ದರ್ಶನ್ ಅವರು ಐರಾವತ ಸಿನಿಮಾ ಮಾಡಿದಾಗ ಹೇಳಿದ್ದು, “ನಾವು ಮಾಡಿರುವ ಪಾತ್ರಗಳು, ಈಗಾಗಲೇ ಶಂಕರ್ ನಾಗ್ ವಿಷ್ಣು ಸರ್ ರಾಜಕುಮಾರ ಸರ್ ಮಾಡಿದ್ದಾರೆ ನಾವೇನೆ ಮಾಡಿದರು ಅವರ ಅನುಕರಣೆ ಎಂಬುವುದು ಸತ್ಯ ಆದರೆ ಪ್ರಸ್ತುತ ಸಂದರ್ಭದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಗೆ ಜನರೊಂದಿಗೆ ಸಿನಿಮಾ ಸ್ಪಂದಿಸಬೇಕು ಎಂಬ ಪ್ರಯತ್ನ ನಮ್ಮ ಸಿನಿಮಾಗಳ ಮೂಲಕ ಮಾಡುತ್ತಿದ್ದೇವೆ.” ಇದರ ಅರ್ಥ ಹಳೆಯದನ್ನೆ ಅನುಕರಣೆ ಮಾಡಿದರು ಪ್ರಸ್ತುತ ವಿಷಯಗಳಿಗೆ ಸ್ಪಂದಿಸುತ್ತಿದ್ದಾರೆ ಎಂಬ ವಿಷಯ ಕಲಿಯಬೇಕು ಇದು ವೈವಿಧ್ಯತೆ ಅನಿಸುವುದಿಲ್ಲವೆ?
ದಶಕಗಳ ಹಿಂದೆ ಸಿನಿಮಾಗಳು ಶ್ರೇಷ್ಠ ಪ್ರಸ್ತುತ ಸಿನಿಮಾಗಳು ಕನಿಷ್ಠ ಎಂಬ ಮಾತನ್ನು ಒಪ್ಪಲಾಗುವುದಿಲ್ಲ. ಸಧ್ಯವು ಭಾರತೀಯ ಸಿನಿಮಾ ರಂಗದಲ್ಲಿ ಕನ್ನಡ ಚಿತ್ರಗಳು ತಮ್ಮದೇ ಆದ ಒಂದು ಛಾಪು ಮೂಡಿಸಿದ್ದಂತು ಇದ್ದೆ ಇದೆ. ಕನ್ನಡ ಸಿನಿಮಾಗಳನ್ನು ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿವೆ. ಏಕಕಾಲಕ್ಕೆ ಹಲವು ದೇಶಗಳಲ್ಲಿ ಬಿಡುಗಡೆಗೊಳ್ಳುತ್ತಿವೆ. ಭೂಮಿಯ ಮೇಲೆ ನೆಲೆಸಿರುವ ನಾನಾ ಜನರಿಗೆ ಸಿನಿಮಾಗಳು ತಲುಪುವಲ್ಲಿ ಯಶಸ್ವಿಯಾಗಿವೆ. ದಕ್ಷಿಣ ಭಾರತದ ಹಲವು ಸಿನಿಮಾಗಳನ್ನು ಹಲವು ಭಾಷೆಗಳಿಗೆ ಭಾಷಾಂತರವಾಗುತ್ತಿರುವುದು ಗಮನಿಸಬಹುದು.
ಕನ್ನಡ ಸಿನಿಮಾ ರಂಗದಲ್ಲಿ ಹೊಸ ಹೊಸ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಹೊಸ ಹೊಸ ಪ್ರತಿಭೆಗಳ ಅನಾವರಣಗೊಳ್ಳುತ್ತಿವೆ. ಈ ಹಿಂದೆ ನಟರ ಮಕ್ಕಳಷ್ಟೆ ನಟನೆ ಮಾಡಬೇಕೆಂಬ ವಿಚಾರವನ್ನು ಇವತ್ತಿನ ಸಿನಿಮಾ ರಂಗ ಮುರಿದು ಕಲೆ ಎಲ್ಲರನ್ನು ಕೈಬೀಸಿ ಕರೆಯುತ್ತದೆ ಎಂಬ ವಿಷಯ ಎತ್ತಿ ಹಿಡಿದಿದೆ. ಚಿತ್ರ ರಂಗದ ನಂಟೆಯಲ್ಲದ ಅದೆಷ್ಟು ಪ್ರತಿಭೆಗಳು ಇಲ್ಲಿ ಬೆಳೆಯುತ್ತಿದ್ದಾರೆ ಮತ್ತು ಕನ್ನಡ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.
ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಸಿನಿಮಾ ರಂಗ ಮತ್ತು ನಟರು ಬದಲಾವಣೆ ಸಹಜ ಈ ಹಿಂದಿನಂತೆ ಉಡುಗೆ ತೊಡುಗೆ ಧರಿಸಿದರೆ ನೋಡುವ ಮನಸ್ಸುಗಳು ಬೇಕಲ್ಲವೆ? ರೀಲ್ ಮತ್ತು ರಿಯಲ್ಗಳ ಮಧ್ಯೆ ವ್ಯತ್ಯಾಸ ಅರ್ಥವಾಗಬೇಕಾದರೆ ಬದಲಾವಣೆ ಸಹಜವಾಗಿ ಬೇಕಾಗುತ್ತದೆ. ಪ್ರಸ್ತುತ ಸಿನಿಮಾಗಳು ಜೀವನಕ್ಕೆ ಅತೀ ಹತ್ತಿರದಿಂದ ತಾಳೆಯಾಗುತ್ತವೆ. ಕಾಲಗಳಿಗೆ ತಕ್ಕಂತೆ ಓಡಾಟದ ಜೀವನವನ್ನು ಹೇಗೆ ಎದುರಿಸಬೇಕು ಎಂಬ ವಿಚಾರವನ್ನು ಇಂದಿನ ಸಿನಿಮಾಗಳು ಎತ್ತಿ ತೋರುತ್ತವೆ.
ಕಪ್ಪು ಬಿಳುಪು ಚಿತ್ರಗಳು ಸರಿಯಾಗಿದ್ದವು ಎಂದು ಒಪ್ಪಿಕೊಳ್ಳೋಣ ಜೀವನಕ್ಕೆ ಹತ್ತಿರವಿದ್ದವು ಪ್ರೇಕ್ಷಕರನ್ನು ಹಿಡಿದಿಡುವುದರ ಜೊತೆಗೆ ಬದುಕಿನ ಚಿತ್ರಣ ಕೊಡುತ್ತಿದ್ದವು ಎಂಬುವುದರಲ್ಲಿ ಎರಡು ಮಾತಿಲ್ಲ. ಇಂದಿನ ಚಿತ್ರಗಳು ಕೂಡ ಈ ಕೆಲಸವನ್ನು ಪ್ರಮಾಣಿಕವಾಗಿ ಮಾಡುತ್ತಿವೆ ಎಂಬುವುದು ಹಲವು ಚಿತ್ರಗಳಿಂದ ದೃಢಪಡುತ್ತದೆ. ಚಿತ್ರಗಳಲ್ಲಿ ಕಲ್ಪನೆ ವಿವರವನ್ನು ಗಮನಿಸಿದರೆ ಮನುಷ್ಯ ಹೀಗೂ ಕೂಡ ಯೋಚಿಸಬಲ್ಲನೆ ಎಂಬ ಆಲೋಚನೆ ಮೂಡಿಬರುತ್ತದೆ.
ಪ್ರಸ್ತುತ ಸಿನಿಮಾ ರಂಗ ಹಲವು ವೈವಿಧ್ಯಮಯಗಳ ಆಗರವಾಗಿದೆ. ಪ್ರಸ್ತುತ ಸಂದರ್ಭಕ್ಕೆ ತಕ್ಕಂತೆ ಪ್ರಚಲಿತ ವಿದ್ಯಮಾನಗಳಿಗೆ ಒಪ್ಪಿಕೊಳ್ಳುವಂತಹ ವಿಚಾರಗಳನ್ನು ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ತಲುಪುತ್ತಿರುವುದು ಮರೆಯುವಂತಿಲ್ಲ. ಸಧ್ಯದ ಸಿನಿಮಾಗಳಲ್ಲಿ ಎಲ್ಲಾ ರೀತಿಯ ಹೊಸ ಪ್ರಯತ್ನಗಳು ಸಾಗುತ್ತಲೆಯಿವೆ. ಇತ್ತಿಚೆಗೆ ರಾಮಾಯಣ ಮತ್ತು ಮಾಹಾಭಾರತದ ಕಥೆಗಳು ಕೂಡ ಪ್ರಸ್ತುತ ಸಂದರ್ಭಕ್ಕೆ ಹೊಂದಿಕೊಳ್ಳುವಂತೆ ಸಿನಿಮಾ ರಚನೆ ಮಾಡಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗುತ್ತಿವೆ. ಇವತ್ತಿನ ನಟರ ನಟನಾ ಕೌಶಲ್ಯ, ಪ್ರತಿಭೆ, ತಾಂತ್ರಿಕತೆ ಎಲ್ಲವು ಸೇರಿ ಪ್ರಸ್ತುತ ಪ್ರೇಕ್ಷಕನ ಮನಗೆಲ್ಲುವ ಎಲ್ಲಾ ಗುಣಗಳನ್ನು ಕನ್ನಡ ಸಿನಿಮಾ ರಂಗ ತನ್ನದಾಗಿಸಿಕೊಂಡಿದೆ. ಇಂದಿನ ಸಿನಿಮಾಗಳು ಬದಲಾಗಬೇಕಾದ್ದು ಅವುಗಳ ಸ್ಥಳದಲ್ಲಿ ಎಲ್ಲಾ ಸಿನಿಮಾಗಳು ನಗರ ಪ್ರದೇಶಗಳಲ್ಲಿನ ಘಟನೆಗಳಲ್ಲಿ ಕೇಂದ್ರಿಕೃತವಾಗದೆ ಹಳ್ಳಿಯ ಸೊಗಡನ್ನು ನೈಜವಾಗಿ ಬಿಂಬಿಸುವ ಚಿತ್ರಗಳಾಗಬೇಕು ಹೆಚ್ಚು ಕಲಾತ್ಮಕತೆ ಕೈಬಿಟ್ಟು ನೈಜವಾದ ಸಾಮಾಜಿಕ ಸಮಸ್ಯೆಗಳತ್ತ ಗಮನ ಕೊಡಬೇಕು. “ಹಳ್ಳಿ ಉದ್ಧಾರವೆ, ದೇಶ ಉದ್ಧಾರವಲ್ಲವೆ?”