ಸಾಮಾಜಿಕವಾಗಿ ಹಿತವನ್ನು ಕಾಪಾಡುವ ಏಕೈಕ ಪ್ರಕಾರವೆ ಸಾಹಿತ್ಯ. ಪೂರ್ವ ಪ್ರಾಥಮಿಕ ಶಾಲೆಯಿಂದ ಹಿಡಿದು ಅತೀದೊಡ್ಡ ವಿದ್ವಾಂಸರವರೆಗೂ ಸಾಹಿತ್ಯ ಹಾಸುಹೊಕ್ಕಾಗಿದೆ. ಅನಾದಿಕಾಲದಿಂದಲೂ ಸಾಹಿತ್ಯಕ್ಕೆ ತನ್ನದೇ ಆದ ವಿಶೇಷತೆ ಅಡಗಿದೆ. ಮನುಜ ಕುಲವನ್ನು ಎತ್ತರಕ್ಕೆ ಕೊಂಡಯ್ಯೂವಲ್ಲಿ ಯಶಸ್ವಿಯಾಗಿದ್ದು ಸಾಹಿತ್ಯ ಮಾತ್ರ ಎಂದರೆ ತಪ್ಪಾಗದು. ಇಂತಹ ಸಾಹಿತ್ಯವು ಹಲವು ಪ್ರಕಾರಗಳಲ್ಲಿ ನಾಡಿನುದ್ದಗಲ್ಲಕ್ಕೂ ಹಲವು ಭಾಷೆಗಳಲ್ಲಿ ಇದೀಗ ಜನಮಾನಸದಲ್ಲಿ ಬದುಕಿನ ನಿರಂತರತೆಯನ್ನು ಕಾಪಾಡುವಲ್ಲಿ ಸಾಹಿತ್ಯ ಬದುಕು ಕಟ್ಟಿಕೊಡುತ್ತಿದೆ. ಇಂತಹ ಸಾಹಿತ್ಯ ಎಂದರೇನು? ಮಕ್ಕಳ ಮತ್ತು ದೊಡ್ಡವರ ಪುಸ್ತಕಗಳನ್ನು ಒಂದೇಯಡೆಗೆ ಇಟ್ಟು ಜೀವಂತ ಗ್ರಂಥಾಲಯವನ್ನು ಮಾಡುವಲ್ಲಿ ನಾವೀಗ ನಮ್ಮ ಮಕ್ಕಳಿಗೆ ತೋರಿಸಬೇಕಿದೆ.
ಸಾಹಿತ್ಯ ಎಂದರೇನು?
``ಹೆತ್ತವ್ವ ಸತ್ತಮ್ಯಾಲೆ, ಬದುಕು ಕತ್ತಲಾದಂತೆ.
ಬೆಳಕು ಕೊಡುವ ದೀಪವು ಬಾಳಿನಲ್ಲಿ ಆರಿಹೋದಂತೆ.
ಎಂಬ ಸಾಲುಗಳು ಮೂಡಿದವು. ಆ ಸಮಯದಲ್ಲಿ ಸಾಹಿತ್ಯ ಎಂದರೇನು? ಎಂಬ ಕಲ್ಪನೆ ನನ್ನಲ್ಲಿ ಇರಲಿಲ್ಲ. ನನ್ನ ಪ್ರಕಾರ ಸಾಹಿತ್ಯವೆಂದರೆ ಅನುಭವದ ನೆಲೆಯಲ್ಲಿ ಅರಗಿಸಿಕೊಳ್ಳಲಾಗದ ಹಾಗೂ ಅರೆಗಿಸಿಕೊಂಡ ವಿಷಯಗಳು ಅಭಿವ್ಯಕ್ತಿ ಮಾಡುವ ರೀತಿ. ಕಳೆದು ಹೋದ ವಸ್ತು, ಉಳಿಸಿಕೊಂಡ ಪ್ರೀತಿ, ನಡೆದುಬಂದ ರೀತಿ, ನಡೆಯುತ್ತಿರುವ ರೀತಿ, ಎಲ್ಲವು ಸಾಹಿತ್ಯವೆ ಆಗಿದೆ. ಕೆಲವುಬಾರಿ ಸಾಮಾಜಿಕ ಸಮಸ್ಯೆಗಳನ್ನು ಕಂಡಾಗ ಅದರ ಪರ ವಿರೋಧಗಳ ಬಗ್ಗೆ ನಮ್ಮ ಮನಸ್ಸಿನೊಳಗೆ ಮೂಡುವ ಅಕ್ಷರಗಳೆ ಸಾಹಿತ್ಯ. ಯಾವುದಾರು ಒಂದು ವಿಷಯ ಓದಿ ಮನನಮಾಡಿಕೊಂಡಾಗ ಅದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ವೇದಿಕೆಯಾಗಲಿವೆ ಸಾಹಿತ್ಯ.
ಸಮಾಜದ ಓರೆ ಕೋರೆಗಳನ್ನು ತಿದ್ದಲು, ಅಸಮಾನತೆ ಬಿರುಗಾಳಿಯನ್ನು ತಡೆಯಲು, ಅನ್ಯಾಯದ ಅಹಂನ್ನು ಮೆಟ್ಟಿಹಾಕಲು, ಲಗ್ಗೆಯಿಲ್ಲದೆ ಓಡುತ್ತಿರುವ ಆಡಂಬರ ಹಾಗೂ ಸಾಮಾಜಿಕ ಪಿಡುಗನ್ನು ತಡೆಯಲು, ಸಮಾಜದಲ್ಲಿ ಸಮಾನತೆ ತರಲು ಸಾಹಿತ್ಯ ಮಹತ್ವದ ಪಾತ್ರವಹಿಸುತ್ತದೆ. ಒಡಲೊಳಗಿನ ಕಿಚ್ಚು, ಸತ್ಯ, ಸಂತಸ, ಮಾಹಿತಿ, ಪ್ರೀತಿ, ಕಾಳಜಿ, ಸಾಮಾಜಿಕ ಬದ್ಧತೆ, ಎಲ್ಲವು ಎಲ್ಲರಿಗೂ ದೊರೆಯಲಿ ಎಂಬ ಕಾರಣಕ್ಕೆ ಸಾಹಿತ್ಯ ಕೆಲಸ ಮಾಡುತ್ತದೆ.
ಮಕ್ಕಳ ತರಗತಿ/ವಯಸ್ಸಿಗನುಸಾರ ವಿಂಗಡಿಸಿದ ಪುಸ್ತಕಗಳನ್ನು ಸಾಹಿತ್ಯದ ಪುಸ್ತಕಗಳಲ್ಲಿ ಸೇರಿಸಬಹುದೆ? ಏಕೆಂದರೆ,
ಶಾಲೆಗಳಲ್ಲಿ ಗ್ರಂಥಾಲಯಕ್ಕೆ ಬೇಕಾದ ಪುಸ್ತಕ ಖರೀದಿಸಲು ಮೀಸಲಿಡುವ ದುಡ್ಡೇ ಕಡಿಮೆ. ಪುಸ್ತಕಗಳ ಬೆಲೆಗಳು ಏರುತ್ತಿದ್ದರೂ ಪುಸ್ತಕ ಖರೀದಿಗೆ ಕೊಡುವ ಭಿಕ್ಷೆ ಮಾತ್ರ ಇನ್ನೂ ಹತ್ತು ವರ್ಷಗಳ ಹಿಂದೆ ಯಾವ ರೀತಿಯಲ್ಲಿತ್ತೋ ಹಾಗೇ ಇದೆ. ಆದರೂ ಮಕ್ಕಳಿಗಾಗಿ ಪುಸ್ತಕ ಖರೀದಿಸಬೇಕಿದೆ ಮಕ್ಕಳಿಗೆ ಓದಲು ಹೇಳಬೇಕಿದೆ. ಶಾಲೆಯ ಗ್ರಂಥಾಲಯವಾಗಲಿ ಅಥವಾ ಸಾರ್ವಜನಿಕ ಗ್ರಂಥಾಲಯವಾಗಲಿ ಎಲ್ಲವು ಮಕ್ಕಳಿಂದ ಹಿಡಿದು ಹಿರಿಯವರೆಗೂ ಅವಕಾಶ ಕಲ್ಪಿಸಬೇಕು.
ಗ್ರಂಥಾಲಯಗಳು ಜ್ಞಾನದಾನದ ಕೇಂದ್ರಗಳು. ಓದಲು ಆಕರ ಗ್ರಂಥಗಳಾಗಿ ಬಳಸಲು ಇಲ್ಲದೇ ಪುಸ್ತಕಗಳನ್ನು ಎರವಲು ರೂಪದಲ್ಲಿ ಪಡೆದು ಓದಲು ಬೇಕಾದ ಪುಸ್ತಕಗಳನ್ನು ಹೊಂದಿರುವ ಸ್ಥಳವೇ ಗ್ರಂಥಾಲಯ. ಆದರೆ ಹಿಂದೆ ಕಾಣುತ್ತಿದ್ದ ಸ್ವರೂಪವೇ ಬೇರೆ. ಆ ನಂತರ ಬಂದ ಮಧ್ಯಯುಗದಲ್ಲಿ ಮಠಗಳಲ್ಲಿ ಗ್ರಂಥಾಲಯಗಳು ಕಾಣಿಸಿಕೊಂಡವು. ಗ್ರಂಥಾಲಯದಲ್ಲಿ ಅನೇಕ ಭಾಷೆಯ ಪುಸ್ತಕಗಳು ಹಾಗೂ ಅದರ ವಿಷಯಗಳು ಸಿಗುತ್ತವೆ. ಆ ಕಾಲದಲ್ಲಿಯು ಮಕ್ಕಳು ಮತ್ತು ಹಿರಿಯರು ಎಂದು ಬೇರೆ ಮಾಡದೆ ಓದಿರುವ ಸಾಹಿತ್ಯ ಈ ಕಾಲಮಾನಕ್ಕಾದರು ಒಂದೆ ವೇದಿಕೆಡೆಗೆ ಮಕ್ಕಳಿಗೆ ಗ್ರಂಥಾಲಯ ಓದಲು ಸಾಹಾಯ ಮಾಡಬೇಕಾಗಿದೆ.
ಪ್ರಾಚೀನ ಕಾಲದಲ್ಲಿ ಮುದ್ರಾಣಾಲಯಗಳಿರಲಿಲ್ಲ. ಆದ್ದರಿಂದ ಜ್ಞಾನವನ್ನು ಸಂಪಾದಿಸಲು ಬಹಳ ಕಷ್ಟಪಡಬೇಕಾಗುತ್ತಿತ್ತು. ಈಗ ಗ್ರಂಥಗಳು ನಮಗೆ ಬೇಕಾದ ವಿಷಯಗಳನ್ನು ತಿಳಿಸಲು ಸಿದ್ಧವಿರುವವು. ನಾವು ಬೇಕಾದಾಗ ಗ್ರಂಥಾಲಯಕ್ಕೆ ಹೋಗಿ ಗ್ರಂಥಗಳನ್ನು ಓದಿ ಜ್ಞಾನ ಪಡೆಯಬಹುದು. ಒಂದೇ ವೇದಿಕೆಯಡೆಯಲ್ಲಿ ಎಲ್ಲಾ ಜ್ಞಾನ ಕಟ್ಟಿಕೊಡುವ ಗ್ರಂಥಾಲಯಗಳ ನಿರ್ಮಾಣವಾಗಬೇಕಿದೆ.
ಕೆಲವು ಮಕ್ಕಳಿಗೆ ಪುಸ್ತಕಗಳನ್ನು ಕೊಂಡು ಕೊಳ್ಳಲು ಹಣವಿರುವುದಿಲ್ಲ. ಆಗ ಅವರು ಗ್ರಂಥಾಲಯದಲ್ಲಿ ಪುಸ್ತಕಗಳನ್ನು ತೆಗೆದುಕೊಂಡು ಓದಬಹುದು. ನಮಗೆ ಬೇಕಾದ ವಿಷಯಗಳನ್ನು ಗ್ರಂಥಗಳಿಂದ ಅರಿತುಕೊಳ್ಳಬಹುದು. ಹೀಗೆ ಗ್ರಂಥಾಲಯವು ಜ್ಞಾನಾಭಿವೃದ್ಧಿಯ ಮಹತ್ವದ ಪಾತ್ರವನ್ನು ವಹಿಸುತ್ತದೆ. ಮಕ್ಕಳು ಹಿರಿಯರ ಪುಸ್ತಕ ಓದಬಾರದು ಎಂಬ ನಿಯಮವೇನು ಇಲ್ಲಾ ಕೆಲವೊಮ್ಮೆ ದೊಡ್ಡವರ ಪುಸ್ತಕಗಳು ಮಕ್ಕಳಿಗೆ ಬೇಕಾಗುವ ಸಾಧ್ಯತೆಗಳಿವೆ ಹೀಗಾಗಿ ಇವು ಜ್ಞಾನ ಬಿತ್ತರಿಸುವ ವಿಸ್ತರಿಸುವ ಘಟ್ಟಗಳಾಗಿ ಮಕ್ಕಳ ಮೇಲೆ ಪರಿಣಾಮ ಬೀರುತ್ತವೆ.
ಸಂಶೋಧಕರಿಗೂ, ಲೇಖಕರಿಗೂ, ವಿದ್ಯಾರ್ಥಿಗಳಿಗೂ, ಶಿಕ್ಷಕರಿಗೂ ಗ್ರಂಥಾಲಯಗಳಿಲ್ಲದೇ ನಡೆಯುವಂತಿಲ್ಲ. ನಮ್ಮ ಸರಕಾರದವರು ಜನರ ಜ್ಞಾನದ ಮಟ್ಟವನ್ನು ಹೆಚ್ಚಿಸುವುದಕ್ಕಾಗಿ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಿರುವರು. ಪ್ರತಿಯೊಂದು ಶಾಲೆಗೆ ಹಾಗೂ ಕಾಲೇಜುಗಳಿಗೆ ಗ್ರಂಥಾಲಯದ ಅವಶ್ಯಕತೆ ಇರುವುದು. ನಾವು ಎಷ್ಟೇ ಶ್ರೀಮಂತರಾಗಿದ್ದರೂ ನಮಗೆ ಬೇಕಾಗುವ ಎಲ್ಲ ಗ್ರಂಥಗಳನ್ನು ಕೊಂಡುಕೊಳ್ಳುವುದು ಸಾಧ್ಯವಿಲ್ಲ. ಆದ್ದರಿಂದ ಪುಸ್ತಕದ ಪ್ರೇಮಿಗಳು ಗ್ರಂಥಾಲಯಗಳನ್ನು ಅವಲಂಬಿಸಬೇಕಾಗುವುದು. ನಮಗೆ ಬೇಕಾದ ಗ್ರಂಥಗಳು ಗ್ರಂಥಾಲಯಗಳಲ್ಲಿ ದೊರೆಯುವುವು. ಒಂದು ವಿಷಯದ ಬಗ್ಗೆ ಅನೇಕ ಗ್ರಂಥಗಳನ್ನು ನೋಡಬೇಕಾದರೆ ನಾವು ಗ್ರಂಥಾಲಯಗಳಿಗೆ ಶರಣು ಹೋಗಬೇಕು.
ಗ್ರಂಥಾಲಯವೆಂದರೆ ಅಲ್ಲಿ ಎಲ್ಲ ಭಾಷೆಯ ಸಮೃದ್ಧ ಭಾಷೆಯಾಗಿದೆ. ಯಾವ ವಿಷಯವನ್ನು ತಿಳಿದುಕೊಳ್ಳಬೇಕಾದರೂ ನಮಗೆ ಗ್ರಂಥಗಳೂ ಇರಬೇಕು. ಜಗತ್ತಿನಲ್ಲಿ ಇಂಗ್ಲೀಷ್ ಭಾಷೆಯು ಸಮೃದ್ಧ ಭಾಷೆಯಾಗಿದೆ. ಯಾವ ವಿಷಯವನ್ನು ತಿಳಿದುಕೊಳ್ಳಬೇಕಾದರೂ ನಮಗೆ ಗ್ರಂಥಗಳು ಇಂಗ್ಲೀಷ್ ಭಾಷೆಯಲ್ಲಿ ದೊರೆಯುವುವು. ಮಕ್ಕಳಿಗೆ ನಾವಿಲ್ಲಿ ಹೇಳಬಹುದಷ್ಟೆ ಕೊನೆಯಲ್ಲಿ ಅರ್ಥಮಾಡಿಕೊಂಡು ಅವರಿಗೆ ಬೇಕಾದ ಜ್ಞಾನದ ಪುಸ್ತಕ ಅವರೆ ಆರಿಸಿಕೊಳ್ಳುವ ಸ್ವತಂತ್ರ್ಯವನ್ನು ಶಿಕ್ಷಣ ಕಲ್ಪಿಸಿಕೊಟ್ಟಿದೆ ಎಂದರೆ ತಪ್ಪಾಗಲಾರದು.
ಎಷ್ಟೋ ಶಾಲೆಗಳಲ್ಲಿ ಗ್ರಂಥಗಳಿರುತ್ತವೆ. ಆದರೆ ಅವುಗಳನ್ನು ವಿದ್ಯಾರ್ಥಿಗಳಿಗೆ ಕೊಡುವ ವ್ಯವಸ್ಥೆ ಇರುವುದಿಲ್ಲ. ಹೀಗಾದರೆ ವಿದ್ಯಾರ್ಥಿಗಳಲ್ಲಿ ವಾಚನಾಭಿರುಚಿಯು ಬೆಳೆಯ ಲಾರದು. ವಾಚನಾಭಿರುಚಿ ಇಲ್ಲದಿದ್ದರೆ ಅವರ ಜ್ಞಾನವು ಬೆಳೆಯಲಾರದು. ಮಕ್ಕಳಿಗೆ ಜೊತೆಗೆ ಹಿರಿಯರಿಗೆ ಬೇಕಾಗುವ ಎಲ್ಲಾ ಗ್ರಂಥಗಳು ಒಂದೆಡೆ ಸಿಗಬೇಕಾದ ಅತೀ ಅವಶ್ಯಕತೆಯಿದೆ.
ಆಧುನಿಕ ಸಮಾಜಗಳಲ್ಲಿ ಸಾಕ್ಷರತೆ ಮತ್ತು ನಿರ್ದಿಷ್ಟವಾಗಿ ಓದುವ ಸಾಕ್ಷರತೆಯು ಜೀವನದ ಯಶಸ್ವಿಗೆ ಪೂರ್ವಾಪೇಕ್ಷೆಯಾಗಿದೆ. ಸಂತೋಷಕ್ಕಾಗಿ ಹಾಗೂ ಶೈಕ್ಷಣಿಕ ಮತ್ತು ವೈಯಕ್ತಿಕ ಅಭಿವೃದ್ಧಿಗೂ ಓದಿನ ಮಹತ್ವವನ್ನು ಅಧ್ಯಯನಗಳು ಒತ್ತಿ ಹೇಳುತ್ತವೆ. ಈ ಅಧ್ಯಯನಗಳು ಓದಿನ ಉತ್ತೇಜಿಸುವಿಕೆಯು ಮಕ್ಕಳ/ಯುವ ಜನತೆ ಮತ್ತು ವಯಸ್ಕರ ಮೇಲೆ ಮತ್ತು ಅವರ ಭವಿಷ್ಯದ ಮೇಲೆ ಒಂದು ಪ್ರಮುಖ ಪ್ರಭಾವವನ್ನು ಬೀರುವುದಾಗಿ ತೋರಿಸುತ್ತವೆ. ಶಾಲೆಯ ಯಾವುದೇ ವಿಷಯಗಳಲ್ಲಿ ಮಕ್ಕಳು ಸುಲಲಿತವಾಗಬೇಕಾದರೆ ಓದು ಅತ್ಯವಶ್ಯಕವಾಗಿದೆ.
ಒಂದು ಗ್ರಂಥಾಲಯ ಅಥವಾ ಸ್ವತಂತ್ರ ಓದಿನ ಒಂದು ವಿಶೇಷ ಸ್ಥಳವು ಧನಾತ್ಮಕ ಓದಿನ ಹವ್ಯಾಸಗಳನ್ನು ಮತ್ತು ನಿಲುವುಗಳನ್ನು ಪೆÇೀಷಿಸುವುದು ಮಾತ್ರವಲ್ಲದೆ ಅದು ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಪುಸ್ತಕ/ಪಠ್ಯ ಪುಸ್ತಕಗಳು ನಿಲುಕುವಂತೆ ಮಾಡುತ್ತದೆಯೆಂಬುದು ನಂಬಿಕೆಯಾಗಿದೆ. ಈ ನಿಟ್ಟಿನಲ್ಲಿ, ಮಕ್ಕಳಲ್ಲಿ ಓದಿನ ಹವ್ಯಾಸಗಳನ್ನು ಪೆÇ್ರೀತ್ಸಾಹಿಸಲು ಮತ್ತು ಸುಸ್ಥಿರಗೊಳಿಸಲು ನಾವು ಶಾಲೆಗಳಲ್ಲಿ ಮತ್ತು ಸಮುದಾಯಗಳಲ್ಲಿ ಗ್ರಂಥಾಲಯಗಳ ಜಾಲಬಂಧವೊಂದನ್ನು ಅವಶ್ಯಕವಾಗಿದೆ.
``ಜ್ಞಾನದಿಂದ ಬುದ್ಧಿವಂತನಾಗಬಹುದಾದರೂ ತಿಳುವಳಿಕೆ ಬರುವುದು ವಿದ್ಯೆಯಿಂದ''- ಎಂಬ ಪಂಡಿತ ಜವಾಹರಲಾಲ ನೆಹರೂರವರ ಮಾತಿನಂತೆ ನಮ್ಮ ಶಾಲೆಗಳಿಂದ ಸಿಗುವ ವಿದ್ಯೆ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ, ಅವರ ವ್ಯಕ್ತಿತ್ವದ ಗುಣಮಟ್ಟದ ಸುಧಾರಣೆಗೆ ಹೇಗೆ ಸಹಾಯಕವಾಗಬಲ್ಲದು ಎಂಬುದನ್ನು ಅವಲೋಕಿಸಬೇಕಾಗುತ್ತದೆ. ಶಾಲೆಯು ಶಿಕ್ಷಕ ಮತ್ತು ಮಕ್ಕಳು ಸೇರಿ ಪಾಠ ಮಾಡುವ, ಪಾಠ ಕೇಳುವ ಕೇಂದ್ರ ಮಾತ್ರವಾಗಿರುವುದಿಲ್ಲ. ಮಗುವಿನ ಭವಿಷ್ಯತ್ತನ್ನು ರೂಪಿಸುವ, ಸ್ವಯಂ ಶಕ್ತಿ ತುಂಬಿಕೊಳ್ಳುವಂತೆ ಮಗುವಿಗೆ ಪ್ರೇರಣೆ ನೀಡುತ್ತಾ ಬೆಳೆಸಬೇಕಾದುದು ಶಾಲೆಯ ಕರ್ತವ್ಯವಾಗಿದೆ.
ನಿತ್ಯದ ಪಾಠಗಳಿಂದ ಪ್ರೇರಿತಗೊಂಡು ಮಗುವಿನ ಕೂತೂಹಲ ಮತ್ತು ಪ್ರಶ್ನೆಗಳನ್ನು ಪೆÇೀಷಿಸುವ ಪೂರಕ ವಾತಾವರಣ ಶಾಲೆಯಲ್ಲಿ ನಿರ್ಮಾಣವಾಗಬೇಕು. ಹೀಗೆ ಮಗುವಿನ ಆಸಕ್ತಿಯನ್ನು ತಣಿಸಲು ಶಿಕ್ಷಕರೂ ಸಿದ್ಧರಾಗಿರಬೇಕು. ಆ ಎಲ್ಲ ಸಿದ್ಧತೆಗಳಿಗೆ ಶಾಲೆಯಲ್ಲಿನ `ಗ್ರಂಥಾಲಯ' ಮಾಹಿತಿ ಒದಗಿಸಬೇಕಾಗುತ್ತದೆ ಮತ್ತು ಮಗುವಿನ ಸ್ವತಂತ್ರ ಕಲಿಕೆಗೆ ಸಹಾಯಕವಾಗುತ್ತದೆ. ಹಾಗಾದಾಗ `ಶಾಲೆಯ ಗ್ರಂಥಾಲಯ' ಕಲಿಕೆಗೆ ಪೂರಕ ಶಕ್ತಿಯಾಗುತ್ತದೆ.
ಸಧ್ಯದ ಸ್ಥಿತಿಯಲ್ಲಿ ನಮ್ಮ ಶಾಲೆಗಳಲ್ಲಿನ ಗ್ರಂಥಾಲಯಗಳ ಕಾರ್ಯವೈಖರಿ ಅಷ್ಟೊಂದು ತೃಪ್ತಿದಾಯಕವಾಗಿಲ್ಲ, ಬೆರಳೆಣಿಕೆಯ ಶಾಲೆಗಳಲ್ಲಿ ಮಾತ್ರ ಪುಸ್ತಕಗಳು ವ್ಯವಸ್ಥಿತವಾಗಿ ಜೋಡಿಸಲ್ಪಟ್ಟಿದ್ದರೂ ಅವುಗಳು ಪರಿಣಾಮಕಾರಿಯಾಗಿ ಬಳಕೆಯಾಗುತ್ತಿಲ್ಲ. ಬಹುಪಾಲು ಶಾಲೆಗಳಲ್ಲಿನ ಗ್ರಂಥಭಂಡಾರ ಬೀಗಮುದ್ರೆಯಲ್ಲಿರುವುದು ಶೋಚನೀಯ. ಈ ಸ್ಥಿತಿಯಿಂದ ಮುಂದೆ ಸಾಗಬೇಕಾಗಿದೆ. ಕಲಿಕೆಗೆ ಪೂರಕವಾಗಿ ಮಕ್ಕಳ ಕೂತೂಹಲ ಮತ್ತು ಶಿಕ್ಷಕರ ಗ್ರಂಥ ಭಂಡಾರವನ್ನು ಬೆಳೆಸಿಕೊಳ್ಳಬೇಕಾಗಿದೆ.
ಶಾಲೆಯ ಗ್ರಂಥಾಲಯದ ಬಳಕೆ ಹೇಗೆ?
ಶಾಲೆಯ ಗ್ರಂಥಾಲಯವನ್ನು ಮಕ್ಕಳು ಮುಕ್ತವಾಗಿ ಬಳಸುವಂತೆ ಮಾರ್ಪಡಿಸಬೇಕು. ಮಕ್ಕಳು ಸ್ವತಃ ಪುಸ್ತಕ ತೆಗೆದುಕೊಳ್ಳುವ, ಜೋಡಿಸುವ, ಮತ್ತು ಯಾವುದೇ ಗ್ರಂಥದ ಆಯ್ಕೆಗೆ ಮುಕ್ತ ವಾತಾವರಣವಿರಬೇಕು. ಪಠ್ಯಕ್ಕೆ ಪೂರಕವಾದ ಮತ್ತು ಮಕ್ಕಳ ಪ್ರಶ್ನೆಗಳಿಗೆ ಅಲ್ಲಿನ ಗ್ರಂಥಗಳು ಉತ್ತರಿಸುವಂತಿರಬೇಕು. ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಪುಸ್ತಕಗಳನ್ನು ಪ್ರತ್ಯೇಕವಾಗಿ ಮಕ್ಕಳಿಗೆ ಸಿಗುವಂತೆ ಇಟ್ಟಿರಬೇಕು.
ರಾಷ್ಟ್ರೀಯ ಹಬ್ಬಗಳಿಗೆ ಸಂಬಂಧಿಸಿದ ಪೂರಕ ಮಾಹಿತಿ ಒದಗಿಸುವ ಪುಸ್ತಕಗಳು 15 ದಿನ ಮುಂಚಿತವಾಗಿ ಮಕ್ಕಳ ಕೈಯಲ್ಲಿರಬೇಕು. ಪುಸ್ತಕ ಓದಿದ ನಂತರ ವಿದ್ಯಾರ್ಥಿಗಳ ಗುಂಪು ಮಾಡಿ ತಾವು ಓದಿದ ವಿಷಯದ ಮಂಡನೆ ಮತ್ತು ಚರ್ಚೆಗೆ ಅವಕಾಶ ಕಲ್ಪಿಸಬೇಕು.
ಶಾಲೆಯ ಗ್ರಂಥಾಲಯದ ಪುಸ್ತಕದಲ್ಲಿನ ವಿಷಯಗಳನ್ನು ಆಧರಿಸಿ ಚರ್ಚೆ, ಪ್ರಬಂಧ. ಭಾಷಣ ಮತ್ತು ಯೋಜನೆಗಳನ್ನು ರೂಪಿಸಲು ವಿವಿಧ ಸ್ಪರ್ಧೆ ಏರ್ಪಡಿಸುವುದು ಸೂಕ್ತ. ಪ್ರತೀ ಶೈಕ್ಷಣಿಕ ವರ್ಷದ ಮೊದಲ ಮಾಸದಲ್ಲಿ ಒಂದು ದಿನ ಶಾಲೆಯ ಗ್ರಂಥಾಲಯದಲ್ಲಿರುವ ಪುಸ್ತಕಗಳ ಪ್ರದರ್ಶನ ಏರ್ಪಡಿಸಿ ಶಾಲೆಯ ಮಕ್ಕಳಿಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳು, ಅದರಲ್ಲಿರುವ ವಿವರಗಳ ಸಂಕ್ಷಿಪ್ತ ಪರಿಚಯ ಮಾಡಬೇಕು.
ಮಕ್ಕಳೇ ಸ್ವತಃ ಪುಸ್ತಕ ಆಯ್ಕೆಮಾಡಿಕೊಳ್ಳುವಂತೆ ಮತ್ತು ಮಕ್ಕಳೇ ಗ್ರಂಥಾಲಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು. ಶಾಲೆಯ ಗ್ರಂಥಾಲಯವು ದಿನಪತ್ರಿಕೆ, ನಿಯತಕಾಲಿಕೆಗಳನ್ನು ಹೊಂದಿರಬೇಕು. ಮಕ್ಕಳು ಮತ್ತು ಶಿಕ್ಷಕರು ಓದುವ ದಿನಚರಿ ಸದಾ ಜೀವಂತವಾಗಿರುವಂತೆ ನೋಡಿಕೊಳ್ಳಬೇಕು. ಕೆಲವು ಪುಸ್ತಕ ಅಥವಾ ಮಾಹಿತಿ ಪಡೆಯಲು ಅಗತ್ಯ ಕಾಲಾವಕಾಶ ನೀಡಬೇಕು.
ಕಿರಿಯ ತರಗತಿಯ ಮಕ್ಕಳಿಗೆ ಸರಳ ಭಾಷೆಯಲ್ಲಿನ ಪುಸ್ತಕಗಳನ್ನು ಬಳಸಬೇಕು. ಮಕ್ಕಳು ಇಷ್ಟಪಡುವಂತಹ ಕಥೆಯ ವರ್ಣರಂಜಿತ ಚಿತ್ರಗಳಿಂದ ಕೂಡಿದ ಪುಸ್ತಕಗಳನ್ನು ಬಳಸಬೇಕು. ಮಕ್ಕಳಿಗೆ ಕಥೆಯಲ್ಲಿರುವ ಪಾತ್ರ ನಿರ್ವಹಿಸಿ ನಾಟಕ ಮಾಡಲು ಮತ್ತು ಮುಕ್ತ ಚಿಂತನೆಗೆ ಅವಕಾಶ ಮಾಡಿಕೊಡಬೇಕು.
ಉಪಸಂಹಾರ:
ಇಂದಿನ ಮಕ್ಕಳು ಇಂದಿನ ಪ್ರಜೆಗಳು ಎಂಬ ಮಾತಿನಂತೆ ಮಕ್ಕಳಿಗೆ ಭವಿಷ್ಯ ದೃಷ್ಠಿಯಲ್ಲಿಟ್ಟುಕೊಂಡು ಗ್ರಂಥಾಲಯ ನೀಡಬೇಕಾದ ಅವಶ್ಯಕತೆಯಿದೆ. ಸಾಹಿತ್ಯ ಎಂದರೇನು? ಮಕ್ಕಳ ತರಗತಿ/ವಯಸ್ಸಿಗನುಸಾರ ವಿಂಗಡಿಸಿದ ಪುಸ್ತಕಗಳನ್ನು ಸಾಹಿತ್ಯದ ಪುಸ್ತಕಗಳಲ್ಲಿ ಸೇರಿಸಬೇಕು. ಮಕ್ಕಳಿಗೆ ಹಿರಿಯರ ಪುಸ್ತಕಗಳನ್ನು ಓದಬಾರದು ಎಂಬ ಕಟ್ಟಳೆಗಳನ್ನು ಹಾಕದೇ ಸ್ವತಂತ್ರವಾಗಿ ಓದಲು ಬರೆಯಲು ಗ್ರಂಥಾಲಯ ಅವಕಾಶಮಾಡಿಕೊಡಬೇಕಾಗುದೆ. ಶಾಲೆಯ ಗ್ರಂಥಾಲಯವು ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುತ್ತದೆ. ಶಾಲೆಯ ಅವಧಿಯಲ್ಲಿ ಓದಿದ ವಿಷಯಗಳನ್ನು ಮುಂದೊಂದು ದಿನ ಅದೇ ವಿಷಯ ಬಂದಾಗ ಸಂಬಂಧ ಕಲ್ಪಿಸಿ ವಿಷಯವನ್ನು ಹೋಲಿಕೆ ಮಾಡಲು ಸಹಾಯಕವಾಗುತ್ತದೆ. ಮಗುವಿನ ಕೂತೂಹಲವನ್ನು ತಣಿಸುವುದರ ಮೂಲಕ ಬೌದ್ಧಿಕ ಬೆಳವಣಿಗೆಗೆ ಗ್ರಂಥಾಲಯ ಸಹಾಯಕವಾಗಬಲ್ಲದು. ಮತ್ತು ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿಯೇ ನಿರಂತರ ಅಧ್ಯಯನದ ಆಸಕ್ತಿ ಬೆಳೆಸಲು ಸಹಾಯವಾಗುತ್ತದೆ. ಹೀಗೆ ಗ್ರಂಥಾಲಯವು ಮಗುವಿನ ಶಿಕ್ಷಣಕ್ಕೆ ಪೂರಕವಾಗಿ ಶೈಕ್ಷಣಿಕ ಮತ್ತು ವೈಯಕ್ತಿಕ ಗುಣಮಟ್ಟದ ವೃದ್ಧಿಗೆ ಸಹಾಯವಾಗುತ್ತದೆ. ಮಕ್ಕಳಿಗೆ ಯಾವುದೇ ರೀತಿಯ ಒತ್ತಡ ಮತ್ತು ಸೀಮಿತತೆ ಮಾಡದೆ ಎಲ್ಲಾ ಸಾಹಿತ್ಯವನ್ನು ಒಟ್ಟಾರೆ ಅರ್ಥೈಸಿಕೊಳ್ಳಲು ಸಹಕರಿಸಬೇಕಾದ ಅಗತ್ಯವಿದೆ ಅಲ್ಲವೆ?