ದಿನಪತ್ರಿಕೆಗಳಲ್ಲಿ ಬರುವ ಅಂಕಣ ಬರಹಗಳನ್ನು ಓದುವುದು ದಿನನಿತ್ಯದ ಹವ್ಯಾಸಗಳಲ್ಲಿ ಒಂದಾಗಿದೆ. ಎಲ್ಲಾ ಪತ್ರಿಕೆಗಳಲ್ಲಿನ ಅಂಕಣಗಳನ್ನು ಓದುವಾಗ ನಮ್ಮ ಭಾಗದಿಂದ ಅಂಕಣಕಾರರು ಯಾರು ಇಲ್ಲವೆ ಎಂಬ ಪ್ರಶ್ನೆ ಕಾಡುತ್ತಿರುತಿತ್ತು, ಕಲ್ಯಾಣ ನಾಡಿನ ಲೇಖಕರು ಬರೆಯುವುದಿಲ್ಲವೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ್ದು “ನೆಲದ ನಂಟು” ಎಂಬ ಅಂಕಣದ ಖ್ಯಾತ ಅಂಕಣಕಾರ್ತಿಯಾದ ಹೋರಾಟಗಾರರು ಆದ ಕೆ.ನೀಲಾ ಅವರು ಹೋರಾಟದ ಹಾದಿಯ ಜೊತೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.
ಅವರ ಲೇಖನಗಳಿಂದ ಪ್ರಭಾವಿತನಾದ ನಾನು, ಅವರೊಂದಿಗೆ ಒಮ್ಮೆ ಮಾತನಾಡಬೇಕು ಎಂಬ ಹಂಬಲದೊಂದಿಗೆ ಅನೇಕಬಾರಿ ಭೇಟಿ ಮಾಡಲು ಪ್ರಯತ್ನಿಸಿದ ಬಳಿಕ, ಅವರ ಹೋರಾಟದ ಜೊತೆಗೆ ಬದುಕಿನ ದಾರಿಯನ್ನು ಅರೆಯುವ ಸದಾವಕಾಶ ದೊರೆಯಿತು. ಬಿರುಬಿಸಿಲಿನ ಬೆಂಗವಾಲಿನಲಿ ಅವರನ್ನು ಕಾಣಲು ಕಲಬುರ್ಗಿಗೆ ತಲುಪಿದೆ, ಅವರ ಮನೆಯಲ್ಲಿಯೆ ಸುಮಾರು ಎರಡು ಗಂಟೆಗು ಹೆಚ್ಚುಕಾಲ ಮಾತನಾಡಿ ಅಕ್ಷರ ರೂಪಕ್ಕಿಳಿಸಿದ ಸಾರಂಶ ನನ್ನ ಸಾಹಿತ್ಯ ಒಲವಿಗೆ ಮತ್ತಷ್ಟು ಇಂಬು ನೀಡಿತು.
ಅವರ ಬದುಕಿನ ಪಯಣ ಅವರ ಮಾತಿನಲ್ಲಿಯೇ ಕೇಳಿ ಆ ಬೀದರ್ ಭಾಷೆ ಅವರು ಬಳಸುವ ಪದಗಳು ಅವರ ಮನಸ್ಸಿನಲ್ಲಿ ಬಡವರ ಬಗ್ಗೆ ಇರುವ ಕಾಳಜಿ ಎದ್ದು ಕಾಣಿಸುತ್ತದೆ ಅವರೇ ಹೇಳುವಂತೆ, ನಾನು ಶೈಕ್ಷಣಿಕವಾಗಿ ಅಷ್ಟೇನು ಹೆಚ್ಚಿಗೆ ಓದಿದವಳಲ್ಲ, ನಮ್ಮದು ಬೀದರ್ ಜಿಲ್ಲಾದಲ್ಲಿನ ಇಲ್ಲಾಳ ಎಂಬ ಸಣ್ಣ ಹಳ್ಳಿಯವರು. ನಮ್ಮ ತಂದೆ ಶಿಕ್ಷಕರಾಗಿದ್ದರು, ತಾಯಿ ಗೃಹಿಣಿಯಾಗಿದ್ದರು, ನಮ್ಮ ತಂದೆಗೆ ನಾನು ವಿಜ್ಞಾನ ವಿಭಾಗದಲ್ಲಿ ಓದಬೇಕು ಎಂಬ ಆಸೆಯಿತ್ತು, ಪಿಯುಸಿಯಲ್ಲಿ ಸೈನ್ಸ್ಗೆ ಹಾಕಿದ್ದರು ಆದರೆ ನನಗೆ ಈ ಗಣಿತ ಬರತ್ತಿರಲಿಲ್ಲ, ಅದಕ್ಕೆ ಗಣಿತದಲ್ಲಿ ಫೇಲಾದೆ. ನನ್ನ ಓದು ನಿಲ್ಲಲಿಲ್ಲ ಮನೆಯಲ್ಲಿನ ಹಲವು ಸಾಹಿತಿಗಳ ಪುಸ್ತಕಗಳು ಹಾಗೂ ಕಮ್ಯೂನಿಷ್ಟ ವಿಚಾರವಾದ ನನ್ನಲ್ಲಿ ಹಲವು ವಿಚಾರಗಳನ್ನು ಒರೆಗೆಚ್ಚಲು ಸಾದ್ಯವಾಯಿತು. ಸ್ವಲ್ಪ ಟೈಲರಿಂಗು, ಟೈಪಿಂಗು ಕಲಿತ ನಾನು ಚಿಕ್ಕ ಪುಟ್ಟ ಕೆಲಸಗಳನ್ನು ಮಾಡುತ್ತಾ ಬದುಕತೊಡಗಿದೆ. ಆವಾಗಿನಿಂದಲೆ ನಾನು ಸ್ವತಂತ್ರ ಬದುಕಿನ ದಾರಿಯನ್ನು ಕಲಿತಿದ್ದು. ಮನೆಯಲ್ಲಿ ಅಪ್ಪ ಕಲೆ ಸಾಹಿತ್ಯ ಕಾದಂಬರಿ ಗ್ರಂಥಾಲಯ ಇತ್ಯಾದಿಗಳ ಸಂಪರ್ಕ ಬೆಳೆದು, ನನ್ನ ಸಾಹಿತ್ಯದ ಒಲವಿಗೆ ಸಾದ್ಯವಾಯಿತು. ನಮ್ಮ ತಂದೆ ವಕೂಫ್ ಎಂಬ ಪತ್ರಿಕೆ ಹೊರತರುತ್ತಿದ್ದರು. ವಕೂಫ್ ಎಂದರೆ ವಿವೇಕ ಎಂದರ್ಥ ಇದರ ಪ್ರಭಾವವು ನನಗಾಗಿತು. ಆಗಿನ ತತ್ವಪದಗಳು, ಹಳ್ಳಿ ಜೀವನ, ಆಗಿನ ಉರ್ದು ಭಾಷೆಯ ಪ್ರಭಾವ ನಮ್ಮ ಊರಿನ ಬಂಡೆಪ್ಪ ಮುತ್ಯಾನ ಹಾಡುಗಳು ಅವುಗಳಲ್ಲಿನ ಅರ್ಥಗಳು ನಮ್ಮೊಳಗೆ ಹೋರಾಟದ ಕಿಚ್ಚನ್ನು ಹಚ್ಚಿದವು.
ನಾನು ತ್ರೀವೇಣಿ, ಬಸವರಾಜ ಕಟ್ಟಿಮನಿ, ನಿರಂಜನ ಇತ್ಯಾದಿ ಕವಿಗಳನ್ನು ಓದಿಕೊಂಡೆ. ನಾವು ಒಟ್ಟು ಆರು ಜನ ಹೆಣ್ಣುಮಕ್ಕಳು ಒಬ್ಬ ತಮ್ಮ ಇದು ಕುಟುಂಬದ ಕತೆಯಾದರೆ ಇನ್ನೊಂದು ಕಡೆಗೆ ಮಾಕ್ಸ್ ಎಂಗಲ್, ಕಮ್ಯೂನಿಷ್ಟ ವಿಚಾರದಾರೆ ಮತ್ತು ನಮ್ಮ ಮನೆಗೆ ಬರುತ್ತಿದ್ದ ಮಲ್ಲಿಗೆ ಮಯೂರ ಪ್ರಜಾವಾಣಿ ಮರಾಠಿ ಪತ್ರಿಕೆಗಳು, ಮಾಸ್ಕೋದಿಂದ ಪತ್ರಿಕೆಗಳು ಅಪ್ಪ ತರಸ್ತಿದ್ದರು. ಇವೆಲ್ಲ ನಮ್ಮ ಮನೆಯಲ್ಲಿ ಭೂಷಣ ಅಂದ್ರ ಪುಸ್ತಕಗಳು. ಮನೆಯಲ್ಲಿ ಬಟ್ಟೆಬರೆಗಳಿಗಿಂತ ಪಾತ್ರೆಗಳಿಗಿಂತ ಹೆಚ್ಚು ಪುಸ್ತಕಗಳು ಇದ್ದವು. ತಂದೆ ತಾಯಿ ಬಸವ ತತ್ವ ಅನುಯಾಯಿಗಳಾಗಿದ್ದರು. ಇಂತಹ ವಾತಾವರಣದಲ್ಲಿ ಬೆಳೆದ ನಮಗೆ ಈ ಸಾಹಿತ್ಯ ಹೋರಾಟವೆಲ್ಲವು ಮೈಗೂಡಿಸಿಕೊಳ್ಳಲು ಸಾದ್ಯವಾಯಿತು.
ಸಾಹಿತ್ಯ, ತತ್ವಪದಗಳಿಂದ ಹೋರಾಟದ ಹಾದಿ ಹಿಡಿಯಬೇಕಾಯಿತು. ಸಂತ ಸೂಫಿ ಗ್ರಾಮೀಣ ಬದುಕಿನ ಜೊತೆಗೆ ಒಡನಾಡಿಯಾಗಿದ್ದು ಹೋರಾಟಕ್ಕೆ ದಾರಿಮಾಡಿಕೊಟ್ಟಿತು. ಸಾಹಿತ್ಯ ಓದಿದರೆ ಪ್ರಶ್ನೆ ಮಾಡುವ ಮನೋಭಾವ ಮೂಡುತ್ತದೆ. ಜೀವನ ಕಟ್ಟಿಕೊಡುತ್ತದೆ. ವಚನಗಳು ಜೀವನ ಮೂಲ ಅರ್ಥ ಹೋರಾಟವನ್ನು ಪುಟಿದೇಳುಸುತ್ತವೆÉ. ಈ ವ್ಯವಸ್ಥೆ ಯಾಕೆ ಹಿಂಗೆ ಎಂಬ ಕಲ್ಪನೆ ಮೂಡಿಸುತ್ತದೆ. ಮಾನವೀಯ ನೆಲೆಯ ಚಿಂತನೆ, ಸೂಫಿ ಸಂತರ ಪರಿಚಯವಾಗುತ್ತದೆ. ಆಳವಾದ ಅಧ್ಯಯನ ಮತ್ತು ಜನಜೀವನ ಬದುಕಿನೊಂದಿಗೆ ಒಡನಾಡಿಯಾಗಿದ್ದು ಹೋರಾಟದ ಹಾದಿ ಹಿಡಿಯಲು ಪ್ರೇರಣೆಯಾಯಿತು. ತತ್ವ ಪದಗಳು ನನ್ನ ಜೀವನದಲ್ಲಿ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸುತ್ತವೆ. ಅವುಗಳಲ್ಲಿನ ಆಳವಾದ ಗ್ರಾಮೀಣ ಬದುಕಿನ ಸೊಗಡು ಎಲ್ಲವು ನಮ್ಮ ಬಾಳಿನ ದಾರಿಯನ್ನು ಕಟ್ಟಿಕೊಟ್ಟವು.
ಸಾಹಿತ್ಯದ ಹಾದಿಯಲ್ಲಿ ಅನುಭವವೇ ಒಂದು ದೊಡ್ಡ ಪುಸ್ತಕವಾಗಿದೆ. ಅವುಗಳಲ್ಲಿ ಬದುಕು ಬೀದಿಯ ಪಯಣ(ಕವನ), ಬದುಕು ಬಂದಿಖಾನಿ(ಜೈಲು ಅನುಭವ), ಜ್ಯೋತಿಯೊಳಗಣ ಕ್ರಾಂತಿ, ನೆಲದ ಪಿಸುಮಾತು, ಮಹಿಳಾ ಶೋಷಣೆಯ ನೆಲೆಗಳು, ಚಿವುಟಿದಿರಿ ಚಿಗುರ, ಬಾಳಕೌದಿ ಇತ್ಯಾದಿ ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜೀವನಾನುಭವ ಹೆಚ್ಚಾಗಿವೆ. ಬದುಕಿನಾಚೆಗಿನ ಅನುಭವವನ್ನು ಕಟ್ಟಿಕೊಡಲು ಇಂದಿನ ಯುವಪೀಳಿಗೆಯನ್ನು ಅವರ ಬದುಕನ್ನು ಕಟ್ಟಿಕೊಡುವಲ್ಲಿ ಸಾಹಿತ್ಯ ಯಶಸ್ವಿಯಾಗುತ್ತದೆ.
ಸಾಹಿತ್ಯ ಮತ್ತು ಹೋರಾಟಗಳೆರಡು ನೇರ ಸಂಬಂಧವಿದೆ, ಸಾಮಾಜಿಕ ಬದ್ಧತೆ ಇದ್ದರೆ ಬದುಕು ಹೋರಾಟ ಹೇಳಿಕೊಡುತ್ತದೆ. ಕಾವ್ಯ ಕ್ರಾಂತಿಯನ್ನು ಕಲಿಸಿಕೊಡುತ್ತದೆ. ತಾತ್ಕಾಲಿಕ ಬದುಕಿನೊಂದಿಗೆ ಸಾಹಿತ್ಯ ಮತ್ತು ಹೋರಾಟ ಅಂಟಿಕೊಂಡಿವೆ. ನೀವು ಬಂಡಾಯದ ಯಾವುದೆ ಸಾಹಿತ್ಯವನ್ನು ಓದಿರಿ ಅದು ನಿಮಗೆ ಪ್ರಶ್ನೆ ಮಾಡುವ, ವ್ಯವಸ್ಥೆಯನ್ನು ಕೇಳುವ ಕೌಶಲ್ಯ ಹೆಚ್ಚಿಸುತ್ತದೆ. ಡಾ.ಸಿದ್ಧಲಿಂಗಯ್ಯನವರ ಇಕ್ಕ್ರಲಾ ಒದಿರ್ಲಾದಿಂದ ಹಿಡಿದು ಇಂದಿನ ಅನೇಕ ಯುವ ದಲಿತ ಸಾಹಿತಿಗಳತನಕ ಅದರಲ್ಲಿರುವ ತತ್ವವೆ ಹೋರಾಟವನ್ನು ಹುಟ್ಟುಹಾಕುತ್ತದೆ. ಮನುಷ್ಯರನ್ನು ಮನುಷ್ಯರನ್ನಾಗಿ ಇರಲು ಬಿಡಿ, ಎಂಬ ಕೂಗು ಸಾಹಿತ್ಯ ಹೇಳಿಕೊಡುತ್ತದೆ. ಚಳುವಳಿಗೂ ಹಾಗೂ ನೊಂದಲೋಕದ ಸಾಹಿತ್ಯಕ್ಕು ನೇರವಾದ ಸಂಬಂಧವಿದೆ ಎಂದು ಈ ತಾಯಿ ನುಡಿಯುವಾಗ ಅವರ ಕಣ್ಣಿನಲ್ಲಿ ಈ ನೆಲದ ಮೂಲದ ಜನರ ಬಗ್ಗೆ ಅವರಿಗಿರುವ ಕನಿಕರ ಕಾಣುತ್ತದೆ.
ದಲಿತ ಸಾಹಿತ್ಯವು ಕರ್ನಾಟಕ ಅಷ್ಟೆ ಅಲ್ಲದೆ, ಇಡಿ ಭಾರತದಲ್ಲಿ ದಲಿತಪರವಾದ ಸಾಹಿತ್ಯದ ಧ್ವಿನಿಗಳಿವೆ. ಅದರಲ್ಲಿ ಮಹಿಳಾ ಧ್ವನಿ, ಸಾಹಿತ್ಯದ ಧ್ವನಿ, ಹೋರಾಟದ ಬದುಕು, ಸಂವಿಧಾನ ಬದ್ಧವಾದ ನೆಲೆಗಳು ಮನುಷ್ಯತ್ವವನ್ನು ಕಟ್ಟಿಕೊಡುವ ಗಟ್ಟಿ ಧ್ವನಿ ದಲಿತ ಸಾಹಿತ್ಯದಲ್ಲಿದೆ. ನೊಂದವರ ನೋವು, ಶ್ರೀಣಿಕೃತ ಸಮಾಜಕ್ಕೆ ಸಿಗಬೇಕಾದ ಅವಕಾಶಗಳನ್ನು ಇದು ಎಚ್ಚರದ ಯುಗಮಾನ ಅಕ್ಷರದ ಸ್ವಾತಂತ್ರದ ಅನಾವರಣ, ಹಕ್ಕುಗಳ ತರುವಾಯ ಹೋರಾಟ ಮಾಡುವುದು, ದಲಿತ ಸಂಘಟನೆಗಳು ಸಾಮಾನ ಮನಸ್ಕರ ವೇದಿಕೆಗಳು ಜಾಗೃತಿ ಹೋರಾಟಗಳು ಒಟ್ಟಾರೆ ದಲಿತ ಸಾಹಿತ್ಯ ಕಟ್ಟಿಕೊಡುತ್ತದೆ. ಈ ಸಾಹಿತ್ಯವನ್ನು ನಮ್ಮ ಇಂದಿನ ಪೀಳಿಗೆ ಓದಿಕೊಳ್ಳಬೇಕು. ಅದನ್ನು ಅನುಸಿರಿಸಿ ಜೀವಪರವಾದ ಕಾಳಜಿಯುಳ್ಳ ನೆಲೆಗಳನ್ನು ಕಟ್ಟಿಕೊಡಬೇಕೆಂದು ಯುವಕರಿಗೆ ಸಲಹೆ ಕೊಡುತ್ತಾ “ಬಿಸಿಲು ಬೆಳದಿಂಗಳೆಂಬ” ವೇದಿಕೆಯಲ್ಲಿ ಅನೇಕ ಯುವಕರ ಪಾಲಿಗೆ ಸಾಹಿತ್ಯ ಬದುಕಿನ ದಾರಿದೀಪವಾಗಿದ್ದಾರೆ. ಕೆ.ನೀಲಾ.
ದಲಿತರ ಮೇಲಿನ ದೌರ್ಜನ್ಯಗಳು ಅನಾದಿಕಾಲದಿಂದಲು ವಿಸ್ತರಿಸುತ್ತಿರುವ ಅಳಿಯದ ಉಳಿಯುವ ನೊಂದವರ ನೋವಿನ ತೋಟವನ್ನು ಸಾಹಿತ್ಯ ಕಲಿಸಿಕೊಟ್ಟಿದೆ. ಅನೇಕ ಸಾಹಿತ್ಯ ಸಾಮಾಜಿಕ ಕ್ರೈಸಿಸ್ ಹುಟ್ಟುಹಾಕಿದೆ. ನನ್ನಿಂದ ಬದಲಾವಣೆ ಸಮಷ್ಟಿ ಜನ ಅಲ್ಲೆಗಳೆಯುವ ಚಳುವಳಿ ಹೆಸರಿನ ಬಣಗಳು ಕಾರ್ಪೋರೇಟ್ ಲೋಕದಲ್ಲಿನ ಬದಲಾವಣೆಗಳು ಇಡಿ ಭಾರತÀ ಇಂದು ಅವರೊಂದಿಗಿನ ಒಡನಾಡಿಯಾಗಿದೆ. ನೆಲಮೂಲದ ಚರಿತ್ರೆಯನ್ನು ಅರ್ಥಮಾಡಿಕೊಳ್ಳಬೇಕು.
ಅಭಿವ್ಯಕ್ತಿ ಸ್ವಾತಂತ್ರ ಪ್ರತಿ ಮನುಷ್ಯನ ಹಕ್ಕು, ಅದನ್ನು ಸ್ತೂಲವಾಗಿ, ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬೇಕಿದೆ. ನಮ್ಮ ಹೃದಯದೊಳಗೆ ಏನು ಅನಿಸುತ್ತದೆಯೊ, ಅದನ್ನು ಹೊರಹಾಕಲು ಹೆದರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅವರೆಲ್ಲ ಜಾಗತಿಕ ಮಟ್ಟದಲ್ಲಿ ಕೋಮುವಾದಿಗಳ, ಫ್ಯಾಶಿಜಿಂ ವ್ಯಕ್ತಿಗಗಳಿಂದ ಬಂಡವಾಳಶಾಹಿಗಳಿಂದ ಆಡಳಿತ ಮರೆಯುತ್ತಿದ್ದಾರೆ. ಸರ್ವಧಿಕಾರದ ಆಡಳಿತವನ್ನು ಮಾಡುತ್ತಿದ್ದಾರೆ. ಜನರ ಅಧಿಕಾರವನ್ನು ಕಿತ್ತುಕೊಂಡು ಏಕಸಂಸ್ಕøತಿಯ ನಾಟವಕನ್ನು ಮತ್ತೆ ಹೇರುವ ಹುನ್ನಾರ ನಡೆದಿದೆ. ಮಾತಿನಲ್ಲಿ ಜನರ ಪರ ಎನ್ನುವರು ಬಾಯಲ್ಲಿ ಬೆಲ್ಲ ಎದೆಯಲ್ಲಿ ಕತ್ರಿಯಾಗಿ ಕಾಣುತ್ತಿದ್ದಾರೆ. ಇತ್ತೀಚೆಗಿನ ಕನ್ಹಯ್ಯ ಪ್ರಕರಣ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಹರಣಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಕೆಲವು ಬಹಿರಂಗವಾಗಿ ನಡೆದರೆ ಇನ್ನು ಕೆಲವು ನಿಗೂಢವಾಗಿ ನಡೆದಿವೆ ದೇಶದ್ರೋಹ ದೇಶಪ್ರೇಮದ ಹೆಸರಿನಲ್ಲಿ ಹಿಂದುಳಿದವರನ್ನು ಹತ್ತಿಕಕುವ ಹುನ್ನಾರ ನಡೆದಿದೆ. ಸಂವಿಧಾನಕ್ಕೆ ಬದ್ಧವಾಗಿ ಆಡಳಿತ ಹಿಡಿದವರು, ಇಂದು ಸಂವಿಧಾನವನ್ನೆ ಪ್ರಶ್ನೆ ಮಾಡುವಂತಾಗಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರದ ಹರಣದಿಂದ ಹಿಂದುಳಿದವರ ಶಬ್ದವನ್ನು ಕಸಿದುಕೊಳ್ಳುತ್ತಿದ್ದಾರೆ. ಹೀಗೆ ಮಾತಿನುದ್ದಕ್ಕೂ ಧ್ವನಿ ಘಟ್ಟಿಯಾಗುತ್ತಾ ಜನಪರವಾದ ನಿಲುವನ್ನು ನೀಲಾ ಲೀಲಾಜಾಲವಾಗಿ ಹೇಳುತ್ತಾ ಹೋಗುತ್ತಾರೆ.
ನಿಜವಾದ ಜೀವಪರ ಕಾಳಜಿಯಿರುವ ಎಲ್ಲರು ಒಂದಾಗಿ ದೇಶದ ಮೂಲನಿವಾಸಿಗಳ ಹಕ್ಕುಗಳನ್ನು ಕಾಯಬೇಕು. ಅವರ ಈ ತಂತ್ರ ಕುತಂತ್ರಕ್ಕೆ ನಾವು ಬಲಿಯಾಗುವುದಿಲ್ಲ, ನೀವು ಉಂಡ ಎಲಿಮ್ಯಾಲ ಉರುಳುವುದನ್ನು ಒಪ್ಪುದಿಲ್ಲವೆಂದಾಗ ನಮಗೆ ಬುದ್ದಿಜೀವಿಗಳನ್ನುತ್ತಾರೆ ಅದರಿಂದ ನಮಗೇನು ಫರಕ್ ಬೀಳುವುದಿಲ್ಲ, ಇಲ್ಲಿ ಜೀವಪರ ಮತ್ತು ಜೀವವಿಲ್ಲದ ನಿಲುವುಗಳಿವೆ. ಬೈರಪ್ಪನವರ ಸನಾತನ ಧರ್ಮದ ನಿಲುವುಗಳನ್ನು ಒಪ್ಪಿಕೊಳ್ಳಬೇಕು ಎಂದು ಎಲ್ಲಿಯೂ ಹೇಳಿಲ್ಲ, ಅದನ್ನು ಪ್ರಶ್ನೆ ಮಾಡುವ ವಿಮರ್ಷೆಮಾಡುವ ಪ್ರಶ್ನೆ ಮಾಡುವ ಅವಶ್ಯಕತೆಯಿದೆ. ಇದರಿಂದ ಒಂದು ಅರ್ಥಮಾಡಿಕೊಳ್ಳಬೇಕಾದದ್ದು ನಮ್ಮ ದೇಶದಲ್ಲಿ ಸನಾತನ ತತ್ವವನ್ನು ಮತ್ತೆ ಈ ದೇಶದಲ್ಲಿ ಹೇರಬೇಕು ಎಂಬ ಬಯಕೆಯಿಟ್ಟುಕೊಂಡಿದ್ದಾರೆ. ಚಾತುರವರ್ಣವಾದದವನ್ನು ಮಂಡಿಸುವುದನ್ನು ನಾವು ಒಪ್ಪುವುದಿಲ್ಲ. ಅವರು ಬೇಕಾದ್ದು ವಿಮರ್ಷೆ ಮಾಡಿಕೊಳ್ಳಲಿ. ಈ ನಾಡಿನ ಮೂಲನಿವಾಸಿಗಳಾದ ನಾವು ನಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಬೇಕಿದೆ. ಎಂದು ಬಡವರ ಹಕ್ಕಿನ ಉಳಿವಿನ ಜಾಣತನ ಮರೆಯುತ್ತಾರೆ.
ಇವತ್ತಿನ ಅನೇಕ ಯುವ ಸಾಹಿತಿಗಳು, ಹಲವು ರೀತಿಯಲ್ಲಿ ಬೆಳೆಯಲು ಮತ್ತು ಬರೆಯಲು ಅವಕಾಶಗಳಿವೆ. ಅವರೆಲ್ಲ ಮೊದಲು ಓದಬೇಕು. ಶರಣರ, ಸಂತರ ಸೂಫಿಯವರ, ಈ ಭಾಗದ ಶಾಂತರಸರು, ಗೀತಾನಾಗಭೂಷಣ, ಚೆನ್ನಣ್ಣ ವಾಲಿಕಾರ ಇಂತಹ ಅನೇಕ ನಾಡಿನ ಹಿರಿಯ ಸಾಹಿತ್ಯಗಳನ್ನು ಓದಿಕೊಳ್ಳಬೇಕು. ನಮ್ಮವರ ಸಾಹಿತ್ಯವು ಕ್ವಾಲಿಟಿಯಾಗಿ ಹೊರಬರಬೇಕು. ಬರೆಯುವ ಕೈಗಳು ಗಟ್ಟಿಯಾಗಬೇಕು, ಸಾಹಿತ್ಯ ಗಂಭೀರತೆ ಪಡೆಯಬೇಕು, ಹೊಸ ರೀತಿಯಲ್ಲಿ ಹೇಳುವ ಮಾರ್ಗ ಕಂಡುಹಿಡಿಯಬೇಕು, ಹಲವನ್ನು ಓದಿ ನಡೆದ ಹಾದಿಯಲ್ಲಿ ಕ್ರಮಿಸುವುದರ ಜೊತೆಗೆ ಹೊಸ ಹಾದಿಯನ್ನು ಹುಟ್ಟುಹಾಕಬೇಕು. ಜೀವನ ಅನುಭವಗಳನ್ನು ಒಟ್ಟುಗೂಡಿಸಬೇಕಿದೆ. ಪ್ರಸ್ತುತದಲ್ಲಿನ ಅನೇಕ ಕೃತಿಗಳನ್ನು ಬ್ಯಾನ್ ಮಾಡಿರುವ ಉದಾಹರಣೆಗಳಿವೆ. ನಾವೆಲ್ಲ ಹೆದರುವ ಅವಶ್ಯಕತೆಯಿಲ್ಲ, ನಾವು ಮುನ್ನುಗ್ಗುತ್ತಿರಬೇಕು. ಸಮಾಜದಲ್ಲಿ ಮನುಷ್ಯತ್ವದ ವಿರುದ್ಧ ಪ್ರಕರಣಗಳು ನಡೆದಾಗ, ನಾವೆಲ್ಲ ಹಲವು ವಿಧಾನಗಳ ಮೂಲಕ ಧ್ವನಿಯತ್ತಬೇಕು ಅದನ್ನು ಖಂಡಿಸಬೇಕು. ಸಮಾಜದದಲ್ಲಿ ಸಮಬಾಳು ಸರ್ವರಿಗೂ ಸಿಗÀಬೇಕು. ಎಂಬುವುದು ನೀಲಾ ಅವರ ಸ್ಪಷ್ಟವಾದ ಸಾಹಿತ್ಯ ಮತ್ತು ಹೋರಾಟದ ನಿಲುವಾಗಿದೆ.
ಇಷ್ಟು ಕೆ.ನೀಲಾ ಅವರು ಮಾತನಾಡಿದ್ದು, ಇಲ್ಲಿ ಎಲ್ಲವು ದಾಖಲಿಸಲು ಸಾದ್ಯವಾಗಲಿಲ್ಲ, ಅದರಲ್ಲಿ ಕೆಲವನ್ನು ಮಾತ್ರ ಇಲ್ಲಿ ಹಂಚಿಕೊಳ್ಳುತ್ತಿರುವೆ. ಅವರೊಂದಿಗೆ ಮಾತನಾಡಿದಾಗ ಸಾಹಿತ್ಯಕ್ಕೊಂದು, ನನ್ನ ಭಾವನೆಗಳಿಗೊಂದು ಶಕ್ತಿ ಬಂದಂತಾಯಿತು. ಇದಾಗಲೆ ಬರೆದಿರುವ ಅನೇಕ ಸಾಹಿತ್ಯಕ್ಕೆ ಮತ್ತಷ್ಟು ಮೆರಗು ಬಂದಂತಾಯಿತು. ಒಡಲೊಳಗಿನ ಕಿಚ್ಚನ್ನು ಯಾವುದರ ಭಯವಿಲ್ಲದೆ, ಮುನ್ನುಗ್ಗುವ ಪ್ರೋತ್ಸಾಹ ದೊರೆಯಿತು. ನನ್ನ ಸಾಹಿತ್ಯದ ಅಧ್ಯಯನಕ್ಕೊಂದು ನೆಲೆಸಿಕ್ಕಂತಾಯಿತು. ನೀಲಾ ಅವರಿಗೂ ಮನೆಮಕ್ಕಳು ಇದ್ದರೂ ಸಮಾಜಕ್ಕಾಗಿ ಮಿಡಿಯುವ ಹೃದಯವದು. ಸದಾ ಧ್ವನಿಯಿಲ್ಲದವರ ಕಡೆಗೆ ವಾಲುತ್ತದೆ. ಹಳ್ಳಿಜನರ ಜೀವನ ಸುಧಾರಿಸುವುದರ ಜೊತೆಗೆ ಈ ನಾಡಿನ ಬಹುದೊಡ್ಡ ಸಮುದಾಯಿಕ ಪರಂಪರೆಯನ್ನು ಉಳಿಸುವಲ್ಲಿ ಪ್ರಯತ್ನಿಸುತ್ತಿದ್ದಾರೆ. ಅವರ ಸಾಮಾಜಿಕ ಶ್ರಮದ ಕೆಲಸವನ್ನು ಕಂಡು ಧಾರವಾಡದಲ್ಲಿ ಮೇ 27ರಂದು ಶ್ರಮಜೀವಿ' ಪ್ರಶಸ್ತಿಯು ನೀಡಲಾಗುತ್ತಿದೆ. ಈ ಮೂಲಕ ಅವರಿಗೊಂದು ನನ್ನ ಅಭಿನಂದನೆ ಹೇಳುತ್ತೇನೆ. ಅವರ ಸಾಹಿತ್ಯ ಹಾಗೂ ಸಮಾಜ ಸೇವೆ ಎಲ್ಲರಿಗೆ ಮಾದರಿಯಾಗಲೆಂದು ಆಶಿಸುತ್ತೇನೆ.