ಈ ಪ್ರಪಂಚದಲ್ಲಿ ದಲಿತರ ಸಂಖ್ಯೆಯನ್ನು ಪರಿಗಣಿಸಿ ಅವರ ಶ್ರೇಯೋಭಿವೃದ್ಧಿಗೆ ಬೇಕಾಗುವ ಹಲವು ಆಯಾಮಗಳನ್ನು ಹಲವು ತಜ್ಞರ ಅಭಿಪ್ರಾಯದಂತೆ ಯೋಜನೆಗಳನ್ನು ರೂಪಿಸಲಾಯಿತು. ಇತಿಹಾಸದ ಕಾಲದಿಂದಲೂ ದಲಿತರ ಸಂಕಷ್ಟಗಳಿಗೆ ಸೂಕ್ತವಾದ ಮಾತ್ರೆಗಳನ್ನು ನೀಡಿ ಅವರ ಗುಣಮಟ್ಟ ಹೆಚ್ಚಿಸಲು ಶ್ರಮಿಸಲಾಯಿತು. ಅಂದಿನಿಂದ ಇಂದಿವರೆಗೂ ದಲಿತರ ನಾನಾ ಸಂಕಷ್ಟಗಳಿಗೆ ಅವಿರತವಾಗಿ ಶ್ರಮಿಸಲಾಗುತ್ತಿದೆ. ಪ್ರತಿ ಹಂತದಲ್ಲಿಯೂ ಅವರ ಶ್ರೋಯೋಭಿವೃದ್ಧಿಗೆ ಗಮನ ಕೊಡಲಾಗುತ್ತಿದೆ.
ಇದೀಗ ಬೆಳೆ ದ ಜಾಗತೀಕರಣದ ಸುತ್ತಮುತ್ತಲು ಕೂಡ ದಲಿತರ ಮೇಲಿನ ಹಲ್ಲೆಗಳು , ಸಂಕಷ್ಟಗಳು ನಿಂತಿಲ್ಲ ಅದಕ್ಕಾಗಿ ದಲಿತರ ಮೇಲೆ ನಡೆಯುವ ಸಂಕಷ್ಟಗಳು ಅವುಗಳ ಸೂಕ್ತವಾದ ನಿರ್ವಹಣೆ ಹೇಗೆ ಎಂಬ ಪ್ರಶ್ನೆ ಎದುರಾದಾಗಲೆಲ್ಲ ದಲಿತರ ಅಭಿವೃದ್ಧಿಗಾಗಿ ರೂಪಿಸಿರುವ ಜಾಗತೀಕರಣದ ಹಲವು ಯೋಜನೆಗಳು ಹಲವು ಮಾತುಗಳು ಇಲ್ಲಿ ನೆನಪಾಗುತ್ತದೆ. ಅಭಿವೃದ್ಧಿ ಯೋಜನೆಗಳು ಉದ್ದೇಶಗಳನ್ನು ಎಷ್ಟರ ಮಟ್ಟಿಗೆ ನಾವೆಲ್ಲ ಇಡೇರಿಸಿಕೊಂಡಿದ್ದೇವೆ ಎಂಬ ಸತ್ಯ ಅರೆಯುವ ಕಾಲ ಸನ್ನಿಹಿತ ಎನಿಸುತ್ತದೆ. ಈ ಮುಂದಿನ ಹಲವು ಅಧ್ಯಾಯಗಳಲ್ಲಿ ಇತಿಹಾಸದ ದಲಿತರಲ್ಲಿದ್ದ ಸಂಕಷ್ಟಗಳು ಯಾವವು ಅವುಗಳ ನಿವಾರಣೆ ಹೇಗಾಯಿತು ಇದೀಗ ಜಾಗತೀಕರಣದ ಮಟ್ಟಿಗೆ ದಲಿತರ ಸಂಕಷ್ಟಗಳು ಇವೆಯಾ ಇದ್ದರೆ ಅವುಗಳ ಮಟ್ಟ ಹೇಗಿದೆ ಎಂಬ ವಿಷಯದ ಜೊತೆಗೆ ಒಂದಿಷ್ಟು ನಿವಾರಣೆಯ ಕ್ರಮಗಳನ್ನು ತಿಳಿಸುವ ಪ್ರಯತ್ನ ಮಾಡಲಾಗಿದೆ.
ದಿ ಯುನೈಟೆಡ್ ನೇಶನ್ಸ್ ಇಎಸ್ ಸಿಡಬ್ಲ್ಯೂಎ ಉಲ್ಲೇಖಿಸಿದಂತೆ ಜಾಗತೀಕರಣವು "ಒಂದು ವ್ಯಾಪಕವಾದ ಪರಿಕಲ್ಪನೆಯಾಗಿದ್ದು ವಿವಿಧ ರೀತಿಯಲ್ಲಿ ಇದನ್ನು ವಿವರಿಸಬಹುದಾಗಿದೆ. ಆರ್ಥಿಕ ಸಂದರ್ಭದಲ್ಲಿ ಉಪಯೋಗಿಸಿದಾಗ ಇದು ಸರಕುಗಳು, ಬಂಡವಾಳಗಳ, ಸೇವೆ ಮತ್ತು ಶ್ರಮದ ಹರಿವಿನ ಸೌಲಭ್ಯಕ್ಕೆ ರಾಷ್ಟ್ರೀಯ ಗಡಿಯ ಮಿತಿಯನ್ನು ತೆಗೆಯುತ್ತದೆ ಮತ್ತು ಕಡಿಮೆಗೊಳಿಸುತ್ತದೆ. ಆದರೂ ಶ್ರಮಕ್ಕೆ ಸಂಬಂಧಪಟ್ಟ ಕೆಲವು ಪ್ರತಿಬಂಧಗಳು ಶ್ರಮದ ಹರಿವಿಗೆ ಕುರಿತಾದಂತೆ ಇನ್ನೂ ಇದೆ. ಜಾಗತೀಕರಣವು ಹೊಸ ವಿದ್ಯಮಾನವಲ್ಲ.
ಇದು 90ರ ದಶಕದ ಉತ್ತರಾರ್ಧದಿಂದ ಪ್ರಾರಂಭವಾಯಿತು, ಮೊದಲ ಜಾಗತಿಕ ಯುದ್ಧದ ಸಂದರ್ಭದಲ್ಲಿ ಕುಂಟಿತಗೊಂಡ ಜಾಗತೀಕರಣ ಪ್ರಕ್ರಿಯೆಯು ಇಪ್ಪತ್ತನೇ ಶತಮಾನದ ಮೂರನೇ ಭಾಗದವರೆಗೂ ಮುಂದುವರೆದಿದೆ. ಜಾಗತಿಕರಣ ಹರಡುವಿಕೆಯು ಕುಂಟಿತವಾಗಲು ಕಾರಣ ಹಲವು ದೇಶಗಳು ತಮ್ಮ ದೇಶದ ಪ್ರಮುಖ ಉದ್ಯಮಗಳನ್ನು ರಕ್ಷಿಸಿಕೊಳ್ಳುವ ಸಲುವಾಗಿ ಜಾಗತೀಕರಣಕ್ಕೆ ವಿರುದ್ಧವಾದ ಕೆಲವು ನಿಯಮಗಳನ್ನು ಜಾರಿಗೆ ತಂದವು. ಏನೇ ಆದರೂ ಜಾಗತೀಕರಣವು ವೇಗವಾಗಿ ಬೆಳೆದದ್ದು ಇಪ್ಪತ್ತನೇ ಶತಮಾನದ ನಾಲ್ಕನೇ ಭಾಗದ ಅವಧಿಯಲ್ಲಿ.
ಸಸ್ಕಿಯ ಸಸ್ಸೆನ್ ಹೇಳುವಂತೆ "ಜಾಗತೀಕರಣದ ಒಂದು ಉತ್ತಮ ಲಕ್ಷಣ ಎಂದರೆ ಇದು ಹಲವು ಸೂಕ್ಷ್ಮ-ಪ್ರಕ್ರಿಯೆಗಳ ಮೂಲಕ ರಾಷ್ಟ್ರ್ರೀಯ ಎಂದುಕೊಂಡ ವಿಷಯಗಳನ್ನು, ಉದಾಹರಣೆಗೆ ನಿಯಮಗಳು, ಬಂಡವಾಳವಾಳ, ರಾಜಕೀಯ ವಿಷಯಾಸಕ್ತಿ, ನಗರ ಸ್ಥಳ, ಐಹಿಕ ಚೌಕಟ್ಟು ಅಥವಾ ಯಾವುದೇ ರೀತಿಯ ಚಟುವಟಿಕೆ ಮತ್ತು ಕಾರ್ಯಕ್ಷೇತ್ರಗಳನ್ನು ರಾಷ್ಟ್ರೀಕರಣದಿಂದ ಮುಕ್ತಗೊಳಿಸಿ ಅಂತರಾಷ್ಟ್ರೀಕರಣ ಪ್ರಕ್ರಿಯೆಗೆ ತೊಡಗುತ್ತದೆ..
" ಪ್ರಾದೇಶಿಕ ಬಲವಂತದ ನಿರಾಕರಣೆ ಅಥವಾ ಒಪ್ಪಿಗೆಯು ಗಡಿಯಲ್ಲಿನ ವಿನಿಮಯ ಮತ್ತು ಸಮನ್ವಯದ ಅಧಿಕ್ಯ ಮತ್ತು ಉತ್ಪಾದನೆಯ ಜಾಗತಿಕ ವ್ಯವಸ್ಥೆ ಮತ್ತು ವಿನಿಮಯವನ್ನೊಳಗೊಂಡ ಪರಿಣಾಮವಾಗಿದೆ.
ಜಾಗತಿಕ ವ್ಯಾಪಾರ, ಹೊರಗುತ್ತಿಗೆ, ಸರಣಿಪೂರಣ ಮತ್ತು ರಾಜಕೀಯ ಶಕ್ತಿಯು ಕೆಟ್ಟ ಮತ್ತು ಒಳ್ಳೆಯ ಈ ಎರಡೂ ಹಿನ್ನೆಲೆಯಿಂದ ಜಗತ್ತನ್ನು ಶಾಶ್ವತವಾಗಿ ಬದಲಾಯಿಸಿರುವುದನ್ನು ಜಗದ ಏಕತಾನತೆಯ ವಾದದ ಮೂಲಕ ಥಾಮಸ್ ಎಲ್.ಫ್ರೀಡ್ಮನ್ ಪರೀಕ್ಷಿಸಿದ್ದಾರೆ.
ಜಾಗತೀಕರಣವು ತೀವ್ರವಾಗುತ್ತಿದ್ದಂತೆ, ವಾಣಿಜ್ಯಿಕ ಸಂಸ್ಥೆ ಮತ್ತು ಪದ್ಧತಿ ಬೆಳವಣಿಗೆಯ ಮೇಲೆ ಪ್ರಭಾವ ಬೀರಲಿದೆ ಎಂದೂ ಅವರು ವಾದಿಸುತ್ತಾರೆ.
ಹೀಗೆ ಹಲವು ತಜ್ಞರು ಜಾಗತೀಕರಣದ ಹಲವು ರೀತಿಯ ವ್ಯಾಖ್ಯಾನ ನೀಡುವಾಗ ಅವರಿಗೆ ನಮ್ಮ ಜಾಗತೀಕ ಮಟ್ಟದಲ್ಲಿರುವ ಹಲವು ಸಾಮಾಜಿಕ ಸ್ಥರಗಳ ಅರಿವಿತ್ತು ಎಂಬ ಸತ್ಯ ಹಲವು ವ್ಯಾಖ್ಯಾನದಲ್ಲಿ ಕಂಡುಬರುತ್ತದೆ. ಈ ಎಲ್ಲಾ ವ್ಯಾಖ್ಯಾನಗಳ ಹಿಂದಿನ ಮರ್ಮವಿಷ್ಟೆ ಎಲ್ಲರಿಗೂ ಸಮಬಾಳು ಎಲ್ಲರಿಗೂ ಸಮಪಾಲು ಸಿಗಬೇಕು ಪ್ರಪಂಚದಲ್ಲಿ ಜಾಗತೀಕವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದ ಹಲವು ಜನರಿಗೆ ಮುಂಚುಣಿಯಲ್ಲಿ ಸೂಕ್ತವಾದ ಅವಕಾಶಗಳನ್ನು ನೀಡಿ ಅವರ ಅಭಿವೃದ್ಧಿಗಾಗಿ ಶ್ರಮಿಸಿಬೇಕೆಂಬ ಬಯಕೆ ಎದ್ದು ಕಾಣುತ್ತದೆ.
ದಲಿತರ ವ್ಯಾಖ್ಯಾನ: ದಲಿತ ಸಾಂಪ್ರದಾಯಿಕವಾಗಿ "ಅಸ್ಪೃಶ್ಯ" ಎಂದು ಗುರುತಿಸಲಾಗುವ ಜನರ ಗುಂಪಿನ ಒಂದು ಹೆಸರು. ದಲಿತರು ದಕ್ಷಿಣ ಏಷ್ಯಾದ ಎಲ್ಲೆಡೆಯಲ್ಲಿರುವ ಹಲವಾರು ಜಾತಿಗಳ ಜನರು. ಅವು; ಅವರು ಅನೇಕ ಭಾಷೆಗಳ ಮಾತನಾಡುತ್ತಾರೆ ಮತ್ತು ಅನೇಕ ಧರ್ಮಗಳನ್ನು ಅನುಸರಿಸುತ್ತಾರೆ.
ದಲಿತರಲ್ಲಿ ಪ್ರಮುಖವಾಗಿ ಎರಡು ವರ್ಗಗಳಿವೆ- ೧.ಹೊಲೆಯ- ಉಪಜಾತಿ:ಆದಿಕರ್ನಾಟಕ, ೨.ಮಾದಿಗ-ಉಪಜಾತಿ: ಆದಿಜಾಂಬವ. ಉಪಪಂಗಡಗಳಂತು ಇಲ್ಲಿ ಹೇರಳವಾಗಿವೆ. ಭಾರತೀಯ ಸಂವಿಧಾನ ಜಾತಿ ವ್ಯವಸ್ಥೆಯನ್ನು ರದ್ದುಗೊಳಿಸಿಲ್ಲವಾದರೂ ಜಾತಿ ವ್ಯವಸ್ಥೆಯನ್ನು ಆಧರಿಸಿದ ಭೇದಭಾವಗಳನ್ನು ನಿಷೇಧಿಸಿದೆ.
ಆದಾಗ್ಯೂ ಇಲ್ಲಿ ದಲಿತರ ವಿರುದ್ಧ ಪೂರ್ವಾಗ್ರಹಗಳಿವೆ. ಅವರ ವಿರುದ್ಧ ತಾರತಮ್ಯವನ್ನು ಆಚರಿಸಲಾಗುತ್ತದೆ. ಭಾರತದ ಸ್ವಾತಂತ್ರ್ಯದ ನಂತರ, ಗಮನಾರ್ಹ ರೀತಿಯಲ್ಲಿ ಅವರಿಗೆ ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸುವಲ್ಲಿ ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅನೇಕ ಸಾಮಾಜಿಕ ಸಂಘಟನೆಗಳು ಕೂಡ ಸುಧಾರಿತ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಅವಕಾಶಗಲನ್ನು ಒದಗಿಸುವುದರ ಮೂಲಕ ದಲಿತರ ಸ್ಥಿತಿಯನ್ನು ಉತ್ತಮಪಡಿಸಲು ಶ್ರಮಿಸಿವೆ.
೨೦೦೧ ರಲ್ಲಿ, ದಲಿತ ಜನಸಂಖ್ಯೆಯ ಪ್ರಮಾಣ ಭಾರತದ ಒಟ್ಟು ಜನಸಂಖ್ಯೆಯ ೧೬.೨ ಪ್ರತಿಶತ ಇತ್ತು. ದಲಿತರು ಭಾರತದ ಎಲ್ಲ ರಾಜ್ಯಗಳಲ್ಲಿ, ಜಿಲ್ಲೆಗಳಲ್ಲಿ ಇದ್ದಾರೆ. ೨೦೦೧ ರಲ್ಲಿ, ಪಂಜಾಬ್ ರಾಜ್ಯವು ಜನಸಂಖ್ಯೆಯ ಅತಿಹೆಚ್ಚು ಭಾಗ ಸುಮಾರು೨೯ ಶೇಕಡಾ ರಷ್ಟು, ದಲಿತರನ್ನು ಹೊಂದಿತ್ತು ಮತ್ತು ಮಿಜೋರಾಮ್ ರಾಜ್ಯವು ಅತಿ ಕಡಿಮೆ ಭಾಗ ಹೆಚ್ಚೂಕಡಿಮೆ ಇಲ್ಲವೇ ಇಲ್ಲ ಎನ್ನುವಷ್ಟು ದಲಿತ ಜನರನ್ನು ಹೊಂದಿತ್ತು.
ಭಾರತ ಸರ್ಕಾರವು ಅವರನ್ನು ಪರಿಶಿಷ್ಟ ಜಾತಿ ಎಂದು ಗುರುತಿಸಿ ಅವರ ಹಿತವನ್ನು ಕಾಯುತ್ತದೆ. 'ದಲಿತ' ಶಬ್ದಕ್ಕೆ ಸಮಾನಾರ್ಥಕವಾಗಿ 'ಪರಿಶಿಷ್ಟ ಜಾತಿ'ಶಬ್ದವನ್ನು ಬಳಸಲಾಗುತ್ತದೆ.ಈ ಶಬ್ದಗಳು ಶೂದ್ರರು ಮತ್ತು ಅಸ್ಪೃಶ್ಯರಂತಹ ಭಾರತದ ಐತಿಹಾಸಿಕವಾಗಿ ಭೇದಭಾವ ಮಾಡಲ್ಪಟ್ಟ ಕೆಳಜಾತಿಗಳನ್ನು ಒಳಗೊಳ್ಳುತ್ತವೆ. ದಲಿತರನ್ನು ಸಾಮಾನ್ಯವಾಗಿ
ಹಿಂದೂಧರ್ಮದೊಂದಿಗೆ ಗುರುತಿಸಲಾಗಿದೆಯಾದರೂ ದಲಿತರು ಮತ್ತು ಅಂಥ ಜನರು ನೇಪಾಳ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲೂ ಇದ್ದಾರೆ. ದಲಿತರಂಥ ಸಾಮಾಜಿಕ ಸ್ಥಿತಿಗತಿಗಳನ್ನು ಹೊಂದಿದ ಜನರು ಜಪಾನ್, ಕೊರಿಯಾ, ಯೆಮೆನ್, ಸೋಮಾಲಿಯಾಗಳಲ್ಲೂ ಇದ್ದಾರೆ. ೨೦೦೬ರ ಸಾಚಾರ್ ಸಮಿತಿ ವರದಿಯು ಪರಿಶಿಷ್ಟಜಾತಿ ಮತ್ತು ವರ್ಗಗಳ ಜನರು ಹಿಂದೂಧರ್ಮಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ತೋರಿಸುತ್ತದೆ.
ಜಾಗತೀಕರಣದ ಸುತ್ತಮುತ್ತ ದಲಿತರು: ಜಾಗತೀಕರಣದ ಸಮಯವನ್ನು ಗಣನೆಗೆ ತೆಗೆದುಕೊಂಡಾಗ ದಲಿತರು ಅತ್ಯಂತ ಹಿಂದುಳಿದಿರುವುದು ಗಮನಕ್ಕೆ ಬರುತ್ತದೆ. ಪ್ರಪಂಚದ ಒಟ್ಟಾರೆ ಜನಸಂಖ್ಯೆಯಲ್ಲಿ ಬಹುಪಾಲು ಪಾತ್ರ ನಿರ್ವಹಿಸುವ ದಲಿತರು ಅಸಂಘಟಿತರಾಗಿದ್ದು ಸಂಘಟನೆಯ ಕೊರತೆಯಿಂದ ಬಳಲುತ್ತಿದ್ದಾರೆ ಎಂಬ ಸತ್ಯ ಅರಿವಿಗೆ ಬರುತ್ತದೆ. ಪ್ರಪಂಚದಲ್ಲಿ ದಲಿತರ ಸಂಕಷ್ಟಗಳ ಬಗ್ಗೆ ಅವರ ಅಭಿವೃದ್ಧಿಯ ಬಗ್ಗೆ ಈಗಾಗಲೇ ಸಾಕಷ್ಟು ವರದಿಗಳು ಸಾಕಷ್ಟು ರೀತಿಯಲ್ಲಿ ತಿಳಿಸಿವೆ ಜೊತೆಗೆ ಒಂದಿಷ್ಟು ಅಭಿವೃದ್ಧಿಯತ್ತ ಕೂಡ ದಲಿತರು ಹೆಜ್ಜೆ ಹಾಕಿದ್ದಾರೆ ಎಂದರೆ ತಪ್ಪಾಗದು ಆದರೂ ದಲಿತರ ಸಂಕಷ್ಟಗಳಿಗೆ ಖಾಯಂ ಮುಕ್ತಿ ದೊರೆತಿಲ್ಲ ಎಂಬವುದು ಒಪ್ಪಿಕೊಳ್ಳಬೇಕಾದ ವಾಸ್ತವ.
ದಲಿತರ ಇತಿಹಾಸದ ಸಂಕಷ್ಟಗಳು:
ಸಾಮಾಜಿಕವಾಗಿ ಕೆಳಸ್ಥರದಲ್ಲಿ ನೋಡಲಾಗುತ್ತಿತ್ತು. ಆರ್ಥಿಕವಾಗಿ ಅತ್ಯಂತ ಹಿಂದುಳಿದಿದ್ದರು. ಶ್ರೀಮಂತರ ಮನೆಯ ಜೀತದಾಳಾಗಿರುವುದೇ ಅವರ ಕಾಯಕವಾಗಿತ್ತು. ದುಡಿಮೆ ಅವರ ಕುಲ ಕಸುಬಾಗಿತ್ತು ಸಂಪ್ರದಾಯಿಕ ವೃತ್ತಿಗಳಲ್ಲಿಯೂ ಅನೇಕ ಕುಂದು ಕೊರತೆಗಳು ಎದುರುಸುತ್ತಿದ್ದರು. ಅಸ್ಪೃಷ್ಯರು ಎಂದು ಕರೆಸಿಕೊಳ್ಳುತ್ತಿದ್ದರು. ಮೇಲ್ಜಾತಿಯವರ ನಿರಂತರ ದೌರ್ಜನ್ಯಕ್ಕೆ ಬಲಿಯಾಗುತ್ತದ್ದರು. ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದರು.
ದಲಿತರ ಕಷ್ಟಗಳ ಪ್ರಸ್ತುತ ಸ್ಥಿತಿಗತಿ :
ದಲಿತರ ಮೇಲಿನ ದೌರ್ಜನ್ಯ ನಡೆದೇಯಿದೆ ಆದರೆ ವಸ್ತುಸ್ಥಿತಿ ಬದಲಾಗಿದೆ. ದಲಿತ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳು ಇನ್ನು ನಿಂತಿಲ್ಲ. ಶಾಲೆ, ಸಾರ್ವಜನಿಕ ಸ್ಥಳಗಳಲ್ಲಿ ಇರುವ ಸಂಕಷ್ಟಗಳು ಮುಗಿದಿಲ್ಲ ಆದರೆ ಅವುಗಳ ಸ್ಥಿತಿಗತಿ ಬದಲಾಗಿದೆ. ದಲಿತರ ಮೇಲಿನ ದೌರ್ಜನ್ಯಗಳಲ್ಲಿ ನೀತಿ ರೀತಿ ಬದಲಾಗಿದೆ ಆದರೆ ದೌರ್ಜನ್ಯ ಯಾವಾಗಲೂ ಇದ್ದೆ ಇದೆ. ಸಧ್ಯದ ರೈತರ ಆತ್ಮಹತ್ಯೆಯಲ್ಲಿ ದಲಿತರ ಸಂಖ್ಯೆ ಹೆಚ್ಚಿದೆ ಇದು ಒಂದು ಸಂಕಷ್ಟವೇ ಹೌದು. ಜಾಗತೀಕ ಮಟ್ಟದಲ್ಲಿ ದಲಿತರ ಸಂಕಷ್ಟಗಳು ಅನೇಕ ರೀತಿಯಲ್ಲಿವೆ.
"ದಲಿತ" ಎಂಬ ಮನುಷ್ಯ ಪ್ರಪಂಚದ ಮೂಲನಿವಾಸಿಯಾಗಿದ್ದು ಅವನ ಏಳ್ಗೆಗಾಗಿ ಹಲವು ಕಾನೂನು ಹಾಗೂ ಹಲವು ವ್ಯಕ್ತಿಗಳು ದುಡಿಯಬೇಕಾದ ಪರಿಸ್ಥಿತಿ ಎದುರಾಗಿದೆ. ಜಾಗತೀಕ ಮಟ್ಟದಲ್ಲಿ ಪ್ರಪಂಚ ಎಷ್ಟೆ ಮುಂದೆ ಹೋಗಿರಬಹುದು ಹಲವು ಮಜಲುಗಳನ್ನು ದಾಟಿ ನಾವು ಕ್ಷಿಪಣಿಯ ಮೂಲಕ ಬೇರೆ ಗೃಹಗಳಲ್ಲಿಯೂ ವಾಸ ಮಾಡಿರಬಹುದು ಆಕಾಶಕ್ಕೆ ಹಕ್ಕಿಯಂತೆ ಹಾರಾಡಿರಬಹುದು ಸಾಹಿತ್ಯದಲ್ಲಿ ಎಂಟು ಜ್ಞಾನಪೀಠ ಪಡೆದಿರಬಹುದು ಸಾಮಾಜಿಕ ಸಮಾನತೆ ಸಾಧಿಸಿರಬಹುದು ಆದರೆ ದಲಿತರ ಮೇಲಿನ ಸೂಕ್ಷ್ಮ ಸಂವೇದನೆ ಹಾಗೂ ಅವರ ವೇಧನೆಗಳು ಮಾತ್ರ ಇನ್ನು ನಿಂತಿಲ್ಲ ಅದು ರಾಜಾರೋಶವಾಗಿ ಯಾರ ಭಯವಿಲ್ಲದೇ ನಡೆಯುತ್ತಿತ್ತು ಇದೀಗ ಬದಲಾಗಿದೆ ಅದರ ಆಗು ಹೋಗುಗಳು ಬದಲಾಗಿವೆ ದಲಿತರ ಸಂಕಷ್ಟಗಳ ಒಳಹೊಕ್ಕು ಗಮನಿಸಿದಾಗ ದಲಿತರ ಮೇಲಿನ ಸಂಕಷ್ಟಗಳ ಬಗ್ಗೆ ಅರಿವಾಗುತ್ತದೆ.
ಸಮಾಜದೊಳಗೆ ಬಹುದೊಡ್ಡ ಬದಲಾವಣೆ ತರುತ್ತೇವೆ ಎಂಬ ದೊಡ್ಡ ಭಾಷಣ ಬಿಗಿಯುವ ಅದೆಷ್ಟು ಶ್ರೀಮಂತರು ತಮ್ಮ ಮನೆಯ ಕೂಲಿ ಆಳು ದಲಿತ ಎಂಬುವುದು ಮರೆಯುತ್ತಾರೆ. ದಲಿತರ ಸಂಕಷ್ಟಗಳ ವಿರುದ್ಧ ಅವುಗಳನ್ನು ಹೊಡೆದೂಡಿಸುವ ಕೆಲಸ ಮಾಡುತ್ತೇವೆ ಎಂಬುವುರ ಕಾರ್ಯಗತಿಯಲ್ಲಿ ನೀವು ಗಮನಿಸಿದಾಗ ಅವರು ದಲಿತರ ಸಂಕಷ್ಟಗಳನ್ನು ಯಾವ ರೀತಿ ಗಮನಿಸುತ್ತಾರೆ ಎಂಬ ಸತ್ಯ ಅರಿವಿಗೆ ಬರುತ್ತದೆ. ಜಾಗತೀಕ ಮಟ್ಟದಿಂದ ಹಳ್ಳಿ ಮಟ್ಟದವರೆಗೂ ಈ ದಲಿತರ ಸಂಕಷ್ಟಗಳು ಇದ್ದೆ ಇವೆ ಅವುಗಳ ಸ್ಥಿತಿಗತಿ ಬದಲಿಸಿಕೊಂಡು ಸೂಕ್ತವಾಗಿ ಅತೀ ಸೂಕ್ಷ್ಮವಾಗಿ ದಲಿತರು ಯಾರಿಗೂ ಹೇಳದೇ ಎದುರುಸುತ್ತಿರುವ ಅದೆಷ್ಟೋ ಸಂಕಷ್ಟಗಳು ಬಯಲಿಗೆ ಬರುವುದೇಯಿಲ್ಲ ಬಂದರು ಬಗೆಹರೆಯುವುದೇಯಿಲ್ಲ ಇಂತಹ ಪರಿಸ್ಥಿತಿಯಲ್ಲಿ ಜಾಗತೀಕರಣ ಮತ್ತು ದಲಿತರ ಸಂಕಷ್ಟಗಳ ಬಗ್ಗೆ ಸುದೀರ್ಘವಾದ ಅಧ್ಯಯನ ಅವಶ್ಯಕತೆಯಿದೆ. ಜೊತೆಗೆ ದಲಿತರ ಅಭಿವೃದ್ಧಿಗೆ ಮಾರ್ಗದರ್ಶಿ ಸೂತ್ರಗಳ ಅವಶ್ಯಕತೆಯಿದೆ.
ಕೆ.ಎಂ.ವಿಶ್ವನಾಥ ಮರತೂರ.