ದೇವರು ಮೊದಲೋ ಮನುಷ್ಯ ಮೊದಲೋ? ಇಂತಹದೊಂದು ಪ್ರಶ್ನೆಯನ್ನಿಟ್ಟುಕೊಂಡು ತಿಳಿದ ಮಾಹಾನ್ ವ್ಯಕ್ತಿಗಳ ಬಳಿ ಮಾತನಾಡಿದರೆ ವಾಸ್ತವ ತೆರೆದುಕೊಳ್ಳುತ್ತಾ ಹೋಗುತ್ತದೆ. ಈ ನಾಡಿನಲ್ಲಿ ದಿನಗಳು ಕಳೆದಂತೆ ತಾಂತ್ರಿಕತೆ ಬೆಳೆದಂತೆ ಹಲವು ಅನಿಷ್ಠ ಪದ್ಧತಿಗಳು ಮರೆಯಾಗಬೇಕು ಆದರೆ ಈ ದೇವರುಗಳ ವಿಚಾರದಲ್ಲಿ ನಾವೆಲ್ಲರೂ ಇನ್ನಷ್ಟು ಮೂಢರಾಗುತ್ತಿರುವುದು ದುರಂತದ ದಾರಿಗೆ ಹಿಡಿದ ಕನ್ನಡಿಯಾಗಿದೆ. ನಾವೆಲ್ಲರೂ ಮನುಷ್ಯರು ದಿನ ಕಳೆದಂತೆ ಮೃಗಗಳಾಗುತ್ತಿದ್ದೇವೆ. ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ದೇವರ ಹೆಸರಿನಲ್ಲಿ ಪ್ರಜಗಳ ಬದುಕಿನಲ್ಲಿ ದೈವಿ ಆಟವಾಡುತ್ತಿದ್ದಾರೆ. ಬೆಳೆದು ನಿಂತ ತಾಂತ್ರಿಕ ಯುಗದಲ್ಲಿಯೂ ದೇವರ ನಂಬುಗೆಯ ಮೇಲೆ ದಲಿತರನ್ನು ಶೋಷಣೆಗೊಳಪಡಿಸುತ್ತಿರುವುದು ಈ ದೇಶದಲ್ಲಿ ಮಡ್ಡುಗಟ್ಟಿರುವ ಮೂಢನಂಬಿಕೆಗೆ ಹಿಡಿದ ಕೈಗನ್ನಡಿಯಾಗಿದೆ.
0 Comments
|
ಇಲ್ಲಿಯವರೆಗೆ...
October 2023
"
|