ಮಾಧ್ಯಮ ಅಥವಾ ಪತ್ರಿಕಾ ರಂಗದಲ್ಲಿ ಕೆಲಸ ಮಾಡುವ ವ್ಯಕ್ತಿಗಳು ಎಲ್ಲಿಂದಲೋ ಬಂದು ಹೇಗೊ ಒಂದು ಕೆಲಸ ಎಂದು ಮಾಡುವ ಕೆಲಸವಲ್ಲ ಅದು ಒಂದು ಸೃಜನಶೀಲ ಕೌಶಲ್ಯ ಯಾರು ಬೇಕಾದರು ಕಲಿಯಬಹುದು, ಬರಿ ಎಲ್ಲಿಯೋ ನೋಡಿದ್ದು ಯಾರು ಹೇಳಿದ್ದು, ಅವರ ಮಾತು, ಇವರ ಮಾತು ಎಂದು ಬರೆಯುವ ಅದೆಷ್ಟು ಸಂಪಾದಕರು ಪತ್ರಕರ್ತರು ನಮ್ಮೊಳಗೆ ಇದ್ದಾರೆ ಅದು ಪತ್ರಿಕೋಧ್ಯಮವಲ.್ಲ ಇರುವ ವಿಷಯವನ್ನು ಖಾರವಾಗಿ, ರಸವತ್ತಾಗಿ, ನಿಖರವಾದ ಮಾಹಿತಿಯೊಂದಿಗೆ, ಅಂಕಿಅಂಶಗಳೊಂದಿಗೆ ಸಮಾಜಕ್ಕೆ ಬಿತ್ತರಿಸುವ ಕೌಶಲ್ಯವೇ ನಿಜವಾದ ಪತ್ರಕೋದ್ಯಮ. ಆ ಪತ್ರಿಕೆಯಲ್ಲಿ ಏನೊ ಸೆಳೆತವಿರಬೇಕು, ಆ ಚಾನಲ್ನಲ್ಲಿ ಅದೇನೊ ಲವಲವಿಕೆಯಿರಬೇಕು, ಸಾಮಾನ್ಯ ಮನುಷ್ಯನಿಗೆ ಸೆಳೆಯುವ ಗುಣವಿರಬೇಕು. ಎಲ್ಲವೂ ಸಮಾಜದ ಒಳಿತನ್ನು ಕಟ್ಟಿಕೊಡುವ ಮಾಧ್ಯಮ ಇಂದಿನ ಬಹುದೊಡ್ಡ ಅವಶ್ಯಕತೆಯಿದೆ.
ಇನ್ನು ಮಾಧ್ಯಮ ಕ್ಷೇತ್ರದಲ್ಲಿ ಜಾತಿ ಮೀಸಲಾತಿ ಮಾಡಿಯೆಂಬ ಮಾತಿಗೆ ಬರುವುದಾದರೆ, ಕೌಶಲ್ಯವೆಂಬುವುದು ಜಾತಿ ನೋಡಿ ಬರುವಂತಹ ವಿದ್ಯೆಯೆಲ್ಲಾ, ಸತತ ಪರಿಶ್ರಮ, ತಾಳ್ಮೆ, ಕಲಿಯುವ ಹಂಬಲ ಈ ವಿದ್ಯೆಗೆ ಬಹಳ ಅವಶ್ಯಕ. ನಮ್ಮೊಳಗೆ ಅದೆಷ್ಟೊ ಜನ ಪ್ರೇಮ ಪತ್ರ ಬರೆದೆ ಖ್ಯಾತ ಅಂಕಣಕಾರ ಹಾಗೂ ಪತ್ರಕರ್ತರೂ ಆಗಿರುವ ಉದಾಹರಣೆಗಳಿವೆ. ಇವತ್ತು ಫೇಸ್ಬುಕ್ಲ್ಲೆ ಬರೆದೇ ಅದಷ್ಟೊ ಕಲಿತಿರುವ ಯುವಕರಿದ್ದಾರೆ, ಅವರಿಗ್ಯಾರು ಜಾತಿ ಮುಖ್ಯವಾಗಿಲ್ಲ ಅವರ ಪರಿಶ್ರಮ ಹಾಗೂ ಪ್ರಯತ್ನವೇ ಸಾಥ್ ನೀಡಿದ್ದು ಇದೀಗ ಅವರ ಬರವಣಿಗೆ ಅದ್ಯಾವ ಪತ್ರಿಕೆ ಮಾಧ್ಯಮ ಮುಟ್ಟದ ಲೆವಲ್ಗೆ ಅವರು ಮುಟ್ಟಿದ್ದಾರೆ. ಮೊನ್ನೆ ಪ್ರಧಾನಿಯವರು ಎಂಟು ವರ್ಷದ ಮಗುವಿನ ಪತ್ರಕ್ಕೆ ಉತ್ತರ ಕೊಟ್ಟರು ಎಂಬ ಸುದ್ದಿ ಕೇಳಿದ್ದೆವಲ್ಲ ಆ ಮಗು ಯಾವ ಸ್ನಾತಕೋತ್ತರ ಪದವಿ ಪಡೆದಿದಿದೆಯೆ? ಆ ಮಗುವಿನ ಅನುಭವ ಸಾಕು ಅಲ್ಲವೇ ಇದೇ ನಿಜವಾದ ಬರವಣಿಗೆ ಶೈಲಿ ಹಾಗೂ ಕೌಶಲ್ಯ ನಮ್ಮ ಅನುಭವ ನಮಗೆ ಕಲಿಸುತ್ತದೆ. ಇದಕ್ಕೆ ಜಾತಿ ಬೇಲಿ ಕಟ್ಟಿ ಮಾಧ್ಯಮವೆಂಬ ಭೂತದ ಮನೆಯೊಳಗೆ ಹಾಕಿ ಮೀಸಲಾತಿ ಕಡ್ಡಾಯವಿದೆ ತೆಗೆದುಕೊಳ್ಳಬೇಕು ಎಂಬ ನೆಪಕ್ಕೆ ತೆಗೆದುಕೊಂಡು ಆ ಭೂತ ಮನೆಯೊಳಗೆ ಆ ವ್ಯಕ್ತಿಯ ತೇಜೊವಧೆ ಮಾಡಿಸುವುದ್ದಕ್ಕಿಂತ ಅವರವರ “ ಪ್ರತಿಭೆ (ಟ್ಯಾಲೆಂಟ್)” ಮೇಲೆ ಅವರಿಗೆ ಅವಕಾಶಗಳನ್ನು ನೀಡಿವುದರ ಜೊತೆಗೆ ಎಲ್ಲರಿಗೂ ಸಮಾನವಾದ ಅವಕಾಶಗಳನ್ನು ನೀಡುವುದು ಸೂಕ್ತವೆನಿಸುತ್ತದೆ.
ಇನ್ನು ಮಾಧ್ಯದಲ್ಲಿ ಉತ್ತರ ಕರ್ನಾಟಕ ದಕ್ಷಿಣ ಕರ್ನಾಟಕವೆಂಬ ಅಂಶ ಮಾತ್ರ ಸುಳಿದಾಡಬಾರದು. ಬರವಣಿಗೆ ಬಿಸಲಿನಾಡಿನಲ್ಲಿಯೂ ಹುಟ್ಟುತ್ತದೆ ಹಸಿರನಾಡಿನಲ್ಲಿಯೂ ಹುಟ್ಟುತ್ತದೆ ಆದರೆ ಬರೆಯುವ ಪ್ರತಿಭೆಯಿರಬೇಕು ಅದನ್ನು ಗುರುತಿಸುವ ಮನಸ್ಸುಗಳಿರಬೇಕು ಅಷ್ಟೆ. ಮಾಧ್ಯಮ ಕ್ಷೇತ್ರದಲ್ಲಿ ನನ್ನ ಪ್ರಕಾರ ಪ್ರತಿಭೆ ಪರಿಶ್ರಮ ಇರುವ ವ್ಯಕ್ತಿಗಳಿಗೆ ಅವಕಾಶಗಳಿರಬೇಕು ಮತ್ತು ಅದನ್ನು ಬಳಿಸಿಕೊಳ್ಳುವ ಜಾಣರಿರಬೇಕು. ಪ್ರತಿಭೆಯೆಂಬುವುದು ಯಾವ ಜಾತಿಯ ಸ್ವತ್ತಲ್ಲ ಸ್ವತ: ಪರಿಶ್ರಮ ಹಾಗೂ ಪ್ರಯತ್ನದ ಫಲ ಅಷ್ಟೆ.
ಇದೀಗ ಪತ್ರಿಕಾ ರಂಗದಲ್ಲಿ ಸ್ವಾತಂತ್ರ ವಿದೆಯೆಂದು ಜಾತಿಗೊಂದು ಪತ್ರಿಕೆ ಹುಟ್ಟಿವೆ. ಮನೆಗೊಂದು ಪತ್ರಿಕೆ, ಜಾತಿಗೊಂದು ಚಾನಲ್, ಜಾತಿಗೊಬ್ಬ ಸಂಪಾದಕ, ಜಾತಿಯ ಮತಿಯ ಆಧಾರದ ಮೇಲೆಯೇ ಪತ್ರಕರ್ತರು ಹುಟ್ಟಿ ಅವರ ಜಾತಿಯ ಸುದ್ದಿ ಸಮಾಚಾರ ಅವರ ಜಾತಿಯವರೇ ಓದಿ ಚೆಪ್ಪಾಳೆ ಹೊಡೆಯಬೇಕಾದ ಸ್ಥಿತಿ ಎದುರಾಗಿದೆ. ಜಾತಿ ಮೀಸಲಾತಿಯೆಂಬುವುದು ಬೇಕು ಆದರೆ ಅದರ ದುರುಪಯೋಗ ಈ ಮಾಧ್ಯಮ ಕ್ಷೇತ್ರದಲ್ಲಿ ಹೆಚ್ಚಾಗುವ ಸಾಧ್ಯತೆಗಳಿವೆ. ಪತ್ರಿಕೆಯ ಮಾಲಿಕ ಕೆಳಜಾತಿಯವನಾದರು ಅದರ ಸಂಪಾದಕ ಮೇಲ್ಜಾತಿಯವನನ್ನು ಆರಿಸಿರುವ ಅದೆಷ್ಟು ಪತ್ರಿಕೆಗಳು ಆಗಿಹೋಗಿವೆ ಅವನ ಕೈಕೆಳಗೆ ಅನೇಕ ಕೆಳಜಾತಿಯವರು ಈಗಾಗಲೇ ಅನೇಕ ಕಷ್ಟಗಳು ಅನುಭವಿಸುತ್ತಿದ್ದು ಅದನ್ನು ವೃತ್ತಿ ಮರಿಯ್ಯಾದೆ ಹಾಗೂ ಕುಟುಂಬದ ದೃಷ್ಠಿಕೋನದಲ್ಲಿ ಸುಮ್ಮನೆ ಸಹಿಸಿಕೊಳ್ಳುತ್ತಿದ್ದಾರೆ. ಅವರ ವೇದನೆ ಆ ಪತ್ರಿಕೆ ತೊರೆದ ನಂತರ ಮಾತ್ರ ಹೇಳಿಕೊಳ್ಳುತ್ತಾರೆ ಅಥವಾ ನಿವೃತ್ತಿಯ ನಂತರ ಮಾತನಾಡಿಕೊಳ್ಳುತ್ತಾರೆ.
ಈ ಜಾತಿಯೆಂಬುವುದನ್ನು ನಾವಾಗಿಯೇ ನೆನಪು ಮಾಡಿಕೊಂಡು ಸಮಾಜದ ಸ್ವಸ್ತ್ಯ ಹಾಳು ಮಾಡುತ್ತಿದ್ದೇವೆಯೇ ಅಂಬ ಅನುಮಾನ ಇದೀಗ ಕಾಡುತ್ತಿದೆ. ಎಲ್ಲಿಯೆಂದರಲ್ಲಿ ಜಾತಿಯ ಹೆಸರಿನಲ್ಲಿ, ಮೀಸಲಾತಿಯ ಹೆಸರಿನಲ್ಲಿ ಮನುಷ್ಯ ಜಾತಿಯ ಮಾನವಿಯತೆಯನ್ನು ಮರೆಮಾಚುತ್ತಿದ್ದೇವೆ ಎನಿಸುತ್ತಿದೆ. ಜಾತಿಯೇ ಮರೆತು ಬದುಕುತ್ತಿರುವ ದುಡಿಯುತ್ತಿರುವ ಜನರ ಮನಸ್ಸೊಳಗೆ ನೇರವಾಗಿ ಜಾತಿಯೆಂಬ ವಿಷದ ಬೀಜ ಬಿತ್ತುತ್ತಿದ್ದೇವೆಯೇ ಎಂಬ ಅನುಮಾನ ಇತ್ತೀಚಿನ ಅನೇಕ ಘಟನೆಗಳು ತೋರಿಸುತ್ತಿವೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಪರವಿರೋಧಗಳನ್ನು ಮಾಡಿಕೊಂಡು ಚಾರಿತ್ರ್ಯವಧೆ ಮಾಡುವಲ್ಲಿ ನಿರತರಾಗಿದ್ದೇವೆ. ನಮ್ಮ ಭಾರತದ ಯುವಕರು ಹಾಗೂ ಇಂದಿನ ಮಕ್ಕಳು ಇದನ್ನೇ ಹೆಚ್ಚಾಗಿ ಅನುಕರಣೆ ಮಾಡುವತ್ತ ಧಾಪುಗಾಲಿಡುತ್ತಿದ್ದಾರೆ ಎನಿಸುತ್ತಿದೆ.
ಸ್ವಾತಂತ್ರ ಭಾರತದಲ್ಲಿ ಸಂವಿಧಾನ ರಚನೆಯಾದ ಬಳಿಕ ಯಾವುದರಲ್ಲಿ ಹೇಗೆ ಮೀಸಲಾತಿಯಿರಬೇಕು ಎಂಬ ಸ್ಪಷ್ಟವಾದ ಮಾಹಿತಿಯನ್ನು ಕೊಡಲಾಗಿದೆ. ಅಭಿವ್ಯಕ್ತಿ ಸ್ವಾತಂತ್ರ ಹೇಗಿರಬೇಕು ಎಂಬ ಮಾಹತಿಯೂ ಕೊಡಲಾಗಿದೆ. ಯಾರು ಯಾವ ತಪ್ಪು ಮಾಡಿದರೆ ಹೇಗೆ ಶಿಕ್ಷೆ ಕೊಡಬೇಕು ಎಂಬ ಸ್ಪಷ್ಟತೆಯಿದೆ ಅಂತಹ ಅಮೋಘ ಗ್ರಂಥವನ್ನು ನಮ್ಮ ದೇಶದಲ್ಲಿಟ್ಟುಕೊಂಡು ಏನು ಬೇಕು ಏನು ಬೇಡ ಎಂಬ ಚರ್ಚೆ ಮಾಡುವುದು ವ್ಯರ್ಥ ಕಾಲಹರಣವೆನಿಸುತ್ತದೆ. ಸಂವಿಧಾನಬದ್ಧವಾದ ಮೀಸಲಾತಿ ಜಾರಿಮಾಡಿದರೆ ಸಾಕು ಈ ದೇಶದ ಪ್ರತಿಯೊಬ್ಬನಿಗೂ ಸೂಕ್ತವಾದ ಅವಕಾಶಗಳು ದೊರೆಯುತ್ತವೆ.
ಆ ಗ್ರಂಥದಲ್ಲಿ ಹೇಳಿರುವಂತೆ ಪಾಲಿಸಿದರೆ ಸಾಕು ಎಲ್ಲಾ ಸ್ವಾತಂತ್ರಗಳು ಸಾಮಾನ್ಯ ಜನರಿಗೆ ಲಭಿಸುತ್ತವೆ ಆದರೆ ವಿಪರ್ಯಾಸವೆಂದರೆ ನಾವು ನಮ್ಮ ಸಂವಿಧಾನವನ್ನೇ ಅದರ ಆಶೆಯವನ್ನೇ ಗಾಳಿಗೆ ತೂರಿ ನಡೆಯುತ್ತಿದ್ದೇವೆ ಅದಕ್ಕಾಗಿಯೇ ಇದೀಗ ದೇಶದಲ್ಲಿ ಅನೇಕ ಕೊಲೆ, ಸುಲಿಗೆ, ಅತ್ಯಚಾರ, ಭ್ರಷ್ಠಾಚಾರ, ಅನ್ಯಾಯ, ಅಕ್ರಂಧನ, ಅನುಮಾನಗಳು ಭುಗಿಲೆದ್ದು ಕುಣಿಯುತ್ತಿವೆ ಎಲ್ಲದ್ದಕ್ಕೂ ಸಂವಿಧಾನದ ಪೂರ್ವಪೀಠಿಕೆಯಲ್ಲಿಯೇ ಉತ್ತರವಿರುವಾಗ ನಾವೆಲ್ಲ ಅತ್ತ ಇತ್ತ ಚಿತ್ತ ಹರೆಸುವುದು ಬಿಟ್ಟು ಸಂವಿಧಾನದತ್ತ ನಮ್ಮ ಚಿತ್ತ ಹರೆಸಬೇಕು ಅದರಂತೆ ಮೀಸಲಾತಿ ಜಾರಿಯಾಗಬೇಕು ಜೊತಗೆ ಮೀಸಲಾತಿಯೆಂಬುವುದು ಹೆಸರಾಗಿ ಉಳಿಯದೇ ಹಸಿರಾಗಿ ಮೂಡಿಬರಬೇಕು ಅಂದಾಗ ಮಾತ್ರ ಅದಕ್ಕೆ ಅರ್ಥಬರುತ್ತದೆ ಅಲ್ಲವೆ?
-ಕೆ.ಎಂ.ವಿಶ್ವನಾಥ ಮರತೂರ.