ಕರ್ನಾಟಕವೆಂಬ ಕರುಣೆಯ ಮಣ್ಣಿನಲ್ಲಿ, ಇದೀಗ ಆತ್ಮಹತ್ಯೆಗಳ ಪರ್ವಕಾಲ ಪ್ರಾರಂಭವಾಗಿದೆ. ಕಳೆದ ಹಲವು ದಿನಗಳಿಂದ ಈ ರಾಜ್ಯದಲ್ಲಿ ಲೆಕ್ಕಕ್ಕೆ ನಿಲುಕದಷ್ಟು ರೈತರು, ಪ್ರಜೆಗಳು, ಅಧಿಕಾರಿಗಳು, ಮಕ್ಕಳು ಈ ಆತ್ಮಹತ್ಯೆಯಂಬ ಸುಳಿಯಲ್ಲಿ ಬಿದ್ದು, ಬಂಗಾರದಂತಹ ಬದುಕಿಗೆ ಕೊಳ್ಳಿಯಿಟ್ಟುಕೊಳ್ಳುವ ಕಾರ್ಯಕೈಗೊಂಡಿದ್ದಾರೆ. ಮನುಷ್ಯ ಹಲವು ಪ್ರಾಣಿಗಳಲ್ಲಿ ಶ್ರೇಷ್ಠತೆಯನ್ನು ಮೆರೆದಿದ್ದಾನೆ. ತನ್ನ ಮುದ್ಧಿವಂತಿಕೆಯಿಂದಲೆ ಎಲ್ಲಾ ಪ್ರಾಣಿಗಳನ್ನು ಪಳಗಿಸುವ ಶಕ್ತಿ ಹೊಂದಿದ್ದಾನೆ. ಮನುಷ್ಯನಲ್ಲಿರುವ ಈ ಮೆದುಳಿನ ಶಕ್ತಿಯಿಂದಲೆ ನಾವಿಂದು ಅನ್ಯ ಗ್ರಹಗಳಲ್ಲಿ ಮನೆ ಕಟ್ಟುವ ಕನಸನ್ನು ನೆನಸು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ.
0 Comments
ಕರ್ನಾಟಕ ರಾಜ್ಯ ರಾಜಕಾರಣ ರಾಷ್ಟ್ರಮಟ್ಟದಲ್ಲಿ ಅತ್ಯಂತ ಕುತುಹಲ ಮೂಡಿಸಿದೆ. ಮತಗಳ ಎಣಿಕೆ ಪ್ರಾರಂಭವಾಗಿ, ಫಲಿತಾಂಶ ಹೊರಬೀಳುತ್ತಿದ್ದಂತೆ ಕೇಂದ್ರದ ಹೈಕಮಾಂಡ್ ದೇವೆಗೌಡರಿಗೆ ಕರೆ ಮಾಡುತ್ತೆ, ಇತ್ತ ತಂದೆ ಮಗನಿಂದ ಮೈತ್ರಿಯ ಬಗ್ಗೆ ಚರ್ಚೆಯಾಗುತ್ತದೆ. ಹಿಂದೆ ಮಾಡಿರುವ ಆರೋಪ ಪತ್ಯಾರೋಪ ಮಾಯವಾಗಿ, ದೋಸ್ತಿ ಸರ್ಕಾರ ರಚಿಸಲು ಮುಂದಾಗುತ್ತಾರೆ. ರಾಜ್ಯದ ರಾಜಕೀಯದಲ್ಲಿ ಇವರ ವರ್ಚಸ್ಸು ಏನು ಎಂಬುವುದು ಎಲ್ಲರಿಗೂ ಅರ್ಥವಾಗುವಂತಹ ವಾಸ್ತವ ನಿರ್ಮಾಣವಾಗುತ್ತದೆ. ಅತೀಹೆಚ್ಚು ಸ್ಥಾನಗಳನ್ನು ಗೆದ್ದವರು ಕೂಡ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವ ವಾತಾವರಣ ನಿರ್ಮಾಣ ಮಾಡಿದ ಶ್ರೇಯಸ್ಸು ಇದೇ ರೈತರ ಮಗನಾದ ದೇವೆಗೌಡರಿಗೆ ಸಲ್ಲುತ್ತದೆ. |
ಇಲ್ಲಿಯವರೆಗೆ...
October 2023
"
|