ಭಾರತದಲ್ಲಿ ಒಂದು ಕ್ಷಣ ಸಿಡಿಲು ಮಿಂಡು ಬಂದು ತನ್ನ ಝಳಪನ್ನು ಪ್ರಜೆಗಳ ಕಣ್ಣಿಗೆ ಹಾಕಿ ಮರೆಯಾದಂತಹ ಅನುಭವ ಸಧ್ಯ ಮೋದಿ ಸರಕಾರ ಮಾಡುತ್ತಿದೆ. ಅಧಿಕಾರ ಹಿಡಿಯುವಾಗ ಇದ್ದ ಉತ್ಸಾಹ ಇದೀಗ ಬಹುತೇಕ ಕಡಿಮೆಯಾಗಿದೆ. ಅಧಿಕಾರ ಹಿಡಿಯುವಾಗ ಇದ್ದ ಸಿಟ್ಟು ಶಕ್ತಿ ಯಕ್ತಿ ಎಲ್ಲವು ಮೌನವಾಗಿಯೇ ಭಾರತೀಯರನ್ನ ಮನಸ್ಸಿನ ಮೇಲೆ ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂಬ ನಿಲುವನ್ನು ಮೂಡಿಸುತ್ತಿದೆ. ಮೇರೆ ಪ್ಯಾರೆ ದೇಸ ವಾಸಿಯೋ ಹಮ್ ಇಸ್ ದೇಶಕೊ ಐಸಾ ಬನಾಯೇಂಗೆ ಕಿ ದುನಿಯಾ ದೇಖತೆ ಹರೆಗಾ ಎಂದಿದ್ದ ಪ್ರಧಾನಿ ಇವತ್ತಿನ ಹಲವು ಮನ್ ಕಿ ಬಾತ್ ನಲ್ಲಿ ಜೋಶ್ ಕಳೆದುಕೊಂಡು ಮಾತನಾಡುತ್ತಿರುವುದು ಕಾಣಬರುತ್ತಿದೆ. ರಾಜಕೀಯವೆಂಬ ದಾಳದೊಳಗೆ ಸಿಕ್ಕ ಮೀನು ಯಾವುದನ್ನು ಆರಿಸಿಕೊಳ್ಳಲಿ ಯಾವುದನ್ನು ಬಿಡಲಿ, ಹೇಗೆ ಇರಲಿ ಎಂಬ ಮೋದಿಯೆಂಬ ಮೋಡಿಗಾರನಲ್ಲಿ ಮೂಡಿದ್ದು ಅಕ್ಷರಸಹ ಸತ್ಯವಾಗಿದೆ.
ಮೋದಿ ತನ್ನ ರಾಜಕೀಯ ಅನುಭವದಲ್ಲಿ ಹಲವು ಅತ್ಯುತ್ತಮವಾದ ಪ್ರಜಾಪರವಾದ ಯೋಜನೆಗಳು ಜಾರಿಗೆ ತಂದಿದ್ದಾರೆ. ಗುಗರಾತಿನಲ್ಲಿ ಹಲವು ಮಾದರಿಗಳನ್ನು ನಾವು ಕಾಣಬಹುದಾಗಿದೆ. ಅಲ್ಲಿ ಅವರು ಮುಖ್ಯಮಂತ್ರಿಯಾಗಿ ಮಾಡಿದ್ದನ್ನು ಇಲ್ಲಿ ಒಬ್ಬ ಪ್ರಧಾನಿಯಾಗಿ ಮಾಡಿದರೆ ದೇಶದ ಒಂದಿಷ್ಟು ಅಭಿವೃದ್ಧಿಯಾಗಲಿದೆ. ವಿಪರ್ಯಾಸವೆಂದರೆ ಇದನ್ನು ಬಿಟ್ಟು ಮೋದಿ ಸಾಹೇಬರು ಅದೇಕೊ ದೇಶ ಸುತ್ತುವ ಕೆಲಸಲದಲ್ಲಿ ತುಂಬಾ ಬಿಜಿಯಾಗಿ ದೇಶದ ಹಲವು ಕೆಲಸಗಳು ನೆನೆಗುದಿಗೆ ಬಿದ್ದಿವೆ ಎನಿಸುತ್ತದೆ.
ಗುಜರಾತ್ ಕೃಷಿ ಕ್ಷೇತ್ರದ ಸಾಧನೆಗೆ ಕಾರಣವಾದ ಮೋದಿ ಆ ರಾಜ್ಯದ ಇದೀಗ ಪ್ರಗತಿ ಪಥದತ್ತ ಸಾಗುತ್ತಿದೆ. ಅಲ್ಲಿ ಹಲವು ಮಾದಿರಿಗಳು ನಮ್ಮ ದೇಶಕ್ಕೆ ಅವಶ್ಯಕತೆಯಿದೆ. ಅವುಗಳಲ್ಲಿ ಪ್ರಮುಖವಾದವನ್ನು ಇಲ್ಲಿ ಗಮನಿಸಬಹುದಾಗಿದೆ. 2000 ಇಸವಿಯವರೆಗೂ ಇದ್ದ ಚೆಕ್ಡ್ಯಾಂ ಗಳ ಸಂಖ್ಯೆ ಸರಿಸುಮಾರು 11000. ತನ್ನ ಅಧಿಕಾರವದಿಯಲ್ಲಿ ಅಂದರೆ 2002 ರಿಂದ 2008 ರವರೆಗೆ 1 ಲಕ್ಷದ 2 ಸಾವಿರ ಹೊಸ ಚೆಕ್ ಡ್ಯಾಂಗಳನ್ನು ನಿರ್ಮಿಸಿದ್ದರು ಇದರಿಂದ ಅನೇಕ ರೈತರು ನೀರಿನ ದಾಹವನ್ನು ನೀಗಿಸಿಕೊಂಡಿದ್ದರು.
ಗುಜರಾತಿನಲ್ಲಿಯ ಹಲವು ಕೆರೆಗಳ ಹೂಳೆತ್ತುವಿಕೆ ಮಾಡಿದ್ದಾರೆ. ಈ ಯೋಜನೆಯಡಿ ಸಾವಿರಾರು ಕೆರೆಗಳ ಹೂಳನ್ನು ತೆಗೆಸಲಾಗಿದೆ. ಪರಿಣಾಮ ಅಂತಹ ಕೆರೆಗಳಲ್ಲಿ ಸಂಗ್ರಹವಾಗುತಿದ್ದ ನೀರಿನ ಪ್ರಮಾಣ ದುಪ್ಪಟ್ಟಾಗಿದೆ. ಅದಲ್ಲದೇ ಲಕ್ಷಾಂತರ ಕೆರೆಗಳ ಜೊತೆಗೆ ಸರ್ಕಾರವು ಸರಿ ಸುಮಾರು 2.40 ಲಕ್ಷ ಕೃಷಿ ಹೊಂಡಗಳನ್ನು ನಿರ್ಮಿಸಿದೆ. ಆ ಮೂಲಕ ಮಳೆ ನೀರನ್ನು ಸಂಗ್ರಹಿಸಲಾಗುತ್ತದೆ. ಈ ಮಳೆ ನೀರನ್ನೆ ಹಲವು ಕೆಲಸಗಳಿಗಾಗಿ ಇಡಿ ವರ್ಷ ಬಳಲಾಗುತ್ತಿದೆ. ಗುಜರಾತಿನ ಬಹುತೇಕ ಅಭಿವೃದ್ಧಿ ಈ ಕೆರೆಗಳಿಂದಲೇ ಸಾಧ್ಯವಾಗಿದೆ ಎನ್ನುತ್ತಾರೆ ಅಲ್ಲಿನ ರೈತಾಪಿ ಪ್ರಜೆಗಳು.
ಮೋದಿಯವರ ಹಲವು ಕನಸುಗಳಲ್ಲಿ ಹನಿ ನೀರಾವರಿ ಮಹತ್ವದ ಸ್ಥಾನ ಪಡೆಯುತ್ತದೆ. ನೀರಿನ ಉಳಿಕೆಯಲ್ಲಿ ಮತ್ತು ಬಳಸುವುದರಲ್ಲಿ ಗುಜರಾತ್ ಹನಿ ನೀರಾವರಿ ಪದ್ದತಿ ಮುಖಾಂತರ ದಾಖಲೆ ನಿರ್ಮಿಸಿದೆ. ಅದರ ಕಾರ್ಯವೈಕರಿ ಗಮನಿಸಿ. ಹೊಲ ಗದ್ದೆಗಳಿಗೆ ಒಟ್ಟಿಗೆ ನೀರನ್ನು ಹರೆಸುವುದರಿಂದ ರಭಸವಾಗಿ ಹರಿದು ಹೋಗುತ್ತದೆ. ಇದರಿಂದ ಬೆಳೆಗಾಗಲಿ, ಭೂಮಿಗಾಗಲಿ ಹೆಚ್ಚು ಉಪಯೋಗವಾಗುವುದಿಲ್ಲ. ಈ ಕಲ್ಪನೆಯಲ್ಲಿ ಹುಟ್ಟಿದ್ದೇ ಹನಿನೀರಾವರಿ ಪದ್ದತಿ.
ಇಲ್ಲಿ ಕೆಲಸ ಮಾಡಿದ್ದು ಮೋದಿಯ ದೂರದೃಷ್ಟಿತ್ವ. ಮೋದಿಯವರು 2011 ರಲ್ಲಿ 3.30 ಲಕ್ಷ ಹೆಕ್ಟೇರ್ ಭೂಮಿಗೆ ಹನಿ ನೀರಾವರಿಯನ್ನು ಜಾರಿಗೊಳಿಸಲಾಯಿತು. ಈ ಉದ್ದೇಶಕ್ಕಾಗಿಯೇ 2005 ರಲ್ಲಿ " ಗುಜರಾತ್ ಗ್ರೀನ್ ರೆವಲ್ಯೂಷನ್ ಕಂಪನಿ ಲಿ " ಎಂಬ ಸಂಸ್ಥೆಯನ್ನು 1500 ಕೋಟಿ ರೂ ವ್ಯಯಿಸಿ ಸ್ಥಾಪಿಸಿದ್ದರು. ಈಗ ದೇಶದಲ್ಲೇ ಇದು ಪ್ರಥಮ ಸ್ಥಾನವನ್ನು ಹೊಂದಿದೆ. ಈ ಸುಧಾರಣೆಯಿಂದ ಗುಜರಾತಿನಲ್ಲಿ ಕೃಷಿಯು ಶೇ 150 ರಷ್ಟು ಹೆಚ್ಚಾಗಿದೆ. ಕೃಷಿ ಮಹೋತ್ಸವ 2005 ರಿಂದ ಗುಜರಾತಿನಲ್ಲಿ ಶುರುವಾದ ಈ ಯೋಜನೆ ಬೇಸಿಗೆ ಕಾಲದಲ್ಲಿ ನಡೆಯುತ್ತದೆ.
ಈ ಉತ್ಸವದ ದಿನ ಮಣ್ಣಿನ ತಪಾಸಣೆ ಮಾಡಿ ಸೂಕ್ತ ಸಲಹೆಯನ್ನು ತಜ್ಞರ ಮುಖಾಂತರ ನೀಡಲಾಗುತ್ತದೆ. ಇದಕ್ಕಾಗಿ " ಸಾಯಿಲ್ ಕಾರ್ಡ್ " ನೀಡಲಾಗುತ್ತದೆ. ಪ್ರತಿಯೊಂದು ಹಳ್ಳಿಗಳಲ್ಲೂ ಇರುವ ಬಡ ರೈತರನ್ನು ಗುರುತಿಸಿ ಅವರಿಗೆ ಈ ಸಂದರ್ಭದಲ್ಲಿ ಉಚಿತವಾಗಿ ಬಿತ್ತನೆ ಬೀಜ, ರಸಗೊಬ್ಬರ, ಹಾಗು ಕೀಟನಾಶಕಗಳನ್ನು ಒದಗಿಸಲಾಗುತ್ತದೆ. ಜೊತೆಗೆ ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಪಡೆಯಲು ಸಲಹೆ, ಮಾರ್ಗದರ್ಶನಗಳನ್ನು ಸಹ ನೀಡಲಾಗುತ್ತದೆ. ಇಂತಹ ಉತ್ಸವಗಳನ್ನು ರಾಜ್ಯದ 18000 ಹಳ್ಳಿಗಳಲ್ಲೂ ನಡೆಸಲಾಗುತ್ತದೆ. 600ಕ್ಕಿಂತ ಹೆಚ್ಚು ಕೃಷಿ ವಿಜ್ಞಾನಿಗಳು 1 ಲಕ್ಷಕ್ಕಿಂತ ಹೆಚ್ಚು ಅಧಿಕಾರಿಗಳು ಇದರಲ್ಲಿ ಭಾಗವಹಿಸುತ್ತಾರೆ. ಅಂದರೆ 1 ತಿಂಗಳ ಕಾಲ ಇವರೆಲ್ಲರೂ ತಮ್ಮ ಕಚೇರಿ ಬಿಟ್ಟು ಹಳ್ಳಿ ಹಳ್ಳಿ ತಲುಪುತ್ತಾರೆ.
ಅಂತರ್ಜಾಲ ವೃದ್ದಿಗಾಗಿ ' ಪ್ಲಾಂಟ್ ಎ ಟ್ರೀ, ಪ್ಲಾಂಟ್ ಎ ಪ್ಲಾಂಟ್ ' ಎಂಬ ಯೋಜನೆ ಇದೆ. ಅಂದರೆ ಗಿಡ ನೆಡಿ ಮಡಕೆ ಇಡಿ. ಮಳೆಗಾಲ ಆರಂಭವಾದ ಕೂಡಲೇ ಖಾಲಿ ಇರುವ ಬಯಲು ಪ್ರದೇಶ , ಇಳಿಜಾರು ಹಾಗೂ ರಸ್ತೆಯ ಬದಿಯಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯುತ್ತದೆ. ವೃಕ್ಷಗಳ ಸಂಖ್ಯೆ ಹೆಚ್ಚಾದರೆ ಮಣ್ಣಿನ ಫಲವತ್ತತೆ ಕೊಚ್ಚಿಹೋಗದಂತೆ ತಡೆಯುತ್ತದೆ. ಇದೆಲ್ಲವೂ ಬೇರೆ ಕಡೆನೂ ನಡೆಯುತ್ತದೆ ಎನ್ನುವಿರಾ. ಇಲ್ಲೂ ಮೋದಿ ವಿಷೇಶವಿದೆ. ಅದೇನಂತಿರಾ ಮಡಕೆ ಬಳಕೆ. ಗಿಡದ ಜೊತೆಗೆ ಸ್ವಲ್ಪ ಅಂತರದಲ್ಲಿ ನೆಲ ಮಟ್ಟದಿಂದ ಮೇಲೆ ಸ್ವಲ್ಪ ಭಾಗ ಕಾಣುವಂತೆ ದೊಡ್ಡ ದೊಡ್ಡ ಮಡಕೆಗಳನ್ನು ಹುಗಿಯಲಾಗುತ್ತದೆ. ಅವುಗಳಿಗೆ ಸಣ್ಣ ಸಣ್ಣ ರಂದ್ರಗಳನ್ನು ಸಹ ಕೊರೆದಿರುತ್ತಾರೆ. ಮಳೆ ಬಂದ ಮೇಲೆ ಮಡಕೆಗೆ ಬಂದ ನೀರು ಸಣ್ಣ ರಂದ್ರಗಳ ಮೂಲಕ ಭೂಮಿಯಲ್ಲಿ ಇಂಗುತ್ತದೆ. ಅಂತರ್ಜಾಲ ವೃದ್ದಿಯಲ್ಲೂ ಮಡಕೆ ಪಾತ್ರವಹಿಸಿದೆ. ಮಡಕೆ ಮಾಡುವವರಿಗೆ ಕೆಲಸವೂ ಸಿಕ್ಕಿದ ಹಾಗೆ ಆಯಿತಲ್ಲವೇ ?
ನದಿ ಜೋಡಣೆ ಗುಜರಾತಿನ ಜೀವ ನದಿಯಾದ ನರ್ಮದೆಯೊಂದಿಗೆ 17 ಸಣ್ಣ ಪುಟ್ಟ ನದಿಗಳೊಂದಿಗೆ ಜೋಡಿಸಲಾಗಿದೆ. ಮಳೆಗಾಲದಲ್ಲಿ ಹೆಚ್ಚುವರಿಯಾಗಿ ಹರಿಯುವ ನೀರು ಈ 17 ಸಣ್ಣ ಪುಟ್ಟ ನದಿಯ ಮುಖಾಂತರ ಬರಪೀಡಿತವೆಂದು ಕರೆಯುತಿದ್ದ 7 ಜಿಲ್ಲೆಗಳಿಗೆ ಹರಿಸಲಾಗಿದೆ. ಇದರಿಂದಾಗಿ ಈ ಬರ ಪೀಡಿತ ಜಿಲ್ಲೆಗಳಲ್ಲಿ ಈಗ ಸುಮಾರು 332 ಕಿಮೀನಷ್ಟು ಕೃಷಿ ಆವರಿಸಿದೆ. ಈ ಎಲ್ಲಾ ಯೋಜನೆಗಳಿಂದಾಗಿ ಒಟ್ಟಾರೆ ಗುಜರಾತಿನ ಕೃಷಿ ಆದಾಯ ಸರಕಾರಿ ಧಾಕಲೆಗಳ ಪ್ರಕಾರ ರಾಜ್ಯಕ್ಕೆ ಕೃಷಿಯಿಂದ ಬರುವ ಸರಾಸರಿ ಆದಾಯವು 9 ಸಾವಿರ ಕೋಟಿಯಿಂದ 96 ಸಾವಿರ ಕೋಟಿಗೆ ಏರಿಕೆ. ಹಾಲಿನ ಉತ್ಪಾದನೆಯಲ್ಲಿ ದೇಶದ ಬೆಳವಣಿಗೆ ಶೇ 5.1 ಇದ್ದರೆ ಗುಜರಾತಿನಲ್ಲಿ 7.5 ರಷ್ಟಿದೆ. ದೇಶದ ಕೃಷಿ ಬೆಳವಣಿಗೆ ಶೇ3.5 ಇದ್ದರೆ ಗುಜರಾತಿನಲ್ಲಿ ಅದು ಶೇ 9.6 ರಷ್ಟು ಇದೆಲ್ಲ ಬರಿ ಒಂದೆರೆಡು ದಿನಗಳಲ್ಲಿ ಮಾಡಿ ಮುಗಿಸುವ ಕೆಲಸವಲ್ಲದಿದ್ದರು ಮೋದಿಯವರು ಕೇಂದ್ರ ಸರಕಾರದಲ್ಲಿ ರಾಜಕೀಯವನ್ನು ಮಾಡುವುದು, ಮುಂದಿನ ಹಂತದಲ್ಲಿ ತಾವೇ ಅಧಿಕಾರ ಹಿಡಿಯಬೇಕು ಎಂಬ ಆಲೋಚನೆ ಬಿಟ್ಟು ಕೆಲಸ ಮಾಡಬೇಕು. ಒಳ್ಳೆಯ ಕೆಲಸ ಮಾಡಿದರೆ ದೇಶದ ಪ್ರಜೆಗಳು ಅಧಿಕಾರ ಕೊಟ್ಟೆ ಕೊಡುತ್ತಾರೆ. ನೀವು ಈ ಮೊದಲಿನಂತೆ ಚೀರಾಡಿ ಭಾಷಣ ಮಾಡಿ ಪ್ರಚಾರ ಮಾಡುವ ಅವಶ್ಯಕತೆಯಿರುವುದಿಲ್ಲ ಬದಲಿಗೆ ಅವರೇ ನಿಮಗೆ ಪ್ರಚಾರ ಕೊಟ್ಟು ಆರಿಸಿ ತರುತ್ತಾರೆ. ದೇಶದ ಜನರು ಜಾಣರಾಗಿದ್ದು ದೇಶಕ್ಕಾಗಿ ದುಡಿದು ಒಳ್ಳೆಯದು ಮಾಡಿದರೆ ಮಾತ್ರ ಕೈಹಿಡಿಯುತ್ತಾರೆ ಇಲ್ಲವಾದಲ್ಲಿ ಕುತ್ತಿಗೆ ಹಿಡಿದು ಅಧಿಕಾರದ ಕುರ್ಚಿಯಿಂದ ಹೊರಗೆ ತಳ್ಳುತ್ತಾರೆ ನೆನಪಿರಲಿ. ಆದಷ್ಟು ಬೇಗ ಇರವಷ್ಟರಲ್ಲಿ ಎಚ್ಚೆತ್ತುಕೊಂಡು ಕಾಂಗ್ರೆಸ್ ಸರಕಾರ ಮಾಡಿರುವ ತಪ್ಪುಗಳನ್ನು ಮಾಡಬೇಡಿ, ದೇಶದ ಜನರು ಮೆಚ್ಚುವಂತಹ ಒಟ್ಟಾರೆ ದೇಶದ ಅಭಿವೃದ್ದಿ ಕಂಡುಬರುವ ಕೃಷಿ, ಉದ್ಯೋಗ, ಕೈಗಾರಿಕೆ ಇತ್ಯದಿ ಕ್ಷೇತ್ರಗಳನ್ನು ಬಲಪಡಿಸುವ ನಿಟ್ಟಿನಲ್ಲಿ ನಿಗಾವಹಿಸಿ ಈ ದೇಶದ ಪ್ರಜೆಗಳ ಕೆಂಗಣ್ಣಿಗೆ ಗುರಿಯಾಗದೆ ಪ್ರೀತಿಯ ಕಣ್ಣು ಮನಸ್ಸುಗಳಿಗೆ ಗುರಿಯಾಗಿ ನಿಮ್ಮ ರಾಜಕೀಯ ಗುರಿಯನ್ನು ಸುಲಭವಾಗಿ ಮುಟ್ಟುತ್ತೀರಿ ಮೋದಿಜಿ.
-ಕೆ.ಎಂ.ವಿಶ್ವನಾಥ ಮರತೂರ.