್ಷದ ವೃದ್ದೆಯನ್ನು 21 ಬಾರಿ ಚಾಕುವಿನಿಂದ ಇರಿದು ಒಂದು ಹಸ್ತದ ನಾಲ್ಕು ಬೆರಳುಗಳನ್ನು ಕತ್ತರಿಸಿ ಅಮಾನವೀಯತೆಯಿಂದ ಕೊಲೆ ಮಾಡಿದ್ದ. ಪರಿಣಾಮ ವೃದ್ಧೆ ಸಾವನ್ನಪ್ಪಬೇಕಾಯಿತು. ಈತ ಅತ್ಯಾಚಾವೆಸಗಿದ್ದ ಗರ್ಭಿಣಿ ಯುವತಿಯನ್ನೂ 19ಬಾರಿ ಚಾಕುವಿನಿಂದ ಇರಿದು ಕೊಲ್ಲಲು ಯತ್ನಿಸಿದ. ಅದೃಷ್ಟವಶಾತ್ ಆ ಯುವತಿ ಬದುಕುಳಿದಳು. ಇಂತಹ ಅದೆಷ್ಟೊ ಸುದ್ದಿಗಳನ್ನು ಆಡುಭಾಷೆಯಲ್ಲಿ ತೋರಿಸಿ ಅನೇಕಬಾರಿ ನಗೆಪಾಟಲಿಗೆ ದೃಶ್ಯ ಮಾಧ್ಯಮಗಳು ಇಡಾಗಿವೆ.
ದೃಶ್ಯ ಮಾಧ್ಯಮಗಳು ಕೇವಲ ಟಿಆರ್ ಪಿ ಗೋಸ್ಕರ ದಿನಗಟ್ಟಲೆ ಬಿತ್ತರಿಸುವ ಕಾರ್ಯಕ್ರಮಗಳನ್ನು ನೋಡದೆ ಬಹಿಷ್ಕರಿಸಿದರೆ ಟಿ ಆರ್ ಪಿ ಸ್ವಾಭಾವಿಕವಾಗಿ ಕಡಿಮೆಯಾಗುತ್ತದೆ. ಆದರೆ ಈ ರೀತಿ ಅದೆಷ್ಟು ಜನ ಮಾಡುತ್ತಾರೆ? ಜನರಿಗೋಸ್ಕರವೇ ಇರುವ ದೃಶ್ಯ ಮಾಧ್ಯಮ ಬೆಳೆಯಲು ಜನರಿಂದ ಪೆÇ್ರೀತ್ಸಾಹ ಅತ್ಯಗತ್ಯ ಎಂದ ಮೇಲೆ ಮಾಧ್ಯಮಗಳನ್ನು ಸರಿದಾರಿಗೆ ತರುವಲ್ಲಿ ಸಾರ್ವಜನಿಕರ ಹಾಗೂ ಪ್ರಜಾ ಪ್ರಭುತ್ವದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿರಬೇಕು ಅಲ್ಲವೆ? ಅದೇ ರೀತಿ ಕೆಲವು ಕೋರ್ಟ್ ಗಳಲ್ಲಿ ಕೆಲವು ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗದೆ ಮನ್ನಿಸಲಾಗುತ್ತದೆ ಅಥವಾ ಶಿಕ್ಷೆಯ ಪ್ರಮಾಣ ಕಡಿಮೆಮಾಡಲಾಗುತ್ತದೆ. ಹಾಗಂತ ಖೈದಿಗಳಿಗೆ ವಿಧಿಸಿರುವ ಶಿಕ್ಷೆ ಪ್ರಮಾಣವನ್ನು ಕಡಿಮೆ ಮಾಡಬಾರದು ಅಂತ ಅಲ್ಲ.
ಮೇಲಿನಂಥಹ ಹೀನ ಕೃತ್ಯ ಸಾಬೀತಾದ ಮೇಲೂ ನ್ಯಾಯ ಎತ್ತಿ ಹಿಡಿಯ ಬೇಕಾದ ಸರ್ವೋಚ್ಛ ನ್ಯಾಯಾಲಯದಲ್ಲಿಯೂ ಅನ್ಯಾಯಕ್ಕೊಳಗಾಗದೆ ಇರುವವರಿಗೆ ನ್ಯಾಯ ದೊರಕಿಸಿಕೊಡದೆ, ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣ ಕಡಿಮೆ ಮಾಡಿ ನ್ಯಾಯಾಂಗದ ಬಗ್ಗೆ ಇರುವ ವಿಶ್ವಾಸಕ್ಕೆ ಪ್ರಶ್ನೆ ಮೂಡುವ ಸ್ಥಿತಿ ನಿರ್ಮಾಣವಾದರೆ...? ಕೇವಲ ಯಾವುದೋ ಒಂದು ಗ್ಯಾಂಗ್ ರೇಪ್ ಆರೋಪಿಗಳಿಗೆ ಮರಣದಂಡನೆಯಾಗಬೇಕು ಎಂದು ಆಗ್ರಹಿಸಿ ಜಾಗೃತವಾಗುವ ಜನತೆಯ ಕಾಳಜಿ ಅದೇ ರೀತಿಯ ಪ್ರಕರಣಗಳಲ್ಲಿ ಅಪರಾಧಿಗೆ ಮರಣದಂಡನೆಯಿಂದ ಜೀವಾವಧಿ ಶಿಕ್ಷೆಗೆ ಇಳಿಸಿದಾಗ ಆ ಕಾಳಜಿ ಆ ಆಗ್ರಹ ತಣ್ಣಗಾವುದು ವಿಪರ್ಯಾಸವೇ ಸರಿ.
ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿರುವ ನ್ಯೂನತೆಗಳು ಹಾಗೂ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಪ್ರಜಾಪ್ರಭುತ್ವದ ಆಧಾರಸ್ಥಂಬಗಳಾಗಿರುವ ನ್ಯಾಯಾಂಗ ಹಾಗೂ 4ನೇ ಅಂಗ ಎಂದೇ ಪರಿಗಣಿಸಲ್ಪಡುವ ಮಾಧ್ಯಮಗಳು ಸಂಕಿರಣ ಹಾಗೂ ವಿಮರ್ಶೆ ನಡೆಸುದರ ಜೊತೆಗೆ ಪ್ರಜಾಪ್ರಭುತ್ವದ ಜೀವಾಳವೇ ಆಗಿರುವ ಪ್ರಜೆಗಳು ಸಹ ತಮ್ಮ ಜವಾಬ್ದಾರಿ ಅರಿತು ಮಾಧ್ಯಮ ಹಾಗೂ ನ್ಯಾಯಾಂಗದಲ್ಲಿರುವ ಲೋಪದೋಷಗಳ ಬಗ್ಗೆ ಧ್ವನಿಗೂಡಿಸುವ, ವಿಮರ್ಶಿಸಿಕೊಳ್ಳುವ ಅಗತ್ಯವಿದೆ. ಆಗ ಮಾತ್ರವೆ ನಾವು ಆಚರಿಸುವ ಗಣರಾಜ್ಯೋತ್ಸವ, ಮತದಾರರ ದಿನಾಚರಣೆಗೆ ಒಂದು ನಿಜವಾದ ಅರ್ಥ ದೃಶ್ಯ ಮಾಧ್ಯಮ ಸಾಮಾಜಿಕ ಕಳಕಳಿ ಮೆರೆಯಲಿ ಎಂಬುವ ಬಲವಾದ ಆಶೆಯದೊಂದಿಗೆ.
ಕೊನೆಯ ತುತ್ತು: ದೃಶ್ಯ ಮಾಧ್ಯಮದಲ್ಲಿ ಕನ್ನಡ ಆಡುಭಾಷೆಗಳ ಪ್ರಯೋಗ ಹಾಗೂ ಅದರ ಬೆಳವಣಿಗೆಯು ಬಹಳ ಚಿಂತಾಜನಕ ಸ್ಥಿತಿಯಲ್ಲಿದೆ ಎಂಬುವುದು ಮೇಲಿನ ಹಲವು ಉದಾಹರಣೆಯಿಂದ ತಿಳಿದು ಬರುತ್ತದೆ. ಪ್ರಸ್ತುತ ದೃಶ್ಯಮಾಧ್ಯಮಗಳು ಮಾಡುವ ಲಾಭಿ, ಸುದ್ದಿ ಎಲ್ಲವುದರಲ್ಲಿ ಸ್ವಯಂ ಹಿತಾಸಕ್ತಯಿದೆಯೆ ಹೊರತು ಯಾವುದೇ ರೀತಿಯ ಸಾಮಾಜಿಕ ಹಿತಾಸಕ್ತಿಯಿಲ್ಲ. ಆಡುಭಾಷೆಯ ಪ್ರಯೋಗ ಮಾಡುತ್ತಿರುವುದು ಭಾಷೆಯನ್ನು ಉಳಿಸಿ ಬೆಳೆಸಿ ಎಂಬ ವಿಷಯಕ್ಕೆ ಅಲ್ಲಾ ಬದಲಿಗೆ ಕನ್ನಡದ ಸ್ಪಷ್ಟವಾದ ಅವಹೇಳನ ಮಾಡುತ್ತಿದ್ದಾರೆ. ಕೆಲವೊಮ್ಮೆ ಈ ಅವಹೇಳನ ತುಂಬಾ ಮಿತಿಮೀರುತ್ತದೆ. ಕನ್ನಡದ ಆಡುಭಾಷೆಯ ಎಲ್ಲೆಗಳನ್ನೇ ಮೀರಿ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಕನ್ನಡವನ್ನು ಉಳಿಸುತ್ತೀವಿ ಎಂಬ ಶೀರ್ಷಿಕೆಯ ಕೆಳಗೆ ಕನ್ನಡದ ಅವಹೇಳನ ಮಾಡುವ ಕಾರ್ಯದಲ್ಲಿ ದೈಶ್ಯಮಾಧ್ಯಮಗಳು ನಿರತವಾಗಿವೆ.
-ಕೆ.ಎಂ.ವಿಶ್ವನಾಥ ಮರತೂರ.
ಯುವ ಬರಹಗಾರರು.
ಮು:ಪೋ: ಮರತೂರ.
ತಾ: ಚಿತ್ತಾಪೂರ ಜಿ: ಕಲಬುರ್ಗಿ 585229
ಮೂ: 9686714046