ಇಷ್ಟಕ್ಕು ಸರಕಾರದ ಈ ಎತ್ತಿನ ಹೋಳೆ ಯೋಜನೆಯನ್ನು ಪಶ್ಚಿಮ ಘಟ್ಟದ ಜನರು ಹಣದ ಹೊಳೆ, ಖಾಲಿ ಪೈಪು ಎಂಬ ಹಲವು ಹೆಸರುಗಳಿಂದ ಕರೆಯುತ್ತಿದ್ದಾರೆ. ಈ ಯೋಜನೆಯ ಲಾಭ ಬರಿ ರಾಜಕಾರಣಿಗಳು ಹಾಗೂ ಸರಕಾರಿ ಅಧಿಕಾರಿಗಳ ಜೇಬು ಸೇರಿಲಿದೆಯೇ ಹೊರತು ಸಾಮಾನ್ಯ ಜನರಿಗೆ ಯಾವುದೇ ಲಾಭವಾಗುವುದಿಲ್ಲ ಎಂಬ ಮಾತು ಸ್ಪಷ್ಟವಾಗಿದೆ. ಕಾಡನ್ನೇ ನಂಬಿಕೊಂಡು ಹಲವು ದಿನಗಳಿಂದ ಬದುಕುತ್ತಿರುವ ಅನೇಕ ಪ್ರಾಣಿಗಳ ಗತಿಯೇನಾಗಬೇಕು, ತಮ್ಮ ಭೂಮಿಯನ್ನೆ ನಂಬಿ ಜೀವನ ಮಾಡುತ್ತಿರುವ ಅನೇಕ ಮಲೆನಾಡಿನ ರೈತರ ಬಗ್ಗೆ ಸರಕಾರ ಯೋಚಿಸಬೇಕಾಗುತ್ತದೆ. ಯಾರಿಗೋ ಒಳ್ಳೆಯದು ಮಾಡಲು ಹೋಗಿ ಇನ್ನಾರಿಗೋ ಕೇಡು ಮಾಡುವ ಯೋಜನೆ ಎಷ್ಟರ ಮಟ್ಟಿಗೆ ಸರಿಯೆಂಬ ವಿಚಾರವನ್ನು ಸರಕಾರ ಮಾಡಬೇಕಿದೆ. ಸಾರ್ವಜನಿಕರ ಮುಕ್ತವಾದ ಅಭಿಪ್ರಾಯ ಪಡೆಯಬೇಕಿದೆ. ಈ ಯೋಜನೆಯ ಲಾಭ ನಷ್ಟಗಳನ್ನು ತಜ್ಞರೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಬೇಕಿದೆ ಎಲ್ಲದ್ದಕ್ಕಿಂತ ಹೆಚ್ಚಾಗಿ ಪರಿಸರದ ಅಳಿವು ಉಳಿವಿನ ಬಗ್ಗೆ ಇಲ್ಲಿ ಹೆಚ್ಚಿನ ಒಲವನ್ನು ಇಟ್ಟುಕೊಂಡು ಘನ ಸರಕಾರ ಈ ಯೋಜನೆಗೆ ಮುಂದಾಗಬೇಕು.
ಸರಕಾರ ನಮ್ಮ ಜೊತೆಗೆ ಬ್ರೀಟೀಷರ ಆಟ ಆಡಬಹದು. ಒಡೆದಾಳುವ ನೀತಿ ರೂಪಿಸಬಹುದು. ಮಲೆನಾಡನ್ನು ಉಳಿಸುವಲ್ಲಿ ಕೆಲಸ ಮಾಡುತ್ತಿರುವ ಸಂಘಟನೆಗಳನ್ನು ಪ್ರತ್ಯೇಕ ಭೇಟಿ ಮಾಡಿ ಈ ಸಂಘಟನೆಗಳಿಗೆ ಒಂದಿಷ್ಟು ಭೂಸ ಹಾಕುವ ಕೆಲಸ ಮಾಡಬಹುದು. ಇಲ್ಲಿ ಈ ದೇಶದ ಬೆನ್ನೆಲುಬಾದ ರೈತರು ಅದರಲ್ಲಿ ಮಲೆನಾಡಿನ ರೈತರನ್ನು ಸರಕಾರ ಕೆಲವು ಆಮಿಷ್ಯಗಳನ್ನು ಒಡ್ಡಬಹುದು ಎಕರೆಗೆ ಒಂದಿಷ್ಟು ಹಣ ನೀಡುತ್ತೇವೆ, ನಿಮಗೆ ಹಾಗೂ ನಿಮ್ಮ ಮಕ್ಕಳಿಗೆ ಸರಕಾರಿ ನೌಕರಿ ಹಾಗೂ ಉತ್ತಮ ಶಿಕ್ಷಣ ಕೊಡುತ್ತೇವೆ ಎಂಬ ಆಮಿಷ್ಯ ಒಡ್ಡಬಹುದು. ಈ ಆಮಿಷ್ಯಗಳಿಗೆ ಬಲಿಯಾದರೆ ಕಾಡ ನಾಶದ ಜೊತೆಗೆ ಮನುಷ್ಯ ನಾಶವು ಕೂಡ ಸರಕಾರ ಮಾಡಲಿದೆ ಎಂಬ ಸತ್ಯ ಮರೆಯುವಂತಿಲ್ಲ.
ಇನ್ನೊಂದು ವಿಷಯವೇನೆಂದರೆ ಅಸಲಿಗೆ ಅಲ್ಲಿರುವುದು ಎತ್ತಿನ ಹೊಳೆ ಅಲ್ಲಾ ಅದು ಎತ್ತಿನ ಹಳ್ಳ ಎಂಬ ಸ್ಪಷ್ಟತೆಯನ್ನು ಮೊನ್ನೆ ಅಲ್ಲಿನ ಜನರು ಹೇಳಿದಾಗಲೇ ನನಗೂ ಅರ್ಥವಾಗಿದ್ದು. ಸರಕಾರ ಈ ಯೋಜನೆಯನ್ನು ಮಾಡಲೇಬೇಕು ಎಂಬ ಮಾಹಾದಾಸೆಯಿಂದ ಅದನ್ನು ಹೊಳೆಯಾಗಿ ಬದಲಿಸಿಕೊಂಡಿದೆ. ಅಲ್ಲಿನ ಜನರು ಸಾಮಾನ್ಯವಾಗಿ ಅದನ್ನು ಎತ್ತಿನ ಹಳ್ಳ ಎಂದು ಕರೆಯುವುದು ರೂಢಿಯಿದೆ. ಅಲ್ಲಿ ಬೀಳುವ ಮಳೆಯ ಪ್ರಮಾಣವಾಗಲಿ, ನೀರಿನ ಪ್ರಮಾಣವಾಗಲಿ ಸರಕಾರ ಕೊಟ್ಟಿರುವ ಅಂಕಿಅಂಶಗಳಷ್ಟು ಇಲ್ಲ ಅದನ್ನು ರಾಜಕೀಯ ನಾಯಕರು ಕೊಟ್ಟಿರುವ ಅಂಕಿ ಅಂಶಗಳನ್ನು ಮೇಲ್ನೋಟಕ್ಕೆ ಪಡೆದುಕೊಂಡಿರುವ ಸರಕಾರ ಅವಸರದಲ್ಲಿ ಈ ಯೋಜನೆಯ ಅನುಷ್ಠಾನ ಮಾಡುವ ಹಂತಕ್ಕೆ ತಲುಪಿದೆ ಆದರೆ ಇಲ್ಲಿಯವರೆಗೂ ಸರಕಾರ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿಲ್ಲ ಎಂಬುವುದು ಗಮನಿಸಿದಬೇಕಾದ ಅಗತ್ಯವಿದೆ.
ನಾನು ದೂರದಿಂದಲೇ ಈ ಯೋಜನೆ ಹಾಗೂ ಸ್ಥಳದ ಬಗ್ಗೆ ಕೇಳಿದ್ದೆ ಈ ನಡುವೆ ಎತ್ತಿನ ಹಳ್ಳ ನೋಡುವ ಭಾಗ್ಯ ಸಿಕ್ಕಿತು ಅದನ್ನು ಸ್ವಲ್ಪ ನಿಮಗೆ ತಿಳಿಸಲೇಬೇಕು ಆ ಮುಗಿಲ ಚುಂಬಿಸುವ ಮರಗಳು, ಕೈ ಎಟಕಲಾರದ ಕಾಂಡಗಳು, ಜುಳು ಜುಳು ನಾದವ ಮಾಡುತ್ತ ಹರೆಯುವ ಸುಂದರ ನದಿಗಳ ಜರಿಗಳು, ಝೇಂಕಾರ ಹಾಕುವ ದುಂಬಿಗಳು, ನವಿಲು, ಹಲವು ವಿಧದ ಪಕ್ಷಿಗಳು, ಕ್ರೀಮಿಕೀಟಗಳು, ಹಲವು ಬಗೆಯ ಹುಲ್ಲುಗಾವಲುಗಳು, ಕಂಡಷ್ಟು ದೂರ ಕಾಣುವ ಬೆಟ್ಟಗಳು, ಮೈ ಜುಮ್ಮೆನಿಸುವ ದೈಶ್ಯ ವೈಭವ ಅದು ಆ ಕಾಡಿನಲ್ಲಿ ನಡೆದಾಡಿದರೆ ಆಹಾಲಾದಕವಾದ ವಾತಾವರಣ ಮೂಡಿಬರುತ್ತದೆ. ಅಲ್ಲಿನ ಕಾಡುಮೇಡಿನೊಳಗೆ ಓಡಾಡಿದರೆ ಸಂತೋಷವಾಗುತ್ತದೆ ಅದೇ ಕಾಡನ್ನು ನಾಶ ಮಾಡುತ್ತಾರೆಯೆಂದ ಅತೀವ ದು:ಖವಾಗುತ್ತದೆ. ಇಂತಹ ಕಾಡನ್ನು ನಿತ್ಯ ಹರೀದ್ವರ್ಣವಾಗಿರುವ ಹಸಿರನ್ನು ಜನರಿಗೆ ಬರಿ ಪಶ್ಚಿಮ ಘಟ್ಟ ಅಷ್ಟೆ ಅಲ್ಲಾ ಇಡಿ ಕನ್ನಡ ನಾಡಿಗೆ ಉಸಿರಾಗಿರುವ ಪಶ್ಚಿಮ ಘಟ್ಟಗಳನ್ನು ಕೆಡಯಲು ಹೊರಟಿರುವ ಸರಕಾರಗಳು ಪ್ರಕೃತಿಯ ಶಾಪ ಪಡೆದುಕೊಳ್ಳುತ್ತವೆ ಎಂಬ ವಿಚಾರ ಮರೆಯಬಾರದು ಈಗಿರುವ ಒಳ್ಳೆಯ ಗಾಳಿಯನ್ನು ಕಲ್ಮಷ ಮಾಡುವ ಈ ರಾಜಕಾರಣಿಗಳ ಬುದ್ದಿಗೆ ಆ ತಾಯಿ ಭುವನೇಶ್ವರಿ ಒಳ್ಳೆಯ ವಿಚಾರವನ್ನು ಕಾಡಿನ ಪರವಾದ ವಿಚಾರವನ್ನು ಕೊಡಲಿ ಈ ಎತ್ತಿನ ಹೊಳೆಯೆಂಬ ಬೃದಾಕಾರದ ಹಣದ ಯೋಜನೆ ಕೈಬಿಡಲಿಯೆಂದು ಎಂದು ಆಶಿಸುತ್ತೇನೆ.
-ಕೆ.ಎಂ.ವಿಶ್ವನಾಥ ಮರತೂರ.