ಮಾನಸಿಕ ಖಿನ್ನತೆ ಎಂದರೇನು?
ಇದು ಕೂಡಾ ಒಂದು ರೋಗವೆಂದೆ ಪರಿಗಣಿಸಲಾಗುತ್ತಿದೆ. ಇದು ಯಾರಿಗೆ ಬೇಕಾದರು ಬರಬಹುದು. ವ್ಯಕ್ತಿಯ ದೌರ್ಬಲ್ಯ, ಶಾಪ, ಮಂತ್ರ ಮಾಟಗಳಿಂದ ಬರುವುದಲ್ಲಾ, ಮನುಷ್ಯ ಹಲವು ಯೋಚನೆಗಳ ಗೊಂದಲದಲ್ಲಿ ಬಿದ್ದಾಗ, ಸರಿಯೋ ತಪ್ಪೋ ಎನ್ನುವ ಯೋಚನೆಯಲ್ಲಿ ಕಾಲ ಕಳೆಯುವಾಗ, ತನ್ನವರು ಎನ್ನುವರು ತನಗೆ ಮಾನಸಿಕವಾಗಿ ಕುರುಕುಳ ಕೊಟ್ಟಾಗ, ತನಗೆ ಹತ್ತಿರವಾದ ವಸ್ತುವೊಂದು ತನ್ನಿಂದ ದೂರ ಹೋದಾಗ ಉಂಟಾಗುವ ಮಾನಸಿಕ ಸ್ಥಿತಿಗೆ ಮಾನಸಿಕ ಖಿನ್ನತೆ ಎನ್ನುವರು.
ಇದರ ಮೂಲ
ಇದು ಶರೀರದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಶಾರೀರಿಕ ರೋಗವಲಾ,್ಲ ಇದು ಮಾನಸಿಕ ರೋಗವಾಗಿದೆ. ಬಾಹ್ಯಾ ಭಾಗಗಳು ಕಾಣುವಂತಹ ರೀತಿಯಲ್ಲಿ ಈ ರೋಗವು ಅಲ್ಲಾ ಮನುಷ್ಯನ ಒಳಮನಸ್ಸಿಗೆ ತಾಕುವ ರೋಗವಿದು. ಮನುಷ್ಯನ ಅಜ್ಞಾನ , ಮೂಢನಂಬಿಕೆ, ಅವಿಶ್ವಾಸ , ಭಯ, ಉದ್ವೇಗ ಇವೆಲ್ಲವು ಒಳಗೊಂಡಿದೆ. ಅನೇಕ ವರ್ಷಗಳಿಂದ ಈ ರೀತಿ ಇದ್ದು ಈಗೀಗ ಹೊಸ ರೂಪ ಪಡೆಯುತ್ತಿದೆ. ಈ ರೋಗದ ರೋಗಿಗಳು ಹೆಚ್ಚಾಗುತ್ತಿದ್ದಾರೆ. ಜೊತೆಗೆ ಈ ರೋಗಕ್ಕೆ ಹಲವು ರೀತಿಯಲ್ಲಿ ವ್ಯಾಖ್ಯಾನ ಮಾಡಲಾಗಿದೆ.
ವ್ಯಕ್ತಿಯ ಲಕ್ಷಣಗಳು
ಸದಾ ಚಿಂತೆಯಿಂದ ಇರುವುದು, ಕೆಲಸವಿದ್ದರು ಅದರ ಕಡೆಗೆ ಗಮನವಿಲ್ಲದಿರುವುದು, ಯಾವುದೊ ಕಳಿದ ವಸ್ತುವಿದೆಯೊ ಅದರ ಬಗ್ಗೆಯೆ ಯೋಚಿಸುವುದು, ನೇರ ದೃಷ್ಠಿ, ಆಗಾಗ ತಟ್ಟನೆ ಹೆಗರಿಬೀಳುವುದು, ಕನಸ್ಸಿನಲ್ಲಿ ಮಾತನಾಡುವುದು, ಒಮ್ಮೊಮ್ಮೆ ಚೀರಾಡುವುದು, ಇರುವ ವಿಷಯ ತನ್ನಲ್ಲಿಯೆ ಅಮಿತುಕೊಳ್ಳುವುದು, ಮಾತು ಕಡಿಮೆ ಆಡುವುದು, ಒಳಗೊಳಗೆ ದ್ವೇಷಿಸುವುದು, ಕಣ್ಣು ಕೆಂಪಗೆ ಮಾಡುವುದು, ಆಗಾಗ ಕೈ ಸನ್ನೆಗಳ ಮೂಲಕ ತಾನೆ ಮಾತನಾಡಿಕೊಳ್ಳುವುದು, ಎದುರಿನ ವ್ಯಕ್ತಿಗಳ ಮೇಲೆ ವಿನಾಕಾರಣ ಕೋಪಿಸಿಕೊಳ್ಳುವುದು, ಹೀಗೆ ಹಲವು ಲಕ್ಷಣಗಳನ್ನು ಹೊಂದಿರುವ ಈ ವ್ಯಕ್ತಿ ದೂರದಲ್ಲಿ ಕುಳಿತು ತನ್ನಷ್ಟಕ್ಕೆ ಅಥವಾ ಬೇರೆಯವರೊಂದಿಗೆ ಮಾತಾಡಿಕೊಳ್ಳುವ ಪರಿ ಬೇರೆಯವರಿಗೆ ಅನಿಸಿದರೆ, ಯಾರೊ ಅಪರಿಚತ ವ್ಯಕ್ತಿಯೊಂದಿಗೆ ಮಾತನಾಡುವ ಲೆಕ್ಕಚಾರ ಅವನಿಗೆ ಇರುತ್ತದೆ. ಒಳಗೊಳಗೆ ಏನೊ ತುಡಿತ , ಮಿಡಿತ ಯಾರಿಗಾಗಿಯೊ ಕಾಯುವುದು ಹೀಗೆ ಮುಂತಾದ ರೀತಿಯಲ್ಲಿ ಲಕ್ಷಣಗಳು ಹೊಂದಿರುತ್ತಾರೆ.
ಜೀವನದ ಜಂಜಾಟ, ಅತಿಯಾದ ತಾಂತ್ರಿಕತೆಗೆ ಅವಲಂಬನೆ, ಆಹಾರದಲ್ಲಿ ಏರುಪೇರು, ಕುಟುಂಬ ಕಲಹ, ಆಡಂಬರದ ಪ್ರದರ್ಶನ, ಸಾಲಶೂಲ, ಬಡ್ಡಿ ಚೆಕ್ರ ಬಡ್ಡಿಯ ಒತ್ತಡ, ಜೀವನ ರೀತಿಯಲ್ಲಿ ಅಸಮತೋಲನ, ಪ್ರೀಯಿಂದ ಮೋಸ ಹೋಗುವುದು, ಪರಿಕ್ಷೆಯಲ್ಲಿ ಫೇಲ್ , ಹೀಗೆ ಜೀವನದ ಹಲವು ಒತ್ತಡಗಳಿಂದ ಮನುಷ್ಯ ಮಾನಸಿಕ ಖಿನ್ನತೆಗೆ ಒಳಗಾಗುತ್ತಾನೆ.
ಮಾನಸಿಕ ಖಿನ್ನತೆಯಿಂದ ಹೊರಬರಲು ಕೆಲವು ಉಪಾಯಗಳು
ಮಕ್ಕಳ ಪಾಲನೆ ಪೋಷಣೆ ಮುಕ್ತ ವಾತವರಣದಲ್ಲಿ ಸೂಕ್ತವಾಗಿ ನಡೆಯಲಿ, ಪೌಷ್ಠಿಕ ಆಹಾರ, ಒಳ್ಳೆಯ ವಾತವರಣ, ಕುಟುಂಬದವರ ಸರಿ ಪ್ರಮಾಣದ ಪ್ರೀತಿ, ಶಿಸ್ತು, ಆಸರೆ, ಮಾರ್ಗದರ್ಶನ, ಸಂಯಮ, ಅಭದ್ರತೆಯ ಬಾವನೆ ಬಾರದಂತೆ ನೋಡಿಕೊಳ್ಳಿ, ಮಗುವಿನ ನೈತಿಕವಾಗಿ, ಸಾಮಾಜಿಕ, ಭಾವನಾತ್ಮಕ, ಶಿಕ್ಷಣ, ಪಠ್ಯ ಹಾಗೂ ಪಠ್ಯೇತರ, ಸ್ವಾತಂತ್ರ ಎಲ್ಲದ್ದಕ್ಕು ಸಮಾನವಾದ ಅವಕಾಶ ಕಲ್ಪಿಸಿಕೊಡಿ.
ವಿಷಯಗಳ ಆಯ್ಕೆಯಲ್ಲಿ ಮಾರ್ಗದರ್ಶನ ಮಾಡಿ ಅಷೆ,್ಟ ನಿರ್ಣಯ ಮಾಡಬೇಡಿ, ವಿಜ್ಞಾನ ಆರಿಸಿಕೊ, ವೈದ್ಯನೆ ಆಗು ಎನ್ನುವುದಕ್ಕಿಂತ ಆ ಹುದ್ದೆಯಲ್ಲಿ ಕೋರ್ಸಿನಲ್ಲಿರುವ ಲಾಭಾಂಶಗಳ ಮನವರಿಗೆ ಮಾಡಿ ಅಷ್ಟೆ ಒತ್ತಡಬೇಡ.
ಮಾನಸಿಕವಾಗಿ ನೆಮ್ಮದಿಯಿಲ್ಲದಿದ್ದಾಗ ಹಲವು ದುಷ್ಚಟಗಳಿಗೆ ಬಲಿಯಾಗುವುದು ಸಾಮಾನ್ಯ ಉದಾ: ಕುಡಿತ, ಮಾದಕ ವಸ್ತುಗಳ ಸೇವನೆ ಇತ್ಯಾದಿ. ಇವುಗಳಿಂದ ದೂರ ಇದ್ದಷ್ಟು ಒಳ್ಳೆಯದು ಅದರ ಬದಲು ನಿಮಗೆ ಇಷ್ಟದ ಕೆಲಸದಲ್ಲಿ ತೊಡಗುವುದು ಸೂಕ್ತ .
ದೈಹಿಕವಾಗಿ ದೇಹದ ಯಾವುದೆ ಭಾಗಗಳಿಗೆ ಯಾವುದೆ ರೀತಿಯ ನೋವು ಆಗದಂತೆ ಎಚ್ಚರವಹಿಸಿ, ಕಾರಣ ಒಂದು ಚಿಕ್ಕ ನೋವು ಕೂಡಾ ಈ ಸಮಯದಲ್ಲಿ ದೊಡ್ಡದು ಅನಿಸಬಹುದು.
ನಿಮ್ಮ ಜೀವನದ ಆಸೆ ಆಕಾಂಷೆಗಳನ್ನು ಗುರಿ ಉದ್ದೇಶಗಳನ್ನು ಆಗಾಗ ನೆನಪಿಗೆ ತಂದುಕೊಳ್ಳಿ ಚಿಕ್ಕಂದಿನಲ್ಲಿ ನೀವು ನಾನು ಇದನ್ನೆ ಆಗುವೆ ಎಂದು ಅಂದುಕೊಂಡಿರುವ ವಿಷಯ ಆಗಿರಬಹುದು, ಇನ್ನು ಮುಂದಿನ ವರ್ಷಗಳಲ್ಲಿ ನಾನು ಏನೆಲ್ಲಾ ಮಾಡಬಹುದು ಈ ಸಮಾಜಕ್ಕೆ ಏನು ಕೊಡುಗೆ ಕೊಡಬಹುದು ಎಂಬ ಕಲ್ಪನೆ ಆಗಾಗ ಮಾಡಿಕೊಳ್ಳಿ,
ನಿಮ್ಮ ಸಾಮಥ್ರ್ಯ, ನಿಮ್ಮ ಮನಸ್ಸಿನ ಚೌಕಟ್ಟಿನೊಳಗೆ ಏನು ಸಾಧ್ಯವೊ ಅದನ್ನು ನಿರ್ವಹಿಸಿ, ಇರುವುದರಲ್ಲಿ ತೃಪ್ತಿ ಪಡುವ ಮನಸ್ಸು ಮಾಡಿ.
ನಿಮ್ಮವರಿಗಾಗಿ ನೀವು ಮಾಡಬೇಕಾದ ಕೆಲವು ಕರ್ತವ್ಯಗಳು, ಕೆಲಸಗಳು, ಜವಾಬ್ದಾರಿಗಳು, ಸಾಧಿಸಬೇಕಾದ ಸಾಧನೆಗಳು ನೆನಪು ಮಾಡಿಕೊಂಡು ಸಮಯ ಪಾಲನೆ ಮಾಡಿ ಆಗಾಗ ಆಯಾ ಕೆಲಸಗಳು ಮಾಡುತ್ತಾ ಮುಂದೆ ಸಾಗಿರಿ.
ದಿನ ನಿತ್ಯದ ಒಂದು ವೇಳಾಪಟ್ಟಿ ತಯಾರಿಸಿಕೊಳ್ಳಿ, ಯಾವ ಸಮಯದಲ್ಲಿ ಏನು ಮಾಡಬೇಕು, ಜೊತೆಗೆ ವ್ಯಾಯಾಮ , ಬೆಳೆಗ್ಗೆ ಮತ್ತು ಸಾಯಂಕಾಲ ನಿಯಮಿತವಾಗಿ ಮಾಡಿ, ಸಂಗೀತ, ಓದು, ಬರಹ, ಯೋಗ ಧ್ಯಾನ, ಆಧ್ಯಾತ್ಮಿಕ ಚಟುವಟಿಕೆ, ಬಂಧು ಮಿತ್ರರೊಡನೆ ಒಡನಾಟ, ಸ್ಥಾನ ಬದಲಾವಣೆ, ಪ್ರವಾಸ ಇತ್ಯಾದಿ ಹಮ್ಮಿಕೊಳ್ಳಿ,
ನಿರ್ಧಾರಗಳನ್ನು ತೆಗದುಕೊಳ್ಳುವಾಗ ಹಿರಿಯರ ಗೆಳೆಯರ ಮನೆಯವರ ಸಹಾಯ ಪಡೆಯಿರಿ, ಯಾವಗಲು ಒಂಟಿಯಾಗಿರಬೇಡಿರಿ, ಇನ್ನೊಬ್ಬರೊಂದಿಗೆ ನಿಮ್ಮ ಅನುಭವ ಅನಿಸಿಕೆ ಮುಕ್ತವಾಗಿ ಹಂಚಿಕೊಳ್ಳಿ, ಮನಸ್ಸಿನ ಭಾರ ಕಡಿಮೆ ಮಾಡಿಕೊಳ್ಳಿ. ವಸ್ತುನಿಷ್ಠ ಕೆಲಸಗಳಿಗೆ ಹೆಚ್ಚು ಅವಕಾಶ ಕೊಡಿ. ಆಗುವುದೆಲ್ಲಾ ಒಳ್ಳೆಯದ್ದಕ್ಕೆ ನಾನು ಸಮಸ್ಯೆ ಬಗೆಹರಿಸಲು ಪ್ರತಯತ್ನಿಸುವೆ ಎನ್ನುವ ಮಾತು ಅರ್ಥಮಾಡಿಕೊಳ್ಳಿ,
ನಿಮ್ಮ ಜ್ಞಾನ ತಿಳುವಳಿಕೆ ಹೆಚ್ಚಿಸುವ ಕಡೆಗೆ ಗಮನಕೊಡಿ, ಹೊಸ ಹೊಸ ಕೌಶಲ್ಯಗಳನ್ನು ಕಲಿಯಿರಿ, ಸದಾ ಕ್ರೀಯಾಶೀಲವಾಗಿರುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ, ಯಾವಾಗಲು ಬಿಜಿಯಾಗಿ ಇರುವ ಕೆಲಸದಲ್ಲಿ ಆಸಕ್ತಯಿಂದ ತೊಡಗಿಸಿಕೊಳ್ಳಿ
ಮೂಢನಂಬಿಕೆ, ಕಂದಾಚಾರ, ಹಿಂಸೆ, ಅನಿಷ್ಠ ಪದ್ಧತಿಗಳು, ದೆವ್ವ , ಭಯ ಜಿಗುಪ್ಸೆ ಇತ್ಯಾದಿಗಳನ್ನು ಬಿಟ್ಟು ಬಿಡಿ ನೈಜತೆಗೆ ಒತ್ತುಕೊಡಿ. ಜೀವನ ಎನ್ನುವುದು ನಮ್ಮ ಊರಿನ ರಸ್ತೆ ಇದ್ದ ಹಾಗೆ ತಗ್ಗು ಉಬ್ಬುಗಳು ಇರುತ್ತವೆ. ಅವುಗಳಿಗೆ ಹೆದರಿ ಕೂರುವುದು ಎಷ್ಟು ಸರಿ ಎನ್ನುವ ಮಾತು ನೆನಪಿಸಿಕೊಳ್ಳಿ.
ಈ ಕಷ್ಟ ನಷ್ಟ ಸ್ವಲ್ಪ ದಿನಗಳು ಮಾತ್ರ ಎಲ್ಲಾ ಸಮಸ್ಯೆಗೂ ಪರಿಹಾರ ಇದ್ದಂತೆ ನನ್ನ ಸಮಸ್ಯೆಗೂ ಪರಿಹಾರವಿದೆ ಎಂದು ತಿಳಿಯಿರಿ ಧೈರ್ಯವಾಗಿರಿ.
ಇಂತಹ ರೋಗಿಗಳಿಗಾಗಿಯೆ ವಿಶ್ವ ಸಂಸ್ಥೆಯು ಕೆಲವು ಜೀವನ ಕೌಶಲ್ಯಗಳನ್ನು ಶಿಫಾರಸ್ಸು ಮಾಡಿದೆ ಅವುಗಳನ್ನು ಅನುಸರಿಸಿದರೆ ಇನ್ನು ಉತ್ತಮ .
- ವಿಶ್ಲೇಷಣಾತ್ಮಕ ಚಿಂತನೆ,
- ವಿಮರ್ಷಾತ್ಮಕ ಚಿಂತನೆ
- ಸಮಸ್ಯೆಯ ವಿಶ್ಲೇಷಣೆ ಮತ್ತು ನಿವಾರಣೆ
- ಸರಿ ನಿರ್ಧಾರ ಸರಿಯಾದ ಸಮಯಕ್ಕೆ ತೆಗೆದುಕೊಳ್ಳುವುದು.
- ಉತ್ತಮ ಸಂವಹನ ಕೌಶಲ್ಯ
- ಇತರರೊಡನೆ ಸ್ನೇಹ ಸಂಬಂಧ ಇಟ್ಟುಕೊಳ್ಳುವುದು.
- ತನ್ನ ಬಲಾಬಲಗಳನ್ನು ಅರೆತುಕೊಂಡು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದು.
- ಇತರರ ನೋವು ನಲಿವುಗಳನ್ನು ಅವರ ಮಟ್ಟದಲ್ಲಿಯೆ ಅರ್ಥಮಾಡಿಕೊಂಡು ಸ್ಪಂದಿಸುವುದು.
- ಭಾವದ್ವೇಗಕ್ಕೆ ಒಳಗಾಗಬಾರದು.
- ಮಾನಸಿಕ ಒತ್ತಡ ನಿಭಾಯಿಸುವುದು ಸದಾ ನೆಮ್ಮದಿಯಿಂದ ಇರುವುದು.
“ಮಾನವ ಜನ್ಮ ಮರಳಿ ಸಿಗುವುದು ದುರ್ಲಬ” ಎನ್ನುವ ಜಾನಪದದ ಹಾಡಿನಂತೆ ಸಿಕ್ಕ ಮಾನವ ಜನ್ಮಕ್ಕೆ ಕೆಲವು ಕಾರಣದಿಂದ ಕೊಳ್ಳಿಯಿಡುವ ಕೆಲಸ ಮಾಡಬೇಡಿ. ಸಮಸ್ಯೆಯ ಆಳವನ್ನು ಅರಿಯಿರಿ ಅದಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಿ ಮುಂದೆ ಒಳ್ಳೆಯ ಬದುಕು ಇದೆ ಎನ್ನುವ ಮಾತು ಮರೆಯದಿರಿ. “ಕಷ್ಟನಷ್ಟಗಳು ಮನುಷ್ಯನಿಗೆ ಬಾರದೆ, ಮರಕ್ಕೆ ಬರುವವೆ” ಎನ್ನುವ ಮಾತು ಅರಿಯಿರಿ ಜೀವನ ಕಾಪಾಡಿಕೊಳ್ಳಿ ಉಳಿಸಿಕೊಳ್ಳಿ. ಜಿಗುಪ್ಸೆಯನ್ನು ಮರೆತು ಹೊಸದೊಂದು ಬದುಕು ಪ್ರಾರಂಭ ಮಾಡಿ. ಎಲ್ಲವು ಒಳ್ಳಯದಾಗುತ್ತದೆ. ನನ್ನ ಆ ಬಾಲ್ಯದ ಗೆಳತಿಗೆ ಈ ಮಾತುಗಳು ತಲುಪಿ ಅವಳು ಜೀವನದಲ್ಲಿ ಒಂದು ಒಳ್ಳೆಯ ನಿರ್ಧಾರ ತೆಗೆದುಕೊಂಡು ಬದುಕಲಿ. ಇಂತಹ ಅದೆಷ್ಟೊ ಮಹಿಳೆ ಹಾಗೂ ಪುರುಷರು ಈ ಸ್ಥಿತಿಯಲ್ಲಿದ್ದಾರೆ. ಅವರಿಗೆಲ್ಲಾ ಈ ಹುಡುಗನ ಮಾತುಗಳು ದಾರಿದೀಪವಾಗಲಿ ಎನ್ನುವುದಷ್ಟೆ ನನ್ನ ವಿನಂತಿ. ಏಕೆಂದರೆ ನಮ್ಮ ದೇಶ ಬದುಕು ಕೊಡುವ, ಬದುಕಲು ಬಿಡುವ ದೊಡ್ಡ ದೇಶ ಇಂತಹ ಪುಣ್ಯಭೂಮಿಯಲ್ಲಿ ನಾವು ಹುಟ್ಟಿದ್ದೆ ಪರಮಪುಣ್ಯ ಅಲ್ಲವಾ?.