ಕಳೆದ ಮುರು ನೂರು ದಿನಗಳಿಂದ ಬಾಯಿ ಬಡೆದುಕೊಳ್ಳುತ್ತಿರುವ ರೈತರ ಕೂಗು ಈ ದೇಶದಲ್ಲಿ ಕೇಳುವುದಿಲ್ಲ ಆದರೆ ಸನ್ನಿ ಲಿಯೋಲ್ ತನ್ನ ಅಶ್ಲೀಲ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸುವ ವಿಷಯ ಎಲ್ಲಾ ಕಡೆಗೆ ಹಬ್ಬುತ್ತದೆ. ಈ ದೇಶದಲ್ಲಿ ನೀರಿಲ್ಲದೆ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿರುವ ವಿಷಯ ಚರ್ಚಗೆ ಬರುವುದಿಲ್ಲ ಆದರೆ ಯಾವ ಸಿನಿಮಾ, ಯಾವ ಹೋರೋ ಎಷ್ಟು ಹಣ ಸಂಪಾದನೆ ಎಂಬ ವಿಷಯ ಮಾತ್ರ ಲಗ್ಗೆಯಿಲ್ಲದೆ ಚರ್ಚೆಯಾಗುತ್ತದೆ. ಕಳಸ ಬಂಡೂರಿನಯಂತಹ ಅಂತರರಾಜ್ಯಮಟ್ಟದ ಸಮಸ್ಯೆ ಯಾರಿಗೂ ಕಾಣುವುದಿಲ್ಲ ಆದರೆ ಸಿಯಂ ದುಬಾರಿ ವಾಚು ಪಿಯಂನ ಕೋಟಿ ಬೆಲೆಬಾಳುವ ಕೋಟು ಈ ದೇಶದಲ್ಲಿ ಚರ್ಚೆಯಾಗುತ್ತದೆ. ನೀರಿಲ್ಲದೆ ನೆಲಕಚ್ಚುವ ಗಂಭೀರ ವಿಷಯ ಚರ್ಚೆಗೆ ಬರುವುದಿಲ್ಲ ಆದರೆ ಮೋದಿಯವರು ಎಷ್ಟು ಓದಿದರು ಎಂಬ ವಿಷಯ ಚರ್ಚೆಯಾಗುತ್ತದೆ. ಈ ದೇಶದಲ್ಲಿ ಪ್ರತಿ ಸರಕಾರಗಳು ಬಂದಾಗಲು ಇಂತಹ ಊಹಾಪೋಹದಲ್ಲಿಯೆ ದಿನಗಳೆದು ಸಂಸತ್ತಿನ ಸಮಯವೆಲ್ಲ ಒಬ್ಬರಿಗೊಬ್ಬರು ಬೈದುಕೊಳ್ಳುತ್ತಾ ತಮ್ಮ ಆಡಳಿತದ ಗಾಡಿ ತಳ್ಳಿ ಬಿಡುತ್ತಾರೆಯೆ ಹೊರತು ಈ ದೇಶದ ನೈಜ ಸಮಸ್ಯೆಗಳಾದ ನೆಲ,ಜಲ,ಹಸಿವು,ನಿರೂದ್ಯೋಗ ಅಷ್ಟು ಚರ್ಚೆಯೆ ಆಗುವುದಿಲ್ಲವೆಂಬ ಆತಂಕ ಕಾಡುತ್ತಲೆಯಿರುತ್ತದೆ.
ಸದ್ಯ ಕಳಸಾ ಬಂಡೂರಿಯಂತಹ ಬಹೊದೊಡ್ಡ ಸಮಸ್ಯೆಯು ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದೆ. ನರಗುಂದ, ನವಲಗುಂದದ ರೈತರ ಬಾಳಿನಲ್ಲಿ ಬೆಂಕಿಯಿಟ್ಟ ಈ ಸಮಸ್ಯೆ ಅವರ ನೆಮ್ಮದಿ ನಿದ್ದೆ ಹಾಳು ಮಾಡಿದೆ. ರಾಜ್ಯ ರಾಜ್ಯಗಳ ಮದ್ಯೆ ವಾಜ್ಯಗಳು ಬಂದಾಗ ಯಾರು ಬಗೆಹರೆಸಬೇಕು ಎಂಬ ಗೊಂದಲ ಇದೀಗ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಎದುರಾಗಿದೆ. ಎರಡು ಪಕ್ಷಗಳು ಇದರಲ್ಲಿ ತಮ್ಮ ರಾಜಕೀಯ ಲಾಭವನ್ನು ಇಟ್ಟುಕೊಂಡಿರುವುದಂತು ಅತ್ಯಂತ ಸತ್ಯವಾಗಿದೆ. ಚುನಾವಣೆಗಳನ್ನು ಮುಂದೆಯಿಟ್ಟುಕೊಂಡು ಅಧಿಕಾರದ ಆಸೆಯಿಂದ ಇಂತಹ ಸಮಸ್ಯೆಗಳು ರಾಜಕೀಯ ದಾಳವಾಗಿಸಿಕೊಳ್ಳುವ ಲೆಕ್ಕಾಚಾರ ಎಲ್ಲಾ ಪಕ್ಷಗಳದ್ದು ಎಂಬ ಸತ್ಯ ಮುನ್ನೂರು ದಿನ ಪೂರೈಸಿದ ಕಳಸಾ ಕಿಚ್ಚಿನಿಂದ ಸ್ಪಷ್ಟವಾಗಿ ಅರ್ಥವಾಗುತ್ತದೆ. ಈ ಬೂಟಾಟಿಕೆಯ ರಾಜಕಾರಣದಿಂದಲೆ ಇಂದಿಗೂ ಈ ಸಮಸ್ಯೆ ಹಸಿಯಾಗಿಯೆ ಉಳಿದಿದೆ ಮತ್ತು ಮುಂದಿನ ಚುನಾವಣೆ ಸಮೀದವರೆಗೂ ಇರುತ್ತದೆ ಎಂಬ ಸಂಶಯ ಕಾಡುತ್ತಿದೆ.
ಈ ದೇಶದಲ್ಲಿ ಪ್ರಜಾಪ್ರಭುತ್ವ ಬಂದಿದೆ ಮಾರಕವಾಯಿತೆಯಂತೆ ಎಂಬ ಸಂಶಯ ಕಾಡಿಲಿಕ್ಕೆ ಪ್ರಾರಂಭವಾಗುತ್ತದೆ ಕಾರಣ ಈ ದೇಶದಲ್ಲಿ ಪ್ರಜಾಪ್ರಭುತ್ವದ ಪ್ರಕಾರ ನಡೆದರೆ ನೆಲವಾಗಲಿ ಜಲ ಸಮಸ್ಯೆಯಾಗಲಿ ಪರಿಹಾರವಾಗುತ್ತಿಲ. ರಾಜಕಾರಣಿಗಳ ಹೊಟ್ಟೆಯೊಳಗೆ ಹೊಕ್ಕು ನೋಡಿದರು ಅಂತ:ಕರಣ ದೇಶದ ಬಗ್ಗೆ ಅವರಿಗೆ ಇರಬೇಕಾದ ಕಾಳಜಿ ಎಲ್ಲವು ಶೂನ್ಯವೆಂದು ತೋರುತ್ತಿದೆ. ಕಳೆದ 300 ದಿನಗಳಿಂದ ಹೋರಾಟ ಮಾಡುತ್ತಿರುವ ರೈತರ ಪಾಡೆನು? ಅವರ ಮನೆಯ ಸದಸ್ಯರ ಪಾಡೆನು? ಅವರು ಈ ದೇಶದ ಪ್ರಜೆಗಳಲ್ಲವೆ? ಅವರ ಸಮಸ್ಯೆನ್ನು ಆಲಿಸಬೇಕಾದದ್ದು ಪ್ರಜಾಪ್ರಭುಗಳ ಕರ್ತವ್ಯವಲ್ಲವೆ? ಇಲ್ಲಿಯೂ ರಾಜಕೀಯ ಮಾಡುವ ಜನಪ್ರತಿನಿಧಿಗಳು ನಮಗೆ ಬೇಕೆ? ಎಂಬ ಪ್ರಶ್ನೆ ಕಾಡುತ್ತದೆ.
ಈ ದೇಶದ ರಾಜಕಾರಣಿಗಳು ಇನ್ನಾದರು ತಮ್ಮ ಪೊಳ್ಳು ರಾಜಕೀಯ ಬಿಟ್ಟು ಸಣ್ಣ ಪುಟ್ಟ ವಿಷಯಗಳನ್ನು ಬದಿಗೊತ್ತಿ, ಈ ದೇಶದ ಬಹುಮುಖ್ಯ ಸಮಸ್ಯೆಗಳಾದ ನೆಲ, ನೀರು, ಹಸಿವು, ನಿರೂದ್ಯೋಗದ ಬಗ್ಗೆ ಕಣ್ಣು ಹಾಯಿಸಿ ಕಳಸಾ ಕಿಚ್ಚನ್ನು ಅತ್ಯಂತ ಸೌಹಾರ್ದೆತೆಯಿಂದ ಬಗೆಹರಿಸಿ ಈ ನರಗುಂದ, ನವಲಗುಂದದ ರೈತರಿಗೆ ನ್ಯಾಯ ಕೊಡಿಸಿ. ರಾಜಕೀಯದವರು ಈ ಕೆಲಸ ಮಾಡದೆ ಹೋದಲ್ಲಿ ಸಂಪೂರ್ಣವಾಗಿ ಸುಪ್ರೀಂಕೋರ್ಟ್ ಆದರು ಕಾಳಜಿ ವಹಿಸಿ ಸರಿತಪ್ಪು ಬಗೆಹರೆಸಲಿ. ರೈತ ಯಾವ ರಾಜ್ಯದವರಾದರು ಸಮಸ್ಯೆ ಒಂದೆ ಎಲ್ಲಾ ರೈತರ ಬಾಳಿನಲ್ಲಿ ಸುಖ ನೆಮ್ಮದಿ ಸಿಗಬೇಕು ಅಂತಹ ನ್ಯಾಯವನ್ನು ಮೂರು ರಾಜ್ಯಗಳ ಮಧ್ಯೆ ಅಥವಾ ಎರಡು ರಾಜ್ಯಗಳ ಮಧ್ಯೆ ಏರ್ಪಡಿಸಲಿ ರೈತ ಎನ್ನುವ ಈ ದೇಶದ ಬೆನ್ನೆಲುಬನ್ನು ಉಳಿಸಲಿ ಎಂಬ ಆಶೆಯ ನನ್ನದು.
ಕೊನೆಯ ತುತ್ತು: “ನಾವೆಲ್ಲ ಇಂದು ಗೃಹಗಳನ್ನು ಶೋಧಿಸಿ ಅಲ್ಲಿ ವಾಸ ಮಾಡುವ ತಂತ್ರಜ್ಞಾನ ಕಂಡು ಹಿಡಿದಿರಬಹುದು ಆದರೆ ಆ ಗೃಹಗಳಲ್ಲಿಯು ಅನ್ನ ಬೇಳೆ ರೊಟ್ಟಿಯೆ ತಿನ್ನಬೇಕು. ರೈತನಿಲ್ಲದ, ಕೃಷಿಯಿಲ್ಲದ ದೇಶ ಊಹಿಸಲು ಸಾಧ್ಯವಿಲ್ಲ ಅದಕ್ಕಾಗಿ ಈ ದೇಶದ ರೈತರ ಸಮಸ್ಯೆಗಳನ್ನು ಬಗೆಹರೆಸಬೇಕು. ರೈತ ನಿಶ್ಚಿಂತೆಯಾಗಿ ನೆಮ್ಮದಿಯ ಉಸಿರು ಬಿಡಬೇಕು ಆಗಮಾತ್ರ ಇಡಿ ದೇಶ ನೆಮ್ಮದಿಯಿಂದ ಆಮ್ಲಜನಕ ತೆಗೆದುಕೊಂಡು ಇಂಗಾಲದ ಡೈಆಕ್ಸ್ ಸೈಡ್ ಹೊರಬಿಡುವಂತಾಗುತ್ತದೆ”