ನಮ್ಮ ಜನರು ಹಿಂದುಧರ್ಮದ ಕಟ್ಟುಪಾಡಿನೊಳಗೆ ಕಷ್ಟ ಪಡುತ್ತಿರುವುದು ನೋಡಿದರೆ ಈ ರೋಗಕ್ಕೆ ಮದ್ದು ಧರ್ಮ ಬದಲಾವಣೆಯಿಂದ ಮಾತ್ರ ದಲಿತರ ಉಳಿವಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಈ ಹಿಂದುತ್ವದೊಳಗಿನ ಕಟುಕತನವ ಸಹಿಸಿ ದಲಿತರು ಸಣ್ಣಾಗಿದ್ದಾರೆ ಎಂಬುವುದು ಕಟುವಾಸ್ತವವಾಗಿದೆ. ಅಸ್ಪಷ್ರಷ್ಯತೆ ಎಂಬುವುದು ಮನಸುಗಳಲ್ಲಿ ಬದಲಾಗಬೇಕಾದ ವಿಷಯ. ಕಾಯಕದಲ್ಲಿಯು ಮೇಲುಕೀಳು ತಾಂಡವಾಡುತ್ತಿದೆ. ಮನುಷ್ಯರ ಮನಸ್ಸಿನೊಳಗೆ ಬದಲಾದಾಗ ಮಾತ್ರ ಈ ಮಾರಿ ತೊಲಗಲು ಕಾರಣವಾಗುತ್ತದೆ. ಪ್ರಸ್ತುತ ಆಚರಣೆಗಳೆಲ್ಲವು ಅರ್ಥಮಾಡಿಕೊಂಡು ಆಚರಿಸುವ ಅವಶ್ಯಕತೆಯಿದೆ. ಮೇಲು ಕೀಳೆಂಬ ಭಾವ ಮನುಷ್ಯರಲ್ಲಿ ಉದ್ಭವಿಸಲು ಧರ್ಮಗ್ರಂಥಗಳೆ ಕಾರಣ. ಹಿಂದೂ ಧರ್ಮವೆಂದು ಬಿಂಬಿತವಾದ ಧರ್ಮವೆ ಅಲ್ಲದ ಬರಿ ಮೂಢನಂಬಿಕೆಗಳ ಆಚರಣೆಗಳಿಂದ ತುಂಬಿರುವ ಧರ್ಮದಲ್ಲಿ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ.
ವೇದ, ಉಪನಿಷತ್ತು, ಪುರಾಣ, ಭಗವತ್ ಗೀತೆ ಈ ತಾರತಮ್ಯ ಮತ್ತು ಜಾತಿಯತೆಯನ್ನು ಸಂಪ್ರದಾಯಗಳನ್ನು ಬಿತ್ತಿ ಮನುಷ್ಯರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವ ಪ್ರಯತ್ನ ಮಾಡಿದೆ. ಅವುಗಳ ಆಚರಣೆಯಿಂದಲೆ ಇಂದಿನ ಇಷ್ಟು ತಾರತಮ್ಯಕ್ಕೆ ಮೂಲಕಾರಣವಾಗಿದೆ. ಈ ತಾರತಮ್ಯದಲ್ಲಿ ಬಿದ್ದು ಒದ್ದಾಡುತ್ತಿರುವರು ಧರ್ಮ ಬದಲಿಸದ ಹೊರತು ಈ ಮೇಲು ಕೀಳಿಗೆ ಉಳಿಗಾಲವಿಲ್ಲ ಅಂತೆಯೇ ಅಂಬೇಡ್ಕರ್ ತಮ್ಮ ಧರ್ಮ ಬದಲಿಸುವ ಮೂಲಕ ಎಲ್ಲರಿಗೂ ಎಚ್ಚರಿಕೆಯ ಘಂಟೆ ಭಾರಿಸಿದರು ಈ ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸುವಲ್ಲಿ ಯಶಸ್ವಿಯಾದರು.
ಈ ಧರ್ಮ ಬದಲಾವಣೆಯಿಂದ ಬಡವರ ಬದುಕು ಉಳಿಯುತ್ತದೆ. ಪ್ರಸ್ತುತ ಕರ್ನಾಟಕದಲ್ಲಿ ಕ್ರಿಷ್ಯನ್ ಧರ್ಮದಲ್ಲಿರುವ ಮಾದಿಗ ಜನರನ್ನು ಗಮನಿಸಿದರೆ ಇದರ ಅರಿವು ನಮಗಾಗುತ್ತದೆ. ಹಿಂದು ಧರ್ಮವನ್ನು ತೊರೆದು ಕ್ರಿಷ್ಚನ್ ಧರ್ಮ ಅನುಸರಿಸಿ ಈ ಕೀಳುಮಟ್ಟದ ಎಲ್ಲಾ ಕೆಲಸಗಳನ್ನು ಸ್ವಯಂ ಆಗಿ ಬಿಟ್ಟು ಸಮಾಜದ ಉನ್ನತ ಹುದ್ದೆಗಳು ಮತ್ತು ಒಳ್ಳೆಯ ಕೆಲಸಗಳನ್ನು ಮಾಡುತ್ತಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದೆಯಿವೆ. ಧರ್ಮ ಬದಲಿಸದ ಹೊರತು ಈ ಮೇಲು ಕೀಳಿಗೆ ಬೇರೆ ಆಯಾಮವೆ ಇಲ್ಲವೆನಿಸುತ್ತದೆ.