ಬೀದಿ ಹೋಟೇಲವೊಂದರಲ್ಲಿ ಭಿಕ್ಷುಕನೊಬ್ಬ ಒಂದು ಪತ್ರಿಕೆ ಹಿಡಿದು ಹ್ಯಾಪಿ ಬರ್ತಡೇ ಟು ಯೂ ಹಾಡು ಹೇಳುತ್ತ ಘಾಡವಾಗಿ ಏನೊ ಓದುವಂತ ದೃಶ್ಯವಿತ್ತು . ಸಮೀಪ ಹೋಗಿ ನೋಡಿದರೆ ಆತ ಓದುತ್ತಿದ್ದದ್ದು ಐದನೆ ಪುಣ್ಯಸ್ಮರಣೆಯ ಭಾವಚಿತ್ರ . ನಾನು ಸ್ವಲ್ಪ ಹತ್ತಿರ ಹೋಗಿ ಪತ್ರಿಕೆ ಕಸಿದು ಕೊಳ್ಳಲು ಪ್ರಯತ್ನಿಸಿದರೆ , ಆತ ಕೋಪ ಬಂದವನಂತಾಗಿ ತನ್ನ ಒಡಲಾಳದ ವಿಷಯ ಯಾರ ಪರಿವೆಯಿಲ್ಲದೆ ಹೇಳಿಕೊಳ್ಳುತ್ತಾನೆ. ಆ ಭಾವಚಿತ್ರಕ್ಕು ತನಗೂ ಇರುವ ಸಂಬಂದವನ್ನು ಬಿಚ್ಚಿ ಹೇಳುತ್ತಾನೆ . ಈತನ ಹೆಸರು ಗೋಪಾಲ ಸುಂದರ ಮೈಕಟ್ಟು ನಿಲುವು ಬಾಹು ಸತತ ವ್ಯಾಯಾಮ ಮಾಡಿ ಮನೆಯ ಖಾರಪುಡಿ ರೊಟ್ಟಿ ತಿಂದು ಗಟ್ಟಿಮುಟ್ಟಾಗಿ ಇದ್ದ ಆತನ ದೇಹ ಆಕರ್ಶಕವಾಗಿತ್ತು ಕಾಲೇಜು ಕನ್ನೆಯರಿಗೆಲ್ಲ ಕನಸಿನ ರಾಜಕುಮಾರ ನಂತಿದ್ದ .
0 Comments
ಅತಿಯಾದ ಶ್ರೀಮಂತಿಕೆಯು ಮಾರಕವಾಗುತ್ತದೆಯೆ? ಎಂಬ ಪ್ರಶ್ನೆ ಬರುವುದು ಗೊತ್ತೆ ಇರಲಿಲ್ಲಾ ಈ ಪ್ರಶ್ನೆಗೆ ಉತ್ತರ ಸಿಕ್ಕದ್ದು ಮೊನ್ನೆ ನನ್ನ ಗೆಳೆಯನ ಚಿಕ್ಕಮ್ಮನನ್ನು ಬೇಟಿ ಮಾಡಿದಾಗ ನನ್ನ ಗೆಳೆಯ ಅಂದು ಕರೆಮಾಡಿ ಹೇಳಿದ ನಮ್ಮ ಚಿಕ್ಕಮ್ಮಳಿಗೆ ಬಹಳ ಆರಾಮಾವಿಲ್ಲಾ ಬೇಟಿ ಮಾಡಿಕೊಂಡು ಬರೋಣ ಎಂದ. ಯಾರು? ಎಂದು ಕೇಳಿದಾಗ ನಾನು ನೀನು ಈಗೊಮ್ಮೆ ಹೋಗಿದ್ದೇವಲ್ಲ ಆ ಶ್ರೀಮಂತರ ಮನೆಗೆ ಎಂದ ಆಗಬಹುದು ಎಂದು ಒಪ್ಪಿಕೊಂಡೆ.
ವಯಸ್ಸಿಗೆ ಬಂದವರು, ಪ್ರೀತಿ ಪ್ರೇಮದ ಬಲೆಗೆ ಬೀಳುವುದು ಸಹಜ, ಆದರೆ ನಮ್ಮ ಯುವಜನತೆ ಈ ಪ್ರೀತಿಗೆ ಬೀಳುವ ಮುನ್ನ ಕೊಂಚ ಯೋಚಿಸಿಲ್ಲಾ. ಎಂಬುವುದು ನಿಮಗೆ ಮುಂದಿನ ಓದಿನಿಂದ ತಿಳಿಯುತ್ತದೆ. “ ಪ್ರೀತಿಲಿ ಬಿಳುವುದು ಮಾಮೂಲಿ ಮಗಾ, ಆದರೆ ಅದರಲ್ಲಿ ಒಂದಸಲ ಬಿದ್ದರೆ ಏಳಕ್ಕೆ ಆಗಲ್ಲಾ. ನೋಡು. ನಮ್ಮ ವಿಶುನ ಗತಿ ಏನಾಗಿದೆ ಅಂತಾ " ಹೀಗೆ ಮಾತಾಡತ್ತಾ ಗೆಳೆಯರಾದ ವಿಶ್ವ , ರಾಘು,ಪ್ರೀತಿ ಹರಟೆ ಹೊಡಿಯುತ್ತಾ ಸರಕಾರಿ ಕಾಲೇಜಿನ ಕ್ಯಾಂಪಸ್ ನಲ್ಲಿ ನಿಂತಿದ್ದರು. ವಿಶ್ವನ ಮುಖದಲ್ಲಿ ಪ್ರೀತಿ ಕಳೊದುಕೊಂಡ ಛಾಯೆಯ ಜೊತೆಗೆ ಪರೀಕ್ಷೆಯಲ್ಲಿ ಫೇಲ್ ಆದ ಒಂದು ಕುರುಹು ಹೊಮ್ಮುತಿತ್ತು . ಆಗ ಆ ಲವ್ ಮಾಡಿದ ಮಾಹಾತ್ಮ ಹೇಳಿದ್ದ ಈ ಕಥೆ ಅವನ ಮಾತಲ್ಲೆ ಕೇಳಿ " ಅಮ್ಮ ಲೇಟ್ ಆಗುತ್ತಿದೆ ಬೇಗಾ ಟಿಫನ್ ತಾ ಅಮ್ಮ ಶಾಲೆಗೆ ತಡಮಾಡಿ ಹೋದರೆ ಮೇಸ್ಟ್ರು ಬೈತಾರೆ "
ಅಂದು ರಾತ್ರಿ ಹತ್ತು ಗಂಟೆಯ ಸಮಯವಾಗಿತ್ತು. ಬಸವ ಎಕ್ಸ್ ಪ್ರೆಸ್ ರೈಲಿನಲ್ಲಿ. ನಾನು ನನ್ನ ಆಸನದ ಮೇಲೆ ಇನ್ನೆನು ಮಲಗಬೇಕು ಅಂತಾ ಯೋಚಿಸುತ್ತಿದ್ದೆ . ಆಗ ಇಷ್ಟುಹೊತ್ತು ಮಾತಾಡದೆ ಸುಮ್ಮನೆ ಕುಳಿತಿರುವ ನನ್ನ ಎದುರಿನ ಯುವಕನೊಬ್ಬ ನಿದ್ದೆ ಬಂತಾ ಸರ್ ಅಂದಾ ಅದಕ್ಕೆ ನಾನು ಇಲ್ಲಾ ರಾತ್ರಿ ಆಯಿತಲ್ಲಾ ಮಲಗಬೇಕು ಅಂತಾ ಮಲಗತಿದ್ದೀನಿ. ಅಂದೆ. ಓ ಒಳ್ಳೆ ಜೊಕ್ ಮಾಡತ್ತಿರಾ ಸರ್ ಅಂದ. ನಂತರ ಸ್ವಲ್ಪ ಹೊತ್ತಿನ ನಂತರ ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳತೊಡಗಿದ ಅವನ ಮಾತಿನ ಶೈಲಿ ನೋಡಿದರೆ ಆತನಲ್ಲಿ ಯಾವುದೋ ಒಂದು ತನ್ನ ಅಳಲಿದೆ ಅದನ್ನು ಯಾರಿಗೆ ಹೇಳಲಿ ಎನ್ನುವ ಕುತುಹಲದಿಂದ ಕಾಯುತ್ತಿದ್ದಂತೆ ನನಗೆ ಭಾಸವಾಯಿತು. ಆಗ ನಾನು ಅವನೊಂದಿಗೆ ಮಾತನಾಡಲು ಪ್ರಾರಂಭಿಸಿದೆ ನನ್ನ ಬಗ್ಗೆ ಕೇಳಿದ ನಾನು ನನ್ನ ಜೀವನ ಕಥೆ ಬಿಚ್ಚಿಟ್ಟೆ , ನಾನು ಒಬ್ಬ ಲೇಖಕ ಎಂಬ ಮಾತು ಅರ್ಥವಾದಮೇಲೆಯೆ ಆತ ತನ್ನ ಜೀವನದ ಒಂದು ವಿಚಿತ್ರ ಕಥೆಯನ್ನ ಹೇಳಿದ ಅದನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಕಾಗೆ ಹಾಗೂ ನವಿಲು ಮಾತನಾಡುತ್ತ ಕುಳಿತವು. ಆಗ ಕಾಗೆ ಹೇಳಿತು ಗೆಳೆಯ ನಾನು ಹಿಂದಿನ ಜನ್ಮದಲ್ಲಿ ಬಹಳ ಪುಣ್ಯ ಮಾಡಿದ್ದೀನಿ ಅನಿಸುತ್ತೆ ನನಗೆ ನಿನ್ನಂತಹ ಸುಂದರನ ಗೆಳೆತನವಾಯಿತು. ಅದು ಪ್ರೀತಿಯಾಗಿ ತಿರುಗಿತು ನಾನು ತುಂಬಾ ಕಪ್ಪು ಹಾಗೂ ಕುರುಪಿ ನಿನ್ನಂತಹ ಬಣ್ಣದ ನವಿಲರಾಜ ನನಗೆ ಸಿಕ್ಕಿದ್ದು ಪುಣ್ಯವೆ ಸರಿ ಅಲ್ಲವೆ ? ಆಗ ನವಿಲು ನವಿರಾಗಿ ಹೇಳಿತು ಹಾಗೆಲ್ಲಾ ಹೇಳಬಾರದು ಪ್ರೀಯೆ ಈ ಭೂಮಿ ತಾಯಿ ಕಪ್ಪು ,ಹಾಗಂತ ಅವಳನ್ನು ಮರೆತರೆ, ಜರಿದರೆ ನಾವೆಲ್ಲಾ ಮಣ್ಣು ತಿನ್ನೊಕ್ಕು ಸಿಗೊದಿಲ್ಲಾ ಹಾಗೇ ನಾವು ಈ ಪ್ರೀತಿಯಲ್ಲಿ ಜಾತಿ, ಮತ , ಪಂಥ , ವಯಸ್ಸು , ಹಾಗೂ ಬಣ್ಣ ಮೊದಲು ಎಣಿಸಬಾರದು ಪ್ರೀತಿ ಎಲ್ಲಿ ಯಾವಾಗ ಹೇಗೆ ಹುಟ್ಟುತ್ತೊ ಗೊತ್ತಿಲ್ಲಾ ಅದಕ್ಕಾಗಿ ನೀನು ಹೀಗೆ ಮಾತು ಆಡುವುದು ಬಿಡು ಎಂದಿತು .
|
ಇಲ್ಲಿಯವರೆಗೆ...
October 2023
"
|