| ಬದುಕಿನ ಯಶಸ್ಸು, ಸಂತೋಷ ಮತ್ತು ಸಂತೃಪ್ತಿಯ ಹುಡುಕಾಟದಲ್ಲಿ ಬಡೆದಾಡಿದ, ವಿಫಲವಾದ ಮತ್ತು ಯಶಸ್ಸಿನತ್ತ ಮುಂದೆ ಸಾಗಿದ ಸಾವಿರಾರು ಯುವಕರಂತೆ ಕೆ.ಎಂ.ವಿಶ್ವನಾಥ ಮರತೂರ ಅವರು ಕೂಡ ಒಬ್ಬರು. ಹಿಂದೂಳಿದ ಮಧ್ಯಮ ವರ್ಗದ ಕಡು ಬಡತನದ ಕುಟುಂಬದಿಂದ ಅವರೂ ಸಹ ಅಸ್ಪಷ್ಟವಾದ ಕನಸುಗಳನ್ನು ಹೊಂದಿದ್ದರು ಮತ್ತು ಜೀವನದಲ್ಲಿ ಗುರಿಗಳ ಅಸ್ಪಷ್ಟ ದೃಷ್ಟಿಯನ್ನು ಹೊಂದಿದ್ದರು. ಅವರು ತಾವು ಅನುಭವಿಸಿದ, ಕಂಡುಹಿಡಿದ ಅನುಭವಗಳನ್ನು ಅವರ ಯಶಸ್ಸಿನ ರಹಸ್ಯವನ್ನು ಇಡೀ ಪ್ರಪಂಚದೊಂದಿಗೆ ಹಂಚಿಕೊಕೊಳ್ಳುತ್ತಾ ಜನರಿಗೆ ಸಹಾಯ ಮಾಡುವ ಮತ್ತು ಸಮಾಜಕ್ಕೆ ಏನಾದರೂ ಒಳ್ಳೆಯದನ್ನು ಮಾಡುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈ ಪ್ರಜ್ಞಾ, ಪ್ರೇರಣೆ ಮತ್ತು ಪ್ರೋತ್ಸಾಹ ಜನರ ಜೀವನವನ್ನು ಬದಲಿಸುವತ್ತ ಒಂದು ದಿಟ್ಟ ಹೆಜ್ಜೆಯಂದು ಬಲವಾಗಿ ನಂಬಿದ್ದಾರೆ. ಸಮಾಜದ ಧನಾತ್ಮಕ ಅಂಶಗಳನ್ನು ಅನ್ವೇಷಿಸುತ್ತಾ, ಅದನ್ನು ಮಕ್ಕಳು, ಯುವಕರು, ಪಾಲಕರು, ಶಿಕ್ಷಕರು, ಸರಕಾರೇತರ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಇತರೆ ಎಲ್ಲರೊಂದಿಗೆ ಹಂಚಿಕೊಳ್ಳುತ್ತಾರೆ. ಕೆ.ಎಂ.ವಿಶ್ವನಾಥ ಇವರಿಂದ ಸಮಾಜದ ಅನೇಕರು ಸ್ಪೂರ್ತಿ ಪಡೆಯುತ್ತಿದ್ದಾರೆ. |
ಮೂಲತ: ಕರ್ನಾಟಕದ ಕಲಬುರಗಿ ಜಿಲ್ಲೆಯ ಶಾಹಾಬಾದ್ ತಾಲೂಕಿನ ಮರತೂರ ಎಂಬ ಪುಟ್ಟ ಗ್ರಾಮದವರು. ಓದಿದ್ದು ಎಂ.ಎಸ್.ಸಿ. ಬಿ.ಈಡಿ. ಕಲಬುರಗಿ ವಿಶ್ವವಿದ್ಯಾಲಯ. ಓದು, ಬರವಣಿಗೆ, ನಿರೂಪಣೆ ಇತ್ಯಾದಿ ರೂಢಿಸಿಕೊಂಡ ಹವ್ಯಾಸಗಳು. ಪ್ರಸ್ತುತ 12 ಸಾಹಿತ್ಯ ಪುಸ್ತಕಗಳು, 05 ಪಠ್ಯ ಪುಸ್ತಕಗಳು (ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳು), 01 ಸಂಪಾದಿತ ಕೃತಿ, ಹಲವಾರು ಅಂಕಣಗಳು ಬರೆದಿದ್ದಾರೆ. ಸದ್ಯ “ಪ್ರಜ್ಞಾ” ಮತ್ತು “ಪ್ರೇರಣಾ” ಎಂಬ ಎರಡು ಅಂಕಣಗಳನ್ನು ಬರೆಯುತ್ತಿದ್ದಾರೆ.
ಶ್ರೀಯುತರು ಕಳೆದ ಹದಿನೈದು ವರ್ಷಗಳಿಂದ ಅಭಿವೃದ್ಧಿ ಕ್ಷೇತ್ರದಲ್ಲಿ ವಿವಿಧ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಎಂಟು ಶೈಕ್ಷಣಿಕ ಜಿಲ್ಲೆಗಳಲ್ಲಿನ ಸರಕಾರಿ ಶಾಲೆಗಳು, ಶಿಕ್ಷಣ ಇಲಾಖೆ, ಶಿಕ್ಷಕರು, ಮಕ್ಕಳು, ಪಾಲಕರು, ಸಮುದಾಯದೊಂದಿಗೆ ಅತ್ಯಂತ ಹತ್ತಿರದಿಂದ ಕೆಲಸ ಮಾಡಿದ ಅನುಭವವಿದೆ. ಮಾನವ ಅಭಿವೃದ್ಧಿ ಸೂಚ್ಯಾಂಕ್ ಹಾಗೂ ಭಾರತೀಯ ಭಾಷಾ ಅಧ್ಯಯನದಲ್ಲಿ ಸದಸ್ಯನಾಗಿ ಕೆಲಸ ಮಾಡಿದ್ದಾರೆ. ಮಾರ್ಗದರ್ಶಿ ಸಂಸ್ಥೆ ಕಲಬುರಗಿ, ಕಲಿಕೆ-ಟಾಟಾ ಟ್ರಸ್ಟ್ ಯಾದಗಿರಿ, ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ಬೀದರ, ಬಿಜಾಪೂರ, ಲರ್ನಿಂಗ್ ಲಿಂಕ್ಸ್ ಫೌಂಡೇಷನ್ ಕಲಬುರಗಿ, ಡಿ.ಎಸ್.ಇ.ಆರ್.ಟಿ. -ಸ್ಟರ್ ಎಜುಕೇಶನ್, ಬೆಂಗಳೂರು - ಕಲಬುರಗಿ, ದಿ/ನಡ್ಜ್ ಇನ್ಸ್ ಟ್ಯೂಟ್ ಬೆಂಗಳೂರು-ಕಲಬುರಗಿ ಇಂತಹ ಸಂಸ್ಥೆಗಳಲ್ಲಿ ನಿರ್ಧಾರಿತ ಸ್ಥರದಲ್ಲಿ ಕೆಲಸ ಮಾಡಿದ್ದಾರೆ.
ಪ್ರಸ್ತುತ ಇವರು, ದಿ/ನಡ್ಜ್ ಸಂಸ್ಥೆ ಬೆಂಗಳೂರು ಕರ್ನಾಟಕ ರಾಜ್ಯ ಮುಖ್ಯಸ್ಥರಾಗಿ, ಕಡುಬಡತನ ನಿರ್ಮೂಲನಾ ಜೀವನೋಪಾಯ ಯೋಜನೆಯಲ್ಲಿ ಕಲಬುರಗಿ, ಬೀದರ ಜಿಲ್ಲೆಗಳಲ್ಲಿ , ಒಟ್ಟು 36 ಸದಸ್ಯರ ತಂಡದೊಂದಿದೆ, 1180 ಮಹಿಳಾ ಫಲಾನುಭವಿಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ. ತಮ್ಮ ಆಸಕ್ತಿಯ ಅಭಿವೃದ್ಧಿ ಕ್ಷೇತ್ರಕ್ಕೆ ತಮಗಿರುವ ಪರಿಮಿತಿಯೊಳಗೆ, ಮಕ್ಕಳು, ಶಿಕ್ಷಕರು ಹಾಗೂ ಸಮುದಾಯಕ್ಕಾಗಿ ಕೆಲವು ಚಾರಿಟಿಯಂತಹ ಮಹತ್ವದ ಕೆಲಸವನ್ನು ಮಾಡತ್ತಿದ್ದಾರೆ.
ಇವರ ಸಾಮಾಜಿಕ, ಶೈಕ್ಷಣಿಕ, ಅಭಿವೃದ್ಧಿ ಕ್ಷೇತ್ರದ ಕಾರ್ಯವನ್ನು ಗಮನಿಸಿ ಅನೇಕ ಸಂಸ್ಥೆಗಳು ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಮೈಸೂರಿನ ಗ್ರಾಮಾಂತರ ಬುದ್ಧಿಜೀವಿಗಳ ಬಳಗ ರಾಜ್ಯಮಟ್ಟದ “ರಾಷ್ಟ್ರಕವಿ ಕುವೆಂಪು ಕಾವ್ಯ ಪ್ರಶಸ್ತಿ” ರಂಗಶ್ರೀ ಕಲಾ ಸಂಸ್ಥೆ “ರಂಗಶ್ರೀ ಕಾವ್ಯ ಸೌರಭ” ಪ್ರಶಸ್ತಿ, ಲೋಕಮಂಗಲ ಸಾರ್ವಜನಿಕ ವಾಚನಾಲಯ ವತಿಯಿಂದ “ಕವಿ ಕಾಳಿದಾಸ” ಪ್ರಶಸ್ತಿ, “ತಾಲೂಕು ಸಾಹಿತ್ಯ ಪರಿಷತ್ತಿನ “ರಾಜ್ಯೋತ್ಸವ ಪ್ರಶಸ್ತಿ” ಸಿದ್ಧಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯ ಶ್ರೀ ಶಿವಕುಮಾರ ಸ್ವಾಮಿಯವರ ಹುಟ್ಟು ಹಬ್ಬದ ನೆನಪಿನ “ಸಿದ್ಧ ಸಾಧಕ” ಪ್ರಶಸ್ತಿ, ಶೈಕ್ಷಣಿಕ ಸಾಧನೆಗಾಗಿ “ನ್ಯಾಶನಲ್ ಎಜುಕೇಶನ್ ಬ್ರಿಲಿಯಂಟ್ ಅವಾರ್ಡ್” ಹೀಗೆ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಗೌತಮ ಪ್ರಕಾಶನ ಕೊಟ್ಟೂರು ರಾಜ್ಯ ಮಟ್ಟದ ಸಾಹಿತ್ಯ ಸ್ಪರ್ಧೆ 2013 ರಲ್ಲಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿರುತ್ತಾರೆ. ಎ.ಬಿ.ಎಚ್.ಆಲ್ ಇಂಡಿಯಾ ಲೇವಲ್ ಸಾಮಾನ್ಯ ಜ್ಞಾನ ಪರೀಕ್ಷೆ 1999-2000 ರಲ್ಲಿ ಪ್ರಥಮ ಸ್ಥಾನದಲ್ಲಿ ಪಾಸಾಗಿರುತ್ತಾರೆ. ಜಿಲ್ಲಾಡಿಳಿತ ಕಲಬುರಗಿ ವತಿಯಿಂದ ಹೈದ್ರಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ನಿಮಿತ್ಯ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಸಾಮಾಧಾನಕರ ಬಹುಮಾನ ಪಡೆದಿರುತ್ತಾರೆ. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರ್ಗಿ ಇವರು ಹಮ್ಮಿಕೊಂಡಿದ್ದ ಡಾ. ರಾಜ್ ಕುಮಾರ ಮತ್ತು ಭಾರತೀಯ ಸಿನಿಮಾ ರಾಷ್ಟ್ರೀಯ ವಿಚಾರ ಸಂಕೀರ್ಣದಲ್ಲಿ ಪ್ರಬಂಧ ಮಂಡನೆ ಮಾಡಿದ್ದಾರೆ. ಧಾರವಾಡದ ಪ್ರಭುದ್ಧ ಭಾರತ ನಿರ್ಮಾಣ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ “ಭಾರತದ ಭವಿಷ್ಯ ಮತ್ತು ಸಂವಿಧಾನ” 2015-16 ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರ ಇವರಿಂದ "ಜಾಗತೀಕರಣ & ದಲಿತರ ಸಂಕಷ್ಟಗಳು ಒಂದು ಒಳನೋಟ" ಎಂಬ ವಿಷಯದ ಕುರಿತು ಫೆಲೋಶಿಪ್ ಪ್ರಬಂಧ ಬರೆದಿರುತ್ತಾರೆ. 2015-16 ನೇಯ ಸಾಲಿನ ವಿಶ್ವ ಅಕ್ಕ ಕನ್ನಡ ಸಮ್ಮೇಳನದ ಅಂತರಾಷ್ಟ್ರೀಯ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಶ್ರೀಯುತರು ಕಳೆದ ಹದಿನೈದು ವರ್ಷಗಳಿಂದ ಅಭಿವೃದ್ಧಿ ಕ್ಷೇತ್ರದಲ್ಲಿ ವಿವಿಧ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಎಂಟು ಶೈಕ್ಷಣಿಕ ಜಿಲ್ಲೆಗಳಲ್ಲಿನ ಸರಕಾರಿ ಶಾಲೆಗಳು, ಶಿಕ್ಷಣ ಇಲಾಖೆ, ಶಿಕ್ಷಕರು, ಮಕ್ಕಳು, ಪಾಲಕರು, ಸಮುದಾಯದೊಂದಿಗೆ ಅತ್ಯಂತ ಹತ್ತಿರದಿಂದ ಕೆಲಸ ಮಾಡಿದ ಅನುಭವವಿದೆ. ಮಾನವ ಅಭಿವೃದ್ಧಿ ಸೂಚ್ಯಾಂಕ್ ಹಾಗೂ ಭಾರತೀಯ ಭಾಷಾ ಅಧ್ಯಯನದಲ್ಲಿ ಸದಸ್ಯನಾಗಿ ಕೆಲಸ ಮಾಡಿದ್ದಾರೆ. ಮಾರ್ಗದರ್ಶಿ ಸಂಸ್ಥೆ ಕಲಬುರಗಿ, ಕಲಿಕೆ-ಟಾಟಾ ಟ್ರಸ್ಟ್ ಯಾದಗಿರಿ, ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ಬೀದರ, ಬಿಜಾಪೂರ, ಲರ್ನಿಂಗ್ ಲಿಂಕ್ಸ್ ಫೌಂಡೇಷನ್ ಕಲಬುರಗಿ, ಡಿ.ಎಸ್.ಇ.ಆರ್.ಟಿ. -ಸ್ಟರ್ ಎಜುಕೇಶನ್, ಬೆಂಗಳೂರು - ಕಲಬುರಗಿ, ದಿ/ನಡ್ಜ್ ಇನ್ಸ್ ಟ್ಯೂಟ್ ಬೆಂಗಳೂರು-ಕಲಬುರಗಿ ಇಂತಹ ಸಂಸ್ಥೆಗಳಲ್ಲಿ ನಿರ್ಧಾರಿತ ಸ್ಥರದಲ್ಲಿ ಕೆಲಸ ಮಾಡಿದ್ದಾರೆ.
ಪ್ರಸ್ತುತ ಇವರು, ದಿ/ನಡ್ಜ್ ಸಂಸ್ಥೆ ಬೆಂಗಳೂರು ಕರ್ನಾಟಕ ರಾಜ್ಯ ಮುಖ್ಯಸ್ಥರಾಗಿ, ಕಡುಬಡತನ ನಿರ್ಮೂಲನಾ ಜೀವನೋಪಾಯ ಯೋಜನೆಯಲ್ಲಿ ಕಲಬುರಗಿ, ಬೀದರ ಜಿಲ್ಲೆಗಳಲ್ಲಿ , ಒಟ್ಟು 36 ಸದಸ್ಯರ ತಂಡದೊಂದಿದೆ, 1180 ಮಹಿಳಾ ಫಲಾನುಭವಿಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ. ತಮ್ಮ ಆಸಕ್ತಿಯ ಅಭಿವೃದ್ಧಿ ಕ್ಷೇತ್ರಕ್ಕೆ ತಮಗಿರುವ ಪರಿಮಿತಿಯೊಳಗೆ, ಮಕ್ಕಳು, ಶಿಕ್ಷಕರು ಹಾಗೂ ಸಮುದಾಯಕ್ಕಾಗಿ ಕೆಲವು ಚಾರಿಟಿಯಂತಹ ಮಹತ್ವದ ಕೆಲಸವನ್ನು ಮಾಡತ್ತಿದ್ದಾರೆ.
ಇವರ ಸಾಮಾಜಿಕ, ಶೈಕ್ಷಣಿಕ, ಅಭಿವೃದ್ಧಿ ಕ್ಷೇತ್ರದ ಕಾರ್ಯವನ್ನು ಗಮನಿಸಿ ಅನೇಕ ಸಂಸ್ಥೆಗಳು ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಮೈಸೂರಿನ ಗ್ರಾಮಾಂತರ ಬುದ್ಧಿಜೀವಿಗಳ ಬಳಗ ರಾಜ್ಯಮಟ್ಟದ “ರಾಷ್ಟ್ರಕವಿ ಕುವೆಂಪು ಕಾವ್ಯ ಪ್ರಶಸ್ತಿ” ರಂಗಶ್ರೀ ಕಲಾ ಸಂಸ್ಥೆ “ರಂಗಶ್ರೀ ಕಾವ್ಯ ಸೌರಭ” ಪ್ರಶಸ್ತಿ, ಲೋಕಮಂಗಲ ಸಾರ್ವಜನಿಕ ವಾಚನಾಲಯ ವತಿಯಿಂದ “ಕವಿ ಕಾಳಿದಾಸ” ಪ್ರಶಸ್ತಿ, “ತಾಲೂಕು ಸಾಹಿತ್ಯ ಪರಿಷತ್ತಿನ “ರಾಜ್ಯೋತ್ಸವ ಪ್ರಶಸ್ತಿ” ಸಿದ್ಧಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯ ಶ್ರೀ ಶಿವಕುಮಾರ ಸ್ವಾಮಿಯವರ ಹುಟ್ಟು ಹಬ್ಬದ ನೆನಪಿನ “ಸಿದ್ಧ ಸಾಧಕ” ಪ್ರಶಸ್ತಿ, ಶೈಕ್ಷಣಿಕ ಸಾಧನೆಗಾಗಿ “ನ್ಯಾಶನಲ್ ಎಜುಕೇಶನ್ ಬ್ರಿಲಿಯಂಟ್ ಅವಾರ್ಡ್” ಹೀಗೆ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಗೌತಮ ಪ್ರಕಾಶನ ಕೊಟ್ಟೂರು ರಾಜ್ಯ ಮಟ್ಟದ ಸಾಹಿತ್ಯ ಸ್ಪರ್ಧೆ 2013 ರಲ್ಲಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿರುತ್ತಾರೆ. ಎ.ಬಿ.ಎಚ್.ಆಲ್ ಇಂಡಿಯಾ ಲೇವಲ್ ಸಾಮಾನ್ಯ ಜ್ಞಾನ ಪರೀಕ್ಷೆ 1999-2000 ರಲ್ಲಿ ಪ್ರಥಮ ಸ್ಥಾನದಲ್ಲಿ ಪಾಸಾಗಿರುತ್ತಾರೆ. ಜಿಲ್ಲಾಡಿಳಿತ ಕಲಬುರಗಿ ವತಿಯಿಂದ ಹೈದ್ರಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ನಿಮಿತ್ಯ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಸಾಮಾಧಾನಕರ ಬಹುಮಾನ ಪಡೆದಿರುತ್ತಾರೆ. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರ್ಗಿ ಇವರು ಹಮ್ಮಿಕೊಂಡಿದ್ದ ಡಾ. ರಾಜ್ ಕುಮಾರ ಮತ್ತು ಭಾರತೀಯ ಸಿನಿಮಾ ರಾಷ್ಟ್ರೀಯ ವಿಚಾರ ಸಂಕೀರ್ಣದಲ್ಲಿ ಪ್ರಬಂಧ ಮಂಡನೆ ಮಾಡಿದ್ದಾರೆ. ಧಾರವಾಡದ ಪ್ರಭುದ್ಧ ಭಾರತ ನಿರ್ಮಾಣ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ “ಭಾರತದ ಭವಿಷ್ಯ ಮತ್ತು ಸಂವಿಧಾನ” 2015-16 ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರ ಇವರಿಂದ "ಜಾಗತೀಕರಣ & ದಲಿತರ ಸಂಕಷ್ಟಗಳು ಒಂದು ಒಳನೋಟ" ಎಂಬ ವಿಷಯದ ಕುರಿತು ಫೆಲೋಶಿಪ್ ಪ್ರಬಂಧ ಬರೆದಿರುತ್ತಾರೆ. 2015-16 ನೇಯ ಸಾಲಿನ ವಿಶ್ವ ಅಕ್ಕ ಕನ್ನಡ ಸಮ್ಮೇಳನದ ಅಂತರಾಷ್ಟ್ರೀಯ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.