ಮೆದುಳಿಗೆ ವ್ಯಾಯಾಮ: ಮನುಷ್ಯನ ಮೆದುಳು ಎಷ್ಟು ಬಳಸ್ಪಡುತ್ತದೆಯೋ ಅಷ್ಟು ಚುರುಕಾಗುತ್ತದೆ. ನಾವು ಜಾಣರಾಗಲು ನಮ್ಮ ಮೆದುಳು ತುಂಬಾ ಅವಶ್ಯಕ ಅದನ್ನು ಸದಾ ಕ್ರೀಯಾಶೀಲವಾಗಿ ಇಟ್ಟುಕೊಳ್ಳಬೇಕು. ಕೆಲವು ಮೂಲಗಳ ಪ್ರಕಾರ ಮೆದುಳನ್ನು ಸರಿಯಾಗಿ ಬಳಸದೇ ಹೋದರೆ ಅದು ಜಾಡುಗಟ್ಟುವ ಸಾಧ್ಯತೆಯಿದೆ. ಓದುವಾಗ ಮೆದುಳು ಓದಿದನ್ನು ಅರ್ಥೈಸಿಕೊಳ್ಳುತ್ತಾ, ಕಲ್ಪನೆ ಮಾಡುತ್ತಾ ಹೋಗುತ್ತದೆ. ಇದರಿಂದ ಮೆದುಳಿಗೆ ಹೆಚ್ಚಿನ ಕೆಲಸ ಬೀಳುವುದರಿಂದ ಅದರ ಸಾಮರ್ಥ್ಯ ಹೆಚ್ಚಾಗುವುದು. ಇದರಿಂದ ಮೆದುಳಿಗೆ ಉತ್ತಮ ರೀತಿಯ ವ್ಯಾಯಾಮ ಉಂಟಾಗುತ್ತದೆ. ಹಲವು ಪುಸ್ತಕಗಳಲ್ಲಿ ಹೊಸ ಹೊಸ ಆಯಾಮಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಈ ಓದಿನ ಚಟುವಟಿಕೆ ಸಹಾಯಕವಾಗಿ ಕೆಲಸ ಮಾಡುತ್ತದೆ. ಸುಮ್ಮನೆ ಹರಟೆಹೊಡೆಯುವ ಬದಲು ನಿಮ್ಮ ಕೈಗೆ ಎಟಕುವ ಒಂದು ಚಿಕ್ಕ ಪುಸ್ತಕ ಕೈಗೆತ್ತಿಕೊಂಡು ಹಾಗೆ ಕಣ್ಣಾಡಿಸಿ ನಿಮ್ಮ ಮೆದುಳು ಚುರುಕಾಗಿ ಕೆಲಸ ಮಾಡುವ ಅನುಭವ ಸ್ವತ: ನೀವೆ ಪಡೆಯುತ್ತೀರಿ.
ಮನಸ್ಸಿಗೆ ತೃಪ್ತಿ: ಈ ಮನಸ್ಸನ್ನು ಹಲವರು ಕೋತಿಗೆ ಹೋಲಿಸಿದ್ದಾರೆ. ಇದು ಆಸೆ ಬುರಕವಿದೆ ಎಂದು ಹೇಳಿದ್ದಾರೆ. ಯಾವಾಗಲು ಚಂಚಲತೆಯಿಂದ ಕೂಡಿರುತ್ತದೆ. ಒಂದಲ್ಲಾ ಒಂದು ಯೋಚನೆ ಮಾಡುತ್ತಲೆಯಿರುತ್ತದೆ. ಈ ಮೆದುಳು ಮನಸ್ಸು ಮಾಡಿದರೆ ಸ್ವರ್ಗಕ್ಕೂ ಹೋಗಿ ಅಲ್ಲಿನ ಸುಖ ಪಡೆಯುತ್ತದೆ. ಇಂತಹ ಮನಸ್ಸನ್ನು ನಾವೆಲ್ಲ ಕೆಲವೊಮ್ಮೆ ಕೆಲಸಕ್ಕೆ ಬಾರದ ಚಿಂಥನೆಗಳನ್ನು ಹಚ್ಚಿ ಮನಸ್ಸನ್ನು ಕೆಡಿಸಿಕೊಳ್ಳುವ ಕೆಲಸ ಮಾಡುತ್ತೇವೆ. ಸುಮ್ಮನೆಯಿದ್ದರೆ ಏನೊ ಬಿಟ್ಟುಕೊಂಡರಲ್ಲಾ ಎನ್ನುವಂತೆ ಕೆಲಸಗಳನ್ನು ಮಾಡಿಕೊಂಡು ಮನಸ್ಸಿನ ಹತೋಟಿಯಿಲ್ಲದೆ ಒದ್ದಾಡಿರುವ ಅನೇಕ ನಿದರ್ಶನಗಳಿವೆ. ಕತೆಪುಸ್ತಕಗಳನ್ನು ಓದುತ್ತಾ ಹೋಗುವಾಗ ವಾಸ್ತವನ್ನು ಮರೆತು ಕಾಲ್ಪನಿಕ ಲೋಕದಲ್ಲಿರುತ್ತೇವೆ. ಕತೆಯಲ್ಲಿರುವ ಪಾತ್ರಗಳನ್ನು ಮನಸ್ಸು ಆನಂದಿಸುತ್ತದೆ. ಅನೇಕ ಹೊಸ ವಿಷಯಗಳ ಬಗ್ಗೆ ತಿಳಿದುಕೊಳ್ಳುತ್ತದೆ. ಇದರಿಂದ ಮನಸ್ಸಿಗೆ ತೃಪ್ತಿ ಸಿಗುತ್ತದೆ. ಕಾವ್ಯ, ನಾಟಕಗಳನ್ನು, ಪ್ರಚಲಿತ ವಿದ್ಯಮಾನಗಳ ಬಗ್ಗೆ ಓದುವಾಗ ಮನಸ್ಸು ಕೇಂದ್ರಿಕೃತವಾಗಿ ಜ್ಞಾನವೃದ್ಧಿಯಾಗುತ್ತದೆ. ನಮ್ಮ ಮನಸ್ಸಿನಿಂದ ನಮಗೆ ಯೋಚನಾಲಾಲಹರಿ ಸಿಗುತ್ತದೆ. ಅದಕ್ಕಾಗಿ ಓದಿ ನೋಡಿ.
ಕಲ್ಪನಾ ಸಾಮರ್ಥ್ಯ ಹೆಚ್ಚುತ್ತದೆ: ಓದುವಾಗ ಅದರ ಬಗ್ಗೆ ಚಿತ್ರೀಕರೆಸಿಕೊಳ್ಳುವುದರಿಂದ ಕಲ್ಪನಾ ಸಾಮರ್ಥ್ಯ ಹೆಚ್ಚಾಗುತ್ತದೆ. ಟಿವಿ ನೋಡಿದಾಗ ಅದರಲ್ಲಿರುವ ಚಿತ್ರಗಳನ್ನು ನೋಡುತ್ತಾ ಕಲ್ಪನೆಯನ್ನು ಮಾಡಿಕೊಳ್ಳುವುದಿಲ್ಲ. ಪುಸ್ತಕ ವಿಷಯವನ್ನು ಕಣ್ಣಿನ ಮೂಲಕ ನೋಡಿ ಮನಸ್ಸಿನಾಳಕ್ಕೆ ಆ ವಿಷಯವನ್ನು ಇಳಿಸುವಾಗ ನಾವು ಆ ಪುಸ್ತಕದ ವಿಷಯಗಳಲ್ಲಿ ಒಬ್ಬರಾಗುತ್ತೇವೆ. ನಮ್ಮ ಕಲ್ಪನೆ ಅದರೊಂದಿಗೆ ಬರೆತು ಅಲ್ಲಿನ ಹಲವು ಸಂತೋಷ, ದು:ಖಗಳನ್ನು ಅನುಭವಿಸುತ್ತದೆ. ನಮ್ಮೊಳಗಿನ ವಿಶೇಷವಾದ ಸಾಮಥ್ರ್ಯ ತಾನಾಗಿಯೇ ಬೆಳೆಯುತ್ತದೆ. ನಾವು ಪುಸ್ತಕದೊಂದಿಗೆ ನಮ್ಮ ಜೀವನವನ್ನು ಹೋಲಿಸಿಕೊಳ್ಳುತ್ತಾ ನಮ್ಮನ್ನು ನಾವು ಬದಲಿಸಿಕೊಳ್ಳುವತ್ತ ಗಮನಕೊಡುತ್ತೇವೆ. ಕೆಲವೊಮ್ಮೆ ಹಲವು ಪುಸ್ತಕಗಳು ಓದಿಯೇ ನಮ್ಮೊಳಗಿನ ಅದೆಷ್ಟೋ ಕೆಟ್ಟ ಚಟಗಳಿಗೆ ಬಲಿಯಾಗುವುದನ್ನು ತಪ್ಪಿಸಿಕೊಳ್ಳುತ್ತೇವೆ. ಓದಿ ನಿಮ್ಮ ಒಳಗಿನ ಸಾಮಥ್ರ್ಯ ಅರೆಯಲು ಪ್ರಯತ್ನಸಿರಿ.
ದೂರದೃಷ್ಟಿತ್ವ : ಪುಸ್ತಕ ಓದುವುದರಿಂದ ಜೀವನದದಲ್ಲಿ ಅನೇಕ ವಿಷಯಗಳ ಬಗ್ಗೆ ತಿಳಿಯಬಹುದು. ಇವು ನಿಜ ಜೀವನದಲ್ಲಿ ನಿರ್ಧಾರಗಳನ್ನು ತೆಗೆಯಲು ಸಹಾಯ ಮಾಡುತ್ತದೆ. ಹಲವು ಪುಸ್ತಕಗಳಲ್ಲಿ ದೂರದೃಷ್ಠಿಯಿದ್ದು ಅದರಲ್ಲಿನ ಮುಂದಾಲೋಚನೆ ಮಾಡಲು ಅವಕಾಶಮಾಡಿಕೊಡುತ್ತದೆ. ನಮ್ಮ ಸುತ್ತಮುತ್ತಲು ನಡೆಯುವ ಹಲವು ವಿದ್ಯಮಾನಗಳ ಬಗ್ಗೆ ಅರಿವು ನೀಡುತ್ತದೆ. ಓದಿನ ಮೂಲಕ ಪ್ರಸ್ತುತ ಸಂದರ್ಭವನ್ನು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ಪ್ರತಿಕ್ರಿಯೆ ನೀಡಲು ಈ ಪ್ರಸ್ತುತ ಓದು ಸಹಕರಿಸುತ್ತದೆ. ನಮ್ಮ ಜೀವನದಲ್ಲಿ ಏನನ್ನು ಸಾಧಿಸಬೇಕು, ಹೇಗೆ ಸಾಧಿಸಬೇಕು, ದಾರಿಗಳು ಯಾವವು ಎಂಬ ಸ್ಪಷ್ಟವಾದ ನಿಲುವು ಈ ಪುಸ್ತಕಗಳ ಓದಿನಿಂದ ದೊರೆಯುತ್ತದೆ.
ಜ್ಞಾನಾಭಿವೃದ್ಧಿ ಹೆಚ್ಚಾಗುತ್ತದೆ: ಜ್ಞಾನ ವ್ಯಕ್ತಿಗೆ ಉತ್ತಮ ವ್ಯಕ್ತಿತ್ವ ಕೊಡುತ್ತದೆ. ಉತ್ತಮವಾದ ಜ್ಞಾನ ಪಡೆಯ ಬೇಕೆಂದರೆ ಓದಬೇಕು. ಪ್ರಪಂಚದಲ್ಲಿರುವ ಜ್ಞಾನದ ಜೊತೆಗೆ ಇತಿಹಾಸ, ಭವಿಷ್ಯದ ಬ್ಗಗೆ ಜ್ಞಾನ ಹೆಚ್ಚಿಸಿಕೊಳ್ಳಲು ಈ ಓದು ನಮಗೆ ಅಣಿಮಾಡುತ್ತದೆ. ನಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವಲ್ಲಿ ಈ ಓದು ಉತ್ತಮವಾದ ಕೆಲಸ ಮಾಡುತ್ತದೆ ಅದಕ್ಕಾಗಿ ನಾವು ಓದಬೇಕು.
ವಾಗ್ಮಿಯಾಗಬಹುದಾಗಿದೆ: ಉತ್ಮವಾದ ವಾಗ್ಮಿ ಅನಿಸಿಕೊಳ್ಳಬೇಕಾದರೆ ಅವನು ತುಂಬಾ ಓದುವ ಅಭ್ಯಾಸವನ್ನು ಬೆಳೆಸಿಕೊಂಡಿರಬೇಕು. ನಾವೆಲ್ಲ ಹೆಚ್ಚು ಓದವುದರಿಂದ ಹೆಚ್ಚು ಮಾತನಾಡಲು ಸಾಧ್ಯವಾಗಿದೆ. ಒಂದು ಪುಸ್ತಕ ಓದಿದ ಬಳಿಕ ನಾವು ಆ ಪುಸ್ತಕದ ಬಗ್ಗೆ ಮಾತನಾಡಲು ನಮಗೆ ಅದರ ಸಂಪೂರ್ಣ ಜ್ಞಾನದ ಅವಶ್ಯಕತೆಯಿದೆ. ಇಂದು ಉತ್ತಮ ವಾಗ್ಮಿಗಳಾಗಿರುವವರನ್ನು ಕೇಳಿ ನೋಡಿ ಅವರು ತಮ್ಮ ಓದಿನಿಂದಲೇ ಅಷ್ಟು ಸರಿಯಾಗಿ ಮಾತನನಾಡಲು ಸಾಧ್ಯವಾಗಿದೆ ಎಂಬ ಸತ್ಯ ತಿಳಿಯುತ್ತದೆ.
ಜೀವಿಸುವ ಕಲೆ: ಅನೇಕ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ಓದಿದರೆ ಅದು ನಮಗೆ ಬದುಕಲು ಮಾರ್ಗದರ್ಶನ ನೀಡುತ್ತದೆ. ಆದ್ದರಿಂದಲೆ ಪುಸ್ತಕಗಳು ಜೀವನದ ಅತ್ಯುತ್ತವಾದ ಸಂಗತಿಗಳಾಗಿವೆ. ಜೀವನ ಎಂದರೇನು ಎಂಬುವುದು ತಿಳಿಯಲು ನಾವೆಲ್ಲ ಓದಬೇಕಾಗಿದೆ. ಬದುಕು ಹೇಗೆ ಸಾಗಿಸಬೇಕು? ಬದುಕಿನ ಸತ್ಯ ಅಸತ್ಯವೇನು? ಬದುಕು ಸಾಹಿಸುವ ರೀತಿ ಹೇಗೆ? ಇತ್ಯಾದಿ ಪ್ರಶ್ನೆಗಳಿಗೆ ಓದು ಸಮಂಜಸವಾದ ಉತ್ತರವನ್ನು ಕೊಡುತ್ತದೆ.
ಸಂಸ್ಕೃತಿ: ಪುಸ್ತಕ ಓದುವುದರಿಂದ ತರ ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳಬಹುದು. ಟಿವಿಯಲ್ಲಿ ಅಥವಾ ನೆಟ್ ನಲ್ಲಿ ನಡಿದರೆ ತುಂಬಾ ಕಾಲ ತಲೆಯಲ್ಲಿ ಉಳಿಯುವುದಿಲ್ಲ. ಆದರೆ ಓದಿದರೆ ಅದು ಮರೆಯುವುದು ತುಂಬಾ ವಿರಳ. ಇದರಿಂದ ಜ್ಞಾಪಕ ಶಕ್ತಿ ಹೆಚ್ಚಾಗುವುದು. ನಮ್ಮ ಸಂಸ್ಕøತಿಯು ಉಳಿದು ಬೆಳೆಯುತ್ತದೆ.
ಓದಿನ ಓದು ಮೇದು ಕಬ್ಬಿನ ಸಿಪ್ಪೆ ಓದಿನ ಒಡಲನರಿದಿಹಡೆ ಓದು ಸಿಪ್ಪೆ ತಾ ಕಬ್ಬಾದಂತೆ ಸರ್ವಜ್ಞ ಎಂಬ ಮಾತನ್ನು ಇತಿಹಾಸ ಕಾಲದಿಂದಲು ಹಿರಿಯರು ಈ ಓದಿನ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಇನ್ನು ನಾವೇನು ಹೇಳಲು ಸಾಧ್ಯವಿಲ್ಲ. ನಮ್ಮ ದೇಶದ ವ್ಯಕ್ತಿಗಳೆಲ್ಲ ಓದುವುದರಿಂದಾಗುವ ಲಾಭದ ಪರಿಣಾಮವು ನಮ್ಮ ಕಣ್ಣ ಮುಂದೆಯಿದೆ. ನಾವೆಲ್ಲ ಸಧ್ಯ ಓದಬೇಕು ಓದಬೇಕು ಓದಿ ಜಯಿಸಬೇಕು ಅಷ್ಟೆ ಅಲ್ಲವಾ?
-ಕೆ.ಎಂ.ವಿಶ್ವನಾಥ ಮರತೂರ.