ಪ್ರಸ್ತುತ ಭಾರತದಲ್ಲಿ ಪ್ರಜಾಪ್ರಭುತ್ವದ ಕಲ್ಪನೆಯನ್ನು ತಿರುವಿ ಹಾಕುತ್ತಿದೆ. ಎಲ್ಲವೂ ಏಕಪಕ್ಷೀಯ ನಿರ್ಧಾರವಾಗುತ್ತಿವೆ. ಇಲ್ಲಿಯವರೆಗಿನ ಅನೇಕ ನಿರ್ಧಾರಗಳು ಬಡವರ ಪಾಲಿಗೆ ಕಾದ ಕಬ್ಬಿಣದ ಅನುಭವ ನೀಡಿವೆ. ಪ್ರಜಾಪ್ರಭುತ್ವದ ಕಲ್ಪನೆಯಲ್ಲಿ ಹಲವು ನಿರ್ಧಾರಗಳು ಬದಲಾಗಿವೆ. ಸರಕಾರಗಳು ದೇಶದ ಅಭಿವೃದ್ಧಿಯತ್ತ ಮನಸ್ಸು ಮಾಡುವುದರ ಜೊತೆಗೆ ಇಲ್ಲಿನ ಗ್ರಾಮಮಟ್ಟದ ಬಡತನವನ್ನು ಬಂಡವಾಳ ಮಾಡಿಕೊಂಡು ದೇಶವನ್ನು ಒಡೆಯುವ ಹುನ್ನಾರ ಮಾಡುತ್ತಿದ್ದಾರೆ. ಧರ್ಮದ ಹೇರಿಕೆಯನ್ನು ಬಲವಾಗಿ ಹೇರುತ್ತಿದ್ದಾರೆ. ಸಮಾನತೆಯೇ ತನ್ನ ಉಸಿರಾಗಿಸುವ ಮೂಲಕ ನಿರ್ಗತಿಕರ ಮೇಲೆತ್ತುವ ಕೆಲಸಗಳನ್ನು ಮಾಡಬೇಕು ಆದರೆ ಕೇಂದ್ರ ಸರಕಾರದ ಅನೇಕ ನೀತಿ ನಿಯಮಗಳು ಭಾರತದ ಬಡವರ ವಿರುದ್ಧವಾಗಿ ಕಾಣುತ್ತಿವೆ. ಇದು ಪ್ರಜಾಪ್ರಭುತ್ವವನ್ನು ಪ್ರಶ್ನಿಸುವಂತೆ ಮಾಡಿರುವ ಬೆಳವಣಿಗೆ ಕಂಡುಬರುತ್ತಿದೆ.
0 Comments
|
ಇಲ್ಲಿಯವರೆಗೆ...
October 2023
"
|