ಭಾರತ ಒಂದು ಬಹು ಪರಂಪರೆಯ ರಾಷ್ಟ್ರ. ಇಲ್ಲಿ ಪ್ರಜಾಪ್ರಭುತ್ವದ ನೆಲೆಯಿದೆ. ಸಾವಿರಾರು ಪವಿತ್ರ ನದಿಗಳ ಸೆಲೆಯಿದೆ. ಹಲವು ಕಲೆಗಳ ಕಲಾತ್ಮಕವಿದೆ. ಹಲವು ಮಾಹಾನ್ ವ್ಯಕ್ತಿಗಳ ಪ್ರಭಾವವಿದೆ. ಇತ್ತೀಚೆಗೆ ನಾವೆಲ್ಲ ಸಂಭ್ರಮದ ಬುದ್ಧ, ಬಸವ & ಅಂಬೇಡ್ಕರ್ ಅವರ ಜನ್ಮ ದಿನಾಚರಣೆಗಳನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿದೇವು. ಅವರ ಗುಣಗಾನ, ಅವರ ಮಾತಿನ ಪಠಣ ಮಾಡಿದೇವು. ಇನ್ನೇನು ಈ ಮೂವರು ಮಾಹಾನ್ ವ್ಯಕ್ತಿಗಳು ನಮ್ಮ ಪಕ್ಕದಲ್ಲಿಯೆ ಇದ್ದಾರೆ ಎಂಬುವಷ್ಟು ಸಂತಸ ನಮ್ಮಲ್ಲಿ ಮನೆ ಮಾಡಿತ್ತು.
ಭಾರತ ಒಂದು ಬಹು ಪರಂಪರೆಯ ರಾಷ್ಟ್ರ. ಇಲ್ಲಿ ಪ್ರಜಾಪ್ರಭುತ್ವದ ನೆಲೆಯಿದೆ. ಸಾವಿರಾರು ಪವಿತ್ರ ನದಿಗಳ ಸೆಲೆಯಿದೆ. ಹಲವು ಕಲೆಗಳ ಕಲಾತ್ಮಕವಿದೆ. ಹಲವು ಮಾಹಾನ್ ವ್ಯಕ್ತಿಗಳ ಪ್ರಭಾವವಿದೆ. ಇತ್ತೀಚೆಗೆ ನಾವೆಲ್ಲ ಸಂಭ್ರಮದ ಬುದ್ಧ, ಬಸವ & ಅಂಬೇಡ್ಕರ್ ಅವರ ಜನ್ಮ ದಿನಾಚರಣೆಗಳನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿದೇವು. ಅವರ ಗುಣಗಾನ, ಅವರ ಮಾತಿನ ಪಠಣ ಮಾಡಿದೇವು. ಇನ್ನೇನು ಈ ಮೂವರು ಮಾಹಾನ್ ವ್ಯಕ್ತಿಗಳು ನಮ್ಮ ಪಕ್ಕದಲ್ಲಿಯೆ ಇದ್ದಾರೆ ಎಂಬುವಷ್ಟು ಸಂತಸ ನಮ್ಮಲ್ಲಿ ಮನೆ ಮಾಡಿತ್ತು.
0 Comments
ಹಸಿವಾದವನಿಗೆ ಗೊತ್ತು ಊಟದ ಅರ್ಥ, ಕಳೆದುಕೊಂಡನಿಗೆ ಗೊತ್ತು ಕಳೆದ ವಸ್ತುವಿನ ಮಹತ್ವ. ನೀವೆಲ್ಲ ನರಗುಂದದ ಸುತ್ತಮುತ್ತಲಿನ ರೈತರ ಪಾಡನ್ನು ಅನುಭವಿಸದ ಹೊರತು ಅದರ ತೀವ್ರತೆ ಅರ್ಥವಾಗುವುದಿಲ್ಲ. ಸಾಮಾನ್ಯವಾಗಿ ಒಂದು ಹೋರಾಟವೆಂದರೆ ಒಂದು ದಿನ, ಎರಡು ದಿನ ಮೂರು ದಿನ ಕೂಡ ಮಾಡಬಹುದು ಆದರೆ ಈ ಬಾರಿ ಅತ್ಯಂತ ಹೆಚ್ಚು ಅಂದ್ರೆ ಮೂರು ನೂರು ದಿನಕ್ಕೆ ಕಾಲಿಟ್ಟ ಕಳಸಾ ಕಿಚ್ಚು ಅಲ್ಲಿನ ಸಮಸ್ಯೆಯ ತೀವ್ರತೆಗೆ ಹಿಡಿದ ಕನ್ನಡಿಯಾಗಿದೆ. ಈ ಕನ್ನಡಿ ಎದುರಿಗೆ ಇದ್ದರು ರಾಜ್ಯ ಮತ್ತು ಕೇಂದ್ರ ಸರಕಾರಗಳು ಮಾತ್ರ ಅಂಗೈ ಹುಣ್ಣಿಗೆ ಕನ್ನಡಿ ಹುಡುಕುವ ಪ್ರಯತ್ನ ಮಾಡುತ್ತಿದ್ದು, ಕಳಸಾ ಕಿಚ್ಚಿನಿಂದ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಇವರಿಗೆ ಎರಡು ಮಕ್ಕಳು, ಚಿಕ್ಕ ಸೂರು, ಸೂರಿನ ಕೆಳಗೆ ಇವರ ಪುಟ್ಟ ಬದುಕು. ಬಡತನ ತಾಂಡವವಾಡುತ್ತಿದೆ. ಮನೆಯ ಹಿರಿಯ ಮಗನ ವಯಸ್ಸು ಏಳು ವರ್ಷ ಅಂದ್ರೆ ಎರಡನೆಯ ತರಗತಿಯಲ್ಲಿ ಓದುತ್ತಿದ್ದಾನೆ. ಇನ್ನುಳಿದ ಒಂದು ಮಗು ಒಂದೆರಡು ವರ್ಷದ್ದು. ಅಣ್ಣನ ಜೊತೆಯಲ್ಲಿಯೆ ಅವನಿಗೆ ಸ್ವರ್ಗ ನರಕವೆಲ್ಲ. ಈ ಮನೆಯ ಹಿರಿಯ ಮಗನ ಕಾಯಕ ದಿನಾಲು ಬೆಳಗ್ಗೆ ಮತ್ತು ಸಂಜೆ ಭೀಕ್ಷೆ ಬೇಡುವುದು ಉಳಿದ ಸಮಯದಲ್ಲಿ ಶಾಲೆಗೆ ಹೋಗುವುದು. ಈ ಮನೆಯ ಯಜಮಾನರು ತಂದೆ ಹಾಗೂ ತಾಯಿ ಆರಾಮವಾಗಿ ಮಗನ ದುಡಿಮೆಯಲ್ಲಿ ದಿನಾಲು ಸರಾಯಿ ಭಟ್ಟಿ ಕುಡಿದು ಸೂರಿನ ಕೆಳಗೆ ನಮಗೆ ಬಡತನವಿದೆಯಂದು ಮಲಗುತ್ತಾರೆ. ಮಾಡಲು ಕೆಲಸವಿಲ್ಲವೆಂದು ಗೋಳಿಡುತ್ತಾರೆ. ``ಗೋಖಲೇ, ನೀನು ಎಲ್ಲರಿಗಿಂತ ಜಾಣ ಹುಡುಗ. ಬಾ, ತರಗತಿಯ ಮೊದಲನೆಯ ಸ್ಥಾನದಲ್ಲಿ ಕುಳಿತುಕೋ.'' ಎಂದರು ಶಿಕ್ಷಕರು. ಹುಡುಗ ನಿಂತಲ್ಲೇ ನಿಂತಿದ್ದ. ಅವನು ಹೆಜ್ಜೆಯನ್ನು ಮುಂದೆ ಇಡಲೇ ಇಲ್ಲ. ಅವನ ಕಣ್ಣುಗಳಲ್ಲಿ ನೀರೂರಿ, ಅವನ ತುಂಬು ಕೆನ್ನೆಗಳ ಮೇಲೆ ಜಾರಿ ಬೀಳುತ್ತಿದ್ದವು. ಅಧ್ಯಾಪಕರು, ಮನೆಯಲ್ಲಿ ಮಾಡಿಕೊಂಡು ಬರಲು ಬಾಲಕರಿಗೆ ಗಣಿತದ ಲೆಕ್ಕವೊಂದನ್ನು ಕೊಟ್ಟಿದ್ದರು. ಅದನ್ನು ಸರಿಯಾಗಿ ಮಾಡಿಕೊಂಡು ಬಂದವನು ಗೋಖಲೆ ಒಬ್ಬನೆ. ಬೇರೆ ಯಾರೂ ಮಾಡಿಯೇ ಇರಲಿಲ್ಲ. ಆದುದರಿಂದಲೇ ಅಧ್ಯಾಪಕರು ತರಗತಿಯಲ್ಲಿ ಪ್ರಥಮ ಸ್ಥಾನದಲ್ಲಿ ಕುಳಿತುಕೋ ಎಂದು ಅವನಿಗೆ ಹೇಳಿದರು ಆದರೆ, ಗೋಖಲೆಯೂ ಅದನ್ನು ತಾನೇ ಮಾಡಿರಲಿಲ್ಲ. ಹಿರಿಯ ವಿದ್ಯಾರ್ಥಿಯೊಬ್ಬನ ನೆರವಿನಿಂದ ಮಾಡಿಕೊಂಡು ಬಂದಿದ್ದನು. ತಾನೇ ಮಾಡಿದವನೆಂದು ಹೇಳಿಕೊಳ್ಳಲು ಅವನ ಮನಸ್ಸು ಒಡಂಬಡಲಿಲ್ಲ. ಹಾಗೆ ಹೇಳಿಕೊಳ್ಳುವುದು ತಪ್ಪು; ಅಪ್ರಾಮಾಣಿಕತೆ ಎನಿಸಿತು ಅವನಿಗೆ. ಆದುದರಿಂದಲೇ ಅವನು ಅಳುತ್ತ, ನಿಂತಲ್ಲಿಯೇ ನಿಂತಿದ್ದನು. ಇದು ತಿಳಿದಾಗ ಅಧ್ಯಾಪಕರು, ಬಾಲಕ ಗೋಖಲೆಯ ಹಿರಿಯ ಸದ್ಗುಣವನ್ನು ಮೆಚ್ಚಿಕೊಂಡರು. |
ಇಲ್ಲಿಯವರೆಗೆ...
October 2023
"
|