ಇತಿಹಾಸದ ಕೆಲವು ವರ್ಷಗಳ ಹಿಂದೆ, ನಮ್ಮ ದೇಶದಲ್ಲಿ ಒಬ್ಬ ಸಾಧು ಹೇಳುತ್ತಿದ್ದನಂತೆ, ನಮ್ಮ ದೇಶ ಅಭಿವೃದ್ಧಿ ಹೊಂದಬೇಕಾದರೆ ನಮ್ಮ ಎಲ್ಲ ಮಕ್ಕಳ ಕೈಯಲ್ಲಿ ತ್ರೀಶೂಲ ಕೊಡಿ ಎಂದು ಆದರೆ ಅದೇ ಇತಿಹಾಸದಲ್ಲಿ, ನಮ್ಮ ಭಾರತ ಭೂಮಿಯ ಸರ್ವಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರಾದ ಮಾನ್ಯ ಡಾ.ಅಂಬೇಡ್ಡಕರ್ ಹೇಳುತ್ತಿದ್ದರು “ನಮ್ಮ ದೇಶ ಅಭಿವೃದ್ಧಿಯಾಗಬೇಕಾದರೆ, ನಮ್ಮ ಎಲ್ಲ ಮಕ್ಕಳ ಕೈಯಲ್ಲಿ ಪೆನ್ನು ಕೊಡಬೇಕು ಎಂದು”.
“ದೇಶ ನನಗೇನು ಮಾಡಿದೇ ಎನ್ನುವುದ್ದಕ್ಕಿಂತ, ದೇಶಕ್ಕಾಗಿ ನಾನೇನು ಮಾಡಿದೇನು”ಎಂಬುವುದು ಬಹು ಮುಖ್ಯವಾದ ವಿಷಯ. ತಾಯಿ ಹಾಗೂ ತಾಯಿನಾಡು ಸ್ವರ್ಗಕ್ಕಿಂತ ಮಿಗಿಲಾದವು ಎನ್ನುವ ಹಲವು ವಿಷಯಗಳು ಇತಿಹಾಸದಲ್ಲಿ ಬಂದು ಹೋಗುವುದರ ಜೊತೆಗೆ ಪ್ರಸ್ತುತ ಜೀವನದಲ್ಲಿ ಹಾಸುಹೊಕ್ಕಾಗಿವೆ.
ಭಾರತ ದೇಶದ ಅಸ್ಪ್ರಶ್ಯತೆಯ ಅಂಧಕಾರ ನಿರ್ಮೂಲನೆ ಮಾಡಿದ ಇವರು ಅದರ ಆದಿ ಅಂತ್ಯವನ್ನು ಅಭಿವೃದ್ಧಿಯಾಗಿ ಮಾರ್ಪಡಿಸಿದರು. ಅಂಬೇಡ್ಕರ್ ತಾವೊಬ್ಬರೇ ಬಡವರ ಅನ್ಯಾಯದ ವಿರುದ್ಧ ಹೋರಾಡಿ ನಾವು ಬಯಸಿದಿ ಬದುಕು ನಮಗೆ ನೀಡಿದರು. ನಮ್ಮ ಆಕ್ರಂದನವ ನೋಡಿ ಅದಕ್ಕೆ ಸೂಕ್ತವಾದ ಮಾರ್ಗವ ನೀಡಿದರು. ನಮಗೆಲ್ಲ ಶಿಕ್ಷಣವೆಂಬ ಸೂತ್ರವ ನೀಡಿದರು. ನಮ್ಮನ್ನು ತಮ್ಮ ಮಮತೆಯ ಮಡಿಲನ್ನು ನೀಡಿ, ನಮ್ಮ ಬದುಕನ್ನು ಅರ್ಥವಿಲ್ಲದೇ ಕಳೆಯಲಾರದಂತೆ ಮಾಡಿದರು. ಅದಕ್ಕೊಂದು ಸೂಕ್ತವಾದ ಪಲ್ಲವಿಯ ಹಾಡಿ ಸರ್ಕಾರದ ಕೈಗೆ ಸಂವಿಧಾನವ ನೀಡಿದರು. ಬಡವರ ಬದುಕು ಬಂಗಾರವಾಗಿಸಿದರು. ಹಸಿರ ನೆಲವೊಂದು ನೋಡಿ ಉಸಿರು ಕೋಡುವ ಬೀಜವ ಈ ದೇಶದಲ್ಲಿ ಬಿತ್ತಿದರು. ಬಡವರು ಎಂದರೆ ಭಯವಿಲ್ಲದ ಆ ಸಮಯದಲ್ಲಿ ನಮ್ಮೆಲ್ಲರ ಬದುಕು ಉಜ್ವಲ ಮಾಡಿದವರು ಮಾನ್ಯ ಅಂಬೇಡ್ಕರ್.
ಭಾರತದ ಸರ್ವಶ್ರೇಷ್ಠ ನಾಯಕರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಒಬ್ಬರು. ಅವರೊಬ್ಬ ವ್ಯಕ್ತಿಯಾಗಿರದೆ ಶಕ್ತಿಯಾಗಿದ್ದರು. ಶೋಷಿತರ ಮಹಿಳೆಯರ ಹಾಗೂ ದುಡಿಯುವ ವರ್ಗದ ದನಿಯಾಗಿ ಬಂದ ಕ್ರಾಂತಿ ಸೂರ್ಯರಾಗಿದ್ದರು. ಇಲ್ಲಿಯ ಜಾತಿ ಪದ್ಧತಿಯ ವಿರುದ್ಧ ವೈಜ್ಞಾನಿಕ, ವೈಚಾರಿಕ ನೆಲೆಯಲ್ಲಿ ಹೋರಾಟ ಮಾಡಿ ಕೋಟ್ಯಾನುಕೋಟಿ ದಮನಿತರ ಬಾಳಲ್ಲಿ ಬೆಳಕನ್ನು ಮೂಡಿಸಿದರು. ಶತ-ಶತಮಾನಗಳಿಂದ ಅಕ್ಷರ ವಂಚಿತ ಸಮುದಾಯಕ್ಕೆ ಅಕ್ಷರ ದೊರಕಿಸಿಕೊಡುವುದರ ಮೂಲಕ ಅವರಲ್ಲಿ ಅರಿವನ್ನು, ಸ್ವಾಭಿಮಾನವನ್ನು ಮೂಡಿಸಿದರು. ಹೀಗಾಗಿ ಆಧುನಿಕ ಯುಗದಲ್ಲಿ ದಮನಿತ ಲೋಕದ ಅಕ್ಷರವಂತ ಪ್ರಜೆ ಅಂಬೇಡ್ಕರ್ ಪ್ರೇರಣೆ ಪ್ರಭಾವಕ್ಕೆ ಒಳಗಾಗಿದ್ದಾನೆ. ಹಾಗೆ ಒಳಗಾಗುವುದರ ಮೂಲಕ ಅನೇಕ ಸಂಕೇತಗಳ ನೆಲೆಯಿಂದ ಹೊರ ಬರುತ್ತಿದ್ದಾನೆ. ಅಂತಹ ಸಮುದಾಯಗಳಲ್ಲಿ ದಲಿತ-ಅಸ್ಪøಶ್ಯರು ಅಂಬೇಡ್ಕರ್ ಚಿಂತನೆಗೆ ನೇರವಾಗಿ ಪ್ರಭಾವಕ್ಕೊಳಗಾಗಿದ್ದಾನೆ. ಇಂದಿನ ಯುವಕ ಹಾಗೂ ಮಕ್ಕಳು.
ಅಂಬೇಡ್ಕರ್ ಚಿಂತನೆ, ಹೋರಾಟ ಮತ್ತು ಅವರ ಧಾರ್ಮಿಕ ನೆಲೆಗೆ ಮಾರುಹೋಗಿ ಇಂದಿನ ದಲಿತರ ಬದುಕಿನಲ್ಲಿ ಬೆಳಕು ತರಬೇಕಾದರೆ ಅಂಬೇಡ್ಕರ್ ಅವರೇ ಕಾರಣ ಎಂಬುದನ್ನು ಬೆಂಕಿಯಲ್ಲಿ ಅರಳಿದ ಕ್ರಾಂತಿ ಸೂರ್ಯ ಇವರೇ ಅಂಬೇಡ್ಕರ್. ಅಂಬೇಡ್ಕರ್ ಅವರ ಚಿಂತನೆಯ ಮೂಲಕವೇ ಬದ್ಧ ಆ ಮೂಲಕ ಪ್ರತಿ ಮುಂತಾದವರು ದಲಿತರಿಗೆ ದಕ್ಕದ್ದು ಎನ್ನುವುದು ಅಂಬೇಡ್ಕರ್ ಅವರ ಶ್ರಮದ ಫಲದಿಂದ ಈ ದೇಶಕ್ಕೆ ಜಾತ್ಯಾತೀತ ಸಂವಿಧಾನ ದೊರೆಯಿತು. ಬೆಂಕಿಯಲ್ಲಿ ಅರಳಿದ ಕ್ರಾಂತಿ ಸೂರ್ಯ ಸ್ವಾಭಿಮಾನ, ಭ್ರಾತೃತ್ವದ ನೆಲೆಗೆ ಅಂಬೇಡ್ಕರ್ರ ಜೀವನ ಬಡವರ ಕೈ ಹಿಡಿಯುತ್ತವೆ. ಶೋಷತರ ನೆಲೆ ಬದಲಾಗಬೇಕು ಎನ್ನುವುದು ಅಂಬೇಡ್ಕರರ ನಿಲುವಿತ್ತು.
ಪರಮ ಪೂಜ್ಯನೀಯ ಡಾ|| ಭೀಮರಾವ್ ಬಾಬಾ ಸಾಹೇಬ ಅಂಬೇಡ್ಕರ ಅವರ ಹುಟ್ಟು ಹೋರಾಟ ಸವಿಯಾದ ನೆನಹು ಈ ದಿನಗಳು ನೆನಪಿಸುತ್ತವೆ. ದೀನರು, ದಲಿತರು, ಬಡವರು, ಹಿಂದೂಳಿದ ವರ್ಗದವರಿಗೆ ಅಧಿಕಾರ ಕೊಟ್ಟ, ಉದ್ಯೋಗ ಕೊಟ್ಟು, ವಿದ್ಯೆ ಕೊಟ್ಟು, ಆದರ್ಶ ಕೊಟ್ಟ ಭಾರತದ ಸಂವಿಧಾನವನ್ನೇ ಕೊಟ್ಟ ಪೂಜ್ಯ ಬಾಬಾ ಸಾಹೇಬರವರ ಸಮಗ್ರ ಜೀವನ ಚರಿತ್ರೆಯನ್ನು ನಮ್ಮ ಮಕ್ಕಳಿಗೆ ಸಧ್ಯ ಪ್ರಸ್ತುತವೆನಿಸುತ್ತದೆ. ಅಂಬೇಡ್ಕರ್ ಎಲ್ಲ ಜನಾಂಗದ ಕೂಗಾಗಿ ಹೊರ ಬಂದರು.
ಬುದ್ದನ ನಂತರ ಭರತಖಂಡ ಕಂಡ ಏಕೈಕ ಮಹಾನವ್ಯಕ್ತಿ ಎಂದರೆ ‘ಅಂಬೇಡ್ಕರ’ ಆಧುನಿಕ ಭಾರತದ ನಿರ್ಮಾಪಕರಲ್ಲಿ ಒಬ್ಬರು ಆದ ಅವರ ಬದುಕು ಮತ್ತು ಸಂದೇಶಗಳೇ ಭಾರತೀಯರಿಗೆ ದಾರಿದೀಪ.
ಅಂಬೇಡ್ಕರರ ಚಿಂತನೆ ಹಾಗೂ ನಿದರ್ಶನಗಳು ಅವರ ನಿರರ್ಗಗಳ ಅಭಿವ್ಯಕ್ತಿಗೆ ಸಾಕ್ಷಿಯಾಗಿದೆ. ಸರ್ವರ ಪ್ರೇಮ, ಸತತ ಅಧ್ಯಯನ, ನಿಜವಾದ ವಿನಯ, ಸಾಮಾಜಿಕ ಚಿಂತನೆ ಅಂಬೇಡ್ಕರರ ಮನದೊಳಗೆ ಮನೆ ಮಾಡಿತ್ತು ಎಂಬುವುದು ಇತಿಹಾಸದ ಪುಟದಿಂದ ತಿಳಿದು ಬರುತ್ತದೆ. ಅವರೊಬ್ಬ ಅಪ್ಪಟ ದೇಶಪ್ರೇಮಿ ಅಕ್ಷರಗಳ ಮೂಲಕ ಸಾಕ್ಷರ ಲೋಕ ಸೃಷ್ಠಿಸಿ ದೇಶದ ಅನೇಕ ಬಡವರ ಕಣ್ಮಣಿಯಾಗಿ ಹೊರಹೊಮ್ಮಿದರು. ನಿರರಕ್ಷರ ಲೋಕವನ್ನು ಬದಿಗೊತ್ತಿ ಅಕ್ಷರ ಲೋಕವೇ ಸೃಷ್ಠಿಸಿದ ಶ್ರೇಯಸ್ಸು ಅಂಬೇಡ್ಕರರಿಗೆ ಸಲ್ಲುತ್ತದೆ. ದೇಶದಲ್ಲಿ ಇಂದು ಪ್ರತಿಯೊಂದು ಉತ್ತಮ ಹಾಗೂ ಉನ್ನತ ಶಿಕ್ಷಣ ಪಡೆದು ವೈದ್ಯ, ಇಂಜಿನಿಯರ ಆಗಬೇಕಾದರೆ ಅದರ ಹಿಂದೆ ಅಂಬೇಡ್ಕರರ ಸಾರ್ಥಕ ಶ್ರಮ ಅಡಗಿದೆ. ಅಂಬೇಡ್ಕರರು ಪ್ರಸ್ತುತ ನಮ್ಮ ಸುತ್ತಮುತ್ತಲಿನ ಅನೇಕ ಶಾಲೆ ಕಲಿಯುವ ಮಕ್ಕಳ ರೂಪದಲ್ಲಿ ಜೀವಂತವಿದ್ದಾರೆ. ನಾವೊಮ್ಮೆ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ಅವರು ನಮ್ಮ ಕಣ್ಣುಗಳಿಗೆ ಕಾಣುತ್ತಾರೆ. ನೀವು ನಿಜವಾದ ಅಂಬೇಡ್ಕರ್ರ ನೋಡಬೇಕೆ ಹಾಗಾದರೆ ನಿಮ್ಮ ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಿ ನಮ್ಮ ಪ್ರಸ್ತುತ ಅಂಬೇಡ್ಕರರ ಜೀವನ ಉಳಿಸಿ.