ನಾನು ವಯಕ್ತಿಕವಾಗಿ ಬೈರಪ್ಪನವರ ಒಟ್ಟು ಕಾದಂಬರಿಗಳನ್ನು ಓದಿರುವ ಆಶೆಯವನ್ನು ಗಮನಿಸಿದ್ದರಿಂದ ಅವರ ಕಾದಂಬರಿ ಮತ್ತು ಕಥಾಶಕ್ತಿಗೆ ಜ್ಞಾನಪೀಠವಲ್ಲಾ ಅದಕ್ಕಿಂತ ದೊಡ್ಡ ಪ್ರಶಸ್ತಿಯೆ ಕೊಡಬಹುದು ಆದರೆ ಎಲ್ಲಾ ಕಾದಂಬರಿಗಳ ಆಶೆಯವನ್ನು ಮನಗಾಣುವುದಾದರೆ, ಅಲ್ಲಿನ ಸಾಮಾಜಿಕ ಕಳಕಳಿ ಕೆಳಸ್ಥರದವರ ಬಗ್ಗೆ ಮಹಿಳೆಯರ ಬಗ್ಗೆ ಅವರಿಗಿರುವ ನಿಲುವು ಮತ್ತು ಅವರ ಕಾದಂಬರಿಗಳು ಕಟ್ಟಿಕೊಡುವ ಸಾಮಾಜಿಕ ವಿಡಂಬನೆ ಇನ್ನು ಜೀವಂತವಿರುವ ಮೇಲುಕೀಳನ ಭಾವನೆ ಎಲ್ಲವು ಬಡವರ ಮೇಲೆ ಅವರು ಮಾಡಿರುವ ಅಕ್ಷರ ದೌರ್ಜನ್ಯ ಖಂಡಿಸಲೇಬೇಕು. ಹೀಗಾಗಿ ಜ್ಞಾನಪೀಠದ ಆಶೆಯದಂತೆ ಸಮಗ್ರ ಸಾಹಿತ್ಯವನ್ನು ಪರಿಗಣಿಸಿ ನೀಡುವುದು ಆದರೆ ಸರಸ್ವತಿಯಂತಹ ಪ್ರಶಸ್ತಿಗೂ ಜ್ಞಾನಪೀಠಕ್ಕೂ ತುಂಬಾ ವ್ಯತ್ಯಾಸ ಕಾಣಬಹುದಾಗಿದೆ. ಕರ್ನಾಟಕದ ಜ್ಞಾನಪೀಠ ಪಡೆದ ಇಲ್ಲಿಯವರೆಗಿನ ಸಾಹಿತಿಗಳಿಗೂ ಬೈರಪ್ಪನವರಿಗೂ ತುಂಬಾ ವ್ಯತ್ಯಾಸಗಳನ್ನು ಕಾಣಬಹುದಾಗಿದೆ. ಅಂದಿನ ಕುವೆಂಪುವಿನಿಂದ ಇಂದಿನ ಕಂಬಾರರವರೆಗೆ ಕೆಲವರನ್ನು ಹೊರತುಪಡಿಸಿದರೆ ಉಳಿದವರೆಲ್ಲರೂ ಸಾಹಿತ್ಯಕವಾಗಿ ರಾಜಕೀಯದಿಂದ ದೂರವಿದ್ದು ಸಾಮಾಜಿಕ ಬದಲಾವಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ವ್ಯಕ್ತಿಗಳು. ಈ ನಾಡಿನ ಬಹುದೊಡ್ಡ ಸಾಹಿತ್ಯ ಶಕ್ತಿಗಳಾಗಿದ್ದರು. ಎಂಟು ಜನರಲ್ಲಿ ಕೆಲವರು ಕಾಂಗ್ರೆಸ್ ಬೆಂಬಲಿತರು ಎಂಬುವುದನ್ನು ಒಪ್ಪಿಕೊಳ್ಳುತ್ತಲೆ ಇನ್ನುಳಿದವರನ್ನು ಇದೇ ಸಾಲಿಗೆ ಸೇರಿಸುವುದು ಅಷ್ಟು ಸಮಂಜವೆನಿಸುವುದಿಲ್ಲ.
ಸಾಹಿತಿಯಾದವನು ಸಾಮಾಜದ ಏಳ್ಗೆಯನ್ನು ಬಯಸಬೇಕು ಒಂದು ಸಮುದಾಯವನ್ನು ತುಚ್ಚಿಕರಿಸುವುದು ಇನ್ನೊಂದು ಸಮುದಾಯವನ್ನು ಮೇಲೆತ್ತಿಕಟ್ಟುವ ಕೆಲಸ ಮಾಡಬಾರದು ಬೈರಪ್ಪನವರ ಬಹುತೇಕ ಕಾದಂಬರಿಗಳನ್ನು ಮೇಲುಕೀಳಿನ ತಾರತಮ್ಯದ ಬದುಕನ್ನು ಬಿಂಬಿಸುತ್ತಾ ಹೋಗುತ್ತವೆ. ಅವುಗಳ ಒಳಾರ್ಥ ಎಲ್ಲಿಯೊ ಒಂದುಕಡೆ ತಾನು ಮನುಧರ್ಮ ಪರಿಪಾಲಕ ಎಂಬುವುದನ್ನು ಪದೇ ಪದೇ ತನ್ನ ಅಕ್ಷರಗಳ ಮೂಲಕ ಹೇಳುತ್ತಾ ಈ ಸಾಮಾಜಿಕ ಸ್ವಾತ್ಯ ಹಾಳುಮಾಡುತ್ತ ಸಂಪ್ರದಾಯದ ಸಂಕೊಲೆಯೊಳಗೆ ಬಡವರ ಬದುಕನ್ನು ನೂಕುವಂತಹ ಒತ್ತಾಯ ಮಾಡುತ್ತವೆ. ಈ ಕಾರಣಗಳಿಂದ ಬೈರಪ್ಪನವರು ಚರ್ಚೆಗೊಳಗಾಗಿದ್ದಾರೆ.
ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೆ ಅನುಚ್ಛೇದದಲ್ಲಿ ಉಲ್ಲೇಖಿವಾಗಿರುವ ಭಾಷೆಗಳಲ್ಲಿ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ 22, 1961ರಲ್ಲಿ ಸ್ಥಾಪಿಸಿದರು. ಈ ಪ್ರಶಸ್ತಿಯನ್ನು ಪ್ರಪ್ರಥಮವಾಗಿ 1965ರಲ್ಲಿ ಮಲೆಯಾಳಂ ಲೇಖಕ ಜಿ.ಶಂಕರ ಕುರುಪರಿಗೆ ಪ್ರದಾನ ಮಾಡಲಾಯಿತು. ವಿಜೇತರಿಗೆ ಪ್ರಶಸ್ತಿ ಫಲಕ 11 ಲಕ್ಷ ರೂಪಾಯಿ ಚೆಕ್ ಹಾಗೂ ವಾಗ್ದೇವಿಯ ಕಂಚಿನ ವಿಗ್ರಹವನ್ನು ನೀಡಿ ಗೌರವಿಸಲಾಗುತ್ತದೆ. ಈ ಪ್ರಶಸ್ತಿಯನ್ನು ಭಾರತ ಸರಕಾರ ನೀಡುತ್ತದೆ ಎಂಬ ಕಲ್ಪನೆಯೂ ಹಲವರಲ್ಲಿದೆ. ಅದು ಒಂದು ಹಂತಕ್ಕೆ ಸತ್ಯವು ಹೌದು ಸುಳ್ಳು ಕೂಡಾ ಹೌದು. ಜ್ಞಾನಪೀಠ ಟ್ರಸ್ಟ ಸ್ಥಾಪಕರು ಈಗಲೂ ಅದರ ಸದಸ್ಯರು ಇದ್ದಾರೆ. ಈವರೆಗೆ ಹಿಂದಿ ಸಾಹಿತಿಗಳು ಒಂಬತ್ತು ಪ್ರಶಸ್ತಿಗಳನ್ನು ಪಡೆದು ಅತಿಹೆಚ್ಚು ಪ್ರಶಸ್ತಿ ಪಡೆದ ಭಾಷೆಯಾಗಿ ಮುಂದಿದೆ ಕನ್ನಡ ಭಾಷೆ ಎಂಟು ಪಡೆದು ಎರಡನೆಯ ಸ್ಥಾನದಲ್ಲಿದೆ. ಈ ಮೊದಲು ಒಂದು ಸಾಮಾಜಿಕ ಕೃತಿಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿತ್ತಿತ್ತು ಮುಂದೆ ಅದು ಸಮಗ್ರ ಸಾಹಿತ್ಯದತ್ತ ವಾಲುತ್ತಾ ಕೆಲವರು ಒಟ್ಟು ಸಮಗ್ರ ಸಾಹಿತ್ಯಕ್ಕೆ ಈ ಪ್ರಶಸ್ತಿ ಪಡೆದರು. ಈ ಪ್ರಶಸ್ತಿಯು ಭಾರತೀಯನಾಗಿರಬೇಕು. ತನ್ನ ಭಾಷೆಯಲ್ಲಿ ಪಾಂಡಿತ್ಯವನ್ನು ಪಡೆದಿರಬೇಕು. ಜೀವಂತವಾಗಿರಬೇಕು. ಮರು ಪ್ರಶಸ್ತಿ ನೀಡಲಾಗುವುದಿಲ್ಲ. ಇಷ್ಟು ಅರ್ಹತೆಯುಳ್ಳವರಿಗೆ ನೀಡುವ ಈ ಪ್ರಶಸ್ತಿ ಪ್ರಸ್ತುತದಲ್ಲಿ ಬೈರಪ್ಪನವರಿಗೆ ನೀಡಬೇಕೊ ಬೇಡೊ ಎಂಬ ಚರ್ಚೆ ಪ್ರಸ್ತುತವಾಗಿ ನಡೆಯುತ್ತಿದೆ.
ಕರ್ನಾಟಕದ ಮಟ್ಟಿಗೆ ಮಾತನಾಡುವುದಾದರೆ, ಇಲ್ಲಿ ಸಾಹಿತ್ಯವಷ್ಟೆ ಅಲ್ಲದೆ ಹಲವಾರು ಪ್ರಶಸ್ತಿಗಳಿಗೆ ಹಲವು ಬಗೆಯ ಚರ್ಚೆಗಳಿವೆ. ಇನ್ನು ಕೇಂದ್ರದಲ್ಲಿ ಬಿಜೆಪಿ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿರುವುದರಿಂದ ಬಹುತೇಕ ವಾದ ವಿವಾದಗಳು ಹುಟ್ಟಿಕೊಳ್ಳುವುದರಲ್ಲಿ ಸಂಶಯವಿಲ್ಲ. ಬೈರಪ್ಪನವರ ಒಟ್ಟು ಕಾದಂಬರಿಗಳ ವಿಮರ್ಷೆಯನ್ನು ಇಲ್ಲಿಯವರೆಗಿನ ಅನೇಕ ಪ್ರಗತಿಪರರು ಮಾಡಿದ್ದಾರೆ. ಅವರ ವಿಮರ್ಷೆಯ ಒಟ್ಟು ಸಾರಾಂಶವನ್ನು ಗಮನಿಸಿದಾಗ ಬೈರಪ್ಪನವರ ಸಾಹಿತ್ಯ ಹೆಚ್ಚು ಜನಪ್ರಿಯವಾಗಲು ಮೂಲಕಾರಣವೇನು ಎಂದು ಕಟ್ಟಿಕೊಡುತ್ತಾರೆ. ಅವರ ಸಾಹಿತ್ಯದ ಒಲವು ಮತ್ತು ಆಶೆಯಗಳು ಇಲ್ಲಿಯವರೆಗಿನ ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತ್ಯಕ್ಕಿಂತ ವಿಭಿನ್ನವಿದೆ ಆದರೆ ಕುವೆಂಪು ಆದಿಯಾಗಿ ಒಟ್ಟು ಸಾಹಿತ್ಯದ ಒಲವು ಮತ್ತು ಆಶೆಯವನ್ನು ಗಮನಿಸಿದಾಗ ಬೈರಪ್ಪನವರ ಸಾಹಿತ್ಯ ಬೇರೆಯೆ ಅರ್ಥಕೊಡುತ್ತದೆ. ಸಾಹಿತ್ಯ ಸರ್ವಧರ್ಮ ಸಮಾನತ್ವ ಸಾಧಿಸಿಸುವ, ಸರ್ವಜನ ಶಾಂತಿಯ ತೋಟ ನಿರ್ಮಾಣದಲ್ಲಿ ತೊಂದರೆಗಳನ್ನು ತಂದೊಡ್ಡುತ್ತದೆ. ಈ ಕಾರಣದಿಂದ ಬೈರಪ್ಪನವರ ಸಾಹಿತ್ಯಕ್ಕೂ ಜ್ಞಾನಪೀಠಕ್ಕೂ ಹಲವು ವ್ಯತ್ಯಾಸಗಳನ್ನು ಕಾಣಬಹುದಾಗಿದೆ. ಈ ಬಾರಿಯ ಜ್ಞಾನಪೀಠ ಕೊಡಮಾಡುವವರು ಯಾವುದನ್ನು ಮಾನದಂಡವಾಗಿ ಮಾಡಿ ಬೈರಪ್ಪನವರ ಹೆಸರು ಉಲ್ಲೇಖಿಸಲಾಗಿದೆಯೊ ಅಥವಾ ಸಾಮಾಜಿಕ ಜಾಲತಾಣಗಳ ಉಹಾಪೋಹವೊ ಇಲ್ಲವೆ ಬೈರಪ್ಪನವರ ನೈಜ ಬೆಂಬಲಿತರ ಆಸೆಯೊ ಕಾಲವೆ ನಿರ್ಧರಿಸಲಿದೆ. ಯಾವುದಕ್ಕೂ ಜ್ಞಾನಪೀಠಕ್ಕಿರುವ ಮೆರಗು ಕಡಿಮೆಯಾಗಬಾರದೆಂಬುವುದೆ ಕನ್ನಡಿಗರ ಆಶೆಯ.