ಆತ್ಮಹತ್ಯೆಯಿಂದ ನಾವೆಲ್ಲ ಕಣ್ಣು ಮುಚ್ಚುತ್ತೇವೆ, ಇದರ ಹಿಂದೆ ನಾವು ಬಿಟ್ಟು ಹೋದ ಸಮಸ್ಯೆಗಳು ಬದುಕಿದವರ ಪಾಲಿಗೆ ಜೀವಂತ ಉರುಳುಲಾಗಲಿವೆ ಎಂಬುವುದು ಮರೆಯುತ್ತೇವೆ. ಈ ರಾಜ್ಯದಲ್ಲಿ ಮೊದಲು ರೈತರಿಂದ ಪ್ರಾರಂಭವಾದ ಈ ಆತ್ಮಹತ್ಯೆಗಳು ಇದೀಗ ಅಧಿಕಾರಿಗಳು ಮತ್ತು ವಿಧ್ಯಾರ್ಥಿಗಳನ್ನು ಹರಡಿಕೊಂಡಿದೆ. ಈ ಆತ್ಮಹತ್ಯೆಗಳಿಗೆ ಸಾಮಾನ್ಯವಾದ ಕಾರಣಗಳನ್ನು ಪಟ್ಟಿ ಮಾಡಿದರೆ ಸ್ವಾಭಿಮಾನ, ಅವಮಾನ, ಅಪಮಾನ, ಸಾಲಭಾದೆ, ಅವಹೇಳನ, ಮನನೊಂದು ಈ ಕಾರಣಗಳೆಲ್ಲ ಮನುಷ್ಯನ ವಯಕ್ತಿಕವಾಗಿ ಆತನ ಅಂತರಾತ್ಮದೊಳಗಿರುವ ವಿಷಯಗಳು ಬದುಕಿನಲ್ಲಿ ಇಂತಹ ಹಲವು ವಿಷಯಗಳು ಕೋಲಾಹಲ ಎಬ್ಬಿಸುತ್ತವೆ. ಇವೆಲ್ಲವು ಮನುಷ್ಯನಿಗೆ ಬಾಹ್ಯಾ ಸಮಾಜ ಪ್ರೇರೆಪಿಸುವ ಸಂದರ್ಭಗಳಲ್ಲಿ ಮನಸ್ಸು ದುರ್ಬಲಗೊಂಡು ಆತ್ಮಹತ್ಯೆಯಂತಹ ಕೆಲಸಕ್ಕೆ ಕೈಹಾಕುತ್ತೇವೆ. ಮನಸ್ಸು ನಿಯಂತ್ರಿಸುವ ವಿದ್ಯೆ ಕಲಿಯಬೇಕಾದ ಅಗತ್ಯವಿದೆ.
ಇನ್ನು ರಾಜ್ಯದಲ್ಲಿ ರೈತರು, ಅಧಿಕಾರಿಗಳು, ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡು ಸುದ್ದಿಯಾದರು ಆದರೆ ನಮ್ಮ ರಾಜಕಾರಣಿಗಳಾರು ಅದ್ಯಾಕೆ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂಬುವುದು ನನಗೆ ಕಾಡುತ್ತಿರುವ ಪ್ರಶ್ನೆ ರಾಜಕಾರಣಿಗಳನ್ನು ಆತ್ಮಹತ್ಯೆಗೆ ಪ್ರೇರೆಪಿಸುವ ಹಲವು ವಿದ್ಯಮಾನಗಳು ಪ್ರತಿದಿನ ಈ ಸಮಾಜದಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರೆದಾಡುತ್ತವೆ. ಪ್ರಜೆಗಳು ಕೂಡ ತಮ್ಮ ದಿನನಿತ್ಯದ ಮಾತುಗಳಲ್ಲಿ ಈ ಪ್ರಜಾಪ್ರತಿನಿಧಿಗಳನ್ನು ಅದೆಷ್ಟೊ ನಿಂದಿಸುತ್ತಾರೆ. ಬೈಯುತ್ತಾರೆ, ಮನನೊಯುವಂತೆ ಬರೆಯುತ್ತಾರೆ ಆದರೂ ಅವರ್ಯಾಕೆ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂಬುವುದು ಮಾತ್ರ ನಿಗೂಢವಾಗಿದೆ.
ಈ ರಾಜ್ಯಕ್ಕೆ ಸೀಮಿತವಾಗಿ ಮಾತನಾಡುವುದಾದರೆ ಕಳೆದಬಾರಿ ಆಡಳಿತ ನೀಡಿದ ಬಿಜೆಪಿಯವರು ಅದೆಷ್ಟೊ ಜನರು ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು ಎಂಬ ಲೆಕ್ಕಾಚಾರ ನೀವೆ ಹಾಕಬೇಕು. ಇಡಿ ರಾಜ್ಯದ ಜನತೆಯೆ ಛೀ ಮಾರಿ ಹಾಕಿದರು, ಅದೆಷ್ಟೊ ಜನರು ಅದೇನೊ ವಿಷಯಗಳನ್ನು ಗಮನದಲ್ಲಿಟ್ಟು ನಿಂದಿಸಿದರು, ಇದರಲ್ಲಿ ವಯಕ್ತಿಕವು ಇತ್ತು ಸಾಮೊಹಿಕವು ಇತ್ತು ಆದರೆ ಅದ್ಯವಾವುದು ಅವರ ತೆಲೆಗೆ ಹೋಗಲಿಲ್ಲ ಅವರು ಯಾರೂ ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ. ಅಧಿಕಾರದಲ್ಲಿರುವಾಗಲೆ ಜೈಲುವಾಸ ಅನುಭವಿಸಿದರು. ಅಧಿಕಾರ ಪಡೆದರು ಕಳೆದುಕೊಂಡರು. ಸದನದಲ್ಲಿ ಕೆಟ್ಟದ್ದು ನೋಡಿ ಇಡಿ ಕರ್ನಾಟಕದ ಪಾಲಿಗೆ ಕಾಮುಕರು ಎಂಬ ಪಟ್ಟ ಕಟ್ಟಿಕೊಂಡರು. ಐದು ವರ್ಷದಲ್ಲಿ ಹಲವು ಮುಖ್ಯಮಂತ್ರಿಗಳನ್ನು ನೀಡಿದರು. ಅಧಿಕಾರಕ್ಕಾಗಿ ಜಗಳ ಕಚ್ಚಾಟ ಮಾಡಿ ಪಕ್ಷ ಬದಲಿಸಿ ಹೊಸ ಪಕ್ಷ ಕಟ್ಟಿದರು ಇಡಿ ಕರ್ನಾಟಕವೆ ಒಂದುಕಡೆಯಾದರೆ ಇವರದ್ದೆ ಕಾರುಬಾರು ಎನ್ನುವಂತೆ ನಟಿಸಿದರು ಅವರು ಯಾರು ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ. ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ರಾಜಕಾರಣಿಗಳಾರು ಆತ್ಮಹತ್ಯೆ ಮಾಡಿಕೊಳ್ಳಲಿಲ್ಲವೇಕೆ ಎಂಬುವುದು ನಿಗೂಢ ಪ್ರಶ್ನೆಯಾಗಿದೆ.
ಇನ್ನು ಭಾರತದ ಮಟ್ಟಿಗೆ ಹೇಳುವುದಾದರೆ ಕಳೆಬಾರಿ ಸತತ ಹತ್ತು ವರ್ಷ ಆಡಳಿತ ನೀಡಿ ಅದೆಷ್ಟು ಅವಾಂತರಗಳನ್ನು ಸೃಷ್ಠಿಸಿ ಈ ಬಾರಿಯ ಚುನಾವಣೆಯಲ್ಲಿ ಮೂಲೆಗುಂಪಾದ ಕಾಂಗ್ರೆಸ್ನವರು ಯಾರಾದರು ಆತ್ಮಹತ್ಯೆ ಮಾಡಿಕೊಂಡರೆ. ಅವರಲ್ಲಿ ಹಲವರು ಐತಿಹಾಸಿಕ ಸೋಲು ಅನುಭವಿಸಿದರು ಸೋಲಿಲಿಲ್ಲದ ಸರದಾರ ಎನಿಸಿಕೊಂಡವರೆಲ್ಲ ಮಣ್ಣು ಮುಕ್ಕಿದರು ಅವರೇಕೆ ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ. ಮಾಜಿ ರಾಜ್ಯಸರಕಾರದ ಕೆಲವು ವಿಷಯಗಳು ಹೇಳುವುದಾದರೆ ಸಿದ್ಧರಾಮಯ್ಯನವರು ಕಟ್ಟಿದ ಗಡಿಯಾರದಿಂದ ಅವರ ತೇಜೊವಧೆ ಎಷ್ಟಾಯಿತು, ಅವರ ಕನ್ನಡಕ, ಅವರ ಚಪ್ಪಲಿ, ಅವರ ಬಟ್ಟೆ ಇತ್ಯಾದಿಗಳಿಂದ ಸಿದ್ಧರಾಮಯ್ಯ ಅವರು ನಿದ್ದೆರಾಮಯ್ಯ ಎಂಬ ಖ್ಯಾತಿಗೆ ಒಳಗಾದರು. ತಮ್ಮ ಕುರ್ಚಿಯೆ ಅಲುಗಾಡುವಷ್ಟು ಪ್ರತಿರೋಧವನ್ನು ಕಂಡ ರಾಜ್ಯ ಸರಕಾರ ಎಂದಾದರು ಆತ್ಮಹತ್ಯೆ ಮಾಡಿಕೊಂಡರೆ?
ಇನ್ನು ನಾನು ಕಂಡಂತೆ ಸಾಮಾಜಿಕ ಜಾಲತಾಣಗಳಲ್ಲಿ ರಾಜಕಾರಣಿಗಳನ್ನು ಯಾವ ಲೆವಲ್ಲಿಗೆ ಪ್ರಜಾ ಪ್ರಭುಗಳು ಅವಹೇಳನ ಮಾಡುತ್ತಾರೆಯಂದರೆ ಅದನ್ನಾರು ಊಹಿಸಲು ಸಾಧ್ಯವಿಲ್ಲ. ರಾಜ್ಯ ಹಾಗೂ ದೇಶದ ರಾಜಕಾರಣಿಗಳನ್ನು ಯಾವುದಕ್ಕೊ ಹೋಲಿಸುತ್ತಾರೆ, ಅದ್ಯಾವುಕ್ಕೋ ಕಟ್ಟಿಹಾಕುತ್ತಾರೆ, ಅದೆಷ್ಟು ವಿಚಿತ್ರ ಮೆಸೆಜ್ಗಳು ಅವಹೇಳಗಳು ಮಾಡುತ್ತಾರೆ. ಇದೆನ್ನಲ್ಲ ರಾಜಕಾರಣಿಗಳು ನೋಡುವುದಿಲ್ಲವೆಂದು ತಳ್ಳಿಹಾಕುವಂತಿಲ್ಲ ಏಕೆಂದರೆ ಇವತ್ತು ದೊಡ್ಡ ದೊಡ್ಡ ವ್ಯಕ್ತಿಗಳೆಲ್ಲ ಆಫ್ ಲೈನ್ ಗಿಂತ ಆನ್ ಲೈನ್ ಹೆಚ್ಚಿಗೆ ಜನ ಸಿಗುತ್ತಾರೆ. ಅವರೆಲ್ಲ ನೋಡಿಯು ಅದನ್ನು ತಲೆಗೆ ಹಾಕಿಕೊಳ್ಳುವುದಿಲ್ಲ. ಈ ಆತ್ಮಹತ್ಯೆ ಸಾಲಿಗೆ ನಮ್ಮ ಖ್ಯಾತ ಉದ್ಯಮಿ ವಿಜಯ್ ಮಲ್ಯ ಕೂಡ ಸೇರುತ್ತಾರೆ ಸಾಲಾ ಮಾಡಿ ವಿದೇಶ ಓಡಿ ಹೋಗಿದ್ದರು ಅದೆಷ್ಟೊ ಕೋಟಿ ಕಳೆದುಕೊಂಡು ಲಾಸ್ ಆದರೂ ಇವರಾರು ಈ ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ ಈ ದೇಶದಲ್ಲಿರುವ ಬಹುದೊಡ್ಡ ದುರಂತವೆನಿಸುತ್ತದೆ.
ಕೋಟಿ ಕೋಟಿ ಲೂಟಿ ಮಾಡುವ ಕಳ್ಳಬಾಕರೆ ರಾಜಾರೋಷವಾಗಿ ಈ ರಾಜ್ಯದಲ್ಲಿ ತಿರುಗಾಡುತ್ತಿರುವಾಗ ಒಂದು ಲಕ್ಷ ಸಾಲಾ ಮಾಡಿ ರೈತ ಸಾಯುವಂತಹ ಸ್ಥಿತಿಗತಿ ನಮ್ಮ ರಾಜ್ಯದ್ದು. ಇಡಿ ದೇಶವೆ ಮಾರಿ ಹೋಗುವ ಹುನ್ನಾರ ಹೊತ್ತು ರಾಜರಾಗಿ ತಿರುಗುತ್ತಿರುವ ರಾಜಕಾರಣಿಗಳು ಸುಮ್ಮನಿರಬೇಕಾದರೆ ಸರಕಾರಿ ಅಧಿಕಾರಿಗಳೇಕೆ ಭಯಪಡಬೇಕು ಸತ್ಯವಾಗಿದ್ದರೆ ಹೋರಾಡಬೇಕು ಜನರೊಂದಿಗೆ ಹಂಚಿಕೊಳ್ಳಬೇಕು, ಪ್ರಮಾಣಿಕವಾಗಿ ಕೆಲಸ ಮಾಡುವ ನೀವೆಲ್ಲ ಯಾರಿಗೂ ಹೆದರುವ ಅವಶ್ಯಕತೆಯಿಲ್ಲವೆಂಬುವುದು ಯಾಕೆ ನಮ್ಮ ಜನರು ಅರ್ಥಮಾಡಿಕೊಳ್ಳುತ್ತಿಲ್ಲ. ವಿಧ್ಯಾರ್ಥಿ ಜೀವನವೇನೊ ಅರ್ಥಮಾಡಿಕೊಳ್ಳುವುದು ಕಷ್ಟವೆಂದು ತಳ್ಳಿಹಾಕಬಹುದು ಆದರೆ ಪ್ರಬುದ್ಧರಾದವರಾರು ಆತ್ಯಹತ್ಯೆಯನ್ನು ಮಾಡಿಕೊಳ್ಳಬಾರದು ಎಂಬುವುದಷ್ಟೆ ನನ್ನ ಅಭಿಪ್ರಾಯ. ರಾಜಕಾರಣಿಗಳಿಂದ ಕಿರುಕುಳವಿದೆಯೆ ಹಾಗಿದ್ದರೆ ಸರಕಾರದ ಕಾನೂನಿನಲ್ಲಿ ಅದಕ್ಕೆ ಅವಕಾಶಗಳಿವೆ ಅದನ್ನು ಬಳಸಿಕೊಳ್ಳಿ, ನಿಮಗೆ ಸಾಧ್ಯವಾಗುತ್ತಿಲ್ಲವೆಂದರೆ ಅದನ್ನು ಎದುರಿಸುವವರ ಜೊತೆಗೆ ಮಾತನಾಡಿ ಅದ್ಯಾವುದು ತಲೆಕೆಡಿಸಿಕೊಳ್ಳದೆ ಏಕಾಏಕಿ ತಲೆಕೊಡುವುದರಿಂದ ರಾಜಾಕಾರಣಿಗಳಿಗೆ ಲಾಭವಾಯಿತೆ ವಿನ: ಬೇರೆ ಯಾರಿಗೂ ಲಾಭವಾಗಲಿಲ್ಲ. ಇಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳೆರಡುಕ್ಕು ಲಾಭವಾಯಿತು. ನಿಮ್ಮ ಸಾವಿನ ಮನೆಯಲ್ಲಿ ತಮ್ಮ ರಾಜಕಾರಣದ ಬೇಳೆ ಬೇಯಿಸಿಕೊಂಡರೆ ಹೊರತು ನೀವು ಮತ್ತು ನಿಮ್ಮ ಕನಸುಗಳು ಅರ್ಧಕ್ಕೆ ನಿಂತವು ಎಂಬುವುದು ಗಮನಿಸಲೇಬೇಕಾದ ಸಂಗತಿಯಾಗಿದೆ.
ನಾನಿಲ್ಲಿ ಯಾರ ಹತ್ಯೆಯನ್ನು ಅಣಕಿಸುತ್ತಿಲ್ಲ ಬದಲಿಗೆ ಈ ದೇಶ ಮತ್ತು ರಾಜ್ಯದಲ್ಲಿ ಎಂತಹ ಲಜ್ಜೆಗೆಟ್ಟ ಜನರೆಲ್ಲ ಸುಖಾಸುಮ್ಮನೆ ಆರಾಮವಾಗಿ ತಿರುಗಾಡುತ್ತಿದ್ದಾರೆ. ಪ್ರಮಾಣಿಕ ವ್ಯಕ್ತಿಗಳು ಅಧಿಕಾರಿಗಳು ಹಾಗೂ ರೈತ ಅದ್ಯಾಕೆ ಆತ್ಯಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬುವುದಷ್ಟೆ ನನ್ನ ಮುಂದಿರುವ ಪ್ರಶ್ನೆ. ಸಾಮಾನ್ಯ ಜನರ ರಕ್ತಹೀರಿಯೆ ತಮ್ಮ ಹೊಟ್ಟೆ ಉಬ್ಬಿಸಿಕೊಳ್ಳುವವರು ಆನೆಯಂತಹ ದೇಹ ಬೆಳೆಸಿಕೊಂಡು ದೇಶಕ್ಕೆ ಕಿಂಚತ್ತು ಲಾಭಕೊಡದವರು ಬದುಕುತ್ತಿದ್ದಾರೆ. ಈ ದೇಶಕ್ಕಾಗಿ ಜನರಿಗಾಗಿ ದುಡಿದು ಬೆವರು ಸುರಿಸುತ್ತಿರುವ ಪ್ರಮಾಣಿಕ ಜೀವಗಳು ಈಹಲೋಕ ತ್ಯೆಜಿಸುತ್ತಿವೆ. ಮತ್ತೊಬ್ಬರ ಹೆಸರು ಹೇಳಿಯೇ ತಮ್ಮತನವನ್ನು ಮಾರಿಕೊಂಡು ಬದುಕುವ ಅದೆಷ್ಟೊ ಜನರು ಊರ ಗೂಳಿಯಂತೆ ತಿರುಗುತ್ತಿದ್ದಾರೆ ಆದರೆ ತಮ್ಮ ಜೀವನವೆ ಜನರಿಗಾಗಿ ಸವೆಸುವ ಜನರೆಲ್ಲ ಸಾವಿನ ದವಡೆಯಲ್ಲಿ ಸಿಗುತ್ತಿದ್ದಾರೆಯಂಬುವುದಷ್ಟೆ ನನ್ನ ಜೀವ ಹಿಂಡುತ್ತಿದೆ.
ಕೊನೆಯ ತುತ್ತು: ``ಮನುಷ್ಯ ಬದುಕು ಮರಳಿ ಹುಟ್ಟಿ ಬರುವುದಿಲ್ಲ, ಹುಟ್ಟಿ ಬಂದಾಗ ಈ ಸಮಾಜವನ್ನು ಮೆಟ್ಟಿ ನಿಲ್ಲಬೇಕಾಗುತ್ತದೆ. ಸಮಾಜದೊಳಗಿನ ಖೊಟ್ಟಿ ಜೀವಗಳ ಜೊತೆಗೆ ಘಟ್ಟಿಯಾಗಿ ಸಂಸಾರ ಮಾಡಬೇಕಾಗುತ್ತದೆ. ಸಂತೋಷ ಬಂದಾಗ ಹಿಗ್ಗದೆ, ದು:ಖ ಬಂದಾಗ ಕುಗ್ಗದೆ ಈ ಬದುಕನ್ನು ಬದಲಿಸಿಕೊಳ್ಳುತ್ತ ಸಮಾಜದೊಂದಿಗೆ ಸ್ಪಂದಿಸುತ್ತ ಬದುಕಬೇಕು ಸಮಾಜವನ್ನು ಬದಲಿಸಲು ಪ್ರಯತ್ನಿಸಬೇಕು ಹಿರಿಯರು ಹೇಳಿದಂತೆ ``ಮರಳಿ ಯತ್ನವ ಮಾಡುತ್ತಿರಬೇಕು''